ಬಾಂಗ್ಲಾದೇಶ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಪ್ಲಾನ್ – Kannada News | Pakistan plan to infiltrate terrorism in India through Bangladesh route Indian agencies on alert
ನವದೆಹಲಿ, ಡಿಸೆಂಬರ್ 23: ಬಾಂಗ್ಲಾದೇಶದಲ್ಲಿ ಯುವ ನಾಯಕರ ಹತ್ಯೆಯ ನಂತರ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ ಪಾಕಿಸ್ತಾನ (Pakistan) ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಬಾಂಗ್ಲಾದೇಶದ ಮಾರ್ಗವಾಗಿ ಪಾಕಿಸ್ತಾನದ ಭಯೋತ್ಪಾದನಾ ಗುಂಪುಗಳು ಭಾರತದ ಒಳಗೆ ನುಗ್ಗಲು ಪ್ರಯತ್ನಿಸುತ್ತಿವೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗುತ್ತಿದ್ದಂತೆ ಭಾರತದ ಭದ್ರತಾ ಸಂಸ್ಥೆಗಳು ಜಾಗರೂಕವಾಗಿವೆ. ಢಾಕಾದಲ್ಲಿ ಹೆಚ್ಚಾದ ಅಶಾಂತಿಯ ನಡುವೆ ಬಾಂಗ್ಲಾದೇಶ ಕಾರಿಡಾರ್ ಮೂಲಕ ಭಾರತಕ್ಕೆ ಭಯೋತ್ಪಾದಕರನ್ನು ನುಸುಳಿಸಲು ಐಎಸ್ಐ ಯೋಜಿಸುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ಅಸ್ಸಾಂ, ತ್ರಿಪುರ…