Headlines

ಏಕದಿನ ವಿಶ್ವಕಪ್​ಗೂ ಮುನ್ನ ಆತಂಕ ಹೆಚ್ಚಿಸಿದ ಗಂಭೀರ್-ಗಿಲ್ ಜೋಡಿ! – Kannada News | The Gambhir Gill Era: A Tough Transition for Team India

ಭಾರತೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಯಶಸ್ವಿ ನಾಯಕತ್ವದ ಯುಗದ ನಂತರ, ಯುವ ಓಪನರ್ ಶುಭ್‌ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಡಿಯು ಹೊಸ ಪರ್ವ ಆರಂಭಿಸಿದ್ದರು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಹೊಸ ಯುಗ ಆರಂಭವಾಗಿದ್ದರೂ, ಭಾರತ ತಂಡದ ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿನ ಪ್ರದರ್ಶನವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಎದುರಿಸಿದ ಸರಣಿ ಸೋಲುಗಳು ತಂಡದ ಸ್ಥಿತ್ಯಂತರದ ಸವಾಲುಗಳನ್ನು ಎತ್ತಿ ತೋರಿಸಿವೆ. 2027ರ ವಿಶ್ವಕಪ್…

Read More

Video: ತಾಯಾನೆಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ – Kannada News | The baby elephant took a dust bath just like its mother

ಮರಿಯಾನೆಗಳು (baby elephants) ಏನು ಮಾಡಿದ್ರೂ ನೋಡೋಕೆ ಚಂದ. ನೀವು ಈ ದೃಶ್ಯ ನೋಡಿದ್ರೆ ಮತ್ತೆ ಮತ್ತೆ ನೋಡ್ತೀರಾ. ಮರಿಯಾನೆಯೊಂದು ತನ್ನ ತಾಯಿಯನ್ನೇ ಅನುಕರಣೆ ಮಾಡಿದೆ. ತಾಯಾನೆಯಂತೆ ಮೈ ಮೇಲೆ ಮರಳನ್ನು ಎರಚಿಕೊಂಡು ಧೂಳಿನ ಸ್ನಾನ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಆನೆ ಮರಿಯ ತುಂಟಾಟ ಕ್ಕೆ ಫಿದಾ ಆಗಿದ್ದಾರೆ. ಸಾಫ್ಫ್ರೆಂನ್ ಸ್ನೈಪರ್ (saffron sniper) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾಯಿಯೊಂದು ಮರಳನ್ನು…

Read More

ಮನುಷ್ಯರಿಗೇ ಬುದ್ಧಿ ಕಲಿಸಿದ ಬೆಂಗಳೂರಿನ ಬೀದಿ ನಾಯಿಗಳು: ಟ್ರಾಫಿಕ್ ರೂಲ್ಸ್ ಪಾಲಿಸಿ ‘ಜಿಬ್ರಾ ಕ್ರಾಸಿಂಗ್’ನಲ್ಲೇ ರಸ್ತೆ ದಾಟಿದ ಶ್ವಾನಗಳ ಗುಂಪು – Kannada News | Watch: Bangalore’s Smartest Dogs Set Example, Cross Roads Only on Zebra Crossings

ಬೆಂಗಳೂರು, ಜು.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇದೀಗ ನಗರದ ಅತ್ಯಂತ ಬುದ್ಧಿವಂತ ಹಾಗೂ ಕಾನೂನು ಪಾಲಿಸುವ ಶ್ವಾನಗಳ ಹಿಂಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಬೀದಿಯೊಂದರಲ್ಲಿ ನಿಯಮಬದ್ಧವಾಗಿ ಕೇವಲ ಜಿಬ್ರಾ ಕ್ರಾಸಿಂಗ್ (Zebra Crossing) ಮೂಲಕವೇ ರಸ್ತೆ ದಾಟುತ್ತಿರುವ ಬೀದಿ ನಾಯಿಗಳ ಶಿಸ್ತು ಇಡೀ ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ಈ ಕಿರು…

Read More

ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಚಿನ್ನಾಭರಣ ದೋಚಿದ ಆಸಾಮಿ! – Kannada News | Bengaluru Crime: Fake Budubuduke Swamiji Robs Gold Worth Rs 1.2 Lakh From Pregnant Woman

ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಚಿನ್ನಾಭರಣ ದೋಚಿದ ಆಸಾಮಿ! ನೆಲಮಂಗಲ, ಜುಲೈ 20: ನಿಮ್ಮ ಮನೆ ಬಾಗಿಲಿಗೆ ಬರುವ ಅಪರಿಚಿತ ಜ್ಯೋತಿಷಿಗಳು ಅಥವಾ ಸ್ವಾಮೀಜಿಗಳ ಬಗ್ಗೆ ತೀವ್ರ ಜಾಗರೂಕರಾಗಿರಬೇಕು. ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು, ಮನೆಯಲ್ಲಿ ಸಾವಿನ ಕಂಟಕವಿದೆ ಎಂದು ಹೆದರಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ಶಾಕಿಂಗ್ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಬೆಳಕಿಗೆ ಬಂದಿದೆ. ನಡೆದಿದ್ದೇನು? ಹೆಗ್ಗಡದೇವನಪುರದ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ಉಷಾ ಅವರ ಮನೆಗೆ…

Read More

ವಯಸ್ಸಾಗಿದೆ ಎಂದವರಿಗೆ ತಿರುಗೇಟು ಕೊಟ್ಟ ನಟ ಸಲ್ಮಾನ್ ಖಾನ್ – Kannada News | Salman Khan Reacts to Health Rumors with Cryptic Instagram Post Shares Fresh Pics

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅದರಲ್ಲಿ 60 ವರ್ಷದ ನಟ ಎಂದಿಗಿಂತಲೂ ತುಂಬಾ ಸಣ್ಣಗಾಗಿ, ಮುಖದಲ್ಲಿ ವಯಸ್ಸಾದಂತೆ ಮತ್ತು ಸುಸ್ತಾದವರಂತೆ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. Source link

Read More

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ, ಎಬೋಲಾ ಹರಡುವಿಕೆ ತಡೆಗೆ ಏರ್‌ಪೋರ್ಟ್‌ಗಳಲ್ಲಿ ಸ್ಕ್ರೀನಿಂಗ್: ಯುಟಿ ಖಾದರ್ ಘೋಷಣೆ – Kannada News | Karnataka to Form MLAs Committee for Epidemic Control, Ebola Screening Begins at Airports: Says UT Khader

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಪ್ರತಿ ಕ್ಷೇತ್ರದ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಶಾಸಕರ ಸಮಿತಿ ರಚಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ, ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ (Ebola) ಸೋಂಕಿನ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ, ಆ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ (Health Screening) ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ಹರಡುವಿಕೆ ನಿಯಂತ್ರಣ…

Read More

ಕಾವೇರಿ ಜಲ ವಿವಾದ: ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ; ಜುಲೈ 22ರಂದು CWMA ಮೀಟಿಂಗ್​ – Kannada News | Cauvery Water Row: DMK Strongly Opposes Mekedatu Project in Lok Sabha; Crucial CWMA Meeting Scheduled for July 22

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ದೆಹಲಿ, ಜುಲೈ 20: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದೆ. ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಡಿಎಂಕೆ ಕೋರಿದ್ದು, ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಡಿಎಂಕೆ ಸಂಸದೀಯ ಮಂಡಳಿ ನಾಯಕ ಟಿ.ಆರ್.ಬಾಲು ಈ ಬಗ್ಗೆ…

Read More

ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಿರುವ ಆರ್​ಬಿಐ; ನಕಲಿ ಮಾಡಲು ಆಗದ ಈ ನೋಟುಗಳ ವಿಶೇಷತೆಯೇನು? – Kannada News | RBI to print polymer notes of Rs 10, Rs 20 face value

ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸಲು ಪ್ರಾಯೋಗಿಕ ಯೋಜನೆಗೆ (Pilot Project) ಸಿದ್ಧತೆ ನಡೆಸುತ್ತಿದೆ. ಆರ್‌ಬಿಐನ ನೋಟು ಮುದ್ರಣ ಸಂಸ್ಥೆಯಾದ ‘ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್’ (BRBNMPL) ಗ್ಲೋಬಲ್ ಟೆಂಡರ್ (EOI) ಕರೆದಿದ್ದು, ಪ್ರಾಯೋಗಿಕವಾಗಿ ₹10 ಮತ್ತು ₹20 ಮುಖಬೆಲೆಯ ನೋಟುಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಪೂರೈಸಲು ಜಾಗತಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಪ್ಲಾಸ್ಟಿಕ್ ನೋಟುಗಳ ವಿಶೇಷತೆಗಳೇನು? ದೀರ್ಘಾವಧಿ ಬಾಳಿಕೆ: ಕಾಗದದ…

Read More

ಶೇರುಬಜಾರು ಕುಸಿತ; ಕೆಂಪು ಬಣ್ಣಕ್ಕೆ ತಿರುಗಿದ ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳು; ಏನು ಕಾರಣ? – Kannada News | Stock Market down on Monday, key reasons behind the fall of sensex, nifty

ನವದೆಹಲಿ, ಜುಲೈ 20: ಜಾಗತಿಕ ಮಾರುಕಟ್ಟೆಯ (Stock Market) ಮಂದಗತಿ ಮತ್ತು ಪ್ರಮುಖ ಬ್ಯಾಂಕಿಂಗ್ ಶೇರುಗಳಲ್ಲಿನ ಮಾರಾಟದ ಒತ್ತಡದಿಂದಾಗಿ ಭಾರತೀಯ ಶೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಭಾರಿ ಕುಸಿತ ಕಂಡಿವೆ. ಸೆನ್ಸೆಕ್ಸ್ ಸುಮಾರು 700 ಅಂಕಗಳವರೆಗೆ (ಗರಿಷ್ಠ 1%) ಇಳಿಕೆಯಾಗಿ 77,445 ಅಂಕಗಳ ಕನಿಷ್ಠ ಮಟ್ಟವನ್ನು ತಲುಪಿತು. ನಿಫ್ಟಿ 50 ಸೂಚ್ಯಂಕವು ಬೆಳಗಿನ ಒಂದು ಹಂತದಲ್ಲಿ 180ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 24,150 ಮಟ್ಟಕ್ಕೆ ಕುಸಿದಿತ್ತು. ಇಂಧನ, ಯುಟಿಲಿಟಿ, ಕನ್ಸೂಮರ್ ಡುರಬಲ್…

Read More

ಪಾಕ್ ಕ್ರಿಕೆಟಿಗನ ರೆಕಾರ್ಡ್​ ಉಡೀಸ್: ರೂಟ್ ಹೊಸ ವಿಶ್ವ ದಾಖಲೆ – Kannada News | Joe Root holds New world record in ODI Cricket

ಏಕದಿನ ಕ್ರಿಕೆಟ್​ನಲ್ಲಿ ಜೋ ರೂಟ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನದ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೂಟ್ ಒಮ್ಮೆಯೂ ಔಟ್ ಆಗಿರಲಿಲ್ಲ. ಆಡಿದ ಮೂರು ಇನಿಂಗ್ಸ್​ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 249 ರನ್​​ಗಳು. ಈ 249 ರನ್​​ಗಳೊಂದಿಗೆ ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಒಮ್ಮೆಯೂ ಔಟಾಗದೆ ಅತಿ ಹೆಚ್ಚು ರನ್ ಕಲೆಹಾಕಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ…

Read More