Headlines

Daily Devotional: ಕನಸಿನ ಮನೆ ಮತ್ತು ವಾಹನ ಖರೀದಿಗೆ ಅಡೆತಡೆಯೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರಣ ತಿಳಿಯಿರಿ

ಮನೆ ಮತ್ತು ಕಾರು ಹೊಂದುವ ಯೋಗImage Credit source: Pinterest

ಪ್ರತಿಯೊಬ್ಬರಿಗೂ ಇರುವ ಪ್ರಮುಖ ಆಸೆಗಳಲ್ಲಿ ಒಂದು ಮನೆಯನ್ನು ಹೊಂದುವುದು ಮತ್ತು ಒಂದು ಕಾರನ್ನು ಹೊಂದುವುದು. ಅನೇಕ ಜನರು ಈ ಕನಸನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಆದರೂ ಸಹ, ಕೆಲವೊಮ್ಮೆ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ, ಮನುಷ್ಯ ಆಶಾಜೀವಿ. “ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯಹ” ಎಂಬುದು ಪ್ರಚಲಿತ ವಾಕ್ಯ. ಮನೆ ಮತ್ತು ಕಾರು ಹೊಂದುವ ಯೋಗವು ರಾಶಿ ಚಕ್ರದಲ್ಲಿ ನಾಲ್ಕನೇ ಮನೆಯ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮನೆ ಮತ್ತು ವಾಹನಕ್ಕೆ ಸಂಬಂಧಿಸಿದಂತೆ ನಾಲ್ಕನೇ ಮನೆಯನ್ನು ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿರುವ ಗ್ರಹಗಳು, ಅದರ ದೃಷ್ಟಿ, ಅಧಿಪತಿ ಮತ್ತು ಕಾರಕತ್ವ ಹೊಂದಿರುವ ಗ್ರಹಗಳು ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತವೆ. ಮಂಗಳ ಗ್ರಹವು ಭೂಮಿ, ಆಸ್ತಿ ಮತ್ತು ಸ್ಥಿರಾಸ್ತಿಗಳಿಗೆ ಕಾರಕವಾಗಿದ್ದರೆ, ಶುಕ್ರ ಗ್ರಹವು ವಾಹನ, ಐಷಾರಾಮಿ ಜೀವನ, ವಸ್ತ್ರಗಳು ಮತ್ತು ಆಭರಣಗಳಿಗೆ ಕಾರಕವಾಗಿದೆ.

ಕೆಲವರಿಗೆ ಮನೆ ಮತ್ತು ಕಾರು ಎರಡೂ ಇದ್ದರೂ, ಕೆಲವೇ ದಿನಗಳಲ್ಲಿ ಅವು ಕೈ ತಪ್ಪಿ ಹೋಗುವ ಅನುಭವ ಆಗಿರುತ್ತದೆ. ಇನ್ನು ಕೆಲವರಿಗೆ ಎಷ್ಟೇ ದುಡಿದರೂ ಮನೆ ಕಟ್ಟಿಸಿಕೊಳ್ಳಲು ಅಥವಾ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಾಲ್ಕನೇ ಮನೆಯ ಅಧಿಪತಿ (ಚತುರ್ಥೇಶ) ದುರ್ಬಲನಾಗಿರುವುದು, ನೀಚ ಸ್ಥಿತಿಯಲ್ಲಿ ಇರುವುದು, ದುಷ್ಟ ಸ್ಥಾನಗಳಲ್ಲಿರುವುದು ಅಥವಾ ದುಷ್ಟ ಗ್ರಹಗಳ ಜೊತೆ ಸೇರಿಕೊಂಡಿರುವುದು. ಇಂತಹ ಗ್ರಹಗತಿಗಳು ಮನೆ-ಕಾರು ಯೋಗಕ್ಕೆ ಅಡ್ಡಿಯಾಗುತ್ತವೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಆದರೆ ಇದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು ಸೂಚಿಸಲ್ಪಟ್ಟಿವೆ. ಈ ಸುಖಸ್ಥಾನದಲ್ಲಿರುವ ಗ್ರಹಗಳು ಮತ್ತು ಅದರ ದೃಷ್ಟಿಯನ್ನು ಗಮನಿಸಿ, ಕೆಲವು ಪರಿಹಾರಗಳನ್ನು ಅನುಸರಿಸಬಹುದು. ಅವುಗಳಲ್ಲಿ ಪ್ರಮುಖವಾದವುಗಳು:

  • ಹಿರಿಯರಿಗೆ ಗೌರವ: ತಾಯಿ ಅಥವಾ ತಾಯಿಗೆ ಸಮಾನರಾದ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು, ವಿಶೇಷವಾಗಿ ಪ್ರತಿ ಮಂಗಳವಾರದಂದು ಹಿರಿಯರಿಗೆ ಸಹಾಯ ಮಾಡುವುದು ಸ್ಥಿರತೆಗೆ ಕಾರಣವಾಗುತ್ತದೆ.
  • ಗಣಪತಿ ಆರಾಧನೆ: ಬುಧವಾರದಂದು ತಪ್ಪದೆ ಗಣಪತಿಗೆ ದುರ್ವೆಯನ್ನು ಅರ್ಪಿಸುವುದು. ಐದು ಬುಧವಾರಗಳ ಕಾಲ ಗಣಪತಿಗೆ ಬೆಲ್ಲ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಮನೆ ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ.
  • ಮಂಗಳವಾರದ ದರ್ಶನ: ಮಂಗಳವಾರದಂದು ಹನುಮಂತ ಅಥವಾ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಮಾಡುವುದು ಶುಭ ಫಲಗಳನ್ನು ನೀಡುತ್ತದೆ.
  • ಮಾನಸಿಕ ಸ್ಥಿರತೆ ಮತ್ತು ಸದ್ಗುಣ: ಮನಸ್ಸಿನಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು “ಆಚಾರವೇ ಸ್ವರ್ಗ, ಅನಾಚಾರವೇ ನರಕ”, “ಧರ್ಮೋ ರಕ್ಷತಿ ರಕ್ಷಿತಹ” ಎಂಬ ತತ್ವದಂತೆ ಧರ್ಮ ಮಾರ್ಗದಲ್ಲಿ ನಡೆದುಕೊಳ್ಳುವುದು ಮನೆ ಮತ್ತು ಕಾರು ಹೊಂದುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *