ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಅದ್ಭುತ, ಗಿಲ್ಲಿ-ಅಶ್ವಿನಿ ಆಡಿದ ಮಾತು ಕೇಳಿದ್ರಾ? – Kannada News | Bigg Boss Kannada: Ashwini praised Gilli, and Gilli praised back

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೇನು ಮುಗಿಯಲು ಬಂದಿದೆ. ಫಿನಾಲೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಈ ಸೀಸನ್ ಶುರು ಆದಾಗಿನಿಂದ ಮುಗಿಯುವ ವರೆಗೂ ಬಿಗ್​​ಬಾಸ್ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಪರಸ್ಪರ ಕಿತ್ತಾಡುತ್ತಲೇ ಬಂದಿದ್ದಾರೆ. ಇಬ್ಬರ ನಡುವೆ ಜಗಳ ಇಲ್ಲದ, ಪರಸ್ಪರರ ಬಗ್ಗೆ ಟೀಕೆ, ವಿಮರ್ಶೆ ಮಾಡದ ದಿನವೇ ಇಲ್ಲ ಎನ್ನಬಹುದು. ಬಿಗ್​​ಬಾಸ್ ಮನೆಯಲ್ಲಿ ಅತಿಹೆಚ್ಚು ಕಿತ್ತಾಡಿರುವವರೆಂದರೆ ಅದು ಗಿಲ್ಲಿ ಮತ್ತು ಅಶ್ವಿನಿಯೇ ಆಗಿದ್ದಾರೆ. ಆದರೆ ಇನ್ನೇನು ಫಿನಾಲೆ ಹತ್ತಿರ ಬಂದಾಗ ಬಿಗ್​​ಬಾಸ್ ಮನೆಯಲ್ಲಿ ಅದ್ಭುತ ನಡೆದಿದ್ದು, ಗಿಲ್ಲಿ, ಅಶ್ವಿನಿ ಅವರನ್ನು ಒಳ್ಳೆಯವರು ಎಂದರೆ, ಅಶ್ವಿನಿ, ಗಿಲ್ಲಿಯನ್ನು ನನಗೆ ಇಷ್ಟದ ಸ್ಪರ್ಧಿ ಎಂದಿದ್ದಾರೆ. ಇದು ನಡೆದಿದ್ದು ಹೇಗೆ?

ಸುದೀಪ್ ನಡೆಸಿಕೊಡುವ ವೀಕೆಂಡ್ ಎಪಿಸೋಡ್​ನಲ್ಲಿ ಶನಿವಾರದ ಎಪಿಸೋಡ್ ಗಂಭೀರವಾಗಿದ್ದರೆ ಭಾನುವಾರದ ಎಪಿಸೋಡ್ ತುಸು ಲೈಟ್ ಆಗಿರುತ್ತದೆ. ಹಾಸ್ಯ ತುಂಬಿರುತ್ತದೆ. ಅಂತೆಯೇ ಸುದೀಪ್ ಅವರು, ಹೊಸ ವರ್ಷದ ಮೊದಲ ವೀಕೆಂಡ್ ಎಪಿಸೋಡ್​​ನಲ್ಲಿ ಒಳ್ಳೆಯ ಮಾತುಗಳನ್ನಾಡೋಣ ಎಂದು ಹೇಳಿದ ಸುದೀಪ್, ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಬಗ್ಗೆ ಮೂರು ಒಳ್ಳೆಯ ವಿಷಯಗಳನ್ನು ಹೇಳಿ ಎಂದರು.

ಮೊದಲು ಗಿಲ್ಲಿ, ಅಶ್ವಿನಿ ಅವರ ಬಗ್ಗೆ ಮೂರು ಒಳ್ಳೆಯ ಮಾತುಗಳನ್ನು ಹೇಳಬೇಕಿತ್ತು, ಆಗ ಮಾತನಾಡಿದ ಗಿಲ್ಲಿ, ‘ಅಶ್ವಿನಿ ಅವರು ಯಾರೊಂದಿಗೆ ಏನೇ ಜಗಳ ಮಾಡಿರಲಿ ಆದರೆ ಊಟದ ವಿಷಯ ಬಂದಾಗ ಎಂದಿಗೂ ಎಲ್ಲರನ್ನೂ ಸಮಾನವಾಗಿ ನೋಡಿದ್ದಾರೆ. ಏನೇ ಜಗಳ ಮಾಡಿದ್ದರೂ ಅಡುಗೆ ಮಾಡಿ, ಎಲ್ಲರೂ ಊಟ ಮಾಡುವಂತೆ ನೋಡಿಕೊಳ್ಳುತ್ತಾರೆ’ ಎಂದರು. ಬಳಿಕ, ‘ಅಶ್ವಿನಿ ಅವರು ಟಾಸ್ಕ್ ವಿಷಯದಲ್ಲಿ ಗೇಮ್ ವಿಷಯದಲ್ಲಿ ಜಗಳ ಮಾಡುತ್ತಾರೆ ಆದರೆ ಅವರು ಜಗಳ ಬಿಟ್ಟು ಬೇರೆ ಸಂದರ್ಭದಲ್ಲಿ ಬಹಳ ಒಳ್ಳೆಯವರು, ಪಾಸಿಟಿವ್ ವ್ಯಕ್ತಿ ಎನಿಸುತ್ತಾರೆ’ ಎಂದರು ಗಿಲ್ಲಿ.

ಇದನ್ನೂ ಓದಿ:ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಫೀಲಿಂಗ್ಸ್: ಓಪನ್ ಆಗಿ ಹೇಳಿದ ಕಿಚ್ಚ ಸುದೀಪ್

ಕೊನೆಗೆ, ‘ಅಶ್ವಿನಿ ಅವರು ಬಹಳ ಟಫ್ ಸ್ಪರ್ಧಿ, ನಾನು ಅವರನ್ನು ಬಹಳ ಗೋಳು ಹೊಯ್ದಿಕೊಂಡಿದ್ದೀನಿ, ಅವರ ವಯಸ್ಸಿನ ಬಗ್ಗೆ ತಮಾಷೆ ಮಾಡಿದ್ದೀನಿ ಆದರೆ ಅವರು ಎಲ್ಲವನ್ನೂ ಎದುರಿಸಿ ಕಾಂಪಿಟೇಶನ್ ಕೊಟ್ಟಿದ್ದಾರೆ. ಟಫ್ ಆಟ ಆಗಿದ್ದಾರೆ. ಫಿಸಿಕಲ್ ಟಾಸ್ಟ್​​ನಲ್ಲಿಯೂ ಸಹ ಅವರನ್ನು ಎದುರಿಸುವವರು ಇಲ್ಲ. ಅವರು ಬಹಳ ಗಟ್ಟಿ ಸ್ಪರ್ಧಿ’ ಎಂದಿದ್ದಾರೆ ಗಿಲ್ಲಿ.

ಇನ್ನು ಅಶ್ವಿನಿ ಸಹ ಗಿಲ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ‘ನನಗೆ ಗಿಲ್ಲಿ ಬಹಳ ಇಷ್ಟವಾಗುವ ಸ್ಪರ್ಧಿ. ಅವರು ತಮ್ಮ ಪ್ರೀತಿಯನ್ನು ಮೌನವಾಗಿ ತೋರಿಸುತ್ತಾನೆ. ಅನ್ನುವುದು ಅಂದುಬಿಡುತ್ತಾನೆ ಆ ಮೇಲೆ ಅವರಿಗೆ ಹರ್ಟ್ ಆಗಿದೆಯಾ ಎಂದು ಮರೆಯಲ್ಲಿ ನಿಂತು ನೋಡುತ್ತಾನೆ. ಅವನು ಯಾರನ್ನಾದರೂ ಇಷ್ಟ ಪಟ್ಟರೆ ಅವರನ್ನು ಬಹಳ ಪ್ರೊಟೆಕ್ಟ್ ಮಾಡುತ್ತಾನೆ. ಅವರಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತಾನೆ. ಮತ್ತು ಅವನ ಇಲ್ಲಿಯವರೆಗಿನ ಜರ್ನಿ ಸಹ ಬಹಳ ಕಷ್ಟವಾದುದು ಎಂಬುದು ನನಗೆ ಗೊತ್ತಿದೆ. ಅವನು ಅದನ್ನು ಹೇಳಿಕೊಂಡು ಕಣ್ಣೀರು ಹಾಕಿದವನಲ್ಲ, ವೀಕ್ನೆಸ್ ತೋರಿಸಿಕೊಳ್ಳುವುದು ಅವನಿಗೆ ಇಷ್ಟ ಇಲ್ಲ ಅವನ ಆ ಗುಣ ನನಗೆ ಇಷ್ಟ’ ಎಂದಿದ್ದಾರೆ ಅಶ್ವಿನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್

ಬಳ್ಳಾರಿ, (ಜನವರಿ 04): ಬಳ್ಳಾರಿ ಬ್ಯಾನರ್ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಟ್ಟು 26 ಜನರನ್ನು ಬಂಧಿಸಲಾಗಿದೆ. ಪ್ರಮುಖವಾಗಿ ಘಟನೆ ನಡೆದಾಗ ಸ್ಥಳದಲ್ಲಿದ್ದ 9 ಗನ್​ಮ್ಯಾನ್​ಗಳ ಪೈಕಿ ಓರ್ವನ ಬಂಧನವಾಗಿದೆ. ಹೌದು..ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್​ಮ್ಯಾನ್​​ ನನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ವೇಳೆ ಸತೀಶ್​​​ ರೆಡ್ಡಿ ಖಾಸಗಿ ಗನ್ ಮ್ಯಾನ್​​ ಗುರುಚರಣ್​​ ಸಿಂಗ್ ಹಾರಿಸಿದ ಗುಂಡಿಗೆ ರಾಜಶೇಖರ್ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹೀಗಾಗಿ ಗುರುಚರಣ್​​ ಸಿಂಗ್ ನನ್ನು ಬಂಧಿಸಿದ್ದಾರೆ.

ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ನಾಲ್ವರು ಗನ್​ಮ್ಯಾನ್, ಶಾಸಕ ಭರತ್ ರೆಡ್ಡಿ ಸರ್ಕಾರಿ ಗನ್​ಮ್ಯಾನ್​​ ಬಸವರಾಜ್,​​ ಶಾಸಕ ಜನಾರ್ದನ ರೆಡ್ಡಿಯ ನಾಲ್ವರು ಸರ್ಕಾರಿ ಗನ್​ಮ್ಯಾನ್ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅಂಗರಕ್ಷ ಸೇರಿದಂತೆ ಒಟ್ಟು 9 ಗನ್​ಮ್ಯಾನ್​​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ಈ ಪೈಕಿ ಇದೀಗ ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್​​ ಸಿಂಗ್ ಬಂಧನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಷ್ಯಾಕಪ್ ಟ್ರೋಫಿ ಎಲ್ಲಿ? ಪಾಕ್ ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಮೊಹ್ಸಿನ್ ನಖ್ವಿ – Kannada News | India’s Asia Cup 2025 Win: Still No Trophy! Mohsin Naqvi’s Silence

2025 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಷ್ಯಾಕಪ್‌ (Asia Cup) ಫೈನಲ್​ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಭಾರತ ಏಷ್ಯಾಕಪ್ ಗೆದ್ದಿದ್ದರೂ ಇದುವರೆಗೆ ಟ್ರೋಫಿಯನ್ನು ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರ ಕೈಯಿಂದ ಟ್ರೋಫಿಯನ್ನು ಪಡೆಯಲು ಭಾರತ ತಂಡ ನಿರಾಕರಿಸಿತ್ತು. ಅಂದಿನಿಂದ, ಈ ಟ್ರೋಫಿ ಮೊಹ್ಸಿನ್ ನಖ್ವಿ ಅವರ ಬಳಿಯೇ ಇದೆ. ಈ ಘಟನೆ ನಡೆದು ಈಗ ಮೂರು ತಿಂಗಳುಗಳು ಕಳೆದಿವೆ. ಆದಾಗ್ಯೂ ಭಾರತ ತಂಡಕ್ಕೆ ಟ್ರೋಫಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ನಖ್ವಿ ಬಳಿಯಲ್ಲೇ ಇದೆ ಏಷ್ಯಾಕಪ್ ಟ್ರೋಫಿ

ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿ ಇರುವ ತನಕ ಭಾರತ ತಂಡದ ಕೈಗೆ ಏಷ್ಯಾಕಪ್ ಟ್ರೋಫಿ ಸಿಗುವ ಸಾಧ್ಯತೆಗಳಿಲ್ಲ. ಆರಂಭದಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿತ್ತು. ಆ ಬಳಿಕ ಮೊಹ್ಸಿನ್ ನಖ್ವಿ ಅವರೇ ಈ ಟ್ರೋಫಿಯನ್ನು ಬೇರೆಯವರಿಗೆ ತಿಳಿಯದಂತೆ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಏಷ್ಯಾಕಪ್‌ ಟ್ರೋಫಿ ಎಲ್ಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಖ್ವಿ ಅವರನ್ನು ಪ್ರಶ್ನೆ ಮಾಡಿದಾಗಲೂ ಅವರು ಯಾವುದೇ ಸ್ಪಷ್ಟ ಉತ್ತರವನ್ನು ನೀಡಿಲ್ಲ.

ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ

ಆದರೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ವಾಸ್ತವವಾಗಿ ಕರಾಚಿಯಲ್ಲಿ ನಡೆದ ಚಾನೆಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನಖ್ವಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಪತ್ರಕರ್ತರು ಮೊಹ್ಸಿನ್ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯನ್ನು ಎಲ್ಲಿ ಇರಿಸಲಾಗಿದೆ? ಅದನ್ನು ಭಾರತ ತಂಡಕ್ಕೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಿಂದ ನಖ್ವಿ ಸ್ವಲ್ಪ ಗೊಂದಲಕ್ಕೊಳಗಾದರು. ಆದರೆ ಆ ನಂತರ ನೇರ ಉತ್ತರ ನೀಡಿದ ನಖ್ವಿ, ‘ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ’ ಎಂದು ಉತ್ತರಿಸಿದ್ದಾರೆ. ಆದರೆ ಟ್ರೋಫಿಯನ್ನು ಭಾರತಕ್ಕೆ ಯಾವಾಗ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಮಾತ್ರ ಅವರ ಉತ್ತರ ಮೌನವಾಗಿತ್ತು.

ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿಯೂ ಏಷ್ಯಾಕಪ್ ಟ್ರೋಫಿಯ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ, ಬಿಸಿಸಿಐ, ಏಷ್ಯಾಕಪ್ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ ಎಂತಲೂ ವರದಿಯಾಗಿದೆ. ಸುದ್ದಿಯ ಪ್ರಕಾರ, ಐಸಿಸಿ ಮಂಡಳಿ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಯಾವುದೇ ಪ್ರಸ್ತಾಪ ನಡೆದಿಲ್ಲ. ಆದ್ದರಿಂದ, ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದಾಗ್ಯೂ ಈ ಟ್ರೋಫಿಯನ್ನು ಭಾರತ ತಂಡಕ್ಕೆ ಯಾವಾಗ ನೀಡಲಾಗುತ್ತದೆ ಎಂಬುದಕ್ಕೆ ಮೊಹ್ಸಿನ್ ನಖ್ವಿ ಮಾತ್ರ ಉತ್ತರಿಸಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಶ್ರೇಯಸ್ ಫಿಟ್ ಆಗದಿದ್ದರೆ ಯಾರಿಗೆ ಸಿಗಲಿದೆ ಟೀಂ ಇಂಡಿಯಾದಲ್ಲಿ ಅವಕಾಶ?

Source link

ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು: ಸಿದ್ದರಾಮಯ್ಯ ಅಧಿಕೃತ ಘೋಷಣೆ – Kannada News | Hhubballi Case: CM Siddaramaiah Announces special law to prevent honor killings

ಬೆಂಗಳೂರು, (ಜನವರಿ 04):  ಹುಬ್ಬಳ್ಳಿಯಲ್ಲಿ (hubballi) ನಡೆದ ಆರು ತಿಂಗಳ ಗರ್ಭಿಣಿಯ ಮರ್ಯಾದಾ ಹತ್ಯೆ (honour killing) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆಗೆ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah ) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಇಂದು (ಜನವರಿ 4) ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಮಾಹಿತಿ ಹಂಚಿಕೊಂಡಿದ್ದು, ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಮಾನ್ಯಾಳ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ

ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ -ಹಲ್ಲೆ, ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳ ತಡೆಗೆ ವಿಶೇಷ ಕಾನೂನು ರಚನೆ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಮಲ್-ರಜನಿ ಕಾಂಬಿನೇಷನ್ ಸಿನಿಮಾ: ಯುವ ನಿರ್ದೇಶಕನಿಗೆ ಅದೃಷ್ಟ – Kannada News | Cibi Chakravarthy to direct Rajinikanth’s 173rd movie produced by Kamal Haasan

ಕಮಲ್ ಹಾಸನ್ (Kamal Haasan) ಮತ್ತು ರಜನೀಕಾಂತ್ ತಮಿಳುನಾಡಿನ ಮಾತ್ರವಲ್ಲ ಭಾರತೀಯ ಚಿತ್ರರಂಗದ ಇಬ್ಬರು ಮೇರು ಸೂಪರ್ ಸ್ಟಾರ್​​ಗಳು. ಇಬ್ಬರ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾಗಳು ಆಗ ಸೂಪರ್ ಹಿಟ್ ಆಗಿದ್ದವು. ಆದರೆ ಇಬ್ಬರಿಗೂ ಸ್ಟಾರ್​​ಡಮ್ ಬಂದ ಬಳಿಕ ಒಟ್ಟಿಗೆ ನಟಿಸಿದ್ದೇ ಇಲ್ಲ. ಪರಸ್ಪರ ಒಳ್ಳೆಯ ಗೆಳೆಯರೂ ಆಗಿರುವ ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರನ್ನು ಒಟ್ಟಿಗೆ ತರಲು ಹಲವು ನಿರ್ಮಾಪಕರು, ನಿರ್ದೇಶಕರು ಪ್ರಯತ್ನಿಸಿದರಾದರೂ ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ಸ್ವತಃ ಕಮಲ್ ಹಾಸನ್ ಅವರೇ ಈ ಅಸಾಧ್ಯವನ್ನು ಸಾಧ್ಯ ಮಾಡಲು ಮುಂದಾಗಿದ್ದಾರೆ.

ಕಮಲ್ ಹಾಸನ್ ಅವರು ತಮ್ಮ ಬಹು ದಶಕದ ಗೆಳೆಯ ರಜನೀಕಾಂತ್ ಅವರಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಮಾತ್ರವೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾದ ಘೋಷಣೆ ಆಗಿತ್ತು. ಸಿನಿಮಾ ಅನ್ನು ತಮಿಳು ಚಿತ್ರರಂಗದ ಅನುಭವಿ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಸುಂದರ್ ಸಿ ಅವರು ಸ್ವತಃ ಸಿನಿಮಾದಿಂದ ಹೊರಗೆ ಹೋದರು.

ಸುಂದರ್ ಸಿ ಅವರ ನಿರ್ಗಮನದ ಬಳಿಕ ರಜನೀಕಾಂತ್ ಅವರ 173ನೇ ಸಿನಿಮಾದ ನಿರ್ದೇಶಕನಿಗಾಗಿ ಹುಡುಕಾಟ ನಡೆಸಿದ್ದರು ಕಮಲ್ ಹಾಸನ್. ಇದೀಗ ನಿರ್ದೇಶಕನ ನಿಗದಿ ಆಗಿದೆ. ಯುವ ನಿರ್ದೇಶಕನಿಗೆ ರಜನೀಕಾಂತ್ ಅವರ 173ನೇ ಸಿನಿಮಾ ನಿರ್ದೇಶಿಸುವ ಅವಕಾಶ ಸಿಗುವ ಜೊತೆಗೆ ಕಮಲ್ ಹಾಸನ್ ಅವರ ನೇತೃತ್ವದಲ್ಲಿ ಈ ಸಿನಿಮಾದ ನಿರ್ದೇಶನ ಮಾಡುವ ಅವಕಾಶ ಒದಗಿ ಬಂದಿದೆ.

ಇದನ್ನೂ ಓದಿ:ನಿವೃತ್ತಿ ಬಗ್ಗೆ ಕಮಲ್ ಹಾಸನ್ ಮಾತು: ಕೊನೆ ಸಿನಿಮಾ ಯಾವಾಗ?

ಯುವ ನಿರ್ದೇಶಕ ಶಿಬಿ ಚಕ್ರವರ್ತಿ ಅವರು ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಶಿಬಿ ಅವರು ಈ ವರೆಗೆ ನಿರ್ದೇಶನ ಮಾಡಿರುವುದು ಕೇವಲ ಒಂದು ಸಿನಿಮಾ ಮಾತ್ರ. ಶಿವಕಾರ್ತಿಕೇಯನ್ ನಿರ್ದೇಶನದ ‘ಡಾನ್’ ಸಿನಿಮಾ ನಿರ್ದೇಶನ ಮಾಡಿದ್ದ ಶಿಬಿ. ಕೆಲವಾರು ಸಿನಿಮಾಗಳಿಗೆ ಪ್ರಮುಖ ಅಸಿಸ್ಟೆಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ ರಜನೀಕಾಂತ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಅಸಲಿಗೆ ಈ ಸಿನಿಮಾ ನಿರ್ದೇಶನ ಮಾಡುವ ರೇಸಿನಲ್ಲಿ ತಮಿಳಿನ ಹಲವು ನಿರ್ದೇಶಕರುಗಳಿದ್ದರು. ನೆಲ್ಸನ್, ನಿಥಿಲನ್ ಸಾಮಿನಾಥನ್, ಎಸ್‌ಯು ಅರುಣ್‌ಕುಮಾರ್, ಆರ್‌ಜೆ ಬಾಲಾಜಿ, ಬಾಲಕೃಷ್ಣನ್ ಇನ್ನೂ ಕೆಲವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಅವಕಾಶ ಶಿಬಿ ಅವರಿಗೆ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೈರಸಿ ಬಗ್ಗೆ ಝೈದ್ ಖಾನ್ ಅವರದ್ದು ಭಿನ್ನ ಅಭಿಪ್ರಾಯ: ವಿಡಿಯೋ

ಪೈರಸಿ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ‘ಮಾರ್ಕ್’ (Mark) ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಆಡಿದ ಮಾತು ಈ ಚರ್ಚೆಗೆ ಮತ್ತೆ ಜೀವ ತುಂಬಿದೆ. ‘ಮಾರ್ಕ್’ ಸಿನಿಮಾವನ್ನು ದರ್ಶನ್ ಅಭಿಮಾನಿಗಳು ಪೈರಸಿ ಮಾಡುವ ಸವಾಲು ಹಾಕಿದ್ದೇ ಈ ಎಲ್ಲ ಚರ್ಚೆ ಮತ್ತೆ ಶುರುವಾಗಲು ಕಾರಣ. ನಟ ಜಗ್ಗೇಶ್ ಅವರು ಪೈರಸಿ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆ ಮಾಡಿದ್ದಾರೆ. ಇದೀಗ ನಟ ಝೈದ್ ಖಾನ್ ಅವರು ಪೈರಸಿ ಬಗ್ಗೆ ತಮ್ಮದೇ ಭಿನ್ನವಾದ ಅಭಿಪ್ರಾಯವನ್ನು ಹೊರಗೆ ಹಾಕಿದ್ದಾರೆ. ಇತರೆ ಕೆಲವು ನಟರಿಗಿಂತಲೂ ಭಿನ್ನವಾದ ಅಭಿಪ್ರಾಯ ಅವರದ್ದಾಗಿದೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೌತೆಕಾಯಿ ತಿನ್ನುವ ಮೊದಲು ನಿಮಗೆ ಈ ಆರೋಗ್ಯ ಸಮಸ್ಯೆ ಇದೆಯೋ, ಇಲ್ಲವೋ ತಿಳಿದುಕೊಳ್ಳಿ – Kannada News | Cucumber Dangers: Know the Hidden Risks

ಸೌತೆಕಾಯಿ (Cucumber) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಹೆಚ್ಚಾಗಿ ಸಲಾಡ್, ರೈತಾ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಇದರಲ್ಲಿ ಸುಮಾರು 95 ಪ್ರತಿಶತ ನೀರು ಇರುವುದರಿಂದ, ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ. ಸೌತೆಕಾಯಿಗಳು ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಅದ್ಭುತವಾಗಿ ಕೆಲಸ ಮಾಡುತ್ತವೆ. ಇದಲ್ಲದೆ, ಇದು ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ. ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಜೀರ್ಣಕಾರಿ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ;

ಆಯುರ್ವೇದದ ಪ್ರಕಾರ, ಸೌತೆಕಾಯಿ ತಿನ್ನುವುದರಿಂದ ಶೀತ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಅಸ್ತಮಾ, ಶೀತ, ಕೆಮ್ಮು, ಕಫ, ಸೈನಸ್ ಅಥವಾ ಊತ ಸಮಸ್ಯೆ ಇರುವವರು ಸೌತೆಕಾಯಿ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅಲ್ಲದೆ, ಅತಿಯಾಗಿ ಸೌತೆಕಾಯಿ ಸೇವಿಸುವುದರಿಂದ ವಾತ ಹೆಚ್ಚಾಗುತ್ತದೆ. ಈಗಾಗಲೇ ಕೀಲು ನೋವು ಅಥವಾ ದೇಹದ ಉರಿಯೂತದಿಂದ ಬಳಲುತ್ತಿರುವವರು ಸೌತೆಕಾಯಿಯಿಂದ ದೂರವಿರಬೇಕು. ಶೆಂಗಾದಲ್ಲಿ ಫೈಬರ್ ಅಧಿಕವಾಗಿದ್ದರೂ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವವರಿಗೆ ಇದು ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದರಲ್ಲಿರುವ ಕುಕುರ್ಬಿಟಾಸಿನ್ ಎಂಬ ಸಂಯುಕ್ತವು ಜೀರ್ಣಕಾರಿ ಸಮಸ್ಯೆಗಳಿರುವವರಲ್ಲಿ ಅನಿಲ, ಉಬ್ಬುವುದು ಅಥವಾ ಅಜೀರ್ಣದಂತಹ ಲಕ್ಷಣಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ: ಈ ಜ್ಯೂಸ್‌ ಕುಡಿಯಿರಿ, ನಿಮ್ಮ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ

ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ, ಮೂತ್ರ ವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿರುವರು ಈ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೇ ಮಾಡುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬರಬಹುದು ಅಥವಾ ಕೆಲವರಲ್ಲಿ ಅಸ್ವಸ್ಥತೆ ಕಂಡುಬರಬಹುದು. ಸೌತೆಕಾಯಿಗಳನ್ನು ಸಾಮಾನ್ಯವಾಗಿ ಮಧುಮೇಹ ಇರುವವರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಸೌತೆಕಾಯಿ ಬೀಜಗಳನ್ನು ಇನ್ಸುಲಿನ್ ಅಥವಾ ಗ್ಲೂಕೋಸ್- ಕಡಿಮೆಗೊಳಿಸುವ ಔಷಧಿಗಳ ಸೇವನೆ ಮಾಡುವವರಿಗೆ ಸಮಸ್ಯೆ ಉಂಟುಮಾಡಬಹುದು. ಸೌತೆಕಾಯಿ ಬೀಜಗಳ ಅತಿಯಾದ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತಕ್ಕೂ ಕಾರಣವಾಗಬಹುದು ಇದು ತಲೆತಿರುಗುವಿಕೆ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಹಾಗಾಗಿ ಆರೋಗ್ಯ ತಜ್ಞರು ಸಾಮಾನ್ಯವಾಗಿ ಊಟದ ನಂತರ ಸೌತೆಕಾಯಿಗಳನ್ನು ಸೇವನೆ ಮಾಡದಂತೆ ಸಲಹೆ ನೀಡುತ್ತಾರೆ, ಏಕೆಂದರೆ ಅವು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ನಿದ್ರೆಗೂ ಭಂಗ ತರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥಿಯೇಟರ್ ಮಾಫಿಯಾಕ್ಕೆ ನಾನೂ ಬಲಿ ಆಗಿದ್ದೇನೆ: ಝೈದ್ ಖಾನ್ – Kannada News | Zaid Khan talks about theater mafia in Karnataka

ರಾಜ್ಯದಲ್ಲಿ ಚಿತ್ರಮಂದಿರಗಳ (Theater) ಮಾಫಿಯಾ ಒಂದು ನಡೆಯುತ್ತಿದೆ. ದೊಡ್ಡವರು, ಹಣವಿದ್ದವರು, ರೀಚ್ ಇದ್ದವರು ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿ ಇರಿಸಿಕೊಳ್ಳುತ್ತಾರೆ. ತಮಗೆ ಬೇಕಾದವರಿಗೆ ಮಾತ್ರವೇ ಚಿತ್ರಮಂದಿರಗಳನ್ನು ಬಿಟ್ಟುಕೊಡುತ್ತಾರೆ. ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ ವಾರದ ಬಳಿಕ ಚಿತ್ರಮಂದಿರದಿಂದ ಸಿನಿಮಾ ಎತ್ತಂಗಡಿ ಆಗುವಂತೆ ಮಾಡುತ್ತಾರೆ. ಈ ಚಿತ್ರಮಂದಿರ ಮಾಫಿಯಾ ಇಂದಾಗಿ ಹಲವು ಸಣ್ಣ ಸಿನಿಮಾಗಳು ಭಾರಿ ಹೊಡೆತ ತಿಂದಿವೆ. ಇಂಥಹಾ ಹಲವು ಘಟನೆಗಳು ರಾಜ್ಯದಲ್ಲಿ ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ. ಇದೀಗ ಪ್ರಭಾವಿ ನಟರೊಬ್ಬರೆ ತಾವೂ ಸಹ ಈ ಚಿತ್ರಮಂದಿರ ಮಾಫಿಯಾದಿಂದ ಸಮಸ್ಯೆ ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಜನಪ್ರಿಯ ಸಚಿವ ಜಮೀರ್ ಅಹ್ಮದ್ ಅವರ ಪುತ್ರ ನಟ ಝೈದ್ ಖಾನ್ ದಾವಣಗೆರೆಯಲ್ಲಿ ಮಾತನಾಡಿದ್ದು, ‘ನಾನು ಸಹ ಈ ಚಿತ್ರಮಂದಿರ ಮಾಫಿಯಾದ ಸಂತ್ರಸ್ತ’ ಎಂದಿದ್ದಾರೆ. ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದಲ್ಲಿ ಝೈದ್ ಖಾನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ದಾವಣಗೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಝೈದ್ ಖಾನ್, ಚಿತ್ರಮಂದಿರ ಮಾಫಿಯಾ ಬಗ್ಗೆ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೈದ್ ಖಾನ್, ‘ಜನವರಿ 23ರಂದು ‘ಕಲ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾರೂ ಚಿತ್ರಮಂದಿರಗಳಲ್ಲಿ ನೋಡಿ ಎಂದು ಮನವಿ ಮಾಡಿದರು. ಚಿತ್ರಮಂದಿರಗಳ ಒಂದು ದೊಡ್ಡ ಮಾಫಿಯಾ ಇದೆ, ನಾನು ಕೂಡ ಅ ಮಾಫಿಯಾಗೆ ಸಿಲುಕಿ ಒಡ್ಡಾಡಿದ್ದೇನೆ, ಪ್ರಭಾವಿ ಹಿನ್ನೆಲೆ, ಹಣ ಇದ್ದ ನನಗೆ ಈ ರೀತಿ ಅನುಭವವಾಗಿದೆ. ಏನು ಇಲ್ಲದೆ ಸಿನಿಮಾ ಮಾಡಿದವರು ಈ ಮಾಫಿಯಾಗೆ ಸಿಲುಕಿ ಕಣ್ಣೀರಿಡುತ್ತಿದ್ದಾರೆ. ನನ್ನ ಮೊದಲ ಸಿನಿಮಾ 100 ಚಿತ್ರಮಂದಿರ ಸಿಕ್ತು, ಬಳಿಕ 50 ಕ್ಕೆ ಬಂತು ಹೊಸಬರಿಗೆ ಥಿಯೇಟರ್ ಸಿಗದೆ ನಲುಗಿ ಹೋಗುತ್ತಿದ್ದಾರೆ’ ಎಂದರು ಝೈದ್ ಖಾನ್.

ಇದನ್ನೂ ಓದಿ:ದರ್ಶನ್​​ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್

‘ನನಗೆ ಪ್ರಭಾವಿ ಹಿನ್ನೆಲೆ ಇತ್ತು ಹಾಗಾಗಿ ಅಷ್ಟಾದರೂ ಚಿತ್ರಮಂದಿರ ಸಿಕ್ತು ಹೊಸಬರಿಗೆ ಅನ್ಯಾಯ ಆಗುತ್ತಿದೆ.
ಜನವರಿ 23 ಕ್ಕೆ ನನ್ನದು ಹಾಗು ದು‌ನಿಯಾ ವಿಜಯ್ ಸರ್ ಸಿನಿಮಾ ಮಾತ್ರವೇ ಬಿಡುಗಡೆ ಆಗುತ್ತಿವೆ.
ರಾಜ್ಯದಲ್ಲಿ ಇರುವ ಒಟ್ಟು ಚಿತ್ರಮಂದಿರಗಳಲ್ಲಿ 40% ರಷ್ಟು ನಮಗೆ ಸಿಕ್ಕು 60% ರಷ್ಟು ಥಿಯೇಟರ್ ಗಳು ದುನಿಯಾ ವಿಜಯ್ ಅವರಿಗೆ ಸಿಗಲಿವೆ’ ಎಂದಿದ್ದಾರೆ ಝೈದ್ ಖಾನ್.

ಝೈದ್ ಖಾನ್ ನಟಿಸಿರುವ ‘ಕಲ್ಟ್’ ಸಿನಿಮಾನಲ್ಲಿ ನಾಯಕಿಯರಾಗಿ ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ನಟಿಸಿದ್ದಾರೆ. ತೆಲುಗಿನ ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಮಾದರಿಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಪ್ರೀತಿಯಲ್ಲಿ ಮೋಸ ಹೋಗುವ ಹುಡುಗರ ಬಗ್ಗೆ ಸಿನಿಮಾದ ಕತೆ ಇರಲಿದೆ. ಸಿನಿಮಾದ 40% ಚಿತ್ರೀಕರಣವನ್ನು ಹಂಪಿ ಮತ್ತು ವಿಜಯನಗರದಲ್ಲಿ ನಡೆದಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಲೋಕಿ ಸಿನಿಮಾಸ್ ನಿರ್ಮಾಣ ಮಾಡಿವೆ. ಸಿನಿಮಾ ನಿರ್ದೇಶನ ಮಾಡಿರುವುದು ಅನಿಲ್ ಕುಮಾರ್. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್ ದಾಖಲೆ ಮುರಿದು ಕೊಹ್ಲಿ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್ – Kannada News | David Warner’s BBL Century: Breaks Rohit, Equals Kohli’s T20 Record

ಈ ಶತಕದೊಂದಿಗೆ ಡೇವಿಡ್ ವಾರ್ನರ್, ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ, ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ತಲಾ 8 ಶತಕಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸುವುದರೊಂದಿಗೆ ವಾರ್ನರ್, ರೋಹಿತ್ ಶರ್ಮಾ ಅವರನ್ನು ಮೀರಿಸಿದ್ದಾರೆ.

Source link

Exit mobile version