ಹೊಸ ವರ್ಷ ನಿಮ್ಮ ಬಾಳು ಕತ್ತಲಾದಿತು ಹುಷಾರ್, ನ್ಯೂ ಇಯರ್ ಆಫರ್ ಬಗ್ಗೆ ಇರಲಿ ಎಚ್ಚರ – Kannada News | Karnataka Police Warn of New Year Cyber Scams as Fraudulent Links Target Bank Accounts

ಬೆಂಗಳೂರು, (ಡಿಸೆಂಬರ್ 28): ಹೊಸ ವರ್ಷದ ಟೈಮ್ನಲ್ಲಿ ಕಲರ್ ಪುಲ್ ಶುಭಾಶಯಗಳನ್ನ ( New Year Cyber Scams) ಕಳಿಸಲು ಎಪಿಕೆ ಫೈಲ್ ಬಳಸುತ್ತಾರೆ. ಇದು ಅಪಾಯಕ್ಕೆ ಅವಕಾಶ ಮಾಡಿಕೊಡಬಹುದು. ಯಾಕಂದ್ರೆ ಈ ಫೈಲ್ ಅಥವಾ ಅ್ಯಪ್ ಮೂಲಕ ಹ್ಯಾಕ್ ಮಾಡಿ ನಿಮ್ಮ ಖಾತೆಗೆ ಕನ್ನ ಹಾಕಬಹುದು. ಇನ್ನು ಕೆಲವು ಶುಭಾಶಯದ ಗಿಫ್ಟ್ ಹಾಗೂ ಹೊಸ ವರ್ಷದ ಟೈಮ್ನಲ್ಲಿ ಆಫರ್ ಅಂತಾ ನಕಲಿ ಕಂಪನಿಗಳು, ಅಪರಿಚಿತ ವೆಬ್ ಸೈಟ್ ಗಳು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಗಿಫ್ಟ್ ಕೋಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೇ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಿದ್ರೆ ಮೋಸದ ಜಾಲಕ್ಕೆ ಬೀಳೋದು ಫಿಕ್ಸ್.

ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ

ಹೊಸ ವರ್ಷದ ವಿಶ್ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರಕೆ ವಹಿಸಬೇಕಿದೆ. ಹಿಂದೆ ಮುಂದೆ ನೋಡದೇ ಮೆಸೇಜ್ ಓಪನ್ ಮಾಡಿದ್ರೆ ಖಾತೆಗೆ ಕನ್ನ ಬೀಳುವುದು ಫಿಕ್ಸ್‌‌ . ಡಿಫೆರೆಂಟ್ ಡಿಫೆರೆಂಟ್ ಕಲರ್ ಪುಲ್ ಹೊಸ ವರ್ಷದ ಶುಭಾಶಯಗಳ ಎಪಿಕೆ ಓಪನ್ ಬಗ್ಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ನಿಮ್ಮ ಬಾಳು ಕತ್ತಲಾದಿತು ಹುಷಾರ್ ಎಂದಿದ್ದಾರೆ. ಎಪಿಕೆ ಫೈಲ್ ಮೂಲಕ ಹೊಸ ವರ್ಷದ ಶುಭಾಶಯಗಳ ಕಳಸಿ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಅಪ್ಪಿ ತಪ್ಪಿ ಹೊಸ ವರ್ಷದ ಶುಭಾಶಯಗಳು ಎಪಿಕೆ ಫೈಲ್ ನಲ್ಲಿ ಓಪನ್ ಮಾಡದಂತೆ ತಜ್ಞರ ಸಲಹೆ ನೀಡಿದ್ದಾರೆ. ಇನ್ನು ಹೊಸ ವರ್ಷದ ಗಿಫ್ಟ್ ಕೂಪನ್ ಸಿಗುತ್ತೆ ಆಫರ್ ಸಿಗುತ್ತೆ ಅಂತಾ ಹಿಂದೆ ಮುಂದೆ ನೋಡದೆ ಅಪರಿಚಿತ ವೆಬ್ ಸೈಟ್ ಮೇಲೆ ಲಿಂಕ್ ಕ್ಲಿಕ್ ಮಾಡಬೇಡಿ ಅಂತಿದ್ದಾರೆ ಸೈಬರ್ ತಜ್ಞರು.

ಇದನ್ನೂ ನೋಡಿ; ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?

ನಾರ್ಮಲ್ ಶುಭಾಶಯ ಬೆಸ್ಟ್​

ದೊಡ್ಡ ದೊಡ್ಡ ಹಬ್ಬಗಳಿಗಾಗಿ ನಕಲಿ ಸೈಬರ್ ಜಾಲ ಕಾದು ಕುಳಿತ್ತಿರುತ್ತೆ. ಜನರಿಗೆ ಈತರ ಆಫರ್ ಗಿಫ್ಟ್ ವಾಟ್ಸ್ ಆಫ್ ಮೆಸೇಜ್ ಸಾಮಾಜಿಕ ಜಾಲತಾಣಗಳ ಮೂಲಕ ಕಳಿಸುತ್ತಾರೆ . ಜನರು ತಿಳಿಯದೇ ಒಂದು ಸರಿ ಕ್ಲಿಕ್ ಮಾಡಿದ್ರೂ ಬ್ಯಾಂಕ್ ಅಕೌಂಟ್ ಲೂಟಿಯಾಗುತ್ತೆ. ಹೀಗಾಗಿ ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹೊಸ ವರ್ಷದಂದು ನಾರ್ಮಲ್ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯಗಳನ್ನ ಕಳಿಸುವುದು ಬೆಸ್ಟ ಅಂತ ಪೊಲೀಸ್ ಇಲಾಖೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದೆ.

ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಓಡೋ ಕುದುರೆ ರೀತಿ. ಆದ್ರೆ ಅದನ್ನು ಕಂಟ್ರೋಲ್ ಮಾಡಬೇಕಾದ ಜಾಕಿಗಳು ಅಂದ್ರೆ ಯೂಸರ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ದಾರಿ ತಪ್ಪುತಿರೋದು ವಿಪರ್ಯಾಸವೆ ಸರಿ. ಇನ್ನಾದರೂ ಜನ ಕೊಂಚ ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಂಜಾವೂರು ಆಸ್ಪತ್ರೆಯಲ್ಲಿ 9 ಲಕ್ಷ ರೂ. ಮೌಲ್ಯದ ನಿಧಿ ಪತ್ತೆ; ವೈದ್ಯರಿಗೆ ಅಚ್ಚರಿ – Kannada News | 9 Lakh Rs Worth over 50 years old copper and brass utensils discovered at thanjavur medical college

ತಂಜಾವೂರು, ಡಿಸೆಂಬರ್ 28: ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿಂಭಾಗದ ಪಾಳು ಬಿದ್ದ ಕಟ್ಟಡದಲ್ಲಿ ನಿರ್ವಹಣಾ ಕಾರ್ಯದ ಸಮಯದಲ್ಲಿ ಅಪರೂಪದ ವಸ್ತುಗಳು ಪತ್ತೆಯಾಗಿವೆ. ಅಲ್ಲಿನ ಒಂದು ಕೋಣೆಯಲ್ಲಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳು ಪತ್ತೆಯಾಗಿವೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಈ ಪಾತ್ರೆಗಳ ಮೌಲ್ಯ ರೂ. 9 ಲಕ್ಷ ಆಗಿರಬಹುದು. ತಂಜಾವೂರು (Thanjavur) ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದ ಹಳೆಯ ಕಟ್ಟಡ ಪ್ರದೇಶದಲ್ಲಿ ನಿರ್ವಹಣಾ ಕಾರ್ಯವನ್ನು ನಡೆಸಲಾಗುತ್ತಿತ್ತು. ಈ ವೇಳೆ ಈ ನಿಧಿ ಪತ್ತೆಯಾಗಿದೆ.

ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿಂದೆ ಒಂದು ಬಳಕೆಯಾಗದ ಕಟ್ಟಡವಿತ್ತು. ಇದರ ನಂತರ, ವೈದ್ಯಕೀಯ ಕಾಲೇಜಿನ ಡೀನ್ ಅದನ್ನು ಸ್ವಚ್ಛಗೊಳಿಸಲು ಆದೇಶಿಸಿದ್ದರು. ಈ ವೇಳೆ ನಿರ್ವಹಣಾ ಕಾರ್ಯಕ್ಕಾಗಿ ಅದನ್ನು ತೆರೆದಾಗ ತಾಮ್ರದ ಜಗ್‌ಗಳು, ಹಿತ್ತಾಳೆ ಪಾತ್ರೆಗಳು, ಅಡುಗೆಗಾಗಿ ದೊಡ್ಡ ಪಾತ್ರೆಗಳು ಮತ್ತು ನೀರು ಸಂಗ್ರಹ ಟ್ಯಾಂಕ್ ಸೇರಿದಂತೆ ಹಲವು ಪ್ರಾಚೀನ ವಸ್ತುಗಳು ಪತ್ತೆಯಾಗಿವೆ. ಆರಂಭಿಕ ವರದಿಯ ಪ್ರಕಾರ, ಇವೆಲ್ಲವೂ ಸುಮಾರು 9 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮೊದಲ ಪತಿ ಮೇಲೆ ವರದಕ್ಷಿಣೆ ಕೇಸ್​​ ಹಾಕಿದ ಮಹಿಳೆಗೆ ಶಾಕ್ ಕೊಟ್ಟ 2ನೇ ಗಂಡ!

ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದ ನಂತರ, ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಪಾತ್ರೆಗಳನ್ನು ಸುರಕ್ಷಿತವಾಗಿ ಆರ್ಕೈವ್‌ಗೆ ಸ್ಥಳಾಂತರಿಸಲಾಗಿದೆ. ಆ ಸ್ಥಳದಲ್ಲಿ ಅವುಗಳನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಮತ್ತು ಹೇಗೆ ಸಂಗ್ರಹಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಇಂತಹ ಪ್ರಾಚೀನ ಲೋಹದ ವಸ್ತುಗಳ ಆವಿಷ್ಕಾರವು ಸಾರ್ವಜನಿಕರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಶ್ಚರ್ಯ ಮತ್ತು ಆಸಕ್ತಿಯನ್ನು ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: 6,6,4,6.. ಒಂದೇ ಓವರ್​ನಲ್ಲಿ ಲಂಕಾ ಸ್ಪಿನ್ನರ್ ಬೆವರಿಳಿಸಿದ ರಿಚಾ ಘೋಷ್

ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20ಪಂದ್ಯದಲ್ಲಿ ಭಾರತ 221 ರನ್ ಗಳಿಸಿತು. ಇದು ಅಂತರರಾಷ್ಟ್ರೀಯ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ಸ್ಕೋರ್ ಆಗಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಸ್ಮೃತಿ, ಶಫಾಲಿ ಹಾಗೂ ರಿಚಾ ಘೋಷ್ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ರಿಚಾ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಪಂದ್ಯದ 19ನೇ ಓವರ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದ ರಿಚಾ, ಈ ಓವರ್​ನ ಕೊನೆಯ 4 ಎಸೆತಗಳನ್ನು ಬೌಂಡರಿಗಟ್ಟಿದರು. ಮೂರು ಹಾಗೂ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಿಚಾ, ಐದನೇ ಎಸೆತದಲ್ಲಿ ಬೌಂಡರಿ ಕಲೆಹಾಕಿದರೆ, ಕೊನೆಯ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್​ನಲ್ಲಿ 23 ರನ್​ಗಳು ಬಂದವು. ಮಾತ್ರವಲ್ಲದೆ ಅಂತಿಮ 10 ಓವರ್‌ಗಳಲ್ಲಿ ಭಾರತ ಬರೋಬ್ಬರಿ 136 ರನ್‌ಗಳನ್ನು ಕಲೆಹಾಕಿತು.

Source link

IND-W vs SL-W: ಶತಕ ವಂಚಿತರಾದರೂ ತಮ್ಮದೇ ಹಳೆಯ ದಾಖಲೆ ಮುರಿದ ಸ್ಮೃತಿ- ಶಫಾಲಿ

Source link

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ಸಾಕು ನಾಯಿಯ ರಕ್ಷಣೆ; ವಿಡಿಯೋ ವೈರಲ್ – Kannada News | Fire erupts at Hyderabad apartment firefighters rescued pet dog

ಹೈದರಾಬಾದ್, ಡಿಸೆಂಬರ್ 28: ಹೈದರಾಬಾದ್ ನಗರದ ಸೋಮಾಜಿಗುಡ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಶನಿವಾರ ಸಂಜೆ ಬೆಂಕಿ (Fire Accident) ಕಾಣಿಸಿಕೊಂಡಿದೆ. ಪಂಜಾಗುಟ್ಟ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಆಲ್ಪ ನೈಟ್ಸ್ ಬ್ಲಾಕ್ ಎಂದೂ ಕರೆಯಲ್ಪಡುವ ಆಲ್ಪೈನ್ ಹೈಟ್ಸ್ ನಲ್ಲಿ ಈ ಘಟನೆ ಸಂಭವಿಸಿದೆ. ಅಪಾರ್ಟ್​​ಮೆಂಟ್​​ನ 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ದಟ್ಟ ಹೊಗೆ ಹರಡಿತ್ತು. ಈ ವೇಳೆ ಅಪಾರ್ಟ್​​ಮೆಂಟ್ ನಿವಾಸಿಗಳು ಸುರಕ್ಷತೆಗಾಗಿ ಹೊರಗೆ ಧಾವಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು 3 ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಈ ವೇಳೆ ಅಪಾರ್ಟ್​​ಮೆಂಟ್ ಒಳಗೆ ಸಿಲುಕಿದ್ದ ಸಾಕು ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾಪಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು? – Kannada News | G. Parameshwara Clarifies Karnataka Police Also Involved in Maharashtra Police Operation in Bengaluru

ಬೆಂಗಳೂರು, ಡಿಸೆಂಬರ್​ 28: ಮಹಾರಾಷ್ಟ್ರ ಪೊಲೀಸರಿಂದ ರಾಜ್ಯದಲ್ಲಿ ಡ್ರಗ್ಸ್ ಸೀಜ್​​ ವಿಚಾರ ನಮ್ಮ ಪೊಲೀಸರಿಗೆ ಗೊತ್ತಿರಲಿಲ್ವ ಎಂಬ ಮಾಧ್ಯಮದವರ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ವೇಳೆ ನಮ್ಮ ಬೆಂಗಳೂರು ನಗರ ಪೊಲೀಸರ ಡಿಸಿಪಿ ಸೇರಿದಂತೆ ಎನ್.ಸಿ.ಬಿ ಮತ್ತು ನಮ್ಮ ವಿಶೇಷ ಕಾರ್ಯಾಚರಣಾ ತಂಡ ಕೂಡ ಸಕ್ರಿಯವಾಗಿ ಭಾಗವಹಿಸಿತ್ತು. ಕರ್ನಾಟಕ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎಂಬುವುದು ಸುಳ್ಳು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ 55 ಕೋಟಿ ರೂ ಡ್ರಗ್ಸ್​​ ಪತ್ತೆ: ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್ – Kannada News | Bengaluru Drug Factory Bust: G. Parameshwara Says Maharashtra Police Statement Is Far from the Truth

ಬೆಂಗಳೂರು, ಡಿಸೆಂಬರ್​​ 28: ಹೊಸ ವರ್ಷದ ಸಂಭ್ರಮದ ಹೊಸ್ತಿಲಲ್ಲೇ ಮೂರು ಬೃಹತ್ ಡ್ರಗ್ಸ್ ಫ್ಯಾಕ್ಟರಿಗಳನ್ನು ಭೇದಿಸಲಾಗಿದೆ. ಮಹಾರಾಷ್ಟ್ರದ ಎಎನ್‌ಟಿಎಫ್ ಡಿಸೆಂಬರ್ 26ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಹೊರಮಾವು, ಯರಪನಹಳ್ಳಿ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಮತ್ತು ಎಂ.ಡಿ.ಎಂ.ಎ. ತಯಾರಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಜಿ ಪರಮೇಶರ್​​ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು 55 ಕೋಟಿ ರೂ ಮೌಲ್ಯದ್ದು ಎಂದಿದ್ದಾರೆ. ಅದು 1 ಕೋಟಿ 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಕಚ್ಚಾ ವಸ್ತು. ಮಹಾರಾಷ್ಟ್ರ ಪೊಲೀಸರು ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ? – Kannada News | Bengaluru: QR Code System Introduced for the Convenience of New Year Celebrations

ಬೆಂಗಳೂರು, ಡಿಸೆಂಬರ್​ 28: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಕ್ಯೂಆರ್ ಕೋಡ್‌ಗಳು ಆಂಬುಲೆನ್ಸ್ ಸೇವೆಗಳು, ವಾಹನ ಪಾರ್ಕಿಂಗ್ ಮತ್ತು ಸಂಚಾರ ಮಾಹಿತಿ ಸೇರಿದಂತೆ ಅಗತ್ಯ ವಿವರಗಳನ್ನು ಒದಗಿಸುತ್ತವೆ. ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳಲ್ಲಿ ಅಳವಡಿಸಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವ ಕಲ್ಯಾಣಕ್ಕಾಗಿ ಭಾರತ ವಿಶ್ವಗುರು ಆಗಲೇಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ – Kannada News | India should become vishwaguru for the world welfare RSS chief Mohan Bhagwat says

ಹೈದರಾಬಾದ್, ಡಿಸೆಂಬರ್ 28: “ವಿಶ್ವಗುರು” ಆಗುವ ಭಾರತದ ಪ್ರಯಾಣವು ಕೇವಲ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ವಿಷಯವಲ್ಲ, ಅದು ಜಾಗತಿಕ ಅವಶ್ಯಕತೆಯಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಒತ್ತಿ ಹೇಳಿದ್ದಾರೆ. ಈ ಗುರಿಗೆ ಕಠಿಣ ಪರಿಶ್ರಮ, ಬದ್ಧತೆ ಮತ್ತು ಮಾನವ ಮೌಲ್ಯಗಳು ಮತ್ತು ಸಾಮಾಜಿಕ ಬದಲಾವಣೆಯನ್ನು ಅಭಿವೃದ್ಧಿಪಡಿಸುವತ್ತ ಅಚಲ ಗಮನದ ಅಗತ್ಯವಿದೆ ಎಂದು ಹೇಳಿದ್ದಾರೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ವಿಶ್ವಗುರುವಾಗಿ ಭಾರತದ ಪಾತ್ರವು ಕೇವಲ ಒಂದು ಆಕಾಂಕ್ಷೆಯಲ್ಲ. ಆರ್‌ಎಸ್‌ಎಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಯತ್ನಗಳ ಮೂಲಕ ಈ ಗುರಿಯತ್ತ ಸ್ಥಿರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಎಲ್ಲಾ ಹಿಂದೂಗಳು ಒಗ್ಗೂಡಿ ಸನಾತನ ಧರ್ಮವನ್ನು ಉನ್ನತೀಕರಿಸುವ ಸಮಯ ಬಂದಿದೆ” ಎಂದು ಮೋಹನ್ ಭಾಗವತ್ ಹೇಳಿದ್ದಾರೆ. “100 ವರ್ಷಗಳ ಹಿಂದೆ ಯೋಗಿ ಅರವಿಂದ ಅವರು ಸನಾತನ ಧರ್ಮದ ಪುನರುತ್ಥಾನವು ದೇವರ ಇಚ್ಛೆಯಾಗಿದೆ ಮತ್ತು ಹಿಂದೂ ರಾಷ್ಟ್ರದ ಉದಯವು ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಇದೆ ಎಂದು ಘೋಷಿಸಿದ್ದರು. ಭಾರತ ಅಥವಾ ಹಿಂದೂ ರಾಷ್ಟ್ರ ಮತ್ತು ಸನಾತನ ಧರ್ಮ, ಹಿಂದುತ್ವ, ಸಮಾನಾರ್ಥಕ ಪದಗಳಾಗಿವೆ” ಎಂದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತದ ಜಾಗತಿಕ ಪಾತ್ರದ ಕುರಿತು ಮಾತನಾಡಿದ ಮೋಹನ್ ಭಾಗವತ್, “ವಿಶ್ವಗುರುವಾಗಲು ಬಹು ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನದ ಅಗತ್ಯವಿದೆ. ಆರ್‌ಎಸ್‌ಎಸ್ ಪಾತ್ರ ನಿರ್ಮಾಣ ಮತ್ತು ಸಾಮಾಜಿಕ ಜವಾಬ್ದಾರಿಯ ಮೇಲೆ ಕೇಂದ್ರೀಕರಿಸುವ ಮೂಲಕ ಕೊಡುಗೆ ನೀಡುತ್ತದೆ, ಇದು ಅದರ ಸ್ವಯಂಸೇವಕರು ಸಾರ್ವಜನಿಕ ವಿಶ್ವಾಸವನ್ನು ಪಡೆಯಲು ಸಹಾಯ ಮಾಡಿದೆ” ಎಂದು ಅವರು ಹೇಳಿದ್ದಾರೆ.

“ನಾವು ಮತ್ತೆ ‘ವಿಶ್ವಗುರು’ ಆಗುವ ಕೆಲಸವನ್ನು ಮಾಡಬೇಕಾಗುತ್ತದೆ. ‘ವಿಶ್ವಗುರು’ ಆಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲ. ನಾವು ‘ವಿಶ್ವಗುರು’ ಆಗುವುದು ಪ್ರಪಂಚದ ಅಗತ್ಯವಾಗಿದೆ.

ಇದನ್ನೂ ಓದಿ: ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ

“ನಾವು ‘ವಿಶ್ವಗುರು’ ಆಗುವುದು ಜಗತ್ತಿನ ಅಗತ್ಯವಾಗಿದೆ. ಆದರೆ, ಇದು ರಾತ್ರೋರಾತ್ರಿ ನಡೆಯುವ ಸಂಗತಿಯಲ್ಲ. ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ, ಮತ್ತು ಈ ಕಠಿಣ ಪರಿಶ್ರಮವನ್ನು ವಿವಿಧ ಮಾರ್ಗಗಳ ಮೂಲಕ ನಡೆಸಲಾಗುತ್ತಿದೆ, ಅವುಗಳಲ್ಲಿ ಒಂದು ಆರ್‌ಎಸ್‌ಎಸ್” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಲ್​​​ನಲ್ಲಿ ಕ್ರಿಸ್ಮಸ್ ಆಚರಣೆ ವೇಳೆ ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ: ಕಾಮುಕ ಅರೆಸ್ಟ್ – Kannada News | A delivery boy arrested for molesting young woman private parts during christmas celebration in bengaluru

ಬೆಂಗಳೂರು, (ಡಿಸೆಂಬರ್ 28): ಮಾಲ್‌ನಲ್ಲಿ ಕ್ರಿಸ್ಮಸ್ ಆಚರಿಸುತ್ತಿದ್ದಾಗ (christmas celebration) ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಡೆಲಿವರಿ ಬಾಯ್‌ನ್ನು ಪೊಲೀಸರು ಬಂಧಿಸಿದ್ದಾರೆ. ಗುವಾಹಟಿ ಮೂಲದ ಮನೋಜ್(27) ಬಂಧಿತ ಆರೋಪಿ. ಬೆಂಗಳೂರಿನ (Bengaluru) ಮಾಲ್​​​ನಲ್ಲಿ ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಣೆ ವೇಳೆ ಡೆಲಿವರಿ ಬಾಯ್‌ ಮನೋಜ್, ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಇದರಿಂದ ಮುಜುಗರಕ್ಕೊಳಗಾದ ಯುವತಿ, ಕೂಡಲೇ ಸ್ಥಳದಲ್ಲೇ ಇದ್ದ ಹದೇವಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರು, ಕಾಮುಕ ಮನೋಜ್​​​​ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಯುವತಿಯನ್ನು ಫಾಲೋ ಮಾಡಿದ್ದವರು ಅರೆಸ್ಟ್​

ಮೊನ್ನೆ ಅಂದರೆ ಡಿಸೆಂಬರ್ 25ರಂದು ಬೆಂಗಳೂರಿನ ಸಿಲ್ಕ್ ಬೋರ್ಡ್​ನಲ್ಲಿ ಪುಂಡರ ಗ್ಯಾಂಗ್​, ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿತ್ತು. ಬೈಕ್‌ನಲ್ಲಿದ್ದ ಯುವತಿಯನ್ನು ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡಿದ್ದು, ಹಿಂದೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ವಿಡಿಯೋ ಸರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಸುದ್ದಗುಂಟೆಪಾಳ್ಯ ಪೊಲೀಸರು, 3 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಶೇಕ್ ಅಯನ್ ಮತ್ತು ಶೇಕ್ ರೋಷನ್‌ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿದ್ದರು.

ಇದನ್ನೂ ನೋಡಿ: ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ವಿಡಿಯೋ ಮಾಡ್ತಿದ್ದವನ ಬಂಧನ

ಇನ್ನೊಂದು ಪ್ರಕರಣದಲ್ಲಿ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ನಾಗರಭಾವಿ ಖಾಸಗಿ ಆಸ್ಪತ್ರೆ ನೌಕರ ಸುವೆಂದು ಮೊಹಂತ ಎನ್ನುವಾತ ಸಹ ಅರೆಸ್ಟ್ ಆಗಿದ್ದಾನೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್​ನಲ್ಲಿ ಕೆಲಸ ಮಾಡ್ತಿದ್ದ ಕಾಮುಕ, ಲೇಡಿ ನರ್ಸ್​ಗಳು ಬಟ್ಟೆ ಬದಲಿಸುವುದನ್ನು ಮೊಬೈಲ್​​ನಲ್ಲಿ ಸರೆ ಹಿಡಿದುಕೊಳ್ಳುತ್ತಿದ್ದ. ಹೀಗೆ ಓರ್ವ ನರ್ಸ್​ ಕಾಮುಕನ ಆಟವನ್ನು ಗಮನಿಸಿ ಕೂಡಲೇ ಆಸ್ಪತ್ರೆ ವಯದ್ಯರ ಗಮನಕ್ಕೆ ತಂದಿದ್ದರು. ಬಳಿಕ ಆಸ್ಪತ್ರೆಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್​​ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸುವೆಂದು ಮೊಹಂತನನ್ನ ಬಂಧಿಸಿದ್ದಾರೆ.

ಮತ್ತಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version