ತಮಿಳುನಾಡು ಚುನಾವಣೆ: ‘ಧುರಂಧರ್’ ಪ್ರದರ್ಶನಕ್ಕೆ ಇಲ್ಲ ತಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತಮಿಳುನಾಡು ಚುನಾವಣೆ: ‘ಧುರಂಧರ್’ ಪ್ರದರ್ಶನಕ್ಕೆ ಇಲ್ಲ ತಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯವು ಆರಂಭಿಕ ಹಂತದಲ್ಲೇ ವಜಾಗೊಳಿಸುವ ಮೂಲಕ ಚಿತ್ರತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.

ನ್ಯಾಯಮೂರ್ತಿ ಸಂಜಯ್ ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ತಮಿಳುನಾಡು ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಚಿತ್ರಮಂದಿರ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂಬ ಮಧ್ಯಂತರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಅರ್ಜಿದಾರರ ವಾದವೇನಿತ್ತು? ಮಧುರೈ ನಿವಾಸಿಯೊಬ್ಬರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ರಾಜಕೀಯ ಪ್ರೇರಿತ ಚಿತ್ರಗಳ ಪ್ರದರ್ಶನವು ಮತದಾರರ ಮೇಲೆ ಪ್ರಭಾವ ಬೀರಬಹುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಕ್ಕೆ ಈ ಚಿತ್ರದ ಪ್ರದರ್ಶನ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ, ಈ ವಾದಗಳನ್ನು ಒಪ್ಪದ ಹೈಕೋರ್ಟ್, ಚಿತ್ರದ ಪ್ರದರ್ಶನ ನಿಲ್ಲಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ‘ಧುರಂಧರ್ 2’ ಸಿನಿಮಾ ಎಂದಿನಂತೆ ಪ್ರದರ್ಶನ ಮುಂದುವರಿಸಲಿದೆ. ಈ ಸಿನಿಮಾದಲ್ಲಿ ಬಿಜೆಪಿ ಪರವಾದ ಪ್ರೊಪಗಾಂಡ ಇದೆ ಎಂದು ಅನೇಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಯಶಸ್ಸು: ಸಂಜಯ್ ದತ್ ಬಗ್ಗೆ ಮೆಚ್ಚುಗೆಯ ಮಾತಾಡಿದ ರಾಘವ್ ಚಡ್ಡಾ

ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. 2026ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾದ ಕಥಾವಸ್ತು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Update: ಬೆಂಗಳೂರಲ್ಲಿ ಅಬ್ಬರಿಸಿದ ವರುಣ; ರಾಜ್ಯದ ಎಲ್ಲೆಲ್ಲಿ ನಾಳೆ ಮಳೆ?

ಬೆಂಗಳೂರು, ಏಪ್ರಿಲ್​​ 10: ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ವರುಣ ಅಬ್ಬರಿಸಿದ್ದು, ಮೆಜೆಸ್ಟಿಕ್, ರಾಜಾಜಿನಗರ, ವಸಂತನಗರ, ಕಲಾಸಿಪಾಳ್ಯ, ಟೌನ್​ಹಾಲ್, ವಿಜಯನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​​ ಉಂಟಾಗಿದ್ದು ಮಂದಗತಿಯಲ್ಲಿ ವಾಹನಗಳು ಸಾಗಿವೆ. ರಾಜ್ಯದ ಹಲವೆಡೆ ಇನ್ನೂ ಕೆಲ ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ

ಇನ್ನು ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ (Hot and Humid) ಹೆಚ್ಚಿರಲಿದೆ. ಹವಾಮಾನವು ಸಾಮಾನ್ಯವಾಗಿ ಒಣಗಿದ್ದರೂ, ಸೆಖೆಯ ಅನುಭವ ಹೆಚ್ಚಾಗಿರಲಿದೆ. ಹೀಗಾಗಿ ಏಪ್ರಿಲ್​​ 10ರಿಂದ  12ರ ವರೆಗೆ ಈ ಭಾಗದಲ್ಲಿ ಐಎಂಡಿ ಯೆಲ್ಲೋ ಅಲರ್ಟ್​​ ಘೋಷಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಉತ್ತರ ಒಳನಾಡಿನಲ್ಲಿ ಕೆಂಡದಂಥಾ ಬಿಸಿಲು, ದಕ್ಷಿಣದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ದಕ್ಷಿಣ ಒಳನಾಡು ಭಾಗದ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಕೆಲವು ಭಾಗಗಳಲ್ಲಿ ಭಾಗಶಃ ಮೋಡದಿಂದ ಆಕಾಶ ಕೂಡಿರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವಾಮಾನದ ಜೊತೆಗೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ನಗರದ ಗರಿಷ್ಠ ಉಷ್ಣಾಂಷ 35 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ಉಷ್ಣಾಂಷ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 6-13 ಕಿಲೋ ಮೀಟರ್​​ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ice Cream Health Risks: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ತಾಪಮಾನ ಏರುತ್ತಿದ್ದಂತೆ, ಸೆಖೆಯಿಂದ ಪಾರಾಗಲು ಜನ ಐಸ್‌ಕ್ರೀಮ್ (Ice Cream) ಮೊರೆ ಹೋಗುತ್ತಿದ್ದಾರೆ. ಆದರೆ, ದೇಹಕ್ಕೆ ಕ್ಷಣಕಾಲ ತಂಪು ನೀಡುವ ಈ ಆಹಾರ ಗಮನಕ್ಕೆ ಬಾರದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಅದು ನಿಜ. ಬೇಸಿಗೆಯಲ್ಲಿ ಆಹಾರವು ಕಲುಷಿತಗೊಳ್ಳುವ ಅಪಾಯ ಹೆಚ್ಚಾಗಿರುವುದರಿಂದ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ವೇಗವಾಗಿರುತ್ತದೆ. ಅದರಲ್ಲಿಯೂ ಫ್ರೋಜನ್ ಉತ್ಪನ್ನಗಳು ಸುರಕ್ಷಿತವಲ್ಲ. ಘನೀಕರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆಯೇ ಹೊರತು ಎಲ್ಲಾ ಹಾನಿಕಾರಕ ಜೀವಿಗಳನ್ನು ನಾಶಪಡಿಸುವುದಿಲ್ಲ. ಹಾಗಾದರೆ ಐಸ್‌ಕ್ರೀಮ್ ಪದೇ ಪದೇ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಆದ ಡಾ. ಸಂದೀಪ್ ಎಸ್ ರೆಡ್ಡಿ (Sandeep S Reddy) ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಡಾ. ಸಂದೀಪ್ ಎಸ್ ರೆಡ್ಡಿ ಅವರು ಹೇಳುವ ಪ್ರಕಾರ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ, ಇ.ಕೋಲಿ ಮತ್ತು ಸ್ಟ್ಯಾಫಿಲೋಕೊಕಸ್ ಆರಿಯಸ್‌ನಂತಹ ರೋಗಕಾರಕಗಳು ಡೈರಿ ಮತ್ತು ಶೈತ್ಯೀಕರಿಸಿದ ಸಿಹಿಪದಾರ್ಥಗಳಿಗೆ ಸಂಬಂಧಿಸಿದ ಆಹಾರಗಳಲ್ಲಿ ಸೇರಿಕೊಂಡಿದ್ದು ಸೋಂಕು, ವಾಂತಿ, ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇವು ಹೆಚ್ಚಾಗಿ ಕಂಡುಬರಬಹುದು. ಸೂಕ್ಷ್ಮಜೀವಿಗಳ ಅಪಾಯದ ಹೊರತಾಗಿ, ಐಸ್‌ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸಂಸ್ಕರಿಸಿದ ಸಕ್ಕರೆ ಅಧಿಕವಾಗಿರುತ್ತದೆ, ಇದು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಹೃದಯದ ಮೇಲಿನ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ತಡೆಗಟ್ಟುವಿಕೆಯು ಸುರಕ್ಷಿತ ಉತ್ಪನ್ನಗಳ ಆಯ್ಕೆಯಿಂದ ಪ್ರಾರಂಭವಾಗಬೇಕು. ಸರಿಯಾದ ಶೈತ್ಯೀಕರಣವನ್ನು ನಿರ್ವಹಿಸುವ ವಿಶ್ವಾಸಾರ್ಹ ಮಳಿಗೆಗಳಿಂದ ಐಸ್‌ಕ್ರೀಮ್ ಖರೀದಿಸಿ. ಭಾಗಶಃ ಕರಗಿದ ಅಥವಾ ಮತ್ತೆ ಹೆಪ್ಪುಗಟ್ಟಿದಂತೆ ಕಾಣುವ ವಸ್ತುಗಳ ಸೇವನೆ ಮಾಡುವುದನ್ನು ತಪ್ಪಿಸಿ ಮತ್ತು ಸ್ವಚ್ಛ ಜಾಗದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ. ಕೈಗಳ ಸ್ವಚ್ಛತೆ, ಬಡಿಸುವ ಉಪಕರಣಗಳು ಸ್ವಚ್ಛವಾಗಿರುವುದು ಮತ್ತು ಯಂತ್ರಗಳ ಸರಿಯಾದ ನೈರ್ಮಲ್ಯವು ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡಲು ಅತ್ಯಗತ್ಯ. ಮನೆಯಲ್ಲಿ, ಐಸ್‌ಕ್ರೀಮ್ ಅನ್ನು ಸರಿಯಾದ ಫ್ರೀಜರ್ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸುವ ಸಮಯದಲ್ಲಿ ದೀರ್ಘಕಾಲದವರೆಗೆ ಹೊರಗೆ ಇಡಬಾರದು. ಒಂದು ವೇಳೆ ಉತ್ಪನ್ನವು ಕರಗಿ ಮತ್ತೆ ಹೆಪ್ಪುಗಟ್ಟಿದ್ದರೆ, ಅದನ್ನು ಸೇವಿಸುವ ಬದಲು ಎಸೆಯುವುದು ಒಳ್ಳೆಯದು. ಬೇಸಿಗೆಯ ತಿಂಗಳುಗಳಲ್ಲಿ ಆಹಾರದಿಂದ ಹರಡುವ ಸೋಂಕುಗಳಿಗೆ ಸುಲಭವಾಗಿ ಒಳಗಾಗುವ ಮಕ್ಕಳ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು.

ಇದನ್ನೂ ಓದಿ: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್

ಆರಂಭಿಕ ಆರೈಕೆ ಏಕೆ ಮುಖ್ಯ?

ರೋಗಲಕ್ಷಣಗಳು ಪ್ರಾರಂಭವಾದಾಗ ಸ್ವಯಂ- ಮದ್ದನ್ನು ಮಾಡಬಾರದು. ನಿರಂತರ ವಾಂತಿ, ಅತಿಸಾರ, ಜ್ವರ, ಹೊಟ್ಟೆ ನೋವು, ಮಲದಲ್ಲಿ ರಕ್ತ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಗಮನಕ್ಕೆ ತರಬೇಕು. ಚಿಕಿತ್ಸೆಯಲ್ಲಿ ವಿಳಂಬ ಮಾಡುವುದರಿಂದ ಗುಣಪಡಿಸಬಹುದಾದ ಸೋಂಕು ಉಲ್ಬಣಗೊಳ್ಳಬಹುದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಇದು ಅಪಾಯಕಾರಿಯಾಗಬಹುದು. ಆರಂಭಿಕ ತಪಾಸಣೆಯು ವೈದ್ಯರಿಗೆ ಅದು ಆಹಾರದಲ್ಲಿ ಸೇರಿಕೊಂಡ ವಿಷವೋ (Food Poisoning), ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಆಗಿದೆಯೋ ಅಥವಾ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವ ಇತರ ಸ್ಥಿತಿಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸಮಯೋಚಿತ ವೈದ್ಯಕೀಯ ಆರೈಕೆಯು ಗಂಭೀರ ಸಮಸ್ಯೆಗಳನ್ನು ಮತ್ತು ಅನಗತ್ಯ ಆಸ್ಪತ್ರೆ ದಾಖಲಾಗುವುದನ್ನು ತಡೆಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲಂಗಾಣ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; 1 ಕೋಟಿ ಗಿಳಿ ಹಸಿರು ಸೀರೆ ಆರ್ಡರ್ ಮಾಡಿದ ಸಿಎಂ

ಹೈದರಾಬಾದ್, ಏಪ್ರಿಲ್ 10: ತೆಲಂಗಾಣ ಸರ್ಕಾರವು (Telangana Government) ಈ ವರ್ಷ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸುತ್ತಿದೆ. ತೆಲಂಗಾಣ ಸರ್ಕಾರವು ಹಿಂದಿನ ಬಾರಿ ವಿತರಿಸಲಾದ ನೀಲಿ ಸೀರೆಗಳ ಬದಲು ಗಿಳಿ ಹಸಿರು ಸೀರೆಗೆ ಕೆಂಪು ಜರಿ ಇರುವ ಸೀರೆಗಳನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ನವೀಕರಿಸಿದ ವಿನ್ಯಾಸಗಳನ್ನು ಪರಿಚಯಿಸಲು ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರ 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳನ್ನು ಉತ್ಪಾದಿಸುವ ಆದೇಶವನ್ನು ಟೆಸ್ಕೊಗೆ ನೀಡಿದೆ. ಕಳೆದ ವರ್ಷ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಂದು ನವೆಂಬರ್ 19ರಂದು ಸರ್ಕಾರ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಿತ್ತು. ಪ್ರಸ್ತುತ ಸರ್ಕಾರ ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಲು ಮತ್ತು ಈ ವರ್ಷ ಅದೇ ದಿನಾಂಕದಂದು ಮತ್ತೆ ಸೀರೆಗಳನ್ನು ವಿತರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಒಂದೇ ಬಣ್ಣವನ್ನು ಕಾಯ್ದುಕೊಳ್ಳುವ ಬದಲು ಪ್ರತಿ ವರ್ಷ ಬೇರೆ ಬೇರೆ ವಿನ್ಯಾಸ ಮತ್ತು ಬಣ್ಣದ ಸೀರೆಗಳನ್ನು ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಈ ಬಾರಿ ಅಧಿಕಾರಿಗಳು ಗಿಳಿ ಹಸಿರು ಬಣ್ಣದ ಸೀರೆಯನ್ನು ನೀಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿಯಂದು ಈ ಸೀರೆ ವಿತರಣಾ ಯೋಜನೆಯನ್ನು ತಂದಿತು. ಇದರ ಭಾಗವಾಗಿ, ಕಳೆದ ವರ್ಷ ರಾಜ್ಯದಲ್ಲಿ ಸುಮಾರು 86 ಲಕ್ಷ ಜನರಿಗೆ ಸೀರೆಗಳನ್ನು ವಿತರಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಸೀರೆಗಳನ್ನು ಏಕಕಾಲದಲ್ಲಿ ವಿತರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ನವೆಂಬರ್‌ನಲ್ಲಿ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಧೋನಿ ಫ್ಯಾನ್ಸ್​ಗೆ ಸಿಹಿ ಸುದ್ದಿ; ಕಂಬ್ಯಾಕ್​ಗೆ ದಿನಾಂಕ ನಿಗದಿ

Source link

ಗ್ಯಾಸ್ ಸಮಸ್ಯೆಯಿಂದಾಗಿ ಸ್ವಾವಲಂಬನೆ ಹೆಜ್ಜೆ: ವಿನೂತನ ತಂತ್ರಜ್ಞಾನದ ವಿದ್ಯುತ್ ಸ್ಟೌ ಪರಿಚಯಿಸಿದ ಜೋಶಿ

ನವದೆಹಲಿ, (ಏಪ್ರಿಲ್ 10): ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ “ವಿದ್ಯುತ್ ಸ್ಟೌ” (Electric Stove)  ಅನ್ನು ಪರಿಚಯಿಸಿ ಅದರ ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದ್ದು, ಎಎಲ್​ಪಿಜೆ ಗ್ಯಾಸ್ (LPG) ಪರ್ಯಾಯವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಸಲಹೆಯಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದೆ. ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ವಿವಿಧ ಮಾದರಿಗಳಲ್ಲಿ ಈ ವಿನೂತನ ವಿದ್ಯುತ್ ಸ್ಟೌ ತಯಾರಿಸಿ ಪೂರೈಸಬೇಕಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು LPG ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ “ವಿದ್ಯುತ್ ಸ್ಟೌ” ಅನ್ನು ಪರಿಚಯಿಸಿದ್ದಾರೆ. ಗ್ಯಾಸ್ ಸ್ಟೌ ರೀತಿಯೇ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ನೋಡಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!

ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತಿಯರಿಗೆ ಇದೀಗ ಎಲ್ಪಿಜಿಯಂತೆ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಹೋಟೆಲ್, ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಇಂಧನ ಮೂಲದ ಒಲೆಯಾಗಿ ಕಾಣಿಸುತ್ತಿದೆ. ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಸಾಕಾರಕ್ಕೆ ಮತ್ತೊಂದು ಗರಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಏನಿದರ ವಿಶೇಷತೆ?

ವಿದ್ಯುತ್ ಚಾಲಿತ ಈ ಸ್ಟೌವ್ ಅಲ್ಲಿ LPG ಇಲ್ಲದೆಯೇ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತದೆ. ಹೆಚ್ಚು ಶಾಖವೂ ಇರುತ್ತದೆ. ಮಾತ್ರವಲ್ಲದೆ, ಕಾರ್ಬನ್ ಸಹ ಹೊರ ಸೂಸುವುದಿಲ್ಲ. ನಿಜವಾಗಿ ನಾನು ಸಹ ಈ ಹೊಸ ತಂತ್ರಜ್ಞಾನದಿಂದ ಪ್ರಭಾವಿತನಾಗಿದ್ದೇನೆ. ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್ಪಿಜಿ ರಹಿತ, ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ದೇಶದೊಳಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದು ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ ಕರೆ ಕೊಟ್ಟಿದ್ದಾರೆ.

ಸೂರ್ಯ ಘರ್ ಜತೆ ಸಂಯೋಜನೆ ಅಗತ್ಯ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜತೆ ಈ ಸ್ಟೌ ಸಂಯೋಜಿಸಿದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ದೇಶಾದ್ಯಂತ ಒಂದು ಮಹತ್ತರ ಬದಲಾವಣೆ ತರಬಹುದು. ಇನ್ನು, Lpg ಗೆ ಪರ್ಯಾಯವಾಗಿ ದೇಶದಲ್ಲಿ ಮತ್ತೊಂದು ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆದಿದೆ. LPG ಕೊರತೆ ಮತ್ತು ಬೆಲೆ ಏರಿಕೆ ಪರಿಣಾಮ ಹೈಡ್ರೋಜನ್ ಅಡುಗೆ ಘಟಕದ ಬಗ್ಗೆಯೂ ವ್ಯಾಪಕ ಚಿಂತನೆ ನಡೆದಿದೆ. ನೀರಿನಿಂದ ಅನಿಲ ಉತ್ಪಾದಿಸುವ ವಿಧಾನ ಇದಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವನತಾರಾದಿಂದ ವಿಶ್ವದ ಮೊದಲ ಜಾಗತಿಕ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯ

ಜಾಮನಗರ್, ಏಪ್ರಿಲ್ 10: ರಿಲಾಯನ್ಸ್ ಇಂಡಸ್ಟ್ರೀಸ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಅವರು ವನತಾರಾ ಯೂನಿವರ್ಸಿಟಿಗೆ ಚಾಲನೆ ನೀಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವನತಾರಾದಿಂದ ಶುರುವಾಗಿರುವ ಇದು ವಿಶ್ವದ ಮೊದಲ ಜಾಗತಿಕ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯವಾಗಿದೆ.

ವನ್​ತಾರಾ ವಿಶ್ವವಿದ್ಯಾಲಯವು ಪ್ರಾಣಿ ಕಲ್ಯಾಣ, ವೈಜ್ಞಾನಿಕ ಪ್ರಗತಿ ಮತ್ತು ವನ್ಯಜೀವಿ ಸಂರಕ್ಷಣೆಯ ಭವಿಷ್ಯದಲ್ಲಿ ಬೇರೂರಿದೆ. ಪಶುವೈದ್ಯಕೀಯ ಔಷಧ, ಸಂರಕ್ಷಣೆ ಮತ್ತು ವನ್ಯಜೀವಿ ಆರೈಕೆಯಲ್ಲಿ ಭವಿಷ್ಯದ ನಾಯಕರನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಇದರ ಪಠ್ಯಕ್ರಮವು ಭಾರತದ ನಿರಂತರ ಜ್ಞಾನ ಸಂಪ್ರದಾಯಗಳನ್ನು ಬಳಸಿಕೊಂಡು ಉದ್ದೇಶ-ನೇತೃತ್ವದ ಮತ್ತು ಭವಿಷ್ಯವನ್ನು ಎದುರಿಸುವ ಶಿಕ್ಷಣ ಮಾದರಿಯನ್ನು ರೂಪಿಸುತ್ತದೆ.

“ಸಂರಕ್ಷಣೆಯ ಭವಿಷ್ಯವು ನಾವು ಮನಸ್ಸುಗಳು ಮತ್ತು ಸಂಸ್ಥೆಗಳನ್ನು ಸಹಾನುಭೂತಿ, ಜ್ಞಾನ ಮತ್ತು ಕೌಶಲ್ಯದಿಂದ ಜೀವನಕ್ಕೆ ಸೇವೆ ಸಲ್ಲಿಸಲು ಹೇಗೆ ಸಿದ್ಧಪಡಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವನ್​ತಾರಾ ವಿಶ್ವವಿದ್ಯಾಲಯವು ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ವೀಕ್ಷಿಸುವ ಮತ್ತು ಅವುಗಳ ಆರೈಕೆಯಲ್ಲಿ ಹೆಚ್ಚಿನ ಸಾಮರ್ಥ್ಯದ ಅಗತ್ಯವನ್ನು ಗುರುತಿಸುವ ಆಳವಾದ ವೈಯಕ್ತಿಕ ಪ್ರಯಾಣದಿಂದ ರೂಪುಗೊಂಡಿದೆ. ಪ್ರಾಚೀನ ನಳಂದ ವಿಶ್ವವಿದ್ಯಾಲಯದ ನೀತಿ ಮತ್ತು “ನೋ ಭದ್ರಃ ಕ್ರತವೋ ಯಂತು ವಿಶ್ವತಃ” ಎಂಬ ಮನೋಭಾವದಿಂದ ಪ್ರೇರಿತರಾಗಿ, ವಿಶ್ವವಿದ್ಯಾಲಯವು ಪ್ರತಿ ಜೀವವನ್ನು ರಕ್ಷಿಸಲು ಬದ್ಧವಾಗಿರುವ ಹೊಸ ಪೀಳಿಗೆಯನ್ನು ಬೆಳೆಸಲು ಪ್ರಯತ್ನಿಸುತ್ತದೆ, ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ” ಎಂದು ಅನಂತ್ ಅಂಬಾನಿ ಹೇಳಿದರು.

ಅಪ್ಪ ಮುಕೇಶ್ ಅಂಬಾನಿ ಜೊತೆ ಅನಂತ್ ಅಂಬಾನಿ

ಈ ನೀತಿಯನ್ನು ಆಚರಣೆಯ ಸಂದರ್ಭದಲ್ಲಿ ಪ್ರತಿಬಿಂಬಿಸುತ್ತಾ, ಎರಡು ಬಿಜೋಲಿಯಾ ಮರಳುಗಲ್ಲುಗಳನ್ನು ಅಡಿಪಾಯ ಸ್ಥಳದ ವಿನ್ಯಾಸದಲ್ಲಿ ಸೇರಿಸಲಾಯಿತು. ಪ್ರಾಚೀನ ವಿಂಧ್ಯ ರಚನೆಯಿಂದ, ಇಂದಿನ ಬಿಹಾರದಲ್ಲಿರುವ ಪ್ರಾಚೀನ ನಳಂದದೊಂದಿಗೆ ಸಂಬಂಧಿಸಿದ ಅದೇ ಭೌಗೋಳಿಕ ಅಡಿಪಾಯದಿಂದ ತೆಗೆದುಕೊಳ್ಳಲ್ಪಟ್ಟ ಈ ಕಲ್ಲುಗಳು ಭಾರತದ ಜ್ಞಾನ ಮತ್ತು ಕಲಿಕೆಯ ನಿರಂತರ ಪರಂಪರೆಯನ್ನು ಸಂಕೇತಿಸುತ್ತವೆ.

ಇದನ್ನೂ ಓದಿ: ಪ್ರಸಿದ್ಧ ರಾಜರಾಜೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನಂತ್ ಅಂಬಾನಿಯಿಂದ 12 ಕೋಟಿ ರೂ; ಶಿಥಿಲಗೊಂಡ ಗೋಪುರದ ಪುನಃಸ್ಥಾಪನೆಗೆ ನೆರವು

ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಲಾದ ಅಡಿಪಾಯ ಸಮಾರಂಭವು ಅನಂತ್ ಅಂಬಾನಿಯವರ ಶಿಕ್ಷಕರು ಮತ್ತು ಮಾರ್ಗದರ್ಶಕರು ಸೇರಿದಂತೆ ಶೈಕ್ಷಣಿಕ, ವಿಜ್ಞಾನ, ಸಂರಕ್ಷಣೆ ಮತ್ತು ಸಾರ್ವಜನಿಕ ಜೀವನದ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು. ಈ ಕಾರ್ಯಕ್ರಮದ ಕೇಂದ್ರ ಅಂಶವೆಂದರೆ ಅಡಿಪಾಯ ಹಾಕುವ ಸಾಂಕೇತಿಕ ಕ್ರಿಯೆಯಾಗಿ ಮಣ್ಣು, ನೀರು ಮತ್ತು ಕಲ್ಲುಗಳನ್ನು ಧಾರ್ಮಿಕವಾಗಿ ಇರಿಸುವುದು. ಭಾರತದಾದ್ಯಂತ ಜೀವವೈವಿಧ್ಯ-ಸಮೃದ್ಧ ಭೂದೃಶ್ಯಗಳಿಂದ ಸಂಗ್ರಹಿಸಲಾದ ಈ ಅಂಶಗಳನ್ನು ಬಳಸಿಕೊಂಡು, ಹುಲ್ಲುಗಾವಲುಗಳು, ಕಾಡುಗಳು, ಜೌಗು ಪ್ರದೇಶಗಳು, ಶುಷ್ಕ ಪರಿಸರ ವ್ಯವಸ್ಥೆಗಳು ಮತ್ತು ಹಿಮಾಲಯ ಮತ್ತು ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ವ್ಯಾಪಿಸಿರುವ ಇತರ ಎತ್ತರದ ಆವಾಸಸ್ಥಾನಗಳಿಂದ ಸಂಗ್ರಹಿಸಲಾಗಿದೆ. ಇದು ಭಾರತದ ಪರಿಸರ ಶ್ರೀಮಂತಿಕೆ ಮತ್ತು ರಾಷ್ಟ್ರದ ನೈಸರ್ಗಿಕ ಪರಂಪರೆಯ ಅಡಿಪಾಯದ ಮೇಲೆ ವಿಶ್ವವಿದ್ಯಾಲಯವನ್ನು ನಿರ್ಮಿಸುವ ದೃಷ್ಟಿಕೋನವನ್ನು ಸಂಕೇತಿಸುತ್ತದೆ.

ವನ್​ತಾರಾ ವಿಶ್ವವಿದ್ಯಾಲಯವು ನೈಜ-ಪ್ರಪಂಚದ ಸಂರಕ್ಷಣಾ ಅಭ್ಯಾಸಗಳಲ್ಲಿ ಬೇರೂರಿರುವ ಒಂದೇ ಶೈಕ್ಷಣಿಕ ಪರಿಸರ ವ್ಯವಸ್ಥೆಯೊಳಗೆ ವೈವಿಧ್ಯಮಯ ವಿಭಾಗಗಳನ್ನು ಒಂದುಗೂಡಿಸುತ್ತದೆ. ವಂಟಾರ ಅವರ ನೆಲದ ಪರಿಣತಿಯನ್ನು ಬಳಸಿಕೊಂಡು, ವಿಶ್ವವಿದ್ಯಾನಿಲಯವು ಕ್ಷೇತ್ರ ಜ್ಞಾನವನ್ನು ಶೈಕ್ಷಣಿಕ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಮತ್ತು ಜಾಗತಿಕವಾಗಿ ಸಂಬಂಧಿತ ಚೌಕಟ್ಟುಗಳಾಗಿ ಭಾಷಾಂತರಿಸುತ್ತದೆ. ಸಹಾನುಭೂತಿ, ವಿಜ್ಞಾನ ಮತ್ತು ಸಂರಕ್ಷಣೆಯನ್ನು ಮಿಶ್ರಣ ಮಾಡುವ ಮೂಲಕ, ಇದು ವನ್ಯಜೀವಿ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದಲ್ಲಿ ಸಂಕೀರ್ಣ ಮತ್ತು ವಿಕಸನಗೊಳ್ಳುತ್ತಿರುವ ಸವಾಲುಗಳನ್ನು ಎದುರಿಸಲು ವೃತ್ತಿಪರರನ್ನು ರೂಪಿಸುತ್ತದೆ.

ವನತಾರಾ ವಿವಿ ಉದ್ಘಾಟನೆ ಸಂದರ್ಭದಲ್ಲಿ…

ವಿಶ್ವವಿದ್ಯಾನಿಲಯವು ಪದವಿಪೂರ್ವ, ಸ್ನಾತಕೋತ್ತರ, ಫೆಲೋಶಿಪ್ ಮತ್ತು ವಿಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತದೆ. ಇವುಗಳಲ್ಲಿ ವನ್ಯಜೀವಿ ಔಷಧ ಮತ್ತು ಶಸ್ತ್ರಚಿಕಿತ್ಸೆ, ಪೋಷಣೆ, ನಡವಳಿಕೆಯ ವಿಜ್ಞಾನಗಳು, ತಳಿಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ, ಒಂದು ಆರೋಗ್ಯ, ಸಂರಕ್ಷಣಾ ನೀತಿ ಮತ್ತು ನೈಸರ್ಗಿಕ ಪ್ರಾಣಿ ಆರೈಕೆ ಪರಿಸರ ವಿನ್ಯಾಸ ಸೇರಿವೆ. ವಂಟಾರಾದ ಕಾರ್ಯಾಚರಣೆಯ ಸಾಮರ್ಥ್ಯಗಳೊಂದಿಗೆ ಹೊಂದಿಕೊಂಡ ವಿಶೇಷ ಕಾಲೇಜುಗಳಾಗಿ ಸಂಘಟಿಸಲಾದ ಈ ವಿಶ್ವವಿದ್ಯಾನಿಲಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಂಚಿನಲ್ಲಿರುವ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿದ್ಯಾರ್ಥಿವೇತನಗಳನ್ನು ಸಹ ನೀಡುತ್ತದೆ.

ಇದನ್ನೂ ಓದಿ: ವನತಾರಾ ಸಂಸ್ಥಾಪನಾ ದಿನ: ಪ್ರಧಾನಿಗಳಿಂದ ಉದ್ಘಾಟನೆಯಾಗಿ ಒಂದು ವರ್ಷ; ಹಲವು ಪ್ರಾಣಿಗಳ ಜೀವ ಉಳಿಸಿ ಕಾಡಿಗೆ ಮರಳಿಸಿದ ಸಾಧನೆ

ವನತಾರಾ ವಿಶ್ವವಿದ್ಯಾಲಯವು ಮುಂದುವರಿದ ಶೈಕ್ಷಣಿಕ ಮತ್ತು ವೈದ್ಯಕೀಯ ಮೂಲಸೌಕರ್ಯ, ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ವಸತಿ ಕ್ಯಾಂಪಸ್‌ನಿಂದ ಬೆಂಬಲಿತವಾಗಿದೆ. ಇದು ಪ್ರಾಣಿ ಕಲ್ಯಾಣ ಮತ್ತು ಮುಂದುವರಿದ ಸಂರಕ್ಷಣಾ ಅಭ್ಯಾಸವನ್ನು ಬಲಪಡಿಸಲು ಕ್ರಿಯಾ-ಆಧಾರಿತ ಸಂಶೋಧನೆಯ ಮೇಲೆ ಕೇಂದ್ರೀಕರಿಸುತ್ತದೆ. ಶೈಕ್ಷಣಿಕ ಮಾದರಿಯು ಸಿತು ಮತ್ತು ಎಕ್ಸ್ ಸಿತು ಸಂರಕ್ಷಣೆಯಲ್ಲಿ ಸಂಯೋಜಿಸುತ್ತದೆ, ನೈಸರ್ಗಿಕ ಆವಾಸಸ್ಥಾನಗಳನ್ನು ವೈಜ್ಞಾನಿಕ ಆರೈಕೆ ಮತ್ತು ದೀರ್ಘಕಾಲೀನ ವನ್ಯಜೀವಿ ಕಲ್ಯಾಣ ಮತ್ತು ನಿರ್ವಹಣೆಯೊಂದಿಗೆ ಸಂಪರ್ಕಿಸುತ್ತದೆ.

ವನತಾರಾ ವನ್ಯಜೀವಿ ವಿವಿಗೆ ಚಾಲನೆ

ಸಂರಕ್ಷಣೆಯ ಭವಿಷ್ಯವು ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಮಾನವ ಆತ್ಮಸಾಕ್ಷಿಯಲ್ಲಿ ಹಾಗೂ ಕಾಡುಗಳಲ್ಲಿ ನಿರ್ಮಿಸಲ್ಪಡುತ್ತದೆ ಎಂದು ಗುರುತಿಸಿ, ವಿಶ್ವವಿದ್ಯಾನಿಲಯವು ವನ್ಯಜೀವಿ ಪಶುವೈದ್ಯಕೀಯ ವಿಜ್ಞಾನ ಮತ್ತು ಸಂರಕ್ಷಣಾ ಶಿಕ್ಷಣವನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಇದು ಏಕಕಾಲದಲ್ಲಿ ವನ್ಯಜೀವಿ ಆರೋಗ್ಯ, ಪ್ರಾಣಿಗಳ ಆರೈಕೆ ಪರಿಸರ ವಿನ್ಯಾಸ ಮತ್ತು ಸಂರಕ್ಷಣೆಯಲ್ಲಿ ಜ್ಞಾನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತದೆ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ದೀರ್ಘಕಾಲೀನ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಅಡಿಪಾಯ ಸಮಾರಂಭವು ಸಹಾನುಭೂತಿಯ ಸಂರಕ್ಷಣಾ ಶಿಕ್ಷಣವನ್ನು ಮುನ್ನಡೆಸಲು ವಿಶಾಲವಾದ ರಾಷ್ಟ್ರೀಯ ಪ್ರಯತ್ನದ ಆರಂಭವನ್ನು ಗುರುತಿಸಿತು. ಇದರಲ್ಲಿ ‘ವನ್​ತಾರಾ ಯೂನಿವರ್ಸಿಟಿ ಫೌಂಡಿಂಗ್ ಫೆಲೋಸ್’ ಮತ್ತು ‘ಎವ್ರಿ ಲೈಫ್ ಮ್ಯಾಟರ್ಸ್’ ಸ್ಕಾಲರ್​ಶಿಪ್​ಗಳನ್ನು ಘೋಷಿಸಲಾಗಿದೆ. ಜೊತೆಗೆ ಜ್ಞಾನವನ್ನು ಪ್ರಗತಿಗೆ ಮಾತ್ರವಲ್ಲದೆ ರಕ್ಷಣೆಗಾಗಿಯೂ ಬಳಸುವ ಕರೆಯನ್ನು ಇದರಲ್ಲಿ ಒಳಗೊಂಡಿದೆ.

ಅನಂತ್ ಅಂಬಾನಿ

ಅದರ ಘೋಷಿತ ದೃಷ್ಟಿಕೋನದಲ್ಲಿ, ವನತಾರಾ ವಿಶ್ವವಿದ್ಯಾಲಯವು ಕೇವಲ ಶೈಕ್ಷಣಿಕ ವೇದಿಕೆ ಮಾತ್ರವೇ ಅಲ್ಲ, ಅದಕ್ಕೂ ಮಿಗಿಲಾದುದಾಗಿದೆ. ಇದು ವನ್ಯಜೀವಿಗಳಿಗೆ ಮೆಚ್ಚುಗೆ ಮಾತ್ರವಲ್ಲ, ವ್ಯವಸ್ಥೆ, ಜ್ಞಾನ, ನುರಿತ ಕೈಗಳು ಸಹ ಬೇಕಾಗುತ್ತವೆ ಎಂಬ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ವನತಾರಾ ಬಗ್ಗೆ

ವನತಾರಾ ಗುಜರಾತಿನ ಜಾಮ್‌ನಗರದಲ್ಲಿ ವನ್ಯಜೀವಿ ರಕ್ಷಣೆ, ಪುನರ್ವಸತಿ, ಆರೋಗ್ಯ ರಕ್ಷಣೆ ಮತ್ತು ಸಂರಕ್ಷಣಾ ಕಾರ್ಯಗಳನ್ನು ಮಾಡುತ್ತಿದೆ. ಭಾರತದಲ್ಲಿ. ಅಡ್ವಾನ್ಸ್ಟ್ ವೆಟರಿನರಿ ಮೆಡಿಸಿನ್, ಆರೈಕೆ, ಅಪ್ಲೈಡ್ ಸೈನ್ಸ್ ಮತ್ತು ಸಂರಕ್ಷಣಾ ಯೋಜನೆಯನ್ನು ಪ್ರಮಾಣದಲ್ಲಿ ಸಂಯೋಜಿಸುವ ಮೂಲಕ, ವನತಾರಾವು ಎಲ್ಲಾ ಜಾತಿಯ ಪ್ರಾಣಿಗಳಿಗೆ ವಿಶೇಷ ಚಿಕಿತ್ಸೆ, ಚೇತರಿಕೆ ಮತ್ತು ದೀರ್ಘಕಾಲೀನ ಬೆಂಬಲವನ್ನು ನೀಡುತ್ತದೆ. ಸಂರಕ್ಷಣಾ ಸಂತಾನೋತ್ಪತ್ತಿ, ಜಾತಿಗಳ ಚೇತರಿಕೆ ಮತ್ತು ಭವಿಷ್ಯದ ಮರು-ಕಾಡು ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪಾತ್ರದೊಂದಿಗೆ, ವಂಟಾರಾ ವನ್ಯಜೀವಿ ಆರೋಗ್ಯ ರಕ್ಷಣೆ, ಕನ್ಸರ್ವೇಶನ್ ಸೈನ್ಸ್​ನಲ್ಲಿ ಶ್ರೇಷ್ಠತೆಯ ಅಂತರರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ 1ನೇ ತರಗತಿ ದಾಖಲಾತಿ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು, ಏಪ್ರಿಲ್​ 10: ಒಂದನೇ ತರಗತಿ ದಾಖಲಾತಿಗೆ (Class 1st admission) ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಬಳಿಕ ಶಿಕ್ಷಣ ಇಲಾಖೆ ವಿನಾಯಿತಿ ನೀಡಿತ್ತು. ಆ ಬಳಿಕವೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು, ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ 1ನೇ ತರಗತಿಗೆ ಮಕ್ಕಳ ದಾಖಲಾತಿಯಲ್ಲಿ 60 ದಿನ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2026-27ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ, ಶೈಕ್ಷಣಿಕ ವರ್ಷದ ಜೂನ್‌ 1 ರಿಂದ ಗರಿಷ್ಠ60 ದಿನಗಳ ಸಡಿಲಿಕೆಯನ್ನು ನೀಡಿ ಮಗುವಿನ ವಯಸ್ಸನ್ನು ಲೆಕ್ಕಹಾಕಿ ಶಾಲಾ ದಾಖಲಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಶಿಕ್ಷಣ ಇಲಾಖೆ ಟ್ವಿಟ್​

ಇದರಿಂದ ಮಗುವಿನ ಜನ್ಮದಿನವು ಜೂನ್ 1ರಿಂದ ಮುಂದಿನ 60 ದಿನಗಳ ಒಳಗಿದ್ದರೆ (ಜುಲೈ 30ರ ವರೆಗೆ), ಅಂತಹ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಸಲ್ಲಿಸಿದ ಮನವಿಗಳನ್ನು ಪುರಸ್ಕರಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ಈ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: 1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ

ರಾಜ್ಯದಲ್ಲಿ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ವಯಸ್ಸು 6 ವರ್ಷ ತುಂಬಿರಬೇಕಿತ್ತು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ಒತ್ತಾಯಕ್ಕೆ ಮಣಿದು ಎರಡು ತಿಂಗಳ ವಿನಾಯಿತಿ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇತ್ತೀಚೆಗೆ ಘೋಷಣೆ ಮಾಡಿದ್ದರು. ಅದರಂತೆ ಇದೀಗ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ. 60 ದಿನಗಳ ವಿನಾಯಿತಿ ನೀಡಲಾಗಿದ್ದು, 5 ವರ್ಷ 10 ತಿಂಗಳು ಪೂರ್ಣಗೊಂಡ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಜಾಗರೂಕ‌ ಚಾಲನೆ ಕೇಸ್: ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ?; ಅರ್ಜಿದಾರರಿಗೆ ಕೋರ್ಟ್​​ ಪ್ರಶ್ನೆ

ಬೆಂಗಳೂರು, ಏಪ್ರಿಲ್​​ 10: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅಜಾಗರೂಕ‌ ಚಾಲನೆ ಕೇಸ್ ಸಂಬಂಧ ಪ್ರಕರಣ ರದ್ದು ಕೋರಿ ಕಾರು ಚಲಾಯಿಸಿದ್ದ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಮುದಾಯ ಸೇವೆ ಮಾಡುವ ಷರತ್ತಿನಡಿ ಕೇಸ್​​ ರದ್ದುಪಡಿಸುವುದಾಗಿ ಮೌಖಿಕವಾಗಿ ಸೂಚಿಸಿದೆ. ಬಿ.ಆರ್.ಚಿರಂತ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಪಶ್ಚಾತ್ತಾಪ ರೂಪದಲ್ಲಿ ಸಮುದಾಯ ಸೇವೆ ಮಾಡುವುದಾಗಿ ವಕೀಲರ ಪ್ರಸ್ತಾವಿಸಿದ್ದರು. ಹೊಸ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ? ಎಂದು ಪ್ರಶ್ನಿಸಿದೆ. ಈ ವೇಳೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದಾಗಿ ಅರ್ಜಿದಾರರ ಪರ ವಕೀಲ ರಜತ್​ರಿಂದ ಹೈಕೋರ್ಟ್​ಗೆ ತಿಳಿಸಿದ್ದಾರೆ. ಈ ವೇಳೆ ಮರು ಪ್ರಶ್ನೆ ಮಾಡಿರುವ ಪೀಠ, ನಿರ್ಲಕ್ಷ್ಯದಿಂದ ಅಜಾಗರೂಕ ಚಾಲನೆ ಮಾಡಿ ಮಕ್ಕಳಿಗೆ ಪಾಠ ಮಾಡುತ್ತೀರಾ? ನಿಯಮ ಉಲ್ಲಂಘನೆ ಹೇಗೆಂದು ಮಕ್ಕಳು ಕಲಿಯಬೇಕೇ? ಎಂದು ಅರ್ಜಿದಾರರ ಪರ ವಕೀಲರಿಗೆ ಕೇಳಿದೆ.

ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ; ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್

ಅಲ್ಲದೆ, ಕೋರ್ಟ್ ಸೂಚಿಸಿದ ಸಮುದಾಯ ಸೇವೆ ಮಾಡಬೇಕೆಂದು ಸೂಚನೆ ನೀಡಿರುವ ಪೀಠ, ಆದೇಶದಲ್ಲಿ ಸೇವೆ ಯಾವುದಿರಬೇಕೆಂದು ತಿಳಿಸುವುದಾಗಿ ಹೇಳಿದೆ. ಅರ್ಜಿದಾರನ‌ ಬಗ್ಗೆ ಅನುಕಂಪ ತೋರಿಸುವಂತೆ ಅವರ ಪರ ವಕೀಲರು ಹೈಕೋರ್ಟ್​​ನ ಮನವಿ ಮಾಡಿದ್ದು, ಲ್ಯಾಂಬೋರ್ಗಿನಿ ಕಾರು ಅಜಾಗರೂಕ‌ ಚಾಲನೆ ಸಂಬಂಧ ಜನವರಿಯಲ್ಲಿ ಕೆಂಗೇರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕಾರನ್ನು ಅತಿವೇಗವಾಗಿ ಲೇನ್ ಬದಲಿಸುತ್ತಾ, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಬಿಹಾರದ ವ್ಯಕ್ತಿ ಬಲೆಗೆ ಬಿದ್ದಿದ್ದು ಹೇಗೆ?

ನವದೆಹಲಿ, ಏಪ್ರಿಲ್ 10: ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪದ ಮೇಲೆ ಬಿಹಾರದಲ್ಲಿ ಮೂವರನ್ನು ಬಂಧಿಸಲಾಗಿದೆ. ಅಮೆರಿಕದ ಸಿಐಎ (US Central Intelligence Agency) ನೀಡಿದ ಮಾಹಿತಿಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಭಾರತದ ಅಧಿಕಾರಿಗಳು ಬಂಧಿಸಿದ್ದಾರೆ. ಅಮನ್ ತಿವಾರಿ ಸೇರಿದಂತೆ ಬಕ್ಸಾರ್ ಜಿಲ್ಲೆಯ ಮೂವರನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಅಮನ್ ತಿವಾರಿ ಯುಎಸ್ ಕೇಂದ್ರ ಗುಪ್ತಚರ ಸಂಸ್ಥೆಗೆ (ಸಿಐಎ) ದೊಡ್ಡ ಮೊತ್ತದ ಹಣವನ್ನು ಕೋರಿ ಸಂದೇಶವನ್ನು ಕಳುಹಿಸಿದ್ದರು. ಆ ಹಣಕ್ಕೆ ಬದಲಾಗಿ ತಾನು ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಲು 22 ದಿನಗಳ ಕಾಲಾವಕಾಶ ಕೋರಿದ್ದರು ಎಂದು ಆರೋಪಿಸಲಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಬೆದರಿಕೆ ಇಮೇಲ್ ಬಗ್ಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತೀಯ ಅಧಿಕಾರಿಗಳಿಗೆ ಸುಳಿವು ನೀಡಿದ್ದು ಸಿಐಎಯೇ. ಸಂದೇಶ ಕಳುಹಿಸಲು ಬಳಸಿದ ಐಪಿ ವಿಳಾಸವನ್ನು ಸಹ ಸಿಐಎ ಹಂಚಿಕೊಂಡಿದೆ. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸರು ಅಮನ್ ತಿವಾರಿ ಎಂಬ ಬಿಹಾರದ ವ್ಯಕ್ತಿಯನ್ನು ಪತ್ತೆಹಚ್ಚಿ, ಆತನ ಇಬ್ಬರು ಸಹಚರರೊಂದಿಗೆ ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ಮೋದಿ ಹತ್ಯೆಯ ಸಂಚಿನ ಬಗ್ಗೆ ಬಕ್ಸರ್ ಜಿಲ್ಲೆಯ ಪೊಲೀಸರು ರಹಸ್ಯ ಮಾಹಿತಿ ಪಡೆದ ನಂತರ ಸಿಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಆಶಾ ಪರಾರಿ ಗ್ರಾಮದ ಅಮನ್ ತಿವಾರಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಶಂಕಿತರು ಪ್ರಧಾನ ಮಂತ್ರಿ ಕಚೇರಿಯಿಂದ ಗೌಪ್ಯ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ವಿದೇಶಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ತಡರಾತ್ರಿಯ ದಾಳಿಯ ನಂತರ ಅವರನ್ನು ಬಂಧಿಸಲಾಗಿದ್ದು, ಜಿಲ್ಲಾ ಪೊಲೀಸರು ಸುರಕ್ಷಿತ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version