ಚರಂಡಿಗೊಂದು ‘ನೆಟ್’ ಹಾಕಿದ್ರೆ ಸಾಕು; ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಸಮಸ್ಯೆ ಸಿಕ್ತು ಸೂಪರ್ ಐಡಿಯಾ! – Kannada News
ಬೆಂಗಳೂರು, ಜೂ.3: ಪ್ರತಿ ಮುಂಗಾರು ಮಳೆಯಲ್ಲೂ ದೇಶದ ಮೆಟ್ರೋ ಸಿಟಿಗಳು ಎದುರಿಸುವ ಅತಿ ದೊಡ್ಡ ಸಮಸ್ಯೆಯೆಂದರೆ ರಸ್ತೆಗಳು ಜಲಾವೃತಗೊಳ್ಳುವುದು ಮತ್ತು ಚರಂಡಿಗಳು ಬ್ಲಾಕ್ ಆಗುವುದು. ಬೆಂಗಳೂರಿನ ಮುಳುಗುವ ಅಂಡರ್ಪಾಸ್ಗಳು, ಮುಂಬೈನ ಕಸದಿಂದ ತುಂಬಿಹೋಗಿರುವ ರಾಜಕಾಲುವೆಗಳು ಮತ್ತು ಚೆನ್ನೈನ ಜಲಾವೃತ ರಸ್ತೆಗಳು ಇದಕ್ಕೆ ಜೀವಂತ ಸಾಕ್ಷಿ. ಈ ಜ್ವಲಂತ ಸಮಸ್ಯೆಗೆ ಯಾವುದೇ ಕೋಟ್ಯಂತರ ರೂಪಾಯಿಗಳ ಬಜೆಟ್ ಅಥವಾ ರಾಕೆಟ್ ಸೈನ್ಸ್ ತಂತ್ರಜ್ಞಾನದ ಅಗತ್ಯವಿಲ್ಲ, ಕೇವಲ ಒಂದು ಸರಳ ‘ನೆಟ್’ (ಜಾಲರಿ) ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ…