Indian Army Officer Career: ಭಾರತೀಯ ಸೇನೆಯಲ್ಲಿ ವೃತ್ತಿಜೀವನ; ಲೆಫ್ಟಿನೆಂಟ್‌ನಿಂದ ಉನ್ನತ ಅಧಿಕಾರಿ ಶ್ರೇಣಿಯವರೆಗಿನ ಪಯಣ – Kannada News | Indian Army Officer Career: Ranks, Promotions, Salary and Benefits

ಸೇನಾ ಅಧಿಕಾರಿಯಾಗುವುದು ಕೇವಲ ಒಂದು ಉದ್ಯೋಗವಲ್ಲ, ಅದು ಗೌರವದ ಸಂಕೇತ. ಎನ್‌ಡಿಎ (NDA) ಅಥವಾ ಸಿಡಿಎಸ್ (CDS) ಪರೀಕ್ಷೆಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಕಠಿಣ ತರಬೇತಿಯ ನಂತರ ಲೆಫ್ಟಿನೆಂಟ್ ಆಗಿ ಕಾರ್ಯಾರಂಭ ಮಾಡುತ್ತಾರೆ. ಇಲ್ಲಿ ಬಡ್ತಿಯು ಕೇವಲ ಸೇವಾವಧಿಯನ್ನು ಅವಲಂಬಿಸಿರದೆ, ಅಧಿಕಾರಿಯ ದಕ್ಷತೆ ಮತ್ತು ಅರ್ಹತೆಯ ಮೇಲೆ ನಿರ್ಧರಿಸಲ್ಪಡುತ್ತದೆ. ಲೆಫ್ಟಿನೆಂಟ್ ಆಗಿ ಸೇರಿದ ಅಭ್ಯರ್ಥಿಯು ಸುಮಾರು 2 ವರ್ಷಗಳ ನಂತರ ಕ್ಯಾಪ್ಟನ್, 6 ವರ್ಷಗಳ ಒಟ್ಟು ಸೇವೆಯ ನಂತರ ಮೇಜರ್ ಮತ್ತು 13 ವರ್ಷಗಳ ಸೇವೆಯ ನಂತರ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ಪಡೆಯುತ್ತಾರೆ. ಇಲ್ಲಿಯವರೆಗೆ ಬಡ್ತಿಯು ಸೇವಾವಧಿಯ ಆಧಾರದ ಮೇಲೆ ಸಿಗುತ್ತದೆ (Time-Scale Promotion).

ಆದರೆ, ಕರ್ನಲ್ ಮತ್ತು ಅದಕ್ಕಿಂತ ಮೇಲಿನ ಶ್ರೇಣಿಗಳಾದ ಬ್ರಿಗೇಡಿಯರ್, ಮೇಜರ್ ಜನರಲ್, ಮತ್ತು ಲೆಫ್ಟಿನೆಂಟ್ ಜನರಲ್ ಹುದ್ದೆಗಳಿಗೆ ಆಯ್ಕೆಯು ಕಟ್ಟುನಿಟ್ಟಾದ ಆಯ್ಕಾ ಪ್ರಕ್ರಿಯೆ ಮತ್ತು ಅತ್ಯುತ್ತಮ ಸೇವಾ ದಾಖಲೆಯ ಮೇಲೆ ಆಧಾರಿತವಾಗಿರುತ್ತದೆ. ಸಾಮಾನ್ಯವಾಗಿ ಒಬ್ಬ ಅಧಿಕಾರಿ ಬ್ರಿಗೇಡಿಯರ್ ಹಂತವನ್ನು ತಲುಪಲು ಸುಮಾರು 20 ರಿಂದ 25 ವರ್ಷಗಳ ನಿರಂತರ ಮತ್ತು ಶ್ರೇಷ್ಠ ಸೇವೆಯ ಅಗತ್ಯವಿರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸಂಬಳ ಮತ್ತು ಜೀವನಶೈಲಿ:

ಸೇನಾ ಅಧಿಕಾರಿಗಳಿಗೆ ಕೇವಲ ಆಕರ್ಷಕ ವೇತನ ಮಾತ್ರವಲ್ಲದೆ, ಜೀವನಕ್ಕೆ ಅಗತ್ಯವಿರುವ ಎಲ್ಲಾ ಭದ್ರತೆಗಳನ್ನು ಸರ್ಕಾರ ಒದಗಿಸುತ್ತದೆ. ಮಿಲಿಟರಿ ಸೇವಾ ವೇತನ (MSP), ತುಟ್ಟಿ ಭತ್ಯೆ, ಸಬ್ಸಿಡಿ ದರದ ವಸತಿ ಸೌಲಭ್ಯ, ಮತ್ತು ಇಡೀ ಕುಟುಂಬಕ್ಕೆ ಉಚಿತ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. ಇದರೊಂದಿಗೆ ವರ್ಷಕ್ಕೆ 80 ದಿನಗಳ ರಜೆ (60 ದಿನಗಳ ಗಳಿಕೆ ರಜೆ + 20 ದಿನಗಳ ಸಾಂದರ್ಭಿಕ ರಜೆ), ಪ್ರಯಾಣ ಸೌಲಭ್ಯ (LTC), 75 ಲಕ್ಷ ರೂಪಾಯಿಗಳ ಜೀವ ವಿಮೆ ಹಾಗೂ ಪ್ರಸಿದ್ಧ ಸಿಎಸ್‌ಡಿ (CSD) ಕ್ಯಾಂಟೀನ್ ಸೌಲಭ್ಯಗಳು ಅಧಿಕಾರಿಗಳ ಜೀವನಮಟ್ಟವನ್ನು ಉನ್ನತೀಕರಿಸುತ್ತವೆ. ಹೀಗಾಗಿ, ಶಿಸ್ತುಬದ್ಧ ಜೀವನದ ಜೊತೆಗೆ ಉನ್ನತ ಗೌರವವನ್ನು ಬಯಸುವವರಿಗೆ ಭಾರತೀಯ ಸೇನೆಯು ಒಂದು ಸುವರ್ಣ ಅವಕಾಶವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:35 pm, Wed, 15 April 26

Source link

‘ಟಾಕ್ಸಿಕ್’ ಮತ್ತೆ ಮುಂದಕ್ಕೆ ಹೋಗುತ್ತಾ? ಅನುಮಾನದ ಪ್ರಶ್ನೆಗೆ ಉತ್ತರ ನೀಡಿದ ನಟಿ – Kannada News | Yash Toxic movie release date confirmed Tara Sutaria dismisses delay rumors

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ ‘ಟಾಕ್ಸಿಕ್’ (Toxic) ಸಿನಿಮಾ ಮುಂದೂಡಿಕೆಯಾಗಲಿದೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದವು. ಜೂನ್ 4ರಂದು ಸಿನಿಮಾ ತೆರೆಗೆ ಬರುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಈ ಎಲ್ಲಾ ವದಂತಿಗಳಿಗೆ ‘ಟಾಕ್ಸಿಕ್’ ಸಿನಿಮಾದ ನಟಿ ತಾರಾ ಸುತಾರಿಯಾ (Tara Sutaria) ಅವರು ತೆರೆ ಎಳೆದಿದ್ದಾರೆ. ಈ ಸಿನಿಮಾದಲ್ಲಿ ತಾರಾ ಸುತಾರಿಯಾ ಅವರು ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಇತ್ತೀಚೆಗೆ ಬಾಲಿವುಡ್​ನ ಖ್ಯಾತ ನಿರ್ದೇಶಕಿ ಹಾಗೂ ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರ ಯೂಟ್ಯೂಬ್ ವ್ಲಾಗ್‌ನಲ್ಲಿ ತಾರಾ ಸುತಾರಿಯಾ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ‘ಟಾಕ್ಸಿಕ್’ ಚಿತ್ರದ ಬಿಡುಗಡೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಿನಿಮಾ ನಿಗದಿತ ಸಮಯಕ್ಕೇ ಬಿಡುಗಡೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚರ್ಚೆಯ ಮಧ್ಯೆ ತಾರಾ ಸುತಾರಿಯಾ ಅವರು, ‘ಟಾಕ್ಸಿಕ್ ಸಿನಿಮಾ ಜೂನ್ 4ರಂದು ತೆರೆಗೆ ಬರಲಿದೆ’ ಎಂದು ಖಚಿತಪಡಿಸುವ ಮೂಲಕ ಅಭಿಮಾನಿಗಳಲ್ಲಿ ಮನೆಮಾಡಿದ್ದ ಆತಂಕವನ್ನು ದೂರ ಮಾಡಿದ್ದಾರೆ. ಇದರಿಂದಾಗಿ ಚಿತ್ರತಂಡ ಹಳೇ ಪ್ಲಾನ್‌ನಂತೆಯೇ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ತಾರಾ ಸುತಾರಿಯಾ ಅವರ ಪಾತ್ರ ಹೇಗಿದೆ ಎಂಬುದನ್ನು ತಿಳಿಯಲು ಅವರ ಫ್ಯಾನ್ಸ್ ಕಾದಿದ್ದಾರೆ.

ಗೀತು ಮೋಹನ್ ದಾಸ್ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಯಶ್ ಕೂಡ ಚಿತ್ರಕಥೆಯಲ್ಲಿ ಸಾಥ್ ನೀಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್​’ ಚಿತ್ರಕ್ಕಾಗಿ ಫುಲ್ ಎಗ್ಸೈಟ್ ಆದ ತಾರಾ ಸುತಾರಿಯಾ

ಈ ಹಿಂದೆ ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಜೊತೆ ಬಾಕ್ಸ್ ಆಫೀಸ್ ಹಣಾಹಣಿ ನಡೆಯಬೇಕಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಯಿತು. ಈ ಸಿನಿಮಾದ ಟೀಸರ್ ಸಖತ್ ಸದ್ದು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಟೆರೇಸ್‌ನಲ್ಲಿ ಟಾಟಾ ಸುಮೋ ಕಾರಿನಂತೆ ಕಾಣುವ ವಾಟರ್‌ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕ – Kannada News | Andhra Pradesh: A car shaped water tank on top of a house in Addanki town in Prakasam district of Andhra Pradesh

ವಿಭಿನ್ನ ನೀರಿನ ಟ್ಯಾಂಕ್‌Image Credit source: Tv9 Telugu

ಆಂಧ್ರ ಪ್ರದೇಶ, ಏಪ್ರಿಲ್ 15: ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಸಾಲ ಮಾಡಿಯಾದರೂ ಸರಿಯೇ, ತಾವು ಅಂದುಕೊಂಡಂತೆ ಮನೆ ನಿರ್ಮಿಸಿಕೊಳ್ತಾರೆ. ತಾನು ಕಟ್ಟುವ ವಿಭಿನ್ನವಾಗಿರಬೇಕೆಂದು ಎಂದು ಬಯಸುವವರು ಇದ್ದಾರೆ. ವ್ಯಕ್ತಿಯೊಬ್ಬರು ತನ್ನ ಮನೆಯ ಮಹಡಿಯಲ್ಲಿ ನೀರಿನ ಟ್ಯಾಂಕ್‌ನ್ನು (water tank) ಕಾರಿನ ರೀತಿ ನಿರ್ಮಿಸಿದ್ದಾರೆ. ಇದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಪಟ್ಟಣದ (Addanki town in Prakasam district of Andhra Pradesh) ಮನೆಮಾಲೀಕರೊಬ್ಬರ ಐಡಿಯಾ ಇದು. ಮನೆಯ ಮೇಲೆ ಹೊಚ್ಚ ಹೊಸ ಟಾಟಾ ಸುಮೋ ಆಕಾರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಾರಿನ ವಿನ್ಯಾಸಕ್ಕೆ ಒತ್ತು ನೀಡಿ ಕಟ್ಟಲಾದ ಈ ನೀರಿನ ಟ್ಯಾಂಕ್ ಎಲ್ಲರ ಗಮನ ಸೆಳೆಯುತ್ತಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಈ ನೀರಿನ ಟ್ಯಾಂಕ್ ವಿನ್ಯಾಸ ಹೇಗಿದೆ?

ಈ ಫೋಟೋ ನೋಡಿದರೆ ಕಾರು ನಿಜವಾಗಿಯೂ ಮನೆಯ ಮೇಲೆ ನಿಂತಿರುವಂತೆ ಕಾಣುತ್ತದೆ. ಆದರೆ, ನೀವು ಹತ್ತಿರದಿಂದ ನೋಡಿದಾಗ ಮಾತ್ರ ಅದು ಟಾಟಾ ಸುಮೋ ಅಲ್ಲ, ನೀರಿನ ಟ್ಯಾಂಕ್ ಎನ್ನುವುದು ತಿಳಿಯುತ್ತದೆ. ಟೈರ್‌ಗಳಿಂದ ಹಿಡಿದು ಕಿಟಕಿಗಳವರೆಗೆ, ಹಿಂಭಾಗದಲ್ಲಿರುವ ಬಿಡಿ ಚಕ್ರದವರೆಗೆ ಪ್ರತಿಯೊಂದು ಭಾಗಗಳನ್ನು ಬಹಳ ಸೂಕ್ಷ್ಮವಾಗಿ  ನಿರ್ಮಿಸಲಾಗಿದೆ.

ಇದನ್ನೂ ಓದಿ: 1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ

ಇದೇ ನಗರದ ಪಕ್ಕದ ಬೀದಿಯ ವ್ಯಕ್ತಿ ಯೊಬ್ಬರು ತಮ್ಮ ಮನೆಯ ಮೇಲೆ ಮೀನಿನ ಆಕಾರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಆಕಾಶದಲ್ಲಿ ಈಜುವ ಮೀನಿನಂತೆ ಕಾಣುವ ಈ ಟ್ಯಾಂಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಧುನಿಕ ಕಾಲದಲ್ಲಿ ವಿವಿಧ ವಿನ್ಯಾಸಗಳಿಗೆ ಒತ್ತು ಕೊಡದೇ ಸೃಜನಾತ್ಮಕ ಐಡಿಯಾಗಳನ್ನು ಬಳಸಿಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪವನ್ ಕಲ್ಯಾಣ್ ಬಗ್ಗೆ ಹಾಸ್ಯ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪೊಲೀಸರ ವಶಕ್ಕೆ – Kannada News | Jokes on Pawan Kalyan and others stand up comedian detained by Andhra Police in UP

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ವೈಯಕ್ತಿಕ ಜೀವನದ ಬಗ್ಗೆ ಹಾಸ್ಯ ಮಾಡಿದ ಆರೋಪದ ಮೇಲೆ ಹೈದರಾಬಾದ್ ಮೂಲದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುದೀಪ್ ಕಾಟಿಕಾಲ ಅನ್ನು ಆಂಧ್ರ ಪೊಲೀಸರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಅನುದೀಪ್ ವಿರುದ್ಧ ಈಗಾಗಲೇ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಟಾಂಡಪ್ ಕಾಮಿಡಿ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಗಲಾಟೆ ಸಹ ಮಾಡಿದ್ದರು. ಇದೀಗ ಆಂಧ್ರ ಪೊಲೀಸರು ಅನುದೀಪ್ ಅನ್ನು ವಶಕ್ಕೆ ಪಡೆದಿದ್ದಾರೆ.

ಅನುದೀಪ್ ಅವರು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಸ್ಟ್ಯಾಂಡ್-ಅಪ್ ಕಾಮಿಡಿ ವಿಡಿಯೋವೊಂದರಲ್ಲಿ ಪವನ್ ಕಲ್ಯಾಣ್ ಅವರ ವಿಚ್ಛೇದನಗಳು ಮತ್ತು ನಿಹಾರಿಕಾ ಕೊನಿಡೇಲ ವಿಚ್ಛೇದನ, ಮೆಗಾ ಕುಟುಂಬದ ಸದಸ್ಯರ ಬಗ್ಗೆ ಹಾಸ್ಯ ಮಾಡಿದ್ದರು. ಇದು ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮತ್ತು ಜನಸೇನಾ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಪವನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರಂತೂ ಸ್ಟುಡಿಯೋಕ್ಕೆ ನುಗ್ಗಿ ಗಲಾಟೆ ಮಾಡಿದ್ದರು.

ಜನಸೇನಾ ಪಕ್ಷದ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶದ ಕಾಕಿನಾಡ ಪೊಲೀಸರು ಅನುದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್ 14ರಂದು ಪ್ರಯಾಗ್‌ರಾಜ್‌ನಲ್ಲಿ ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಹೋಗಿದ್ದ ಅನುದೀಪ್ ಅನ್ನು ಆಂಧ್ರ ಪೊಲೀಸರು ಅಲ್ಲಿಗೆ ಹೋಗಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು

ಅನುದೀಪ್ ಅವರು ತಮ್ಮ ಪ್ರದರ್ಶನದಲ್ಲಿ, ‘ಹೆಂಡತಿಗೆ ಹೇಗೆ ವಿಚ್ಛೇದನ ನೀಡಬೇಕು ಎಂಬುದನ್ನು ಪವನ್ ಕಲ್ಯಾಣ್ ಅವರಿಂದ ಕಲಿಯಬೇಕು’ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ಇತ್ತೀಚೆಗೆ ವಿಚ್ಛೇದನ ಪಡೆದ ಪವನ್ ಕಲ್ಯಾಣ್ ಅವರ ಸೋದರಸಂಬಂಧಿ ನಿಹಾರಿಕಾ ಕೊನಿಡೆಲ ಅವರು ಈ ವಿಷಯದಲ್ಲಿ ತಮ್ಮ ಚಿಕ್ಕಪ್ಪನಿಂದ ಸಲಹೆ ಪಡೆಯಬಹುದು ಎಂದು ಕಾಲೆಳೆದಿದ್ದರು. ರಾಮ್ ಚರಣ್ ಅವರನ್ನು ವಿನಾಕಾರಣ ಕೆಟ್ಟ ಪದ ಬಳಸಿ ನಿಂದಿಸಿದ್ದರು. ಜೂ ಎನ್​​ಟಿಆರ್, ನಂದಮೂರಿ ಬಾಲಕೃಷ್ಣ ಅವರುಗಳ ಬಗ್ಗೆಯೂ ವ್ಯಂಗ್ಯ ಮಾಡಿದ್ದರು ಅನುದೀಪ್.

ಅನುದೀಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಮಾನನಷ್ಟ ಮೊಕದ್ದಮೆ, ಸಾರ್ವಜನಿಕ ಶಾಂತಿ ಭಂಗ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಅನುದೀಪ್ ಅವರನ್ನು ರೈಲಿನ ಮೂಲಕ ಕಾಕಿನಾಡಕ್ಕೆ ಕರೆತರುತ್ತಿದ್ದಾರೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಪೊಲೀಸರು ವಶಕ್ಕೆ ಪಡೆಯುವ ಮೊದಲೇ ಈ ಬಗ್ಗೆ ಮಾತನಾಡಿದ್ದ ಅನುದೀಪ್, ‘ನನ್ನ ಉದ್ದೇಶ ವಿಚ್ಛೇದನದ ಬಗ್ಗೆ ಇರುವ ಸಾಮಾಜಿಕ ಹಿಂಜರಿಕೆಯನ್ನು ಹೋಗಲಾಡಿಸುವುದಾಗಿತ್ತು ಮತ್ತು ಅಭಿಮಾನಿಗಳ ಅತಿರೇಕದ ವರ್ತನೆಗಳ್ನು ಪ್ರಶ್ನಿಸುವುದಾಗಿತ್ತು. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿ ಕ್ಷಮೆಯಾಚಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:20 pm, Wed, 15 April 26

Source link

ಯೋಗೀಶ್ ಗೌಡ ಕೊಲೆ ಕೇಸ್ ತೀರ್ಪು: ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ – Kannada News | Yogesh Gowda Murder Case: Police security to Congress MLA Vinay Kulkarni before Court verdict

ಧಾರವಾಡ, (ಏಪ್ರಿಲ್.15): ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇನ್ನೇನು ಕಲವೇ ಹೊತ್ತಿನಲ್ಲಿ ಅಂತಿಮ ತೀರ್ಪು ಪ್ರಕಟಿಸಲಿದೆ. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 21 ಮಂದಿ ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ತೀರ್ಪು ಪ್ರಕಟವಾಗುವ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ಧಾರವಾಡದಲ್ಲಿರುವ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲದೇ ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ತೀರ್ಪು ಪ್ರಕಟಗೊಂಡ ಬಳಿಕ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು, ವಿನಯ್ ಕುಲಕರ್ಣಿ ನಿವಾಸದ ಬಳಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೇ ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ರೌಂಡ್ಸ್ ಹಾಕುತ್ತಿದ್ದಾರೆ.

Source link

ಖಾಲಿಯಾದ ಪಾಕ್ ಬೊಕ್ಕಸಕ್ಕೆ ಬೂಸ್ಟರ್ ಡೋಸ್, ಮತ್ತೆ 3 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಸೌದಿ ಅರೇಬಿಯಾ – Kannada News | Saudi Arabia Bails Out Pakistan with 3Billion Dollar Aid and Loan Extension, IMF Relief

ಸೌದಿ ಅರೇಬಿಯಾ, ಏಪ್ರಿಲ್ 15: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಂಗಾಲಾಗಿರುವ ಪಾಕಿಸ್ತಾನ(Pakistan)ದ ಕೈಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ಹಿಡಿದಿದೆ. ಸೌದಿ ಸರ್ಕಾರವು ಪಾಕಿಸ್ತಾನಕ್ಕೆ 3 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚುವರಿ ಆರ್ಥಿಕ ಸಹಾಯವನ್ನು ಘೋಷಿಸಿದೆ. ಅಷ್ಟೇ ಅಲ್ಲದೆ, ಈಗಾಗಲೇ ನೀಡಿರುವ 5 ಬಿಲಿಯನ್ ಡಾಲರ್ ನೆರವಿನ ಅವಧಿಯನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸುವ ಮೂಲಕ ದೊಡ್ಡ ಸಮಾಧಾನ ನೀಡಿದೆ.

ಪಾಕಿಸ್ತಾನದ ಪಾಲಿಗೆ ಈ ನೆರವು ಅತ್ಯಂತ ನಿರ್ಣಾಯಕವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) 3.5 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಬೇಕಿದೆ. ಇಂತಹ ಸಮಯದಲ್ಲಿ ಬೊಕ್ಕಸ ಖಾಲಿಯಾಗುವ ಭೀತಿಯಲ್ಲಿದ್ದ ಇಸ್ಲಾಮಾಬಾದ್‌ಗೆ ಸೌದಿಯ ಘೋಷಣೆ ಆನೆಬಲ ನೀಡಿದೆ.

ಈ ಹಿಂದೆ ನೀಡಲಾಗಿದ್ದ 5 ಬಿಲಿಯನ್ ಡಾಲರ್ ಸಾಲಕ್ಕೆ ಪ್ರತಿ ವರ್ಷ ನೀಡಲಾಗುತ್ತಿದ್ದ ‘ರೋಲ್‌ಓವರ್’ (ಅವಧಿ ವಿಸ್ತರಣೆ) ವ್ಯವಸ್ಥೆಯನ್ನು ತೆಗೆದುಹಾಕಿ, ಅದನ್ನು ನೇರವಾಗಿ 3 ವರ್ಷಗಳ ದೀರ್ಘಾವಧಿಗೆ ವಿಸ್ತರಿಸಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು ಏಪ್ರಿಲ್ 15 ರಿಂದ 18 ರವರೆಗೆ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಗೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.

ಮತ್ತಷ್ಟು ಓದಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಸಾಲ ಪಡೆಯಲು ಹರಸಾಹಸ ಪಡುತ್ತಿದೆ. ಐಎಂಎಫ್ ಷರತ್ತಿನ ಪ್ರಕಾರ, ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರಗಳು ನೀಡುವ ಠೇವಣಿಗಳನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು. ಸೌದಿ ಅರೇಬಿಯಾದ ಈ ಇತ್ತೀಚಿನ ನಡೆ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಮತ್ತಷ್ಟು ಆರ್ಥಿಕ ನೆರವು ಸಿಗಲು ಹಾದಿ ಸುಗಮಗೊಳಿಸಿದಂತಾಗಿದೆ.

ಐಎಂಎಫ್ ಷರತ್ತು ಮತ್ತು ಮಿತ್ರರಾಷ್ಟ್ರಗಳ ಬೆಂಬಲ
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಸಾಲ ನೀಡಲು ಒಂದು ಕಠಿಣ ಷರತ್ತು ವಿಧಿಸಿತ್ತು. ಪಾಕಿಸ್ತಾನದ ಪ್ರಮುಖ ಸಾಲಗಾರರಾದ ಸೌದಿ ಅರೇಬಿಯಾ, ಚೀನಾ ಮತ್ತು ಯುಎಇ ದೇಶಗಳು ತಮ್ಮ ನಗದು ಠೇವಣಿಗಳನ್ನು ಪಾಕಿಸ್ತಾನದ ಬ್ಯಾಂಕ್‌ಗಳಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಆ ಷರತ್ತಾಗಿತ್ತು. ಸೌದಿ ಅರೇಬಿಯಾ ಈ ಷರತ್ತಿಗೆ ಒಪ್ಪಿಗೆ ಸೂಚಿಸಿರುವುದು ಐಎಂಎಫ್‌ನಿಂದ ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಸಾಲ ಸಿಗಲು ಹಾದಿ ಸುಗಮಗೊಳಿಸಿದೆ. ಒಟ್ಟಾರೆಯಾಗಿ, ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ನೀಡಿರುವ ಈ ಬೂಸ್ಟರ್ ಡೋಸ್, ನೆರೆರಾಷ್ಟ್ರವು ದಿವಾಳಿಯಾಗುವುದನ್ನು ಸದ್ಯಕ್ಕೆ ತಪ್ಪಿಸಿದಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್; ವಿಡಿಯೋ ವೈರಲ್

ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದ ವೇಳೆ ವೇದಿಕೆಯು ಏಕಾಏಕಿ ಕುಸಿದು ಬಿದ್ದ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಹಾಡು ಪ್ರಾರಂಭಿಸುತ್ತಿದ್ದಂತೆಯೇ ಸ್ಟೇಜ್ ಮುರಿದು ಬಿದ್ದಿದ್ದು, ವೇದಿಕೆಯಲ್ಲಿದ್ದ ಗಣ್ಯರು ಕೂಡ ಕೆಳಕ್ಕೆ ಉರುಳಿದ್ದಾರೆ. ಅನ್ಶು ಕುಮಾರ್ (@anshu8872kumar) ಎಂಬುವವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಒಂದು ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ದೇಶವನ್ನೇ ಬೆಚ್ಚಿಬೀಳಿಸಿದ ಅಹ್ಮದ್ ಕೃತ್ಯ!: 180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್ – Kannada News | Amravati Sexual Abuse Scandal: Teen Accused, 180 Minors, 350 Videos, House Bulldozed

ಮಹಾರಾಷ್ಟ್ರದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಭೀಕರ ಪ್ರಕರಣವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 19 ವರ್ಷದ ಅಯಾನ್ ಅಹ್ಮದ್ ತನ್ವೀರ್ ಎಂಬ ಯುವಕ 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಾಗ, ಆರೋಪಿಯ ಬಳಿ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿ ಅವರನ್ನು ಶಾಕ್‌ಗೆ ಒಳಪಡಿಸಿದೆ. ಅಯಾನ್ ಅಹ್ಮದ್ ತನ್ವೀರ್ ಮೂಲತಃ ಅಮರಾವತಿಯ ಪರತ್ವಾಡ ನಿವಾಸಿ. ಈ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯ ಹಿಂದೂ ಸಂಘಟನೆಗಳು ಪರತ್ವಾಡದಲ್ಲಿ ತೀವ್ರ ಪ್ರತಿಭಟನೆಗಳನ್ನು ನಡೆಸಿ, ಬಂದ್​ಗೆ ಕರೆ ನೀಡಿದವು. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಮತ್ತು ಕಠಿಣ ಕ್ರಮದ ಭಾಗವಾಗಿ, ಸ್ಥಳೀಯ ಆಡಳಿತವು ಆರೋಪಿಯ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿದೆ. ಪೊಲೀಸರು ಅಯಾನ್ ಅಹ್ಮದ್ ತನ್ವೀರ್‌ನನ್ನು ಈಗಾಗಲೇ ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇಂತಹ ಗಂಭೀರ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಪ್ರಕರಣವು ಸಮಾಜದಲ್ಲಿ ಮಕ್ಕಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋದಲ್ಲಿ ಮನಕಲಕುವ ದೃಶ್ಯ: ತನ್ನ ಮಗುವಿನ ಅಸ್ಥಿಪಂಜರ ಎದೆಯ ಮೇಲೆ ಹೊತ್ತು ಅಲೆದಾಡಿದ ತಾಯಿ ಕೋತಿ – Kannada News | Heartbreaking: Bengaluru Mother Monkey’s Unyielding Love for Deceased Baby Goes Viral

ಬೆಂಗಳೂರು, ಏ15: ಪ್ರೀತಿ ಮತ್ತು ಮಮಕಾರಕ್ಕೆ ಕೇವಲ ಮನುಷ್ಯರು ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದು ಸಾಕ್ಷಿಯಾಗಿದೆ. ತನ್ನ ಮಗು ಸಾವನ್ನಪ್ಪಿ ಅಸ್ಥಿಪಂಜರವಾದರೂ, ಅದನ್ನು ಬಿಟ್ಟುಕೊಡದೆ ಹೊತ್ತು ಸಾಗುತ್ತಿರುವ ಮಂಗನ ತಾಯಿಯ ದೃಶ್ಯವು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ಮಗು ಸಾವನ್ನಪ್ಪಿ ದಿನಗಳೇ ಕಳೆದಿದ್ದರೂ, ಆ ತಾಯಿ ಮಾತ್ರ ಮಗುವಿನ ಅಸ್ಥಿಪಂಜರವನ್ನೇ ತನ್ನ ಎದೆಯ ಮೇಲೆ ಹೊತ್ತುಕೊಂಡು ಮೆಟ್ರೋ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದೆ. ಮಗು ಸತ್ತಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಆ ತಾಯಿಯ ಮೌನ ವೇದನೆ ಅಲ್ಲಿನ ಜನರನ್ನು ಮರುಗುವಂತೆ ಮಾಡಿದೆ. ಪ್ರಾಣಿ ಪ್ರಪಂಚದಲ್ಲಿ ಅದರಲ್ಲೂ ಮಂಗಗಳಲ್ಲಿ ಈ ರೀತಿಯ ವರ್ತನೆ ವಿರಳವಾದರೂ, ಇದು ಅವುಗಳಿಗೂ ಮನುಷ್ಯರಂತೆ ದುಃಖ ಮತ್ತು ಬಾಂಧವ್ಯ ಇರುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಅಸ್ಥಿಪಂಜರವನ್ನೇ ಮಗುವೆಂದು ಭಾವಿಸಿ ರಕ್ಷಿಸುತ್ತಿರುವ ಆ ತಾಯಿಯ ಪ್ರೀತಿ ಸಾವನ್ನೂ ಮೀರಿಸುವಂತದ್ದು. ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೃದಯವಿದ್ರಾವಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದ್ದಾರೆ. ಪ್ರಕೃತಿಯಲ್ಲಿನ ತಾಯ್ತನದ ಈ ಅಂತಿಮ ಸತ್ಯದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, “ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಸಾಟಿಯಿಲ್ಲ” ಎಂಬ ಸಂದೇಶ ಸಾರುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ! – Kannada News | Mangaluru II PUC Digital Mark Sheets: DigiLocker Mandatory, Sparks Foreign Study Concerns

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!
Image Credit source: NewsFirst Prime

ಮಂಗಳೂರು, ಏಪ್ರಿಲ್ 15: ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ (DPUE) ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಕೇವಲ ಡಿಜಿಟಲ್ ರೂಪದಲ್ಲಿ ಡಿಜಿಲಾಕರ್ (DigiLocker) ಮೂಲಕ ಮಾತ್ರ ನೀಡಲು ಯೋಜನೆ ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.

ಪೋಷಕರ ಆತಂಕ

ಅಧಿಕಾರಿಗಳ ಪ್ರಕಾರ, ಡಿಜಿಟಲ್ ಅಂಕಪಟ್ಟಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾನೂನುಬದ್ಧವಾಗಿದ್ದು, ಕಾಲೇಜು ಪ್ರವೇಶಕ್ಕೆ ಮಾನ್ಯವಾಗಿವೆ. ಆದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕ ವಿದೇಶಿ ವಿಶ್ವವಿದ್ಯಾಲಯಗಳು ಇನ್ನೂ ಮೂಲ (physical) ಅಂಕಪಟ್ಟಿಗಳನ್ನು ಕಡ್ಡಾಯವಾಗಿ ಕೇಳುತ್ತವೆ. ಈ ಕಾರಣದಿಂದ ಪ್ರವೇಶ ಪ್ರಕ್ರಿಯೆಯಲ್ಲಿ ವಿಳಂಬ ಅಥವಾ ನಿರಾಕರಣೆಯ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಕೆಲ ಸಂದರ್ಭಗಳಲ್ಲಿ ಡಿಜಿಟಲ್ ಅಂಕಪಟ್ಟಿಗಳಿಂದ ಕೆಲ ವಿದ್ಯಾರ್ಥಿಗಳ ಪ್ರವೇಶ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಘಟನೆಗಳನ್ನೂ ಪೋಷಕರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅಗತ್ಯವಿದ್ದಲ್ಲಿ ಹಾರ್ಡ್ ಕಾಪಿ ನೀಡುವ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಭೌತಿಕ ಅಂಕಪಟ್ಟಿ ನೀಡುವ ವ್ಯವಸ್ಥೆ

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ನಿರ್ದೇಶಕ ಭರತ್ ಎಸ್, ವಿದೇಶಿ ಪ್ರವೇಶ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಭೌತಿಕ ಅಂಕಪಟ್ಟಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಹೇಶ್, ಡಿಜಿಲಾಕರ್ ದಾಖಲೆಗಳು ಇ-ವೆರಿಫಿಕೇಶನ್ ಹೊಂದಿದ್ದು ವ್ಯಾಪಕವಾಗಿ ಸ್ವೀಕೃತವಾಗಿವೆ ಎಂದಿದ್ದಾರೆ. ಇದಲ್ಲದೆ, 2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ಹಳೆಯ ಕ್ರಮದಂತೆ ಭೌತಿಕ ಅಂಕಪಟ್ಟಿಗಳನ್ನು ನೀಡಲಾಗುತ್ತದೆ ಎಂದು ಇಲಾಖೆಯ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version