ನನ್ನ ಆರೋಗ್ಯದ ಸೀಕ್ರೆಟ್ ‘ನಾಭಿ ಪೂರಣ’ ಎಂದ ದಿಲ್ಜಿತ್, ಏನದು ಕ್ರಿಯೆ? – Kannada News | Diljit Dosanjh’s belly button oil ritual is trending, will it help

ದಿಲ್ಜಿತ್ ದೋಸ್ಸಾಂಜ್ (diljit dosanjh), ಖ್ಯಾತ ಗಾಯಕ ಮತ್ತು ನಟ. ಇವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಗಳ ಲೆಕ್ಕದಲ್ಲಿ ಜನ ಬರುತ್ತಾರೆ. ಲೈವ್ ಶೋ ಟಿಕೆಟ್ ಬೆಲೆ ಸಹ ಲಕ್ಷಗಳಲ್ಲಿ ಇರುತ್ತದೆ. ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜಿತ್ ದೊಸ್ಸಾಂಜ್. ವಯಸ್ಸು 42 ಆಗಿದ್ದರೂ ಈಗಲೂ 25ರ ಯುವಕನಂತೆ ಕಾಣುವ ದಿಲ್ಜಿತ್ ದೊಸ್ಸಾಂಜ್, ಸಾಕಷ್ಟು ಡಯಟ್ ಮತ್ತು ವ್ಯಾಯಾಮಗಳನ್ನು ಮಾಡುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ದಿಲ್ಜೀತ್ ದೊಸ್ಸಾಂಜ್, ತಾವು ವರ್ಷಗಳಿಂದಲೂ ‘ನಾಭಿ ಪೂರಣ’ ಹೆಸರಿನ ಆಯುರ್ವೇಧ ಪ್ರಕ್ರಿಯೆಯೊಂದನ್ನು ಮಾಡಿಕೊಂಡು ಬರುತ್ತಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಏನದು ನಾಭಿ ಪೂರಣ?

ನಾಭಿ ಪೂರಣ ಎಂದರೆ ಹೊಕ್ಕಳಿಗೆ ಎಣ್ಣೆ ಹಾಕುವುದು. ಆಯುರ್ವೇಧದಲ್ಲಿ ಈ ಕ್ರಿಯೆ ಮಾಡಲಾಗುತ್ತದೆ. ಇದನ್ನು ಗಾಯಕ ದಿಲ್ಜೀತ್ ಬಹಳ ವರ್ಷಗಳಿಂದಲೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರಂತೆ. ಅವರು ಬೇವಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಬೆರೆಸಿ, ಮಲಗುವ ಮುನ್ನ ಕೆಲವು ಹನಿಗಳನ್ನು ತಮ್ಮ ಹೊಕ್ಕುಳಿಗೆ ಹಾಕಿ, ಸುಮಾರು 30 ನಿಮಿಷಗಳ ಕಾಲ ಮುಖ ಮೇಲೆ ಮಾಡಿ ಅಂಗಾತ ಮಲಗಿಕೊಳ್ಳುತ್ತಾರಂತೆ ನಂತರ ಹೊಕ್ಕಳಿನ ಸುತ್ತ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ತಮ್ಮ ಆರೋಗ್ಯಕ್ಕೆ ಬಹಳ ಸಹಾಯಕವಾಗಿ ಎಂದು ಅವರು ನಂಬುತ್ತಾರೆ.

ಇದನ್ನೂ ಓದಿ:ಮಕ್ಕಳ ಆರೋಗ್ಯ ಕಾಪಾಡಲು ಡಯಟ್‌ನಲ್ಲಿ ಇರಬೇಕಾದ ಪ್ರಮುಖ ಆಹಾರಗಳು

ಈ ನಾಭಿ ಪೂರಣದಿಂದ ಜೀರ್ಣಕ್ರಿಯೆ, ರಕ್ತ ಪರಿಚಲನೆ ಮತ್ತು ದೇಹದಲ್ಲಿನ ಒಟ್ಟಾರೆ ಸಮತೋಲನ ಉತ್ತಮ ಗೊಳ್ಳುತ್ತದೆ, ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಒಳ್ಳೆಯ ನಿದ್ದೆ ಬರುತ್ತದೆ ಎಂದು ಆಯುರ್ವೇಧ ವೈದ್ಯರು ಹೇಳುತ್ತಾರೆ. ವಿಭಿನ್ನ ಎಣ್ಣೆಗಳು ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ ಎಂದು ನಂಬಲಾಗಿದೆ. ಆದರೆ ವಿಜ್ಞಾನವು ಬೇರೆಯದ್ದನ್ನೇ ಹೇಳುತ್ತದೆ. ಈ ನಾಭಿ ಪೂರಣ ಕ್ರಿಯೆಯಿಂದ ದೇಹಕ್ಕೆ ಯಾವುದೇ ಉಪಯೋಗ ಆಗುವುದಿಲ್ಲ. ದೇಹದ ಚರ್ಚಮದ ಮೂಲಕ ಎಣ್ಣೆ ದೇಹದ ಒಳಗೆ ಇಳಿಯುವುದೇ ಇಲ್ಲ. ಇಳಿದರೂ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ಎಣ್ಣೆ ಹಾಕಿದಾಗ ಮಾಡುವ ಮಸಾಜ್ ಇಂದಾಗಿ ತುಸು ವಿಶ್ರಾಂತಿ ಎನಿಸಬಹುದು ಎನ್ನುತ್ತಾರೆ.

ದಿಲ್ಜಿತ್ ದೊಸ್ಸಾಂಜ್ ಈಗ ನಾಭಿ ಪೂರಣದ ಬಗ್ಗೆ ಹೇಳಿರುವ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆಯುರ್ವೇಧ ನಂಬುವರು ಈ ಕ್ರಿಯೆಯನ್ನು ಕೊಂಡಾಡುತ್ತಿದ್ದರು, ವಿಜ್ಞಾನ ನಂಬುವರು ಇದು ನಿಶ್ಪ್ರಯೋಜಕ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ – Kannada News | Bengaluru Fake Beggar Exposed: UP Man Faked Disability, Stole Mobiles in Byatarayanapura

ಬೆಂಗಳೂರು, ಜುಲೈ 29: ನಗರದ ಬೈಯತರಾಯನಪುರ ಬಳಿಯ ಐಟಿಐ ಲೇಔಟ್‌ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಮುಕೇಶ್ ಎಂಬಾತ ನಗರದಲ್ಲಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಅಂಗವಿಕಲನಂತೆ ನಟಿಸಿ ಜನರನ್ನು ವಂಚಿಸುತ್ತಿದ್ದ. ಕರುಣೆ ಬರುವಂತೆ ಕುಂಟುತ್ತಾ ನಡೆದು ಜನರ ಸಹಾನುಭೂತಿ ಗಳಿಸುತ್ತಿದ್ದ ಈತ, ಭಿಕ್ಷೆ ಬೇಡುವ ಸೋಗಿನಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದಾನೆ.

ಸ್ಥಳೀಯರು ಈತನ ನಡವಳಿಕೆ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ, ಮುಕೇಶ್‌ನ ಕಳ್ಳಾಟ ಬಯಲಾಗಿದೆ. ಕೈಕಾಲು ನೆಟ್ಟಗಿದ್ದರೂ ಕೂಡ ಶೋಕಿ ಜೀವನಕ್ಕಾಗಿ ಭಿಕ್ಷೆ ಬೇಡುತ್ತಾ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಸ್ಥಳೀಯರ ಎದುರು ಸಿಕ್ಕಿಬಿದ್ದಾಗ ಆತ ನೆಟ್ಟಗೆ ನಿಂತು ಕೈಜೋಡಿಸಿ ಕ್ಷಮೆಯಾಚಿಸಿದ್ದಾನೆ. ಬಳಿಕ, ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಭಿಕ್ಷಾಟನೆಯನ್ನೇ ವ್ಯಾಪಾರ ಮಾಡಿಕೊಂಡಿದ್ದ ಈತನ ಕೃತ್ಯ ಸದ್ಯ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈತನ ಕಳ್ಳಾಟದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್! – Kannada News | Wasim Jaffer’s India XI for the 2027 World Cup

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ ಹೇಗಿರಬೇಕೆಂದು ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ತಿಳಿಸಿದ್ದಾರೆ. ಜಾಫರ್ ಹೆಸರಿಸಿರುವ ಈ 11 ಆಟಗಾರರ ಪಟ್ಟಿಯಲ್ಲಿ ಅನುಭವಿ ಹಾಗೂ ಯುವ ಆಟಗಾರರ ಬಲಿಷ್ಠ ದಂಡೇ ಇದ್ದು, ಈ ಆಡುವ ಬಳಗದೊಂದಿಗೆ ಭಾರತ ತಂಡ ಕಣಕ್ಕಿಳಿದರೆ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್-ವಿರಾಟ್ ಜೋಡಿಗೆ ಜೈ:

2027ರ ವೇಳೆಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಯಸ್ಸಿನ ಸವಾಲಿರಲಿದೆ. ಆದರೂ ಆಫ್ರಿಕಾದ ಪಿಚ್‌ಗಳಲ್ಲಿ ಇವರ ಅನುಭವ ತಂಡಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯ ತಂದುಕೊಡಲಿದೆ ಎಂದು ಜಾಫರ್ ನಂಬಿದ್ದಾರೆ.

ಶಮಿ ಮೇಲೆ ಭರವಸೆ:

ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರ ಮಾರಕ ಲಯವನ್ನು ಕಡೆಗಣಿಸುವಂತಿಲ್ಲ. ಬುಮ್ರಾ ಮತ್ತು ಸಿರಾಜ್ ಜೊತೆಗೆ ಶಮಿ ಅವರ ತ್ರಿವಳಿ ವೇಗದ ದಾಳಿ ಆಫ್ರಿಕನ್ ಪಿಚ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಮೊಹಮ್ಮದ್ ಶಮಿ ಕೂಡ ಆಡುವ ಬಳಗದಲ್ಲಿ ಇರಬೇಕೆಂದು ಜಾಫರ್ ಆಗ್ರಹಿಸಿದ್ದಾರೆ.

ಜಡೇಜಾ, ಸೂರ್ಯಕುಮಾರ್‌ಗೆ ಕೊಕ್:

2023ರ ವಿಶ್ವಕಪ್ ತಂಡದಲ್ಲಿದ್ದ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ವಾಸಿಂ ಜಾಫರ್ ಮಣೆ ಹಾಕಿದ್ದಾರೆ.

ರಿಷಭ್ ಪಂತ್‌ಗೆ ಸ್ಥಾನವಿಲ್ಲ:

ಅಪಘಾತದ ಬಳಿಕ ರಿಷಭ್ ಪಂತ್ ಭರ್ಜರಿ ಕಂಬ್ಯಾಕ್ ಮಾಡಿದ್ದರೂ, ಏಕದಿನ ಮಾದರಿಯಲ್ಲಿ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನೇ ವಾಸಿಂ ಜಾಫರ್ ವಿಕೆಟ್ ಕೀಪರ್​ಗಳಾಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!

ಅದರಂತೆ 2027ರ ಏಕದಿನ ವಿಶ್ವಕಪ್​ಗೆ ವಾಸಿಂ ಜಾಫರ್ ಹೆಸರಿಸಿದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.

ಬ್ಯಾಟಿಂಗ್ ಕ್ರಮಾಂಕ ಆಟಗಾರನ ಹೆಸರು ಪ್ರಮುಖ ಪಾತ್ರ
1 ರೋಹಿತ್ ಶರ್ಮಾ ಆರಂಭಿಕ ಆಟಗಾರ
2 ಶುಭ್‌ಮನ್ ಗಿಲ್ ಆರಂಭಿಕ ಆಟಗಾರ ಹಾಗೂ ನಾಯಕ
3 ವಿರಾಟ್ ಕೊಹ್ಲಿ ಒನ್ ಡೌನ್ ಬ್ಯಾಟರ್
4 ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್
5 ಕೆ.ಎಲ್. ರಾಹುಲ್ ವಿಕೆಟ್ ಕೀಪರ್ / ಬ್ಯಾಟರ್
6 ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಲ್‌ರೌಂಡರ್
7 ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ ಆಲ್‌ರೌಂಡರ್
8 ಕುಲ್ದೀಪ್ ಯಾದವ್ ಪ್ರಮುಖ ಸ್ಪಿನ್ನರ್
9 ಜಸ್​ಪ್ರೀರ್  ಬುಮ್ರಾ ಮುಖ್ಯ ವೇಗದ ಬೌಲರ್
10 ಮೊಹಮ್ಮದ್ ಶಮಿ ಹಿರಿಯ ವೇಗದ ಬೌಲರ್
11 ಮೊಹಮ್ಮದ್ ಸಿರಾಜ್ ವೇಗದ ಬೌಲರ್
12ನೇ ಆಟಗಾರ ಇಶಾನ್ ಕಿಶನ್ ಬ್ಯಾಕಪ್ ವಿಕೆಟ್ ಕೀಪರ್

ಒಟ್ಟಾರೆಯಾಗಿ ಹೇಳುವುದಾದರೆ, ವಾಸಿಂ ಜಾಫರ್ ಆರಿಸಿರುವ ಈ ತಂಡವು 2027ರ ವಿಶ್ವಕಪ್‌ಗಾಗಿ ಅನುಭವ ಮತ್ತು ಯುವ ಪ್ರತಿಭೆಗಳ ಸಮ್ಮಿಶ್ರಣವಾಗಿದ್ದು, ಸೌತ್ ಆಫ್ರಿಕಾದ ವೇಗದ ಪಿಚ್‌ಗಳಲ್ಲಿ ಭಾರತದ ಮೂರನೇ ಏಕದಿನ ವಿಶ್ವಕಪ್ ಗೆಲುವಿನ ಕನಸನ್ನು ನನಸಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನಬಹುದು.

Source link

RRB Technician Recruitment 2026: ರೈಲ್ವೆಯಲ್ಲಿ ಬಂಪರ್​​​ ನೇಮಕಾತಿ; ಅರ್ಜಿ ಸಲ್ಲಿಸಲು ಕೊನೆಯ 2 ದಿನಗಳು ಮಾತ್ರ ಬಾಕಿ! – Kannada News | RRB Technician Recruitment 2026: Apply Online for 6,557 Posts Before July 31 – Check Eligibility and Salary Details

ರೈಲ್ವೆಯಲ್ಲಿ ನೇಮಕಾತಿImage Credit source: Getty Images

ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಇರುವ ತನ್ನ ವಿವಿಧ ವಲಯಗಳಲ್ಲಿ ಖಾಲಿ ಇರುವ ಬೃಹತ್ ಸಂಖ್ಯೆಯ ತಂತ್ರಜ್ಞ (Technician) ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದ್ದು, ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಖಾಲಿ ಹುದ್ದೆಗಳ ವರ್ಗೀಕರಣ ಮತ್ತು ವಿಭಾಗಗಳು:

ಈ ನೇಮಕಾತಿ ಅಭಿಯಾನದ ಮೂಲಕ ದೇಶಾದ್ಯಂತ ಒಟ್ಟು 6,557 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 323 ತಂತ್ರಜ್ಞ ಗ್ರೇಡ್ 1 (ಸಿಗ್ನಲ್) ಹುದ್ದೆಗಳು ಮತ್ತು 6,234 ತಂತ್ರಜ್ಞ ಗ್ರೇಡ್ 3 ಹುದ್ದೆಗಳಿವೆ. ಈ ಹುದ್ದೆಗಳನ್ನು ಟ್ರ್ಯಾಕ್ ಮೆಷಿನ್, ಬ್ರಿಡ್ಜ್, ಡೀಸೆಲ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, TRS, EMU, ಫಿಟ್ಟರ್, ವೆಲ್ಡರ್, ಕಾರ್ಪೆಂಟರ್ ಸೇರಿದಂತೆ ಹಲವು ಪ್ರಮುಖ ತಾಂತ್ರಿಕ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಗಳು ಲಭ್ಯವಿರುವ ಪ್ರಮುಖ ವಲಯಗಳು:

ಸಿಕಂದರಾಬಾದ್ ಹಾಗೂ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್‌ಪುರ್, ಚಂಡೀಗಢ, ಚೆನ್ನೈ, ಗುವಾಹಟಿ, ಜಮ್ಮು-ಶ್ರೀನಗರ, ಕೋಲ್ಕತ್ತಾ, ಮಾಲ್ಡಾ, ಮುಂಬೈ, ಮುಜಾಫರ್‌ಪುರ, ಪಾಟ್ನಾ, ಪ್ರಯಾಗರಾಜ್, ರಾಂಚಿ, ಸಿಲಿಗುರಿ, ತಿರುವನಂತಪುರಂ ಮತ್ತು ಗೋರಖ್‌ಪುರ ಪ್ರದೇಶಗಳಲ್ಲಿ ಈ ಖಾಲಿ ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆಯ ವಿವರಗಳು:

ತಂತ್ರಜ್ಞ ಗ್ರೇಡ್ 3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ (SSLC/Matriculation) ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ITI ಅಥವಾ ACT ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು. ತಂತ್ರಜ್ಞ ಗ್ರೇಡ್ 1 (ಸಿಗ್ನಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ (B.Sc) ಅಥವಾ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ ಮತ್ತು ಸಡಿಲಿಕೆ:

ಅಭ್ಯರ್ಥಿಗಳ ವಯಸ್ಸಿನ ಮಿತಿಯನ್ನು ಗ್ರೇಡ್-I ಹುದ್ದೆಗಳಿಗೆ 18 ರಿಂದ 33 ವರ್ಷಗಳು ಹಾಗೂ ಗ್ರೇಡ್-III ಹುದ್ದೆಗಳಿಗೆ 18 ರಿಂದ 30 ವರ್ಷಗಳು ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ ಮತ್ತು ಶುಲ್ಕ ಮರುಪಾವತಿ:

ಸಾಮಾನ್ಯ, ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500 ಆಗಿರುತ್ತದೆ. ಎಸ್‌ಸಿ, ಎಸ್‌ಟಿ, ಮಹಿಳೆಯರು, ಮಾಜಿ ಸೈನಿಕರು, ಪಿಡಬ್ಲ್ಯೂಬಿಡಿ, ಟ್ರಾನ್ಸ್‌ಜೆಂಡರ್ ಮತ್ತು ಇಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 250 ನಿಗದಿಪಡಿಸಲಾಗಿದೆ. CBT ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಬ್ಯಾಂಕ್ ಶುಲ್ಕಗಳನ್ನು ಹೊರತುಪಡಿಸಿ ರೂ. 400 ರವರೆಗೆ ಶುಲ್ಕವನ್ನು ವಾಪಸ್ (Refund) ಮಾಡಲಾಗುತ್ತದೆ. ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ:

ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ (Medical Exam) ಆಧಾರದ ಮೇಲೆ ನಡೆಸಲಾಗುತ್ತದೆ. CBT ಪರೀಕ್ಷೆಯನ್ನು ಒಟ್ಟು 100 ಪ್ರಶ್ನೆಗಳಿಗೆ 90 ನಿಮಿಷಗಳ ಕಾಲ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇದ್ದು, ಪ್ರತಿ ತಪ್ಪು ಉತ್ತರಕ್ಕೂ 1/3 ಅಂಕಗಳನ್ನು ಕಳೆಯಲಾಗುತ್ತದೆ.

ವೇತನ ಶ್ರೇಣಿಯ ವಿವರಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಂತ್ರಜ್ಞ ಗ್ರೇಡ್-I ಹುದ್ದೆಗಳಿಗೆ ಮಾಸಿಕ ಆರಂಭಿಕ ಮೂಲ ವೇತನ ರೂ. 29,200 ದೊರೆಯಲಿದೆ. ತಂತ್ರಜ್ಞ ಗ್ರೇಡ್-III ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ಮೂಲ ವೇತನ ರೂ. 19,900 ರೊಂದಿಗೆ ನಿಯಮಾನುಸಾರ ಇತರ ಕೇಂದ್ರ ಸರ್ಕಾರಿ ಭತ್ಯೆಗಳನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ತಿದ್ದುಪಡಿ:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ರ ರಾತ್ರಿ 11.59 ರವರೆಗೆ ಅವಕಾಶವಿರುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗಳು ಅಥವಾ ಪರಿಷ್ಕರಣೆಗಳನ್ನು ಮಾಡಬೇಕಿದ್ದರೆ, ಆಗಸ್ಟ್ 1 ರಿಂದ ಆಗಸ್ಟ್ 10 ರವರೆಗೆ ತಿದ್ದುಪಡಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

97ನೇ ವಯಸ್ಸಿನಲ್ಲೂ ಓಟದ ಹುಮ್ಮಸ್ಸು: ಬೆಂಗಳೂರಿನ ‘ಮ್ಯಾರಥಾನ್ ತಾತ’ ಎನ್.ಎಸ್. ದತ್ತಾತ್ರೇಯ ಸ್ಫೂರ್ತಿದಾಯಕ ಕಥೆ! – Kannada News | Bengaluru: 97 Year Old Marathon Runner NS Dattatreya Proves Age Is Just A Number

ಎನ್.ಎಸ್. ದತ್ತಾತ್ರೇಯ

ಬೆಂಗಳೂರು, ಜುಲೈ 29: ಸಾಮಾನ್ಯವಾಗಿ 90 ವರ್ಷ ದಾಟಿದ ಮೇಲೆ ಹೆಚ್ಚಿನವರು ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಬೆಂಗಳೂರಿನ 97 ವರ್ಷದ ವೃದ್ಧ ಎನ್.ಎಸ್. ದತ್ತಾತ್ರೇಯ (N S Dattatreya) ಅವರಿಗೆ ಓಟದ ಅಂಗಳದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ತಮ್ಮ 90ನೇ ವಯಸ್ಸಿನಲ್ಲಿ ಓಟ ಆರಂಭಿಸಿದ ಈ ‘ಮ್ಯಾರಥಾನ್ ತಾತ’, ಇಂದು ದೇಶಾದ್ಯಂತ ಸಾವಿರಾರು ಯುವಕರಿಗೆ ದೈಹಿಕ ಫಿಟ್‌ನೆಸ್‌ಗೆ ದಾರಿದೀಪವಾಗಿದ್ದಾರೆ.

90ನೇ ವಯಸ್ಸಿನಲ್ಲಿ ಆರಂಭವಾದ ಅದ್ಭುತ ಪಯಣ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBM) ಮಾಜಿ ಮ್ಯಾನೇಜರ್ ಆಗಿರುವ ದತ್ತಾತ್ರೇಯ ಅವರು 1989ರಲ್ಲಿ ನಿವೃತ್ತರಾಗಿದ್ದರು. 2019ರ ಜನವರಿಯಲ್ಲಿ ನಡೆದ ‘ನಮೋಥಾನ್’ ಓಟದಲ್ಲಿ ಪಾಲ್ಗೊಂಡು ಸನ್ಮಾನಿತರಾದ ನಂತರ, 90ನೇ ವಯಸ್ಸಿನಲ್ಲಿ ಓಡಲು ಸಾಧ್ಯವಾದರೆ ಸುಮ್ಮನೆ ಏಕೆ ಕುಳಿತುಕೊಳ್ಳಬೇಕು? ಎಂಬ ಆಲೋಚನೆ ಅವರಲ್ಲಿ ಮೂಡಿತು. ಅಲ್ಲಿಂದ ಪ್ರಾರಂಭವಾದ ಅವರ ಎರಡನೇ ಇನಿಂಗ್ಸ್‌ನಲ್ಲಿ ಈವರೆಗೆ 300ಕ್ಕೂ ಹೆಚ್ಚು ಮ್ಯಾರಥಾನ್, ವಾಕಥಾನ್ ಮತ್ತು ಫಿಟ್‌ನೆಸ್ ಸ್ಪರ್ಧೆಗಳನ್ನು ಪೂರ್ಣಗೊಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಣ ಪದಕಗಳ ಸಾಧನೆ

ಕೇವಲ ಸ್ಥಳೀಯ ಓಟಗಳಲ್ಲದೆ, ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 2019ರ ಮಲೇಷ್ಯಾ ಕೂಟದಲ್ಲಿ 5 ಚಿನ್ನದ ಪದಕ ಹಾಗೂ 2025ರ ಚೆನ್ನೈ ಕೂಟದಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 28ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಆರೋಗ್ಯವೇ ಭಾಗ್ಯ’ – ಯುವಜನತೆಗೆ ನೀಡಿದ ಸಂದೇಶ

ದಿನವೂ ವಾಕಿಂಗ್, ರನ್ನಿಂಗ್, ಟ್ರೆಡ್‌ಮಿಲ್ ಮತ್ತು ಸೈಕ್ಲಿಂಗ್ ಮಾಡುವ ದತ್ತಾತ್ರೇಯ ಅವರು ಶುದ್ಧ ಸಸ್ಯಾಹಾರಿ. “ಆರೋಗ್ಯವೇ ನಿಜವಾದ ಸಂಪತ್ತು. ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಶ್ರೇಷ್ಠ ಕೊಡುಗೆ ಎಂದರೆ ಉತ್ತಮ ಶಿಕ್ಷಣ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಮೇಲೆ ಹೊರೆಯಾಗದಂತೆ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು” ಎಂದು ಅವರು ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಆಂಧ್ರದ ಯುವಕ: ಕಾರಣ ನಿಗೂಢ – Kannada News | Horrific Incident: Andhra Youth Dies Under Moving Train in Bengaluru; Severed Head Found 400m Away

ಬೆಂಗಳೂರು, ಜುಲೈ 29: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೃತನನ್ನು ಆಂಧ್ರ ಮೂಲದ ವಿಶ್ವನಾಥ್(28) ಎಂದು ಗುರುತಿಸಲಾಗಿದ್ದು, ತಲೆಯಿಲ್ಲದ ದೇಹ ಮಾತ್ರ ನಿನ್ನೆ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೇ ಪೊಲೀಸರು ಘಟನೆ ಸಂಬಂಧ ಯುಡಿಆರ್​​ ದಾಖಲಿಸಿಕೊಂಡಿದ್ದರು. ಆದರೆ ಇಂದು ರುಂಡವೂ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ಸಿಕ್ಕಿದೆ.

ರುಂಡವನ್ನು ಎಳೆದು ತಂದಿದ್ದ ನಾಯಿಗಳು

ರೈಲಿಗೆ ತಲೆಕೊಟ್ಟು ವಿಶ್ವನಾಥ್​​ ಆತ್ಮಹತ್ಯೆಯ ವೇಳೆ ರುಂಡ ಮತ್ತು ದೇಹ ಎರಡೂ ಬೇರೆ ಬೇರೆ ಆಗಿತ್ತು. 400 ಮೀಟರ್​ನಷ್ಟು ದೂರಕ್ಕೆ ತಲೆಯನ್ನು ನಾಯಿಗಳು ಎಳಲೆದು ತಂದಿದ್ದು, ಇಂದು ಮೈದಾನದಲ್ಲಿ ಅದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಸಿಕ್ಕಿರುವ ರುಂಡವನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ಕರೆ

ಇನ್ನು ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ವಿಶ್ವನಾಥ್ ಕರೆ ಮಾಡಿದ್ದರು ಎಂಬ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ. ಪ್ರೇಯಸಿ ಜೊತೆ ಮಾತನಾಡಿದ ಬಳಿಕವೇ ಅವರು ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:02 pm, Wed, 29 July 26

Source link

ಕಾವೇರಿ ನೀರು ವಿವಾದ ನಡುವೆಯೂ ತಮಿಳುನಾಡು ಸಿಎಂ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ! – Kannada News | Cauvery Row: Preparations Underway at Vidhana Soudha Ahead of Tamil Nadu CM Joseph Vijay’s Proposed Bengaluru Visit

ಬೆಂಗಳೂರು, ಜುಲೈ 29: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಆಗಸ್ಟ್ 3 ರಂದು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅವರನ್ನು ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಮೊದಲು, ವಿಧಾನಸೌಧದ ಸಭಾಂಗಣ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಸಿಎಂ ವಿಜಯ್ ಆಗಮಿಸುವ ಮಾರ್ಗದಲ್ಲಿ ಸುಣ್ಣ-ಬಣ್ಣ ಬಳಿಯುವ ಕೆಲಸ, ಸಭಾಂಗಣದಲ್ಲಿ ಆಸನ ವ್ಯವಸ್ಥೆ ಮತ್ತು ನವೀಕರಣ ಕಾರ್ಯ ಭರದಿಂದ ಸಾಗಿದೆ. ಆದರೆ, ಈ ಭೇಟಿ ಮತ್ತು ಸಭೆಯು ಕಾವೇರಿ ನೀರು ವಿವಾದದ ನಡುವೆಯೇ ಆಯೋಜನೆಯಾಗಿದೆ.

ಏತನ್ಮಧ್ಯೆ, ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆಯಂತೆ ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡುವ ಆದೇಶವನ್ನು ಮಂಡ್ಯ ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ರಾಜ್ಯದಲ್ಲಿ ನೀರಿನ ಕೊರತೆ ಇರುವಾಗ ನೀರು ಬಿಡುಗಡೆ ಅಸಾಧ್ಯ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಹನಿ ನೀರು ಬಿಟ್ಟರೂ ರಾಜ್ಯಾದ್ಯಂತ ಬಂದ್ ಕರೆ ನೀಡುವ ಎಚ್ಚರಿಕೆಯನ್ನು ಕನ್ನಡಪರ ಸಂಘಟನೆಗಳು ನೀಡಿವೆ. ಈ ಎಲ್ಲಾ ವಿರೋಧಗಳ ನಡುವೆ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಆಗಸ್ಟ್ 3 ರಂದು ಬೆಂಗಳೂರಿಗೆ ಬರುತ್ತಾರಾ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್‌ನಲ್ಲೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಸರಳ ಮತ್ತು ಸುಲಭ ವಿಧಾನ – Kannada News | Pay Electricity Bill Online in Karnataka: Quick Mobile Payment via UPI Apps

ಬೆಂಗಳೂರು, ಜು.29: ವಿದ್ಯುತ್ ಬಿಲ್ (Electricity Bill) ಪಾವತಿಸಲು ಉದ್ದನೆಯ ಸಾಲಿನಲ್ಲಿ ನಿಲ್ಲುವ ಕಾಲ ಈಗ ಮುಗಿದಿದೆ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಕೇವಲ ಒಂದೆರಡು ನಿಮಿಷಗಳಲ್ಲಿ, ಅತ್ಯಂತ ಸುರಕ್ಷಿತವಾಗಿ ಹಾಗೂ ಸುಲಭವಾಗಿ ಮನೆಬಾಗಿಲಿನಲ್ಲೇ ಕರೆಂಟ್ ಬಿಲ್ ಪಾವತಿಸಬಹುದು. ಇದರ ಜತೆಗೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಜುಲೈ ತಿಂಗಳಿನಲ್ಲಿ ಯಾವುದೇ ಫಿಸಿಕಲ್ (ಕಾಗದದ) ವಿದ್ಯುತ್ ಬಿಲ್‌ಗಳನ್ನು ವಿತರಿಸಲಾಗುವುದಿಲ್ಲ. ಮೊಬೈಲ್​ ಮೂಲಕ ಪಾವತಿಸಬೇಕಾಗುತ್ತದೆ. ಅದಕ್ಕಾಗಿ ಫೋನ್​ ಮೂಲಕ ಬಿಲ್ ಪಾವತಿ ಮಾಡಬಹುದು.

ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (BESCOM, MESCOM, HESCOM, GESCOM, CESC) ಬಿಲ್‌ಗಳನ್ನು ಮೊಬೈಲ್‌ ಮೂಲಕ ಪಾವತಿಸುವ ವಿವರವಾದ ಹಂತಗಳು ಇಲ್ಲಿವೆ.

ಯುಪಿಐ ಆಪ್‌ಗಳ ಮೂಲಕ (PhonePe, Google Pay, Paytm):

ಇಂದು ಬಹುತೇಕ ಜನರು ಬಳಸುವ ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂ ಮೂಲಕ ಅತ್ಯಂತ ವೇಗವಾಗಿ ಬಿಲ್ ಪಾವತಿಸಬಹುದು:

ಆಪ್ ಓಪನ್ ಮಾಡಿ: Google Pay, PhonePe ಅಥವಾ Paytm ಆ್ಯಪ್ ತೆರೆಯಿರಿ.

‘Bills & Recharges’ ಆಯ್ಕೆ ಮಾಡಿ: ಮುಖಪುಟದಲ್ಲಿರುವ ‘Bills & Recharges’ ಅಥವಾ ‘Pay Bills’ ವಿಭಾಗಕ್ಕೆ ಹೋಗಿ, ಅಲ್ಲಿ ‘Electricity’ ಮೇಲೆ ಕ್ಲಿಕ್ ಮಾಡಿ.

ಸರಬರಾಜು ಮಂಡಳಿ ಆಯ್ಕೆ ಮಾಡಿ: ನಿಮ್ಮ ಭಾಗದ ವಿದ್ಯುತ್ ಕಂಪನಿಯನ್ನು ಆಯ್ಕೆ ಮಾಡಿ (ಉದಾಹರಣೆಗೆ: BESCOM, MESCOM, ಇತ್ಯಾದಿ).

ಖಾತೆ ಸಂಖ್ಯೆ (Account ID / Consumer ID) ನಮೂದಿಸಿ: ನಿಮ್ಮ ಕರೆಂಟ್ ಬಿಲ್‌ನಲ್ಲಿರುವ 10 ಅಂಕೆಗಳ Account ID / Connection ID ಅನ್ನು ನಮೂದಿಸಿ ‘Confirm’ ಕೊಡಿ.

ಬಿಲ್ ಪರಿಶೀಲಿಸಿ: ಆ್ಯಪ್ ನಿಮ್ಮ ಹೆಸರಿನಲ್ಲಿರುವ ಇತ್ತೀಚಿನ ಬಿಲ್ ಮೊತ್ತವನ್ನು ತಾನಾಗಿಯೇ ತೋರಿಸುತ್ತದೆ.

ಪಾವತಿಸಿ : ನಿಮ್ಮ UPI PIN ನಮೂದಿಸಿ ಹಣ ಪಾವತಿಸಿ. ಪಾವತಿ ಪೂರ್ಣಗೊಂಡ ತಕ್ಷಣ ಮೊಬೈಲ್‌ಗೆ ರಶೀದಿ ಬರಲಿದೆ.

ಅಧಿಕೃತ ಇಲಾಖೆ ಆಪ್‌ಗಳ ಮೂಲಕ (ಉದಾ: BESCOM Mithra):

ಆಯಾ ವಿದ್ಯುತ್ ಸರಬರಾಜು ಮಂಡಳಿಗಳ ಅಧಿಕೃತ ಮೊಬೈಲ್ ಆಪ್‌ಗಳ ಮೂಲಕವೂ ನೇರವಾಗಿ ಬಿಲ್ ಪಾವತಿಸಬಹುದು.

Play Store ಅಥವಾ App Store ನಿಂದ ನಿಮ್ಮ ಕಂಪನಿಯ ಆಪ್ (ಉದಾ: BESCOM Mithra) ಡೌನ್‌ಲೋಡ್ ಮಾಡಿ.

ನಿಮ್ಮ ಮೊಬೈಲ್ ಸಂಖ್ಯೆ ಹಾಗೂ Account ID ನೀಡಿ ನೋಂದಾಯಿಸಿ.

‘Pay Bill’ ವಿಭಾಗಕ್ಕೆ ತೆರಳಿ, ಬಿಲ್ ಮೊತ್ತವನ್ನು ಪರಿಶೀಲಿಸಿ.

Debit Card, Credit Card, Net Banking ಅಥವಾ UPI ಬಳಸಿ ಸುಲಭವಾಗಿ ಹಣ ಪಾವತಿಸಿ.

ಇದನ್ನೂ ಓದಿ: ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳೇ ಗಮನಿಸಿ: ಜುಲೈ ತಿಂಗಳಲ್ಲಿ ಫಿಸಿಕಲ್ ಕರೆಂಟ್ ಬಿಲ್ ಇಲ್ಲ

ಮೊಬೈಲ್‌ನಲ್ಲಿ ಬಿಲ್ ಪಾವತಿಸುವುದರ ಮುಖ್ಯ ಪ್ರಯೋಜನಗಳು:

ಸಮಯದ ಉಳಿತಾಯ: ಯಾವುದೇ ಕಚೇರಿ ಅಥವಾ ಕೌಂಟರ್‌ಗೆ ಅಲೆಯುವ ಅಗತ್ಯವಿಲ್ಲ.

ಆಟೋ-ರಿಮೈಂಡರ್: ಪ್ರತಿ ತಿಂಗಳು ಬಿಲ್ ಬಂದ ತಕ್ಷಣ ಮೊಬೈಲ್‌ಗೆ ಮೆಸೇಜ್ ಹಾಗೂ ನೋಟಿಫಿಕೇಶನ್ ಬರುತ್ತದೆ.

ಪಾವತಿ ಇತಿಹಾಸ : ನೀವು ಪಾವತಿಸಿದ ಎಲ್ಲಾ ಹಳೆಯ ಬಿಲ್‌ಗಳ ರಶೀದಿಗಳನ್ನು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು.

ಕ್ಯಾಶ್‌ಬ್ಯಾಕ್ & ಆಫರ್‌ಗಳು: ಯುಪಿಐ ಆಪ್‌ಗಳಲ್ಲಿ ಬಿಲ್ ಪಾವತಿಸಿದಾಗ ಆಕರ್ಷಕ ಕ್ಯಾಶ್‌ಬ್ಯಾಕ್ ಹಾಗೂ ಕೂಪನ್‌ಗಳು ಸಿಗುತ್ತವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರು ಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ: ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಿ – Kannada News | PM Modi Extends Guru Purnima Greetings With Timeless Sanskrit Verse on Teachers

ನವದೆಹಲಿ, ಜುಲೈ 29: ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ತಮ್ಮ ಶಿಷ್ಯರಲ್ಲಿ ಸಕಾರಾತ್ಮಕ ಶಕ್ತಿ ತುಂಬಿ, ಉದಾತ್ತ ಚಿಂತನೆ ಮತ್ತು ಮೌಲ್ಯಗಳ ಮೂಲಕ ಅವರನ್ನು ನೈಜ ವ್ಯಕ್ತಿಗಳನ್ನಾಗಿ ರೂಪಿಸುತ್ತಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಗುರುಗಳು ತೋರಿದ ಉನ್ನತ ಆದರ್ಶಗಳು ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ತಮ್ಮ ಜೀವನದ ದಿಕ್ಸೂಚಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಗುರುವಿನ ಮಹತ್ವವನ್ನು ಸಾರುವ ಸುಂದರ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್​

ಪ್ರೇರಕಃ ಸೂಚಕಶ್ಚೈವ ವಾಚಕೋ ದರ್ಶಕಸ್ತಥಾ।
ಶಿಕ್ಷಕಃ ಬೋಧಕಶ್ಚೈವ ಷಡೇತೇ ಗುರವಃ ಸ್ಮೃತಾಃ

ಪ್ರೇರಕ: ಆಲೋಚನೆ ಮತ್ತು ಕೆಲಸಗಳಿಗೆ ಸ್ಪೂರ್ತಿ ನೀಡುವವನು.

ಸೂಚಕ: ಸರಿಯಾದ ಮಾರ್ಗವನ್ನು ತೋರಿಸುವವನು.

ವಾಚಕ: ಜ್ಞಾನ ಮತ್ತು ಸತ್ಯವನ್ನು ತಿಳಿಸಿ ಹೇಳುವವನು.

ದರ್ಶಕ: ಸನ್ಮಾರ್ಗದೆಡೆಗೆ ನಡೆಸಿ ದಾರಿ ದೀಪವಾಗುವವನು.

ಶಿಕ್ಷಕ: ವಿದ್ಯೆ ಮತ್ತು ಕೌಶಲ್ಯಗಳನ್ನು ಬೋಧಿಸುವವನು.

ಬೋಧಕ: ಜೀವನದ ಸತ್ಯದ ಅರಿವು ಮೂಡಿಸಿ ಸ್ವಯಂ-ಅಭಿವೃದ್ಧಿಗೆ ದಾರಿ ಮಾಡಿಕೊಡುವವನು.

ಈ ಆರನ್ನೂ ಗುರುವಿನ ಶ್ರೇಷ್ಠ ರೂಪಗಳೆಂದು ಪರಿಗಣಿಸಲಾಗಿದೆ ಎಂದು ಪ್ರಧಾನಿ ಸ್ಮರಿಸಿದ್ದಾರೆ.

ಮತ್ತಷ್ಟು ಓದಿ:ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

ಪ್ರಧಾನಿ ಮೋದಿರ ಸಂದೇಶ:
“ಗುರುವು ಜ್ಞಾನ ಧಾರೆ ಎರೆಯುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಸದುಲೋಚನೆ ಹಾಗೂ ಸಂಸ್ಕಾರಗಳೊಂದಿಗೆ ಅವರನ್ನು ಸುಶಿಕ್ಷಿತರನ್ನಾಗಿ ಮಾಡುತ್ತಾರೆ. ಬನ್ನಿ, ಅಂತಹ ಮಹಾನ್ ಗುರುಗಳ ಆದರ್ಶಗಳನ್ನು ನಮ್ಮ ಬದುಕಿನ ದಾರಿದೀಪವನ್ನಾಗಿ ಮಾಡಿಕೊಳ್ಳೋಣ” ಎಂದು ಪ್ರಧಾನಿ ದೇಶವಾಸಿಗಳಿಗೆ ಹಾರೈಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್‌ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್‌ ಮೇಲೆ ಭಾರಿ ಪ್ರಭಾವ – Kannada News | August 2026 Rule Changes: 5 New Laws Affecting LPG, Banking and Tatkal Bookings

ನವದೆಹಲಿ,ಜುಲೈ 29: ಭಾರತದಾದ್ಯಂತ ಹಣಕಾಸು, ಸಾರಿಗೆ ಮತ್ತು ಅಂಚೆ(Post) ಸೇವೆಗಳಲ್ಲಿ 5 ಪ್ರಮುಖ ಬದಲಾವಣೆಗಳು ಆಗಸ್ಟ್​ 1, 2026ರಿಂದ ಜಾರಿಗೆ ಬರಲಿವೆ. ಪ್ರತಿ ತಿಂಗಳ ಆರಂಭದಲ್ಲಿ ಹಲವು ಆರ್ಥಿಕ ನಿಯಮಗಳು ಬದಲಾಗುವಂತೆ, ಆಗಸ್ಟ್ 1 ರಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆಗಳಾಗಲಿವೆ. ಅಡುಗೆ ಅನಿಲ (LPG) ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ನಿಯಮಗಳು ಹಾಗೂ ಅಂಚೆ ಶುಲ್ಕಗಳಲ್ಲಿನ ಈ ಬದಲಾವಣೆಗಳು ಸಾರ್ವಜನಿಕರ ದಿನನಿತ್ಯದ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿವೆ.

ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ

ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ಪರಿಶೀಲಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿರುವುದರಿಂದ ವಾಣಿಜ್ಯ ಹಾಗೂ ಗೃಹಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅಡುಗೆ ಅನಿಲ (LPG) ಬೆಲೆ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಸ್ಪೀಡ್ ಪೋಸ್ಟ್ ಶುಲ್ಕಗಳಲ್ಲಿನ ಪರಿಷ್ಕರಣೆಯು ಸಾರ್ವಜನಿಕರ ದೈನಂದಿನ ವೆಚ್ಚಗಳ ಮೇಲೆ ನೇರ ಪರಿಣಾಮ ಬೀರಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಾದರೆ ಹೋಟೆಲ್, ರೆಸ್ಟೋರೆಂಟ್‌ಗಳ ಊಟ ಹಾಗೂ ಫುಡ್ ಡೆಲಿವರಿ ವೆಚ್ಚ ದುಬಾರಿಯಾಗಲಿದೆ.

ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದಿಸುವ ದೇಶಗಳಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು (OMC) ಆಗಸ್ಟ್ 1 ರಿಂದ ದೇಶೀಯ ಹಾಗೂ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಮರುಪರಿಶೀಲಿಸಲಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಾದರೆ ಹೋಟೆಲ್, ರೆಸ್ಟೋರೆಂಟ್ ಮತ್ತು ಹೊರಗಿನ ಆಹಾರ ಪದಾರ್ಥಗಳ ಹಾಗೂ ಫುಡ್ ಡೆಲಿವರಿ ದರಗಳು ದುಬಾರಿಯಾಗಲಿವೆ. ಟೋಕನ್ ವಿತರಣೆ ಮತ್ತು ಟಿಕೆಟ್ ಬುಕಿಂಗ್ ಆರಂಭವಾಗುವ ಸಮಯ ಒಂದೇ ಆಗಿರಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು, ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲುವ ಗೊಂದಲ ತಪ್ಪಲಿದೆ.

ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ನೂತನ ನಿಯಮ

ರೈಲ್ವೆ ನಿಲ್ದಾಣಗಳ ಮೀಸಲಾತಿ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ‘ಟೋಕನ್ ವಿತರಣೆ’ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಟೋಕನ್ ನೀಡುವ ಸಮಯ ಮತ್ತು ಬುಕಿಂಗ್ ಆರಂಭವಾಗುವ ಸಮಯವನ್ನು ಒಂದೇ ಬಾರಿಗೆ ಸಂಯೋಜಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದ್ದು, ಭೌತಿಕ ಕೌಂಟರ್‌ಗಳಲ್ಲಿ ಕಾಳಸಂತೆಯನ್ನು ತಡೆಯಲು ನೆರವಾಗಲಿದೆ.

ಮತ್ತಷ್ಟು ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಬ್ಯಾಂಕಿಂಗ್ ಸೇವೆ ಮತ್ತು ಕ್ರೆಡಿಟ್ ಕಾರ್ಡ್ ನೀತಿ ಬದಲಾವಣೆ

ದೇಶದ ವಿವಿಧ ಬ್ಯಾಂಕುಗಳು ತಮ್ಮ ಸೇವಾ ಶುಲ್ಕಗಳು, ಬ್ಯಾಂಕ್ ಅಲರ್ಟ್ ಎಸ್​ಎಸ್​ ಶುಲ್ಕಗಳು ಹಾಗೂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ನಿಯಮಗಳನ್ನು ಆಗಸ್ಟ್ 1 ರಿಂದ ಪರಿಷ್ಕರಿಸಲಿವೆ. ಕ್ರೆಡಿಟ್ ಕಾರ್ಡ್ ಬಳಸಿ ಕರೆಂಟ್, ಗ್ಯಾಸ್ ಬಿಲ್ ಪಾವತಿಸುವಾಗ ಅಥವಾ ವಾಲೆಟ್ ಲೋಡ್ ಮಾಡುವಾಗ ಸಿಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳ ಮಿತಿ ಕಡಿಮೆಯಾಗಬಹುದು. ಆಧಾರ್, ಪಾನ್‌ಕಾರ್ಡ್, ಪಾಸ್‌ಬುಕ್, ಚೆಕ್‌ಬುಕ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಂತಹ ದಾಖಲೆಗಳನ್ನು ‘ಡಾಕ್ಯುಮೆಂಟ್’ ವಿಭಾಗದಲ್ಲಿ ಕಡಿಮೆ ದರಕ್ಕೆ ಕಳುಹಿಸಬಹುದು. ಬೆಂಗಳೂರು ಸೇರಿದಂತೆ 6 ಪ್ರಮುಖ ನಗರಗಳಲ್ಲಿ 24 ಗಂಟೆ ಹಾಗೂ 48 ಗಂಟೆಗಳ ಜರೂರು ಸ್ಪೀಡ್ ಪೋಸ್ಟ್ ಸೇವೆ ಲಭ್ಯವಿರಲಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಯುಟಿಲಿಟಿ ಬಿಲ್ (ಕರೆಂಟ್, ಗ್ಯಾಸ್) ಹಾಗೂ ವಾಲೆಟ್ ಲೋಡಿಂಗ್‌ಗೆ ನೀಡಲಾಗುತ್ತಿದ್ದ ‘ರಿವಾರ್ಡ್ ಪಾಯಿಂಟ್ಸ್’ ಮೇಲಿನ ಮಿತಿ ಕಡಿಮೆಯಾಗಲಿದ್ದು, ಅನಗತ್ಯ ಸೇವಾ ಶುಲ್ಕಗಳ ಭರ ಬೀಳಲಿದೆ.

ಅಂಚೆ ಇಲಾಖೆಯು ಪತ್ರಗಳು ಮತ್ತು ಪಾರ್ಸೆಲ್ ವರ್ಗೀಕರಣವನ್ನು ಸ್ಪಷ್ಟಪಡಿಸಿದ್ದು, ಬೃಹತ್ ಗ್ರಾಹಕರು ಹಾಗೂ ಚಿಲ್ಲರೆ ಗ್ರಾಹಕರಿಗೆ 24-ಘಂಟೆ ಮತ್ತು 48-ಘಂಟೆ ಸೇವೆಯ ದರಗಳನ್ನು ಪ್ರಕಟಿಸಿದೆ. ಬ್ಯಾಂಕ್ ಪಾಸ್‌ಬುಕ್, ಚೆಕ್‌ಬುಕ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು, ಪಾನ್‌ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಹಾಗೂ 500 ಗ್ರಾಂ ಗಿಂತ ಕಡಿಮೆ ತೂಕದ ರಾಖಿ ಅಥವಾ ಶುಭಾಶಯ ಪತ್ರಗಳನ್ನು ‘ದಾಖಲೆಗಳು’ ಎಂದು ಪರಿಗಣಿಸಲಾಗುವುದು. ಇವುಗಳಿಗೆ ಕಡಿಮೆ ದರ ವಿಧಿಸಲಾಗುತ್ತದೆ.

ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ 6 ಮಹಾನಗರಗಳಲ್ಲಿ ಈ ಆದ್ಯತೆಯ ಅಂಚೆ ಸೇವೆ ಲಭ್ಯವಿದೆ. ಚಿಲ್ಲರೆ ಗ್ರಾಹಕರಿಗೆ ದೂರಕ್ಕೆ ತಕ್ಕಂತೆ 38 ರೂ. ರಿಂದ 186ರೂ. ರವರೆಗೆ ಶುಲ್ಕವಿರಲಿದೆ. ನಿಮ್ಮ ಫಾಸ್ಟ್‌ಟ್ಯಾಗ್ ಕೆವೈಸಿ ಅಪೂರ್ಣವಾಗಿದ್ದರೆ ಖಾತೆ ಬ್ಲಾಕ್ ಆಗುವ ಸಾಧ್ಯತೆಯಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ತೊಂದರೆ ಎದುರಾಗಬಹುದು.

ಕಠಿಣ ಫಾಸ್ಟ್‌ಟ್ಯಾಗ್ ಕೆವೈಸಿ ಹಾಗೂ ಇತರೆ ಭದ್ರತಾ ನಿಯಮಗಳು

ಆಗಸ್ಟ್ 1 ರಿಂದ ಕಾರು ಹಾಗೂ ವಾಹನಗಳ ಫಾಸ್ಟ್‌ಟ್ಯಾಗ್ ಖಾತೆಗಳಿಗೆ ಸಂಬಂಧಿಸಿದಂತೆ ಎನ್‌ಪಿಸಿಐ (NPCI) ಜಾರಿಗೊಳಿಸಿರುವ ಕಡ್ಡಾಯ ಕೆವೈಸಿ (KYC) ನಿಯಮಾವಳಿಗಳು ಜಾರಿಗೆ ಬರಲಿವೆ. ಕೆವೈಸಿ ಅಪೂರ್ಣಗೊಂಡಿರುವ ವಾಹನ ಸವಾರರ ಫಾಸ್ಟ್‌ಟ್ಯಾಗ್‌ಗಳು ಬ್ಲಾಕ್ ಆಗಲಿದ್ದು, ಟೋಲ್ ಪ್ಲಾಜಾಗಳಲ್ಲಿ ನಗದು ಅಥವಾ ದಂಡ ಪಾವತಿಸಬೇಕಾಗಬಹುದು. ಆರ್‌ಬಿಐ (RBI) ಹಾಗೂ ತೈಲ ಕಂಪನಿಗಳು ನಿಯಮಿತವಾಗಿ ಪ್ರತಿ ತಿಂಗಳ 1ನೇ ತಾರೀಖಿನಂದು ಆರ್ಥಿಕ ಹಾಗೂ ಹಣಕಾಸು ನಿಯಮಗಳನ್ನು ಪರಿಶೀಲಿಸುತ್ತವೆ. ಬ್ಯಾಂಕ್ ಗ್ರಾಹಕರು ತಮ್ಮ ಸಿಬಿಲ್ (CIBIL) ಹಾಗೂ ಕ್ರೆಡಿಟ್ ಕಾರ್ಡ್ ನೂತನ ನಿಯಮಗಳಿಗಾಗಿ ತಮ್ಮ ಆಯಾ ಬ್ಯಾಂಕಿನ ಅಧಿಕೃತ ಮೆಸೇಜ್ ಹಾಗೂ ಇಮೇಲ್ ಗಮನಿಸುವುದು ಸೂಕ್ತ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version