Headlines

Balasana Benefits: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ – Kannada News | Balasana Benefits: Do Child’s Pose for 15 minutes every day to relieve stress

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಉತ್ತಮ ಜೀವನಶೈಲಿ, ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ ಇಂದಿನ ಈ ಬ್ಯುಸಿ ಜೀವನದ ಕಾರಣದಿಂದಾಗಿ ಅನೇಕರಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಒತ್ತಡವೂ (stress) ಹೆಚ್ಚುತ್ತಿದೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಈ ಒಂದು ಸಮಸ್ಯೆಗೆ ನಿತ್ಯ ಬಾಲಾಸನ ಮಾಡುವ ಮೂಲಕ ಪರಿಹಾರವನ್ನು ಪಡೆಯಬಹುದು. ಒತ್ತಡವನ್ನು ನಿವಾರಿಸುವಲ್ಲಿ ಬಾಲಾಸನ ಅತ್ಯಂತ ಪರಿಣಾಮಕಾರಿ ಯೋಗಭಂಗಿಯಾಗಿದೆ. ಚೈಲ್ಡ್ಸ್…

Read More

ಐವಿಎಫ್ ಬಳಿಕ ಬಾಣಂತಿಯರು ಮಗುವಿಗೆ ಹಾಲುಣಿಸಬಹುದೇ? ತಜ್ಞರು ನೀಡಿರುವ ಉತ್ತರವೇನು? – Kannada News | Can IVF Affect Breastfeeding After Delivery? Know What Doctors Say

ಐವಿಎಫ್ (IVF) ಮೂಲಕ ಗರ್ಭಧಾರಣೆ ಮಾಡಿಕೊಂಡ ಮಹಿಳೆಯರಲ್ಲಿ ಡೆಲಿವರಿ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಐವಿಎಫ್ ವೇಳೆ ಹಾರ್ಮೋನ್‌ ಆಧಾರಿತ ಔಷಧಿಗಳನ್ನು ನೀಡುವುದರಿಂದ, ನಂತರ ಎದೆಹಾಲು ಉತ್ಪಾದನೆಗೆ ತೊಂದರೆಯಾಗಬಹುದೇ ಎಂಬ ಆತಂಕವೂ ಇರುತ್ತದೆ. ಹಾಗಾದರೆ ಐವಿಎಫ್ ನಂತರ ಸ್ತನ್ಯಪಾನ ಮಾಡುವಾಗ ನಿಜವಾಗಿಯೂ ಸಮಸ್ಯೆ ಉಂಟಾಗಬಹುದೇ, ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ. ಐವಿಎಫ್ ಬಳಸುವ ಹಾರ್ಮೋನ್‌ ಔಷಧಿಗಳು ಸಾಮಾನ್ಯವಾಗಿ ಚಿಕಿತ್ಸೆಯ ನಿರ್ದಿಷ್ಟ ಹಂತದಲ್ಲಿ ಮಾತ್ರ…

Read More

ಸಾಲು ಸಾಲು ಅಕ್ರಮ ಆರೋಪ: ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ! – Kannada News | KPSC Officer Transfers: IAS H. Prasanna, Lavish Ordia Appointed Amid Allegations

ಬೆಂಗಳೂರು, ಆಗಸ್ಟ್​​ 12: ಕರ್ನಾಟಕ ಲೋಕಸೇವಾ ಆಯೋಗದ (KPSC) ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳು ಉಗ್ರ ಹೋರಾಟ ಕೂಡ ಮಾಡಿದ್ದರು. ಹೀಗೆ ಸಾಲು ಸಾಲು ಅಕ್ರಮ ಆರೋಪಗಳ ಬೆನ್ನಲ್ಲೇ ಇದೀಗ ಸರ್ಕಾರ ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅಧಿಕಾರಿಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ. ಕೆಪಿಎಸ್‌ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆದಿದೆ ಎಂಬ…

Read More

Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು – Kannada News | The 24 Hours of August 14–15, 1947; How the moment Indians felt during Indian Independence Announcement; details in Kannada

ದೆಹಲಿ, ಆ.12: ಬ್ರಿಟಿಷರ ಗುಲಾಮಿ ಸಂಕೋಲೆಯನ್ನು ಕಳಚಿ, ಭಾರತವು ಸ್ವತಂತ್ರ ರಾಷ್ಟ್ರವಾಗಿ ಜನ್ಮತಳೆದ 1947ರ ಆಗಸ್ಟ್ 14ರ ಸಂಜೆಯಿಂದ ಆಗಸ್ಟ್ 15ರ ಸಂಜೆಯವರೆಗಿನ 24 ಗಂಟೆಗಳು ಭಾರತೀಯ ಇತಿಹಾಸದ ಅತ್ಯಂತ ಅವಿಸ್ಮರಣೀಯ ಅಧ್ಯಾಯ. ಒಂದೆಡೆ ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಸ್ವಾತಂತ್ರ್ಯದ ಪರಮೋಚ್ಛ ಆನಂದ, ಮತ್ತೊಂದೆಡೆ ದೇಶ ವಿಭಜನೆಯ ಭೀಕರ ರಕ್ತಪಾತ ಮತ್ತು ನೋವು. ಈ 24 ಗಂಟೆಗಳಲ್ಲಿ ಇಡೀ ದೇಶ ಅನುಭವಿಸಿದ ಭಾವನೆಗಳನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಅಂದು ದೆಹಲಿಯ ರಾಜಬೀದಿಗಳಿಂದ ಹಿಡಿದು ಗಡಿಭಾಗದ ಹಳ್ಳಿಗಳವರೆಗೆ…

Read More

ಪುಷ್ಕರ್ ಮಲ್ಲಿಕಾರ್ಜುನಯ್ಯ ನಟನೆಯ ‘ವಿಜಯನಗರ ಸಾಮ್ರಾಜ್ಯ’ ಚಿತ್ರದಲ್ಲಿ ಹೊಸ ತಂತ್ರಜ್ಞಾನ – Kannada News | Pushkarah Mallikarjunaiah Acting Directorial debut Vijayanagara Samrajya Movie

ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkarah Mallikarjunaiah) ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’, ‘ಅವತಾರ ಪುರುಷ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಅವರು ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕನಟ ಆಗಲು ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈಗ ಅವರು ‘ವಿಜಯನಗರ ಸಾಮ್ರಾಜ್ಯ’ (Vijayanagara Samrajya) ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ನೂತನ ತಂತ್ರಜ್ಞಾನ ಬಳಸಲಾಗುತ್ತಿದೆ….

Read More

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ – Kannada News | Portfolios allocated to 19 newly sworn in Karnataka Ministers, here Is List

ಬೆಂಗಳೂರು, (ಆಗಸ್ಟ್ 11):  ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ.  ಎರಡನೇ ಹಂತದ ಸಂಪುಟ ಪುನಾರಚನೆಯಲ್ಲಿ ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರಿದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೌದು….ಆಗಸ್ಟ್ 3ರಂದು ಸಂಪುಟ ಪುನಾರಚನೆ (Karnataka Cabinet Expansion)  ವೇಳೆ ಪ್ರಮಾಣವಚನ  ಸ್ವೀಕರಿಸಿದ  19 ನೂತನ ಸಚಿವರಿಗೆ ಖಾತೆ (Portfolios) ನೀಡಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜಭವನದ ಅಂಕಿತ ಹಾಗೂ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ…

Read More

ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ 3 ಆರೋಪಗಳು ಸಾಬೀತು – Kannada News | Justice Yashwant Varma found guilty in cash row case Panel Finds All 3 Charges Proved

ನವದೆಹಲಿ, ಆಗಸ್ಟ್ 12: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ಪತ್ತೆಯಾದ ಮೂಲವಿಲ್ಲದ ಬೃಹತ್ ನಗದಿಗೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಸಂಸದೀಯ ತನಿಖಾ ಸಮಿತಿ ತಿಳಿಸಿದೆ. ದೆಹಲಿಯ 30 ತುಘಲಕ್ ಕ್ರೆಸೆಂಟ್‌ನಲ್ಲಿರುವ ಅಧಿಕೃತ ನಿವಾಸದ ಸ್ಟೋರ್‌ರೂಮ್‌ನಲ್ಲಿ ಕಳೆದ ವರ್ಷ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಈ ಸ್ಥಳವು ನ್ಯಾಯಮೂರ್ತಿ ವರ್ಮಾ ಅವರ ಸುಪರ್ದಿಯಲ್ಲೇ ಇತ್ತು….

Read More

ಸಕ್ಕರೆ ತಿಂದರೆ ಆಸಿಡಿಟಿ ಹೆಚ್ಚಾಗುತ್ತದೆಯೇ? ಎದೆ ಉರಿ ಬಗ್ಗೆ ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ – Kannada News | Heartburn After Sweets? Doctor Explains How Sugary Foods May Trigger Acid Reflux

ಊಟದ ಬಳಿಕ ಎದೆ ಉರಿ, ಹೊಟ್ಟೆ ಉಬ್ಬರ, ಹುಳಿ ತೇಗು, ಬಾಯಿಯಲ್ಲಿ ಹುಳಿ ರುಚಿ… ಇಂತಹ ಸಮಸ್ಯೆಗಳು ಇತ್ತೀಚೆಗೆ ಹಲವರನ್ನು ಕಾಡುತ್ತಿವೆ. ಸಾಮಾನ್ಯವಾಗಿ ಮಸಾಲೆ, ಎಣ್ಣೆಯುಕ್ತ ಅಥವಾ ಹೆಚ್ಚು ಖಾರವಾದ ಆಹಾರವೇ ಆಸಿಡಿಟಿಗೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸಿಹಿ ಪದಾರ್ಥಗಳು ತಿಂದರೂ ಆಸಿಡಿಟಿ ಹೆಚ್ಚಾಗುತ್ತದೆಯೇ? ಎಂಬ ಗೊಂದಲ ಹಲವರದ್ದು. ತಜ್ಞರು ಹೇಳುವ ಪ್ರಕಾರ, ಸಕ್ಕರೆ ಸ್ವತಃ ಆಸಿಡ್ ರಿಫ್ಲಕ್ಸ್‌ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿ ಇರುವ ಕೇಕ್,…

Read More

ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ? – Kannada News | Tata Sons Chairman N Chandrasekaran’s remuneration, commission and other income details

ಎನ್. ಚಂದ್ರಶೇಖರನ್Image Credit source: PTI ನವದೆಹಲಿ, ಆಗಸ್ಟ್ 12: ಟಾಟಾ ಸನ್ಸ್‌ನ ಎಕ್ಸಿಕ್ಯೂಟಿವ್ ಛೇರ್ಮನ್ ಹುದ್ದೆಯಿಂದ ನಿರ್ಗಮಿಸುತ್ತಿರುವ ಎಚ್. ಎನ್. ಚಂದ್ರಶೇಖರನ್ (ನಟರಾಜನ್ ಚಂದ್ರಶೇಖರನ್) ಅವರು ಭಾರತದ ಅತ್ಯಧಿಕ ವೇತನ ಪಡೆಯುವ ಕಾರ್ಪೊರೇಟ್ ಮುಖ್ಯಸ್ಥರಲ್ಲಿ ಪ್ರಮುಖರಾಗಿದ್ದಾರೆ. ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಅವರು ಕಳೆದ ಆರ್ಥಿಕ ವರ್ಷದಲ್ಲಿ (FY26) ದಾಖಲೆಯ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಎನ್. ಚಂದ್ರಶೇಖರನ್ ಅವರ ಒಟ್ಟು ಸಂಭಾವನೆ ₹158.66 ಕೋಟಿಗೆ ತಲುಪಿದೆ. ಅವರ ಈ ಒಟ್ಟು ವೇತನ…

Read More

FCRA Bill: ವಿಪಕ್ಷಗಳ ತೀವ್ರ ವಿರೋಧದ ನಡುವೆ ಧ್ವನಿ ಮತದ ಮೂಲಕ ಎಫ್‌ಸಿಆರ್‌ಎ ವಿಧೇಯಕ ಜೆಪಿಸಿಗೆ ರವಾನೆ – Kannada News | Modi government sends Foreign Funding Bill FCRA Bill to Joint Parliamentary Committee amid Opposition protest

ನವದೆಹಲಿ, ಆಗಸ್ಟ್ 12: ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೇ ಕೇಂದ್ರ ಸರ್ಕಾರವು ವಿವಾದಾತ್ಮಕ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026’ (FCRA) ಅನ್ನು ಜಂಟಿ ಸಂಸದೀಯ ಸಮಿತಿಗೆ (JPC) ರವಾನಿಸಿದೆ. ವಿಪಕ್ಷಗಳ ಗದ್ದಲದ ಮಧ್ಯೆಯೇ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಇಂದು (ಬುಧವಾರ) ಈ ಮಸೂದೆಯನ್ನು ಜೆಪಿಸಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯ ಪೂರಕ ಕಾರ್ಯಸೂಚಿಯಲ್ಲಿ ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ರವಾನಿಸುವ ಪ್ರಸ್ತಾವನೆಯು ಗೃಹ ಸಚಿವ ಅಮಿತ್ ಶಾ ಅವರ…

Read More