IPL 2026: ಸೋಲಿನಿಂದ ಕಂಗೆಟ್ಟ ಕೆಕೆಆರ್ ತಂಡದ ನಾಯಕನಿಗೆ ದಂಡದ ಬರೆ..! – Kannada News | IPL 2026: Ajinkya Rahane fined Rs 12 lakh

IPL 2026: ಐಪಿಎಲ್ 2026ರ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ನಾಯಕ ಅಜಿಂಕ್ಯ ರಹಾನೆ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಏಪ್ರಿಲ್ 14 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು ನಿಗದಿತ ಸಮಯದೊಳಗೆ ತನ್ನ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಕನಿಷ್ಠ ಓವರ್ ರೇಟ್ ಅಪರಾಧವಾಗಿದ್ದು, ಪ್ರಸಕ್ತ ಸೀಸನ್‌ನಲ್ಲಿ ಕೆಕೆಆರ್ ತಂಡದ ಮೊದಲ ತಪ್ಪಾದ ಕಾರಣ ನಾಯಕನಿಗೆ 12 ಲಕ್ಷ ರೂ.ಗಳ ದಂಡ ವಿಧಿಸಿ ಐಪಿಎಲ್ ಆಡಳಿತ ಮಂಡಳಿ ಆದೇಶಿಸಿದೆ.

ಐಪಿಎಲ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಲಾಗುತ್ತದೆ.

ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್​ನ ಎಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.

ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕನಿಗೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.

ಇನ್ನು ನಾಯಕ ನಾಯಕನ ಖಾತೆಯಲ್ಲಿ ಡಿಮೆರಿಟ್ ಪಾಯಿಂಟ್‌ಗಳು ಒಂದು ನಿರ್ದಿಷ್ಟ ಮಿತಿಯನ್ನು (ಉದಾಹರಣೆಗೆ 3 ವರ್ಷಗಳಲ್ಲಿ 4 ಪಾಯಿಂಟ್ಸ್) ಮೀರಿದಾಗ ಮಾತ್ರ ಪಂದ್ಯದ ನಿಷೇಧ ಹೇರಬಹುದು. ಅಂದರೆ ಅತ್ಯಂತ ಗಂಭೀರ ಅಥವಾ ಅತಿ ಹೆಚ್ಚು ಬಾರಿ ತಪ್ಪು ಮಾಡಿದಾಗ ಮಾತ್ರ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್​ವೆಲ್

ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್​:

ಐಪಿಎಲ್​ 2026 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ ಸೋಲಿನಿಂದ ಪಾರಾಗಿದೆ. ಇದೀಗ ಸಿಎಸ್​ಕೆ ವಿರುದ್ಧದ ಸೋಲಿನ ಬೆನ್ನಲ್ಲೇ ಸ್ಲೋ ಓವರ್ ರೇಟ್ ತಪ್ಪಿಗಾಗಿ ಕೆಕೆಆರ್ ತಂಡದ ನಾಯಕ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.

Source link

Video:ಪಂಜಾಬ್​ನಲ್ಲಿ ಬಸ್ ಪಲ್ಟಿ, ಐವರು ಸಾವು, 15 ಮಂದಿಗೆ ಗಾಯ – Kannada News | Punjab accident: Deadly Bus Crash in Fatehgarh Sahib Leaves Five Dead, Many Injured

ಅಮೃತಸರ, ಏಪ್ರಿಲ್ 15: ಪಂಜಾಬ್​ನ ಫತೇಹ್​ಗಢ ಸಾಹಿಬ್​ನಲ್ಲಿ ಬಸ್ ಅಪಘಾತಕ್ಕೀಡಾಗಿದ್ದು, ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ಸಿ ಪಠಾಣಾ ಬಳಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆಯಿಂದ ಹೊರಳಿ ಮರಕ್ಕೆ ಡಿಕ್ಕಿ ಹೊಡೆದಿದೆ.ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವು ತೀವ್ರವಾಗಿದ್ದು, ಸ್ಥಳದಲ್ಲಿ ಭೀತಿ ಮತ್ತು ಅವ್ಯವಸ್ಥೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದ್ದು, ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿನ ಮದುವೆ ಆಗ್ತೀರಾ? ಪ್ರಶ್ನೆಗೆ ನಾಚಿ ನೀರಾದ ಕಾವ್ಯಾ ಶೈವ – Kannada News | Small Girl Ask About Kavya Shaiva wedding with Gilli Nata

ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಅಲ್ಲಿ ಸ್ಪರ್ಧೆ ಮಾಡಿದರು. ಈ ವೇಳೆ ಇಬ್ಬರ ಮಧ್ಯೆ ಒಳ್ಳೆಯ ಬಾಂಡ್ ಬೆಳೆಯಿತು. ಈ ಬಾಂಡಿಂಗ್ ಹೊರ ಬಂದ ಬಳಿಕವೂ ಮುಂದುವರಿದಿದೆ ಎಂಬುದು ವಿಶೇಷ. ಕಾವ್ಯಾ ಶೈವ ಅವರು ಇತ್ತೀಚೆಗೆ ‘ಗಿಚ್ಚಿ ಗಿಲಿಗಿಲಿ ಜೂನಿಯರ್’ ವೇದಿಕೆ ಮೇಲೆ ಕಾಣಿಸಿಕೊಂಡರು. ಆಗ ಸ್ಪರ್ಧಿ ಒಬ್ಬರು, ‘ನೀವು ಗಿಲ್ಲಿನ ಮದುವೆ ಆಗ್ತೀರಾ’ ಎಂದು ಕೇಳಿದರು. ಇದಕ್ಕೆ ಕಾವ್ಯಾ ನಾಚಿ ನೀರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಮತಾಂತರಕ್ಕೆ ಪ್ರಚೋದನೆ, ಹಿಂದೂ ಯುವತಿಯರ ಮೇಲೆ ಕಣ್ಣು, ನಾಸಿಕ್ ಟಿಸಿಎಸ್ ಕಚೇರಿಯಲ್ಲಿ ನಡೆದಿತ್ತಾ ಕಾರ್ಪೊರೇಟ್ ಜಿಹಾದ್, ಸಂತ್ರಸ್ತೆ ಹೇಳಿದ್ದೇನು? – Kannada News | TCS Nashik Corporate Jihad: Hindu Women Targeted for Conversion and Harassment

ನಾಸಿಕ್, ಏಪ್ರಿಲ್ 15: ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಘಟನೆಗಳು ಇಡೀ ಐಟಿ ಲೋಕವನ್ನೇ ಬೆಚ್ಚಿಬೀಳಿಸಿವೆ. ಕೇವಲ ವೃತ್ತಿಪರ ಕೆಲಸಕ್ಕೆ ಸೀಮಿತವಾಗಬೇಕಿದ್ದ ಕಚೇರಿ ಆವರಣದಲ್ಲಿ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ವ್ಯವಸ್ಥಿತ ಮತಾಂತರದ ಸಂಚು ನಡೆಯುತ್ತಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ.

ಹಿಂದೂ ಯುವತಿಯರೇ ಟಾರ್ಗೆಟ್!
ಈ ಪ್ರಕರಣದಲ್ಲಿ ಸಾಕ್ಷಿಯೊಬ್ಬರು ನೀಡಿರುವ ಹೇಳಿಕೆ ಬೆಚ್ಚಿಬೀಳಿಸುವಂತಿದೆ. ಆರೋಪಿಗಳು ಇತರ ಪುರುಷ ಉದ್ಯೋಗಿಗಳಿಗೆ “ಹೋಗಿ ಹಿಂದೂ ಹುಡುಗಿಯರನ್ನು ನಿಮ್ಮ ಗೆಳತಿಯರನ್ನಾಗಿ ಮಾಡಿಕೊಳ್ಳಿ, ಅವರನ್ನು ಮದುವೆಯಾಗಿ ಮತಾಂತರ ಮಾಡಿ” ಎಂದು ಪ್ರಚೋದಿಸುತ್ತಿದ್ದರು. ಈ ಕೆಲಸಕ್ಕಾಗಿ ಹಣದ ಆಮಿಷವನ್ನೂ ಒಡ್ಡಲಾಗುತ್ತಿತ್ತು ಎನ್ನಲಾಗಿದೆ. 2021 ರಿಂದಲೇ ಈ ಜಾಲ ಸಕ್ರಿಯವಾಗಿದ್ದು, ಇದಕ್ಕೆ ಮಾನವ ಸಂಪನ್ಮೂಲ (HR) ವಿಭಾಗದ ಬೆಂಬಲವೂ ಇತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಂಧಿತರಲ್ಲಿ ಒಬ್ಬರಾದ ಹೆಚ್.ಆರ್ ಮ್ಯಾನೇಜರ್ ನಿದಾ ಖಾನ್ ಅವರನ್ನು ‘ಲೇಡಿ ಕ್ಯಾಪ್ಟನ್’ ಎಂದು ಕರೆಯಲಾಗುತ್ತಿತ್ತು. ಈಕೆ ಮಹಿಳಾ ಉದ್ಯೋಗಿಗಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿ, ನಂತರ ಅವರಿಗೆ ನಮಾಜ್ ಮಾಡಲು ಮತ್ತು ಹಿಜಾಬ್ ಧರಿಸಲು ತರಬೇತಿ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಾರಾದರೂ ಪ್ರತಿರೋಧ ತೋರಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿತ್ತು.

ಎಂಟು ಮಹಿಳೆಯರಿಂದ ದೂರು: ಎಸ್​ಐಟಿ ತನಿಖೆ
ಫೆಬ್ರವರಿ 2022 ರಿಂದ ಮಾರ್ಚ್ 2026 ರ ನಡುವೆ ನಡೆದ ಈ ದೌರ್ಜನ್ಯಗಳ ಬಗ್ಗೆ ಎಂಟು ಮಹಿಳಾ ಉದ್ಯೋಗಿಗಳು ಧೈರ್ಯದಿಂದ ದೂರು ನೀಡಿದ್ದಾರೆ. ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುವುದು ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪಗಳು ಕೇಳಿಬಂದಿವೆ.

ಹಿಂದೂ ಉದ್ಯೋಗಿಗಳನ್ನು ನಮಾಜ್ ಮಾಡಲು ಒತ್ತಾಯಿಸುವುದು ಮತ್ತು ಅವರ ಧರ್ಮವನ್ನು ಅವಮಾನಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ, ಆರೋಪಿಗಳಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಬಂಧಿತ ಆರೋಪಿಗಳು
ಡ್ಯಾನಿಶ್ ಶೇಖ್

ತೌಸಿಫ್ ಅತ್ತರ್

ರಾಜಾ ಮೆಮನ್

ಶಾರುಖ್ ಖುರೇಷಿ

ಶಫಿ ಶೇಖ್

ಆಸಿಫ್ ಅಫ್ತಾಬ್ ಅನ್ಸಾರಿ

ನಿದಾ ಖಾನ್ (HR ಮ್ಯಾನೇಜರ್)

ಟಾಟಾ ಸಂಸ್ಥೆಯ ಕಠಿಣ ನಿಲುವು
ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಇದು “ಗಂಭೀರವಾಗಿ ಕಳವಳಕಾರಿ ಮತ್ತು ದುಃಖಕರ” ಎಂದು ಬಣ್ಣಿಸಿದ್ದಾರೆ. ಕಂಪನಿಯು ಈಗಾಗಲೇ ಆರೋಪಿಗಳನ್ನು ಅಮಾನತುಗೊಳಿಸಿದ್ದು, ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.
ನಾಸಿಕ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (SIT) ಈಗ ಈ ಮತಾಂತರದ ಜಾಲದ ಹಿಂದಿರುವ ದೊಡ್ಡ ತಲೆಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಐಟಿ ಸಂಸ್ಥೆಯೊಂದರ ಒಳಗೆ ಇಂತಹ ವ್ಯವಸ್ಥಿತ ಸಂಚು ನಡೆದದ್ದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟಿಸಿಎಸ್ ವಿವಾದದ ಬಗ್ಗೆ ಟಿ.ವಿ. ಮೋಹನ್‌ದಾಸ್ ಪೈ ಕಿಡಿ
ನಾಸಿಕ್‌ನ ಟಿಸಿಎಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಮತಾಂತರದ ಪ್ರಯತ್ನ ಮತ್ತು ಕಿರುಕುಳದ ಘಟನೆಯು ಕೇವಲ ಒಂದು ಕಚೇರಿಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಇದು ಭಾರತದ ವೈಟ್-ಕಾಲರ್ (White-Collar) ಉದ್ಯೋಗ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಐಟಿ ವಲಯದ ದಿಗ್ಗಜ ಮತ್ತು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ. ಮೋಹನ್‌ದಾಸ್ ಪೈ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವೃತ್ತಿಪರತೆ ಇರಬೇಕಾದ ಕಚೇರಿಗಳಲ್ಲಿ ಒಂದು ನಿರ್ದಿಷ್ಟ ಗುಂಪು ತನ್ನ ಧಾರ್ಮಿಕ ಅಜೆಂಡಾವನ್ನು ಹೇರುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಲಸದ ಸ್ಥಳದಲ್ಲಿ ಕೆಲವರು ತಮ್ಮ ಧರ್ಮದ ಪ್ರಚಾರ ಮಾಡುವುದು ಮತ್ತು ಇತರರನ್ನು ಮತಾಂತರಕ್ಕೆ ಪ್ರಚೋದಿಸುವುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ.ಸಮುದಾಯದ ರೇಖೆಗಳನ್ನು ಮೀರಿ ಸಹೋದ್ಯೋಗಿಗಳನ್ನು ಮಾನಸಿಕವಾಗಿ ಗುರಿಯಾಗಿಸಲು ಸಾಮಾಜಿಕ ಜಾಲತಾಣದ ಗುಂಪುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ – Kannada News | 2nd PUC Exam 2 2026 Dates Rescheduled: Register by April 17th!

ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ
Image Credit source: The Hindu

ಬೆಂಗಳೂರು, ಏಪ್ರಿಲ್ 15: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ (2nd PUC) ಮಹತ್ವದ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿರುವಂತೆ ಪರೀಕ್ಷೆ-2ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 9ರಿಂದ ಪ್ರಾರಂಭವಾಗಿ ಏಪ್ರಿಲ್ 17ರವರೆಗೆ ನಡೆಯಲಿದೆ.

ನೋಂದಾಯಿಸಿಕೊಳ್ಳುವುದು ಎಲ್ಲಿ?

2026ರಲ್ಲಿ ರೆಗ್ಯೂಲರ್ ಫ್ರೆಶ್ (Regular Fresh) ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ನೀಡಿರುವ ಆನ್‌ಲೈನ್ ಲಿಂಕ್ (http://tinyurl.com/mvp9k6es) ಮೂಲಕ ಅಥವಾ ತಮ್ಮ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯು ಎಕ್ಸಾಮ್ ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ, ಮೊದಲನೇ ಪರೀಕ್ಷೆಯಲ್ಲಿ ಗೈರುಹಾಜರಾಗಿದ್ದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತಮ್ಮ ಲಾಗಿನ್ ಮೂಲಕ ನೇರವಾಗಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಮಂಡಳಿ ಸೂಚಿಸಿದೆ.

ಯಾವಾಗ ನಡೆಯಲಿದೆ ಪರೀಕ್ಷೆ?

ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿತ ಕಾಲೇಜುಗಳ ಪ್ರಾಂಶುಪಾಲರ ಲಾಗಿನ್ ಮೂಲಕ ಲಭ್ಯಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಮರುನಿಗದಿ ಮಾಡಲಾಗಿದ್ದು, ಪರೀಕ್ಷೆಗಳು 30 ಏಪ್ರಿಲ್ 2026ರಿಂದ ಆರಂಭವಾಗಲಿವೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಪ್ರಶ್ನೆ ಕೋಶ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಶಾಂತ ಮನಸ್ಥಿತಿಯಲ್ಲಿ ಸಿದ್ಧತೆ ನಡೆಸಿ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Eka Devopasana: ಏಕದೇವೋಪಾಸನೆ ಎಂದರೇನು? ಇದರ ಮಹತ್ವ ಇಲ್ಲಿ ತಿಳಿಯಿರಿ – Kannada News | Eka Devopasana: The Spiritual Path to a Meaningful Life

ಏಕದೇವೋಪಾಸನೆಯ ಆಳವಾದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಆರಾಧನೆಗೆ ಅವಕಾಶವಿದ್ದರೂ, ಒಬ್ಬ ದೇವರಲ್ಲಿ ದೃಢವಾದ ಭಕ್ತಿಯನ್ನು ಕೇಂದ್ರೀಕರಿಸುವುದು ಜೀವನಕ್ಕೆ ಮಹತ್ತರವಾದ ಸಾರ್ಥಕತೆಯನ್ನು ತರುತ್ತದೆ. ವ್ಯಾಪಾರ, ವ್ಯವಹಾರ, ಶಾಸ್ತ್ರ ಚಿಕಿತ್ಸೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಆಯಾ ದೇವರುಗಳನ್ನು ಪೂಜಿಸುವುದು ರೂಢಿಯಲ್ಲಿದ್ದರೂ, ಏಕದೇವೋಪಾಸನೆಯು ಸಮಗ್ರ ಶುಭವನ್ನು ನೀಡುತ್ತದೆ.

“ಸರ್ವದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಾ ದೇವರುಗಳಿಗೆ ನಮಸ್ಕರಿಸಿದರೂ, ಒಬ್ಬ ದೇವರನ್ನು ಹೃದಯದಲ್ಲಿ ಶಾಶ್ವತವಾಗಿ ಸ್ಥಾಪಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಇದು ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಏಕದೇವೋಪಾಸನೆಯು ಏಕಂ ಸತ್ ವಿಪ್ರಬಹುದ ವದಂತಿ ಎಂಬ ಮಾತಿಗೆ ಸಮಾನವಾಗಿದ್ದು, ಸತ್ಯ ಒಂದೇ, ಆದರೆ ಅದನ್ನು ಜ್ಞಾನಿಗಳು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆ, ನಂಬಿಕೆ ವೃದ್ಧಿಯಾಗಿ, ಬರುವ ಕಂಟಕಗಳು ಹಾಗೂ ಕರ್ಮಗಳು ಸರಿಪಡಿಸಲು ದಾರಿ ಸಿಗುತ್ತದೆ.

ಯಾವುದೇ ದೇವರನ್ನು – ಗಣಪತಿ, ಸುಬ್ರಮಣ್ಯ, ಶಿವ, ವಿಷ್ಣು, ವೆಂಕಟೇಶ್ವರ, ದತ್ತಾತ್ರೇಯ ಇರಬಹುದು – ನಿಮ್ಮ ಕುಲದೇವರು ಅಥವಾ ಇಷ್ಟದೇವರನ್ನಾಗಿ ಆಯ್ಕೆ ಮಾಡಿಕೊಂಡು, ಅವರ ನಾಮಸ್ಮರಣೆ, ದರ್ಶನ, ಪೂಜೆಯನ್ನು ನಿರಂತರವಾಗಿ ಮತ್ತು ಯಥಾವಿಧಿಯಾಗಿ ಆಚರಿಸಬೇಕು. “ಯದ್ಭಾವಂ ತದ್ಭವತಿ” ಎಂಬ ಮಾತಿನಂತೆ, ಒಂದೇ ದೇವರ ಜಪ ಮತ್ತು ಪೂಜೆಯನ್ನು ಹೆಚ್ಚಾಗಿ ಮಾಡುವುದು ಉತ್ತಮ. ಎಲ್ಲಾ ದೇವರುಗಳ ದರ್ಶನ, ತೀರ್ಥ ಸೇವನೆ ಮಾಡಬಹುದಾದರೂ, ಒಬ್ಬ ದೇವರಲ್ಲಿ ತಾಯಿ ಮಗುವಿನ ಸಂಬಂಧದಂತೆ ದೃಢ ಭಕ್ತಿ ಇಡುವುದು ಅಗತ್ಯ. ಇದು ರಾಜಕೀಯ ಪಕ್ಷಗಳ ಬದಲಾವಣೆಯಂತೆ ಒಂದು ವರ್ಷ ಒಂದು ದೇವರು, ಇನ್ನೊಂದು ವರ್ಷ ಇನ್ನೊಂದು ದೇವರನ್ನು ಪೂಜಿಸುವುದಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ದೈವದೂಷಣೆ, ದೈವಾಪರಾಧಗಳಿಂದ ದೂರವಿರಬೇಕು. ನಮ್ಮ ಕರ್ಮಫಲಗಳು ನಮ್ಮ ಜೀವನವನ್ನು ರೂಪಿಸುತ್ತವೆ. ಇಂದಿನ ದಾನ, ತ್ಯಾಗಗಳು ತಕ್ಷಣ ಫಲ ನೀಡದಿದ್ದರೂ, ಮುಂದಕ್ಕೆ ಅವು ನಮಗೆ ಬೆಂಬಲ ನೀಡುತ್ತವೆ ಮತ್ತು ನಮ್ಮ ಕರ್ಮಫಲಗಳನ್ನು ಕಡಿಮೆ ಮಾಡುತ್ತವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು, “ಅನನ್ಯಶ್ಚಿಂತಯಂತೋ ಮಾಂ” ಎಂದು ಹೇಳುತ್ತಾ, ತನ್ನನ್ನು ನಂಬಿದವರ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಒಂದೇ ಮಂತ್ರವನ್ನು ಸತತವಾಗಿ ಜಪಿಸುವುದರಿಂದ, ಆ ಮಂತ್ರದ ಅಧಿದೇವತೆ ಎಲ್ಲವನ್ನು ಬೆಂಬಲಿಸುತ್ತದೆ. ಓಂ ನಮಃಶಿವಾಯ, ಓಂ ಮಹಾಲಕ್ಷ್ಮಿ ನಮಃ, ಓಂ ನಮೋ ವೆಂಕಟೇಶಾಯ ಮುಂತಾದ ಮಂತ್ರಗಳ ನಿರಂತರ ಜಪದಿಂದ ಆ ದೇವಿಯ ಕೃಪೆಗೆ ಪಾತ್ರರಾಗಬಹುದು.

ಪರಮಹಂಸರ ಮಾತು “ಆತ್ಮಾನೋಂ ಮೋಕ್ಷಾರ್ಥಂ ಜಗದ್ದಿತಾಯಚ” ಎಂಬುದನ್ನು ನೆನಪಿಸಿಕೊಳ್ಳಬೇಕು. ಹತ್ತಾರು ಗುಂಡಿಗಳನ್ನು ಒಂದೇ ಜಾಗದಲ್ಲಿ ತೋಡಿದರೆ ನೀರು ಸಿಗುವುದಿಲ್ಲ. ಆದರೆ ಒಂದೇ ಗುಂಡಿಯನ್ನು ಆಳವಾಗಿ ತೋಡಿದರೆ ನೀರು ಸಿಕ್ಕೇ ಸಿಗುತ್ತದೆ. ಅದೇ ರೀತಿ, ಒಂದೇ ದೋಣಿಯಲ್ಲಿ ಪ್ರಯಾಣಿಸಿದಂತೆ, ಒಬ್ಬ ದೇವರಲ್ಲಿ ನಿಷ್ಠೆಯಿಂದ ಭಕ್ತಿ ಇಡುವುದರಿಂದ ಮುಕ್ತಿ ಪಡೆಯಲು ಸಾಧ್ಯ. ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತ ಯಾರಿಗೂ ಅನ್ಯಾಯ ಮಾಡುವುದಿಲ್ಲ. ನಿಮಗೆ ಅನುಕೂಲವಾದ ದೇವರ ಸ್ಮರಣೆಯನ್ನು ಶಾಶ್ವತವಾಗಿ ಮಾಡಿಕೊಂಡು ಹೋಗಿ, ಒಳಿತಾಗುತ್ತದೆ ಮತ್ತು ಮುಕ್ತಿ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್​ವೆಲ್ – Kannada News | Glenn Maxwell completes 11,000 Runs in T20s

ಪಾಕಿಸ್ತಾನ್ ಸೂಪರ್ ಲೀಗ್​ನ 21ನೇ ಪಂದ್ಯದಲ್ಲಿ 21 ರನ್​ ಸಿಡಿಸುವ ಮೂಲಕ ಗ್ಲೆನ್ ಮ್ಯಾಕ್ಸ್​​ವೆಲ್ (Glenn Maxwell) ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

Source link

ಐಪಿಎಲ್ ಪಂದ್ಯ ನೋಡೋದು ಬಿಟ್ಟು ಸ್ಟೇಡಿಯಂನಲ್ಲಿ ರೀಲ್ಸ್ ಮಾಡಲು ಹೋಗಿ 70 ಸಾವಿರ ರೂ. ಬೆಲೆಯ ಉಂಗುರ ಕಳೆದುಕೊಂಡ ಮಹಿಳೆ – Kannada News | Reel Gone Wrong: Woman Loses Rs70K Ring While Filming at IPL Stadium

ಪಂಜಾಬ್, ಏಪ್ರಿಲ್ 15: ಹವ್ಯಾಸ ಹಿತವಾಗಿದ್ದರೆ ಚೆಂದ, ಅದು ಮಿತಿ ಮೀರಿದರೆ ವಿಷಾದವೇ ಗತಿ ಎಂಬ ಮಾತಿಗೆ ಪಂಜಾಬ್‌ನ ಐಪಿಎಲ್ ಮೈದಾನ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ರೋಮಾಂಚಕ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮಾಡಬಾರದ ಸಾಹಸಕ್ಕೆ ಕೈ ಹಾಕಿ ಈಗ ಬೆಲೆಬಾಳುವ ಉಂಗುರ ಕಳೆದುಕೊಂಡು ಕಂಗಾಲಾಗಿದ್ದಾರೆ.

ಏನಿದು ಘಟನೆ?
ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರಿಗೆ ಪಂದ್ಯಕ್ಕಿಂತ ‘ರೀಲ್ಸ್’ ಮಾಡುವುದರಲ್ಲಿ ನಿರತರಾಗಿದ್ದರು. ತಮ್ಮ ಬೆರಳಿನಲ್ಲಿದ್ದ 70,000 ರೂಪಾಯಿ ಮೌಲ್ಯದ ಉಂಗುರವನ್ನು ಎಸೆದು ವಿಡಿಯೋ ಮಾಡಲು ಮುಂದಾದರು.

ವಿಡಿಯೋದಲ್ಲಿ ಉಂಗುರವು ಗಾಳಿಯಲ್ಲಿ ತೇಲುವಂತೆ ಸೆರೆಹಿಡಿಯುವುದು ಅವರ ಉದ್ದೇಶವಾಗಿತ್ತು. ಆದರೆ ಕ್ಯಾಮೆರಾ ಆಂಗಲ್ ಸೆಟ್ ಮಾಡುವ ಭರದಲ್ಲಿ, ಉಂಗುರ ಕೈಜಾರಿತ್ತು. ಮಹಿಳೆಯ ಕೈಗೆ ಸಿಗದೆ ಸ್ಟೇಡಿಯಂನ ಮೆಟ್ಟಿಲುಗಳ ನಡುವೆ ಬಿದ್ದಿತ್ತು. ಒಂದು ಕ್ಷಣ ಏನಾಯಿತು ಎಂದು ತಿಳಿಯದೆ ಮಹಿಳೆ ದಿಗ್ಭ್ರಮೆಗೊಂಡು ಕುಳಿತ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮಧುಪ್ರಿಯಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಉಂಗುರ ಹುಡುಕಿಕೊಡುವಂತೆ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ. ಆದರೆ ಸಹಾಯ ಮಾಡುವ ಬದಲು ಜನರು ಮಹಿಳೆಯ ನಡೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಅವರಿಗೆ ಆ ಉಂಗುರ ಅಷ್ಟು ಇಷ್ಟವಿದ್ದಿದ್ದರೆ ನಕಲಿ ಉಂಗುರ ಬಳಸಿ ರೀಲ್ ಮಾಡಬೇಕಿತ್ತು ಎಂದು ಒಬ್ಬರು ಹೇಳಿದ್ದಾರೆ. ಕಳೆದುಹೋದ ಉಂಗುರ ಎಷ್ಟೇ ಹುಡುಕಿದರೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ಐಪಿಎಲ್‌ನ ಸಿಕ್ಸರ್-ಬೌಂಡರಿಗಳಿಗಿಂತ ಈ ಮಹಿಳೆಯ ‘ಉಂಗುರ ಪುರಾಣ’ವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಸಿಬಿಸಿ ಚರ್ಚೆಯ ವಿಷಯವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್ – Kannada News | Ranveer Singh’s new advertisement with Prakash Padukone took dig at Dhruv Rathee

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಆದರೆ ಕೆಲವರು ಈ ಸಿನಿಮಾವನ್ನು ಪ್ರಪೊಗಾಂಡ ಸಿನಿಮಾ ಎಂದು. ಒಂದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲೆಂದು ನಿರ್ಮಿಸಲಾದ ಸಿನಿಮಾ ಎಂದು ಆರೋಪಿಸಿದ್ದಾರೆ. ಸಿನಿಮಾದಲ್ಲಿರುವ ಕೆಲ ತಪ್ಪುಗಳನ್ನು ಎತ್ತಿ ತೋರಿಸಿ ಟೀಕಿಸಿದ್ದಾರೆ. ವಿಶೇಷವಾಗಿ ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಈ ಸಿನಿಮಾವನ್ನು ಟೀಕೆ ಮಾಡಿದ್ದು, ಇದೀಗ ಪರೋಕ್ಷವಾಗಿ ನಟ ರಣ್ವೀರ್ ಸಿಂಗ್, ‘ಧ್ರುವ್ ರಾಠಿ’ಗೆ ಟಾಂಗ್ ನೀಡಿದ್ದಾರೆ.

ಧ್ರುವ್ ರಾಠಿ ತಮ್ಮ ವಿಡಿಯೋ ಒಂದರಲ್ಲಿ ‘ಧುರಂಧರ್’ ಅನ್ನು ಟೀಕೆ ಮಾಡುತ್ತಾ ಸಿನಿಮಾವನ್ನು ‘ಭವಂಧರ್’ ಎಂದು ಕರೆದಿದ್ದರು. ಇದೀಗ ರಣ್ವೀರ್ ಸಿಂಗ್ ಅವರ ಹೊಸ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ನಟ ರಣ್ವೀರ್ ಸಿಂಗ್ ಅವರು ಇದನ್ನೇ ಇರಿಸಿಕೊಂಡು ಧ್ರುವ್ ರಾಠಿಗೆ ಟಾಂಗ್ ನೀಡಿದ್ದಾರೆ. ಇದೀಗ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೆಂಡ್ ಸಹ ಆಗುತ್ತಿದೆ.

ನಟ ರಣವೀರ್ ಸಿಂಗ್ ತಮ್ಮ ಮಾವ, ಖ್ಯಾತ ಬ್ಯಾಡ್​​ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೊಂದಿಗೆ ನಟಿಸಿರುವ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸ್ವದೇಶಿ ಹಣ ಪಾವತಿ ಸೇವಾ ಆ್ಯಪ್ (RuPay) ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಮತ್ತು ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಣವೀರ್ ಅವರು ಪ್ರಕಾಶ್ ಪಡುಕೋಣೆ ಅವರನ್ನು ‘ಪಪ್ಪಾ’ ಎಂದು ಕರೆಯುವುದು ಮತ್ತು ಬ್ಯಾಡ್ಮಿಂಟನ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಅದೇ ಜಾಹೀರಾತಿನ ಹಿನ್ನೆಲೆಯಲ್ಲಿ ಕಾಣಿಸುವ ಒಂದು ಪೋಸ್ಟರ್ ಈಗ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟರ್‌ನಲ್ಲಿ ‘ಭವಂದರ್: ದಿ ಟೊರ್ನಾಡೋ’ ಎಂಬ ಹೆಸರಿನ ಸಿನಿಮಾದ ಪೋಸ್ಟರ್ ಇದೆ. ಧ್ರುವ್ ರಾಠಿ, ಈ ಹಿಂದೆ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯನ್ನು ಟೀಕಿಸಿದ್ದರು. ಆ ಸಿನಿಮಾಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದ ಅವರು, ತಮ್ಮ ವಿಡಿಯೋವೊಂದರಲ್ಲಿ ‘ಆಪರೇಷನ್ ಭವಂದರ್’ ಎಂಬ ಕಾಲ್ಪನಿಕ ಚಿತ್ರದ ಹೆಸರನ್ನು ಉಲ್ಲೇಖಿಸಿ ಟೀಕೆ ಮಾಡಿದ್ದರು. ಈಗ ಜಾಹೀರಾತಿನಲ್ಲಿ ಅದೇ ಹೆಸರಿನ ಪೋಸ್ಟರ್ ಬಳಸಿದ್ದು, ಧ್ರುವ್ ರಾಠಿಗೆ ಟಾಂಗ್ ನೀಡಲೆಂದೇ ಹೀಗೆ ಮಾಡಲಾಗಿರುವುದು ಸ್ಪಷ್ಟ.

ಟೀಕೆಗಳ ನಡುವೆಯೂ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಈ ಚಿತ್ರ ಸರಣಿಯು ವಿಶ್ವಾದ್ಯಂತ ಸುಮಾರು 1700 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ಭಾರತದ ಅತಿಹೆಚ್ಚು ಮೊತ್ತ ಗಳಿಸಿದ ಸಿನಿಮಾಗಳಾದ ‘ಪುಷ್ಪ 2’, ‘ಬಾಹುಬಲಿ 2’ ಸಿನಿಮಾಗಳ ದಾಖಲೆಯನ್ನು ಅಳಿಸುವ ಹೊಸ್ತಿಲಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗೆದ್ದರೂ ಚಿಂತೆಗೀಡಾದ ಚೆನ್ನೈ ಸೂಪರ್ ಕಿಂಗ್ಸ್​ – Kannada News | 8 drop catches by CSK so far joint most with SRH in this season

IPL 2026: ಕ್ರಿಕೆಟ್​ ಅಂಗಳದಲ್ಲಿ ‘ಕ್ಯಾಚಸ್ ವಿನ್ ಮ್ಯಾಚಸ್’ ಎಂಬ ಮಾತೊಂದಿದೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಈ ಮಾತು ಮರೀಚಿಕೆಯಾದಂತಿದೆ.  ಚುರುಕಾದ ಫೀಲ್ಡಿಂಗ್‌ಗೆ ಹೆಸರಾಗಿದ್ದ ಧೋನಿ ಪಡೆಯ ಉತ್ತರಾಧಿಕಾರಿಗಳು, ಈ ಬಾರಿ ಮೈದಾನದಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದರಲ್ಲೇ ದಾಖಲೆ ಬರೆಯುವ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

ಅಂಕಿ-ಅಂಶಗಳ ಆಘಾತ:

ಪ್ರಸಕ್ತ ಸೀಸನ್‌ನಲ್ಲಿ ಇದುವರೆಗೆ ಸಿಎಸ್‌ಕೆ ಆಟಗಾರರು ಬರೋಬ್ಬರಿ 8 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡಗಳ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಜೊತೆಗೆ ಸಿಎಸ್‌ಕೆ ಜಂಟಿಯಾಗಿ ಅಗ್ರಸ್ಥಾನದಲ್ಲಿದೆ.

ಅಷ್ಟೇ ಅಲ್ಲದೆ ಕೇವಲ 68% ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡುತ್ತಿರುವ ತಂಡವಾಗಿ ಗುರುತಿಸಿಕೊಂಡಿದೆ.

ಪ್ರಮುಖ ಆಟಗಾರರಿಂದಲೇ ತಪ್ಪು:

ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರೇ ಸುನಿಲ್ ನರೈನ್ ನೀಡಿದ ಸುಲಭ ಕ್ಯಾಚ್ ಕೈಬಿಟ್ಟಿದ್ದರು. ಇವರ ಜೊತೆಗೆ ಡೆವಾಲ್ಡ್ ಬ್ರೆವಿಸ್ ಮತ್ತು ಸರ್ಫರಾಝ್ ಖಾನ್ ಅವರಂತಹ ಯುವ ಆಟಗಾರರು ಕೂಡ ಫೀಲ್ಡಿಂಗ್‌ನಲ್ಲಿ ಎಡವುತ್ತಿದ್ದಾರೆ.

ಪಂದ್ಯದ ಮೇಲೆ ಪರಿಣಾಮ:

ಕಳೆದ ಐದು ಮ್ಯಾಚ್​ಗಳ ಮೂಲಕ ಸಿಎಸ್​ಕೆ ಆಟಗಾರರು 8 ಕ್ಯಾಚ್​ಗಳನ್ನು ಕೈ ಬಿಟ್ಟಿರುವುದು ಇದೀಗ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಪ್ರತಿ ಪಂದ್ಯದಲ್ಲೂ ಕ್ಯಾಚ್‌ಗಳನ್ನು ಬಿಡುವ ಮೂಲಕ ಎದುರಾಳಿಗಳಿಗೆ ಜೀವದಾನ ನೀಡುತ್ತಿರುವುದು ತಂಡದ ಬೌಲರ್‌ಗಳ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತಿದೆ.

ಇದೇ ವೇಳೆ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ವಿಶೇಷ ಎಂದರೆ ಈ ಎರಡು ತಂಡಗಳೇ ಇದೀಗ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.

8ನೇ ಸ್ಥಾನದಲ್ಲಿ ಸಿಎಸ್​ಕೆ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕ್ಯಾಚ್ ಚೆಲ್ಲುತ್ತಿರುವುದು ಕೂಡ ಪಂದ್ಯದ ಸೋಲಿಗೆ ಕಾರಣ. ಇದರ ಪರಿಣಾಮ ಕಳೆದ ಐದು ಮ್ಯಾಚ್​ಗಳಲ್ಲಿ ಮೂರಲ್ಲಿ ಸೋತಿದೆ. ಈ ಸೋಲು-ಗೆಲುವುಗಳೊಂದಿಗೆ ಸಿಎಸ್​ಕೆ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

ಇದೀಗ ಟೂರ್ನಿಯು ಮೊದಲಾರ್ಧದ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ದ್ವಿತೀಯಾರ್ಧವು ಪಂದ್ಯಗಳು ನಿರ್ಣಾಯಕವಾಗಿರುವುದರಿಂದ ಸಿಎಸ್‌ಕೆ ತನ್ನ ಫೀಲ್ಡಿಂಗ್ ವಿಭಾಗದಲ್ಲಿ ದೊಡ್ಡ ಸುಧಾರಣೆ ಮಾಡಿಕೊಳ್ಳಬೇಕಿದೆ. ಅನುಭವಿ ಆಟಗಾರರಿಂದ ಕೂಡಿದ ತಂಡವು ಈ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಮುಂದಿನ ಪಂದ್ಯಗಳಲ್ಲಿ ಭಾರೀ ಬೆಲೆ ತೆರಬೇಕಾಗಿ ಬರಬಹುದು.

Published On – 10:03 am, Wed, 15 April 26

Source link

Exit mobile version