Headlines

ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ? ಸ್ಫೋಟಕ ಮಾಹಿತಿ ಬಯಲಿಗೆ – Kannada News | Rs 400 crore Robbery In Karnataka Border: Likely money belong gujarat politician

ಬೆಳಗಾವಿ, (ಜನವರಿ 26): ಕರ್ನಾಟಕ ಗಡಿ (Karnataka Border) ಭಾಗದ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ ಬರೋಬ್ಬರಿ 400 ಕೋಟಿ ರೂಪಾಯಿ ದರೋಡೆ ಪ್ರಕರಣ ( Rs 400 crore Robbery Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಕೇವಲ ದರೋಡೆ ಎಂದು ಬಿಂಬಿತವಾಗಿದ್ದ ಈ ಪ್ರಕರಣದ ಆಳಕ್ಕೆ ಇಳಿದ ಮಹಾರಾಷ್ಟ್ರ ಎಸ್‌ಐಟಿ (SIT) ಅಧಿಕಾರಿಗಳಿಗೆ ಈಗ ರಾಜಕೀಯ ನಂಟು ಮತ್ತು ಬೃಹತ್ ಮನಿ ಲಾಂಡರಿಂಗ್ ಜಾಲದ ವಾಸನೆ ಬಡಿದಿದೆ. 400 ಕೋಟಿ ರೂಪಾಯಿ ಹಣ ಗುಜರಾತ್‌ನ ಅತ್ಯಂತ…

Read More

ಅಭಿಷೇಕ್ ವಿಶ್ವ ದಾಖಲೆ… ಇಂತಹದೊಂದು ಇನಿಂಗ್ಸ್ ಯಾರೂ ಸಹ ಆಡಿಲ್ಲ! – Kannada News | Abhishek Sharma Hits highest individual T20I score without a single dot ball

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆಯೊಂದನ್ನು ಅಭಿಷೇಕ್ ಶರ್ಮಾ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ಒಂದು ಡಾಟ್ ಬಾಲ್ ಇಲ್ಲದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಒಂದೇ ಒಂದು ಎಸೆತವನ್ನೂ ಬಿಟ್ಟಿರಲಿಲ್ಲ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಒಟ್ಟು 20 ಎಸೆತಗಳನ್ನು ಎದುರಿಸಿದ್ದರು. ಈ ಇಪ್ಪತ್ತು ಎಸೆತಗಳಲ್ಲೂ ರನ್​ಗಳಿಸುವ ಮೂಲಕ ಇದೀಗ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಇಂತಹದೊಂದು ಇನಿಂಗ್ಸ್ ಆಡಿದ ಐಸಿಸಿ ಪೂರ್ಣ…

Read More

ಇದು ದ್ವಿಚಕ್ರ ವಾಹನ ಸವಾರರು ಓದಲೇ ಬೇಕಾದ ಸ್ಟೋರಿ: ಬೆಚ್ಚಿ ಬೀಳಿಸುವಂತಿದೆ ನಿಮ್ಹಾನ್ಸ್​​ ವರದಿ! – Kannada News | Road Safety: NIMHANS Reveals Fatal Brain Injuries in Bike Accidents

ಬೆಂಗಳೂರು, ಜನವರಿ 26: ನಗರಗಳಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಅಪಘಾತಗಳು ಮಾಮೂಲು ಎಂಬಂತಾಗಿದೆ. ಈ ಪೈಕಿ ಬೈಕ್​​ ಅಪಘಾತಗಳ ಸಂದರ್ಭ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವವರ ಬಗ್ಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಅಧ್ಯಯನವೊಂದು ನಡೆಸಿದ್ದು, ಈ ಅಂಕಿ ಅಂಶಗಳು ಬೆಚ್ಚಿಬೀಳಿಸುವಂತಿವೆ. ಸರಿಯಾಗಿ ಹೆಲ್ಮೆಟ್​​ ಧರಿಸದೇ ಇರುವುದು, ಅಥವಾ ಹೆಲ್ಮೆಟ್​​ ಇಲ್ಲದೆ ದ್ವಿಚಕ್ರ ಚಾಲನೆ ವೇಳೆ ನಡೆಯುವ ಅಪಘಾತಗಳು ಮೆದುಳಿನ ಗಾಯಕ್ಕೆ ಕಾರಣವಾಗುತ್ತಿವೆ. 2025ರಲ್ಲಿ ಚಿಕಿತ್ಸೆ ಪಡೆದ 1,500 ಮೆದುಳಿನ ಗಾಯ…

Read More

ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ ಬಯಲು! ರೇಪ್ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡ ಆರೋಪಿ – Kannada News | Bengaluru Techie Sharmila Murder: Accused Admits Physical assault Attempt

ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ ಬಯಲು! ರೇಪ್ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡ ಆರೋಪಿ ಬೆಂಗಳೂರು, ಜನವರಿ 26: ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ (Techie Sharmila case) ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನಿಖೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ. ನೆರೆಮನೆಯವನೇ ಆದ ಆರೋಪಿ ಕರ್ನಲ್ (18), ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನುವ ಶಂಕೆ ವ್ಯಕ್ತವಾಗಿತ್ತು. ಮೊದಲಿಗೆ ದೌರ್ಜನ್ಯದ ಆರೋಪವನ್ನು ಕರ್ನಲ್ ತಳ್ಳಿಹಾಕಿದ್ದ. ಆದರೀಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿರುವುದಾಗಿ ಪೊಲೀಸ್ ತನಿಖೆಯ ವೇಳೆ…

Read More

Sanjana Burli Engagement: ವೈದ್ಯನ ಜೊತೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಬುರ್ಲಿ

ನಟಿ ಸಂಜನಾ ಬುರ್ಲಿ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ನಟಿಸಿ ಗಮನ ಸೆಳೆದರು. ಈಗ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಏಕೆಂದರೆ ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿರಲಿಲ್ಲ. ಸಂಜನಾ ಅವರು ಮದುವೆ ಆಗುತ್ತಿರುವ ಹುಡುಗನನ್ನೂ ಕೂಡ ಪರಿಚಯಿಸಿದ್ದಾರೆ. ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಸಮರ್ಥ್. ಅವರು ಚನ್ನಗಿರಿ…

Read More

ರಿಷಿ-ಪ್ರಕಾಶ್ ಬೆಳವಾಡಿ ಚಿತ್ರಕ್ಕೆ ‘ಅನಂತ ಪದ್ಮನಾಭ’ ಟೈಟಲ್; ಶೀರ್ಷಿಕೆಯಲ್ಲೇ ಕಥೆಯ ಎಳೆ ರಿವೀಲ್ – Kannada News | Ananta Padmanabha: Rishi, Prakash Belawadi Star in Prashanth Rajappa’s Comedy Drama

ಸಂಭಾಷಣೆಕಾರರು ಸಿನಿಮಾ ನಿರ್ದೇಶಕರಾಗಿ ಬಡ್ತಿ ಪಡೆದ ಸಾಕಷ್ಟು ಉದಾಹರಣೆ ಇದೆ. ಈಗ ಇದಕ್ಕೆ ಹೊಸ ಸೇರ್ಪಡೆ ಆಗಿದೆ.‘ಅಧ್ಯಕ್ಷ’, ‘ವಿಕ್ಟರಿ’, ‘ರನ್ನ’, ‘ಪೊಗರು’, ‘ತೀರ್ಥರೂಪ ತಂದೆಯವರಿಗೆ’, ‘ಅಣ್ಣ ಫ್ರಂ ಮೆಕ್ಸಿಕೋ’ ರೀತಿಯ ಸಿನಿಮಾಗಳಿಗೆ ಸಂಭಾಷಣೆ ಬರೆದ ಪ್ರಶಾಂತ್‌ ರಾಜಪ್ಪ ಈಗ ನಿರ್ದೇಶನ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ‘ಅನಂತ ಪದ್ಮನಾಭ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ (Prakash Belavadi) ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೈಟಲ್ ರಿವೀಲ್ ಮಾಡುವ ಪೋಸ್ಟರ್ ರಿವೀಲ್ ಆಗಿದೆ….

Read More

ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್! – Kannada News | 77th Republic Day: Lakshmi Hebbalkar Hoists flag on St. Marys Island by Boat

ಉಡುಪಿ, ಜನವರಿ 26: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ (Republic Day 2026) ನೆರವೇರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವಜಾರೋಹಣ ಮಾಡಿದರು. ಅಧಿಕಾರಿಗಳು ಮತ್ತು ಗಣ್ಯರು ಬೋಟ್ ಮೂಲಕ ದ್ವೀಪಕ್ಕೆ ತೆರಳಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವಿಶೇಷ ಸಂದರ್ಭದಲ್ಲಿ, ಸಶಸ್ತ್ರ ಪಡೆಗಳ ವತಿಯಿಂದ ರಾಷ್ಟ್ರೀಯ ವಂದನಾ ಪರೇಡ್ ಹಾಗೂ ಸಶಸ್ತ್ರ ಪರೇಡ್ ಜರುಗಿತು. ಇದು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮತ್ತು ಗಾಂಭೀರ್ಯದ ಸ್ಪರ್ಶ ನೀಡಿತು. ಸೈಂಟ್…

Read More

ಬಂಗಾರದ ದರ 1 ಕಿಲೋಗೆ 8-9 ಕೋಟಿ ರೂಗೆ ಏರುತ್ತಾ? ಯಾಕಿಷ್ಟು ಏರುತ್ತಿದೆ ಬೆಲೆ? – Kannada News | Reasons for rising gold prices, and future rates prediction

ನವದೆಹಲಿ, ಜನವರಿ 26: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಒಂದು ಔನ್ಸ್​ಗೆ 5,000 ಡಾಲರ್ ದಾಟಿ ಹೋಗಿದೆ. ಈ ಮೈಲಿಗಲ್ಲು ಮುಟ್ಟಿದ್ದು ಬಂಗಾರದ ಇತಿಹಾಸದಲ್ಲೇ ಇದು ಪ್ರಥಮ ಬಾರಿಗೆ. ಸ್ಪಾಟ್ ಗೋಲ್ಡ್ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ ಸೋಮವಾರ 5,092 ಡಾಲರ್​ವರೆಗೂ ಏರಿದೆ. ಒಂದು ಔನ್ಸ್ ಎಂದರೆ 28.3495 ಗ್ರಾಮ್. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ ಸ್ಪಾಟ್ ಮಾರ್ಕೆಟ್​ನಲ್ಲಿ 16,410 ರೂಗಿಂತ ಹೆಚ್ಚಾಗಿದೆ. ಚಿನ್ನದ ಬೆಲೆ ಏರಲು ಕಾರಣಗಳೇನು? ಸೆಂಟ್ರಲ್ ಬ್ಯಾಂಕುಗಳು…

Read More

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ! – Kannada News | Revenge Plot: Vasundhara Injects HIV into Ex Lover’s Wife in Kurnool

ಆಂಧ್ರಪ್ರದೇಶ, ಜಿ.26: ಕರ್ನೂಲ್ ಪಟ್ಟಣದಲ್ಲಿ ಬಿ.ಬಿ. ವಸುಂಧರಾ (40) ಎಂಬ ಮಹಿಳೆ, ತನ್ನ ಮಾಜಿ ಪ್ರಿಯಕರನ ಪತ್ನಿಯ ಮೇಲೆ ಎಚ್‌ಐವಿ (HIV) ಇಂಜೆಕ್ಟ್ ಮಾಡುವ ಮೂಲಕ ಕೊಲೆಗೆ ಸಂಚು ರೂಪಿಸಿದ್ದಾಳೆ. ಸಂತ್ರಸ್ತ ಮಹಿಳೆಯು ವೃತ್ತಿಯಲ್ಲಿ ವೈದ್ಯೆಯಾಗಿದ್ದು (ಸಹಾಯಕ ಪ್ರಾಧ್ಯಾಪಕಿ), ಈಕೆಯ ಪತಿ ಕೂಡ ವೈದ್ಯರಾಗಿದ್ದಾರೆ. ವಸುಂಧರಾ ತನ್ನ ಮಾಜಿ ಪ್ರಿಯಕರ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾರದೆ, ಅವರ ಸಂಸಾರವನ್ನು ಹಾಳುಮಾಡಲು ಈ ಭೀಕರ ಸಂಚು ರೂಪಿಸಿದ್ದಳು. ಜನವರಿ 9, 2026 ರಂದು ಸಂತ್ರಸ್ತ ವೈದ್ಯೆ ಸ್ಕೂಟರ್‌ನಲ್ಲಿ ಮನೆಗೆ…

Read More

ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಸರಿಗಟ್ಟಿದ ಭಾರತ – Kannada News | India Equals Pakistan T20 World Record

ಈ ಮೂಲಕ ಟೀಮ್ ಇಂಡಿಯಾ ಸತತವಾಗಿ 11 ಟಿ20 ಸರಣಿಗಳನ್ನು ಗೆದ್ದುಕೊಂಡು, ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. ಇನ್ನು ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ ಗೆದ್ದುಕೊಂಡರೆ, ಟಿ20 ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಸರಣಿ ಗೆದ್ದ ವಿಶ್ವ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಗಲಿದೆ. Source link

Read More