ಗೋಣಿ ಚೀಲದಲ್ಲಿ ವ್ಯಕ್ತಿ ಶವ ಪತ್ತೆ ಕೇಸ್: ಡಿಸಿಪಿ ಹೇಳಿದ್ದಿಷ್ಟು
ಆನೇಕಲ್, ಏಪ್ರಿಲ್ 05: ಗೋಣಿ ಚೀಲದಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದ್ದು, ತನ್ನ ಸ್ನೇಹಿತ ಸುನೀಲ್ ನನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸುನೀಲ್ ಕುಡಿದು ನಿತ್ಯ ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಈ ವಿಷಯವನ್ನು ಸುನೀಲ್ ಪತ್ನಿ ಬಸುದೇವ್ ಮಲ್ಲಿಕ್ಗೆ ತಿಳಿಸಿದ್ದಳು. ಸುನೀಲ್ ಪತ್ನಿಯ ಸಹಾನುಭೂತಿ ಗಳಿಸುವ ದುರುದ್ದೇಶದಿಂದ ಬಸುದೇವ್, ಸುನೀಲ್ನನ್ನು…