ಅಹಮದಾಬಾದ್ ಭಿಕ್ಷಾಟನೆ ದಂಧೆ: ಸರಪಂಚರಿಂದಲೇ ಬಡ ಮಕ್ಕಳ ಮಾರಾಟ – Kannada News | Rajasthan and Madhya Pradesh Sarpanches Allegedly Broker Children Into Begging at Ahmedabad
ನವದೆಹಲಿ, ಜುಲೈ 2: ಅಹಮದಾಬಾದ್ನಲ್ಲಿ ಭಿಕ್ಷಾಟನೆ ಜಾಲಕ್ಕೆ ಮಕ್ಕಳನ್ನು ತಳ್ಳುತ್ತಿದ್ದ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸರಪಂಚರ ಕರಾಳ ಮುಖ ಅನಾವರಣವಾಗಿದೆ. ಅಹಮದಾಬಾದ್ನ ರಸ್ತೆಗಳು, ದೇವಸ್ಥಾನಗಳು ಮತ್ತು ಮಾಲ್ಗಳ ಮುಂದೆ ನಡೆಯುತ್ತಿದ್ದ ಮಕ್ಕಳ ಭಿಕ್ಷಾಟನೆಯ ಹಿಂದೆ ಅಂತಾರಾಜ್ಯ ಮಟ್ಟದ ಆಘಾತಕಾರಿ ಮಾನವ ಕಳ್ಳಸಾಗಣೆ (Human Trafficking) ಜಾಲ ಪತ್ತೆಯಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಗ್ರಾಮಗಳ ಸರಪಂಚರೇ (ಗ್ರಾಮ ಮುಖ್ಯಸ್ಥರು) ದಲ್ಲಾಳಿಗಳಾಗಿ ಕೆಲಸ ಮಾಡಿ, ಬಡ ಕುಟುಂಬಗಳ ಮಕ್ಕಳನ್ನು ಗುಜರಾತ್ನ ಭಿಕ್ಷಾಟನೆ ದಂಧೆಗೆ ಮಾರಾಟ ಮಾಡುತ್ತಿರುವುದು ಅಹಮದಾಬಾದ್ ಕ್ರೈಂ…