BCCI Awards: ಇಬ್ಬರು ಕನ್ನಡಿಗರು ಸೇರಿದಂತೆ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತ ಕ್ರಿಕೆಟ್​ನ ಮೂವರು ದಿಗ್ಗಜ ಆಟಗಾರರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ (BCCI Lifetime Achievement Award) ಘೋಷಿಸಿದೆ. ಈ ಪ್ರಶಸ್ತಿಗೆ ಭಾಜನರಾದವರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದರೆ, ಮತ್ತೊಬ್ಬರು ಭಾರತ ಮಹಿಳಾ ತಂಡದ ಮಾಜಿ ನಾಯಕಿಯಾಗಿದ್ದಾರೆ. ವಾಸ್ತವವಾಗಿ ಬಿಸಿಸಿಐ ಮಾರ್ಚ್ 15 ರಂದು ನವದೆಹಲಿಯಲ್ಲಿ ನಮನ್ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಿದ್ದು, ಈ ಸಮಾರಂಭದಲ್ಲಿ 2024-25 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಿದೆ. ಹೆಚ್ಚುವರಿಯಾಗಿ, ಬಿಸಿಸಿಐ ಮೂವರು ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ಬಿಸಿಸಿಐನ ಅತ್ಯುನ್ನತ…

Read More

ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ಬೆಂಗಳೂರು, ಮಾರ್ಚ್ 9: ಮಧ್ಯಪ್ರಾಚ್ಯದಲ್ಲಿ ದಿನೇ ದಿನೇ ಇಸ್ರೇಲ್-ಇರಾನ್ ಯುದ್ಧದ (Israel Iran War) ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಹಂತಹಂತವಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಮಾರ್ಚ್ 8 ರ ಭಾನುವಾರ ರಾತ್ರಿ ದುಬೈನಿಂದ ಹೊರಟ ಎಮಿರೇಟ್ಸ್ ವಿಮಾನದಲ್ಲಿ 288 ಮಂದಿ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು. ಯುದ್ಧದ ಆತಂಕದಿಂದಾಗಿ ಹಲವು ದಿನಗಳಿಂದ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಇದೀಗ ವಿಮಾನ ಸೇವೆಗಳು ತಾತ್ಕಾಲಿಕ ಪುನರಾರಂಭವಾದ ಬೆನ್ನಲ್ಲೇ ತಾಯ್ನಾಡಿಗೆ ಮರಳುತ್ತಿದ್ದಾರೆ. ಈಗಾಗಲೇ…

Read More

ಬಂಗಾಳಕೊಲ್ಲಿಯಲ್ಲಿ ಭಾರತದ ಸಮರ ಗರ್ಜನೆ: ಅಗ್ನಿ-IV ಕ್ಷಿಪಣಿ ಪರೀಕ್ಷೆಗೆ ಸಕಲ ಸಿದ್ಧತೆ – Kannada News | India’s Agni IV Missile Test: Bay of Bengal Gears Up for Defense Might and NOTAM

ನವದೆಹಲಿ, ಮೇ 05: ಭಾರತವು ತನ್ನ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಬಂಗಾಳಕೊಲ್ಲಿ(Bay Of Bengal)ಯ ಸುಮಾರು 3,550 ಕಿ.ಮೀ. ವ್ಯಾಪ್ತಿಯನ್ನು ‘ಅಪಾಯಕಾರಿ ವಲಯ’ವೆಂದು ಘೋಷಿಸಿ NOTAM ಸೂಚನೆ ಹೊರಡಿಸಿದೆ. ಈ ದೀರ್ಘ ವ್ಯಾಪ್ತಿಯ ಕಾರಿಡಾರ್ ಭಾರತದ ಪ್ರಮುಖ ಪರಮಾಣು ಸಾಮರ್ಥ್ಯದ ಅಗ್ನಿ-IV (Agni-IV) ಕ್ಷಿಪಣಿ(Missile)ಯ ಉಡಾವಣೆಯ ಮುನ್ಸೂಚನೆಯನ್ನು ನೀಡುತ್ತಿದೆ. ಅಗ್ನಿ-IV: ಭಾರತದ ಪರಮಾಣು ತ್ರಿಕೋನದ ಬಲ ರಕ್ಷಣಾ ಮೂಲಗಳ ಪ್ರಕಾರ, ಪ್ರಸ್ತುತ ಘೋಷಿಸಲಾಗಿರುವ 3,500–4,000 ಕಿ.ಮೀ ವ್ಯಾಪ್ತಿಯು ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾದ (IRBM) ಅಗ್ನಿ-IV…

Read More

ಈ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವ ತಪ್ಪನ್ನು ಮಾಡಲೇಬೇಡಿ – Kannada News | Don’t make the mistake of keeping these items in the fridge

ಅನೇಕರಿಗೆ ಮನೆಯಲ್ಲಿ ಎಷ್ಟು ಜಾಗ ಇದ್ರೂ ಸಾಕಾಗೋದೇ ಇಲ್ಲ. ಏನಾದ್ರೂ ಖಾಲಿ ಜಾಗ ಕಂಡ್ರೆ ಅಲ್ಲಿ ಯಾವುದಾದರೂ ವಸ್ತುಗಳನ್ನು ತುಂಬಿಸಿಡುತ್ತಾರೆ. ಅದರಲ್ಲೂ ಫ್ರಿಡ್ಜ್‌ ಮೇಲೆ ಏನಾದ್ರೂ ಒಂದು ವಸ್ತುಗಳನ್ನು ಇಟ್ಟೇ ಇಡುತ್ತಾರೆ. ಬಹುತೇಕ ಹೆಚ್ಚಿನ ಮನೆಗಳಲ್ಲಿ ರೆಫ್ರಿಜರೇಟರ್‌ನ (refrigerator)ಮೇಲೆ ಬಾಕ್ಸ್‌ಗಳು, ಮಾತ್ರೆ, ಡೆಕೊರೇಟಿವ್‌ ಐಟಂ ಹೀಗೆ ಯಾವುದಾದರೂ ವಸ್ತು ಇದ್ದೇ ಇರುತ್ತದೆ. ಆದ್ರೆ ಕೆಲವೊಂದು ವಸ್ತುಗಳನ್ನು ಈ ರೀತಿ ಫ್ರಿಡ್ಜ್‌ ಮೇಲೆ ಇಡುವುದು ತಪ್ಪು,ಇದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ ಜೊತೆಗೆ ಇದು ರೆಫ್ರಿಜರೇಟರ್‌ನ ಕಾರ್ಯಕ್ಷಮತೆಯ ಮೇಲೂ…

Read More

ಒಂದು ಕಾಲದ ಸ್ಟಾರ್ ನಟ, ಬಳಿಕ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಈಗ ಸಿನಿಮಾಕ್ಕೆ ರೀಎಂಟ್ರಿ

ಸಿನಿಮಾ (Cinema) ರಂಗವೇ ಹಾಗೆ. ಎಲ್ಲೋ, ಹೇಗೋ ಇದ್ದವರು ಸಹ ಸ್ಟಾರ್ ಆಗಿ ಬಿಡುತ್ತಾರೆ, ಸ್ಟಾರ್ ಆಗಿ ಮೆರೆದವರು ಸಹ ಅದೃಷ್ಟ ಕೈಕೊಟ್ಟು ಪಾತಾಳ ಸೇರಿಬಿಡುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ದಕ್ಷಿಣ ಭಾರತ ಚಿತ್ರರಂಗದಲ್ಲಿದೆ. ಐಶ್ವರ್ಯಾ ರೈ, ಮಮ್ಮುಟಿ, ಮಾಧವನ್ ಇನ್ನೂ ಹಲವಾರು ಸ್ಟಾರ್ ನಟ-ನಟಿಯರು, ಹಲವು ಅತ್ಯುತ್ತಮ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿ, ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟನೋರ್ವ ಆ ಬಳಿಕ ಎಲ್ಲವನ್ನೂ ಕಳೆದುಕೊಂಡು ಚಿತ್ರರಂಗದಿಂದಲೇ ದೂರಾಗಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಾ, ಲಾರಿ…

Read More

ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ನಿಷೇಧಿಸಿದ ಸೌದಿ – Kannada News | Saudi Arabia bans poultry meat and eggs import from India and 39 other countries

ರಿಯಾಧ್, ಫೆಬ್ರುವರಿ 26: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ (Poultry meat and eggs) ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ (Saudi Arabia) ನಿಷೇಧಿಸಿದೆ. ಹಕ್ಕು ಜ್ವರ ಮತ್ತಿತರ ಪ್ರಾಣಿಜನ್ಯ ಕಾಯಿಲೆಗಳು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೌದಿಯ ಆಹಾರ ಪ್ರಾಧಿಕಾರವಾದ ಎಸ್​ಎಫ್​ಡಿಎ ಈ ನಿಷೇಧ ಕ್ರಮ ಜರುಗಿಸಿದೆ. ‘ಸ್ಥಳೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಎಸ್​ಎಫ್​ಡಿಎ ಹೇಳಿಕೆ…

Read More

JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್​ಯು ಆಡಳಿತ – Kannada News | JNU rusticates entire elected students union leadership, banned for 2 semesters

ನವದೆಹಲಿ, ಫೆಬ್ರುವರಿ 8: ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ಸೆಂಟ್ರಲ್ ಲೈಬ್ರರಿ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸುವಾಗ ಸಿಸಿಟಿವಿ ಮತ್ತಿತರ ಆಸ್ತಿಗಳಿಗೆ ಹಾನಿ ಮಾಡಿದ ಕಾರಣಕ್ಕೆ ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ (JNU students’ Union) ಎಲ್ಲಾ ಚುನಾಯಿತ ನಾಯಕತ್ವವನ್ನು ಅಮಾನತುಗೊಳಿಸಲಾಗಿದೆ. ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಅವರಲ್ಲದೇ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್,…

Read More

ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?

ಮಾಳು ಹಾಗೂ ಸೂರಜ್ ಅವರು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಇಬ್ಬರೂ ಮನೆಯಿಂದ ಹೊರ ಹೋದರು. ಇವರ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಗಿಲ್ಲಿ ಆಡಿದ ಮಾತು. ರಕ್ಷಿತಾ ಅವರು ಮಾಳು ಹಾಗೂ ಸೂರಜ್ ಬಳಿ ಹೋಗಿ ಅತ್ತಿದ್ದರಂತೆ. ಇವರು ಹೋಗುವ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಇತ್ತು ಎಂದು ಗಿಲ್ಲಿ ನಟ ಮಾತನಾಡಿದ್ದಾರೆ. ಆ ಬಗ್ಗೆ ಚರ್ಚೆ ಆಗಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More

ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಭಾರತೀಯ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ

ಹೇಗ್, ಮೇ 16: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಹೇಗ್‌ನಲ್ಲಿ ನಡೆದ ಸಮುದಾಯ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಮೋದಿಯವರಿಗೆ ಭಾರತ ಮೂಲದ ಯುವ ಕಲಾವಿದರು ಭಾರತೀಯ ಸಂಪ್ರದಾಯಗಳು ಮತ್ತು ಪರಂಪರೆಯನ್ನು ಪ್ರದರ್ಶಿಸುವ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪ್ರಧಾನ ಮಂತ್ರಿಯವರು ಮೇ 15ರಿಂದ 20ರವರೆಗೆ 5 ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ನೆದರ್ಲ್ಯಾಂಡ್ಸ್​ ಬಳಿಕ ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಕೂಡ ಭೇಟಿ ನೀಡಲಿದ್ದಾರೆ.   ಇನ್ನಷ್ಟು ರಾಷ್ಟ್ರೀಯ…

Read More

ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು

ಬೆಳಗಾವಿ, ಜನವರಿ 01: 2026ರ ಹೊಸ ಪರ್ವ ಶುರುವಾಗಿದೆ. ರಾಜ್ಯದ ಉದ್ದಗಲಕ್ಕೂ ಜನರು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇತ್ತ ಬೆಳಗಾವಿಯಲ್ಲಿ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಪಾರ್ಟಿ, ಡ್ಯಾನ್ಸ್​​ನಲ್ಲಿ ಫುಲ್ ಎಂಜಾಯ್​ ಮಾಡಿದರು. ಅದರಲ್ಲೂ ಯುವಜನತೆ ಕುಣಿದು ಕುಪ್ಪಲಿಸಿದರು. ವಿಡಿಯೋ ನೋಡಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.  Source link

Read More