ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಬಜೆಟ್ ಘೋಷಣೆಗಳು – Kannada News | Union Budget 2026 27, key announcements having impact on markets

ನವದೆಹಲಿ, ಫೆ. 1: ಈ ಬಾರಿಯ ಬಜೆಟ್​ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಸರ್ಕಾರದ ಬಂಡವಾಳ ವೆಚ್ಚವನ್ನು (Capital Expenditure) ಗಣನೀಯವಾಗಿ ಹೆಚ್ಚಿಸಲಾಗಿದೆ. ಕೆಲ ಆದಾಯ ತೆರಿಗೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಬಂಡವಾಳ ಹಿಂತೆಗೆತದ ಗುರಿಯನ್ನು (Divestment target) ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ 9ನೇ ಬಜೆಟ್​ನಲ್ಲಿ (2026-27) ಷೇರು ಹೂಡಿಕೆದಾರರಿಗೆ ಮುಖ್ಯವೆನಿಸುವ ಕೆಲ ಘೋಷಣೆಗಳು ಇಂತಿವೆ:

  • ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್​ಟಿಟಿಯನ್ನು ಶೇ. 0.05ಕ್ಕೆ ಏರಿಸಲಾಗಿದೆ. ಎಫ್ ಅಂಡ್ ಓ ಟ್ರೇಡಿಂಗ್ ಮಾಡುತ್ತಿರುವವರಿಗೆ ನಿರುತ್ಸಾಹ ಮೂಡಬಹುದು.
  • ಸ್ಟಾಕ್ ಬಯ್​ಬ್ಯಾಕ್ (ಷೇರು ಮರುಖರೀದಿ) ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಕಂಪನಿ ಮಾಲೀಕರಾದರೆ ಈಕ್ವಿಟಿ ಬಯ್​ಬ್ಯಾಕ್ ಮೇಲೆ ಶೇ. 22 ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇದೆ. ನಾನ್-ಕಾರ್ಪೊರೇಟ್ ಷೇರುದಾರರಾದರೆ ಶೇ. 30 ಟ್ಯಾಕ್ಸ್ ಇರುತ್ತದೆ.

ಇದನ್ನೂ ಓದಿ: ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ

  • ಎನ್​ಆರ್​ಐಗಳ ಈಕ್ವಿಟಿ ಮಾಲಕತ್ವ ಮಿತಿಯನ್ನು ಶೇ. 5ರಿಂದ ಶೇ. 10ಕ್ಕೆ ಏರಿಸಲಾಗಿದೆ. ವಿದೇಶಗಳಲ್ಲಿ ಇವರ ರೀಟೇಲ್ ಹೋಲ್ಡಿಂಗ್ ಅನ್ನು ಶೇ. 10ರಿಂದ ಶೇ. 24ಕ್ಕೆ ವಿಸ್ತರಿಸಲಾಗಿದೆ.
  • ಇನ್​ಫ್ರಾಸ್​ಟ್ರಕ್ಚರ್ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರ ಮಾಡುವ ಕ್ಯಾಪೆಕ್ಸ್ ಅಥವಾ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂಗೆ ಏರಿಕೆ ಮಾಡಲಾಗಿದೆ.
  • ವಿತ್ತೀಯ ಕೊರತೆಯ ಗುರಿ 2025-26ರಲ್ಲಿ ಶೇ. 4.4 ಇತ್ತು. ಮುಂದಿನ ವರ್ಷಕ್ಕೆ ಅದನ್ನು ಶೇ. 4.3ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

  • ಸೆಮಿಕಂಡಕ್ಟರ್ಸ್, ರೇರ್ ಅರ್ಥ್ ವಸ್ತುಗಳು, ಬಯೋಸಿಮಿಲರ್​ಗಳು, ಕ್ಲೀನ್ ಟೆಕ್ನಾಲಜಿ ಅಭಿವೃದ್ಧಿಗೆ ಒ್ತು ಕೊಡಲಾಗಿದೆ. ಈ ಕ್ಷೇತ್ರದಲ್ಲಿರುವ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು.
  • 2026-27ರ ವರ್ಷಕ್ಕೆ ಬಂಡವಾಳ ಹಿಂತೆಗೆತದ ಗುರಿಯನ್ನು 80,000 ಕೋಟಿ ರೂಗೆ ಇರಿಸಲಾಗಿದೆ. ಹಿಂದಿನ ವರ್ಷದಲ್ಲಿ 33,837 ಕೋಟಿ ರೂ ಗುರಿ ಇಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CM Siddaramaiah Press Conference Live: ಸಿದ್ದರಾಮಯ್ಯ ಸುದ್ದಿಗೋಷ್ಠಿ ನೇರ ಪ್ರಸಾರ – Kannada News | Karnataka CM Siddaramaiah Press Conference Live Siddu Reaction on Union Budget 2026 and other major issues

ಕಲಬುರಗಿ, (ಫೆಬ್ರವರಿ 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಅವರು ಇಂದು (ಫೆಬ್ರವರಿ 01) 2026-27ನೇ ಸಾಲಿನ ಬಜೆಟ್ (Union Budget 2026) ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಆದ್ರೆ, ಕರ್ನಾಟಕಕ್ಕೆ ಹೇಳಿಕೊಳ್ಳುವಂತ ಯೋಜನೆಗಳು ಸಿಕ್ಕಿಲ್ಲ. ಈ ಸಂಬಂಧ ಕಾಂಗ್ರೆಸ್ ನಾಯಕರು ಕೇಂದ್ರ ಬಜೆಟ್​​ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕೇಂದ್ರ ಬಜೆಟ್​​ಗೆ ಸಂಬಂಧ ಸಿಎಂ ಸಿದ್ದರಾಮಯ್ಯನವರು (Siddaramaiah) ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರ ಪ್ರಸಾರದಲ್ಲಿ ಇಲ್ಲಿದೆ.

ಇದನ್ನೂ ಓದಿ: Budget 2026 Announcements LIVE: ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ, ತೆರಿಗೆ ವಿಳಂಬಕ್ಕೆ ದಂಡ ಮಾತ್ರ, ಶಿಕ್ಷೆ ಇಲ್ಲ

Source link

Sunetra Pawar: ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸುನೇತ್ರಾ ಪವಾರ್ ಮೊದಲ ಭಾವುಕ ಪೋಸ್ಟ್​ – Kannada News | Sunetra Pawar Takes Office as Maharashtra Deputy CM, Shares Emotional First Post

ಪುಣೆ, ಫೆಬ್ರವರಿ 01: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar)  ಮೃತಪಟ್ಟ ಬಳಿಕ ಅವರ ಹುದ್ದೆಯನ್ನು ಅಜಿತ್ ಪತ್ನಿ ಸುನೇತ್ರಾ ಪವಾರ್ ವಹಿಸಿಕೊಂಡಿದ್ದಾರೆ. ಈಗ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಪೋಸ್ಟ್ ಮಾಡಿದ್ದಾರೆ. ರಾಜಭವನದ ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸುನೇತ್ರಾ ಪವಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಗೌರವಾನ್ವಿತ ಅಜಿತ್ ಪವಾರ್ ತಮ್ಮ ಜೀವನದುದ್ದಕ್ಕೂ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ದೀನದಲಿತರಿಗಾಗಿ ಬದುಕಿದ್ದರು. ಇಂದು, ಅವರ ಚಿಂತನೆಗಳ ಪರಂಪರೆಯನ್ನು ಮುಂದುವರೆಸಿಕೊಂಡು ಮತ್ತು ‘ಶಿವ-ಶಾಹು-ಫುಲೆ-ಅಂಬೇಡ್ಕರ್’ ಅವರ ಚಿಂತನೆಗಳಿಗೆ ನಿಷ್ಠರಾಗಿ ಉಳಿದು, ಕರ್ತವ್ಯ ಪ್ರಜ್ಞೆಯೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ಸ್ವೀಕರಿಸುವಾಗ ನನ್ನ ಹೃದಯ ಅಕ್ಷರಶಃ ತುಂಬಿ ಬಂತು ಎಂದಿದ್ದಾರೆ.

ದಾದಾ ಅವರ ಅಕಾಲಿಕ ಮರಣವು ನನ್ನ ಹೃದಯಕ್ಕೆ ದುಃಖದ ಪರ್ವತವನ್ನೇ ತಂದೊಡ್ಡಿದ್ದರೂ ಅವರು ನನಗೆ ಕಲಿಸಿದ ನಿಷ್ಠೆ, ಹೋರಾಟದ ಶಕ್ತಿ ಮತ್ತು ಜನರ ಮೇಲಿನ ಬದ್ಧತೆಯೇ ನನ್ನ ನಿಜವಾದ ಬೆಂಬಲ. ಅವರು ಕಂಡ ಕನಸಿನಂತೆ ನ್ಯಾಯಯುತ, ಸಮಾನ ಮತ್ತು ಅಭಿವೃದ್ಧಿ ಹೊಂದಿದ ಮಹಾರಾಷ್ಟ್ರವನ್ನು ರಚಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ.

ಮತ್ತಷ್ಟು ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?

ಈ ಕಷ್ಟದ ಸಮಯದಲ್ಲಿ ಮಹಾರಾಷ್ಟ್ರದ ಜನರು ನೀಡಿದ ಪ್ರೀತಿ ಮತ್ತು ಬೆಂಬಲ ನನ್ನ ಶಕ್ತಿ. ನನ್ನ ನಂಬಿಕೆಯ ಬಲದ ಮೇಲೆ, ದಾದಾ ಅವರ ಚಿಂತನೆಗಳ ಬೆಳಕನ್ನು ಬೆಳಗಿಸುವ ಮೂಲಕ ನಾನು ಹೊಸ ಭರವಸೆಯೊಂದಿಗೆ ಮುಂದುವರೆಯುತ್ತೇನೆ ಎಂದು ಪೋಸ್ಟ್​ ಮಾಡಿದ್ದಾರೆ.

ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಸುನೇತ್ರಾ ಪವಾರ್ ಅವರಿಗೆ ಈಗ ಮಹಾರಾಷ್ಟ್ರ ರಾಜ್ಯದ ಮೂರು ಖಾತೆಗಳಾದ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿಯನ್ನು ನೀಡಲಾಗಿದೆ. ಅಜಿತ್ ಪವಾರ್ ಹೊಂದಿರುವ ಪ್ರಮುಖ ಹಣಕಾಸು ಖಾತೆಯು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಹೋಗಲಿದೆ.

ಬಾರಾಮತಿಯಲ್ಲಿ ಸಭೆ ನಡೆಸಲು ಮುಂಬೈನಿಂದ ಹೊರಟಿದ್ದ ಅಜಿತ್ ಪವಾರ್ ಅವರಿದ್ದ ವಿಮಾನ ಬುಧವಾರ ಬೆಳಗ್ಗೆ ಪತನಗೊಂಡಿತು. ಅಜಿತ್ ಪವಾರ್ ಸೇರಿದಂತೆ ಇತರ ಐದು ಜನರು ವಿಮಾನದಲ್ಲೇ ಸಾವನ್ನಪ್ಪಿದ್ದರು. ಬುಧವಾರ ಬೆಳಗ್ಗೆ 8.30 ಕ್ಕೆ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವಿನ ಸುದ್ದಿ ಹೊರಬಿದ್ದಿತ್ತು. ಅಜಿತ್ ಪವಾರ್ ಅವರ ದೇಹವನ್ನು ಅವರ ವಾಚ್, ಕನ್ನಡಕ ಮತ್ತು ಜಾಕೆಟ್‌ನಿಂದ ಗುರುತಿಸಲಾಗಿದೆ. ಏತನ್ಮಧ್ಯೆ, ಅಜಿತ್ ಪವಾರ್ ಅವರ ಮರಣದ ನಂತರ, ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ! ಮಹಾರಾಷ್ಟ್ರ, ಗೋವಾದಿಂದಲೂ ಬಂದ ಲಕ್ಷಾಂತರ ಭಕ್ತರು – Kannada News | Lakhs of devotees came for Savadatti Renuka Yellamma Fair

ಬೆಳಗಾವಿ, ಫೆಬ್ರುವರಿ 01: ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಜಾತ್ರೆ ಗೆ ಭಕ್ತಸಾಗರವೇ ಹರಿದುಬಂತು. ಉತ್ತರ ಕರ್ನಾಟಕ ಭಾಗದಲ್ಲೇ ಅತಿದೊಡ್ಡ ಮಟ್ಟದಲ್ಲಿ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರ, ಗೋವಾ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದು, ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನಸಾಗರ ಕಂಡುಬಂದಿದೆ. ಭಕ್ತರ ಭಾರೀ ಆಗಮನದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಬಜೆಟ್​​ನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ; ಆಂಧ್ರ, ಜಮ್ಮು ಕಾಶ್ಮೀರದಲ್ಲಿ ಟ್ರೆಕಿಂಗ್ ತಾಣಗಳ ಅಭಿವೃದ್ಧಿ – Kannada News | Nirmala Sitharaman Budget 2026 boost for Eco Tourism to develop Araku Valley sustainable mountain trails

ನವದೆಹಲಿ, ಫೆಬ್ರವರಿ 1: 2026ರ ಬಜೆಟ್‌ನಲ್ಲಿ (Budget 2026) ಕೇಂದ್ರವು ಪ್ರವಾಸೋದ್ಯಮ ವಲಯಕ್ಕೆ ವಿಶೇಷ ಒತ್ತು ನೀಡಿದ್ದು, ದೇಶಾದ್ಯಂತ 20 ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಕೇಂದ್ರಗಳಾಗಿ ಗುರುತಿಸಿದೆ. ಅವುಗಳಲ್ಲಿ, ಆಂಧ್ರಪ್ರದೇಶದ ಅರಕು ಕಣಿವೆ (Araku Valley) ವಿಶೇಷ ಗಮನ ಸೆಳೆದಿದೆ. ಈ ಸುಂದರವಾದ ಬೆಟ್ಟ ಪ್ರದೇಶವನ್ನು ಚಾರಣ, ಪರಿಸರ ಪ್ರವಾಸೋದ್ಯಮ ಮತ್ತು ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಕೇಂದ್ರ ಬಜೆಟ್‌ನ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಘೋಷಿಸಿದ್ದಾರೆ. ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಟ್ರೆಕಿಂಗ್ ಹೋಗುವವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು, ಟ್ರೆಕಿಂಗ್ ತಾಣಗಳನ್ನು ಅಭಿವೃದ್ಧಿಪಡಿಸಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ದುರ್ಬಲ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವ ಮೂಲಕ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಆಂಧ್ರದ ಅರಕು ಕಣಿವೆಯಲ್ಲಿ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿಯೂ ಇಕೋ ಟೂರಿಸಂ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.

ಇದನ್ನೂ ಓದಿ: ಬಜೆಟ್​​ ಬಳಿಕ ಯಾವೆಲ್ಲ ವಸ್ತುಗಳ ದರ ಇಳಿಕೆ? ವಿವರ ಇಲ್ಲಿದೆ

ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಶಾಲವಾದ ಪ್ರಯತ್ನದ ಭಾಗವಾಗಿ ಸಾರನಾಥ ಮತ್ತು ಹಸ್ತಿನಾಪುರ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸಲು, ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಯನ್ನು ಹೆಚ್ಚಿಸಲು ದೇಶಾದ್ಯಂತ ಆಧ್ಯಾತ್ಮಿಕ ಮತ್ತು ಪರಂಪರೆಯ ಪ್ರಾಮುಖ್ಯತೆಯ ಎಲ್ಲಾ ಸ್ಥಳಗಳನ್ನು ದಾಖಲಿಸಲಾಗುವುದು.

ಗುಡ್ಡಗಾಡು ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ಪ್ರದೇಶಗಳಲ್ಲಿ ಪರ್ವತ ರೈಲು ಸೇವೆಗಳನ್ನು ಪರಿಚಯಿಸುವ ಯೋಜನೆಗಳನ್ನು ಬಜೆಟ್ ವಿವರಿಸಿದೆ.

ಇದನ್ನೂ ಓದಿ: ಬಜೆಟ್ 2026: ರೈತರಿಗೆ ಸ್ಮಾರ್ಟ್ ಕೃಷಿ ಸಲಹೆ ನೀಡುತ್ತೆ ಭಾರತ್ ವಿಸ್ತಾರ್ ಎಐ ಟೂಲ್! ಏನಿದರ ವಿಶೇಷ?

ಕಡಿಮೆ ಬೆಲೆಗೆ ಅಂತಾರಾಷ್ಟ್ರೀಯ ಪ್ರಯಾಣ, ಹೊಸ ಪ್ರವಾಸೋದ್ಯಮ ಕೇಂದ್ರಗಳು ಮತ್ತು ವಿಶ್ವ ದರ್ಜೆಯ ಅನುಭವಗಳೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ವರ್ಷದ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವಾಸೋದ್ಯಮ ವಲಯವು ಉದ್ಯೋಗ ಸೃಷ್ಟಿ ಮತ್ತು ವಿದೇಶೀ ವಿನಿಮಯ ಗಳಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದಾದ್ಯಂತ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲು ಪೈಲಟ್ ಯೋಜನೆಯನ್ನು ಸಹ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. “ವಿಶ್ವ ದರ್ಜೆಯ ಚಾರಣದ ಅನುಭವಗಳನ್ನು ನೀಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಭಾರತ ಹೊಂದಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸರೀಯವಾಗಿ ಸುಸ್ಥಿರ ಪರ್ವತದ ಹಾದಿಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ. ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳ ಪೋತಿಗೈ ಮಲೈನಲ್ಲಿಯೂ ಸಹ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಹಾಗೇ, ದೇಶದ 15 ಪುರಾತತ್ವ ತಾಣಗಳನ್ನು ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು. ಉತ್ಖನನ ಮಾಡಿದ ಭೂದೃಶ್ಯಗಳನ್ನು ಸಾರ್ವಜನಿಕರಿಗೆ ಕ್ಯುರೇಟೆಡ್ ವಾಕ್‌ವೇಗಳ ಮೂಲಕ ಮುಕ್ತಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Budget 2026-27: ದಕ್ಷಿಣ ಭಾರತದಲ್ಲಿ ಎಲ್ಲೆಲ್ಲೂ ಕಾಣ ಸಿಗುವ ಕಾಫಿ ವೆಂಡಿಂಗ್​ ಮಶಿನ್ ಇನ್ನುಂದೆ ದುಬಾರಿ! – Kannada News | Budget 2026 27 Impact: Essential Medicines, EVs Cheaper; Coffee, Luxury Goods Costlier

ಕಾಫಿ ರೋಸ್ಟಿಂಗ್, ಬ್ರೂಯಿಂಗ್ ಮತ್ತು ವೆಂಡಿಂಗ್ ಯಂತ್ರಗಳ ದರ ಹೆಚ್ಚಳImage Credit source: Google

ನವದೆಹಲಿ, ಫೆ. 1: 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತಕ್ಕೆ ಓತ್ತು ನೀಡಿದ್ದು, ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಗ್ರಾಹಕರು ಮತ್ತು ಸಾಮಾನ್ಯ ತೆರಿಗೆದಾರರಿಗೆ ಪರಿಹಾರ ಒದಗಿಸುವ ಹಲವು ಘೋಷಣೆಗಳನ್ನು ಮಾಡಿದೆ. ಸುಂಕದ ಏರಿಳಿಕೆಯ ಕಾರಣಕ್ಕೆ ಹಲವು ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಅಗತ್ಯ ಔಷಧಿಗಳು, ಎಲೆಕ್ಟ್ರಿಕ್ ವಾಹನಗಳು (EV), ಚರ್ಮ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಸುಂಕ ಮತ್ತು ಕಸ್ಟಮ್ಸ್ ಡ್ಯೂಟಿಯನ್ನು ಸರ್ಕಾರ ಕಡಿತಗೊಳಿಸಿದೆ. ಇದರಿಂದ ಈ ವಸ್ತುಗಳು ಗ್ರಾಹಕರಿಗೆ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಆದರೆ ಐಷಾರಾಮಿ ವಸ್ತುಗಳಾದ ಗಡಿಯಾರಗಳು ಮತ್ತು ಮದ್ಯಪಾನೀಯಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಾಗಿದ್ದು, ಅವುಗಳ ಬೆಲೆ ಹೆಚ್ಚಾಗಲಿದೆ.

ಯಾವುದರ ಬೆಲೆ ಇಳಿಕೆ?

ವಿಮಾನ ಭಾಗಗಳು, ಮೈಕ್ರೋವೇವ್ ಭಾಗಗಳು, ಅಗತ್ಯ ಔಷಧಿಗಳು ಮತ್ತು ಕೆಲವು ಆಮದು ವಸ್ತುಗಳ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಮೈಕ್ರೋವೇವ್ ಓವನ್‌ಗಳು, EV ಬ್ಯಾಟರಿಗಳು, ಸೌರ ಫಲಕಗಳು ಮತ್ತು ವಿಮಾನ ಭಾಗಗಳ ಬೆಲೆ ಇಳಿಕೆಯಾಗಲಿದೆ. ಮಧುಮೇಹ ಮತ್ತು ಕ್ಯಾನ್ಸರ್ ರೋಗಿಗಳ ಔಷಧಿಗಳನ್ನು ಒಳಗೊಂಡಂತೆ ಒಟ್ಟು 17 ಔಷಧಿಗಳ ಬೆಲೆ ಕಡಿಮೆಯಾಗಲಿದೆ. ಭಾರತದಲ್ಲಿ ತಯಾರಾಗುವ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ದರವೂ ಇಳಿಯುವ ಸಾಧ್ಯತೆ ಇದೆ. ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳ ಬೆಲೆಯೂ ಕಡಿಮೆ ಆಗಲಿದೆ. ಬಜೆಟ್ 2026 ಭಾಷಣದಲ್ಲಿ ಚರ್ಮ ಉದ್ಯಮದ ರಫ್ತನ್ನು ಉತ್ತೇಜಿಸುವ ಉದ್ದೇಶದಿಂದ ಕೆಲವು ನಿರ್ದಿಷ್ಟ ಇನ್‌ಪುಟ್‌ಗಳಿಗೆ ಸುಂಕರಹಿತ ಆಮದು ಸೌಲಭ್ಯವನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ಇದರಿಂದ ಶೇ.50 ಅಮೆರಿಕದ ತೆರಿಗೆ ಹೊರೆ ಅನುಭವಿಸುತ್ತಿರುವ ಚರ್ಮ ರಫ್ತುಗಾರರಿಗೆ ನೆರವಾಗಲಿದೆ.

ಇದನ್ನೂ ಓದಿ: ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ

ಯಾವುದರ ಬೆಲೆ ಹೆಚ್ಚಳ?

ಐಷಾರಾಮಿ ಗಡಿಯಾರಗಳು ಮತ್ತು ಆಮದು ಮದ್ಯಪಾನೀಯಗಳು ದುಬಾರಿಯಾಗಲಿವೆ. ಸಿಗರೇಟು, ಬೀಡಿ, ಪಾನ್ ಮಸಾಲಾ ಮತ್ತು ಗುಟ್ಕಾ ಸೇರಿದಂತೆ ಪಾಪ ವಸ್ತುಗಳ ಮೇಲೂ ತೆರಿಗೆ ಹೆಚ್ಚಾಗಲಿದೆ. ಕಾಫಿ ರೋಸ್ಟಿಂಗ್, ಬ್ರೂಯಿಂಗ್ ಮತ್ತು ವೆಂಡಿಂಗ್ ಯಂತ್ರಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿರುವುದರಿಂದ, ಇವುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಅಮೋನಿಯಂ ಫಾಸ್ಫೇಟ್ ಮತ್ತು ಅಮೋನಿಯಂ ನೈಟ್ರೋ-ಫಾಸ್ಫೇಟ್ ಆಮದು ಮೇಲಿನ ಶುಲ್ಕ ವಿನಾಯಿತಿಯನ್ನು ತೆಗೆದುಹಾಕಿರುವುದರಿಂದ, ಕೆಲವು ಗೊಬ್ಬರಗಳ ಬೆಲೆ ಕೂಡ ಹೆಚ್ಚಾಗಲಿದೆ. ಆಮದು ಮಾಡಿಕೊಳ್ಳುವ ದೂರದರ್ಶನ ಉಪಕರಣಗಳು, ಕ್ಯಾಮೆರಾಗಳು, ಚಲನಚಿತ್ರ ನಿರ್ಮಾಣಕ್ಕೆ ಬಳಸುವ ಸಾಧನಗಳು ಹಾಗೂ ಫೋಟೋಗ್ರಫಿ, ಚಿತ್ರೀಕರಣ ಮತ್ತು ಧ್ವನಿ ದಾಖಲು ಉಪಕರಣಗಳ ಬೆಲೆಯೂ ಹೆಚ್ಚಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:59 pm, Sun, 1 February 26

Source link

ಮದುವೆಯಾಗಿ 2 ತಿಂಗಳಿಗೆ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ – Kannada News | Man Found Dead in UP Investigation Reveals Murder Disguised as Suicide

ಸಾವು-ಸಾಂದರ್ಭಿಕ ಚಿತ್ರImage Credit source: NDTV

ಬರೇಲಿ, ಫೆಬ್ರವರಿ 01: ಪತ್ನಿಯೊಬ್ಬಳು ಮದುವೆಯಾಗಿ ಎರಡು ತಿಂಗಳಿಗೆ ಪತಿಯ ಕತ್ತು ಹಿಸುಕಿ ಕೊಲೆ(Murder) ಮಾಡಿರುವ ಘಟನೆ ಬರೇಲಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಬರೇಲಿಯಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತಯಾಗಿದ್ದರು. ಜಿತೇಂದ್ರ ಯಾದವ್ ಎಂಬುವವರು ಕೊಲೆಯಾದ ವ್ಯಕ್ತಿ. ಆರಂಭದಲ್ಲಿ ಅದು ಆತ್ಮಹತ್ಯೆ ಕೊಲೆಯಲ್ಲ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದರು. ಆನ್‌ಲೈನ್ ಜೂಜಿನಲ್ಲಿ 20,000 ರೂ. ಕಳೆದುಕೊಂಡ ಕಾರಣದಿಂದ ಉಂಟಾದ ವಿವಾದದ ನಂತರ, ಯಾದವ್ ಅವರನ್ನು ಅವರ ಪತ್ನಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ದಾರಿ ತಪ್ಪಿಸಲು ಮಹಿಳೆ ಯತ್ನಿಸಿದ್ದಾಳೆ, ಆರೋಪಿಯು ತನ್ನ ಕುಟುಂಬ ಸದಸ್ಯರ ಸಹಾಯದಿಂದ ಬಾಡಿಗೆ ಮನೆಯೊಳಗೆ ಶವಕ್ಕೆ ನೇಣು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಳು. ಜಿತೇಂದ್ರ ಅವರ ಸಹೋದರ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಆದಾಗ್ಯೂ, ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೇಲಿನ ಗಾಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದು ಸಹಜಸಾವಲ್ಲ, ಕೊಲೆ ಎನ್ನುವ ನಿರ್ಧಾರಕ್ಕೆ ಬಂದರು.

ಮೃತ ವ್ಯಕ್ತಿಯ ದೇಹದ ಸ್ಥಾನ, ಮಲದ ಸ್ಥಾನ ಮತ್ತು ದೈಹಿಕ ಸ್ಥಿತಿಯು ಆತ್ಮಹತ್ಯೆಗೆ ಹೊಂದಿಕೆಯಾಗುವುದಿಲ್ಲ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ತೋರಿಸಿದಾಗ ತನಿಖೆ ನಿರ್ಣಾಯಕ ತಿರುವು ಪಡೆದುಕೊಂಡಿತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಒಂಬತ್ತು ವರ್ಷಗಳ ಸುದೀರ್ಘ ಸಂಬಂಧದ ನಂತರ, ಜಿತೇಂದ್ರ ಕಳೆದ ವರ್ಷ ನವೆಂಬರ್ 25 ರಂದು ಜ್ಯೋತಿಯನ್ನು ವಿವಾಹವಾದರು ಮತ್ತು ದಂಪತಿ ಘಟನೆ ನಡೆದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ತನಿಖೆಯ ಸಮಯದಲ್ಲಿ, ಮದುವೆಯಾದ ಕೂಡಲೇ, ರೋಡ್‌ವೇಸ್ ಕಂಡಕ್ಟರ್ ಜ್ಯೋತಿ, ಜಿತೇಂದ್ರ ಅವರ ಮೇಲೆ ತನ್ನ ಪೂರ್ವಜರ ಆಸ್ತಿಯನ್ನು ಮಾರಿ ತನ್ನ ಹೆಸರಿನಲ್ಲಿ ಮನೆ ಮತ್ತು ಕಾರನ್ನು ಖರೀದಿಸಲು ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಪೊಲೀಸರು ಆರೋಪಿಸಿದ್ದಾರೆ. ಅವರು ನಿರಾಕರಿಸಿದಾಗ, ಜ್ಯೋತಿ ಮತ್ತು ಆಕೆಯ ಕುಟುಂಬದವರು ಅವನ ಮತ್ತು ಅವನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.

ಮತ್ತಷ್ಟು ಓದಿ: ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಗಂಡ ಸತ್ತಿದ್ದಾನೆಂದು ತಿಳಿದ ನಂತರ, ಜ್ಯೋತಿ ತನ್ನ ಹೆತ್ತವರನ್ನು ಸಂಪರ್ಕಿಸಿ, ಶವವನ್ನು ವೇಲಿನಿಂದ ನೇತುಹಾಕಿ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ಸಮಯದಲ್ಲಿ ಜ್ಯೋತಿಯ ಫೋನ್‌ನಿಂದ ಮಾಡಿದ ಕೊನೆಯ ಕರೆ ಅವಳ ಪೋಷಕರಿಗೆ ಆಗಿತ್ತು, ತುರ್ತು ಸೇವೆಗಳು ಅಥವಾ ಜಿತೇಂದ್ರ ಅವರ ಕುಟುಂಬಕ್ಕೆ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದ ದತ್ತಾಂಶವು ಅದೇ ಅವಧಿಯಲ್ಲಿ ಆಕೆಯ ಕೆಲವು ಕುಟುಂಬ ಸದಸ್ಯರು ಮನೆಯ ಸಮೀಪದಲ್ಲಿ ಇದ್ದರು ಎಂದು ತೋರಿಸುತ್ತದೆ.

ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ಜ್ಯೋತಿ, ಆಕೆಯ ತಂದೆ ಕಾಳಿಚರಣ್ ಮತ್ತು ತಾಯಿ ಚಮೇಲಿಯನ್ನು ಬಂಧಿಸಿ, ಜನವರಿ 31 ರಂದು ಡೆಲಾಪೀರ್-ತ್ರಿಶೂಲ್ ತಿರಹಾ ರಸ್ತೆಯಲ್ಲಿರುವ ಸ್ಮಶಾನದ ಬಳಿಯ ಪ್ರದೇಶದಿಂದ ಬಂಧಿಸಿದರು. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಳೆಯೇ (ಫೆ 2) ವಿಜಯ್-ರಶ್ಮಿಕಾ ವಿವಾಹ? ವೈರಲ್ ವಿಡಿಯೋನಲ್ಲಿ ಏನೇನಿದೆ? – Kannada News | Rashmika Mandanna and Vijay Deverakonda getting married on February 02

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಗುಟ್ಟೇನೂ ಅಲ್ಲ. ಈ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ, ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ಈ ಜೋಡಿ ವಿವಾಹ ಆಗುತ್ತಿದ್ದು, ವಿವಾಹವನ್ನೂ ಸಹ ಗುಟ್ಟಾಗಿಯೇ ಇರಿಸಿದ್ದಾರೆ. ಆದರೆ ಸುದ್ದಿ ಲೀಕ್ ಆಗಿದೆ. ವಿಜಯ್ ಮತ್ತು ರಶ್ಮಿಕಾ ಅವರು ನಾಳೆ (ಫೆಬ್ರವರಿ 2) ಮದುವೆ ಆಗುತ್ತಿದ್ದು, ಮದುವೆ ತಯಾರಿಯದ್ದು ಎನ್ನಲಾದ ವಿಡಿಯೋ ಸಹ ವೈರಲ್ ಆಗಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಕೆಲ ತಿಂಗಳ ಹಿಂದಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಖತ್ ಸುದ್ದಿ ಆಗಿತ್ತು. ಅದಾದ ಬಳಿಕ ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿ ಸಹ ಮುಗಿಸಿಕೊಂಡು ಬಂದರು. ವಿಜಯ್ ಮತ್ತು ರಶ್ಮಿಕಾ ಜಂಟಿಯಾಗಿ ವಿದೇಶಕ್ಕೆ ಹೋಗಿ ಶಾಪಿಂಗ್ ಸಹ ಮಾಡಿಕೊಂಡು ಬಂದರು. ಇಬ್ಬರು ಫೆಬ್ರವರಿಯಲ್ಲಿ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದಲೂ ಹರಿದಾಡುತ್ತಿತ್ತು, ಆದರೆ ಇವರ ಮದುವೆ ನಾಳೆ (ಫೆಬ್ರವರಿ 2) ನಡೆಯಲಿದೆ ಎನ್ನಲಾಗುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಇಬ್ಬರು ಯುವತಿಯರು ತಾವು ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ನಡೆಯಲಿರುವ ಸ್ಥಳದಲ್ಲಿ ಇದ್ದು, ಅದ್ಧೂರಿಯಾಗಿ ವಿವಾಹದ ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದಾರೆ ಅಲ್ಲದೆ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ರಾಜಸ್ಥಾನದ ಅರಮನೆಗಳ ನಗರ ಉದಯಪುರದ ಸಿಟಿ ಪ್ಯಾಲೆಸ್​​ನಲ್ಲಿ ವಿವಾಹ ನಡೆಯಲಿದೆ ಎಂದು ವೈರಲ್ ವಿಡಿಯೋನಲ್ಲಿ ಯುವತಿಯರು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೋನಲ್ಲಿ ವೇದಿಕೆಯನ್ನು ಬಲು ಅದ್ಧೂರಿಯಾಗಿ ಸಿಂಗರಿಸಲಾಗುತ್ತಿದೆ.

ಎರಡು ದಿನದ ಹಿಂದಷ್ಟೆ ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆಗ ಪಾಪರಾಟ್ಜಿಗಳು ‘ಮದುವೆಗೆ ಕರೆಯುವುದಿಲ್ಲವೇ?’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಣತನದ ಉತ್ತರ ನೀಡಿ ಜಾರಿಕೊಂಡ ರಶ್ಮಿಕಾ, ‘ಯಾರ ಮದುವೆ?’ ಎಂದು ಕೇಳಿದ್ದಾರೆ. ಮತ್ತೆ ಮದುವೆಯ ಬಗ್ಗೆಯೇ ಪ್ರಶ್ನೆ ಕೇಳಿದಾಗ ತಕ್ಷಣವೇ ಜಾಣತನದಿಂದ ಮಾತನ್ನು ಸಿನಿಮಾದ ಕಡೆಗೆ ತಿರುಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Union Budget 2026: ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು – Kannada News | Union Budget 2026 Expectations: Women Programmes Expected To Remain In Focus

ಬೆಂಗಳೂರು, ಫೆಬ್ರುವರಿ 01: ಕೇಂದ್ರ ಬಜೆಟ್ 2026ಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರೀಕ್ಷೆಗಳು ಮೂಡಿವೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಬಜೆಟ್ ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಸುಧಾರಣೆಗಳ ಮೇಲೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಮಹಿಳೆಯರ ಪಾತ್ರ ನೀತಿ ನಿರೂಪಣೆಯಲ್ಲಿ ಹೆಚ್ಚಾಗಿದ್ದು, ಈ ಬಜೆಟ್ ಅನ್ನು ಮಹಿಳೆಯರ ಪಾಲಿಗೆ “ಭಾಗ್ಯದ ಪೆಟ್ಟಿಗೆ” ಎಂದು ಹೇಳಲಾಗುತ್ತಿದೆ. ಜನಧನ್ ಖಾತೆದಾರ ಮಹಿಳೆಯರಿಗೆ ಬ್ಯಾಂಕ್ ಸಾಲ, ವಿಮಾ ಯೋಜನೆಗಳು, ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್‌ಗಳು ಹಾಗೂ ಗ್ರಾಮೀಣ ಉದ್ಯಮಗಳು ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳು ಘೋಷಣೆಯಾಗುವ ನಿರೀಕ್ಷೆಗಳಿವೆ.

ಇದರ ಜೊತೆಗೆ, ಉದ್ಯೋಗಸ್ಥ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಇದು ದಂಪತಿಗಳನ್ನು ಒಂದೇ ಆರ್ಥಿಕ ಘಟಕವಾಗಿ ಪರಿಗಣಿಸಿ ತೆರಿಗೆ ಉಳಿತಾಯಕ್ಕೆ ನೆರವಾಗಲಿದೆ. ಯುವಕರಿಗಾಗಿ, ಪಿಎಂ ಇಂಟರ್ನ್‌ಶಿಪ್ ಯೋಜನೆ (PMIS) ಯಲ್ಲಿ ಮಹತ್ವದ ಬದಲಾವಣೆಗಳು ನಿರೀಕ್ಷಿತವಾಗಿವೆ. ಮಾಸಿಕ ಸ್ಟೈಫಂಡ್ ಅನ್ನು 5,000 ರೂಪಾಯಿಗಳಿಂದ 11,800 ರೂಪಾಯಿಗಳಿಗೆ ಏರಿಸುವುದು, ಭಾಗವಹಿಸುವ ಕಂಪನಿಗಳ ಸಂಖ್ಯೆಯನ್ನು 549 ರಿಂದ 6,000ಕ್ಕೆ ಹೆಚ್ಚಿಸುವುದು, ಕನಿಷ್ಠ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸುವುದು ಮತ್ತು ಇಂಟರ್ನ್‌ಶಿಪ್ ಅವಧಿಯನ್ನು 6 ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸುವ ಯೋಜನೆಗಳಿವೆ. ಈ ನಿರೀಕ್ಷೆಗಳು ಬಜೆಟ್ 2026ರ ಪ್ರಮುಖಾಂಶಗಳಾಗಿದ್ದು, ದೇಶದ ವಿವಿಧ ವರ್ಗದ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಜೆಟ್ 2026: ರೈತರಿಗೆ ಸ್ಮಾರ್ಟ್ ಕೃಷಿ ಸಲಹೆ ನೀಡುತ್ತೆ ಭಾರತ್ ವಿಸ್ತಾರ್ ಎಐ ಟೂಲ್! ಏನಿದರ ವಿಶೇಷ? – Kannada News | Bharat Vistar AI: How This New AI Tool announced in Budget 2026 Will Revolutionize Smart Farming for Indian Farmers

ನವದೆಹಲಿ, ಫೆಬ್ರವರಿ 1: ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು ನೀಡುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಕೇಂದ್ರ ಬಜೆಟ್‌ನಲ್ಲಿ (Union Budget 2026) ‘ಭಾರತ್ ವಿಸ್ತಾರ್’ (Bharat Vistar) ಕೃತಕ ಬುದ್ಧಿಮತ್ತೆ ಟೂಲ್ ಪ್ರಾರಂಭಿಸುವುದಾಗಿ ಘೋಷಿಸಿದರು. ಇದು ಬಹುಭಾಷಾ ಕೃತಕ ಬುದ್ಧಿಮತ್ತೆ (AI) ಸಾಧನವಾಗಿದ್ದು ರೈತರಿಗೆ ಬೆಳೆಗಳು, ಮಣ್ಣು, ಹವಾಮಾನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಮತ್ತು ವೈಜ್ಞಾನಿಕ ಸಲಹೆಯನ್ನು ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನು ಅಗ್ರಿಸ್ಟ್ಯಾಕ್ ಮತ್ತು ICAR ನಿಂದ ಪ್ರಮಾಣೀಕೃತ ಡೇಟಾವನ್ನು ಸಂಯೋಜಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷಿ ನಿರ್ಧಾರಗಳನ್ನು ಹೆಚ್ಚು ನಿಖರ, ವೇಗ ಮತ್ತು ಕಡಿಮೆ ಸಮಸ್ಯೆಗಳು ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ.

ಭಾರತ್ ವಿಸ್ತಾರ್ ಎಂದರೇನು? ಈ ಎಐ ಟೂಲ್ ಹೇಗೆ ಕೆಲಸ ಮಾಡುತ್ತೆ?

ಭಾರತ್ ವಿಸ್ತಾರ್, ಇದರ ವಿಸ್ತರಿತ ರೂಪ ವರ್ಚುವಲಿ ಇಂಟಿಗ್ರೇಟೆಡ್ ಸಿಸ್ಟಮ್ ಟು ಆಕ್ಸೆಸ್ ಅಗ್ರಿಕಲ್ಚರಲ್ ರಿಸೋರ್ಸಸ್ (VISTAAR) ಪ್ಲಾಟ್‌ಫಾರ್ಮ್. ಇದು ಕೃಷಿ-ಸ್ಟ್ಯಾಕ್ ಪೋರ್ಟಲ್ ಮತ್ತು ICAR ಅನುಮೋದಿತ ಕೃಷಿ ಪದ್ಧತಿಗಳನ್ನು ಎಐ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ರೈತರಿಗೆ ಒಂದೇ ಕಡೆ ವಿಶ್ವಾಸಾರ್ಹ, ವೈಜ್ಞಾನಿಕ ಸಲಹೆಯನ್ನು ಒದಗಿಸುವುದು ಇದರ ಗುರಿಯಾಗಿದೆ. ಇದು ಡೇಟಾ ಮತ್ತು ಸಂಶೋಧನೆಯ ಆಧಾರದ ಮೇಲೆ ಕೃಷಿ ಚಟುವಟಿಕೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತ್ ವಿಸ್ತಾರ್ ಎಐ ಟೂಲ್ ಬೆಳೆ ಮಾದರಿಗಳು, ಮಣ್ಣಿನ ಗುಣಮಟ್ಟ, ಹವಾಮಾನ ಪ್ರವೃತ್ತಿಗಳು ಮತ್ತು ಇತರ ಕೃಷಿ ದತ್ತಾಂಶಗಳನ್ನು ವಿಶ್ಲೇಷಿಸಿ ರೈತರಿಗೆ ಸಲಹೆ ಅಥವಾ ಶಿಫಾರಸುಗಳನ್ನು ಮಾಡುತ್ತದೆ. ಸರ್ಕಾರದ ಪ್ರಕಾರ, ಇದು ರೈತರಿಗೆ ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುತ್ತದೆ. ಕೃಷಿ ಚಟುವಟಿಕೆಗಳಲ್ಲಿನ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ವೇದಿಕೆಯ ಗುರಿಯಾಗಿದೆ. ಸರಿಯಾದ ಸಮಯದಲ್ಲಿ ನಿಖರವಾದ ಮಾಹಿತಿಯನ್ನು ಒದಗಿಸುವುದು ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಿಸಾನ್ ಕಾಲ್ ಸೆಂಟರ್ ಮತ್ತು ಸರ್ಕಾರಿ ಯೋಜನೆಗಳಿಗೆ ನೇರ ಸಂಪರ್ಕ

ಭಾರತ್ ವಿಸ್ತಾರ್ ಟೂಲ್ ಕಿಸಾನ್ ಕಾಲ್ ಸೆಂಟರ್ ಸೇವೆಗಳೊಂದಿಗೆ ಲಿಂಕ್ ಆಗಲಿದೆ. ಇದರಿಂದಾಗಿ ರೈತರು ನೇರವಾಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಸಾಧ್ಯವಾಗಲಿದೆ. ರಿಯಲ್ ಟೈಂ ಹವಾಮಾನ ಮುನ್ಸೂಚನೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: Budget 2026: 1 ಗಂಟೆ 26 ನಿಮಿಷಗಳ ಕಾಲ ಬಜೆಟ್​​ ಮಂಡಿಸಿದ ವಿತ್ತ ಸಚಿವೆ; ಆಯವ್ಯಯ ಮಂಡನೆಯಲ್ಲೂ ದಾಖಲೆ

ಪ್ರಸ್ತುತ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಸುಮಾರು 4,000 ಮಂದಿ ಆಧಾರಿತ ಟೆಲಿಗ್ರಾಮ್ ಚಾಟ್‌ಬಾಟ್‌ನಿಂದ ಕೃಷಿ ಸಲಹೆಯನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ಗ್ರೀನ್ ಭಾಷಿಣಿ ತಂತ್ರಜ್ಞಾನವನ್ನು ಬಳಸಿಕೊಂಡು ಈ ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಹಿಂದಿ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸುತ್ತದೆ. ಇದೀಗ ಭಾರತ್ ವಿಸ್ತಾರ್ ಎಐ ಟೂಲ್​​ನೊಂದಿಗೆ ದೇಶದ ಎಲ್ಲ ಭಾಗದ ರೈತರಿಗೆ ಅವರದೇ ಭಾಷೆಗಳಲ್ಲಿ ಸಲಹೆ ಸೂಚನೆ ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version