ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು.
ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು.
ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯ ಸದಸ್ಯರಂತೆ ಇರುವ ಈ ಶ್ವಾನಗಳು ಮಕ್ಕಳ ಜತೆಗೆ ಮಕ್ಕಳಾಗುತ್ತವೆ. ಪುಟಾಣಿಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತವೆ. ಇದೀಗ ಪುಟಾಣಿಯೊಂದು ಶ್ವಾನದ ಜತೆಗೆ ಸಂಭಾಷಣೆಗೆ ಇಳಿದಿದ್ದಾಳೆ. ಶ್ವಾನದ ಬಳಿ ನೀನು ಏನನ್ನೂ ತಿನ್ನಲು ಬಯಸುತ್ತೀಯಾ ಎಂದು ಪ್ರಶ್ನಿಸಿದ್ದಾಳೆ. ಈ ಕ್ಯೂಟ್ ವಿಡಿಯೋ ಆನ್ಲೈನ್ ನಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.
@kuhu_coo_bird ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ ಗೆ ಡಾಗೇಶ್ ಭಾಯ್
ಯೊಂದಿಗೆ ಮುದ್ದಾದ ಸಂಭಾಷಣೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಶ್ವಾನವೊಂದು ಪ್ರಶಾಂತವಾದ ಸ್ಥಳದಲ್ಲಿ ಮಲಗಿರುವುದನ್ನು ಕಾಣಬಹುದು. ಪುಟಾಣಿಯೊಂದು ಅದರತ್ತ ಬಂದು ಸಂಭಾಷಣೆಗೆ ಇಳಿದಿದೆ. ಡಾಗ್ಗೀ ನಿನಗೆ ಬಿಸ್ಕೆಟ್ ಬೇಕಾ? ಬಿಸ್ಕೆಟ್ ಬೇಡ್ವಾ ಎನ್ನುತ್ತಾಳೆ. ಆ ಬಳಿಕ ಚಪಾತಿ ಬೇಕಾ? ಚಪಾತಿ ಕೂಡ ಬೇಡ್ವಾ ಎಂದು ಕೇಳುತ್ತಾಳೆ. ಆ ಬಳಿಕ ಬಿಸ್ಕೆಟ್ ಬೇಕಾ, ಇರು ಸ್ವಲ್ಪ ನಾನು ನಿನಗೆ ತರಿಸಿ ಕೊಡುತ್ತೇನೆ ಎಂದು ಪುಟ್ಟ ಶ್ವಾನದ ಬಳಿ ಹೇಳುತ್ತಿರುವುದನ್ನು ಕಾಣಬಹುದು. ಪುಟಾಣಿ ಇಷ್ಟು ಮಾತಾಡಿದ್ರು ಶ್ವಾನ ಯಾವುದಕ್ಕೂ ರಿಯಾಕ್ಷನ್ ಕೊಡದೇ ತನ್ನ ಪಾಡಿಗೆ ಇದೆ.
ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು
ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ವೆಶ್ಚನ್ ಅಂಡ್ ಆನ್ಸರ್ ಸೆಶನ್ ಮುಕ್ತಾಯವಾಯಿತು ಎಂದಿದ್ದಾರೆ. ಇನ್ನೊಬ್ಬರು, ಶ್ವಾನ ನನಗೆ ಶಾಂತಿ ಬೇಕೆಂದು ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಡಾಗೇಶ್ ಭಾಯ್ ಗೆ ಶಾಕ್ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಕೂಲ್ ಹೋಮ್ವರ್ಕ್ (homework) ಮಕ್ಕಳ ಶಿಕ್ಷಣದ ಒಂದು ಪ್ರಮುಖ ಅಂಶವಾಗಿದೆ. ಇದು ಮಕ್ಕಳು ತರಗತಿಯಲ್ಲಿ ಕಲಿತದ್ದನ್ನು ನೆನಪಿಟ್ಟುಕೊಳ್ಳಲು, ಪ್ರಮುಖ ಶೈಕ್ಷಣಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಜವಾಬ್ದಾರಿ ಮತ್ತು ಸಮಯ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಆದರೆ ಪೋಷಕರಿಗೆ ಮಾತ್ರ ತಮ್ಮ ಮಕ್ಕಳ ಕೈಯಲ್ಲಿ ಹೋಮ್ ವರ್ಕ್ ಮಾಡಿಸುವುದು ಸವಾಲಿನ ಸಂಗತಿ. ಹೌದು ಮಕ್ಕಳಂತೂ ಹೋಮ್ವರ್ಕ್ ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಅಂತ ಹಠ ಹಿಡಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಹೊಡೆಯುವ ಅಥವಾ ಗದರಿಸುವ ಬದಲು ಈ ಕೆಲವು ಸರಳ ವಿಧಾನಗಳ ಮೂಲಕ ಮಕ್ಕಳ ಕೈಯಲ್ಲಿ ಸುಲಭವಾಗಿ ಹೋಮ್ವರ್ಕ್ ಮಾಡಿಸಬಹುದು.
ಅಧ್ಯಯನ ಸಮಯವನ್ನು ನಿಗದಿಪಡಿಸಿ: ಪ್ರತಿದಿನ ಅಧ್ಯಯನಕ್ಕಾಗಿ ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಡಿ. ಈ ಅಭ್ಯಾಸವು ನಿಮ್ಮ ಮಗುವಿನಲ್ಲಿ ಶಿಸ್ತನ್ನು ತುಂಬುತ್ತದೆ. ಇದಲ್ಲದೆ, ನಿಮ್ಮ ಮಗುವಿಗೆ ಯಾವಾಗ ಅಧ್ಯಯನ ಮಾಡಬೇಕು ಮತ್ತು ಯಾವಾಗ ಆಟವಾಡಬೇಕು ಎಂದು ತಿಳಿದಾಗ, ಅವರು ತಮ್ಮ ಅಧ್ಯಯನದಿಂದ ಹಿಂದೆ ಸರಿಯುವುದಿಲ್ಲ.
ಯಾವಾಗಲೂ ಪ್ರತಿಫಲ ಅಥವಾ ಪ್ರಶಂಸೆ ನೀಡಿ: ಮಕ್ಕಳು ಪ್ರತಿಫಲವನ್ನು ಇಷ್ಟಪಡುತ್ತಾರೆ. ಅವರು ಒಳ್ಳೆಯ ಕೆಲಸ ಮಾಡಿದಾಗಲೆಲ್ಲಾ ಅವರಿಗೆ ಪ್ರತಿಫಲ ಅಥವಾ ಪ್ರಶಂಸೆ ನೀಡಬೇಕು. ಇದು ಅವರನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಹೋಮ್ ವರ್ಕ್ ಮಾಡಿಸುವಾಗಲು ಇದೇ ತಂತ್ರವನ್ನು ಬಳಸಿ. ನಿಮ್ಮ ಮಗು ಸಮಯಕ್ಕೆ ಸರಿಯಾಗಿ ಹೋಮ್ ವರ್ಕ್ ಪೂರ್ಣಗೊಳಿಸಿದಾಗ, ಅವರನ್ನು ಹೊಗಳಿ ಮತ್ತು ಪ್ರತಿಫಲ ನೀಡಿ. ಪ್ರತಿಫಲವಾಗಿ, ನೀವು ಅವರಿಗೆ ಹೆಚ್ಚುವರಿ ಆಟದ ಸಮಯ, ವಾರಾಂತ್ಯದ ಪ್ರವಾಸ, ಹೊಸ ಉಡುಗೆ, ಆಟಿಕೆ, ಚಾಕೊಲೇಟ್ ಅಥವಾ ಅವರ ನೆಚ್ಚಿನ ಆಹಾರವನ್ನು ಉಣಬಡಿಸಬಹುದು.
ಹೋಮ್ ವರ್ಕ್ ಅನ್ನು ಆಟವನ್ನಾಗಿ ಪರಿವರ್ತಿಸಿ: ಮಕ್ಕಳ ಹೋಮ್ವರ್ಕ್ಗಳನ್ನು ಆಟದಂತೆ ಪರಿವರ್ತಿಸಿ. ನೀವು ಹೋಮ್ವರ್ಕ್ ಅನ್ನು ರಸಪ್ರಶ್ನೆಯನ್ನಾಗಿಯೂ ಪರಿವರ್ತಿಸಬಹುದು. ಇದು ಹೋಮ್ವರ್ಕ್ ಅನ್ನು ಆಸಕ್ತಿದಾಯಕವಾಗಿಸುತ್ತದೆ ಮತ್ತು ಮಕ್ಕಳು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದಲ್ಲದೆ ನಿಮ್ಮ ಮಗು ತಮಾಷೆಯ ರೀತಿಯಲ್ಲಿ ಮಾಡಿದ ಅಧ್ಯಯನಗಳನ್ನು ಸುಲಭವಾಗಿ ಮರೆಯುವುದಿಲ್ಲ.
ಇದನ್ನೂ ಓದಿ: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್ ಹೀರೋ
ಹೋಮ್ ವರ್ಕ್ಗಳನ್ನು ಭಾಗಗಳಾಗಿ ವಿಂಗಡಿಸಿ: ಮಕ್ಕಳಿಗೆ ಹೋಮ್ವರ್ಕ್ ಒಂದೇ ಬಾರಿ ಮಾಡಿ ಮುಗಿಸಲು ಯಾವುದೇ ಒತ್ತಡವನ್ನು ಹೇರಬೇಡಿ. ಹೋಮ್ವರ್ಕ್ ತುಂಬಾ ಹೆಚ್ಚಿದ್ದರೆ, ಅದನ್ನು ಸಣ್ಣ ಭಾಗಗಳಾಗಿ ವಿಭಜಿಸಿ. ಎಲ್ಲವನ್ನೂ ಒಂದೇ ಬಾರಿಗೆ ಪೂರ್ಣಗೊಳಿಸಲು ಪ್ರಯತ್ನಿಸುವ ಬದಲು, ನಿಮ್ಮ ಮಗುವಿಗೆ ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಪೂರ್ಣಗೊಳಿಸಲು ಬಿಡಿ. ಇದು ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಉಂಟುಮಾಡುವುದಿಲ್ಲ.
ನಿಮ್ಮ ಮಗುವಿನ ಆಸಕ್ತಿಯನ್ನು ಕಂಡುಕೊಳ್ಳಿ: ನಿಮ್ಮ ಮಗುವಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದರೆ, ಅವರ ಅಧ್ಯಯನವನ್ನು ಅವರಿಗೆ ಆಸಕ್ತಿ ಇರುವ ವಿಷಯದೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿ. ಇದು ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಹೊಂದಲು ಪ್ರೋತ್ಸಾಹಿಸುತ್ತದೆ.
ಸಕಾರಾತ್ಮಕ ವಾತಾವರಣ ಮತ್ತು ಪ್ರೇರಣೆಯನ್ನು ಒದಗಿಸಿ: ನಿಮ್ಮ ಮಕ್ಕಳನ್ನು ಬೈಯುವ ಬದಲು, ಅವರನ್ನು ಹೊಗಳಿ ಮತ್ತು ಸಣ್ಣ ಸಾಧನೆಗಳಿಗೂ ಪ್ರೋತ್ಸಾಹಿಸಿ. ಮನೆಯ ಅಧ್ಯಯನ ವಾತಾವರಣ ಶಾಂತ ಮತ್ತು ಸಕಾರಾತ್ಮಕವಾಗಿರಬೇಕು. ಈ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ, ಮಕ್ಕಳು ತಮ್ಮ ಹೋಮ್ವರ್ಕ್ಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, ಜೂನ್ 4: ಕೊನೆಗೂ ಮುಂಗಾರು (Monsoon) ಮಾರುತಗಳು ಕೇರಳ ಪ್ರವೇಶಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಮುಂಗಾರು ಮಳೆ ಆಗಮನವಾಗುವ ನಿರೀಕ್ಷೆ ಇದೆ. ಮಳೆಗಾಲದ ಆರಂಭದ ಬೆನ್ನಲ್ಲೇ ಕರಾವಳಿಯಲ್ಲಿ ಸಂಭವಿಸಬಹುದಾದ ನೆರೆ, ಪ್ರವಾಹ ಹಾಗೂ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದೆ.
ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅವಾಂತರಗಳು ಮತ್ತು ಪ್ರಾಣಹಾನಿಯ ಆತಂಕವನ್ನು ತಪ್ಪಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ನೇತೃತ್ವದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು (Control Room) ತೆರೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ಪ್ರತ್ಯೇಕ ಇಂಜಿನಿಯರ್ಗಳನ್ನು, 223 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳನ್ನು (PDO) ಹಾಗೂ 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ‘ಇನ್ಸಿಡೆಂಟ್ ಕಮಾಂಡರ್’ಗಳಾಗಿ ನೇಮಕ ಮಾಡಲಾಗಿದ್ದು, ಇವರು ಜಿಲ್ಲಾಧಿಕಾರಿ ಕಚೇರಿಯ ಸಂಪರ್ಕದಲ್ಲಿರಲಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ 25 ಸಿಬ್ಬಂದಿ ಒಳಗೊಂಡ ಎನ್ಡಿಆರ್ಎಫ್ (NDRF) ತಂಡವನ್ನು ಪುತ್ತೂರು ತಾಲ್ಲೂಕಿನಲ್ಲಿ ಹಾಗೂ 10 ಸಿಬ್ಬಂದಿಯ ಮತ್ತೊಂದು ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 92 ಪ್ರವಾಹ ಪೀಡಿತ ಪ್ರದೇಶಗಳು ಹಾಗೂ 88 ಸಂಭವನೀಯ ಭೂಕುಸಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಗುಡ್ಡಗಾಡು ಪ್ರದೇಶಗಳಲ್ಲಿ ಚಾರಣ (ಟ್ರೆಕ್ಕಿಂಗ್) ಮಾಡುವುದನ್ನು, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಇಳಿಯುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ!
ಅಲ್ಲದೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೂ ಯಾವುದೇ ರೀತಿಯ ರಸ್ತೆ ಕಾಮಗಾರಿ, ಗುಡ್ಡ ಅಗೆಯುವುದು ಅಥವಾ ಮಣ್ಣು ಅಗೆಯುವ ಕೆಲಸಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ವತಿಯಿಂದ ಮುಂಗಾರು ಎದುರಿಸಲು ಭರ್ಜರಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಥುರಾ, ಜೂನ್ 4: ಇಂದಿನ ಆಧುನಿಕ ಯುಗದಲ್ಲಿ ಅತ್ತೆ-ಸೊಸೆಯರ ಸಂಬಂಧದ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಾಗ ಹರಿಯಾಣದ ಪ್ರಸಿದ್ಧ ಜಾನಪದ ಗಾಯಕಿ ಕಾಜಲ್ ಚೌಧರಿ (Kajal Chaudhary) ಅವರು ಇಡೀ ಸಮಾಜಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ನಡೆಯಲು ಸಾಧ್ಯವಾಗದ ತಮ್ಮ 90 ವರ್ಷದ ಅತ್ತೆಯನ್ನು ವಿಶೇಷವಾಗಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು, ಆ ಬುಟ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಬರೋಬ್ಬರಿ 260 ಕಿಲೋಮೀಟರ್ ದೂರದ ಪವಿತ್ರ ‘ಬ್ರಜ್ ಪರಿಕ್ರಮ’ (Brij Parikrama) ಯಾತ್ರೆಯನ್ನು ಕೈಗೊಂಡಿದ್ದಾರೆ!
ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾಜಲ್ ಅವರ 90 ವರ್ಷದ ಅತ್ತೆ ಚಂದ್ರಿ ದೇವಿ ಅವರಿಗೆ ಶ್ರೀಕೃಷ್ಣನ ಪವಿತ್ರ ಭೂಮಿಯಾದ ಬ್ರಜ್ ಪ್ರದೇಶದ ಸುಮಾರು 260 ಕಿ.ಮೀ ಉದ್ದದ ಧಾರ್ಮಿಕ ಪ್ರದಕ್ಷಿಣೆ ಮಾಡಬೇಕೆಂಬುದು ಬಹುಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ನಿಶ್ಯಕ್ತಿಯಿಂದಾಗಿ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ. ಅತ್ತೆಯ ಈ ಕೊನೆಯ ಆಸೆಯನ್ನು ತಿಳಿದ ಸೊಸೆ ಕಾಜಲ್, ತಾವೇ ಅವರನ್ನು ಹೊತ್ತುಕೊಂಡು ಹೋಗಲು ನಿರ್ಧರಿಸಿದರು. ನೆಟ್ಟಿಗರು ಕಾಜಲ್ ಚೌಧರಿ ಅವರನ್ನು ಆಧುನಿಕ ಕಾಲದ ‘ಶ್ರವಣ ಕುಮಾರ’ ಎಂದು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ
“ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದಾರೆ. ಅವರ ಮುಖದಲ್ಲಿ ಸಂತೋಷ ನೋಡುವುದು ಮತ್ತು ನನ್ನ ಆತ್ಮತೃಪ್ತಿಗಾಗಿ ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ” ಎಂದು ಕಾಜಲ್ ಚೌಧರಿ ಹೇಳಿದ್ದಾರೆ.
ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಈ ಪಯಣವು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗಡಿಗಳ ಮೂಲಕ ಸಾಗುತ್ತಿದೆ. ತಲೆಯ ಮೇಲೆ ಅತ್ತೆಯನ್ನು ಹೊತ್ತು ಸಾಗುತ್ತಿರುವ ಕಾಜಲ್ ಅವರನ್ನು ಕಂಡ ಸ್ಥಳೀಯ ಗ್ರಾಮೀಣರು ಮತ್ತು ಇತರ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದಾರಿಯುದ್ದಕ್ಕೂ ಜನ ಇವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ
ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಯಾತ್ರೆಯು ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಮತ್ತು ಪವಿತ್ರ ಸರೋವರಗಳ ಮೂಲಕ ಹಾದುಹೋಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಹಿಂದೂ ಕ್ಯಾಲೆಂಡರ್ನ ಪವಿತ್ರ ‘ಅಧಿಕ ಮಾಸ’ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಪರಿಕ್ರಮ ಮಾಡುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ (Pahlaj Nihalani) ಅವರು ಪತ್ನಿ ನೀತಾ ಹಾಗೂ ವಿಶಾಲ್, ದೀಪೇಶ್, ಚಿರಾಗ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.
ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ ಅವರು ಹಲವು ಸೂಪರ್ ಹಿಟ್ ಕಮರ್ಷಿಯಲ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಗೋವಿಂದ ನಟನೆಯ ‘ಆಂಖೇ’, ‘ಅಂದಾಜ್’, ‘ತಲಾಶ್’, ‘ರಂಗೀಲಾ ರಾಜಾ’ ಮತ್ತು ‘ಜೂಲಿ 2’ ಸೇರಿದಂತೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಲ್ಲಿ ಇವರು ಒಬ್ಬರಾಗಿದ್ದರು.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ
ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಟ್ಟಗುಡ್ಡಗಳ ಬುಡದಲ್ಲಿರುವ ಒಂದು ಹೆಸರೇ ಇಲ್ಲದ ಊರು, ಆ ಊರಿನ ಜನರಿಗೆ ‘ಕೂಲಿ’ ಎಂದು ಬಿಟ್ಟರೆ ಬೇರೆ ಗುರುತು ಇಲ್ಲ. ಆ ಊರಿಗೆ ಆ ಊರಿನ ಜನ ಬಿಟ್ಟರೆ ಬೇರೆ ಯಾರೂ ಬರುವುದೂ ಇಲ್ಲ, ಬರಲು ಸೌಕರ್ಯವೂ ಇಲ್ಲ. ಊರಿನ ಬದಿಯಲ್ಲೇ ಒಂದು ರೈಲು ಹಳಿ ಹಾದಿ ಹೋಗಿದೆ, ಆದರೆ ಒಮ್ಮೆಯೂ ಆ ರೈಲು ನಿಲ್ಲುವುದಿಲ್ಲ. ಯಾವ ಸೌಕರ್ಯವೂ ಇಲ್ಲದ ಊರಿನ ಜನರಿಗೆ ಶಿಕ್ಷಣ, ಆರೋಗ್ಯ ಎಂಬುದು ಕನಸಷ್ಟೆ. ಆ ಊರಿನ ಯುವಕ ‘ಪೆದ್ದಿ’ ಬೆಟ್ಟ, ಗುಡ್ಡ ಹತ್ತಿ ಮೈ-ಕೈ ಗಟ್ಟಿಯಾಗಿರುವ ಅವನಿಗೆ ಕ್ರೀಡೆಯೂ ‘ಕೂಲಿ’ಯೇ. ಯಾರು ದುಡ್ಡು ಕೊಟ್ಟರೆ ಅವರ ಜೊತೆ ಆಡುತ್ತಾನೆ, ಗೆಲ್ಲಿಸುತ್ತಾನೆ. ಆದರೆ ಅದೇ ಆಟವನ್ನು ಕೂಲಿಗಾಗಿ ಅಲ್ಲದೆ, ಗುರುತಿ (ಐಡೆಂಟಿಟಿ)ಗಾಗಿ ಆಡಿದರೆ, ತನಗೆ ಮಾತ್ರವಲ್ಲ, ಹೆಸರು-ಗುರುತು ಇಲ್ಲದ ತನ್ನ ಊರಿನ ಐಡೆಂಟಿಗಾಗಿ ಆಡಿದರೆ? ಅದೇ ‘ಪೆದ್ದಿ’ ಸಿನಿಮಾದ ಕತೆ.
ಸಾಮಾನ್ಯವಾಗಿ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಳು ಯಾವುದಾದರೂ ಒಂದು ಆಟದ ಮೇಲೆ ಫೋಕಸ್ ಆಗಿರುತ್ತವೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ ‘ಪೆದ್ದಿ’ ಸಿನಿಮಾನಲ್ಲಿ ನಾಯಕ ಮೂರು ಆಟಗಳನ್ನು ಆಡುವಂತೆ ಮಾಡಿದ್ದಾರೆ. ಕ್ರಿಕೆಟ್ ಆಟಗಾರನಾಗಿ ಕೂಲಿಗಾಗಿ ಆಡುವ ಪೆದ್ದಿ, ಆ ಬಳಿಕ ತನ್ನದೇ ಒಂದು ಗುರುತು ಮೂಡಿಸಲೆಂದು ಕುಸ್ತಿ ಅಖಾಡಕ್ಕೆ ಇಳಿಯುತ್ತಾನೆ. ಆ ನಂತರ ವಿಧಿಯಾಟದಿಂದಾಗಿ ಅನಿವಾರ್ಯವಾಗಿ ಮತ್ತೊಂದು ಆಟವನ್ನೂ ಪೆದ್ದಿ ಆಡಬೇಕಾಗುತ್ತದೆ. ಈ ಆಟಗಳ ನಡುವೆ ಪೆದ್ದಿ ಪಡುವ ಪಾಡು, ಕಂಡುಕೊಳ್ಳುವ ಸತ್ಯಗಳು, ಅನುಭವಿಸುವ ನೋವು, ಸಾಧಿಸುವ ಗುರಿ ಪ್ರೇಕ್ಷಕರನ್ನು ತಾಕುತ್ತದೆ.
ನಾಯಕ ರಾಮ್ ಚರಣ್, ಡ್ಯಾನ್ಸ್, ಆಕ್ಷನ್ ಜೊತೆಗೆ ಎಮೋಷನಲ್ ದೃಶ್ಯಗಳಲ್ಲಿಯೂ ಗಮನ ಸೆಳೆಯುತ್ತಾರೆ. ಅವರ ಸಮಕಾಲೀನ ನಟರು ಲಾರ್ಜರ್ ದ್ಯಾನ್ ಲೈಫ್ (Larger than life) ಪಾತ್ರಗಳು, ಸಿನಿಮ್ಯಾಟಿಕ್ ಯೂನಿವರ್ಸ್ಗಳ ಹಿಂದೆ ಓಡುತ್ತಿದ್ದಾಗಲೂ ರಾಮ್ ಚರಣ್, ಒಂದು ಹಳ್ಳಿಯ ಸಾಮಾನ್ಯ ಯುವಕನ ಪಾತ್ರದಲ್ಲಿ ನಟಿಸಲು ಒಪ್ಪಿರುವುದು ಪ್ರಶಂಸನಾರ್ಹ. ಸಿನಿಮಾಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿರುವ ರೀತಿ ಅತ್ಯದ್ಭುತ. ಕುಸ್ತಿ ಅಖಾಡದಲ್ಲಿ ಅವರ ದೇಹ ಮಿರಿ-ಮಿರಿ ಮಿಂಚುತ್ತದೆ. ದೇಹದ ಕಟ್ಟುಗಳು ಎದ್ದೆದ್ದು ಕಾಣುತ್ತವೆ. ಪಾತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ತೆರೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?
ಶಿವರಾಜ್ ಕುಮಾರ್ ಅವರಿಗೂ ಇಲ್ಲಿ ಪ್ರಮುಖವಾದ ಪಾತ್ರವಿದೆ. ಕ್ರಿಕೆಟ್ ಆಡುತ್ತಾ, ಕೂಲಿ ಮಾಡುತ್ತಾ, ನಾಯಕಿಗೆ ಲೈನ್ ಹೊಡೆಯುತ್ತಾ ಇರುವ ನಾಯಕನಿಗೆ ಒಂದು ಧ್ಯೇಯವನ್ನು, ಗುರಿಯನ್ನು ನೀಡುವುದು ಹಾಗೂ ಆ ಗುರಿ ಸಾಧಿಸಲು ನಾಯಕನಿಗೆ ಶಕ್ತಿ ಕೊಡುವ ಮಹತ್ವದ ಪಾತ್ರ ಅವರದ್ದು. ಸಿನಿಮಾಕ್ಕೆ ತಿರುವು ಕೊಡುವುದೇ ಶಿವಣ್ಣನ ಗೌಡನಾಯ್ಡು ಪಾತ್ರ. ಶಿವಣ್ಣ ತಮ್ಮ ಗತ್ತಿನಿಂದ ಹಾಗೂ ಎಮೋಷನಲ್ ದೃಶ್ಯಗಳಲ್ಲಿಯೂ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಆದರೆ ಒಂದು ಪ್ರಮುಖವಾದ ಆಸ್ಪತ್ರೆ ದೃಶ್ಯದಲ್ಲಿ ಶಿವಣ್ಣನ ಪಾತ್ರದ ಮೇಲೆ ಇನ್ನಷ್ಟು ಫೋಕಸ್ ನೀಡಬಹುದಾಗಿತ್ತು ಎನಿಸುತ್ತದೆ. ಅಂಥಹಾ ಪ್ರಮುಖ ಭಾವುಕ ದೃಶ್ಯದಲ್ಲಿ ನಿರ್ದೇಶಕರು ಸಂಪೂರ್ಣವಾಗಿ ನಾಯಕನ ಮೇಲೆಯೇ ಕ್ಯಾಮೆರಾ ಫೋಕಸ್ ಮಾಡಿಸಿದ್ದಾರೆ.
ಇನ್ನು ನಾಯಕಿ ಜಾನ್ಹವಿ ಕಪೂರ್ ಇದ್ದಾರೆ ಅಷ್ಟೆ. ಅವರನ್ನು ಗ್ಲಾಮರ್ ಹೊರತಾಗಿ ಇನ್ಯಾವುದಕ್ಕೂ ಬಳಸಿಲ್ಲ ನಿರ್ದೇಶಕರು. ಜಾನ್ಹವಿಯ ಆರಂಭದ ಕೆಲ ದೃಶ್ಯಗಳಲ್ಲಿ ಅವರ ಮುಖಕ್ಕಿಂತಲೂ ಬೇರೆ ಭಾಗಗಳನ್ನೇ ಹೆಚ್ಚು ತೋರಿಸಲಾಗಿದೆ. ಅವರ ಪಾತ್ರ, ಕತೆ ನಡೆಯುವ ಆ ಪ್ರದೇಶದ್ದೇ ಅಲ್ಲ ಅನಿಸುತ್ತದೆ. ನಟ ದಿವ್ಯೇಂದು ಹಾಗೂ ಕನ್ನಡಿಗ ತಾರಕ್ ಪೊನ್ನಪ್ ನೆಗೆಟಿವ್ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ನಟ ಬೊಮನ್ ಇರಾನಿಗೆ ಹೆಚ್ಚೇನೂ ಕೆಲಸವಿಲ್ಲ. ಜಗಪತಿ ಬಾಬು ಅವರ ಪಾತ್ರ ಚೆನ್ನಾಗಿದೆ.
ಆದರೆ ಸಿನಿಮಾನಲ್ಲಿ ಕೆಲವಾರು ನೆಗೆಟಿವ್ ಅಂಶಗಳೂ ಸಹ ಇವೆ. ನಾಯಕ, ತನ್ನ ಊರಿಗಾಗಿ ಅಷ್ಟೆಲ್ಲ ಹೋರಾಡುತ್ತಾನೆ. ಆದರೆ ಆ ಊರಿನ ಬಗ್ಗೆ ಊರ ಜನರಿಗೆ ಇರುವ ಭಾವುಕತೆಗೆ ಕಾರಣಗಳೇ ಗೊತ್ತಾಗುವುದಿಲ್ಲ. ಆ ಊರನ್ನು ಸಹ ಸಿನಿಮಾನಲ್ಲಿ ಸರಿಯಾಗಿ ತೋರಿಸುವುದಿಲ್ಲ. ದ್ವಿತೀಯಾರ್ಧದಲ್ಲಿ ಕುಸ್ತಿ ಅಖಾಡದಲ್ಲಿ ನಡೆಯುವ ಫೈಟ್ ಅದ್ಭುತವಾಗಿದೆ ಆದರೆ ಅದಾದ ಬಳಿಕ ರಾಷ್ಟ್ರೀಯ ಪಂದ್ಯದಲ್ಲಿ ನಡೆಯುವ ಫೈಟ್ ದೃಶ್ಯಕ್ಕೆ ಮಹತ್ವವನ್ನೇ ನೀಡಿಲ್ಲ. ಅದು ಬಹಳ ಪೇಲವವಾಗಿದೆ. ಕತೆಯಲ್ಲಿ ಎಮೋಷನ್ಗೆ ಹೆಚ್ಚಿನ ಬೆಲೆ ನೀಡಲಾಗಿದೆ ಲಾಜಿಕ್ಕಿಗಲ್ಲ. ನಾಯಕ ಪಾತ್ರಕ್ಕೆ ಸಿಂಪತಿ ಧಕ್ಕಲೆಂದು, ಕೆಲವು ಪಾತ್ರಗಳು ಸಾಮಾನ್ಯ ಸನ್ನಿವೇಶಗಳಲ್ಲಿಯೂ ನಾಯಕನ ಮೇಲೆ ಅತಿಯಾದ ವಿಲನ್ಗಿರಿ ತೋರುತ್ತವೆ. ಇನ್ನು ಸಿನಿಮಾದ ರೊಮ್ಯಾಂಟಿಕ್ ಆಂಗಲ್ ತೀರ ಪೇಲವ, ಮೊದಲಾರ್ಧದಲ್ಲಿ ನಾಯಕಿಗೆ ಪೆದ್ದಿ ಒಬ್ಬ ವ್ಯಕ್ತಿ ಇದ್ದಾನೆಂಬುದೇ ಗೊತ್ತಿರುವುದಿಲ್ಲ, ಆದರೆ ದ್ವೀತೀಯಾರ್ಧದಲ್ಲಿ ಹಠಾತ್ತನೇ ನಾಯಜಕಿಯೇ ಪೆದ್ದಿಯನ್ನು ಅರ್ಧ ರಾತ್ರಿ ಹುಡುಕಿಕೊಂಡು ಬಂದು ಮುತ್ತುಕೊಡುತ್ತಾಳೆ. ಅವಳ ಆ ಬದಲಾವಣೆಗೆ ಕಾರಣವೇ ಇಲ್ಲ. ನಾಯಕಿಯನ್ನು ಅತಿಯಾಗಿ ಆಬ್ಜೆಕ್ಟಿಫೈ ಮಾಡಲಾಗಿದೆ. ನಾಯಕಿಯ ಅಂಕು-ಡೊಂಕುಗಳ ಮೇಲೆ ಅತಿಯಾಗಿ ಕ್ಯಾಮೆರಾ ಕಣ್ಣು ಹಾಯಿಸಲಾಗಿದೆ. ಇಂಥಹಾ ಇನ್ನೂ ಹಲವನ್ನು ಪಟ್ಟಿ ಮಾಡಬಹುದು.
ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿದೆ. ಸಾಕಷ್ಟು ಗ್ರೀನ್ ಸ್ಕ್ರೀನ್ಗಳನ್ನು, ಸೆಟ್ಗಳನ್ನು ಬಳಸಲಾಗಿದೆ. ಹಾಗಿದ್ದರೂ ಸಹ ಸಿನಿಮಾದ ಪ್ರತಿ ಫ್ರೇಮು ರಿಚ್ ಆಗಿ ಕಾಣುತ್ತದೆ. ನುರಿತ ಕ್ಯಾಮೆರಾಮ್ಯಾನ್ ರತ್ನವೇಲು ಅದ್ಭುತವಾದ ಕೆಲಸ ಮಾಡಿದ್ದಾರೆ. ನಾಯಕ, ಇಬ್ಬರು ಪೈಲ್ವಾನ್ಗಳ ಜೊತೆ ಮಾಡುವ ಕುಸ್ತಿ ಸನ್ನಿವೇಶವಂತೂ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಸಿನಿಮಾದ ಸಂಗೀತವೂ ಚೆನ್ನಾಗಿದೆ. ಎಸ್ ತಮನ್, ಅನಿರುದ್ಧ್, ರವಿ ಬಸ್ರೂರು ಅವರ ಅಬ್ಬರದ ಸಂಗೀತವೇ ಕೇಳಿದ್ದವರಿಗೆ ‘ಪೆದ್ದಿ’ಯ ಹಿನ್ನೆಲೆ ಸಂಗೀತ ಭಿನ್ನ ಎನಿಸುತ್ತದೆ. ಒಟ್ಟಾರೆಯಾಗಿ ‘ಪೆದ್ದಿ’ ಒಂದು ನೋಡಬಲ್ಲ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಸ್ವತಃ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆಗಳಿವೆ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ ನಟಿಸಿರುವ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಹಾಗಾಗಿ ‘ಪೆದ್ದಿ’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮ್ ಚರಣ್ಗೆ ಇದೆ. ಇದೇ ಕಾರಣಕ್ಕೆ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ‘ಪೆದ್ದಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್ ಸಮಯದಲ್ಲಿಯೂ ಸಹ ಚಿರಂಜೀವಿ ಸಾಕಷ್ಟು ಇನ್ವಾಲ್ವ್ ಆಗಿದ್ದರು. ಸಿನಿಮಾದ ಬಿಡುಗಡೆಗೆ ವಿತರಕರು ಸಮಸ್ಯೆ ಸೃಷ್ಟಿಸಿದಾಗಲೂ ಚಿರಂಜೀವಿ ಖುದ್ದು ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನದಂದು ‘ಪೆದ್ದಿ’ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ನಮ್ಮ ಪೆದ್ದಿ, ನನ್ನ ಪ್ರೀತಿಯ ರಾಮ್ ಚರಣ್ ಮತ್ತು ಇಡೀ ಚಿತ್ರತಂಡ ಹಾಗೂ ಕಲಾವಿದರಿಗೆ ಈ ಅದ್ಭುತ ಬ್ಲಾಕ್ಬಸ್ಟರ್ ಯಶಸ್ಸಿಗೆ ಅಭಿನಂದನೆಗಳು! ನಾನು ಶೂಟಿಂಗ್ ನಿಮಿತ್ತ ಪೊಲ್ಲಾಚಿಯಲ್ಲಿದ್ದರೂ ಸಹ, ನನ್ನ ಮನಸೆಲ್ಲಾ ‘ಪೆದ್ದಿ’ ಚಿತ್ರದ ಮೇಲೆಯೇ ಇದೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾಕ್ಕಾಗಿ ಚರಣ್ ಪಟ್ಟ ಶ್ರಮ, ತೋರಿಸಿದ ಕಾಳಜಿ ಮತ್ತು ಭಕ್ತಿ ಎಲ್ಲವನ್ನೂ ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ಈ ದಿನ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ ಮತ್ತು ಪ್ರಶಂಸೆಯನ್ನು ನೋಡುತ್ತಿದ್ದರೆ ಒಬ್ಬ ತಂದೆಯಾಗಿ ಮಾತ್ರವಲ್ಲದೆ, ಒಬ್ಬ ನಟನಾಗಿಯೂ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.
ಮುಂದುವರೆದು, ‘‘ಪೆದ್ದಿ’ ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗಲು ಆತ (ರಾಮ್ ಚರಣ್) ಹಗಲಿರುಳು ಪಟ್ಟ ಶ್ರಮ, ಹಠ ಮತ್ತು ಪ್ರಾಮಾಣಿಕತೆ ಪ್ರತಿ ದೃಶ್ಯದಲ್ಲೂ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಆ ಕಷ್ಟಕ್ಕೆ ಸಿಕ್ಕ ಪ್ರತಿಫಲವೇ ಈ ಮಹಾ ವಿಜಯ. ಇಂತಹ ಒಂದು ಅದ್ಭುತವಾದ ಕಥೆಯನ್ನು ಬರೆದು, ಅಷ್ಟೇ ಅದ್ಭುತವಾಗಿ ತೆರೆಯ ಮೇಲೆ ದೃಶ್ಯರೂಪಕ್ಕೆ ತಂದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದಿದ್ದಾರೆ.
ಇದನ್ನೂ ಓದಿ:Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?
ಹಾಗೆಯೇ, ಈ ಚಿತ್ರವನ್ನೇ ಇಷ್ಟು ಬೃಹತ್ ಮಟ್ಟದಲ್ಲಿ, ಯಾವುದೇ ತರಹದ ರಾಜಿ ಮಾಡಿಕೊಳ್ಳದೆ ನಿರ್ಮಿಸಿದ ನಿರ್ಮಾಪಕ ವೆಂಕಟ್ ಸತೀಶ್ ಕೀಲಾರು ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಈ ಪ್ರತಿಷ್ಠಿತ ಚಿತ್ರದಲ್ಲಿ ನಟಿಸಿದ ನನ್ನ ಆತ್ಮೀಯ ಸ್ನೇಹಿತ, ‘ಕರುನಾಡ ಚಕ್ರವರ್ತಿ’ ಶ್ರೀ ಶಿವರಾಜ್ಕುಮಾರ್ ಅವರಿಗೆ ಹಾಗೂ ಅಪ್ಪಲಸೂರಿ ಪಾತ್ರದಲ್ಲಿ ಅದ್ಭುತವಾಗಿ ಜೀವಿಸಿದ ನನ್ನ ಸಹೋದರ ಸಮಾನರಾದ ಜಗಪತಿ ಬಾಬು ಅವರಿಗೆ ಅಭಿನಂದನೆಗಳು’ ಎಂದು ನಟರನ್ನು ಅಭಿನಂದಿಸಿದ್ದಾರೆ.
ಅದ್ಭುತವಾದ ಹಾಡುಗಳು ಮತ್ತು ಹೃದಯ ಸ್ಪರ್ಶಿ ಹಿನ್ನೆಲೆ ಸಂಗೀತವನ್ನು ನೀಡಿದ ಎಆರ್ ರೆಹಮಾನ್ ಅವರಿಗೆ, ತಮ್ಮ ಅದ್ಭುತ ಛಾಯಾಗ್ರಹಣದಿಂದ ಪ್ರತಿ ಫ್ರೇಮ್ ಅನ್ನು ಅತ್ಯದ್ಭುತವಾಗಿ ಮಲಿಸಿದ ರತ್ನವೇಲು ಅವರಿಗೆ, ಅಮೋಘವಾದ ಕಲಾ ನಿರ್ದೇಶನ ನೀಡಿದ ಅವಿನಾಶ್ ಕೊಲ್ಲಾ ಅವರಿಗೆ, ತಮ್ಮ ಅದ್ಭುತ ಎಡಿಟಿಂಗ್ ಕೌಶಲ್ಯದಿಂದ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಎಡಿಟರ್ ನವೀನ್ ನೂಲಿ ಅವರಿಗೆ ನನ್ನ ವಿಶೇಷ ಅಭಿನಂದನೆಗಳು’ ಎಂದು ತಂತ್ರಜ್ಞರಿಗೆ ಧನ್ಯವಾದ ಹೇಳಿದ್ದಾರೆ.
‘ಈ ಚಿತ್ರದ ಯಶಸ್ಸಿನ ಭಾಗವಾಗಿರುವ ಜಾನ್ಹವಿ ಕಪೂರ್, ದಿವ್ಯೇಂದು, ಇತರ ನಟ-ನಟಿಯರು, ತಾಂತ್ರಿಕ ಪ್ರವೀಣರು ಹಾಗೂ ವೃದ್ಧಿ ಸಿನಿಮಾಸ್, ಮೈತ್ರಿ ಮೂವಿ ಮೇಕರ್ಸ್ , ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ‘ಪೆದ್ದಿ’ ಸಾಧಿಸಿದ ಈ ಘನ ವಿಜಯವು ತೆಲುಗು ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಲಿ ಮತ್ತು ಮುಂದೆಯೂ ಇನ್ನೂ ಮರೆನ್ನೋ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಮನಸ್ಸುಪೂರ್ವಕವಾಗಿ ಹಾರೈಸುತ್ತೇನೆ’ ಎಂದಿದ್ದಾರೆ ನಟ ಚಿರಂಜೀವಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂನ್ 04: ಬ್ಲೂ ಲೈನ್ (Blue Line Metro) ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ. ಈ ವರ್ಷ ಡಿಸೆಂಬರ್ನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ಕೆಂಪೇಗೌಡ ಏರ್ಪೋರ್ಟ್ (Kempegowda International Airport) ಮಾರ್ಗಕ್ಕೆ ಮೊದಲ ರೈಲು ಬಂದಿದೆ. ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋಗೆ ಟ್ರೈನ್ ಸೆಟ್ ತಲುಪಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಬ್ಲೂ ಲೈನ್ ಮೆಟ್ರೋ ಮಾರ್ಗವು ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದ್ದು, ಇದು ನಗರದ ಜನರಿಗೆ ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 58.19 ಕಿಮೀ ವಿಸ್ತೀರ್ಣದ ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಬೆಂಗಳೂರಿನ ಬೆಮಲ್ನಲ್ಲಿ ರೈಲುಗಳನ್ನು ಆರ್ಡರ್ ಮಾಡಲಾಗಿದೆ. ಈ ಮಾರ್ಗಕ್ಕಾಗಿ 38 ಡ್ರೈವರ್ ಲೆಸ್ ರೈಲುಗಳಿಗಾಗಿ ಆರ್ಡರ್ ನೀಡಲಾಗಿದೆ. ಬ್ಲೂ ಲೈನ್ಗೆ ಇನ್ನು ಎರಡು ಮೆಟ್ರೋ ರೈಲು ಬರಬೇಕಿದೆ. ಈ ವರ್ಷ ಡಿಸೆಂಬರ್ನಲ್ಲಿ 19.75 ಕಿಮೀ ಉದ್ದದ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರದವರೆಗಿನ ಮೊದಲ ಹಂತವನ್ನು ಆರಂಭಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ
ಸಿಲ್ಕ್ ಬೋರ್ಡ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು, ಈ ಮಾರ್ಗದಲ್ಲಿ 30 ಮೆಟ್ರೋ ಸ್ಟೇಷನ್ಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ ಮಾರ್ಗದಲ್ಲಿ 13 ಸ್ಟೇಷನ್ಗಳಿರಲಿದ್ದು, ಕೆ.ಆರ್ ಪುರ ಟು ಏರ್ಪೋರ್ಟ್ವರೆಗೆ 38.44 ಕಿಮೀ ಮಾರ್ಗದಲ್ಲಿ 17 ಮೆಟ್ರೋ ಸ್ಟೇಷನ್ ಗಳಿರಲಿವೆ. ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:58 pm, Thu, 4 June 26
ತುಮಕೂರು, ಜೂನ್ 04: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎನ್ನಲಾಗುತ್ತಿದೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.