80ನೇ ಸ್ವಾತಂತ್ರ್ಯ ದಿನಾಚರಣೆ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಥಮ ಬಾರಿಗೆ ಮೊಳಗಿದ ‘ವಂದೇ ಮಾತರಂ’ – Kannada News | Historic Vande Mataram Full Play at 80th Independence Day, New Legal Protection

ದೆಹಲಿ, ಆ.15: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಅಂಗಳದಲ್ಲಿ ಅಪೂರ್ವ ಇತಿಹಾಸವೊಂದು ರಚನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ, ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ ಪೂರ್ಣ ಆವೃತ್ತಿಯನ್ನು ಧ್ವಜಾರೋಹಣಕ್ಕೆ ಮುನ್ನ ಅಧಿಕೃತವಾಗಿ ಪ್ರಸಾರ ಮಾಡಲಾಯಿತು. ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ನುಡಿಸುವ ಮೂಲಕ ಈ ಬಾರಿಯ ಸ್ವಾತಂತ್ರ್ಯೋತ್ಸವವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರೈಸಿರುವ ನೆನಪಿಗಾಗಿ ಈ ವಿಶೇಷ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಕೆಂಪುಕೋಟೆಯ ಮಹಾದ್ವಾರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, 1721 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್) ವತಿಯಿಂದ ಸ್ವದೇಶಿ ನಿರ್ಮಿತ 105 mm ಲೈಟ್ ಫೀಲ್ಡ್ ಗನ್ ಬಳಸಿ 21 ಗುಂಡುಗಳ ಗೌರವ ಸಮರ್ಪಿಸಲಾಯಿತು.

ಧ್ವಜಾರೋಹಣದ ವೇಳೆ ಭಾರತೀಯ ಭೂಸೇನೆಯ ಬ್ಯಾಂಡ್ ‘ವಂದೇ ಮಾತರಂ’ ರಾಗವನ್ನು ನುಡಿಸಿತು. ಅದೇ ಕ್ಷಣದಲ್ಲಿ ಭಾರತೀಯ ವಾಯುಸೇನೆಯ Mi-17 ಹೆಲಿಕಾಪ್ಟರ್‌ಗಳು ಕೆಂಪುಕೋಟೆಯ ಮೇಲೆ ಪುಷ್ಪವೃಷ್ಟಿ ಕರೆದವು. ಒಂದು ಹೆಲಿಕಾಪ್ಟರ್‌ನಲ್ಲಿ ತ್ರಿವರ್ಣ ಧ್ವಜ ಹಾಗೂ ಇನ್ನೊಂದರಲ್ಲಿ ‘ವಂದೇ ಮಾತರಂ’ ಚಿತ್ರದ ಧ್ವಜ ಕಂಗೊಳಿಸಿತು. ಈ ಐತಿಹಾಸಿಕ ಕ್ಷಣಕ್ಕೆ ಕೆಲವೇ ದಿನಗಳ ಮುನ್ನ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ, 2026’ ಗೆ ಅಂಕಿತ ಹಾಕಿದ್ದರು.

ಈ ಹೊಸ ಕಾಯ್ದೆಯನ್ವಯ, ‘ಜನ ಗಣ ಮನ’ ರಾಷ್ಟ್ರಗೀತೆಗೆ ಇದ್ದ ಕಾನೂನು ರಕ್ಷಣೆಯಂತೆಯೇ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೂ ಸಂಪೂರ್ಣ ಕಾನೂನು ರಕ್ಷಣೆ ಸಿಕ್ಕಿದೆ. ಗೀತೆಯನ್ನು ಹಾಡುವಾಗ ಬೇಕಾಬಿಟ್ಟಿ ಅಡ್ಡಿಪಡಿಸುವುದು ಅಥವಾ ಅಪಮಾನಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಇದನ್ನೂ ಓದಿ: 80ನೇ ಸ್ವಾತಂತ್ರ್ಯ ದಿನಾಚರಣೆ; ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಸ್ವಾತಂತ್ರ್ಯ ದಿನದ ಮುನ್ನಾದಿನ ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿಯೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಪ್ರಸಾರ ಮಾಡಲಾಗಿತ್ತು. ಸ್ವದೇಶಿ ಚಳವಳಿಯ ಕಾಲದಲ್ಲಿ ದೇಶಪ್ರೇಮಿಗಳಿಗೆ ಸ್ಪೂರ್ತಿಯಾಗಿದ್ದ ಈ ಗೀತೆಗೆ ಸೂಕ್ತ ಗೌರವ ಸಿಕ್ಕಿರುವುದು ಸಮಸ್ತ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:17 am, Sat, 15 August 26

Source link

PM Modi Speech: ‘ಭಾರತ ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು’; ಕೆಂಪುಕೋಟೆಯಲ್ಲಿ ಮೋದಿಯಿಂದ ಆತ್ಮನಿರ್ಭರದ ಘೋಷಣೆ – Kannada News | Viksit Bharat at 2047 Atmanir bharat PM Modis Speech Highlights Red Fort 80th Independence Day Celebrations

ನವದೆಹಲಿ, ಆಗಸ್ಟ್ 15: ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. “ನಾವು ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ, ಆತ್ಮನಿರ್ಭರರಾಗಬೇಕು” ಎಂದು ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಪುನರುಚ್ಛರಿಸಿದ್ದಾರೆ. ‘ಆತ್ಮನಿರ್ಭರ ಭಾರತ’ದ ಕನಸಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಭಾರತದ ಸೆಮಿಕಂಡಕ್ಟರ್ ಪ್ಲಾಂಟ್‌ಗಳು (ಉತ್ಪಾದನಾ ಘಟಕಗಳು) ಮತ್ತು ಈ ಕ್ಷೇತ್ರದಲ್ಲಿ ದೇಶ ಹೊಂದಿರುವ ಹೆಚ್ಚಿನ ಆಕಾಂಕ್ಷೆಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ‘ಹರ್ ಘರ್ ತಿರಂಗಾ, ಹರ್ ಮನ್ ತಿರಂಗಾ’ ಎಂದ ಪ್ರಧಾನಿ ಮೋದಿ, “ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಂದು ನಾವೆಲ್ಲರೂ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇಂದು ಪ್ರತಿಯೊಂದು ಹೃದಯದ ಬಡಿತದಲ್ಲೂ ‘ವಂದೇ ಮಾತರಂ’ ಜಪ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವಿದೆ, ಪ್ರತಿಯೊಂದು ಮನದಲ್ಲೂ ತ್ರಿವರ್ಣ ಧ್ವಜವಿದೆ. ದೇಶವು ಇಂದು ಹೊಸ ಸಂಕಲ್ಪಗಳೊಂದಿಗೆ, ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಮುಂದೆ ಸಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: President Speech: ’25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ’; ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

“ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಆಶಯದೊಂದಿಗೆ ಜನರು ಒಂದಾಗುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಈಗ ‘ವೋಕಲ್ ಫಾರ್ ಲೋಕಲ್’ ಮತ್ತು ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುತ್ತಿದ್ದಾನೆ. ‘ಆತ್ಮನಿರ್ಭರ’ ಆಗುವ ಪ್ರಯತ್ನದ ಭಾಗವಾಗಿ ಭಾರತವು ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಸ್ಥಾಪಿಸಿದ್ದು, ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ” ಎಂದು ಮೋದಿ ಹೇಳಿದ್ದಾರೆ.

25 ಕೋಟಿ ಜನರು ಬಡತನದಿಂದ ಮುಕ್ತ:

ತಮ್ಮ ಸರ್ಕಾರವು 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ 12 ವರ್ಷಗಳಲ್ಲಿ ದೇಶವು ತನ್ನ ಅಭಿವೃದ್ಧಿಯನ್ನು ವೇಗಗೊಳಿಸಿದೆ ಎಂದು ಅವರು ಹೇಳಿದರು. “ಅಭಿವೃದ್ಧಿಯತ್ತ ಸಂಕಲ್ಪದೊಂದಿಗೆ ಸಾಗುತ್ತಿರುವ 140 ಕೋಟಿ ಭಾರತೀಯರನ್ನು ತಡೆಯುವುದು ಈಗ ಅಸಾಧ್ಯ” ಎಂದು ಅವರು ಅಭಿಪ್ರಾಯಪಟ್ಟರು.

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ:

“ಇಂದು ಭಾರತವು ಅತ್ಯಂತ ದೊಡ್ಡ ಕನಸನ್ನು ಕಂಡಿದೆ. ಹೊಸ ಎತ್ತರವನ್ನು ತಲುಪುವ ಗುರಿಯೊಂದಿಗೆ, ಬಲವಾದ ಸಂಕಲ್ಪದೊಂದಿಗೆ ಈ ಕನಸನ್ನು ಕಾಣಲಾಗಿದೆ. ಆ ಕನಸೆಂದರೆ 2047ರ ವೇಳೆಗೆ, ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದ್ದೇವೆ. 140 ಕೋಟಿ ಭಾರತೀಯರ ಶ್ರಮದಿಂದ ನಾವು ಈ ಗುರಿಯನ್ನು ಸಾಧಿಸಬೇಕಾಗಿದೆ. ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಲು ಸಂಕಲ್ಪ ಮಾಡಿದಾಗ ಅದು ಖಂಡಿತ ಸಾಧ್ಯವಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ?

ದೊಡ್ಡ ಗುರಿಗಳನ್ನು ಇಟ್ಟುಕೊಂಡಾಗ ಮಾತ್ರ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕನಸುಗಳು ದೊಡ್ಡದಾಗಿದ್ದಾಗ, ನಮ್ಮ ಸಾಮರ್ಥ್ಯವೂ ಬೆಳೆಯುತ್ತದೆ” ಎಂದು ಹೇಳಿದರು.

ಯುವ ಸಂಶೋಧಕರು, ಇಂಟರ್ನ್‌ಗಳು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 27,000 ಜನರು ಕೆಂಪುಕೋಟೆಯ ಈ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Independence Day Speech Live Stream: ದೆಹಲಿಯ ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಭಾಷಣ – Kannada News | Red Fort: PM Modi’s 80th Independence Day Speech and Flag Hoisting Live

ದೆಹಲಿ, ಆ.15: ಇಂದು ಭಾರತದಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಮಸ್ತ ದೇಶವಾಸಧಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಕೆಂಪುಕೋಟೆಯ ಅಂಗಳದಲ್ಲಿ ದೇಶದ ಗಣ್ಯಾತಿಗಣ್ಯರು, ಸಂಪುಟ ಸಚಿವರು, ರಾಜತಾಂತ್ರಿಕರು, ಸೇನಾಪಡೆಗಳ ಮುಖ್ಯಸ್ಥರು ಹಾಗೂ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಮತ್ತು ಯುವ ಸಮೂಹ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಲೈವ್ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮೇಂದ್ರ ಮನೆಗೆ ಯಾರು ಬೇಕಾದರೂ ಬರಬಹುದಿತ್ತು; ಅಮಿತಾಭ್ ನೆನಪು – Kannada News | Amitabh Bachchan Recalls Dharmendra Generosity and Open House Culture on KBC 18

ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಕಳೆದ ವರ್ಷ ನವೆಂಬರ್‌ನಲ್ಲಿ ನಮ್ಮನ್ನಗಲಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರ ನೆನಪುಗಳು ಇಂದಿಗೂ ಸದಾ ಹಸಿರಾಗಿವೆ. ಅವರ ಉದಾರತೆ ಹಾಗೂ ಸರಳತೆಯನ್ನು ಚಿತ್ರರಂಗದ ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್‌ಪತಿ 18’ ಶೋನಲ್ಲಿ ಧರ್ಮೇಂದ್ರ ಅವರ ಔದಾರ್ಯವನ್ನು ನೆನಪಿಸಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಧರ್ಮೇಂದ್ರ ಅವರ ಮನೆಯ ಆತಿಥ್ಯದ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಧರ್ಮೇಂದ್ರ ಅವರ ಮನೆ ಎಲ್ಲರಿಗೂ ಮುಕ್ತವಾಗಿರುತ್ತಿತ್ತು. ಯಾರೇ ಬಂದರೂ ಅದು ಅವರದೇ ಸ್ವಂತ ಮನೆಯಂತೆ ಇರುತ್ತಿತ್ತು. ಯಾರನ್ನು ಬೇಕಾದರೂ ಅವರು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು.

‘ಒಮ್ಮೆ ಧರ್ಮೇಂದ್ರ ಅವರು ಮನೆಗೆ ಬಂದಾಗ 4-5 ಜನರು ಮೆಟ್ಟಿಲು ಹತ್ತುತ್ತಿರುವುದನ್ನು ಕಂಡರು. ಧರ್ಮೇಂದ್ರ ಅವರು ನೀವು ಯಾರು ಎಂದು ಆ ಜನರನ್ನು ವಿಚಾರಿಸಿದರು. ನಾವು ನಿಮ್ಮ ಊರಿನಿಂದ ಬಂದಿದ್ದೇವೆ ಎಂದು ಅವರು ಹೇಳಿದರು. ತಮ್ಮ ಹೆಂಡತಿಯೇ ಅವರನ್ನು ಕರೆಸಿರಬಹುದು ಎಂದು ಧರ್ಮೇಂದ್ರ ಅಂದುಕೊಂಡಿದ್ದರು. ತಮ್ಮ ಮನೆಗೆ ಯಾರು ಬಂದು ಹೋಗುತ್ತಿದ್ದಾರೆ ಎಂಬುದು ಸ್ವತಃ ಧರ್ಮೇಂದ್ರ ಅವರಿಗೇ ತಿಳಿಯುತ್ತಿರಲಿಲ್ಲ. ಅವರ ಹೃದಯ ಅಷ್ಟು ವಿಶಾಲವಾಗಿತ್ತು’ ಎಂದು ಅಮಿತಾಭ್ ಹೇಳಿದ್ದಾರೆ.

ಧರ್ಮೇಂದ್ರ ಅಗಲಿದಾಗಲೂ ಅಮಿತಾಭ್ ಬಚ್ಚನ್ ಭಾವುಕ ಸಾಲುಗಳನ್ನು ಬರೆದಿದ್ದರು. ಧರ್ಮೇಂದ್ರ ಅವರ ಸರಳತೆ ಮತ್ತು ದೊಡ್ಡ ಗುಣವನ್ನು ಅವರು ಕೊಂಡಾಡಿದ್ದರು. ಪಂಜಾಬ್‌ನ ಹಳ್ಳಿಯ ಮಣ್ಣಿನ ಗುಣವನ್ನು ಅವರು ಕೊನೆಯವರೆಗೂ ಉಳಿಸಿಕೊಂಡಿದ್ದರು.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದು ಫೇಕ್​ ನ್ಯೂಸ್​; ಸ್ಪಷ್ಟನೆ ನೀಡಿದ ಬಿಗ್ ಬಿ

ಚಿತ್ರರಂಗ ಎಷ್ಟೇ ಬದಲಾದರೂ ಧರ್ಮೇಂದ್ರ ಅವರು ಮಾತ್ರ ಎಂದಿಗೂ ಬದಲಾಗಲಿಲ್ಲ. ಅವರ ನಗು ಹಾಗೂ ಬೆಚ್ಚಗಿನ ಪ್ರೀತಿ ಎಲ್ಲರಿಗೂ ಸಿಗುತ್ತಿತ್ತು. ಅವರ ಅಗಲಿಕೆಯಿಂದ ಸೃಷ್ಟಿಯಾದ ಶೂನ್ಯತೆಯನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಬಚ್ಚನ್ ಕಂಬನಿ ಮಿಡಿದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮತ್ತೆ ಕಾರ್ತಿಕ್ ಆರ್ಯನ್ ಜೊತೆ ಸೇರಿದ ಕನ್ನಡದ ನಟಿ ಶ್ರೀಲೀಲಾ – Kannada News | Sreeleela Resumes Shooting for Anurag Basu and Kartik Aaryan Romantic Musical in Mumbai

ಬಾಲಿವುಡ್ ಅಂಗಳದಲ್ಲಿ ನಟಿ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮತ್ತೆ ಜೋರಾಗಿ ಆರಂಭವಾಗಿದೆ. ನಿರ್ದೇಶಕ ಅನುರಾಗ್ ಬಸು ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ರೋಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ವಿಳಂಬದ ನಂತರ ಶ್ರೀಲೀಲಾ ಸೆಟ್‌ಗೆ ಮರಳಿದ್ದು, ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾ ಶ್ರೀಲೀಲಾ ಅವರ ಚೊಚ್ಚಲ ಬಾಲಿವುಡ್ ಚಿತ್ರವಾಗಿದೆ.

ಪಿಂಕ್‌ವಿಲ್ಲಾ ವರದಿಯ ಪ್ರಕಾರ ಶ್ರೀಲೀಲಾ ಮುಂಬೈ ಶೂಟಿಂಗ್ ಶೆಡ್ಯೂಲ್ ಸೇರಿಕೊಂಡಿದ್ದಾರೆ. ನಿಗದಿತ ವೇಳಾಪಟ್ಟಿಯಂತೆಯೇ ಚಿತ್ರೀಕರಣ ಪ್ರಸ್ತುತ ಸಾಗುತ್ತಿದೆ. ಇದೊಂದು ಪ್ರೇಮಕಥೆ. ಈ ಮೊದಲು ಸಿನಿಮಾ ನಿಂತು ಹೋಗಿದೆ ಎನ್ನಲಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ.

ನಟ ಕಾರ್ತಿಕ್ ಆರ್ಯನ್ ತಮ್ಮ ಭಾಗದ ಹೆಚ್ಚಿನ ಶೂಟಿಂಗ್ ಈಗಾಗಲೇ ಪೂರ್ಣಗೊಳಿಸಿದ್ದಾರೆ. ಈಗ ಶ್ರೀಲೀಲಾ ತಮ್ಮ ಬಾಕಿ ಇರುವ ದೃಶ್ಯಗಳ ಚಿತ್ರೀಕರಣವನ್ನು ಮುಗಿಸುತ್ತಿದ್ದಾರೆ.

ಈ ಸಿನಿಮಾಗೆ ‘ತು ಮೇರಿ ಜಿಂದಗಿ ಹೈ’ ಎಂದು ಹೆಸರಿಡಲಾಗಿದೆ ಎಂಬ ವರದಿಗಳಿವೆ. ಆದರೆ ಅಧಿಕೃತ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಆರಂಭದಲ್ಲಿ ಇದು ‘ಆಶಿಕಿ 3’ ಎನ್ನಲಾಗಿತ್ತು. ಆದರೆ ಇದು ಸಂಪೂರ್ಣ ಹೊಸ ಕಥೆಯಾಗಿದೆ.

ಈ ಪ್ರೇಮಕಥೆಗೆ ಪ್ರೀತಮ್ ಸಂಗೀತ ನೀಡುತ್ತಿದ್ದಾರೆ. ಹಾಡುಗಳು ಕಥೆಗೆ ಅತ್ಯಂತ ಪ್ರಮುಖವಾಗಿರಲಿವೆ. 2026 ರಲ್ಲಿ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.

ಕಾರ್ತಿಕ್ ಆರ್ಯನ್ ಇತ್ತೀಚೆಗೆ ‘ತು ಮೇರಿ ಮೇನ್ ತೇರಾ’ ಸಿನಿಮಾದಲ್ಲಿ ನಟಿಸಿದ್ದರು. ಮುಂದೆ ‘ನಾಗ್‌ಜಿಲ್ಲಾ’ ಮತ್ತು ‘ಭೂಲ್ ಭುಲಯ್ಯ 4’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ? ಸತತ ಸೋಲಿನ ಬಳಿಕವೂ ಬಿಗ್ ಆಫರ್

ಶ್ರೀಲೀಲಾ ಇತ್ತೀಚೆಗೆ ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಮಿಂಚಿದ್ದರು. ಇದರ ಜೊತೆಗೆ ತೆಲುಗಿನ ‘ಓಂ ಚಾಪ್ಟರ್ 1’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಅವರಿಗೆ ಮೊದಲಿನಷ್ಟು ಆಫರ್​ಗಳು ಬರುತ್ತಿಲ್ಲ, ಗೆಲುವು ಕೂಡ ಅಷ್ಟು ದೊಡ್ಡ ಮಟ್ಟದಲ್ಲಿ ಸಿಗುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

80ನೇ ಸ್ವಾತಂತ್ರ್ಯ ದಿನಾಚರಣೆ; ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ – Kannada News | PM Narendra Modi pays floral tributes to the Father of the Nation Mahatma Gandhi at Rajghat on the 80th Independence Day

ನವದೆಹಲಿ, ಆಗಸ್ಟ್ 15: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಧ್ವಜಾರೋಹಣಕ್ಕೂ ಮುನ್ನ ಕೆಂಪು ಕೋಟೆಗೆ ತೆರಳುವ ಹಾದಿಯಲ್ಲಿ ಪ್ರಧಾನಮಂತ್ರಿಯವರು ರಾಜ್‌ಘಾಟ್‌ಗೆ ಭೇಟಿ ನೀಡಿ, ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ದೇಶಕ್ಕೆ ದಾರಿ ತೋರಿದ ಮಹಾತ್ಮ ಗಾಂಧೀಜಿಯವರ ತ್ಯಾಗವನ್ನು ಸ್ಮರಿಸುವುದು ಸ್ವಾತಂತ್ರ್ಯ ದಿನದ ಆಚರಣೆಯ ಮೊದಲ ಮತ್ತು ಪ್ರಮುಖ ಭಾಗವಾಗಿದೆ. ರಾಜ್‌ಘಾಟ್‌ನಲ್ಲಿ ನಮನ ಸಲ್ಲಿಸಿದ ನಂತರ, ಪ್ರಧಾನಿಯವರು ಚಾರಿತ್ರಿಕ ಕೆಂಪು ಕೋಟೆಗೆ ಆಗಮಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shravana Masa: ಶ್ರಾವಣ ಮಾಸದಲ್ಲಿ ಮಳೆ ನೀರಿನಿಂದ ಈ ಸರಳ ವಾಸ್ತು ಪರಿಹಾರ ಪ್ರಯತ್ನಿಸಿ; ಪ್ರಯೋಜನ ಸಾಕಷ್ಟಿವೆ! – Kannada News | Rainwater Remedies: Vastu and Astrology Tips for Wealth, Health, and Peace

ಶ್ರಾವಣ ಮಾಸದ ಆಗಮನದೊಂದಿಗೆ ಧರೆಗೆ ತಂಪನ್ನೆರೆಯುವ ಮಳೆಯು ಪ್ರಕೃತಿಯನ್ನು ಹಸಿರಾಗಿಸುವುದು ಮಾತ್ರವಲ್ಲದೆ, ನಮ್ಮ ಮನಸ್ಸಿಗೂ ಆಹ್ಲಾದಕರ ಅನುಭವ ನೀಡುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮಳೆನೀರು ಕೇವಲ ಪ್ರಕೃತಿಯ ಕೊಡುಗೆಯಷ್ಟೇ ಅಲ್ಲ; ಅದು ಅತ್ಯಂತ ಪವಿತ್ರವಾದ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಮೂಲ. ಶುದ್ಧ ಮಳೆನೀರನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ, ಕೆಲವೊಂದು ಸರಳ ವಾಸ್ತು ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಆರ್ಥಿಕ ಮುಗ್ಗಟ್ಟು ನಿವಾರಣೆಗೆ ‘ಅರಿಶಿನ-ಮಳೆನೀರು’ ಪರಿಹಾರ:

ನೀವು ದೀರ್ಘಕಾಲದಿಂದ ಹಣಕಾಸಿನ ತೊಂದರೆ ಅಥವಾ ಸಾಲದ ಬಾಧೆಯಿಂದ ಬಳಲುತ್ತಿದ್ದರೆ, ಮಳೆನೀರಿಗೆ ಸಂಬಂಧಿಸಿದ ಈ ಸರಳ ಪರಿಹಾರವನ್ನು ಮಾಡಬಹುದು. ಇದಕ್ಕಾಗಿ ಶುದ್ಧ ಮಳೆನೀರನ್ನು ಒಂದು ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ, ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಬೇಕು. ನಂತರ ಈ ಪಾತ್ರೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ (ಕುಬೇರನ ದಿಕ್ಸೂಚಿ) ಇರಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸತತ 11 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಪಾತ್ರೆಯ ಬಳಿ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಉತ್ತಮ ಆರೋಗ್ಯ ಮತ್ತು ಮನಶ್ಶಾಂತಿಗೆ ಶಿವಪೂಜೆ:

ಕುಟುಂಬದಲ್ಲಿ ಯಾರಾದರೂ ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಥವಾ ಮನಸ್ಸಿನಲ್ಲಿ ಅಶಾಂತಿ ಇದ್ದರೆ, ಮಳೆನೀರಿನ ಈ ಆಧ್ಯಾತ್ಮಿಕ ಪರಿಹಾರವು ಪರಿಹಾರ ನೀಡುತ್ತದೆ. ಮಳೆನೀರನ್ನು ತಾಮ್ರ ಅಥವಾ ಉಕ್ಕಿನ ಪಾತ್ರೆಯಲ್ಲಿ ಸಂಗ್ರಹಿಸಿ ಶಿವನನ್ನು ಪೂಜಿಸಬೇಕು. ನಂತರ ಈ ನೀರನ್ನು ಶಿವಲಿಂಗದ ಮೇಲೆ ಅರ್ಪಿಸಿ ‘ಮಹಾಮೃತ್ಯುಂಜಯ ಮಂತ್ರವನ್ನು’ 108 ಬಾರಿ ಜಪಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕತೆ ದೊರೆಯುತ್ತದೆ. ಆದಾಗ್ಯೂ, ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರ ಸಲಹೆ ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಜಾತಕದಲ್ಲಿ ಚಂದ್ರಬಲ ಹೆಚ್ಚಿಸಲು ಮತ್ತು ಮಾನಸಿಕ ನೆಮ್ಮದಿಗೆ:

ಜ್ಯೋತಿಷ್ಯದಲ್ಲಿ ದುರ್ಬಲ ಚಂದ್ರನು ಮಾನಸಿಕ ಅಶಾಂತಿ, ನಿದ್ರಾಹೀನತೆ, ಅನಗತ್ಯ ಭಯ ಹಾಗೂ ಆತ್ಮವಿಶ್ವಾಸದ ಕೊರತೆಗೆ ಕಾರಣವಾಗುತ್ತಾನೆ. ನಿಮ್ಮ ಜಾತಕದಲ್ಲಿ ಚಂದ್ರನನ್ನು ಬಲಪಡಿಸಲು, ಮಳೆನೀರನ್ನು ಒಂದು ಹಸಿರು ಗಾಜಿನ ಬಾಟಲಿಯಲ್ಲಿ ತುಂಬಿಸಿ ಮನೆಯ ಶಾಂತ ಹಾಗೂ ಪವಿತ್ರವಾದ ಸ್ಥಳದಲ್ಲಿ ಇಡಬಹುದು. ಈ ನೀರನ್ನು ವರ್ಷಪೂರ್ತಿ ಸಂಗ್ರಹಿಸಿ ಇಡಲಾಗುತ್ತದೆ ಹಾಗೂ ಮುಂದಿನ ವರ್ಷದ ಶ್ರಾವಣದಲ್ಲಿ ಹಳೆಯ ನೀರಿನ ಬದಲಿಗೆ ಹೊಸ ಮಳೆನೀರನ್ನು ತುಂಬುವ ಸಂಪ್ರದಾಯವಿದೆ.

ಪರಿಹಾರಗಳನ್ನು ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಮಳೆನೀರಿಗೆ ಸಂಬಂಧಿಸಿದ ಈ ಸರಳ ಪರಿಹಾರಗಳು ಸಂಪೂರ್ಣವಾಗಿ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಈ ಪರಿಹಾರಗಳನ್ನು ಮಾಡಲು ಯಾವಾಗಲೂ ಅತ್ಯಂತ ಶುದ್ಧ ಮತ್ತು ಸ್ವಚ್ಛವಾದ ಮಳೆನೀರನ್ನೇ ಬಳಸಬೇಕು. ಪ್ಲಾಸ್ಟಿಕ್ ಪಾತ್ರೆಗಳಿಗಿಂತ ಮಣ್ಣು, ತಾಮ್ರ ಅಥವಾ ಗಾಜಿನ ಪಾತ್ರೆಗಳನ್ನು ಬಳಸುವುದು ಶ್ರೇಷ್ಠ ಹಾಗೂ ಯಾವುದೇ ಆಧ್ಯಾತ್ಮಿಕ ಅಥವಾ ವಾಸ್ತು ಪರಿಹಾರವನ್ನು ಪೂರ್ಣ ನಂಬಿಕೆ ಮತ್ತು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:45 am, Sat, 15 August 26

Source link

TV9 Kannada News Live: ಬೆಂಗಳೂರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಡಗರ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 15 August 2026 80th Independence day, Narendra Modi, Assembly Session Politics Cinema Latest Updates Online

Breaking News Today Live Updates in Kannada: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇತ್ತ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದು, 30ಕ್ಕೂ ಹೆಚ್ಚು ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಮೈದಾನದ ಸುತ್ತಲೂ 2,000 ಪೊಲೀಸರು ಹಾಗೂ 100 ಸಿಸಿಟಿವಿಗಳ ಮೂಲಕ ಬಿಗಿ ಭದ್ರತೆ ಒದಗಿಸಲಾಗಿದ್ದು, ಮಧ್ಯಾಹ್ನ 12ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮತ್ತೊಂದೆಡೆ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಒಳನಾಡಿನ ಧಾರವಾಡ, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Red Fort: ಪ್ರತಿ ವರ್ಷ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲೇ ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ? – Kannada News | Why Every Year Independence Day Is Celebrated At Red Fort On August 15

ನವದೆಹಲಿ, ಆಗಸ್ಟ್ 15: ಪ್ರತಿ ವರ್ಷ ಭಾರತದ ಪ್ರಧಾನಮಂತ್ರಿ ದೆಹಲಿಯ ಕೆಂಪು ಕೋಟೆಯಲ್ಲಿ (Red Fort) ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡುತ್ತಾರೆ. ಈಗಾಗಲೇ ಕೆಂಪುಕೋಟೆ ಸ್ವಾತಂತ್ರ್ಯ ದಿನಾಚರಣೆಯ (Independence Day) ಧ್ವಜಾರೋಹಣಕ್ಕೆ ಸಜ್ಜಾಗಿದೆ. ಈ ಕಾರ್ಯಕ್ರಮವು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉದಾತ್ತ ಹಿತಕ್ಕಾಗಿ ಧೀರ ಯೋಧರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳನ್ನು ಜನರಿಗೆ ನೆನಪಿಸುತ್ತದೆ. ಆದರೆ, ಪ್ರತಿ ವರ್ಷ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ರಾಷ್ಟ್ರೀಯ ಸಮಾರಂಭವು ದೆಹಲಿಯ ಚಾರಿತ್ರಿಕ ಕೆಂಪು ಕೋಟೆ (Red Fort)ಯಲ್ಲಿ ಏಕೆ ನಡೆಯುತ್ತದೆ ಎಂದು ನಿಮಗೆ ಗೊತ್ತಾ?

ಸ್ವಾತಂತ್ರ್ಯ ದಿನಾಚರಣೆಗೆ ಕೆಂಪು ಕೋಟೆಯನ್ನೇ ಏಕೆ ಆಯ್ಕೆ ಮಾಡಲಾಯಿತು?:

ಅದರ ಐತಿಹಾಸಿಕ ಮಹತ್ವದ ಕಾರಣದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಸ್ಥಳವಾಗಿ ಕೆಂಪು ಕೋಟೆಯನ್ನು ಆಯ್ಕೆ ಮಾಡಲಾಯಿತು. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು 1947ರಲ್ಲಿ ಮೊದಲ ಬಾರಿಗೆ ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದಿನಿಂದ, ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದಲೇ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಪರಂಪರೆ ಬೆಳೆದುಬಂದಿದೆ. ಕೋಟೆಯ ಬೃಹತ್ ಕೆಂಪು ಮರಳುಕಲ್ಲಿನ ಗೋಡೆಗಳು ಮತ್ತು ಪ್ರಭಾವಶಾಲಿ ವಾಸ್ತುಶಿಲ್ಪವು ಈ ಸಂದರ್ಭದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತವೆ. ಈ ಐತಿಹಾಸಿಕ ರಚನೆಯು ಆಚರಣೆಗೆ ಒಂದು ಭವ್ಯ ಹಿನ್ನೆಲೆಯನ್ನು ಒದಗಿಸುತ್ತದೆ. ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು, ಇತರ ಗಣ್ಯರು ಮತ್ತು ದೇಶಾದ್ಯಂತ ಆಗಮಿಸುವ ನಾಗರಿಕರು ಭಾಗವಹಿಸುತ್ತಾರೆ.

ನೆಹರೂ ಅವರ ಮೊದಲ ಧ್ವಜಾರೋಹಣ:

ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಆಗಸ್ಟ್ 16, 1947ರಂದು ಕೆಂಪು ಕೋಟೆಯ ‘ಲಹೋರಿ ಗೇಟ್’ ಮೇಲೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಂದಿನಿಂದ ಈ ಸಂಪ್ರದಾಯವು ಪ್ರತಿ ವರ್ಷ ಮುಂದುವರಿದುಕೊಂಡು ಬಂದಿದೆ.

ಇದನ್ನೂ ಓದಿ: President Speech: ’25 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿದ್ದಾರೆ’; ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಬ್ರಿಟಿಷ್ ಆಡಳಿತ ಮತ್ತು ಭಾರತೀಯರ ಪ್ರತಿರೋಧ:

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವಾದ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತೀಯ ದಂಗೆಕೋರರು ಮೊಘಲ್ ಚಕ್ರವರ್ತಿ ಬಹಾದ್ದೂರ್ ಶಾ ಜಾಫರ್‌ನನ್ನು ತಮ್ಮ ನಾಯಕನೆಂದು ಘೋಷಿಸಿ ಕೆಂಪು ಕೋಟೆಯನ್ನೇ ತಮ್ಮ ಹೋರಾಟದ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.

ಐಎನ್‌ಎ ವಿಚಾರಣೆಗಳು:

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಫೌಜ್’ (INA) ಯೋಧರಾದ ಕರ್ನಲ್ ಪ್ರೇಮ್ ಸೆಹಗಲ್, ಕರ್ನಲ್ ಗುರುಬಕ್ಷ್ ಸಿಂಗ್ ಧಿಲ್ಲೋನ್ ಮತ್ತು ಮೇಜರ್ ಶಹನವಾಜ್ ಖಾನ್ ಅವರ ಐತಿಹಾಸಿಕ ವಿಚಾರಣೆ (ವಿಚಾರಣಾ ನ್ಯಾಯಾಲಯ) ಕೆಂಪು ಕೋಟೆಯಲ್ಲೇ ನಡೆಯಿತು.

“ದೆಹಲಿ ಚಲೋ” ಕರೆ:

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನೀಡಿದ್ದ “ಚಲೋ ದೆಹಲಿ” ಕರೆ ಮತ್ತು ಕೆಂಪು ಕೋಟೆಯ ಮೇಲಿನ ಐಎನ್‌ಎ ವಿಚಾರಣೆಯು ದೇಶಾದ್ಯಂತ ಅಪಾರ ದೇಶಭಕ್ತಿಯ ಅಲೆಯನ್ನು ಎಬ್ಬಿಸಿತು. ಇದರಿಂದಾಗಿ ಕೆಂಪು ಕೋಟೆಯು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ಸಂಕೇತವಾಗಿ ಬದಲಾಯಿತು.

ಸಾರ್ವಭೌಮತ್ವದ ಪ್ರದರ್ಶನ:

ಕೆಂಪು ಕೋಟೆಯ ಮೇಲೆ ಬ್ರಿಟಿಷರ ‘ಯೂನಿಯನ್ ಜಾಕ್’ ಧ್ವಜವನ್ನು ಇಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದು ಬ್ರಿಟಿಷ್ ಆಡಳಿತದ ಅಂತ್ಯ ಮತ್ತು ಸ್ವತಂತ್ರ, ಸಾರ್ವಭೌಮ ಭಾರತದ ಉದಯವನ್ನು ಸಾರುವ ಸಂಕೇತವಾಗಿತ್ತು.

ಆಗಸ್ಟ್ 15ರಂದು ದೇಶದ ಪ್ರಧಾನ ಮಂತ್ರಿಯವರು ಕೆಂಪು ಕೋಟೆಯ ಬುರುಜಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವುದು ಮತ್ತು ಸರ್ಕಾರದ ಸಾಧನೆಗಳು ಹಾಗೂ ಮುಂದಿನ ದೃಷ್ಟಿಕೋನವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳುವುದು ಒಂದು ಪರಂಪರೆಯಾಗಿದೆ.

ಇದನ್ನೂ ಓದಿ: Independence Day: ನಾಳೆ ಬೆಳಗ್ಗೆ ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ ಪ್ರಧಾನಿ ಮೋದಿ

ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಪ್ರತಿಯೊಬ್ಬರಿಗೂ ನೆನಪಿಸುತ್ತವೆ.

ಕೆಂಪು ಕೋಟೆಯ ಇತಿಹಾಸ:

ಕೆಂಪು ಕೋಟೆಯ ಇತಿಹಾಸವು ಹಲವು ಶತಮಾನಗಳಷ್ಟು ಹಳೆಯದಾಗಿದೆ. ತಾಜ್ ಮಹಲ್ ನಿರ್ಮಿಸಿ ಪ್ರಸಿದ್ಧರಾಗಿದ್ದ ಮೊಘಲ್ ಚಕ್ರವರ್ತಿ ಶಹಜಹಾನ್ ಈ ಕೋಟೆಯನ್ನು ನಿರ್ಮಿಸಿದರು. 17ನೇ ಶತಮಾನದಲ್ಲಿ ಶಹಜಹಾನ್ ಶಕ್ತಿಯುತ ಮತ್ತು ಭವ್ಯವಾದ ಕೋಟೆಯನ್ನು ನಿರ್ಮಿಸಲು ಬಯಸಿದಾಗ ಇದನ್ನು ಕಟ್ಟಲಾಯಿತು. ಅದರ ಗೋಡೆಗಳಿಗೆ ಕೆಂಪು ಕಲ್ಲುಗಳನ್ನು ಬಳಸಲು ನಿರ್ಧರಿಸಿದರು. ಆದ್ದರಿಂದ ಇದನ್ನು ಕೆಂಪು ಕೋಟೆ ಎಂದು ಕರೆಯಲಾಯಿತು. ಇದರ ದೈತ್ಯಾಕಾರದ ಗೋಡೆಗಳನ್ನು ಕೇವಲ ರಕ್ಷಣೆಗಾಗಿ ಮಾತ್ರವಲ್ಲದೆ, ರಾಜನ ಅಧಿಕಾರ ಮತ್ತು ಶಕ್ತಿಯನ್ನು ಪ್ರದರ್ಶಿಸಲು ನಿರ್ಮಿಸಲಾಗಿತ್ತು.

ಕೆಂಪು ಕೋಟೆಯು ಮೊಘಲ್ ಚಕ್ರವರ್ತಿಗಳು ಮತ್ತು ಅವರ ಕುಟುಂಬಗಳಿಗೆ ರಾಜಮನೆತನದ ನಿವಾಸವಾಗಿಯೂ ಸೇವೆಯನ್ನು ಒದಗಿಸಿತ್ತು. ಕೋಟೆಯ ಸಂಕೀರ್ಣದೊಳಗೆ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲಾಗಿತ್ತು, ಅಲ್ಲಿ ರಾಜಕುಟುಂಬದವರು ವಿಶ್ರಾಂತಿ ಪಡೆಯಲು ಮತ್ತು ಮನರಂಜನೆ ಹೊಂದಲು ಅವಕಾಶವಿತ್ತು. ಜೊತೆಗೆ, ಕೋಟೆಯು ಭವ್ಯ ಸಮಾರಂಭಗಳು ಮತ್ತು ಪ್ರಮುಖ ಸಭೆಗಳಿಗೆ ವೇದಿಕೆಯಾಗಿತ್ತು.

ನಂತರ, ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ, ಕೆಂಪು ಕೋಟೆಯು ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಬಳಿಕ ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಸಂದರ್ಭಗಳನ್ನು ಆಚರಿಸಲು ಇದು ಅತ್ಯಂತ ವಿಶೇಷವಾದ ಸ್ಥಳವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ – Kannada News | Yash Responds to Criticism Over Bold Scenes in Toxic Movie Song Tabahi

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ‘ತಬಾಹಿ’ ಸಾಂಗ್ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಲ್ಲಿದೆ. ಹಾಡಿನಲ್ಲಿರುವ ಬೋಲ್ಡ್ ದೃಶ್ಯಗಳನ್ನು ನೋಡಿ ಕೆಲವರು ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಈ ಎಲ್ಲಾ ಚರ್ಚೆ ಹಾಗೂ ಟೀಕೆಗಳಿಗೆ ನಟ ಯಶ್ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತು ಅನೇಕರಿಗೆ ಅಚ್ಚರಿ ತಂದಿದೆ.

‘ಆಪ್​ ಕಿ ಅದಾಲತ್​’ನಲ್ಲಿ ಈ ಬಗ್ಗೆ ಅವರು, ‘ಅಶ್ಲೀಲತೆ ಇರುವುದು ತಪ್ಪು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾವು ಈ ಹಾಡಿನಲ್ಲಿ ಅಂತಹ ಯಾವುದೇ ಗೆರೆ ದಾಟಿಲ್ಲ, ನೀವು ಗಮನಿಸಿದ್ದರೆ ನಾನು ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ. ಪ್ರತಿಯೊಂದು ದೃಶ್ಯವನ್ನೂ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಿನಿಮಾ ಎನ್ನುವುದು ಸೃಷ್ಟಿಕರ್ತನ ಧ್ವನಿ. ಪ್ರತಿಯೊಂದು ದೃಶ್ಯ ಹಾಗೂ ಭಾವನೆಗಳಿಗೂ ಸಿನಿಮಾದಲ್ಲಿ ತನ್ನದೇ ಆದ ಮಹತ್ವ ಮತ್ತು ಉದ್ದೇಶವಿರುತ್ತದೆ. ಪ್ರೇಕ್ಷಕರು ಇಡೀ ಸಿನಿಮಾವನ್ನು ನೋಡಿದಾಗ ಈ ದೃಶ್ಯಗಳ ಅಸಲಿ ಉದ್ದೇಶ ಮತ್ತು ಭಾವನೆ ಅವರಿಗೆ ಖಂಡಿತ ಅರ್ಥವಾಗುತ್ತದೆ’ ಎಂದು ಯಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್

ಈ ಚಿತ್ರವನ್ನು ವಿಶೇಷವಾಗಿ ಇಂದಿನ ಯುವಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದಿದ್ದಾರೆ. ‘ಇಂದಿನ ಯುವಕರು ಹಿರಿಯರ ಜೊತೆ ನಡೆಸುವ ಸಂಭಾಷಣೆ, ಸಮಾಜದ ಹಳೆಯ ನಿಯಮಗಳ ಮೇಲೆ ಎತ್ತುವ ಪ್ರಶ್ನೆಗಳು ಹಾಗೂ ಅವರಲ್ಲಿರುವ ವಿಚಾರಗಳನ್ನು ಈ ಸಿನಿಮಾ ಪ್ರತಿನಿಧಿಸುತ್ತದೆ. ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಥೆಯನ್ನು ಹೆಣೆಯಲಾಗಿದೆ’ ಎಂದು ತಿಳಿಸುವ ಮೂಲಕ ಯಶ್, ಬೋಲ್ಡ್ ದೃಶ್ಯಗಳ ಕುರಿತು ವ್ಯಕ್ತವಾಗಿದ್ದ ಅಪಪ್ರಚಾರ ಮತ್ತು ಟೀಕೆಗಳಿಗೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version