ಗಂಗಾ ನದಿಯಲ್ಲಿ ಇಫ್ತಾರ್ ಕೂಟ: ಬಿರಿಯಾನಿ ತಿಂದು ಮೂಳೆಗಳನ್ನು ನದಿಗೆ ಎಸೆದ್ರಾ ಮುಸ್ಲಿಂ ಯುವಕರು? 14 ಮಂದಿ ಅರೆಸ್ಟ್
ವಾರಣಾಸಿ, ಮಾ.17: ಗಂಗಾ ನದಿಯಲ್ಲಿ ದೋಣಿಯ ಮೇಲೆ ಕುಳಿತು ರಂಜಾನ್ ಉಪವಾಸ ಬಿಡುತ್ತಿದ್ದ (ಇಫ್ತಿಯಾರ್) 14 ಯುವಕರನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಸಂಜೆ ಪಂಚಗಂಗಾ ಘಾಟ್ ಸಮೀಪದ ದೋಣಿಯೊಂದರಲ್ಲಿ ಈ ಯುವಕರ ತಂಡ ಇಫ್ತಿಯಾರ್ ಕೂಟ ಏರ್ಪಡಿಸಿತ್ತು. ಈ ವೇಳೆ ಅವರು ಆಹಾರ ಸೇವಿಸುತ್ತಿರುವ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದರು….