‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್ – Kannada News | Director Venky Atluri Reacts to Deepika Padukone Working Hours Controversy

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೆಲಸದ ಸಮಯದ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದಿನಕ್ಕೆ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ದೀಪಿಕಾ ಪಟ್ಟು ಹಿಡಿದಿದ್ದರು. ಈ ಕಾರಣದಿಂದಾಗಿ ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸೀಕ್ವೆಲ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದಿಂದ ಹೊರನಡೆದಿದ್ದಾರೆ.

ತೆಲುಗು ಚಿತ್ರರಂಗದ ಕೆಲಸದ ಸಂಸ್ಕೃತಿ

ದೀಪಿಕಾ ಪಡುಕೋಣೆ ಅವರ ಈ ನಿರ್ಧಾರದ ಬಗ್ಗೆ ಟಾಲಿವುಡ್ ನಿರ್ದೇಶಕ ವೆಂಕಿ ಅಟ್ಲೂರಿ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರತಿ ಚಿತ್ರರಂಗಕ್ಕೂ ತನ್ನದೇ ಆದ ಕೆಲಸದ ಸಂಸ್ಕೃತಿ ಇರುತ್ತದೆ ಎಂದು ಅವರು ಹೇಳಿದ್ದಾರೆ. ’ತೆಲುಗು ಚಿತ್ರರಂಗದಲ್ಲಿ ಸಾಮಾನ್ಯವಾಗಿ ದಿನಕ್ಕೆ 11 ರಿಂದ 12 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತದೆ. ಬೇರೆ ಭಾಷೆಯ ಕಲಾವಿದರು ಇಲ್ಲಿಗೆ ಬಂದಾಗ ಆ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಗೌರವ ನೀಡಬೇಕು’ ಎಂದು ವೆಂಕಿ ತಿಳಿಸಿದ್ದಾರೆ.

ರವೀನಾ ಟಂಡನ್ ಜೊತೆಗಿನ ಹಳೆಯ ನೆನಪು

ನಿರ್ದೇಶಕ ವೆಂಕಿ ಅಟ್ಲೂರಿ ಅವರು ತಾವು ನಿರ್ದೇಶಿಸುತ್ತಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಶೂಟಿಂಗ್ ನೆನಪೊಂದನ್ನು ಹಂಚಿಕೊಂಡಿದ್ದಾರೆ. ‘ಊಟಿಯ ಭಾರಿ ಚಳಿಯಲ್ಲಿ ನಟಿ ರವೀನಾ ಟಂಡನ್ ಮತ್ತು ನಟ ಸೂರ್ಯ ಜೊತೆ ಚಿತ್ರೀಕರಣ ನಡೆಯುತ್ತಿತ್ತು. ಅಂದು ಕೆಲಸ ಮುಗಿಸಲು ಸತತ 14 ಗಂಟೆಗಳ ಕಾಲ ಶೂಟಿಂಗ್ ಮಾಡಬೇಕಾದ ಅನಿವಾರ್ಯತೆ ಇತ್ತು. ರವೀನಾ ಟಂಡನ್ ಅವರ ಮ್ಯಾನೇಜರ್ ವಿರೋಧ ವ್ಯಕ್ತಪಡಿಸಿದರೂ ನಟಿ ಮಾತ್ರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ

ವೈಜಯಂತಿ ಮೂವೀಸ್ ಅಧಿಕೃತ ಪ್ರಕಟಣೆ

ದೀಪಿಕಾ ಪಡುಕೋಣೆ ಅವರು ಎಂಟು ಗಂಟೆಗಳ ಶಿಫ್ಟ್ ನಿಯಮಕ್ಕೆ ಪಟ್ಟು ಹಿಡಿದ ಕಾರಣ ಕಲ್ಕಿ ಚಿತ್ರತಂಡದಿಂದ ಹೊರಬೀಳಬೇಕಾಯಿತು. ಇತ್ತೀಚೆಗೆ ವೈಜಯಂತಿ ಮೂವೀಸ್ ಸಂಸ್ಥೆಯು ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿದೆ. ಮೊದಲ ಭಾಗದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದರೂ ಸೀಕ್ವೆಲ್ ಸಮಯದಲ್ಲಿ ಇಬ್ಬರ ನಡುವೆ ಒಮ್ಮತ ಮೂಡದ ಕಾರಣ ದೀಪಿಕಾ ಸಿನಿಮಾದಿಂದ ದೂರವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಶುರಾಮನ ಪಾತ್ರಕ್ಕಾಗಿ 25 ಕೆಜಿ ಹೆಚ್ಚಿಸಿಕೊಳ್ಳಲು ರೆಡಿ ಆದ ವಿಕ್ಕಿ ಕೌಶಲ್ – Kannada News | Vicky Kaushal Undergoes Massive Weight Gain Transformation of 25 kg for Mahavatar

ಬಾಲಿವುಡ್ ನಟ ವಿಕ್ಕಿ ಕೌಶಲ್ ಯಾವುದೇ ಪಾತ್ರ ಸಿಕ್ಕರೂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಪ್ರತಿ ಪಾತ್ರಕ್ಕೆ ಬೇಕಿರೋ ಅಗತ್ಯ ತಯಾರಿಗಳನ್ನು ಅವರು ಮಾಡಿಕೊಳ್ಳುತ್ತಾರೆ. ‘ಛಾವಾ’ ಚಿತ್ರದ ಯಶಸ್ಸಿನ ನಂತರ ವಿಕ್ಕಿ ‘ಮಹಾವತಾರ್’ ಸಿನಿಮಾಗಾಗಿ ದೊಡ್ಡ ಸವಾಲನ್ನು ಸ್ವೀಕರಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಚಿರಂಜೀವಿ ಪರಶುರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ನಟ ಬರೋಬ್ಬರಿ 25 ಕೆಜಿಗೂ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಪರಶುರಾಮನ ಪಾತ್ರಕ್ಕಾಗಿ ಭಾರಿ ಸಿದ್ಧತೆ

ಪುರಾಣಗಳಲ್ಲಿ ಪರಶುರಾಮನನ್ನು ಅತ್ಯಂತ ಶಕ್ತಿಶಾಲಿ ಮತ್ತು ದೈತ್ಯ ಪ್ರತಿಭೆಯಾಗಿ ಬಣ್ಣಿಸಲಾಗಿದೆ. ಈ ಪಾತ್ರಕ್ಕೆ ಜೀವ ತುಂಬಲು ವಿಕ್ಕಿ ಕೌಶಲ್ ಭಾರಿ ಕಸರತ್ತು ನಡೆಸಲಿದ್ದಾರೆ. ಚಿತ್ರದಲ್ಲಿ ಪರಶುರಾಮನ ದಿವ್ಯ ಕೊಡಲಿಯನ್ನು ಹಿಡಿದು ಹೋರಾಡುವ ದೃಶ್ಯಗಳಿಗಾಗಿ ಅವರು ಅಗಲವಾದ ಎದೆ ಹಾಗೂ ಬಲಿಷ್ಠ ದೇಹವನ್ನು ಹೊಂದಬೇಕಾಗಿದೆ. ಇದಕ್ಕಾಗಿ ಅವರ ಫಿಟ್‌ನೆಸ್ ಕೋಚ್ ತೇಜಸ್ ಲಾಲಾವಾನಿ ಮತ್ತು ನ್ಯೂಟ್ರಿಷನಿಸ್ಟ್ ಅಲ್ಕೇಶ್ ಶರೋತ್ರಿ ವಿಶೇಷ ತರಬೇತಿ ಹಾಗೂ ಆಹಾರದ ಪ್ಲಾನ್ ಸಿದ್ಧಪಡಿಸಿದ್ದಾರೆ.

ಛಾವಾ ಚಿತ್ರಕ್ಕಿಂತಲೂ ದೊಡ್ಡ ಸವಾಲು

ವಿಕ್ಕಿ ಕೌಶಲ್ ಅವರು ಈ ಹಿಂದೆ ‘ಚಾವಾ’ ಚಿತ್ರಕ್ಕಾಗಿ ತಮ್ಮ ತೂಕವನ್ನು 80 ಕೆಜಿಯಿಂದ 105 ಕೆಜಿಗೆ ಹೆಚ್ಚಿಸಿಕೊಂಡಿದ್ದರು ಅಂದತ. ಆದರೆ ‘ಮಹಾವತಾರ್’ ಚಿತ್ರಕ್ಕಾಗಿ ಅವರು ಇದಕ್ಕಿಂತಲೂ ಹೆಚ್ಚು ದಪ್ಪಗಾಗಬೇಕಿದೆ. ಸೆಪ್ಟೆಂಬರ್ ತಿಂಗಳಿನಿಂದ ಅವರ ಕಠಿಣ ತರಬೇತಿ ಆರಂಭವಾಗಲಿದೆ. ಡಿಸೆಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುವ ಮುನ್ನ, ಅಂದರೆ ಕೇವಲ ಮೂರು ತಿಂಗಳಲ್ಲಿ ಅವರು ಇಷ್ಟು ಕೆಜಿ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಕಠಿಣ ವರ್ಕೌಟ್ ಮತ್ತು ಡಯಟ್ ಪ್ಲಾನ್

ಈ ಹೊಸ ರೂಪಕ್ಕಾಗಿ ವಿಕ್ಕಿ ಕೌಶಲ್ ದಿನನಿತ್ಯದ ಆಹಾರದಲ್ಲಿ 250 ರಿಂದ 500 ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ಪ್ರೊಟೀನ್ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಸ್ಕ್ವಾಟ್ಸ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್‌ನಂತಹ ಕಠಿಣ ವ್ಯಾಯಾಮಗಳನ್ನು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ – Kannada News | Banks have upto 15 days holiday in India, including Id Milad, Onam, independence day

ಎಸ್​ಬಿಐ ಬ್ಯಾಂಕ್​ನ ಚಿತ್ರImage Credit source: Getty Images

ನವದೆಹಲಿ, ಜುಲೈ 31: ಆರ್​ಬಿಐ (RBI) ಕ್ಯಾಲೆಂಡರ್ ಪ್ರಕಾರ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ (Bank Holidays) ಇರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಈದ್ ಮಿಲಾದ್, ಓಣಂ ಇತ್ಯಾದಿ ಪ್ರಮುಖ ರಜಾದಿನಗಳಿವೆ. ಹಾಗೆಯೇ, ಕೇರ್ ಪೂಜಾ ಇತ್ಯಾದಿ ಪ್ರಾದೇಶಿಕ ವಿಶೇಷ ರಜೆಗಳೂ ಇವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದಲ್ಲಿ ಒಂಬತ್ತು ದಿನಗಳು ಬ್ಯಾಂಕುಗಳ ಕಚೇರಿ ಬಂದ್ ಆಗಿರುತ್ತದೆ.

2026ರ ಆಗಸ್ಟ್​ನಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳ ಪಟ್ಟಿ

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 4, ಮಂಗಳವಾರ: ಕೇರ್ ಪೂಜಾ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 8: ಎರಡನೇ ಶನಿವಾರದ ರಜೆ ಹಾಗೂ ಸಿಕ್ಕಿಂನಲ್ಲಿ ಟೆಂಡೋಂಗ್ ಲಹೋ ರುಮ್ ಫಾಟ್ ಹಬ್ಬ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 13, ಗುರುವಾರ: ಪೇಟ್ರಿಯಾಟ್ಸ್ ಡೇ (ಮಣಿಪುರದಲ್ಲಿ ರಜೆ)
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ (ಎಲ್ಲೆಡೆ ರಜೆ)
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 19, ಬುಧವಾರ: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದೂರ್ ಜಯಂತಿ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 25, ಮಂಗಳವಾರ: ಮಿಲಾದ್ ಉನ್ ನವಬಿ, ಮಿಲಾದ್ ಇ ಶೆರಿಫ್, ಪ್ರಥಮ ಓಣಂ (ಕೇರಳ, ಆಂಧ್ರ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್, ಮಿಲಾದ್ ಉನ್ ನಬಿ, ಬರಾವಾಫತ್, ತಿರುಓಣಂ (ಕರ್ನಾಟಕ, ಮಹಾರಾಷ್ಟ್ರ, ಕೇರಳ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 27, ಗುರುವಾರ: ಝುಲನ್ ಯಾತ್ರಾ, ಓಣಂ (ಒಡಿಶಾ, ಕೇರಳ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 28, ಶುಕ್ರವಾರ: ರಕ್ಷಾಬಂಧನ (ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಕೆರಳ, ಹಿಮಾಚಲಪ್ರದೇಶ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 30: ಭಾನುವಾರದ ರಜೆ

ಇದನ್ನೂ ಓದಿ: ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ

ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜೆಗಳು

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 8: ಎರಡನೇ ಶನಿವಾರದ ರಜೆ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್
  • ಆಗಸ್ಟ್ 30: ಭಾನುವಾರದ ರಜೆ

ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್​ಡ್ರಾಯಲ್​ಗೆ ಎಟಿಎಂಗಳು ದಿನದ 24 ಗಂಟೆ ಲಭ್ಯ ಇರುತ್ತವೆ. ಆರ್​ಟಿಜಿಎಸ್, ನೆಫ್ಟ್ ಇತ್ಯಾದಿ ಹಣ ವರ್ಗಾವಣೆಗೆ ನೆಟ್ ಬ್ಯಾಂಕಿಂಗ್ ಇದ್ದೇ ಇರುತ್ತದೆ. ಸಾಮಾನ್ಯ ಹಣ ವರ್ಗಾವಣೆಗಳಿಗೆ ಯುಪಿಐ ಕೂಡ ಇರುತ್ತದೆ. ಆದರೆ, ಚೆಕ್ ಹಾಕಲು, ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಲು, ದೊಡ್ಡ ಮೊತ್ತದ ಹಣ ಡೆಪಾಸಿಟ್ ಮಾಡಲು ಬ್ಯಾಂಕ್ ಕಚೇರಿಗಳಿಗೆ ಹೋಗುವ ಅವಶ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು, ಶಿಕ್ಷೆಗೂ ತಡೆಯಾಜ್ಞೆ: ಯೋಗೀಶ್ ಗೌಡರ್ ಕೊಲೆ ಕೇಸ್​ನಲ್ಲಿ ಬಿಗ್ ರಿಲೀಫ್ – Kannada News | Vinay Kulkarni Gets Bail in Yogesh Gowda Murder Case: Possibility of getting another chance for the MLA

ಯೋಗೀಶ್ ಗೌಡರ್ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನುImage Credit source: tv9

ಬೆಂಗಳೂರು, ಜುಲೈ 31: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಲಾಗಿದೆ. 5 ಲಕ್ಷ ರೂ. ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ಕೋರ್ಟ್​ ಆದೇಶಿಸಿದೆ. ಇದೇ ವೇಳೆ ವಿನಯ್ ಕುಲಕರ್ಣಿ ದೋಷಿ ಎಂದು ಪ್ರಕಟಿಸಿದ್ದ ತೀರ್ಪಿಗೂ ತಡೆಯಾಜ್ಞೆ ನೀಡಲಾಗಿದೆ. ಈ ಆದೇಶದಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ಸಿಗುವ ಸಾಧ್ಯತೆ ಮೂಡಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 am, Fri, 31 July 26

Source link

Karnataka Dam Water Level: ಕೆಆರ್‌ಎಸ್​ನಲ್ಲಿ ನೀರಿನ ಅಭಾವದ ಭೀತಿ: ಆಲಮಟ್ಟಿ ಭರ್ತಿ! – Kannada News | Karnataka Dam Water Level Today: KRS, Alamatti, Kabini Storage Details

ಬೆಂಗಳೂರು, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಬಿದ್ದ ಬೆನ್ನಲ್ಲೇ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕೆಆರ್‌ಎಸ್‌ನಲ್ಲಿ ನೀರಿನ ಅಭಾವ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 90 ಅಡಿ ದಾಟಿದ್ದರೂ ಸಹ, ಸದ್ಯಕ್ಕೆ 92.85 ಅಡಿಯಲ್ಲೇ ಸ್ಥಿರವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಬಹುದೂರ ಸಾಗಬೇಕಿದೆ. ಒಂದು ಕಡೆ ಮಳೆಯ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೇ ಕಂಗೆಟ್ಟಿದ್ದರೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕೆ ಎದುರಾಗಿದೆ. ಆದರೆ ಕೃಷ್ಣಾ ಕೊಳ್ಳದ ಆಲಮಟ್ಟಿ ಹಾಗೂ ಕಾವೇರಿ ಕೊಳ್ಳದ ಕಬಿನಿ ಮತ್ತು ಹಾರಂಗಿ ಜಲಾಶಯಗಳಿಗೆ ಉತ್ತಮ ಒಳಹರಿವು ಇರುವುದು ಕೊಂಚ ಸಮಾಧಾನ ತಂದಿದೆ.

1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ – ವಿಜಯಪುರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.10 ಮೀಟರ್
  • ಒಳಹರಿವು: 82,743 ಕ್ಯೂಸೆಕ್
  • ಹೊರಹರಿವು: 1,11,308 ಕ್ಯೂಸೆಕ್

ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

2. ಕೆ.ಆರ್.ಎಸ್. ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.85 ಅಡಿ
  • ಒಳಹರಿವು: 7,058 ಕ್ಯೂಸೆಕ್
  • ಹೊರಹರಿವು: 1,706 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.708 ಟಿಎಂಸಿ

3. ಕಬಿನಿ ಜಲಾಶಯ (ಮೈಸೂರು)

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 78.38 ಅಡಿ
  • ಒಳಹರಿವು: 9,133 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
  • ಇಂದಿನ ಸಂಗ್ರಹ: 16.12 ಟಿಎಂಸಿ

ವಯನಾಡು ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಕಬಿನಿ ಭರ್ತಿಗೆ ಕೇವಲ 6 ಅಡಿ ಬಾಕಿಯಿದ್ದು, ಇನ್ನೆರಡು ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆಯಿದೆ.

4. ಹಾರಂಗಿ ಜಲಾಶಯ (ಕೊಡಗು/ಕುಶಾಲನಗರ)

  • ಗರಿಷ್ಠ ಮಟ್ಟ: 2,859 ಅಡಿ
  • ಇಂದಿನ ಮಟ್ಟ: 2,857.88 ಅಡಿ
  • ಒಳಹರಿವು: 4,008 ಕ್ಯೂಸೆಕ್
  • ಹೊರಹರಿವು (ನದಿಗೆ):3,700 ಕ್ಯೂಸೆಕ್

5. ಹೇಮಾವತಿ ಜಲಾಶಯ (ಹಾಸನ/ಗೊರೂರು)

  • ಗರಿಷ್ಠ ಮಟ್ಟ: 2,922 ಅಡಿ (37 TMC)
  • ಇಂದಿನ ಮಟ್ಟ: 2,907.75 ಅಡಿ (25.019 TMC)
  • ಒಳಹರಿವು: 5,445 ಕ್ಯೂಸೆಕ್
  • ಹೊರಹರಿವು:500 ಕ್ಯೂಸೆಕ್ (ಕಾಲುವೆಗೆ zero)

ಕಳೆದ ವರ್ಷ ಇದೇ ದಿನ: 2,921 ಅಡಿ, 36.137 TMC ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೇಮಾವತಿಯಲ್ಲಿ ನೀರಿನ ಸಂಗ್ರಹ ಕೊಂಚ ಕಡಿಮೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ – Kannada News | A young man who took his mother on a flight for the first time.

ಪ್ರತಿಯೊಬ್ಬ ಮಕ್ಕಳಿಗೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಮ್ಮ ಹೆತ್ತವರನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಹೌದು, ಹೆತ್ತವರ ಸಣ್ಣ ಪುಟ್ಟ ಕನಸುಗಳನ್ನು ನನಸಾಗಿರುವುದರಲ್ಲಿ ಏನೋ ಖುಷಿ. ಇದೀಗ ಮಗನೊಬ್ಬ ತಾಯಿಯನ್ನು ಮೊದಲ ಬಾರಿಗೆ ವಿಮಾನ (flight) ಹತ್ತಿಸಿದ್ದಾನೆ. ತಾಯಿಯ ಜತೆಗೆ ವಿಮಾನ ಪ್ರಯಾಣದ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಅನ್ಮೋಲ್‌ ಖಾತ್ರಿ (Anmol Khattri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ನನಗೆ 26 ವರ್ಷಗಳು ಬೇಕಾದವು. ಅವರಿಗೆ 50 ವರ್ಷಗಳು ಬೇಕಾದವು. ಅಮ್ಮನ ಮೊದಲ ವಿಮಾನಯಾನ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಿಯ ಜತೆಗೆ ವಿಮಾನ ಪ್ರಯಾಣ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಫ್ಲೈಟ್ ನಲ್ಲಿ ಕುಳಿತು ಕಿಟಕಿಯಿಂದ ಆಚೆಗೆ ನೋಡುತ್ತಿರುವ ದೃಶ್ಯವನ್ನು ಕಾಣಬಹುದು. ಮಗನು ತನ್ನ ತಾಯಿಯ ಕೈ ಹಿಡಿದು ಕುಳಿತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟ ಅಮ್ಮ; ತಾಯಿಯ ತ್ಯಾಗ ನೆನಪಿಸಿಕೊಂಡ ಮಗಳು

ಈ ವಿಡಿಯೋ ಹದಿನಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಮ್ಮನ ಕನಸನ್ನು ಈಡೇರಿಸುವುದಕ್ಕೆ ಯೋಗ ಕೂಡಿ ಬರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೃದಯಕ್ಕೆ ಹತ್ತಿರವಾದ ದೃಶ್ಯ ಎಂದರೆ, ಮತ್ತೊಬ್ಬರು, ನಿಮ್ಮ ಬಗ್ಗೆ ಹೆತ್ತವರಿಗೆ ಖುಷಿ ಅನಿಸುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಗೆ ಮಾರಿ ಅಂದ್ರಾ ಜ್ಯೋತಿಷಿ? ಬೇಸರದಿಂದ ಮದುವೆಯಾಗಿ 8 ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ – Kannada News | Dehradun Bride’s Tragic End Sparks Questions Over Alleged Harassment and Superstition

ಡೆಹ್ರಾಡೂನ್, ಜುಲೈ 31: ವಿವಾಹವಾಗಿ ಕೇವಲ ಎಂಟು ತಿಂಗಳಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಡೆಹ್ರಾಡೂನ್‌ನ ದೋಯಿವಾಲಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಕ್ಷಿಣೆ ಕಿರುಕುಳ(Dowry) ಮತ್ತು ಮೂಢನಂಬಿಕೆಯ ಆಧಾರದ ಮೇಲೆ ನಿರಂತರ ಮಾನಸಿಕ ಹಿಂಸೆ ನೀಡಿದ್ದರಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸಾಯುವ ಮುನ್ನ ಸೃಷ್ಟಿ ಕಂದರಿ, ತಮ್ಮ ತಾಯಿಗೆ ಭಾವನಾತ್ಮಕ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ಕ್ಷಮಿಸಿ ಅಮ್ಮಾ, ಇನ್ನು ಮುಂದೆ ಈ ಕಿರುಕುಳ ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಸೃಷ್ಟಿ ಕಂದರಿ ಅವರು ನವೆಂಬರ್ 2025 ರಲ್ಲಿ ಹರ್ರಾವಾಳ ಮೂಲದ ಸರ್ಕಾರಿ ನೌಕರ ಸೌರಭ್ ರಾಟೂರಿ ಎಂಬುವವರನ್ನು ಮದುವೆಯಾಗಿದ್ದರು.

ಜುಲೈ 28 ಮತ್ತು 29 ರಂದು ಸೃಷ್ಟಿ ಫೋನ್ ಕರೆ ಸ್ವೀಕರಿಸದಿದ್ದಾಗ ಗರ್ವಾಲ್‌ನ ಶ್ರೀನಗರದಲ್ಲಿದ್ದ ಕುಟುಂಬಸ್ಥರು ಸಂಶಯಗೊಂಡು ಪರಿಚಯಸ್ಥರನ್ನು ಕಳುಹಿಸಿದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಅತ್ತೆ-ಮಾವಂದಿರು ಸೃಷ್ಟಿಯ ಸಾವು ಮತ್ತು ಕೃತ್ಯದ ಕುರಿತು ತಮಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿದ್ದರು ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮದುವೆಯಾದ ಮೂರು ತಿಂಗಳಿಗೆ ಸೃಷ್ಟಿಯ ಮಾವನಿಗೆ ಹೃದಯಾಘಾತವಾಗಿತ್ತು. ಆ ವೇಳೆ ಪೂಜೆ ಮಾಡಿಸಿದ್ದ ಒಬ್ಬ ಜ್ಯೋತಿಷಿ ಹೊಸ ವಧು ಮನೆಗೆ ಬಂದ ಮೇಲೆಯೇ ಈ ದುರದೃಷ್ಟ ಪ್ರಾರಂಭವಾಗಿದೆ ಎಂದು ಹೇಳಿದ್ದನು. ಅಂದಿನಿಂದ ಆಕೆಯನ್ನು ಅಪಶಕುನ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆ ನಡೆದರೂ ಆಕೆಯನ್ನೇ ಹೊಣೆಗಾರರನ್ನಾಗಿ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು.

ಮತ್ತಷ್ಟು ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್​​ಗೆ ನಾಲೆಗೆ ಹಾರಿದ ಮಹಿಳೆ

ಇತ್ತೀಚೆಗೆ ಆಕೆಯ ಮಾವ ನಿಧನರಾದಾಗ, ಕುಟುಂಬದ ಮಾನಸಿಕ ಕಿರುಕುಳ ತೀವ್ರಗೊಂಡು ಆಕೆಯನ್ನು ಸಾವಿನ ಅಂಚಿಗೆ ತಳ್ಳಿದೆ. ಮೃತಳ ಕುಟುಂಬಸ್ಥರು ನೀಡಿದ ದೂರಿನನ್ವಯ ದೋಯಿವಾಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಸೌರಭ್ ರಾಟೂರಿ, ಅತ್ತೆ ಪರ್ವೀಣಾ ದೇವಿ ಹಾಗೂ ಅತ್ತಿಗೆ ಚಾರು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 80(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಸೃಷ್ಟಿ ಕಳುಹಿಸಿದ ಕೊನೆಯ ವೀಡಿಯೊ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡೆಹ್ರಾಡೂನ್ ಸಿಒ (CO) ವಂದನಾ ತಿಳಿಸಿದ್ದಾರೆ.

ಹೊಸ ಭಾರತೀಯ ನ್ಯಾಯ ಸಂಹಿತೆಯಡಿ (BNS), ಮದುವೆಯಾದ 7 ವರ್ಷಗಳ ಒಳಗೆ ವಧು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದರೆ ಅಥವಾ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟರೆ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳು ಹೇಗೆ ಒಬ್ಬ ಶಿಕ್ಷಿತ ಹಾಗೂ ಸ್ವಾವಲಂಬಿ ಮಹಿಳೆಯ ಪ್ರಾಣವನ್ನೇ ಬಲಿ ಪಡೆಯಬಲ್ಲವು ಎಂಬುದಕ್ಕೆ ಈ ಭೀಕರ ಘಟನೆ ಉದಾಹರಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾವೇರಿ ವಿವಾದ: KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು – Kannada News | Karnataka Cauvery Water Dispute: Women Protesters Perform Urulu Seve at KRS Dam

ಮಂಡ್ಯ, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶವನ್ನು ಖಂಡಿಸಿ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕೆಆರ್‌ಎಸ್ ಜಲಾಶಯದ ಗೇಟ್ ಮುಂದೆ ಶುಕ್ರವಾರ ಬೆಳಗ್ಗೆಯೇ ಮಹಿಳಾ ಹೋರಾಟಗಾರರು ಉರುಳು ಸೇವೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿರ್ವಹಣಾ ಸಮಿತಿ (CWMA) ಮತ್ತು CWRC ನೀಡಿದ ಆದೇಶದ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು ತಿರುಗಿ ಬಿದ್ದಿವೆ. ಪದೇ ಪದೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕುಡಿಯುವ ನೀರಿಗೂ ತೊಂದರೆಯಾಗುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಿದರು.

ಮುಂಜಾನೆಯಿಂದಲೇ ಆರಂಭವಾದ ಪ್ರತಿಭಟನೆ ತಾರಕ್ಕೇರುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಕರ್ನಾಟಕ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು, ರೈತರ ಹಿತ ಕಾಪಾಡಲು ಮಾಜಿ ಸಿಎಂ ಬಂಗಾರಪ್ಪ ಅವರಂತೆ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಅನ್ಯಾಯ ನಿಲ್ಲಬೇಕು ಮತ್ತು ರೈತರಿಗೆ ನ್ಯಾಯ ಸಿಗಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಷಾಢ ಶುಕ್ರವಾರ: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ – Kannada News | Former CM Yediyurappa Visits Chamundeshwari Temple with Family for 3rd Ashada Friday

ಮೈಸೂರು,ಜು.31: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ನೆಲೆವೀಡು ಚಾಮುಂಡಿಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 3ನೇ ಆಷಾಢ ಶುಕ್ರವಾರದ ಶುಭ ಸಂದರ್ಭದಲ್ಲಿ ಭೇಟಿ ನೀಡಿದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ತಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಯಡಿಯೂರಪ್ಪ ಅವರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು. ನಾಡಿನ ಅಧಿದೇವತೆಯ ಆಶೀರ್ವಾದ ಪಡೆಯಲು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಯಡಿಯೂರಪ್ಪ ಅವರ ಭೇಟಿ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು. ಪರಿಸ್ಥಿತಿ ನಿರ್ವಹಣೆಗೆ ಭದ್ರತಾ ಸಿಬ್ಬಂದಿ ಹಾಗೂ ದೇವಾಲಯದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಭಕ್ತರ ಸುಗಮ ದರ್ಶನಕ್ಕೆ ಮತ್ತು ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ವ್ಯವಸ್ಥೆಗಳನ್ನು ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳ ಭೇಟಿಯು ಆಷಾಢ ಶುಕ್ರವಾರದ ದಿನದ ಪಾವಿತ್ರ್ಯವನ್ನು ಹೆಚ್ಚಿಸಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮನೆಗೆ ತರುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ನಿಯಮ ತಿಳಿದಿರಲಿ – Kannada News | Vastu Tips for Second Hand Items: How to Remove Negative Energy Before Using Used Furniture

ಸೆಕೆಂಡ್ ಹ್ಯಾಂಡ್ ವಸ್ತುImage Credit source: linkedin

ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡ್ ಅಥವಾ ಹಳೆಯ ವಸ್ತುಗಳನ್ನು ಖರೀದಿಸಿದಾಗ, ಅವು ಮನೆಗೆ ಶ್ರೇಯಸ್ಕರವೇ ಅಥವಾ ಅಶುಭವೇ ಎಂಬ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಉದ್ಭವಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಬಳಸುವ ಹಳೆಯ ಪೀಠೋಪಕರಣಗಳು ಅಥವಾ ಯಾವುದೇ ವಸ್ತುಗಳು ಅವುಗಳ ಹಿಂದಿನ ಮನೆಯ ವಾತಾವರಣ, ಅವುಗಳನ್ನು ಬಳಸಿದ ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಹಳೆಯ ನೆನಪುಗಳನ್ನು ತಮ್ಮೊಂದಿಗೆ ಹೊತ್ತು ತರುತ್ತವೆ. ಈ ಸೂಕ್ಷ್ಮ ಶಕ್ತಿಗಳು ನಮ್ಮ ಮನೆಯ ವಾತಾವರಣ ಮತ್ತು ಕುಟುಂಬದ ಜೀವನದ ಮೇಲೆ ನೇರ ಪರಿಣಾಮ ಬೀರಬಲ್ಲವು. ಆದ್ದರಿಂದ, ಯಾವುದೇ ಹಳೆಯ ವಸ್ತುವನ್ನು ಮನೆಗೆ ತರುವ ಮುನ್ನ ಕೆಲವು ವಾಸ್ತು ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.

ಉಪ್ಪು ನೀರಿನಿಂದ ಶುದ್ಧೀಕರಣ:

ನೀವು ಯಾರಾದರೂ ಬಳಸಿದ ಹಳೆಯ ಪೀಠೋಪಕರಣಗಳನ್ನು ಅಥವಾ ಇತರ ವಸ್ತುಗಳನ್ನು ಮನೆಗೆ ತಂದಾಗ, ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಕಲ್ಲುಪ್ಪು ಅಥವಾ ಉಪ್ಪು ಬೆರೆಸಿದ ನೀರಿನಿಂದ ಈ ವಸ್ತುಗಳನ್ನು ಒರೆಸಿ ಸ್ವಚ್ಛಗೊಳಿಸುವುದರಿಂದ ಅವುಗಳಲ್ಲಿ ಅಡಗಿರುವ ನಕಾರಾತ್ಮಕ ಶಕ್ತಿಯು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಸೂರ್ಯನ ಬೆಳಕಿನಲ್ಲಿ ಇಡುವುದು:

ಸೂರ್ಯನ ಬೆಳಕನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ಶುದ್ಧೀಕರಣಕಾರಕವೆಂದು ಪರಿಗಣಿಸಲಾಗುತ್ತದೆ. ಹಳೆಯ ವಸ್ತುಗಳನ್ನು ಮನೆಗೆ ಬಳಸಲು ಪ್ರಾರಂಭಿಸುವ ಮೊದಲು ಕನಿಷ್ಠ ಒಂದು ದಿನ ಪೂರ್ತಿ ಸೂರ್ಯನ ಬಿಸಿಲಿನಲ್ಲಿ ಇಡಬೇಕು. ಸೂರ್ಯನ ಪ್ರಖರ ಕಿರಣಗಳು ವಸ್ತುಗಳಲ್ಲಿ ತಂಗಿರುವ ಹಳೆಯ ಹಾಗೂ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಮಾಡುತ್ತವೆ.

ಗಂಗಾ ಜಲದ ಪ್ರೋಕ್ಷಣೆ:

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಗಂಗಾ ನದಿಯ ನೀರನ್ನು ಅತ್ಯಂತ ಪವಿತ್ರ ಹಾಗೂ ಪಾವನವೆಂದು ಪೂಜಿಸಲಾಗುತ್ತದೆ. ಗಂಗಾ ಜಲಕ್ಕೆ ಯಾವುದೇ ರೀತಿಯ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳನ್ನು ನಿವಾರಿಸುವ ದೈವಿಕ ಶಕ್ತಿಯಿದೆ. ಹಳೆಯ ವಸ್ತುಗಳ ಮೇಲೆ ಗಂಗಾ ಜಲವನ್ನು ಸಿಂಪಡಿಸುವುದರಿಂದ ಅವು ತಕ್ಷಣವೇ ಪವಿತ್ರಗೊಳ್ಳುತ್ತವೆ.

ಕರ್ಪೂರ ಮತ್ತು ಧೂಪದ್ರವ್ಯದ ಧೂಪ:

ಮನೆಯ ವಾತಾವರಣವನ್ನು ಶುದ್ಧೀಕರಿಸಲು ಕರ್ಪೂರ ಮತ್ತು ಧೂಪವನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಭೀಮಸೇನಿ ಕರ್ಪೂರ ಅಥವಾ ಗುಣಮಟ್ಟದ ಧೂಪದ್ರವ್ಯವನ್ನು ಹಳೆಯ ವಸ್ತುಗಳ ಹತ್ತಿರ ಹಚ್ಚಿ, ಅದರ ಹೊಗೆಯನ್ನು ವಸ್ತುಗಳಿಗೆ ತಗುಲಿಸಬೇಕು. ಈ ಸುಗಂಧಿತ ಹೊಗೆಯು ನಿರ್ಬಂಧಿತ ಶಕ್ತಿಗಳನ್ನು ದೂರವಿಟ್ಟು, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಹಳೆಯ ಪೀಠೋಪಕರಣಗಳಿಗೆ ನವೀನ ಬಣ್ಣ:

ವಾಸ್ತು ಪ್ರಕಾರ, ಹಳೆಯ ಪೀಠೋಪಕರಣಗಳಿಗೆ ಹೊಸದಾಗಿ ಬಣ್ಣ ಬಳಿಯುವುದರಿಂದ ಅವುಗಳಿಗೆ ನವೀನ ಕಳೆ ಸಿಗುವುದಲ್ಲದೆ, ಹಳೆಯ ಶಕ್ತಿಯ ದುಷ್ಪರಿಣಾಮವು ಕಡಿಮೆಯಾಗುತ್ತದೆ. ಆದ್ದರಿಂದ ಸಾಧ್ಯವಾದರೆ ಹಳೆಯ ಮರದ ಅಥವಾ ಕಬ್ಬಿನದ ವಸ್ತುಗಳಿಗೆ ಹೊಸ ಬಣ್ಣ ಬಳಿದು ಬಳಸುವುದು ಅತ್ಯಂತ ಮಂಗಳಕರ.

ಪೂಜೆಯ ಗಂಟಾನಾದದ ಶಕ್ತಿ:

ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆ ಅಥವಾ ಶುಭ ಕಾರ್ಯಗಳ ಆರಂಭದ ಸಂಕೇತವಾಗಿ ಗಂಟೆ ಬಾರಿಸುವ ಸಂಪ್ರದಾಯವಿದೆ. ವಾಸ್ತು ಶಾಸ್ತ್ರದ ಪ್ರಕಾರ, ಗಂಟೆಯ ನಾದದಿಂದ ಹೊರಹೊಮ್ಮುವ ಶಬ್ದ ತರಂಗಗಳು ನಕಾರಾತ್ಮಕತೆಯನ್ನು ಓಡಿಸಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ. ಆದ್ದರಿಂದ ಹಳೆಯ ವಸ್ತುಗಳನ್ನು ಮನೆಯಲ್ಲಿ ಸೂಕ್ತ ಸ್ಥಳದಲ್ಲಿ ಇರಿಸಿದ ನಂತರ ಪೂಜೆ ಮಾಡಿ ಗಂಟೆ ಬಾರಿಸುವುದು ಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version