Vastu Shastra: ಬೇರೆಯವರ ಬಟ್ಟೆಗಳನ್ನು ಧರಿಸುವ ಅಭ್ಯಾಸ ನಿಮಗಿದ್ಯಾ? ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Vastu Shastra: Why Wearing Others’ Clothes Can Impact Your Energy and Well being

ಇಂದಿನ ದಿನಗಳಲ್ಲಿ ಸ್ನೇಹಿತರ, ಒಡಹುಟ್ಟಿದವರ ಅಥವಾ ಸಂಬಂಧಿಕರ ಬಟ್ಟೆಗಳನ್ನು ಧರಿಸುವುದು ಅತ್ಯಂತ ಸಾಮಾನ್ಯವಾಗಿದೆ. ಕೆಲವೊಮ್ಮೆ ಅನುಕೂಲಕ್ಕಾಗಿ ಅಥವಾ ಫ್ಯಾಷನ್‌ಗಾಗಿ ಬೇರೆಯವರ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಬಟ್ಟೆಗಳು ಕೇವಲ ದೇಹವನ್ನು ಮುಚ್ಚುವ ಸಾಧನಗಳಲ್ಲ. ಅವು ವ್ಯಕ್ತಿಯ ಶಕ್ತಿ (Energy), ಆಲೋಚನೆ ಮತ್ತು ಜೀವನಶೈಲಿಯೊಂದಿಗೆ ನಿಕಟ ಸಂಬಂಧ ಹೊಂದಿರುತ್ತವೆ. ಆದ್ದರಿಂದ, ವಾಸ್ತು ನಿಯಮಗಳನ್ನು ತಿಳಿಯದೆ ಬೇರೆಯವರ ಬಟ್ಟೆಗಳನ್ನು ಧರಿಸುವುದು ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶಕ್ತಿಯ ಪ್ರಭಾವ ಮತ್ತು ವಾಸ್ತು ನಿಯಮ:

ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ದೇಹದ ಸುತ್ತಲೂ ಒಂದು ನಿರ್ದಿಷ್ಟವಾದ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಧರಿಸುವ ಬಟ್ಟೆಗಳು ಅವನ ಆಂತರಿಕ ಶಕ್ತಿಯ ಪ್ರಭಾವವನ್ನು ಹೀರಿಕೊಳ್ಳುತ್ತವೆ. ಹೀಗಾಗಿ, ನಾವು ಆ ಬಟ್ಟೆಯನ್ನು ಬಳಸಿದಾಗ ಅವರ ಶಕ್ತಿಯ ಪ್ರಭಾವವು ನೇರವಾಗಿ ನಮ್ಮ ಮೇಲೆಯೂ ಉಂಟಾಗುತ್ತದೆ.

ನಕಾರಾತ್ಮಕ ಶಕ್ತಿಯ ಅಪಾಯ:

ಒಬ್ಬ ವ್ಯಕ್ತಿಯು ತೀವ್ರವಾದ ಮಾನಸಿಕ ಒತ್ತಡದಲ್ಲಿದ್ದರೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಸದಾ ಸಮಸ್ಯೆಗಳಿಂದ ಘಾಸಿಗೊಂಡಿದ್ದರೆ, ಅವರ ದೇಹದಲ್ಲಿನ ನಕಾರಾತ್ಮಕ ಶಕ್ತಿಯು ಅವರು ಧರಿಸುವ ಬಟ್ಟೆಗಳಿಗೂ ಹರಡುತ್ತದೆ. ಅಂತಹ ಬಟ್ಟೆಗಳನ್ನು ನಾವು ಧರಿಸಿದಾಗ, ಆ ನಕಾರಾತ್ಮಕ ಕಂಪನಗಳು ನಮ್ಮ ಮನಸ್ಸಿನ ಮೇಲೂ ಪ್ರಭಾವ ಬೀರಿ, ನಮ್ಮಲ್ಲಿಯೂ ಒತ್ತಡ, ಆತಂಕ ಅಥವಾ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುವಂತೆ ಮಾಡುತ್ತವೆ.

ಕುಗ್ಗುವ ಆತ್ಮವಿಶ್ವಾಸ:

ಸ್ವಂತ ಮತ್ತು ಶುಚಿಯಾದ ಬಟ್ಟೆಗಳನ್ನು ಧರಿಸಿದಾಗ ನಮ್ಮಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಅದ್ಭುತ ಆತ್ಮವಿಶ್ವಾಸ ಮೂಡುತ್ತದೆ. ಆದರೆ, ಪದೇ ಪದೇ ಇತರರ ಬಟ್ಟೆಗಳನ್ನೇ ಧರಿಸುವುದರಿಂದ ನಮ್ಮ ಸ್ವಂತ ವ್ಯಕ್ತಿತ್ವದ ಶಕ್ತಿ ಹಾಗೂ ಆತ್ಮವಿಶ್ವಾಸ ಕ್ರಮೇಣ ದುರ್ಬಲಗೊಳ್ಳುತ್ತದೆ. ಆದ್ದರಿಂದ, ನಮ್ಮದೇ ಆದ ಬಟ್ಟೆಗಳನ್ನು ಧರಿಸುವುದು ಪ್ರಗತಿಗೆ ಪೂರಕವಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಯಾರ ಬಟ್ಟೆಗಳನ್ನು ಧರಿಸಲೇಬಾರದು?

ವಾಸ್ತು ನಿಯಮಗಳ ಪ್ರಕಾರ, ಈ ಕೆಳಗಿನ ವ್ಯಕ್ತಿಗಳ ಬಟ್ಟೆಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ:

  • ದೀರ್ಘಕಾಲದವರೆಗೆ ಕಾಯಿಲೆಯಿಂದ ಬಳಲುತ್ತಿರುವವರು.
  • ಯಾವಾಗಲೂ ತೀವ್ರ ಮಾನಸಿಕ ಒತ್ತಡ ಅಥವಾ ಖಿನ್ನತೆಯಲ್ಲಿರುವವರು.
  • ಸಮಾಜದಲ್ಲಿ ಸದಾ ನಕಾರಾತ್ಮಕ ವಿಚಾರಗಳಿಂದಲೇ ಗುರುತಿಸಿಕೊಂಡವರು.

ಹೊಸ ಉಡುಗೊರೆಗಳು ಮತ್ತು ಹಳೆಯ ಬಟ್ಟೆಗಳಿಗೆ ಪರಿಹಾರ:

ಯಾರಾದರೂ ನಿಮಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ (Gift) ನೀಡಿದ್ದರೆ, ಅವುಗಳನ್ನು ಧರಿಸುವುದರಿಂದ ಯಾವುದೇ ವಾಸ್ತು ದೋಷ ಉಂಟಾಗುವುದಿಲ್ಲ. ಆದರೆ, ಈಗಾಗಲೇ ಬಳಸಿದ ಬಟ್ಟೆಗಳನ್ನು ಧರಿಸಲೇಬೇಕಾದ ಅನಿವಾರ್ಯತೆ ಎದುರಾದರೆ, ಅವುಗಳನ್ನು ಧರಿಸುವ ಮುನ್ನ ಚಿಟಿಕೆ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು, ಒಣಗಿಸಿ, ಸ್ವಚ್ಛಗೊಳಿಸಿದ ನಂತರವಷ್ಟೇ ಬಳಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಿನ ಮೊಬೈಲ್‌ಗಳಲ್ಲಿ ತೆಗೆದು ಬದಲಾಯಿಸಬಹುದಾದ ಬ್ಯಾಟರಿ ಏಕೆ ಇಲ್ಲ? ಇಲ್ಲಿದೆ ಅಚ್ಚರಿಯ ಕಾರಣ – Kannada News | Why modern smartphones no longer have removable batteries explained

ಒಂದು ಕಾಲದಲ್ಲಿ ನೋಕಿಯಾ (Nokia) ಸೇರಿದಂತೆ ಹೆಚ್ಚಿನ ಮೊಬೈಲ್‌ಗಳಲ್ಲಿ ಬ್ಯಾಟರಿಯನ್ನು ಸುಲಭವಾಗಿ ತೆಗೆದು ಹೊಸದನ್ನು ಹಾಕಬಹುದಾಗಿತ್ತು. ಹಲವರು ಒಂದು ಫೋನ್‌ಗೆ ಎರಡು-ಮೂರು ಬ್ಯಾಟರಿಗಳನ್ನು ಇಟ್ಟುಕೊಂಡೇ ಬಳಸುತ್ತಿದ್ದರು. ಆದರೆ ಈಗಿನ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ನಾನ್-ರಿಮೂವಬಲ್ (Sealed) ಬ್ಯಾಟರಿ ಮಾತ್ರವೇ ಇರುತ್ತದೆ. ಹಾಗಾದರೆ ಕಂಪನಿಗಳು ಈ ಬದಲಾವಣೆ ಏಕೆ ಮಾಡಿವೆ? ಇದಕ್ಕೆ ಕೇವಲ ಒಂದು ಕಾರಣವಲ್ಲ, ಹಲವು ತಾಂತ್ರಿಕ ಕಾರಣಗಳಿವೆ.

ಮೊದಲನೆಯದಾಗಿ, ಇಂದಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ತೆಳುವಾಗಿದ್ದು, ಬಲಿಷ್ಠ ವಿನ್ಯಾಸದೊಂದಿಗೆ ಬರುತ್ತಿವೆ. ಜೊತೆಗೆ ದೊಡ್ಡ ಕ್ಯಾಮೆರಾ ಮಾಡ್ಯೂಲ್‌, ವೈರ್‌ಲೆಸ್ ಚಾರ್ಜಿಂಗ್‌, ವೇಗದ ಪ್ರೊಸೆಸರ್ ಹಾಗೂ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಒಂದೇ ಸಾಧನದಲ್ಲಿ ಅಳವಡಿಸಬೇಕಾಗುತ್ತದೆ. ಬ್ಯಾಟರಿಯನ್ನು ತೆಗೆದು ಹಾಕುವ ವ್ಯವಸ್ಥೆ ಇದ್ದರೆ ಈ ರೀತಿಯ ಕಾಂಪ್ಯಾಕ್ಟ್ ವಿನ್ಯಾಸವನ್ನು ರೂಪಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಕಂಪನಿಗಳು ಸೀಲ್ಡ್ ಬ್ಯಾಟರಿಯನ್ನು ಆಯ್ಕೆ ಮಾಡಿವೆ.

ಇನ್ನೊಂದು ಪ್ರಮುಖ ಕಾರಣ ಫೋನ್‌ನ ಸುರಕ್ಷತೆ. ಫೋನ್ ಕಳುವಾದಾಗ ರಿಮೂವಬಲ್ ಬ್ಯಾಟರಿಯನ್ನು ತೆಗೆದರೆ ಟ್ರ್ಯಾಕಿಂಗ್ ಮತ್ತು ಭದ್ರತಾ ವೈಶಿಷ್ಟ್ಯಗಳು ತಕ್ಷಣವೇ ನಿಷ್ಕ್ರಿಯವಾಗಬಹುದು. ಆದರೆ ಸೀಲ್ಡ್ ಬ್ಯಾಟರಿಯನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಇದರಿಂದ ಕಳುವಾದ ಫೋನ್‌ನ್ನು ಪತ್ತೆಹಚ್ಚುವ ಸಾಧ್ಯತೆ ಹೆಚ್ಚುತ್ತದೆ. ಜೊತೆಗೆ ಸೀಲ್ಡ್ ವಿನ್ಯಾಸದಿಂದ ಫೋನ್‌ಗೆ ನೀರು ಮತ್ತು ಧೂಳು ನುಗ್ಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಈಗಿನ ಅನೇಕ ಸ್ಮಾರ್ಟ್‌ಫೋನ್‌ಗಳು IP ರೇಟಿಂಗ್‌ನೊಂದಿಗೆ ಉತ್ತಮ ವಾಟರ್ ರೆಸಿಸ್ಟೆನ್ಸ್ ಹೊಂದಿವೆ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ

ಆದರೆ ಈ ಬದಲಾವಣೆಗೆ ಕೆಲವು ಅನಾನುಕೂಲಗಳೂ ಇವೆ. ಬ್ಯಾಟರಿಯ ಕಾರ್ಯಕ್ಷಮತೆ ಕಡಿಮೆಯಾದರೆ ಅಥವಾ ಬ್ಯಾಟರಿ ಉಬ್ಬಿಕೊಂಡರೆ, ಬಳಕೆದಾರರು ಅದನ್ನು ಸ್ವತಃ ಬದಲಾಯಿಸಲು ಸಾಧ್ಯವಿಲ್ಲ. ಅಧಿಕೃತ ಸರ್ವಿಸ್ ಸೆಂಟರ್‌ಗೆ ಹೋಗಿ ಬ್ಯಾಟರಿ ಬದಲಾಯಿಸಬೇಕಾಗುತ್ತದೆ. ಇದರಿಂದ ದುರಸ್ತಿ ವೆಚ್ಚವೂ ಹೆಚ್ಚಾಗಬಹುದು.

ಆಸಕ್ತಿದಾಯಕ ಸಂಗತಿಯೆಂದರೆ, ಯುರೋಪಿಯನ್ ಒಕ್ಕೂಟ (EU) ಇತ್ತೀಚೆಗೆ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆದಾರರು ಸುಲಭವಾಗಿ ಬ್ಯಾಟರಿ ಬದಲಾಯಿಸಬಹುದಾದ ವ್ಯವಸ್ಥೆ ಇರಬೇಕು ಎಂಬ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಯಮ ಜಾರಿಯಾದ ಬಳಿಕ ಯುರೋಪ್‌ನಲ್ಲಿ ಮಾರಾಟವಾಗುವ ಕೆಲವು ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಮತ್ತೆ ಬದಲಾವಣೆ ಕಾಣುವ ಸಾಧ್ಯತೆ ಇದೆ. ಆದರೆ ಜಾಗತಿಕ ಮಟ್ಟದಲ್ಲಿ ರಿಮೂವಬಲ್ ಬ್ಯಾಟರಿಯ ಯುಗ ಸಂಪೂರ್ಣವಾಗಿ ಮರಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:14 pm, Wed, 15 July 26

Source link

ಉಪವಾಸ ನಿರತ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ಬಲವಂತವಾಗಿ ದ್ರವಾಹಾರ ನೀಡಿ; ಹೈಕೋರ್ಟ್‌ಗೆ ತುರ್ತು ಅರ್ಜಿ – Kannada News | Plea in Delhi High Court seeks Force feed to Sonam Wangchuk on hunger strike

ನವದೆಹಲಿ, ಜುಲೈ 15: ಪ್ರಸಿದ್ಧ ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು 18ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಅವರು ಹೀಗೆಯೇ ಉಪವಾಸ ಮುಂದುವರಿಸಿದರೆ ಇನ್ನೆರಡು ದಿನಗಳಿಗಿಂತ ಹೆಚ್ಚು ಕಾಲ ಬದುಕುವುದು ಅನುಮಾನ” ಎಂದು ಕಳವಳ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್‌ಗೆ ತುರ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಈ ಅರ್ಜಿಯ ತುರ್ತು ವಿಚಾರಣೆಯನ್ನು ನಾಳೆಗೆ (ಗುರುವಾರ) ಹೈಕೋರ್ಟ್ ನಿಗದಿಪಡಿಸಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (PIL) ಸೋನಮ್ ವಾಂಗ್ಚುಕ್ ಅವರ ಜೀವಕ್ಕೆ ಎದುರಾಗಿರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಹಲವು ದಿನಗಳಿಂದ ಆಹಾರ ಸೇವಿಸದೆ ಉಪವಾಸ ಮಾಡುತ್ತಿರುವುದರಿಂದ ಅವರ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಅವರನ್ನು ತಕ್ಷಣವೇ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಬೇಕು. ಅವರ ಒಪ್ಪಿಗೆ ಇಲ್ಲದಿದ್ದರೂ, ಜೀವ ಉಳಿಸುವ ದೃಷ್ಟಿಯಿಂದ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರಿಗೆ ಬಲವಂತವಾಗಿ ಗ್ಲುಕೋಸ್ ಅಥವಾ ದ್ರವಾಹಾರವನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದಾರೆ.

ಇದನ್ನೂ ಓದಿ: ಉಪವಾಸ ಮಾಡಿದ್ದಕ್ಕೆ ಆಡಳಿತ ಬಂಧಿಸಿದೆ ಎಂದು ಆರೋಪಿಸಿದ ವಾಂಗ್ಚುಕ್; ಆರೋಪ ನಿರಾಕರಿಸಿದ ಲಡಾಖ್

ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 59 ವರ್ಷದ ಸೋನಮ್ ವಾಂಗ್ಚುಕ್ ಅವರು ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಯುವ ಸಂಘಟನೆಯಾದ ‘ಕಾಕ್ರೋಚ್ ಜನತಾ ಪಾರ್ಟಿ’ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಈ ಸತ್ಯಾಗ್ರಹ ಆರಂಭಿಸಿದ್ದಾರೆ.

ವಿಪರೀತ ತೂಕ ಇಳಿಕೆ:

ವಕೀಲ ರಾಕೇಶ್ ಕುಮಾರ್ ಸೈನಿ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ ಹಲವು ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ಕಳೆದ 18 ದಿನಗಳ ಉಪವಾಸದಿಂದಾಗಿ ಸೋನಮ್ ವಾಂಗ್ಚುಕ್ ಅವರು ಈಗಾಗಲೇ ಸುಮಾರು 8.5 ಕೆಜಿ ತೂಕ ಕಳೆದುಕೊಂಡಿದ್ದು, ಅವರ ಶರೀರ ಸಂಪೂರ್ಣ ದುರ್ಬಲವಾಗಿದೆ. “ಅವರ ಜೀವ ಉಳಿಸಲು ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಮನುಷ್ಯನ ದೇಹ ಬದುಕಲು ಅಗತ್ಯವಿರುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವಾಹಾರದ ಮೂಲಕ ಬಲವಂತವಾಗಿ ನೀಡಬೇಕಾಗಿದೆ” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಕೋರ್ಟ್ ಕಣ್ಣೆದುರೇ ಸಾವು ಸಂಭವಿಸಬಾರದು:

“ಸಾರ್ವಜನಿಕ ಹಿತಾಸಕ್ತಿಗಾಗಿ ಶಾಂತಿಯುತ ಪ್ರತಿಭಟನೆ ಮಾಡುವುದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕು. ಈ ಹೋರಾಟದಲ್ಲಿ ಅವರು ಜೀವ ಕಳೆದುಕೊಂಡರೆ ಅದು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ದೊಡ್ಡ ಅವಮಾನ. ದೇಶದ ನಾಗರಿಕನೊಬ್ಬ ತನ್ನ ಕಣ್ಣೆದುರೇ ಹಸಿವಿನಿಂದ ಸಾಯಲು ನ್ಯಾಯಾಲಯಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ,” ಎಂದು ಅರ್ಜಿದಾರರು ವಾದಿಸಿದ್ದಾರೆ.

ಇದನ್ನೂ ಓದಿ: Ladakh Protest: ಲಡಾಖ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಾರಣಗಳೇನು?

ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್:

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. ಆದರೆ, ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಕಾರ್ಯಸ್ಥಗಿತದ ಕರೆ ಇದ್ದ ಕಾರಣ, ಸರ್ಕಾರದ ಪರವಾಗಿ ಯಾವುದೇ ವಕೀಲರು ಹಾಜರಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, “ನಾವು ಈ ಅರ್ಜಿಯನ್ನು ಸ್ವೀಕರಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳು ಯಾರೂ ಹಾಜರಿಲ್ಲದ ಕಾರಣದಿಂದ ತಕ್ಷಣವೇ ಅವರಿಗೆ ಈ ಆದೇಶದ ಪ್ರತಿಯನ್ನು ತಲುಪಿಸುವಂತೆ ರಿಜಿಸ್ಟ್ರಿಗೆ ಸೂಚಿಸುತ್ತೇವೆ. ನಾಳೆಯೇ ಈ ವಿಷಯವನ್ನು ಮತ್ತೊಮ್ಮೆ ಪಟ್ಟಿ ಮಾಡಿ, ಸರ್ಕಾರದಿಂದ ಸೂಕ್ತ ಮಾಹಿತಿ ಪಡೆಯಲಾಗುವುದು” ಎಂದು ತಿಳಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಸದ್ಯಕ್ಕೆ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ದೆಹಲಿ ಹೈಕೋರ್ಟ್ ಈ ಅರ್ಜಿಯ ಕುರಿತು ಯಾವ ರೀತಿಯ ತುರ್ತು ಆದೇಶ ಹೊರಡಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್! – Kannada News | Good News for Bengaluru: HPCL Partners with Instamart for On Demand LPG Cylinder Delivery

ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!Image Credit source: deccanherald.com

ಬೆಂಗಳೂರು, ಜುಲೈ 15: ತ್ವರಿತ ವಿತರಣಾ (Quick Commerce) ವೇದಿಕೆ ಇನ್‌ಸ್ಟಾಮಾರ್ಟ್ (Instamart) ಮೂಲಕ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಅವಕಾಶವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪರಿಚಯಿಸಿದೆ. ಈ ಸೇವೆ ಆರಂಭವಾಗುತ್ತಿರುವ ದೇಶದ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದೆ. ಬುಧವಾರ ಘೋಷಿಸಲಾದ ಈ ಸೇವೆಯಲ್ಲಿ ಆರಂಭಿಕ ಹಂತದಲ್ಲಿ HPCLನ ಹೊಸ 10 ಕೆ.ಜಿ. ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ‘HP Navya’ ಹಾಗೂ 5 ಕೆ.ಜಿ. ಲೋಹದ (Metal) ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ.

ಯಾರು ಬೇಕಾದರೂ ಆರ್ಡರ್​​ ಮಾಡಬಹುದು!

ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ (On-demand) ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ. ಈ ಸೇವೆಯ ವಿಶೇಷತೆ ಎಂದರೆ, ಈ ಸಿಲಿಂಡರ್ ಖರೀದಿಸಲು ಈಗಾಗಲೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Domestic LPG Connection) ಹೊಂದಿರಬೇಕೆಂಬ ಅವಶ್ಯಕತೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ. ಸಿಲಿಂಡರ್ ರಿಫಿಲ್ ಬೇಕಾದರೆ, ಹೊಸ ಸಿಲಿಂಡರ್ ವಿತರಿಸುವ ವೇಳೆ ಖಾಲಿ HPCL ಸಿಲಿಂಡರ್ ಅನ್ನು ಹಿಂತಿರುಗಿಸಿದರೆ ಸಾಕು.

ಇದನ್ನೂ ಓದಿ:  ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ

ಈ ಬಗ್ಗೆ ಮಾಹಿತಿ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, ಇನ್‌ಸ್ಟಾಮಾರ್ಟ್ ಕೇವಲ ದಿನಸಿ ವಸ್ತುಗಳ ವಿತರಣೆಗೆ ಸೀಮಿತವಾಗಿಲ್ಲ. HPCL ಜೊತೆಗಿನ ಈ ಸಹಭಾಗಿತ್ವದ ಮೂಲಕ ಅತ್ಯಗತ್ಯ ಗೃಹಬಳಕೆಯ ಸೇವೆಯಾದ LPG ವಿತರಣೆಯನ್ನೂ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ಗ್ರಾಹಕರು ನಿರೀಕ್ಷಿಸುವ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡೇ ಈ ಸೇವೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

HPCLನ ಅಧಿಕೃತ ವಿತರಕರ ಜಾಲದ ಮೂಲಕವೇ ಪೂರೈಕೆ

ಈ ಸೇವೆಯಡಿ ಬರುವ ಎಲ್ಲಾ ಆರ್ಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲ (Authorised Distributor Network) ಮೂಲಕ ಪೂರೈಸಲಾಗುತ್ತದೆ. ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ವಿತರಣೆಗೂ ಮುನ್ನ ಕಡ್ಡಾಯವಾಗಿ ಗುರುತಿನ ಪರಿಶೀಲನೆ (Identity Verification) ಪೂರ್ಣಗೊಳಿಸಬೇಕಾಗುತ್ತದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ – Kannada News | Gulf Ship Attack: Bantwal’s Rachan Pujari Rescued After Iranian Missile Strike

ಮಂಗಳೂರು, ಜು.15: ಕೊಲ್ಲಿ ವಲಯದಲ್ಲಿ ಹಡಗುಗಳ ಮೇಲಿನ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೊಬ್ಬ ಪಾರಾಗಿದ್ದಾರೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಯನ್ನು ಸದ್ಯ ರಕ್ಷಿಸಲಾಗಿದ್ದು, ಇವರಲ್ಲಿ ಜಿಲ್ಲೆಯ ಪೆರ್ನೆ ನಿವಾಸಿ ರಚನ್ ಪೂಜಾರಿ ಕೂಡ ಸೇರಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮರ್ಚೆಂಟ್ ನೇವಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ನಿವಾಸಿ ರಚನ್ ಪೂಜಾರಿ ಅವರು ಭಾನುವಾರ ನಡೆದ ಈ ದೊಡ್ಡ ದುರಂತದಿಂದ ಪಾರಾದವರು. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ‘ಜೆಎಫ್ ಎಸ್ ಗ್ಯಾಲಕ್ಸಿ’ ಹೆಸರಿನ ವಾಣಿಜ್ಯ ಹಡಗು ಯುಎಇ ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.

ಹಡಗು ಭೂಭಾಗದಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ ಇರಾನ್ ಪಡೆಗಳು ಹಡಗನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿವೆ. ಹಡಗು ಮುಂದೆ ಚಲಿಸದಂತೆ ತಡೆಯಲು ಇರಾನ್ ಪಡೆಗಳು ನೇರವಾಗಿ ಹಡಗಿನ ಎಂಜಿನ್ ಕೊಠಡಿಯನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದವು. ಕ್ಷಿಪಣಿ ಅಪ್ಪಳಿಸುತ್ತಿದ್ದಂತೆ ಎಂಜಿನ್ ರೂಂನಲ್ಲಿ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ.

ಹಡಗಿನಲ್ಲಿ ಬೆಂಕಿ ಆವರಿಸಿ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಾಗ, ಹಡಗಿನಲ್ಲಿದ್ದ ಭಾರತೀಯರು ಸೇರಿದಂತೆ ಎಲ್ಲಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಎಲ್ಲರೂ ಜೀವ ರಕ್ಷಕ ದೋಣಿಗೆ ಜಿಗಿದು ಹಡಗಿನಿಂದ ದೂರ ಸರಿದು ಪ್ರಾಣ ಉಳಿಸಿಕೊಂಡಿದ್ದಾರೆ. ದಾಳಿಯ ನಂತರ ತಕ್ಷಣವೇ ಸಿಬ್ಬಂದಿ ಒಮಾನ್ ನೌಕಾಪಡೆಯನ್ನು (Oman Navy) ಸಂಪರ್ಕಿಸಿ ನೆರವಿಗಾಗಿ ಕೋರಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಒಮಾನ್ ನೌಕಾಪಡೆಯು ಸಮುದ್ರದ ಮಧ್ಯೆ ಸಿಲುಕಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ತನ್ನ ಸೇನಾ ನೆಲೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ

ಕರಾವಳಿಯ ಯುವಕ ರಚನ್ ಪೂಜಾರಿ ಸೇರಿದಂತೆ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸದ್ಯ ಒಮಾನ್‌ನಲ್ಲಿದ್ದು, ಹಡಗು ಕಂಪನಿಯ ಅಧಿಕಾರಿಗಳ ನೇರ ಮೇಲ್ವಿಚಾರಣೆ ಹಾಗೂ ಸುರಕ್ಷಿತ ಕಾವಲಿನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿರುವ ಸುದ್ದಿ ಕೇಳಿ ಬಂಟ್ವಾಳದ ಬಿಳಿಯೂರಿನ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಸಿಎಂ ಡಿಕೆ ಶಿವಕುಮಾರ್​​ – Kannada News | If I Have Made a Mistake, Beat Me With a Broom: CM DK Shivakumar

ಬೆಂಗಳೂರು, ಜುಲೈ 15: ‘‘ತಾಯಂದಿರು ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅವಶ್ಯಕತೆ ಇಲ್ಲ, ಬೇಕಾದರೆ ನನಗೆ ಹೊಡೆಯಿರಿ’’ ಎಂದು ಸಿಎಂ ಡಿ.ಕೆ.ಶಿವಕುಮಾರ್​​ ಹೇಳಿದ್ದಾರೆ. ಬಿಡದಿ ಟೌನ್​ಶಿಪ್ (Bidadi Township)​ ಕುರಿತ ಸರ್ವೆಗೆ ಹೋಗಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಬಿಡದಿಯಲ್ಲಿ ನಡೆದ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಪೊರಕೆಯಿಂದ ಅಧಿಕಾರಿಗಳಿಗೆ ಹೊಡೆಯುವ ಅವಶ್ಯಕತೆ ಇಲ್ಲ. ಬೇಕಾದರೆ ನನಗೆ ಹೊಡೆಯಲಿ, ನಾನು ಹೊಡಿಸಿಕೊಳ್ಳುವುದಕ್ಕೆ ರೆಡಿ ಇದ್ದೇನೆ. ಬಲವಂತವಾಗಿ ಜಮೀನು ತೆಹೆದುಕೊಳ್ಳುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD? – Kannada News | DRDO completes military field trial of Quantum Key Distribution system

ಕ್ವಾಂಟಮ್ QKD ಸಿಸ್ಟಂ ಪ್ರಯೋಗImage Credit source: Instagram @dpi.drdo

ನವದೆಹಲಿ, ಜುಲೈ 15: ಭವಿಷ್ಯವು ಕ್ವಾಂಟಮ್ ಕಾಲ. ಅದು ನೀಡುವ ಲಾಭ ಬಹಳ ದೊಡ್ಡದು. ಹಾಗೆಯೇ, ಎದುರಾಗುವ ಸವಾಲುಗಳು ಬಹಳ ದೊಡ್ಡವು ಮತ್ತು ಸಂಕೀರ್ಣವಾದುವು. ಇದನ್ನು ಎದುರಿಸಲು ರಕ್ಷಣಾ ಕ್ಷೇತ್ರದ ಸಂಶೋಧನಾ ಸಂಸ್ಥೆಯಾದ ಡಿಆರ್​ಡಿಒ ಇರಿಸಿದ ಒಂದು ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ. ದೇಶದ ತಂತ್ರಾತ್ಮಕ ಸಂವಹನ ಜಾಲವನ್ನು (Strategic Communication Networks) ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಾಧನೆಯೊಂದನ್ನು ಡಿಆರ್​ಡಿಒ ಮಾಡಿದೆ. ಮಿಲಿಟರಿ ಕ್ಷೇತ್ರದಲ್ಲಿ ಅತ್ಯಂತ ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನವಾದ ಫೈಬರ್ ಆಧಾರಿತ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD – Quantum Key Distribution) ಸಿಸ್ಟಂನ ಫೀಲ್ಡ್ ಟ್ರಯಲ್​ಗಳನ್ನು (Military Field Trials) ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬೆಂಗಳೂರಿನ ‘ಟಾಕ್‌ಬಿಟ್ ಲ್ಯಾಬ್ಸ್’ ಜೊತೆ ಕೈಜೋಡಿಸಿದ ಡಿಆರ್‌ಡಿಒ

ಈ ಹಿಂದೆ ಪ್ರಯೋಗಾಲಯ ಮಟ್ಟದಲ್ಲಿ ನಡೆಸಿದ ಯಶಸ್ವಿ ಪರೀಕ್ಷೆಗಳು ಮತ್ತು ಹಳೆಯ ಪ್ರಯೋಗಗಳ ಅನುಭವವನ್ನು ಬಳಸಿಕೊಂಡು, ಡಿಆರ್‌ಡಿಒ ವಿಜ್ಞಾನಿಗಳ ತಂಡವು ಬೆಂಗಳೂರು ಮೂಲದ ‘ಟಾಕ್‌ಬಿಟ್ ಲ್ಯಾಬ್ಸ್’ (Taqbit Labs) ಸಂಸ್ಥೆ ಜೊತೆಗೂಡಿ ಈ ಅತ್ಯಾಧುನಿಕ ಸಿಸ್ಟಂ ಅನ್ನು ವಿನ್ಯಾಸಗೊಳಿಸಿದೆ. ದೇಶದ ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯ ಸಂವಹನ ಜಾಲಗಳನ್ನು ಸುರಕ್ಷಿತವಾಗಿಡಲು ಈ ಸುಧಾರಿತ ವ್ಯವಸ್ಥೆಯನ್ನು ಈಗ ಯಶಸ್ವಿಯಾಗಿ ಉತ್ಪನ್ನ ರೂಪಕ್ಕೆ (Productized) ತರಲಾಗಿದೆ. ಟಾಕ್‌ಬಿಟ್ ಲ್ಯಾಬ್ಸ್ ಡಿಆರ್​ಡಿಒದ ಇಂಡಸ್ಟ್ರಿಯಲ್ ಪಾರ್ಟ್ನರ್ ಸಂಸ್ಥೆಯಾಗಿದೆ.

ಇದನ್ನೂ ಓದಿ: ರಷ್ಯಾ ತೈಲ ಖರೀದಿ: ಭಾರತ ಮತ್ತು ಚೀನಾ ವಿರುದ್ಧ ಶೇ. 100 ಸುಂಕ ವಿಧಿಸಲು ಅಮೆರಿಕ ಮುಂದು; ಬಂತು ಹೊಸ ವಿಧೇಯಕ

ಏನಿದು QKD ತಂತ್ರಜ್ಞಾನ? ಇದರ ಮಹತ್ವವೇನು?

ಸಾಮಾನ್ಯವಾಗಿ ಇಂಟರ್ನೆಟ್ ಅಥವಾ ಸಂವಹನ ಜಾಲಗಳಲ್ಲಿ ಕಳುಹಿಸುವ ಸಂದೇಶಗಳನ್ನು ಹ್ಯಾಕರ್‌ಗಳು ಮಧ್ಯದಲ್ಲೇ ಕದ್ದು ಓದುವ ಅಪಾಯವಿರುತ್ತದೆ. ಆದರೆ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ತಂತ್ರಜ್ಞಾನವು ಭೌತಶಾಸ್ತ್ರದ ಕ್ವಾಂಟಮ್ ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.

ಇದು ಸಂವಹನಕ್ಕೆ ಅತ್ಯಂತ ಸುರಕ್ಷಿತವಾದ ‘ಡಿಜಿಟಲ್ ಕೀ’ಗಳನ್ನು ಸೃಷ್ಟಿಸುತ್ತದೆ. ಒಂದು ವೇಳೆ ಯಾರಾದರೂ ಮಧ್ಯದಲ್ಲಿ ಈ ಸಂವಹನವನ್ನು ಕದಿಯಲು ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸಿದರೆ, ಕ್ವಾಂಟಮ್ ಕಣಗಳ ಗುಣಲಕ್ಷಣ ಬದಲಾಗಿ ತಕ್ಷಣವೇ ಸಿಗ್ನಲ್ ಕಡಿತಗೊಳ್ಳುತ್ತದೆ ಮತ್ತು ಹ್ಯಾಕಿಂಗ್ ಯತ್ನ ಪತ್ತೆಯಾಗುತ್ತದೆ.

ಭವಿಷ್ಯದ ಸೈಬರ್ ದಾಳಿಯ ಸವಾಲುಗಳನ್ನು ಎದುರಿಸಲು ಸಜ್ಜು

ಮುಂದಿನ ದಿನಗಳಲ್ಲಿ ಕ್ವಾಂಟಮ್ ಕಂಪ್ಯೂಟರ್‌ಗಳು ಬರಲಿವೆ. ಇವು ಪ್ರಸ್ತುತ ಜಗತ್ತಿನಲ್ಲಿರುವ ಅತ್ಯಂತ ಕಠಿಣ ಪಾಸ್‌ವರ್ಡ್ ಮತ್ತು ಭದ್ರತಾ ಕೋಡ್‌ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಮುರಿಯಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಅಂತಹ ‘ಕ್ವಾಂಟಮ್ ಯುಗ’ದಲ್ಲಿ ಎದುರಾಗಲಿರುವ ಸೈಬರ್ ಭೀತಿಗಳಿಂದ ಭಾರತದ ರಾಷ್ಟ್ರೀಯ ಸಂವಹನ ಮೂಲಸೌಕರ್ಯವನ್ನು ರಕ್ಷಿಸಲು ಈ ತಂತ್ರಜ್ಞಾನ ನೆರವಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ

ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಈ ಸಿಸ್ಟಂ ಸಂಪೂರ್ಣ ದೇಶೀಯವಾಗಿ ಡಿಸೈನ್ ಪಡೆದಿದೆ. ಭಾರತದಲ್ಲಿ ಬೃಹತ್ ಪ್ರಮಾಣದ ಮಲ್ಟಿ-ಹಾಪ್ ಕ್ವಾಂಟಮ್ ನೆಟ್‌ವರ್ಕ್‌ಗಳನ್ನು (Multi-hop Quantum Networks) ನಿರ್ಮಿಸಲು ಗಟ್ಟಿ ಅಡಿಪಾಯ ಹಾಕಿದೆ ಎಂದು ಡಿಆರ್‌ಡಿಒ ಹೆಮ್ಮೆಯಿಂದ ತಿಳಿಸಿದೆ.

ಕ್ವಾಂಟಂ ಟೆಲಿಪೋರ್ಟೇಶನ್ ಮತ್ತು ಎಂಟ್ಯಾಗಲ್ಮೆಂಟ್ ಸ್ವಾಪಿಂಗ್​ನಿಂದ ಕ್ವಾಂಟಮ್ ಮಾಹಿತಿಯನ್ನು ಕಳುಹಿಸುವ ಮೂಲಕ ಫೋಟೋನ್ ಪ್ರಸರಣ ಅಂತರವನ್ನು ತಗ್ಗಿಸಲು ಈ ಮಲ್ಟಿ-ಹಾಪ್ ಕ್ವಾಂಟಮ್ ನೆಟ್ವರ್ಕ್​ಗಳು ನೆರವಾಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ – Kannada News | An elderly man fanning a sleeping dog

ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ (dog). ಹೀಗಾಗಿ ನಾಯಿ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಕೆಲವರು ತಮ್ಮ ಮಕ್ಕಳಂತೆ ಈ ಶ್ವಾನವನ್ನು ನೋಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಇದೀಗ ಬೀದಿ ಬದಿಯಲ್ಲಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುವುದರಲ್ಲಿ ವೃದ್ಧ ವ್ಯಕ್ತಿ ಬ್ಯುಸಿಯಾಗಿದ್ದಾನೆ. ನೆಟ್ಟಿಗರು ಶ್ವಾನದ ಮೇಲೆ ಈ ವೃದ್ಧ ವ್ಯಕ್ತಿಗಿರುವ ಕಾಳಜಿಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರಯಾಗ್ (Prayag) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಚೇರ್ ಹಾಕಿ ಕುಳಿತುಕೊಂಡಿರುವುದನ್ನು ಕಾಣಬಹುದು. ಆತನ ಪಕ್ಕದಲ್ಲಿ ಶ್ವಾನವೊಂದು ಹಾಯಾಗಿ ಮಲಗಿಕೊಂಡಿದೆ. ವೃದ್ಧ ವ್ಯಕ್ತಿ ಕೈಯಲ್ಲಿ ಹಿಡಿದಿರುವ ಬೀಸಣಿಗೆಯಲ್ಲಿ ಶ್ವಾನಕ್ಕೆ ಗಾಳಿ ಬೀಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ

ಜುಲೈ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಶ್ವಾನ ಮಲಗಿಲ್ಲ. ಕಣ್ಣು ಬಿಟ್ಟು ಸುತ್ತಲಿನ ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ವಿಡಿಯೋಗಳನ್ನು ನೋಡುವುದಕ್ಕೆ ನಾನು ಟ್ವಿಟ್ಟರ್ ಗೆ ಬಂದದ್ದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ದೃಶ್ಯ ನೋಡಿ ನಾನು ಎಮೋಷನಲ್ ಆಗಿ ಬಿಟ್ಟೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನಸ್ವಾಮಿ ಸ್ಟೇಡಿಯಲ್ಲಿ ಕಾಲ್ತುಳಿತ ದುರಂತ: 11 ಜನರ ಸಾವಿಗೆ ಹೊಣೆ ಯಾರು? ಅಶೋಕ್​​ ಪ್ರಶ್ನೆ – Kannada News | ‘Where Is Justice for the 11 Victims?’ R. Ashoka Criticises Government over Chinnaswamy stadium stampede Case

ಬೆಂಗಳೂರು, ಜುಲೈ 15: ಚಿನ್ನಸ್ವಾಮಿ ಸ್ಟೇಡಿಯಲ್ಲಿ ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್​ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪತ್ನಿ, ಮಕ್ಕಳ ಜತೆ ಸ್ಟೇಜ್ ಮೇಲೆ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಆದರೆ 11 ಜನರ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಲು ಸರ್ಕಾರ ಹೊರಟಿದೆ. ನಮ್ಮ ಸರ್ಕಾರ ಬಂದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Neevu Heliddu Naavu Keliddu: ಬಿವೈ ವಿಜಯೇಂದ್ರ ಆರ್ ಅಶೋಕ್​ ಕಾಮಿಡಿ – Kannada News | Neevu Heliddu Naavu Keliddu: BY Vijayendra And R Ashok Comedy 15 07 2026

“Neevu Heliddu Naavu Keliddu” (ನೀವು ಹೇಳಿದ್ದು ನಾವು ಕೇಳಿದ್ದು) ಇದು ಟಿವಿ9 ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ರಾಜಕೀಯ ವಿಡಂಬನೆ ಮತ್ತು ಹಾಸ್ಯ ಕಾರ್ಯಕ್ರಮ. ಕರ್ನಾಟಕದ ಪ್ರಮುಖ ರಾಜಕಾರಣಿಗಳು ವಿವಿಧ ಸಮಯಗಳಲ್ಲಿ ನೀಡಿದ ಹೇಳಿಕೆಗಳನ್ನು ಸೇರಿಸಿ ಮಿಮಿಕ್ರಿ ಮತ್ತು ಧ್ವನಿಮುದ್ರಿಕೆಗಳ ರೂಪದಲ್ಲಿ ಹಾಸ್ಯಮಯವಾಗಿ ತೋರಿಸುವ ಕಾರ್ಯಕ್ರಮವಾಗಿದೆ

Source link

Exit mobile version