Headlines

Video: ನೀಟ್ ಪರೀಕ್ಷಾ ಅಕ್ರಮ; ‘ಹಕ್ಕುಗಳಿಗಾಗಿ ಹೋರಾಡಿ, ಆದರೆ ವಿವೇಚನೆ ಕಳೆದುಕೊಳ್ಳಬೇಡಿ’ – ರವಿಶಂಕರ್ ಗುರೂಜಿ – Kannada News | Sri Sri Ravi Shankar Urges Calm Amidst NEET UG Protests: Peaceful Talks Key

ದೆಹಲಿ, ಜು.25: ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವ ಆಕ್ರೋಶದ ಕುರಿತು ಪ್ರತಿಕ್ರಿಯಿಸಿರುವ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು, ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿರುವುದು ಸಮಂಜಸವಾಗಿದ್ದರೂ, ಆವೇಶದ ನಡುವೆ ವಿವೇಚನೆ ಮತ್ತು ಸಮಾಧಾನವನ್ನು ಕಳೆದುಕೊಳ್ಳಬಾರದೆಂದು ಕರೆ ನೀಡಿದ್ದಾರೆ. ಪ್ರತಿಭಟನೆಗಳ ಸನ್ನಿವೇಶವನ್ನು ಅಸಾಮಾಜಿಕ ಹಾಗೂ ದೇಶವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿರುವುದರಿಂದ ಪ್ರತಿಯೊಬ್ಬರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು…

Read More

‘ಜಾನಕಿ ಅಮ್ಮನ ಸಂಗೀತ ನಮನಕ್ಕೆ ನಾವು ಬಿಡಿಗಾಸೂ ಪಡೆದಿಲ್ಲ‘; ಸ್ಪಷ್ಟನೆ ನೀಡಿದ ಅನುರಾಧಾ ಭಟ್ – Kannada News | Singer Anuradha Bhat Hits Back at Trolls Over Controversial Remarks on Janaki Amma Musical Tribute

ಕನ್ನಡ ಚಿತ್ರರಂಗದ ಹೆಸರಾಂತ ಗಾಯಕಿ ಅನುರಾಧಾ ಭಟ್ ಇತ್ತೀಚೆಗೆ ತಮಗೆ ಎದುರಾದ ಸಾರ್ವಜನಿಕ ಟೀಕೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಗಾನಕೋಗಿಲೆ ಜಾನಕಿ ಅಮ್ಮನವರ (S Janaki) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಕುರಿತು ಸುದೀರ್ಘ ಪೋಸ್ಟ್ ಬರೆದಿರುವ ಅನುರಾಧಾ, ಟೀಕಾಕಾರರ ಸೌಜನ್ಯ ಹಾಗೂ ಸಂಸ್ಕಾರವನ್ನು ಖಡಕ್ ಪದಗಳಲ್ಲಿ ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ತಾವು ಯಾವುದೇ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅನುರಾಧಾ…

Read More

ಬೆಂಗಳೂರಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ವಿಘ್ನೇಶ್ ಬಂಧನ – Kannada News | Bengaluru Notorious Rowdy Sheeter Vignesh Arrested Under Goondas Act

ಬೆಂಗಳೂರು, ಜುಲೈ 25: ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಕುಖ್ಯಾತ ರೌಡಿಶೀಟರ್ ವಿಘ್ನೇಶ್ ಅಲಿಯಾಸ್ ವಿಕ್ಕಿ ಎಂಬಾತನನ್ನು ಕೆಂಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ. 11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ ಬಂಧಿತ ರೌಡಿಶೀಟರ್ ವಿಘ್ನೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಅತ್ಯಾಚಾರ, ದರೋಡೆ, ಭೀಕರ ಹಲ್ಲೆ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ….

Read More

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಪದಕದ ಖಾತೆ ತೆರೆದ ಝಂಡು ಕುಮಾರ್ – Kannada News | Jhandu Kumar wins India’s first medal in Commonwealth Games 2026

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಝಂಡು ಕುಮಾರ್ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಗೌರವ ತಂದುಕೊಟ್ಟಿದ್ದಾರೆ. ರೋಚಕ ಹೋರಾಟ ಮತ್ತು ಕಠಿಣ ಪೈಪೋಟಿ: ಸ್ಪರ್ಧೆಯುದ್ದಕ್ಕೂ ಝಂಡು ಕುಮಾರ್ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿದರು. ಈ ಮೂಲಕ ನೈಜೀರಿಯಾದ ರಿಲುವಾನ್ ಇದ್ರಿಸ್​ಗೆ ಭರ್ಜರಿ ಪೈಪೋಟಿ ನೀಡಿದ್ದರು. ಮೊದಲ ಯತ್ನ: ಝಂಡು ಕುಮಾರ್ ಅವರು…

Read More

“ನನಗೆ ಟೈಫಾಯ್ಡ್ ಆಗಿದೆ, ಆದರೆ ಪ್ರತಿಭಟನೆ ನಿಲ್ಲಲ್ಲ”: ವೀಡಿಯೋ ಸಂದೇಶದ ಮೂಲಕ CJP ಮುಖ್ಯಸ್ಥ ಅಭೀಜಿತ್ ದೀಪ್ಕೆ ಎಚ್ಚರಿಕೆ – Kannada News | Abhijit Deepke with Typhoid: NEET Scam Protest continues until Dharmendra Pradhan resigns

ದೆಹಲಿ, ಜು.25: ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭೀಜಿತ್ ದೀಪ್ಕೆ ಅವರಿಗೆ ಟೈಫಾಯ್ಡ್ (Typhoid)  ದೃಢಪಟ್ಟಿದೆ. ಆದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಎಕ್ಸ್​​​​​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಅಭೀಜಿತ್ ದೀಪ್ಕೆ, ತಮ್ಮ ಅನಾರೋಗ್ಯದ ಸ್ಥಿತಿ ಪ್ರಸ್ತುತ ನಡೆಯುತ್ತಿರುವ…

Read More

ಭಾರತದಲ್ಲಿ ಕಣಕ್ಕಿಳಿಯಲಿದೆ ‘ಬ್ರೆಝಿಲ್’ – Kannada News | Brazil Football Team Set for Historic Kolkata Debut in October

ವಿಶ್ವ ಫುಟ್‌ಬಾಲ್ ಜಗತ್ತಿನ ದೈತ್ಯ ತಂಡವಾದ ಬ್ರೆಝಿಲ್, ಮುಂಬರುವ ಅಕ್ಟೋಬರ್‌ನಲ್ಲಿ ಭಾರತದ ಫುಟ್‌ಬಾಲ್ ಕಾಶಿ ಖ್ಯಾತಿಯ ಕೋಲ್ಕತಾದಲ್ಲಿ ಐತಿಹಾಸಿಕ ಸೌಹಾರ್ದ ಪಂದ್ಯವನ್ನು ಆಡಲಿದೆ. ಈ ಸ್ನೇಹಪರ ಪಂದ್ಯಕ್ಕಾಗಿ ಬ್ರೆಝಿಲ್ ಫುಟ್‌ಬಾಲ್ ಕಾನ್ಫೆಡರೇಶನ್ (CBF) ಭಾರತದ ಸಂಘಟಕರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ. ಐತಿಹಾಸಿಕ ಕ್ರೀಡಾಂಗಣ: ಈ ಮಹತ್ವದ ಪಂದ್ಯವು ಕೋಲ್ಕತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ (ಯುವ ಭಾರತಿ ಕ್ರೀಡಾಂಗಣ) ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ,…

Read More

ಅಪರೂಪದ ಅವಕಾಶ ಮಿಸ್ ಮಾಡಿಕೊಂಡ ದಳಪತಿ ವಿಜಯ್; ಕಾರಣವೇನು? – Kannada News | Vijay’s Last Film Jana Nayagan Misses 100 Cr Milestone Due to Divided Box Office Response

ದಳಪತಿ ವಿಜಯ್ (Vijay) ನಟನೆಯ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 25 ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಆದರೆ ಚಿತ್ರಕ್ಕೆ ಆರಂಭದಲ್ಲೇ ಪ್ರೇಕ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳು ಆವೃತ್ತಿಗೆ ಉತ್ತಮ ಓಪನಿಂಗ್ ಸಿಕ್ಕಿದ್ದರೂ, ತೆಲುಗು, ಹಿಂದಿ ಪ್ರೇಕ್ಷಕರಿಂದ ಮಾತ್ರ ಧನಾತ್ಮಕ ವಿಮರ್ಶೆ ವ್ಯಕ್ತವಾಗಿಲ್ಲ. ಇದು ಈಗ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸಿನಿಮಾ ಮೊದಲ ದಿನ ಎಲ್ಲಾ ಭಾಷೆಗಳಿಂದ ಸೇರಿ ಒಟ್ಟು 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ….

Read More

ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾಯ್ತು ಬಂಗಾರದಂತಹ ಬೆಳೆ: ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ! – Kannada News | Power Crisis Ruins Papaya Crop; Frustrated Yadgir Farmer Destroys Plantation

ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ! ಯಾದಗಿರಿ, ಜುಲೈ 25: ಒಂದು ಕಡೆ ಕೈಕೊಟ್ಟ ಮಳೆರಾಯ, ಇನ್ನೊಂದೆಡೆ ಜೆಸ್ಕಾಂ (GESCOM) ಇಲಾಖೆಯ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ. ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ ಬೆಳೆಗೆ ನೀರು ಹಾಯಿಸಲಾಗದೆ, ಕಣ್ಣೆದುರೇ ಒಣಗಿ ಹೋಗುತ್ತಿದ್ದ ಬಂಗಾರದಂತಹ ಪಪ್ಪಾಯ ಬೆಳೆಯನ್ನು ಕಂಡು ಮನನೊಂದ ರೈತನೊಬ್ಬ ತಾನೇ ಕೊಡಲಿ ಹಾಗೂ ಕೊಡುಗೋಲಿನಿಂದ ಗಿಡಗಳನ್ನು ಕತ್ತರಿಸಿ ನಾಶಪಡಿಸಿರುವ ಭಾವುಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ. ಶಹಾಪುರದ ರೈತ ಅಮರೇಶ್ ಎಂಬುವರೇ…

Read More

Video: ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ 400 ಮಂದಿ ಭಾಗಿಯಾಗಿರೋದು ಪತ್ತೆ! – Kannada News | NEET Protest: Delhi Police Identify 400 Criminals Amidst Ongoing Demonstrations

ದೆಹಲಿ, ಜು.25: ರಾಷ್ಟ್ರ ರಾಜಧಾನಿ ಯಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ, ಅಪರಾಧ ಹಿನ್ನೆಲೆಯುಳ್ಳ 400 ಮಂದಿ ಭಾಗಿಯಾಗಿರುವುದು ಪತ್ತೆಯಾಗಿರುವುದು ಕಳವಳ ಮೂಡಿಸಿದೆ. ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ವ್ಯವಸ್ಥೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿ ಪ್ರತಿಭಟನೆಯಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಸಾಹಿಲ್ ಸೈಫಿ, ಮನೋಜ್ ಕುಮಾರ್, ರೂಬಲ್ ಸೇರಿದಂತೆ ಹಲವರ ವಿರುದ್ಧ ಆರೋಪಗಳಿವೆ. ಈ ಮಧ್ಯೆ, ನೀಟ್ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರ ಮತ್ತು ದೆಹಲಿ ಪೊಲೀಸರ ಕ್ರಮಗಳನ್ನು…

Read More

ನೆಲಮಂಗಲದಲ್ಲಿ 8ನೇ ಶತಮಾನದ ಅಪರೂಪದ ‘ಹುಲಿ ವೀರಗಲ್ಲು’ ಶಾಸನ ಪತ್ತೆ – Kannada News | Rare Ganga Era Hero Stone in Byrasandra: Sivamarenadi’s Tiger Fight Uncovered

ನೆಲಮಂಗಲ, ಜು.25: ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ೮ನೇ ಶತಮಾನದ ಗಂಗರ ಕಾಲದ ಅಪರೂಪದ ಶಿಲಾ ಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದೆ. ಜಮೀನೊಂದರಲ್ಲಿ ಕೃಷಿ ಕೆಲಸ ಮಾಡುವಾಗ ಈ ಪವಿತ್ರ ಹಾಗೂ ಐತಿಹಾಸಿಕ ಪಳೆಯುಳಿಕೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ರಂಗಸ್ವಾಮಯ್ಯ ಎಂಬುವವರ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಇದನ್ನು ಪ್ರಸಿದ್ಧ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಅವರು ಪರಿಶೀಲಿಸಿ ಇದರ ಮಹತ್ವವನ್ನು ದೃಢೀಕರಿಸಿದ್ದಾರೆ. ಪತ್ತೆಯಾಗಿರುವ ಈ ವೀರಗಲ್ಲಿನಲ್ಲಿ ಗಂಗರ ಕಾಲದ ಹಳೆಯ ಕನ್ನಡ ಅಕ್ಷರಗಳಲ್ಲಿ ಸಾಲುಗಳನ್ನು ಕೆತ್ತಲಾಗಿದೆ….

Read More