Headlines

ಫಿಫಾ ವಿಶ್ವಕಪ್‌ ಸಂಭ್ರಮಾಚರಣೆಯಲ್ಲಿ ದುರಂತ: 13 ವರ್ಷದ ಬಾಲಕ ಸಾವು; ಇಬ್ಬರಿಗೆ ಗಾಯ – Kannada News | Spain Crowned 2026 FIFA World Cup Champions; Victory Celebration Ends in Tragedy

2026 ರ ಫಿಫಾ ವಿಶ್ವಕಪ್​ಗೆ (FIFA World Cup 2026) ಅದ್ಧೂರಿ ತೆರೆಬಿದ್ದಿದೆ. ನ್ಯೂಜೆರ್ಸಿಯಲ್ಲಿ ನಡೆದ ಈ ಪ್ರಶಸ್ತಿ ಪಂದ್ಯದಲ್ಲಿ, ಸ್ಪೇನ್ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು (Spain vs Argentina) 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಯನ್ನು ಮಾಡಿತು. ತಂಡದ ಈ ಗೆಲುವನ್ನು ಸ್ಪೇನ್​ನಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಅಲ್ಲಿನ ನಾಗರೀಕರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿದೆ. ಫೌಂಟೇನ್ ಬಿದ್ದು ಬಾಲಕ…

Read More

ಸಂಸತ್​ನಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿಗೆ ಸ್ಕೈರೂಟ್ ಏರೋಸ್ಪೇಸ್ ಧನ್ಯವಾದ – Kannada News | Skyroot Aerospace thanks PM Narendra Modi for recognizing the achievement of rocket launch

ಸ್ಕೈರೂಟ್ ಏರೋಸ್ಪೇಸ್ ತಂಡImage Credit source: PTI ಹೈದರಾಬಾದ್, ಜುಲೈ 20: ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ತನ್ನ ‘ವಿಕ್ರಮ್-1’ (Vikram-1) ರಾಕೆಟ್‌ನ ಯಶಸ್ವಿ ಉಡಾವಣೆಯ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆಯನ್ನು ಸಂಸತ್ತಿನ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಪ್ರಧಾನಿಯವರಿಂದ ಸಂಸತ್ತಿನಲ್ಲಿ ತಮ್ಮ ತಂಡದ ಸಾಧನೆಗೆ ಸಿಕ್ಕ ಮನ್ನಣೆಗೆ ಸ್ಕೈರೂಟ್ ಸಂಸ್ಥೆಯು ಹರ್ಷ ವ್ಯಕ್ತಪಡಿಸಿದ್ದು, “ನಾವು ಭಾರತದಿಂದ ಜಗತ್ತಿಗಾಗಿ ಹೊಸ ಆವಿಷ್ಕಾರಗಳನ್ನು ಮುಂದುವರಿಸುತ್ತೇವೆ” ಎಂದು…

Read More

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆ: SIR ವೇಳೆ ಇದನ್ನು ಮಾನ್ಯ ದಾಖಲೆಯಾಗಿ ಪರಿಣಗಣಿಸಲಾಗುತ್ತದೆಯೇ? – Kannada News | Doorstep Delivery of Permanent Residence Certificate Launched: Will PRC be Accepted as Valid Document for SIR?

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆImage Credit source: DK Shivakumar X Account ಬೆಂಗಳೂರು, ಜುಲೈ 20: ಮನೆ ಮನೆಗೆ ಜಾತಿ‌ ಪ್ರಮಾಣ ಪತ್ರ ವಿತರಣೆ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಬಿಜೆಪಿ ವಿರೋಧದ ನಡುವೆಯೂ ಶಾಶ್ವತ ನಿವಾಸ ಪತ್ರ ವಿತರಣೆಗೆ ಚಾಲನೆ ನೀಡಲಾಗಿದ್ದು, 4.85 ಕೋಟಿ ಕುಟುಂಬಗಳಿಗೆ ಇದರ…

Read More

Monsoon Hair Care Tips: ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆಯೇ? ಚರ್ಮರೋಗ ತಜ್ಞರು ಹೇಳುವುದೇನು? – Kannada News | Monsoon hair care tips rain water hair fall fungal scalp infection

ಮಳೆಗಾಲದಲ್ಲಿ ಮಳೆಯಲ್ಲಿ (Rain) ನೆನೆದರೆ ಕೂದಲು ಹೆಚ್ಚು ಉದುರುತ್ತದೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತೇವೆ. ಮಳೆನೀರು ಕೂದಲನ್ನು ದುರ್ಬಲಗೊಳಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಮಳೆನೀರು ನೇರವಾಗಿ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಬದಲಾಗಿ, ಮಳೆಯಲ್ಲಿ ನೆನೆದ ನಂತರ ಕೂದಲಿಗೆ ಸರಿಯಾದ ಆರೈಕೆ ನೀಡದಿರುವುದೇ ಪ್ರಮುಖ ಕಾರಣವಾಗಿದೆ. ಮಳೆನೀರು, ತೇವಾಂಶ ಮತ್ತು ಮಾಲಿನ್ಯದ ಪರಿಣಾಮದಿಂದ ನೆತ್ತಿ ಹಾಗೂ ಕೂದಲಿನ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗಬಹುದು. ಕ್ಯಾಪಿಲರ್ ಆಸ್ಪತ್ರೆಯ ತಜ್ಞರ ಪ್ರಕಾರ, ಮಳೆನೀರು ಕೂದಲು ಉದುರುವಿಕೆಗೆ…

Read More

Kitchen Tips: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಈ ಸುಲಭ ಟ್ರಿಕ್ ಅನುಸರಿಸಿ – Kannada News | How to store green chillies in fridge to keep fresh longer

ಅಡುಗೆಮನೆಯಲ್ಲಿ ಹಸಿ ಮೆಣಸಿನಕಾಯಿ (Green Chilli) ಪ್ರತಿದಿನ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಆದರೆ ಒಮ್ಮೆ ಹೆಚ್ಚು ಪ್ರಮಾಣದಲ್ಲಿ ಖರೀದಿಸಿ ಫ್ರಿಜ್‌ನಲ್ಲಿ ಇಟ್ಟರೂ ಕೆಲವೇ ದಿನಗಳಲ್ಲಿ ಅದು ಮೆತ್ತಗಾಗಿ, ಕಪ್ಪಾಗಲು ಅಥವಾ ಕೊಳೆಯಲು ಆರಂಭಿಸುತ್ತದೆ. ಇದರಿಂದ ಅನೇಕರು ಮೆಣಸಿನಕಾಯಿಯನ್ನು ಆಗಾಗ ಖರೀದಿಸಬೇಕಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಹಸಿ ಮೆಣಸಿನಕಾಯಿಯನ್ನು ಹೆಚ್ಚು ದಿನ ತಾಜಾವಾಗಿ ಇಟ್ಟುಕೊಳ್ಳಬಹುದು. ಮೊದಲು, ಮಾರುಕಟ್ಟೆಯಿಂದ ತಂದ ತಕ್ಷಣ ಮೆಣಸಿನಕಾಯಿಯನ್ನು ತೊಳೆಯಬೇಡಿ. ಅದರ ಮೇಲೆ ಉಳಿದಿರುವ ತೇವಾಂಶ ಕೊಳೆಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಬಳಸುವ…

Read More

ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ! – Kannada News | Shri Kalikadevi Enterprises 10 Crore Work From Home Packing Scam Exposed

ಕೋಲಾರ, ಜುಲೈ 20: ಮನೆಯಲ್ಲೇ ಕುಳಿತು ಬಿಡುವಿನ ವೇಳೆಯಲ್ಲಿ ಊದುಬತ್ತಿ ಹಾಗೂ ಕರ್ಪೂರ ಪ್ಯಾಕ್ ಮಾಡುವ ಕೆಲಸ (work from home) ಮತ್ತು ಆಕರ್ಷಕ ಸಂಬಳ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿಯೊಂದು ಇದೀಗ ವಂಚನೆ (fraud) ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕೋಲಾರ ನಗರದ ಪಾಲಸಂದ್ರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿದ್ದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯೇ ವಂಚನೆ ಎಸಗಿರುವ ಕಂಪನಿ. ನಡೆದಿದ್ದೇನು? ಈ…

Read More

ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ತಯಾರಿಸಿದ ಹೂವಿನ ಪಲ್ಲಕ್ಕಿ ಹೇಗಿದೆ ನೋಡಿ

ಹಾಸನ, (ಜುಲೈ 20): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ನಡೆಯಲಿದ್ದು, ಈಗಾಗಲೇ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಿವೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಸಮಾಧಿ ಸ್ಥಳದಲ್ಲಿ ಮಂತ್ರಘೋಷಗಳು ಮೊಳಗುತ್ತಿವೆ. ಇನ್ನು ಚೆನ್ನಮ್ಮನವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಹೊತ್ತು ತರಲು ಹೂವಿನ ಪಲ್ಲಕಿ ಸಹ ಸಿದ್ಧವಾಗಿದೆ. ಇನ್ನು ಹೂವಿನ ಪಲ್ಲಕಿ ಹೇಗಿದೆ ಎನ್ನುವುದನ್ನು ನೋಡಿ. ಕರ್ನಾಟಕದ ಮತ್ತಷ್ಟು…

Read More

ಕ್ಷಮಿಸಿ ಅಪ್ಪಾ, 50 ಬಾರಿ ಪ್ರಯತ್ನ ಪಟ್ರೂ ಸರ್ಕಾರಿ ಕೆಲಸ ಸಿಗ್ಲಿಲ್ಲ, ಚಿನ್ನದ ಪದಕ ವಿಜೇತ ಯುವಕ ಆತ್ಮಹತ್ಯೆ – Kannada News | Sorry Dad, UP Graduate’s Heartbreaking Message before death Sparks Discussion on Employment Challenges

ಕಾನ್ಪುರ, ಜುಲೈ 20: ಇತ್ತೀಚಿನ ದಿನಗಳಲ್ಲಿ ಇದ್ದು ಸಾಧಿಸುವುದಕ್ಕಿಂತ ಹೇಡಿಯಂತೆ ಸಾಯುವ ದಾರಿಯನ್ನು ಯುವಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಬಿಟೆಕ್​ನಲ್ಲಿ ಚಿನ್ನದ ಪದಕ ಗೆದ್ದು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದ ಯುವಕ ಈಗ ಸರ್ಕಾರಿ ಕೆಲಸ (Government Job)ಸಿಗಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತನನ್ನು 23 ವರ್ಷದ ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಾನ್ಪುರದ ಪ್ರಸಿದ್ಧ ಪ್ರಣವೀರ್ ಸಿಂಗ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ…

Read More

ಮುರಿದುಬಿದ್ದ ಸ್ಟೀಲ್ ಬ್ರಿಡ್ಜ್​​​​ ಸೇತುವೆ ಸರಳು: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ – Kannada News | Full Traffic Jam In Raichur Mantralayam Road over Steel Bridge Cut

ರಾಯಚೂರು, (ಜುಲೈ 20): ತಾಲೂಕಿನ (Raichur) ಗಿಲ್ಲೆಸುಗೂರು ಬಳಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ತುಂಗಭದ್ರಾ ನದಿಗೆ (Tungabhadra River) ಅಡ್ಡಲಾಗಿ ನಿರ್ಮಿಸಿದ ಉಕ್ಕಿನ ಸೇತುವೆಯ (Steel Bridge) ಸರಳುಗಳು ತುಂಡಾಗಿವೆ. ಇದರಿಂದ ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರಾಯಚೂರು – ಮಂತ್ರಾಲಯಕ್ಕೆ ತೆರಳುವ ಮಾರ್ಗದ ಮುಖ್ಯ ಸೇತುವೆ ಇದಾಗಿದ್ದು, ಏಕಾಏಕಿ ಬ್ರಿಡ್ಜ್​​​​ ಮೇಲ್ಭಾಗದ ಕಬ್ಬಿಣದ ಸರಳು ಕಟ್ ಆಗಿ ಬಿದ್ದಿದೆ. ಅದೃಷ್ಟವಶಾತ್, ಅದೃಷ್ಟವಶಾತ್ ಈ ಅವಘಡದಿಂದ…

Read More

ಹೋಂಸ್ಟೇಗೆ ನೋಂದಣಿ ಕಡ್ಡಾಯ: ಕರ್ನಾಟಕದಾದ್ಯಂತ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ – Kannada News | Karnataka Homestays: Over 500 Apply for Registration as Tourism Department Makes It Mandatory

ಹೋಂಸ್ಟೇ (ಸಾಂದರ್ಭಿಕ ಚಿತ್ರ)Image Credit source: Getty Images ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ (Karnataka) ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು (Homestays) ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದ್ದು, ಹೊಸ ಮಾರ್ಗಸೂಚಿಗಳ ಅನ್ವಯ ಈಗಾಗಲೇ 500ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಗೆ ಅರ್ಜಿ ಸಲ್ಲಿಸಿವೆ. ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಮಾನದಂಡಗಳನ್ನು ಪೂರೈಸಿದ ಹೋಂಸ್ಟೇಗಳಿಗೆ ಮಾತ್ರ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ‘ಹೋಂಸ್ಟೇ ಎಸ್ಟಾಬ್ಲಿಷ್‌ಮೆಂಟ್ ನೋಂದಣಿ ಮಾರ್ಗಸೂಚಿ-2025’ ಅಡಿಯಲ್ಲಿ ಇನ್ನೂ ನೋಂದಣಿ…

Read More