ದೆಹಲಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ; ಉಪವಾಸ ಸತ್ಯಾಗ್ರಹ ಮುಂದುವರಿಸಲು ಸೋನಮ್ ವಾಂಗ್ಚುಕ್ ನಿರ್ಧಾರ – Kannada News | I Will Continue My Fast Sonam Wangchuk vows to continue hunger strike

ನವದೆಹಲಿ, ಜುಲೈ 20: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದ ಪ್ರತಿಭಟನಾಕಾರರ ಮೇಲಿನ ಪೊಲೀಸರ ಲಾಠಿ ಚಾರ್ಜ್ ಅನ್ನು ಖಂಡಿಸಿರುವ ಸೋನಮ್ ವಾಂಗ್ಚುಕ್ (Sonam Wangchuk), ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ತಾವೀಗ ದಾಖಲಾಗಿರುವ ದೆಹಲಿಯ ಆಸ್ಪತ್ರೆಗೆ ಸಂಸದರು ಬರುವವರೆಗೆ ಅಥವಾ ಸಿಜೆಪಿ ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಅನುಮತಿ ನೀಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಮ್ಮ ಸಹಿ ಇರುವ ಕೈಬರಹದ ಪತ್ರವನ್ನು ಹಂಚಿಕೊಂಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಯುವಕರನ್ನು ತಡೆದ ರೀತಿಯ ಬಗ್ಗೆ ಸೋನಮ್ ವಾಂಗ್ಚುಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಉಪವಾಸ ಸತ್ಯಾಗ್ರಹ ಇನ್ನೂ ಮುಂದುವರಿಯಲಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿರುವುದನ್ನು ಕಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಬಿಡಬೇಕು ಅಥವಾ ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಬೇಕು. ಅಲ್ಲಿಯವರೆಗೆ ನನ್ನ ಉಪವಾಸ ಮುಂದುವರಿಯುತ್ತದೆ” ಎಂದು ವಾಂಗ್ಚುಕ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ‘ಚಲೋ ಸಂಸದ್’ ಬೃಹತ್ ಮೆರವಣಿಗೆ ನಡೆಸಿದರು. ಈ ಹೋರಾಟಕ್ಕೆ ದೇಶಾದ್ಯಂತ ಯುವ ಸಮೂಹ ಮತ್ತು ನಾಗರಿಕ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿರಿಯಾನಿ ಎಲೆ ನೇರವಾಗಿ ತಿನ್ನುವುದು ಸುರಕ್ಷಿತವೇ? ಈ ಸಣ್ಣ ತಪ್ಪು ಗಂಟಲು, ಜೀರ್ಣಾಂಗಕ್ಕೆ ಅಪಾಯ ತರಬಹುದು ಎಚ್ಚರ – Kannada News | Bay Leaves in Cooking: Safe for Flavor, Not for Chewing

ಬಿರಿಯಾನಿ, ಪುಲಾವ್, ಸಾಂಬಾರ್, ವಿವಿಧ ಗ್ರೇವಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುವ ಬಿರಿಯಾನಿ ಎಲೆ (Bay Leaf) ಅಡುಗೆಯ ಮಾಡುವಾಗ ಬಳಸುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ಅಡುಗೆ ಮುಗಿದ ಬಳಿಕ ಹೆಚ್ಚಿನವರು ಈ ಎಲೆಯನ್ನು ಆಹಾರದಿಂದ ತೆಗೆದು ಬದಿಗಿಡುತ್ತಾರೆ. ಕೆಲವರು ಮಾತ್ರ ಅದನ್ನು ನೇರವಾಗಿ ಜಗಿದು ತಿನ್ನಲು ಪ್ರಯತ್ನಿಸುತ್ತಾರೆ. ಆದರೆ ಬಿರಿಯಾನಿ ಎಲೆಯನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಸುರಕ್ಷಿತವೇ ಎಂಬುದರ ಬಗ್ಗೆ ಈ ಬಗ್ಗೆ ಪೌಷ್ಟಿಕ ತಜ್ಞರು ಹಾಗೂ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಿರಿಯಾನಿ ಎಲೆಯನ್ನು ಅಡುಗೆಯಲ್ಲಿ ಬಳಸುವುದು ಸುರಕ್ಷಿತವಾದರೂ, ಅದನ್ನು ಚಿಕ್ಕ ಚಿಕ್ಕ ತುಂಡಾಗಿ ನುಂಗುವುದು ಅಥವಾ ಜಗಿದು ತಿನ್ನುವುದು ಸೂಕ್ತವಲ್ಲ ಎಂದು ಎಚ್ಚರಿಸುತ್ತಾರೆ.

ಬಿರಿಯಾನಿ ಎಲೆಯನ್ನು ನೇರವಾಗಿ ಏಕೆ ತಿನ್ನಬಾರದು?

ಸಾಮಾನ್ಯವಾಗಿ ಬಿರಿಯಾನಿ ಎಲೆ ಗಟ್ಟಿಯಾದ ನಾರಿನ ರಚನೆಯನ್ನು ಹೊಂದಿರುತ್ತದೆ. ಇದರಲ್ಲಿ ಇರುವ ಫೈಬರ್‌ ಪದಾರ್ಥವನ್ನು ನಮ್ಮ ಜೀರ್ಣಾಂಗದ ಎನ್ಜೈಮ್‌ಗಳು ಸಂಪೂರ್ಣವಾಗಿ ಒಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲೆ ಸುಲಭವಾಗಿ ಜೀರ್ಣವಾಗದೆ ಜೀರ್ಣಾಂಗದಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಒಣಗಿದ ಬಿರಿಯಾನಿ ಎಲೆಗಳ ಅಂಚುಗಳು ತೀಕ್ಷ್ಣವಾಗಿರುವುದರಿಂದ ಅವು ಗಂಟಲಿನಲ್ಲಿ ಸಿಲುಕುವ ಅಪಾಯ, ಅನ್ನನಾಳಕ್ಕೆ ಗಾಯವಾಗುವ ಸಾಧ್ಯತೆ, ಅಪರೂಪದ ಸಂದರ್ಭಗಳಲ್ಲಿ ಜೀರ್ಣಾಂಗದ ಒಳಭಾಗಕ್ಕೆ ಚುಚ್ಚುವ ಅಪಾಯ ಮತ್ತು ಸರಿಯಾಗಿ ಜಗಿಯದೆ ನುಂಗಿದರೆ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು.

ಬಿರಿಯಾನಿ ಎಲೆ ವಿಷಕಾರಿಯೇ?

ಇದು ಅನೇಕರಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆ. ಬಿರಿಯಾನಿ ಎಲೆ ವಿಷಕಾರಿ ಅಲ್ಲ. ಇದರಲ್ಲಿರುವ ಸಮಸ್ಯೆ ರಾಸಾಯನಿಕ ಅಂಶಗಳಿಂದಲ್ಲ, ಅದರ ಗಟ್ಟಿತನ ಹಾಗೂ ನಾರಿನ ರಚನೆಯಿಂದ. ಅಂದರೆ, ಆಹಾರಕ್ಕೆ ಪರಿಮಳ ನೀಡುವ ಕೆಲಸವನ್ನು ಇದು ಅತ್ಯುತ್ತಮವಾಗಿ ಮಾಡುತ್ತದೆ. ಆದರೆ ಅದನ್ನೇ ಎಲೆ ಸಮೇತ ತಿನ್ನುವುದು ಸುರಕ್ಷಿತವಲ್ಲ.

ಅಡುಗೆಯಲ್ಲಿ ಬಳಸಿದರೆ ಏನು ಲಾಭ?

ಬಿರಿಯಾನಿ ಎಲೆಯಲ್ಲಿರುವ ನೈಸರ್ಗಿಕ ತೈಲಗಳು (Essential Oils) ಬೇಯುವ ಸಮಯದಲ್ಲಿ ಆಹಾರಕ್ಕೆ ಸೇರಿ ಉತ್ತಮ ಪರಿಮಳ ನೀಡುತ್ತವೆ. ಇದರ ಜೊತೆಗೆ ಕೆಲವು ಪೌಷ್ಟಿಕ ಪ್ರಯೋಜನಗಳೂ ದೊರೆಯಬಹುದು.

ಇದನ್ನೂ ಓದಿ: ಬೆಚ್ಚಗಿನ ನೀರಿಗೆ ಕರಿಮೆಣಸು, ಅರಿಶಿನ ಸೇರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ!

ಜೀರ್ಣಕ್ರಿಯೆಗೆ ನೆರವಾಗಬಹುದು: ಬಿರಿಯಾನಿ ಎಲೆಯಲ್ಲಿರುವ ಕೆಲವು ಸಸ್ಯಸಾರಗಳು ಜೀರ್ಣರಸಗಳ ಉತ್ಪಾದನೆಯನ್ನು ಉತ್ತೇಜಿಸಬಹುದು. ಇದರಿಂದ ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲು ಸಹಾಯವಾಗಬಹುದು.

ಆ್ಯಂಟಿಆಕ್ಸಿಡೆಂಟ್‌ಗಳ ಮೂಲ: ಇದರಲ್ಲಿ ಫ್ಲೇವನಾಯ್ಡ್‌ಗಳು ಹಾಗೂ ಪಾಲಿಫಿನಾಲ್‌ಗಳಂತಹ ಆ್ಯಂಟಿಆಕ್ಸಿಡೆಂಟ್ ಅಂಶಗಳಿದ್ದು, ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ಕೆಲವು ಸಣ್ಣ ಅಧ್ಯಯನಗಳ ಪ್ರಕಾರ ಬಿರಿಯಾನಿ ಎಲೆಯಲ್ಲಿರುವ ಸಕ್ರಿಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಆದರೆ ಇದನ್ನು ಮಧುಮೇಹದ ಚಿಕಿತ್ಸೆಯ ಪರ್ಯಾಯವಾಗಿ ಬಳಸಬಾರದು.

ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ: ಇದರಲ್ಲಿ ಇರುವ ಕೆಲವು ಸಸ್ಯರಾಸಾಯನಿಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಪ್ರಾಥಮಿಕ ಅಧ್ಯಯನಗಳಿಂದ ತಿಳಿದುಬಂದಿದೆ.

ಬಿರಿಯಾನಿ ಎಲೆಯ ಆರೋಗ್ಯ ಲಾಭ ಪಡೆಯಲು ಸುರಕ್ಷಿತ ವಿಧಾನ ಯಾವುದು?

  • ಅಡುಗೆಯಲ್ಲಿ ಸಂಪೂರ್ಣ ಎಲೆ ಹಾಕಬಹುದು.
  • ಅಡುಗೆ ಸಿದ್ಧವಾದ ನಂತರ ಎಲೆಯನ್ನು ತೆಗೆದುಹಾಕಬೇಕು.
  • ಬೇಕಾದರೆ ಒಣಗಿಸಿ ಪುಡಿ ಮಾಡಿ ಮಸಾಲೆಗಳಲ್ಲಿ ಸೇರಿಸಬಹುದು.
  • ಟೀ ಅಥವಾ ಹರ್ಬಲ್ ಕಷಾಯದಲ್ಲಿ ಬಳಸಬಹುದು.
  • ನೇರವಾಗಿ ಎಲೆಯನ್ನು ಜಗಿದು ನುಂಗಬಾರದು.
  • ಎಲೆಯನ್ನು ಒಣಗಿಸಿ ಸೂಕ್ಷ್ಮ ಪುಡಿಯಾಗಿ ಮಾಡಿ ಗರಂ ಮಸಾಲೆ, ಸೂಪ್, ಗ್ರೇವಿ ಅಥವಾ ಸಾರುಗಳಲ್ಲಿ ಬಳಸಬಹುದು.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆಹಾರ ಪದಾರ್ಥವನ್ನು ಔಷಧಿಯ ಪರ್ಯಾಯವಾಗಿ ಬಳಸಬಾರದು. ಗಂಟಲು, ಜೀರ್ಣಾಂಗ ಅಥವಾ ಆಹಾರ ನುಂಗುವ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್; ಅಗ್ರಸ್ಥಾನದಲ್ಲಿ ರೋಹಿತ್

Source link

‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು – Kannada News | Thalapathy Vijay Jana Nayagan Release on July 23 KVN Productions New Teaser

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ಜಗತ್ತಿನಾದ್ಯಂತ ಈ ಚಿತ್ರ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಅನೌನ್ಸ್‌ಮೆಂಟ್ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ಸೋಮವಾರ (ಜುಲೈ 20) ಈ ಟೀಸರ್ ಹಂಚಿಕೊಂಡಿದೆ.

18 ಸೆಕೆಂಡುಗಳ ಕಿರು ಟೀಸರ್ ನೋಡಿದ ವಿಜಯ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್‌ನಲ್ಲಿ ವಿಜಯ್ ಅವರು ಖಳರ ವಿರುದ್ಧ ಗನ್ ಹಿಡಿದು ಫೈಟ್ ಮಾಡುವ ಹಾಗೂ ಪೊಲೀಸ್ ಸಮುಸ್ತ್ರದಲ್ಲಿ ಅಬ್ಬರಿಸುವ ಆ್ಯಕ್ಷನ್ ದೃಶ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಜಯ್ ಅವರು ಜೈಲಿನ ಕೈದಿ ಉಡುಪಿನಿಂದ ನೇರವಾಗಿ ಬಿಳಿ ಶರ್ಟ್ ಮತ್ತು ಕಪ್ಪು ಜಾಕೆಟ್ ಧರಿಸಿದ ಮುಖ್ಯಮಂತ್ರಿಯ ಲುಕ್‌ಗೆ ಬದಲಾಗುವ ದೃಶ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

‘ಒನ್ ಲಾಸ್ಟ್ ಡ್ಯಾನ್ಸ್’ ಎಂದ ಅಭಿಮಾನಿಗಳು:

ವಿಜಯ್ ಅವರನ್ನು ಬೆಳ್ಳಿಪರದೆಯ ಮೇಲೆ ನಟನಾಗಿ ನೋಡಲು ಇದು ಕೊನೆಯ ಅವಕಾಶ ಆಗಿರುವುದರಿಂದ, ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳ ಭಾವನಾತ್ಮಕ ಸಂದೇಶಗಳು ಹರಿದುಬರುತ್ತಿವೆ. ‘ನಟ ವಿಜಯ್‌ನಿಂದ ಹಿಡಿದು ಸಿಎಂ ವಿಜಯ್ ವರೆಗಿನ ಟ್ರಾನ್ಸಿಶನ್ ಅದ್ಭುತವಾಗಿದೆ’, ‘ಕೊನೆಯ ಬಾರಿಗೆ ದಳಪತಿ ಅಬ್ಬರ ನೋಡಲು ಸಜ್ಜಾಗಿದ್ದೇವೆ’ ಹಾಗೂ ‘ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವುದು ಗ್ಯಾರಂಟಿ’ ಎಂದು ನೆಟ್ಟಿಗರು ಬರೆದುಕೊಳ್ಳುತ್ತಿದ್ದಾರೆ.

ಸಾಕಷ್ಟು ಅಡೆತಡೆಗಳ ನಂತರ ರಿಲೀಸ್:

ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು ಚಿತ್ರಮಂದಿರ ತಲುಪುವ ಮುನ್ನ ಹತ್ತಾರು ಸವಾಲುಗಳನ್ನು ಎದುರಿಸಿದೆ. ಈ ವರ್ಷದ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದಾಗಿ ಮುಂದೂಡಲ್ಪಟ್ಟಿತ್ತು. ಕಾನೂನು ಹೋರಾಟದ ಬಳಿಕ ಜುಲೈನಲ್ಲಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ದುರದೃಷ್ಟವಶಾತ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರದ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ

ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ:

ಇದು 2023ರ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ವಿಜಯ್ ಒಪ್ಪಿಕೊಂಡಿದ್ದ ಕೊನೆಯ ಸಿನಿಮಾ ಇದಾಗಿದ್ದು, ತಮಿಳುನಾಡು ಸಿಎಂ ಆದ ಬಳಿಕ ರಿಲೀಸ್ ಆಗುತ್ತಿರುವ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೈತಿಕ ಶಿಕ್ಷಣಕ್ಕೆ ಹೊಸ ರೂಪ: ಲೈಂಗಿಕ, ಆರೋಗ್ಯ ಶಿಕ್ಷಣ ಸೇರಿ ಹಲವು ವಿಷಯಗಳ ಪರಿಚಯಿಸಲು ನಿರ್ಧಾರ – Kannada News | Karnataka Revamps Moral Education with Life Skills and Cyber Safety Lessons

ಪ್ರಾತಿನಿಧಿಕ ಚಿತ್ರ Image Credit source: Getty images

ಬೆಂಗಳೂರು, ಜುಲೈ 20: ರಾಜ್ಯದ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ನೈತಿಕ ಪಠ್ಯದಡಿ ಲೈಂಗಿಕ, ಆರೋಗ್ಯ, ಸಂಗೀತ, ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ ಸೇರಿದಂತೆ ಹಲವು ಹೊಸ ವಿಷಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ವಯೋಮಾನ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ (DSERT)  ಪ್ರತ್ಯೇಕ ಪಠ್ಯ ಸಿದ್ಧಪಡಿಸಿದ್ದು, ವಾರಕ್ಕೆ ಎರಡು ತರಗತಿಗಳ ಮೂಲಕ ಬೋಧನೆ ನಡೆಸಲು ಯೋಜನೆ ರೂಪಿಸಲಾಗಿದೆ.

ಇದೇ ವರ್ಷದಿಂದ ನೈತಿಕ ಶಿಕ್ಷಣ ಜಾರಿ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳ ವಯೋಮಾನ, ಮಾನಸಿಕ ಬೆಳವಣಿಗೆ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದೆ. ಆರಂಭದಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಲೈಂಗಿಕ ಶಿಕ್ಷಣ ಪರಿಚಯಿಸುವ ಬಗ್ಗೆ ಚಿಂತನೆ ನಡೆದಿದ್ದರೂ, ಈಗ ವಯೋಮಿತಿಗೆ ಅನುಗುಣವಾಗಿ ಹಂತಹಂತವಾಗಿ ನೈತಿಕ ಶಿಕ್ಷಣದ ಭಾಗವಾಗಿ ವಿವಿಧ ವಿಷಯಗಳನ್ನು ಬೋಧಿಸಲು ಮಂದಾಗಿದೆ.

ಯಾವೆಲ್ಲಾ ವಿಷಯಗಳ ಬೋಧನೆ? 

ನೈತಿಕ ಶಿಕ್ಷಣದಡಿ ಲೈಂಗಿಕ, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು, ಸೈಬರ್ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ, ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಸಂಗೀತ ಹಾಗೂ ಸಾಮಾಜಿಕ ಜವಾಬ್ದಾರಿಗಳಂತಹ ವಿಷಯಗಳಿಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ವಯಸ್ಸು ಮತ್ತು ತರಗತಿಗೆ ತಕ್ಕಂತೆ ಯಾವ ವಿಷಯಗಳನ್ನು ಯಾವ ಹಂತದಲ್ಲಿ ಬೋಧಿಸಬೇಕು ಎಂಬುದನ್ನು ಡಿಎಸ್‌ಇಆರ್‌ಟಿ ಪ್ರತ್ಯೇಕವಾಗಿ ರೂಪಿಸಿರುವ ಪಠ್ಯದಲ್ಲಿ ವಿವರಿಸಲಾಗಿದೆ.

ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ

ಈ ಪಠ್ಯಕ್ರಮದಡಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಲೈಂಗಿಕ ಶಿಕ್ಷಣದ ಕುರಿತು ವೈಜ್ಞಾನಿಕ ಮಾಹಿತಿ ನೀಡುವುದು, ಸೈಬರ್ ಅಪರಾಧಗಳಿಂದ ರಕ್ಷಣೆ ಪಡೆಯುವ ಅರಿವು ಮೂಡಿಸುವುದು ಹಾಗೂ ಮಾದಕ ವ್ಯಸನಗಳಿಂದ ದೂರವಿರುವ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯ ಮಾರ್ಗಸೂಚಿಗಳನ್ನು ಶಾಲೆಗಳಿಗೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಳಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ನೈತಿಕ ಶಿಕ್ಷಣವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ಜವಾಬ್ದಾರಿ, ಸಾಮಾಜಿಕ ಮೌಲ್ಯಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಈ ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಗುರಿಯನ್ನು ಇಲಾಖೆ ಹೊಂದಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹುಡುಗಿ ಆಸೆ ತೋರಿಸಿ ಸುಲಿಗೆ: ಆನ್ಲೈನ್ ನಲ್ಲಿ ನೋಡಿದ ಹುಡುಗಿ ಭೇಟಿಗೆ ಹೋಗಿ ತಗ್ಲಾಕೊಂಡ – Kannada News | CCB Arrests 11 Accused Who kidnap And robbing On girl Name In Bengaluru

ಬೆಂಗಳೂರು, (ಜುಲೈ 20): ಹುಡುಗಿ ಆಸೆ ತೋರಿಸಿ ವ್ಯಕ್ತಿಯನ್ನು ಸುಲಿಗೆ ಮಾಡಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಮನು, ಶಾಬು , ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಬಂಧಿತ ಆರೋಪಿಗಳು. ಇವರು ಆ್ಯಪ್ ಒಂದರಲ್ಲಿ ಹುಡುಗಿಯರು ಇದ್ದಾರೆ ಎಂದು ಮೊದಲು ಪೋಸ್ಟ್ ಮಾಡಿದ್ದರು. ಇದನ್ನು ನಂಬಿ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ಹೌದು…ವ್ಯಕ್ತಿಯೊಬ್ಬರು ವೆಬ್‌ಸೈಟ್‌ನಲ್ಲಿ ನೋಡಿದ ಹುಡುಗಿಯನ್ನ ಭೇಟಿ ಮಾಡಲು ಆಸೆಯಿಂದ ಹೆಚ್.ಆರ್.ಬಿ.ಆರ್ ಲೇಔಟ್‌ಗೆ ಸಿಕ್ಕಿಬಿದ್ದಿದ್ದು, ಯುವತಿಯನ್ನು ಭೇಟಿ ಮಾಡುವ ಮೊದಲೇ ಸಂಚು ಮಾಡಿದ್ದ ಗ್ಯಾಂಗ್, ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಹೊಡೆದು ಬಡಿದು ಸುಲಿಗೆ ಮಾಡಿ ಪರಾರಿಯಾಗಿತ್ತು. ಬಳಿಕ ಸಿಸಿಬಿ ಕಾರ್ಯಚರಣೆ ನಡೆಸಿ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಘಟನೆ ವಿವರ

ಬಂಧಿತ ಗ್ಯಾಂಗ್ ವೆಬ್​​​​ಸೈಟ್​​ವೊಂದರಲ್ಲಿ ಹುಡುಗಿ ಫೋಟೋ ವ್ಯಕ್ತಿಯನ್ನು ಮರಳು ಮಾಡಿತ್ತು. ಬಳಿಕ ಹುಡುಗಿ ಭೇಟಿಗೆ ಬಂದವನನ್ನು ಪ್ಲ್ಯಾನ್ ಮಾಡಿಯೇ ರನ್ನು ಚೇತನ್, ಮನು, ಶಾಬು, ಮಂಜುನಾಥ್, ಜಯಕುಮಾರ್ ಸೇರಿದಂತೆ 9 ಮಂದಿ ಆರೋಪಿಗಳು ಸೇರಿ ಕಿಡ್ನಾಪ್ ಮಾಡಿದ್ದರು. ತದನಂತರ ಸಂತ್ರಸ್ತನನ್ನು ನಗರದ ವಿವಿಧ ಭಾಗಗಳಲ್ಲಿ ಆಟೋದಲ್ಲಿ ಸುತ್ತಾಡಿಸಿ, ಜೀವ ಬೆದರಿಕೆ ಹಾಕಿ, ಹಲ್ಲೆ ಮಾಡಿ . ಕೊನೆಗೆ ಆತನ ಬಳಿಯಿದ್ದ ನಗದು, ಚಿನ್ನದ ಚೈನ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ: ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು

ಈ ದರೋಡೆ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ, ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ WPW ವಿಭಾಗದ ಅಧಿಕಾರಿಗಳು, ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಆಟೋಗಳು, 4 ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:33 pm, Mon, 20 July 26

Source link

ಬ್ರಿಟನ್​​ನ ನೂತನ ಪ್ರಧಾನಿಯಾಗಿ ಆ್ಯಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ – Kannada News | King of the North fame Andy Burnham becomes new UK Prime Minister

ಲಂಡನ್, ಜುಲೈ 20: ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಮತ್ತು ಲೇಬರ್ ಪಕ್ಷದ ಹಿರಿಯ ನಾಯಕರಾದ ಆ್ಯಂಡಿ ಬರ್ನ್‌ಹ್ಯಾಮ್ (Andy Burnham) ಅಧಿಕೃತವಾಗಿ ಯುನೈಟೆಡ್ ಕಿಂಗ್‌ಡಮ್‌ನ (UK) ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಲಂಡನ್‌ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಜ ಚಾರ್ಲ್ಸ್ III ಅವರನ್ನು ಭೇಟಿಯಾದ ನಂತರ ಆ್ಯಂಡಿ ಬರ್ನ್​ಹ್ಯಾಮ್ ಅಧಿಕಾರ ವಹಿಸಿಕೊಂಡರು. ಇವರು ಕೀರ್ ಸ್ಟಾರ್ಮರ್ (Keir Starmer) ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿದ್ದು, ಕಳೆದ 1 ದಶಕದಲ್ಲಿ ಅಂದರೆ 2016ರಿಂದೀಚೆಗೆ ಬ್ರಿಟನ್ ಕಂಡ 7ನೇ ಪ್ರಧಾನ ಮಂತ್ರಿಯಾಗಿದ್ದಾರೆ.

ಅಧಿಕಾರ ಹಸ್ತಾಂತರದ ಸಾಂಪ್ರದಾಯಿಕ ವಿಧಿಯಾದ “ಕಿಸ್ಸಿಂಗ್ ಹ್ಯಾಂಡ್ಸ್” (ಅರಮನೆಯ ನಿಯಮದಂತೆ ಕೈಕುಲುಕುವುದು) ಕಾರ್ಯಕ್ರಮದ ಫೋಟೋವನ್ನು ಬಕಿಂಗ್ಹ್ಯಾಮ್ ಅರಮನೆ ಬಿಡುಗಡೆ ಮಾಡಿದೆ. ಅರಮನೆಯ ಪ್ರಕಟಣೆಯ ಪ್ರಕಾರ, “ಮಹಾರಾಜರು ಆ್ಯಂಡಿ ಬರ್ನ್‌ಹ್ಯಾಮ್ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರವನ್ನು ರಚಿಸಲು ವಿನಂತಿಸಿದರು. ಬರ್ನ್‌ಹ್ಯಾಮ್ ಅವರು ಈ ಪ್ರಸ್ತಾಪವನ್ನು ಸ್ವೀಕರಿಸಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು” ಎಂದು ತಿಳಿಸಿದೆ.

ಇದನ್ನೂ ಓದಿ: Video: ಭಾರತಕ್ಕೆ ಬಂದಿಳಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್

ಇದಾದ ಬಳಿಕ, ನಿರ್ಗಮಿತ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪ್ರಧಾನಿಯ ಅಧಿಕೃತ ನಿವಾಸವಾದ ’10 ಡೌನಿಂಗ್ ಸ್ಟ್ರೀಟ್’ ಹೊರಗೆ ವಿದಾಯ ಭಾಷಣ ಮಾಡಿ, ನನ್ನ ಕೆಲಸ ಮುಗಿದಿದೆ ಎಂದು ಹೇಳಿದರು. ತಮ್ಮದೇ ಪಕ್ಷದ ಒತ್ತಡದಿಂದಾಗಿ ರಾಜೀನಾಮೆ ನೀಡಿದ ಅವರು, “2 ವರ್ಷಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಾಗ ಇದ್ದದ್ದಕ್ಕಿಂತ ಬ್ರಿಟನ್ ಈಗ ಹೆಚ್ಚು ಬಲಶಾಲಿಯಾಗಿದೆ ಮತ್ತು ನ್ಯಾಯಯುತವಾಗಿದೆ” ಎಂದರು.

ಆ್ಯಂಡಿ ಬರ್ನ್‌ಹ್ಯಾಮ್ ಯಾರು?:

56 ವರ್ಷದ ಆ್ಯಂಡಿ ಬರ್ನ್‌ಹ್ಯಾಮ್ ಲೇಬರ್ ಪಕ್ಷದ ಅನುಭವಿ ರಾಜಕಾರಣಿ. ಇವರು ಈ ಹಿಂದೆ ಸಂಸದರಾಗಿ ಮತ್ತು ಲೇಬರ್ ಪಕ್ಷದ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತದನಂತರ ‘ಗ್ರೇಟರ್ ಮ್ಯಾಂಚೆಸ್ಟರ್’ನ ಮೇಯರ್ ಆಗಿ ಕಾರ್ಯನಿರ್ವಹಿಸಿ ಭಾರಿ ಜನಪ್ರಿಯತೆ ಗಳಿಸಿದ್ದರು. ಬ್ರಿಟನ್‌ನ ಉತ್ತರದ ನಗರಗಳು ಮತ್ತು ಪ್ರಾದೇಶಿಕ ಸಬಲೀಕರಣದ ಪರವಾಗಿ ಸದಾ ಧ್ವನಿ ಎತ್ತುವ ಕಾರಣಕ್ಕಾಗಿ ಇವರನ್ನು ರಾಜಕೀಯ ವಲಯದಲ್ಲಿ ‘ಕಿಂಗ್ ಆಫ್ ದಿ ನಾರ್ತ್’ (ಉತ್ತರದ ರಾಜ) ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ: ಬ್ರಿಟನ್‌ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್​​​ಗೆ ಕರೆ ಮಾಡಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ ಮೋದಿ

ಕಳೆದ ತಿಂಗಳಷ್ಟೇ ಉಪಚುನಾವಣೆಯ ಮೂಲಕ ಮತ್ತೆ ಸಂಸತ್ತಿಗೆ ಮರಳಿದ ಇವರು, ದೇಶದಲ್ಲಿ ಒಗ್ಗಟ್ಟು ಮತ್ತು ಭರವಸೆಯ ರಾಜಕೀಯವನ್ನು ತರುವುದಾಗಿ ಭರವಸೆ ನೀಡಿದ್ದಾರೆ. ಬ್ರಿಟನ್ ಪ್ರಸ್ತುತ ಆರ್ಥಿಕ ಹಿಂಜರಿತ ಮತ್ತು ಸಾರ್ವಜನಿಕ ಹಣಕಾಸಿನ ತೀವ್ರ ಮುಕ್ಕಟ್ಟನ್ನು ಎದುರಿಸುತ್ತಿರುವ ಕಠಿಣ ಸಮಯದಲ್ಲಿ ಬರ್ನ್‌ಹ್ಯಾಮ್ ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಟೀಂ ಇಂಡಿಯಾದ ಈ ಮೂವರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಜಾಗವಿಲ್ಲ – Kannada News | India’s UK Tour Disaster: Which Players Face Axing for 2027 ODI World Cup?

ಯುಕೆ ಪ್ರವಾಸದಲ್ಲಿ ಟೀಂ ಇಂಡಿಯಾದ (Team India) ಸತತ ಸೋಲುಗಳು ಅಭಿಮಾನಿಗಳನ್ನು ತೀವ್ರ ನಿರಾಶೆಯಲ್ಲಿ ಮುಳುಗಿಸಿದೆ. ಹತ್ತು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ 2027 ರ ಏಕದಿನ ವಿಶ್ವಕಪ್ (2027 ODI World Cup) ಸಮೀಪಿಸುತ್ತಿರುವಾಗ, ಕೆಲವು ಆಟಗಾರರ ಕಳಪೆ ಪ್ರದರ್ಶನವು ಆಯ್ಕೆ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಭಾರತ ಏಕದಿನ ತಂಡದಿಂದ ಕೆಲವು ಆಟಗಾರರನ್ನು ಕೈಬಿಡುವುದು ಖಚಿತವಾಗಿದೆ.

ಯುವ ಆಟಗಾರರಿಂದ ಸಪ್ಪೆ ಪ್ರದರ್ಶನ

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ತಂಡದ ಪ್ರದರ್ಶನ ಸಂಪೂರ್ಣವಾಗಿ ಭಿನ್ನವಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹೊರತುಪಡಿಸಿ, ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬೌಲಿಂಗ್ ವಿಭಾಗದಲ್ಲಿ ಶಿಸ್ತಿನ ಕೊರತೆಯೂ ಸಹ ಎದುರಾಳಿ ತಂಡಕ್ಕೆ ಸುಲಭವಾಗಿ ಪ್ರಾಬಲ್ಯ ಸಾಧಿಸಲು ಅವಕಾಶ ಮಾಡಿಕೊಟ್ಟಿತು. ಅದರಲ್ಲೂ ಏಕದಿನ ಸ್ವರೂಪದಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಟೀಂ ಇಂಡಿಯಾ 1-2 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು ಎಂಬುದು ಕಹಿ ಸತ್ಯ. ಈ ಸೋಲಿನ ನಂತರ, ಬಿಸಿಸಿಐ 2027 ರ ವಿಶ್ವಕಪ್ ರೇಸ್‌ನಿಂದ ಕೆಲವರನ್ನು ಹೊರಗಿಡಲು ಸಿದ್ಧತೆ ನಡೆಸುತ್ತಿದೆ.

ಶಿವಂ ದುಬೆ: ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡ ನಂತರ ಆಲ್‌ರೌಂಡರ್ ಬದಲಿಗೆ ಶಿವಂ ದುಬೆಗೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿತು. ಆದಾಗ್ಯೂ, ಅವರು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ತಮಗೆ ನೀಡಲಾದ ಏಕೈಕ ಏಕದಿನ ಪಂದ್ಯದಲ್ಲಿ ದುಬೆ ಶೂನ್ಯಕ್ಕೆ ಔಟಾಗಿದ್ದಲ್ಲದೆ, ಕೇವಲ 6 ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿದರು. ನಾಯಕನಿಗೂ ದುಬೆ ಬೌಲಿಂಗ್‌ನಲ್ಲಿ ಹೆಚ್ಚಿನ ನಂಬಿಕೆ ಇರಲಿಲ್ಲ. ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ರೆಡ್ಡಿ ಚೇತರಿಸಿಕೊಂಡು ತಂಡಕ್ಕೆ ಮರಳಿದರೆ, ದುಬೆ ಸ್ಥಾನ ಪಡೆಯುವುದು ಬಹುತೇಕ ಅಸಾಧ್ಯ.

ಇಶಾನ್ ಕಿಶನ್: ಏಕದಿನ ಪಂದ್ಯಗಳಲ್ಲಿ ಇಶಾನ್ ಕಿಶನ್ ಅವರ ಉತ್ತಮ ಸರಾಸರಿಯ ಹೊರತಾಗಿಯೂ, ಇಂಗ್ಲೆಂಡ್ ಸರಣಿಯಲ್ಲಿ ಅವರ ಬ್ಯಾಟಿಂಗ್ ವೈಫಲ್ಯ ಬಹಿರಂಗವಾಯಿತು. ಏಷ್ಯನ್ ಮತ್ತು ವೆಸ್ಟ್ ಇಂಡೀಸ್ ವಿಕೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಿಶನ್, ಇಂಗ್ಲೆಂಡ್‌ನ ವೇಗದ, ಸ್ವಿಂಗ್ ಬೌಲಿಂಗ್‌ಗೆ ನಿಲ್ಲಲು ಸಾಧ್ಯವಾಗಲಿಲ್ಲ. ಕಿಶನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 15 ರನ್‌ಗಳನ್ನು ಮಾತ್ರ ಗಳಿಸಿದರು. 2027 ರ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ಹೈ-ಬೌನ್ಸ್ ಪಿಚ್‌ಗಳಲ್ಲಿ ನಡೆಯಲಿದೆ. ಇಂಗ್ಲೆಂಡ್ ಬೌಲರ್‌ಗಳು ಎಸೆಯುವ ಬೌನ್ಸರ್‌ಗಳನ್ನು ಎದುರಿಸಲು ಕಿಶನ್ ಹೆಣಗಾಡುತ್ತಿರುವುದನ್ನು ನೋಡಿದರೆ, ಅವರ ತಂತ್ರವು ಅಂತಹ ಪಿಚ್‌ಗಳಿಗೆ ಸರಿಹೊಂದುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ

ಗುರ್ನೂರ್ ಬ್ರಾರ್‌: ಈ ಸರಣಿಯು ಯುವ ಬೌಲರ್ ಗುರ್ನೂರ್ ಬ್ರಾರ್‌ಗೆ ಕಹಿ ಅನುಭವವಾಗಿದೆ. ಮೂರು ಏಕದಿನ ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದರೂ, ಅವರು 7.76 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿರುವುದು ಗಂಭೀರ ಕಳವಳಕಾರಿಯಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಅವರು ಭಾರತ ಪರ ಅತಿ ಹೆಚ್ಚು ರನ್ ನೀಡಿದವರಲ್ಲಿ ಒಬ್ಬರಾಗಿದ್ದರು. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ವೇಗಿಗಳು ಲಭ್ಯವಿರುವುದರಿಂದ, ಗುರ್ನೂರ್ ಬ್ರಾರ್ ವಿಶ್ವಕಪ್ ಯೋಜನೆಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಮನೆಗೆ ‘ದಾದಾ’ ಎಂಟ್ರಿ: ಬೆಂಗಾಲಿ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ – Kannada News | Sourav Ganguly to host Bigg Boss Bangla in Star Jalsha Jiohotstar from 2026 September

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಅಭಿಮಾನಿಗಳ ಹೆಮ್ಮೆಯ ‘ದಾದಾ’ ಸೌರವ್ ಗಂಗೂಲಿ (Sourav Ganguly) ಈಗ ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಮುಂಬರುವ ಸೆಪ್ಟೆಂಬರ್ 2026ರಿಂದ ಆರಂಭವಾಗಲಿರುವ ಜಿಯೋಸ್ಟಾರ್ (JioStar) ಸಂಸ್ಥೆಯ ‘ಬಿಗ್ ಬಾಸ್’ ಮೆಗಾ ಲಾಂಚ್‌ನಲ್ಲಿ ಗಂಗೂಲಿ ಅವರು ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ದೀರ್ಘಾವಧಿಯ ಬಿಡುವಿನ ನಂತರ ಕಂಬ್ಯಾಕ್ ಮಾಡುತ್ತಿರುವ ‘ಬಿಗ್ ಬಾಸ್ ಬಾಂಗ್ಲಾ’ (Bigg Boss Bangla) ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕರಾಗಿ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವ ಹಾಗೂ ಟಿವಿ ಶೋಗಳಲ್ಲಿ ತಮ್ಮ ಚಾಣಾಕ್ಷ ನಿರೂಪಣೆಯಿಂದ ಜನಪ್ರಿಯರಾಗಿರುವ ಸೌರವ್ ಗಂಗೂಲಿ, ಈಗ ಬಿಗ್ ಬಾಸ್ ಮನೆಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ‘ಸ್ಟಾರ್ ಜಲ್ಸಾ’ ವಾಹಿನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬಿಗ್ ಬಾಸ್ ಬಾಂಗ್ಲಾ ಬರುತ್ತಿದೆ’ ಎಂದು ಸಣ್ಣ ಝಲಕ್ ಹಂಚಿಕೊಂಡಿದೆ.

ಪ್ರಸಾರ ಎಲ್ಲಿ ಮತ್ತು ಯಾವಾಗ?

ಸೆಪ್ಟೆಂಬರ್ 2026ರ ಹಬ್ಬದ ಸೀಸನ್‌ನಿಂದ ಏಕಕಾಲದಲ್ಲಿ ಆರಂಭವಾಗಲಿರುವ ಆರು ಭಾಷೆಗಳ ಬಿಗ್ ಬಾಸ್ ಪೈಕಿ ಬಾಂಗ್ಲಾ ಆವೃತ್ತಿಯೂ ಒಂದಾಗಿದೆ. ವೀಕ್ಷಕರು ಈ ಕಾರ್ಯಕ್ರಮವನ್ನು ‘ಸ್ಟಾರ್ ಜಲ್ಸಾ’ ವಾಹಿನಿಯಲ್ಲಿ ವೀಕ್ಷಿಸಬಹುದು. ಮೊಬೈಲ್ ಅಥವಾ ಡಿಜಿಟಲ್ ಪರದೆಯಲ್ಲಿ ವೀಕ್ಷಿಸಲು ಇಚ್ಛಿಸುವವರು ‘ಜಿಯೋಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.

ಕ್ರಿಕೆಟ್‌ನಿಂದ ರಿಯಾಲಿಟಿ ಶೋವರೆಗೆ ‘ದಾದಾ’ ಜರ್ನಿ:

ಸೌರವ್ ಗಂಗೂಲಿ ಪ್ರಸ್ತುತ ‘ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್’ ಅಧ್ಯಕ್ಷರಾಗಿ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಬಂಗಾಳಿ ಕಿರುತೆರೆಯಲ್ಲಿ ಈಗಾಗಲೇ ಯಶಸ್ವಿ ಕ್ವಿಜ್ ಶೋ ನಡೆಸಿಕೊಟ್ಟಿರುವ ಗಂಗೂಲಿ ಅವರಿಗೆ ಬಿಗ್ ಬಾಸ್ ಸಂಪೂರ್ಣ ವಿಭಿನ್ನ ಹಾಗೂ ಸವಾಲಿನ ವೇದಿಕೆಯಾಗಲಿದೆ.

ಇದನ್ನೂ ಓದಿ: ತೆರೆಗೆ ಬರುತ್ತಿದೆ ‘ದಾದಾ’ನ ದಾದಾಗಿರಿ, ಬಿಡುಗಡೆ ದಿನಾಂಕ ಘೋಷಣೆ

6 ಭಾಷೆಗಳಲ್ಲಿ ಬಿಗ್ ಬಾಸ್ ಅಬ್ಬರ:

ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬಿಗ್ ಬಾಸ್ ಅಬ್ಬರ ಶುರುವಾಗಲಿದ್ದು, ಆಯಾ ಭಾಷೆಯ ಸೂಪರ್‌ಸ್ಟಾರ್‌ಗಳು ಶೋ ಮುನ್ನಡೆಸಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಆವೃತ್ತಿಯನ್ನು ಎಂದಿನಂತೆ ಕಿಚ್ಚ ಸುದೀಪ್ ಮುನ್ನಡೆಸಿದರೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಹಿಂದಿ ಆವೃತ್ತಿಯ ಸಾರಥ್ಯ ವಹಿಸಲಿದ್ದಾರೆ. ಇನ್ನು, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ನಿರೂಪಕರಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ 18 ಹುದ್ದೆಗಳ ನೇಮಕಾತಿ – Kannada News | Government Jobs in Karnataka: DHFWS Udupi Invites Applications for 18 Vacancies

ಕರ್ನಾಟಕದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಉಡುಪಿ (DHFWS Udupi) ವತಿಯಿಂದ ಜೂನಿಯರ್ ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ ಹಾಗೂ ಫಾರ್ಮಸಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 18 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ ಮತ್ತು ವಿದ್ಯಾರ್ಹತೆ

ಜೂನಿಯರ್ ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್- 5 (DMLT)
ಫಾರ್ಮಸಿ ಆಫೀಸರ್- 13 (D.Pharm)

ವಯೋಮಿತಿ:

ಗರಿಷ್ಠ ವಯಸ್ಸು: 45 ವರ್ಷ. ಆದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS) ನಿಯಮಾನುಸಾರ ವಯೋಸಡಿಲಿಕೆ ಅನ್ವಯವಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳ ಆಯ್ಕೆ ಇಲಾಖೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ನಡೆಯಲಿದೆ.
  • ಅರ್ಜಿಗಳ ಪರಿಶೀಲನೆ
  • ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೌಲ್ಯಮಾಪನ
  • ಅಗತ್ಯವಿದ್ದಲ್ಲಿ ಸಂದರ್ಶನ/ದಾಖಲೆ ಪರಿಶೀಲನೆ

ಇದನ್ನೂ ಓದಿ: ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ 2026: 5 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ (Step by Step)

ಹಂತ 1: DHFWS ಉಡುಪಿ ಪ್ರಕಟಿಸಿರುವ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಹಂತ 2: ನೀವು ಅರ್ಜಿ ಸಲ್ಲಿಸುವ ಹುದ್ದೆಗೆ ಅಗತ್ಯ ವಿದ್ಯಾರ್ಹತೆ ಹಾಗೂ ವಯೋಮಿತಿಯನ್ನು ಪರಿಶೀಲಿಸಿ.

ಹಂತ 3: ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.

ಹಂತ 4: ಅರ್ಜಿಯನ್ನು ಸ್ಪಷ್ಟವಾಗಿ ಹಾಗೂ ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ.

  • ಹಂತ 5: ಕೆಳಗಿನ ದಾಖಲೆಗಳ ಸ್ವಯಂ ದೃಢೀಕರಿಸಿದ (Self Attested) ಪ್ರತಿಗಳನ್ನು ಲಗತ್ತಿಸಿ.
    SSLC ಅಂಕಪಟ್ಟಿ
  • DMLT / D.Pharm ಪ್ರಮಾಣಪತ್ರ
  • ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
  • ವಯೋಮಿತಿ ದಾಖಲೆ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಅನುಭವ ಪ್ರಮಾಣಪತ್ರ (ಇದ್ದರೆ)
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ

ಹಂತ 6: ಅರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಉಡುಪಿ ಜಿಲ್ಲೆಗೆ ಕಳುಹಿಸಬೇಕು. ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ / ಸ್ಪೀಡ್ ಪೋಸ್ಟ್ ಅಥವಾ ಅಧಿಸೂಚನೆಯಲ್ಲಿ ಸೂಚಿಸಿರುವ ವಿಧಾನದಲ್ಲಿ ಕಳುಹಿಸಬಹುದು.

ಅಧಿಕೃತ ವೆಬ್‌ಸೈಟ್: udupi.nic.in

ಅಭ್ಯರ್ಥಿಗಳು ಗಮನಿಸಬೇಕಾದ ವಿಷಯಗಳು

  • ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
  • ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.
  • ಅಪೂರ್ಣ ಅರ್ಜಿಗಳನ್ನು ಇಲಾಖೆ ತಿರಸ್ಕರಿಸಬಹುದು.
  • ಅರ್ಜಿ ಕಳುಹಿಸುವ ಮೊದಲು ಮತ್ತೊಮ್ಮೆ ಪರಿಶೀಲನೆ ಮಾಡುವುದು ಉತ್ತಮ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

ಪ್ರಶ್ನೆ:ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?

ಉತ್ತರ: ಜೂನಿಯರ್ ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್ – 5, ಫಾರ್ಮಸಿ ಆಫೀಸರ್ – 13

ಪ್ರಶ್ನೆ: ಅರ್ಜಿ ಸಲ್ಲಿಸಲು ಅಗತ್ಯ ವಿದ್ಯಾರ್ಹತೆ ಏನು?

ಉತ್ತರ: ಜೂನಿಯರ್ ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್‌ಗೆ DMLT ಮತ್ತು ಫಾರ್ಮಸಿ ಆಫೀಸರ್‌ಗೆ D.Pharm ವಿದ್ಯಾರ್ಹತೆ ಕಡ್ಡಾಯ.

ಪ್ರಶ್ನೆ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಉತ್ತರ: 21 ಜುಲೈ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Source link

Exit mobile version