ಬೆಂಗಳೂರಿನ ಕಾರ್ಪೊರೇಟ್ ಕೆಲಸ ಬಿಟ್ಟು ದೇಶದ ಹೆಮ್ಮೆಯ ಐಎಎಸ್ ಅಧಿಕಾರಿಯಾದ ಪ್ರಿಯಾ ರಾಣಿ – Kannada News | Priya Rani: Corporate Job to IAS Officer – A Bihar Village Girl’s UPSC Success Story
ಬೆಂಗಳೂರು, ಜೂ.26: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ, ಇಂದು ದೇಶದ ಅತ್ಯುನ್ನತ ಆಡಳಿತ ಸೇವೆಯಾದ ಐಎಎಸ್ (IAS) ಅಧಿಕಾರಿಯಾಗಿ ದೇಶಾದ್ಯಂತ ಸಾವಿರಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ ಪ್ರಿಯಾ ರಾಣಿ. ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಆದರೆ ಅವರಲ್ಲಿದ್ದ ಅಚಲ ಛಲ ಅವರನ್ನು ಯಶಸ್ಸಿನ ಶಿಖರಕ್ಕೇರಿಸಿದೆ. ಪ್ರಿಯಾ ರಾಣಿ ಅವರು ಜನಿಸಿದ್ದು ಬಿಹಾರದ ‘ಕುರ್ಕುರಿ’ ಎಂಬ ಅತ್ಯಂತ ಸಣ್ಣ ಹಳ್ಳಿಯಲ್ಲಿ. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆ…