ಪ್ರತಿ ಗಂಟೆಗೆ ಕೇವಲ 5 ನಿಮಿಷಗಳ ನಡಿಗೆ ನಿಮ್ಮ ಇಡೀ ದಿನದ ಮೂಡ್ ಬದಲಾಯಿಸುತ್ತೆ; ಇಲ್ಲಿದೆ ಸಂಶೋಧನೆಯ ವರದಿ – Kannada News | Desk Job Health Secret: Combat Sedentary Lifestyle with Hourly 5 Minute Walks

ಬೆಂಗಳೂರು,ಜೂ.26: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಿಂದ ಹಿಡಿದು ಕಚೇರಿಗಳಲ್ಲಿ ಕೆಲಸ ಮಾಡುವ ಬಹುತೇಕರು ದಿನದ 8 ರಿಂದ 10 ಗಂಟೆಗಳ ಕಾಲ ಕುಳಿತಲ್ಲೇ ಕಳೆಯುತ್ತಾರೆ. ಆದರೆ, ಹೀಗೆ ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ ಹಾಗೂ ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಖಿನ್ನತೆಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಇದಕ್ಕೆ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಪರಿಹಾರವೊಂದನ್ನು ಇತ್ತೀಚಿನ ಜಾಗತಿಕ ಸಂಶೋಧನೆಯೊಂದು ಕಂಡು ಹಿಡಿದೆ. ಖ್ಯಾತ ವೈದ್ಯಕೀಯ ನಿಯತಕಾಲಿಕೆ ಬ್ರಿಟಿಷ್ ಜರ್ನಲ್ ಆಫ್‌ ಸ್ಪೋರ್ಟ್ಸ್ ಮೆಡಿಸಿನ್ (BJSM) ಪ್ರಕಟಿಸಿರುವ ಹೊಸ ಅಧ್ಯಯನದ ಪ್ರಕಾರ, ಪ್ರತಿ ಗಂಟೆಗೆ ಕೇವಲ 5 ನಿಮಿಷಗಳ ಕಾಲ ನಡೆಯುವುದು ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಮೇಲಾಗುವ ನಕಾರಾತ್ಮಕ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​​​ ಎಂಬ ಎಕ್ಸ್​​​​​ ಖಾತೆ ಪೋಸ್ಟ್​ ಮಾಡಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ

ಅಮೆರಿಕದ ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಸೇರಿದಂತೆ ಹಲವು ತಜ್ಞರು ಸುಮಾರು 11,000ಕ್ಕೂ ಹೆಚ್ಚು ಜನರ ಮೇಲೆ ನಡೆಸಿರುವ ಈ ಸಂಶೋಧನೆಯಲ್ಲಿ ಕುತೂಹಲಕಾರಿ ಆರೋಗ್ಯ ರಹಸ್ಯಗಳು ಕಂಡು ಬಂದಿದೆ. ಕೆಲಸದ ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಕಾಲ ಎದ್ದು ಲಘುವಾಗಿ ನಡೆಯುವುದರಿಂದ ಮನುಷ್ಯನ ಮನಸ್ಥಿತಿಸುಧಾರಿಸುತ್ತದೆ ಮತ್ತು ತೀವ್ರ ಮಾನಸಿಕ ದಣಿವು ನಿವಾರಣೆಯಾಗುತ್ತದೆ. ಜತೆಗೆ ಒಂದೇ ಸಮನೆ ಕುಳಿತುಕೊಳ್ಳುವುದರಿಂದ ಕಾಲುಗಳ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಕೇವಲ 5 ನಿಮಿಷಗಳ ವಾಕಿಂಗ್ ದೇಹದಲ್ಲಿ ಗ್ಲೂಕೋಸ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ಮತ್ತೆ ಚುರುಕುಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ಸಂಶೋಧನೆಯ ಪ್ರಕಾರ, ಗಂಟೆಗೊಮ್ಮೆ ಇಂತಹ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದರಿಂದ ಉದ್ಯೋಗಿಗಳ ಕೆಲಸದ ಜವಾಬ್ದಾರಿ ಅಥವಾ ಉತ್ಪಾದಕತೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಬದಲಿಗೆ ಇದು ಮೆದುಳಿಗೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸಿ ಕೆಲಸದಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friday Lakshmi Puja: ಶುಕ್ರವಾರದ ಲಕ್ಷ್ಮಿ ಪೂಜೆ; ಆರ್ಥಿಕ ಸಂಕಷ್ಟ ದೂರವಾಗಲು ಹೀಗೆ ಮಾಡಿ! – Kannada News | Friday Lakshmi Puja: Attain Wealth and Prosperity. Guide to Mahalakshmi Worship for Financial Stability

ಶುಕ್ರವಾರದ ಲಕ್ಷ್ಮಿ ಪೂಜೆImage Credit source: Getty Images

ಹಿಂದೂ ಧರ್ಮದಲ್ಲಿ ಶುಕ್ರವಾರವನ್ನು ಅತ್ಯಂತ ಶುಭ ಮತ್ತು ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಸಂಪತ್ತು, ಸಮೃದ್ಧಿ, ಸೌಂದರ್ಯ ಮತ್ತು ಅದೃಷ್ಟದ ಅಧಿದೇವತೆಯಾದ ಮಹಾಲಕ್ಷ್ಮಿಗೆ ಸಮರ್ಪಿಸಲಾಗಿದೆ. ಭಕ್ತಿಯಿಂದ ಈ ದಿನ ದೇವಿಯನ್ನು ಆರಾಧಿಸುವುದರಿಂದ ಮನೆಯಲ್ಲಿ ದಾರಿದ್ರ್ಯ ದೂರವಾಗಿ, ಆರ್ಥಿಕ ಸ್ಥಿರತೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ ಎಂಬುದು ಕೋಟ್ಯಂತರ ಭಕ್ತರ ಗಾಢ ನಂಬಿಕೆಯಾಗಿದೆ.

ಶುಕ್ರವಾರದ ಲಕ್ಷ್ಮಿ ಪೂಜೆ ಏಕೆ ವಿಶೇಷ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರವು ‘ಶುಕ್ರ’ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಶುಕ್ರನನ್ನು ಐಷಾರಾಮಿ ಜೀವನ, ಭೌತಿಕ ಸುಖ, ಸೌಂದರ್ಯ ಮತ್ತು ವೃತ್ತಿ-ವ್ಯವಹಾರದಲ್ಲಿನ ಪ್ರಗತಿಗೆ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಶುಕ್ರ ದೆಸೆ ಬಲಗೊಳ್ಳುತ್ತದೆ ಮತ್ತು ಕುಟುಂಬದ ಯೋಗಕ್ಷೇಮ ವೃದ್ಧಿಯಾಗುತ್ತದೆ.

ಪೂಜೆಗೆ ಮುನ್ನ ಮಾಡಬೇಕಾದ ಸಿದ್ಧತೆಗಳು:

ಲಕ್ಷ್ಮಿ ದೇವಿಯು ಸ್ವಚ್ಛತೆ ಮತ್ತು ಸಕಾರಾತ್ಮಕತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ಹಾಗಾಗಿ ಪೂಜಾ ದಿನದಂದು ಬೆಳಿಗ್ಗೆಯೇ ಎದ್ದು ಸ್ನಾನ ಮುಗಿಸಿ, ಇಡೀ ಮನೆ ಹಾಗೂ ಪೂಜಾ ಕೋಣೆಯನ್ನು ಕಸ-ಕಡ್ಡಿ ಇಲ್ಲದಂತೆ ಸ್ವಚ್ಛಗೊಳಿಸಬೇಕು. ಮನೆಯ ಮುಖ್ಯ ದ್ವಾರದಲ್ಲಿ ಒಂದು ಚೊಂಬು ನೀರನ್ನು ಇಟ್ಟು, ಮಂಗಳಕರವಾದ ದೀಪವನ್ನು ಹಚ್ಚಬೇಕು. ಬಳಿಕ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಭಾವಚಿತ್ರಕ್ಕೆ ಹೂವುಗಳಿಂದ ಅಲಂಕಾರ ಮಾಡಿಕೊಳ್ಳಬೇಕು.

ದೇವಿಗೆ ಪ್ರಿಯವಾದ ಪೂಜಾ ವಿಧಾನ:

  • ದೀಪಾರಾಧನೆ: ಪೂಜಾ ಕೋಣೆಯಲ್ಲಿ ಹಸುವಿನ ಶುದ್ಧ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಬೆಳಗಿಸಬೇಕು.
  • ಪುಷ್ಪಾರ್ಚನೆ: ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಕಮಲದ ಹೂವುಗಳು ಅಥವಾ ಕೆಂಪು ಬಣ್ಣದ ಹೂವುಗಳಿಂದ ಅಲಂಕರಿಸಿ ಅರ್ಚನೆ ಮಾಡಬೇಕು.
  • ನಾಮಾವಳಿ ಪಠಣೆ: ಅರಿಶಿನ ಮತ್ತು ಕುಂಕುಮವನ್ನು ದೇವಿಗೆ ಅರ್ಪಿಸುತ್ತಾ ಲಕ್ಷ್ಮಿ ಅಷ್ಟೋತ್ತರ (ನೂರು ನಾಮಾವಳಿ) ಅಥವಾ ಸಹಸ್ರನಾಮಗಳನ್ನು ಪಠಿಸಬೇಕು.
  • ವಿಶೇಷ ನೈವೇದ್ಯ: ದೇವಿಯ ಪ್ರಸಾದಕ್ಕಾಗಿ ಹಾಲು, ಪಾಯಸ ಅಥವಾ ಸಕ್ಕರೆ ಪೊಂಗಲ್‌ನಂತಹ ಸಾತ್ವಿಕ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡಬೇಕು. ಕೊನೆಯಲ್ಲಿ ಕುಟುಂಬದವರೆಲ್ಲರೂ ಒಟ್ಟಾಗಿ ಆರತಿ ಪಡೆದು ಪ್ರಸಾದ ಸ್ವೀಕರಿಸಬೇಕು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಲಕ್ಷ್ಮೀ ಕಟಾಕ್ಷಕ್ಕೆ ಸರಳ ಪರಿಹಾರ:

ಆಧ್ಯಾತ್ಮಿಕ ಗ್ರಂಥಗಳ ಪ್ರಕಾರ, ಶುಕ್ರವಾರ ಸಂಜೆಯ (ಪ್ರದೋಷ ಕಾಲ) ಸಮಯದಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಎರಡು ದೀಪಗಳನ್ನು ಹಚ್ಚಬೇಕು. ದೀಪದ ಮುಂದೆ ಕುಳಿತು “ಓಂ ಶ್ರೀ ಮಹಾಲಕ್ಷ್ಮಿ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಳಿದು, ಆರ್ಥಿಕ ಅಭಿವೃದ್ಧಿ ವೇಗವಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ.

ಶುಕ್ರವಾರದಂದು ಇವುಗಳನ್ನು ಮಾಡಲೇಬೇಡಿ:

ಶಾಸ್ತ್ರಗಳ ಪ್ರಕಾರ, ಲಕ್ಷ್ಮಿ ದೇವಿಯ ಅನುಗ್ರಹ ಸದಾ ಕಾಲ ನಮ್ಮ ಮೇಲಿರಬೇಕಾದರೆ ಶುಕ್ರವಾರದಂದು ಕೆಲವು ತಪ್ಪುಗಳನ್ನು ಮಾಡಬಾರದು:

  • ಖರೀದಿ: ಶುಕ್ರವಾರದಂದು ಅಡುಗೆ ಮನೆಗೆ ಬಳಸುವ ಕಬ್ಬಿಣದ ಪಾತ್ರೆಗಳು ಅಥವಾ ಇತರೆ ಕಬ್ಬಿಣದ ವಸ್ತುಗಳನ್ನು ಕೊಳ್ಳಬಾರದು.
  • ಆಸ್ತಿ ವಹಿವಾಟು: ಪ್ರಮುಖ ಆಸ್ತಿ ಖರೀದಿ ಮತ್ತು ಮಾರಾಟದ ವ್ಯವಹಾರಗಳನ್ನು ಈ ದಿನ ಮಾಡದಿರುವುದು ಉತ್ತಮ.
  • ಸಾಲದ ವಹಿವಾಟು: ಯಾರಿಗೂ ಅನಗತ್ಯವಾಗಿ ಸಾಲ ನೀಡುವುದು ಅಥವಾ ಸಾಲ ಪಡೆಯುವುದನ್ನು ಮಾಡಬಾರದು, ಇದರಿಂದ ಧನಹಾನಿಯಾಗುತ್ತದೆ.
  • ಸ್ವಚ್ಛತೆ: ಮನೆಯನ್ನು ಕೊಳಕಾಗಿ ಇಡಬಾರದು ಹಾಗೂ ಸಂಜೆಯ ದೀಪ ಹಚ್ಚಿದ ನಂತರ ಮನೆಯಿಂದ ಕಸವನ್ನು ಹೊರಗೆ ಹಾಕಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ – Kannada News | Ayodhya Ram Mandir Donation Theft: Champat Rai’s PA Among 8 Arrested in Major Scam Probe

ಲಕ್ನೋ, ಜೂನ್ 26: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದ ಕಾಣಿಕೆ ಹಾಗೂ ದೇಣಿಗೆ ಹಣದ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಭಾರಿ ಕಾರ್ಯಾಚರಣೆ ನಡೆಸಿದೆ. ಪ್ರಕರಣದಲ್ಲಿ ನೇರವಾಗಿ ಹೆಸರಿಸಲಾದ 8 ಪ್ರಮುಖ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆಪ್ತ ಸಹಾಯಕ ಕೂಡ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಕ್ಕಿಬಿದ್ದ ಚಂಪತ್ ರಾಯ್ ಆಪ್ತ ಸಹಾಯಕ ‘ಟಿನ್ನು ಯಾದವ್’
ಬಂಧಿತರಾಗಿರುವ ಎಂಟು ಆರೋಪಿಗಳಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ (PA) ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಇವನೊಂದಿಗೆ ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವ್ ಕುಶ್ ಮಿಶ್ರಾ, ರಾಮ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳೆಲ್ಲರೂ ದೇವಸ್ಥಾನದ ಕಾಣಿಕೆ ಮತ್ತು ನಗದು ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದ್ದ ತಂಡದಲ್ಲಿದ್ದರು. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಬಲವಾದ ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ಪುರಾವೆಗಳ ಆಧಾರದ ಮೇಲೆ ಈ ಎಂಟು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾದ ಕೇವಲ ಒಂದು ದಿನದಲ್ಲೇ ಪೊಲೀಸರು ಈ ಬಂಧನದ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಓದಿ: ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ

ಮುಂದಿನ ನಡೆ: ಮುಂಬರುವ ದಿನಗಳಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಇನ್ನು ಹಲವು ಅಧಿಕಾರಿಗಳು ಮತ್ತು ನೌಕರರ ಬಂಧನವಾಗುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಚಂಪತ್ ರಾಯ್ ಅಥವಾ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ.

ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ, ಯೋಗಿ ಸರ್ಕಾರ ಎಚ್ಚರಿಕೆ
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಈ ವಿಷಯವು ಭಾರಿ ಜಿದ್ದಾಜಿದ್ದಿನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ, ಇದು ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ. ಮೊದಲಿನಿಂದಲೂ ನಮ್ಮ ಸರ್ಕಾರ ಅಪರಾಧಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ರಾಮ ಮಂದಿರದ ಪವಿತ್ರ ದೇಣಿಗೆಯಲ್ಲಿ ತಪ್ಪು ಮಾಡಿರುವ ಯಾವುದೇ ಅಪರಾಧಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಅವರಿಗೆ ಕಠಿಣ ಶಿಕ್ಷೆ ಖಂಡಿತ ಎಂದು ಭರವಸೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇವಸ್ಥಾನದಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ, ಈಗ ಕೇವಲ ಸಣ್ಣ ನೌಕರರನ್ನು ಬಂಧಿಸಿ ಅಸಲಿ ಸಾಕ್ಷ್ಯಗಳನ್ನು ನಾಶಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಮಾತನಾಡಿ, ಸರ್ಕಾರ ಕೇವಲ ಹೆಸರಿಗಷ್ಟೇ ಔಪಚಾರಿಕವಾಗಿ ಎಫ್‌ಐಆರ್ ದಾಖಲಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವು, ರಾಮ ಮಂದಿರದ ದೇಣಿಗೆ ಕಳ್ಳತನವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ, ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ಅಸಹಾಯಕವಾಗಿದೆ ಎಂದು ಟೀಕಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಕರಾವಳಿಯಲ್ಲಿ SIR ಎಫೆಕ್ಟ್: ಬಂಗಾಳ ಚುನಾವಣೆಗೆಂದು ಹೋದ ಕಾರ್ಮಿಕರು ಬರಲೇ ಇಲ್ಲ! – Kannada News | Mangaluru Construction Workers Shortage: Suspected Illegal Bangladeshis Flee Fearing Voter List Verification SIR Campaign

ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವುದುImage Credit source: tv9

ಮಂಗಳೂರು, ಜೂನ್ 26: ದೇಶಾದ್ಯಂತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕರ್ನಾಟಕ (Karnataka) ಕರಾವಳಿ ಜಿಲ್ಲೆಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ವಲಯದಲ್ಲಿ ದಿಢೀರ್ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಚುನಾವಣೆ ನೆಪವೊಡ್ಡಿ ಸ್ವಗ್ರಾಮಗಳಿಗೆ ತೆರಳಿದ್ದ ಉತ್ತರ ಭಾರತದ ಕಾರ್ಮಿಕರಲ್ಲಿ ಶೇಕಡಾ 25 ರಷ್ಟು ಮಂದಿ ಮಾತ್ರ ಮರಳಿ ಬಂದಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ನಕಲಿ ದಾಖಲೆ ಸೃಷ್ಟಿಸಿದ್ದ ಬಾಂಗ್ಲಾದೇಶೀಯರೇ? ತೀವ್ರ ಅನುಮಾನ

ಕರಾವಳಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ, ಕಾಫಿ ತೋಟ ಹಾಗೂ ಮೀನುಗಾರಿಕೆ ಕ್ಷೇತ್ರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರ ಮೇಲೆ ಈ ಹಿಂದಿನಿಂದಲೂ ಸ್ಥಳೀಯವಾಗಿ ಅನುಮಾನಗಳಿದ್ದವು. ಇವರಲ್ಲಿ ಬಹುತೇಕರು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾವು ಪಶ್ಚಿಮ ಬಂಗಾಳದವರೆಂದು ಬಿಂಬಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ಈಗ ಪಶ್ಚಿಮ ಬಂಗಾಳ ಚುನಾವಣೆ ಮತ್ತು ದೇಶಾದ್ಯಂತ ಜಾರಿಯಾಗುತ್ತಿರುವ ಎಸ್‌ಐಆರ್ (SIR) ತೀವ್ರ ಪರಿಷ್ಕರಣೆಯಿಂದಾಗಿ ತಮ್ಮ ಬೋಗಸ್ ಆಧಾರ್ ಹಾಗೂ ವೋಟರ್ ಐಡಿಗಳು ಸಿಕ್ಕಿಬೀಳಬಹುದು ಎಂಬ ಭಯದಿಂದ ಇವರೆಲ್ಲರೂ ವಾಪಸ್ ಬಾಂಗ್ಲಾದೇಶ ಸೇರಿಕೊಂಡಿದ್ದಾರೆ ಎನ್ನುವ ಗುಮಾನಿ ದಟ್ಟವಾಗಿದೆ.

ಕಟ್ಟಡ ನಿರ್ಮಾಣ ಉದ್ಯಮಿಗಳು ಹೇಳುವುದೇನು?

ಕಾರ್ಮಿಕರು ವಾಪಸ್ ಬಾರದೇ ಇರುವ ಬಗ್ಗೆ ‘ಟಿವಿ9’ ಗೆ ಪ್ರತಿಕ್ರಿಯಿಸಿರುವ ಕಟ್ಟಡ ನಿರ್ಮಾಣ ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ‘ನಮ್ಮ ಸೈಟ್‌ನಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 60 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಚುನಾವಣೆಗೆಂದು ಹೋದವರಲ್ಲಿ ಶೇ 70 ರಷ್ಟು ಕಾರ್ಮಿಕರು ವಾಪಸ್ ಬಂದಿಲ್ಲ. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅವರಲ್ಲಿ ಭಯ ಮತ್ತು ಗೊಂದಲ ಮೂಡಿತ್ತು. ದಾಖಲೆಗಳು ಸರಿಯಾಗಿದ್ದರೆ ಅವರು ಖಂಡಿತ ಮರಳಿ ಬರುತ್ತಿದ್ದರು. ಈ ದಿಢೀರ್ ಕಾರ್ಮಿಕರ ಅಭಾವದಿಂದಾಗಿ ಜಿಲ್ಲೆಯ ಹಲವೆಡೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲೂ ಎಸ್‌ಐಆರ್ (SIR) ಬೃಹತ್ ಅಭಿಯಾನಕ್ಕೆ ಸಿದ್ಧತೆ

ಇದೇ ವೇಳೆ ಕರ್ನಾಟಕ ರಾಜ್ಯದಾದ್ಯಂತ ಇರುವ ಸುಮಾರು 5.55 ಕೋಟಿಗೂ ಅಧಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಖ್ಯ ಚುನಾವಣಾಧಿಕಾರಿಗಳು (CEO) ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹೀಗಿರಲಿದೆ;

  • ಜೂನ್ 20 ರಿಂದ ಜೂನ್ 29: ಅಧಿಕಾರಿಗಳಿಗೆ ತರಬೇತಿ ಮತ್ತು ನಮೂನೆಗಳ ಮುದ್ರಣ ಕಾರ್ಯ.
  • ಜೂನ್ 30 ರಿಂದ ಜುಲೈ 29: ಬಿಎಲ್‌ಒ (BLO) ಅಧಿಕಾರಿಗಳಿಂದ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ.
  • ಆಗಸ್ಟ್ 5: ಮತದಾರರ ಪ್ರಾಥಮಿಕ ಪರಿಷ್ಕೃತ ಕರಡು ಪಟ್ಟಿ ಅಧಿಕೃತವಾಗಿ ಪ್ರಕಟಣೆ.
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಸಾರ್ವಜನಿಕರಿಗೆ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ.
  • ಅಕ್ಟೋಬರ್ 7: ರಾಜ್ಯದ ಅಧಿಕೃತ ಅಂತಿಮ ಮತದಾರರ ಪಟ್ಟಿ ಬಿಡುಗಡೆ.

ಈಗಾಗಲೇ ದೇಶದ ಮೊದಲ ಎರಡು ಹಂತಗಳಲ್ಲಿ 13 ರಾಜ್ಯಗಳ 59 ಕೋಟಿ ಮತದಾರರನ್ನು ತಲುಪಿರುವ ಆಯೋಗ, ಇದೀಗ ಮೂರನೇ ಹಂತದ ಈ ಬೃಹತ್ ಅಭಿಯಾನಕ್ಕಾಗಿ ಒಟ್ಟು 3.94 ಲಕ್ಷ ಬಿಎಲ್‌ಒಗಳನ್ನು ನಿಯೋಜಿಸಿದೆ. ಸಾರ್ವಜನಿಕರು ವೋಟರ್ಸ್ ಸರ್ವಿಸ್ ಪೋರ್ಟಲ್‌ನಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ಆಯೋಗ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾರ್ಖಂಡ್​ನಲ್ಲಿ ಭೀಕರ ರಸ್ತೆ ಅಪಘಾತ, ಮದುವೆಯ ಬ್ಯಾಂಡ್ ವಾಹನಕ್ಕೆ ಲಾರಿ ಡಿಕ್ಕಿ, 7 ಮಂದಿ ಸಾವು – Kannada News | Jharkhand: Horrific Road Accident Claims 7 Lives; Wedding Band Vehicle Hit by Truck on NH 23

ರಾಂಚಿ, ಜೂನ್ 26: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಕಲ್ಲಿದ್ದಲು ತುಂಬಿದ್ದ  ಟ್ರಕ್ ಹಾಗೂ ಪ್ರಯಾಣಿಕರ ವಾಹನದ ನಡುವೆ ಮಧ್ಯರಾತ್ರಿ ಭೀಕರ ಅಪಘಾತ(Accident)ಸಂಭವಿಸಿದೆ. ಈ ಅಪಘಾತದಲ್ಲಿ ಕನಿಷ್ಠ ಏಳು ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಪ್ರಯಾಣಿಕರು ಇದ್ದ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪೊಲೀಸರ ವಿವರಗಳ ಪ್ರಕಾರ, ಮೃತಪಟ್ಟವರೆಲ್ಲರೂ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಸಂಗೀತ ನುಡಿಸುವ ಬ್ಯಾಂಡ್ ತಂಡದ ಸದಸ್ಯರಾಗಿದ್ದಾರೆ.

ಇವರೆಲ್ಲರೂ ಹಜಾರಿಬಾಗ್ ಜಿಲ್ಲೆಯ ಬಾಲ್ಸಾಗ್ರ ಗ್ರಾಮದಲ್ಲಿ ನಡೆದಿದ್ದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ವಾಹನದಲ್ಲಿ ತಡರಾತ್ರಿ ಮನೆಗೆ ವಾಪಸ್ ಆಗುತ್ತಿದ್ದರು. ರಾತ್ರಿ 12 ಗಂಟೆಯ ಸುಮಾರಿಗೆ ರಾಜ್ರಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ (NH) 23ಬಳಿ ಬಂದಾಗ ಓವರ್‌ಟೇಕ್ ಮಾಡಲು ಹೋದ ಕಲ್ಲಿದ್ದಲು ತುಂಬಿದ ಟ್ರಕ್ ಇವರ ಗಾಡಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಸದ್ದು ಕೇಳಿ ಹೆದ್ದಾರಿ ಪಕ್ಕದಲ್ಲಿದ್ದ ಜನರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ವಿಷಯ ತಿಳಿದು ತಕ್ಷಣ ಬಂದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಎಲ್ಲರನ್ನೂ ರಾಮಗಢದ ಸದರ್ ಆಸ್ಪತ್ರೆಗೆ ಸಾಗಿಸಿದರು.

ಆಸ್ಪತ್ರೆಯ ಸಿವಿಲ್ ಸರ್ಜನ್ ಅನಿಲ್ ಕುಮಾರ್ ಮಾತನಾಡಿ, ಆಸ್ಪತ್ರೆಗೆ ಕರೆತಂದ ಎಂಟು ಜನರಲ್ಲಿ ಏಳು ಮಂದಿ ಈಗಾಗಲೇ ಮೃತಪಟ್ಟಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಮತ್ತೊಬ್ಬ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪ್ರತ್ಯೇಕ ದುರಂತಗಳಲ್ಲಿ ನಾಲ್ವರ ದುರ್ಮರಣ, ಮೂವರಿಗೆ ಗಾಯ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 23 ಅನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಈ ಲಾರಿ-ಬಾರ್ಲಾಂಗ್ ಮಾರ್ಗವು ಅತ್ಯಂತ ಅಪಾಯಕಾರಿಯಾಗಿದ್ದು, ಕಳೆದ ನಾಲ್ಕೇ ದಿನಗಳಲ್ಲಿ ಸಂಭವಿಸುತ್ತಿರುವ ಎರಡನೇ ದೊಡ್ಡ ಅಪಘಾತ ಇದಾಗಿದೆ. ಆದರೂ ಅಧಿಕಾರಿಗಳು ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜನರು ಆರೋಪಿಸಿದರು.

ವಿಡಿಯೋ

ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಈ ಮಾರ್ಗದಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಣಬಾಲಿ’ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಭಾರಿ ಬೇಡಿಕೆ ಇಟ್ಟರಾ? ವೈರಲ್ ಸ್ಕ್ರೀನ್‌ಶಾಟ್‌ಗೆ ಸಿಕ್ಕಿತು ಸ್ಪಷ್ಟನೆ – Kannada News | Vijay Deverakonda’s Team Clarifies Viral ‘Ranabali’ Demands Fake News

ತೆಲುಗು ನಟ ವಿಜಯ್ ದೇವರಕೊಂಡ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಯೊಂದಕ್ಕೆ ಅವರ ಚಿತ್ರತಂಡ ಬ್ರೇಕ್ ಹಾಕಿದೆ. ‘ರಣಬಾಲಿ’ ಚಿತ್ರದ ಶೂಟಿಂಗ್ ವೇಳೆ ವಿಜಯ್ ಭಾರಿ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ಸ್ಕ್ರೀನ್‌ಶಾಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಈ ಸ್ಕ್ರೀನ್‌ಶಾಟ್ ಸಂಪೂರ್ಣ ನಕಲಿ ಎಂದು ನಟನ ಆಪ್ತ ವಲಯ ತಿಳಿಸಿದೆ.

ಖ್ಯಾತ ಸಿನಿ ವೆಬ್‌ಸೈಟ್ ‘123ತೆಲುಗು’ ಹೆಸರಿನಲ್ಲಿದ್ದ ಆ ನಕಲಿ ವರದಿಯಲ್ಲಿ ವಿಜಯ್ ದೇವರಕೊಂಡ ಅವರು ಚಿತ್ರೀಕರಣಕ್ಕಾಗಿ 5 ರಿಂದ 6 ಕ್ಯಾರವಾನ್ ಹಾಗೂ 40 ರಿಂದ 50 ಸಹಾಯಕರನ್ನು ಕೇಳಿದ್ದಾರೆ ಎಂದು ಬರೆಯಲಾಗಿತ್ತು. ಇದರಿಂದ ಬೇಸತ್ತ ನಿರ್ಮಾಪಕರು ಪ್ರೊಡ್ಯೂಸರ್ ಕೌನ್ಸಿಲ್ ಮೆಟ್ಟಿಲೇರಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು.

ವಿಜಯ್ ದೇವರಕೊಂಡ ತಂಡದ ಅಧಿಕೃತ ಹೇಳಿಕೆ:

ಈ ಅಪಪ್ರಚಾರದ ವಿರುದ್ಧ ವಿಜಯ್ ದೇವರಕೊಂಡ ಅವರ ಅಧಿಕೃತ ತಂಡ ಪ್ರಕಟಣೆ ಹೊರಡಿಸಿದೆ. ‘ವಿಜಯ್ ದೇವರಕೊಂಡ ಅವರ ಹೆಸರಿಗೆ ಮಸಿ ಬಳಿಯಲು ಕೆಲವು ವ್ಯಕ್ತಿಗಳು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನ್ಯೂಸ್ ಪೋರ್ಟಲ್ ಮಾದರಿಯಲ್ಲಿ ಸೃಷ್ಟಿಸಿರುವ ಈ ಸ್ಕ್ರೀನ್‌ಶಾಟ್‌ಗಳು ಸಂಪೂರ್ಣ ನಕಲಿ. ವಿಜಯ್ ಅವರು ‘ರಣಬಾಲಿ’ ಚಿತ್ರಕ್ಕಾಗಿ ಯಾವುದೇ ಕ್ಯಾರವಾನ್ ಬೇಡಿಕೆ ಇಟ್ಟಿಲ್ಲ. ಇಂತಹ ಆಧಾರರಹಿತ ವದಂತಿಗಳನ್ನು ಯಾರೂ ನಂಬಬೇಡಿ’ ಎಂದು ತಂಡ ಮನವಿ ಮಾಡಿದೆ.

ಇದರ ಬೆನ್ನಲ್ಲೇ ‘123ತೆಲುಗು’ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ. ತಾವು ಇಂತಹ ಯಾವುದೇ ಲೇಖನ ಪ್ರಕಟಿಸಿಲ್ಲ ಎಂದು ತಿಳಿಸಿದೆ. ತಮ್ಮ ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸಿನಿಮಾ ಹಾಗೂ ವೈಯಕ್ತಿಕ ಜೀವನದ ಅಪ್ಡೇಟ್ಸ್:

ರಾಹುಲ್ ಸಂಕೃತ್ಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಇವರಿಬ್ಬರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ಮದುವೆ ಕೂಡ ನೆರವೇರಿತ್ತು.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

‘ರಣಬಾಲಿ’ ಚಿತ್ರವು 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿರುವ ಐತಿಹಾಸಿಕ ಕಥೆಯಾಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಸ್ವಾತಂತ್ರ್ಯ ಹೋರಾಟಗಾರ ‘ರಣಬಾಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ‘ಜಯಮ್ಮ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಚಿತ್ರದ ಮುಖ್ಯ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 2026ರ ಸೆಪ್ಟೆಂಬರ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Day Against Drug Abuse 2026: ಮಾದಕ ವಸ್ತುಗಳ ಚಟವು ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತೆ, ಹುಷಾರ್! – Kannada News | International Day Against Drug Abuse and Illicit Trafficking 2026: What is the purpose of International Day Against Drug Abuse

ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನImage Credit source: vecteezy

ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರ ಬರುವುದು ತುಂಬಾನೇ ಕಷ್ಟ. ಈ ಮಾದಕ ವ್ಯಸನ (Drug addiction) ಸಮಾಜದಲ್ಲಿನ ಗಂಭೀರ ಸಮಸ್ಯೆಯಾಗಿದ್ದು, ಹದಿಹರೆಯದವರು ಮತ್ತು ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ವ್ಯಸನವು ತುಂಬಾ ಹಾನಿಕಾರಕ ಅಭ್ಯಾಸವಾಗಿದ್ದು, ಇದು ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ಆರ್ಥಿಕ ಸಂಕಷ್ಟಕ್ಕೂ ಕಾರಣವಾಗುತ್ತದೆ,  ಸಂಬಂಧಗಳನ್ನು ಹಾಳುಮಾಡುತ್ತದೆ ಮತ್ತು ವೃತ್ತಿಪರ ಜೀವನವನ್ನು ಸಹ ನಾಶಪಡಿಸುತ್ತದೆ. ಜನರು ಕ್ಷಣಿಕ ನೆಮ್ಮದಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ಸುಂದರ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದಾಗುವ ಈ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು, ಮಾದಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿವರ್ಷ ಜೂನ್‌ 26 ರಂದು ಅಂತಾರಾಷ್ಟ್ರೀಯ ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಇತಿಹಾಸವೇನು?

ಡಿಸೆಂಬರ್ 7, 1987 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ವಸ್ತುಗಳ ಅಕ್ರಮ ಬಳಕೆ ಮತ್ತು ಅಕ್ರಮ ಸಾಗಣೆಯನ್ನು ಎದುರಿಸಲು ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ವಿರೋಧಿ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ಜೂನ್ 26 ಅನ್ನು ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನವೆಂದು ಗೊತ್ತುಪಡಿಸಿತು. ಈ ದಿನವನ್ನು ಮೊದಲು ಜೂನ್‌ 26, 1989 ರಲ್ಲಿ ಆಚರಿಸಲಾಯಿತು ಮತ್ತು ಅಂದಿನಿಂದ ವಾರ್ಷಿಕವಾಗಿ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ಸಮಾಜ ಎದುರಿಸುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಗಂಭೀರ ಸಮಸ್ಯೆಯತ್ತ ಗಮನ ಸೆಳೆಯುವುದು ಈ ದಿನದ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ: ಒಲಿಂಪಿಕ್ ದಿನವನ್ನು ಏಕೆ ಆಚರಿಸಲಾಗುತ್ತದೆ ಅದರ ಮಹತ್ವವೇನು?

ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಮಹತ್ವವೇನು?

  • ಜನರು ಮಾದಕ ವ್ಯಸನಕ್ಕೆ ಒಳಗಾಗುವುದನ್ನು ತಡೆಯುವುದು ಈ ದಿನದ ಪ್ರಮುಖು ಉದ್ದೇಶವಾಗಿದೆ.
  • ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸಾಗಣೆಗೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಈ ಸಮಸ್ಯೆಯನ್ನು ಎದುರಿಸಲು ತಡೆಗಟ್ಟುವಿಕೆ, ಶಿಕ್ಷಣ, ಚಿಕಿತ್ಸೆ ಮತ್ತು ಪುನರ್ವಸತಿ ಮುಂತಾದ ಕ್ರಮಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಮಾದಕ ವಸ್ತುಗಳ ಬಳಕೆಯ ಜೊತೆಗೆ, ಅಕ್ರಮ ಸಾಗಣೆಯ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ. ಈ ವಿಷಯಗಳನ್ನು ನಿಗ್ರಹಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾದಕ ವ್ಯಸನ ದಿನವನ್ನು ಆಚರಿಸಲಾಗುತ್ತದೆ.
  • ಈ ಜಾಗೃತಿ ದಿನವು ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಮಾದಕ ದ್ರವ್ಯ ಮುಕ್ತ ಜಗತ್ತನ್ನು ಸೃಷ್ಟಿಸಲು ರಾಷ್ಟ್ರಗಳು ಮತ್ತು ಗುಂಪುಗಳ ನಡುವೆ ಸಂವಹನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಈ ದಿನದಂದು, ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಅನೇಕ ಸಮುದಾಯಗಳು ಮಾದಕ ದ್ರವ್ಯ ಸೇವನೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಮತ್ತು ಮಾದಕ ದ್ರವ್ಯ ಮುಕ್ತ ಸಮಾಜನವನ್ನು ನಿರ್ಮಾಣ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BY Vijayendra visit Dharmasthala: ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ – Kannada News | BY Vijayendra Visits Dharmasthala: Offers Special Prayers to Lord Manjunatha Amid Cross Voting Controversy

ಮಂಗಳೂರು, ಜೂನ್ 26: ದೆಹಲಿ ಹೈಕಮಾಂಡ್ ಭೇಟಿಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸನ್ನಿಧಿ ವಸತಿ ಗೃಹದಿಂದ ಆಗಮಿಸಿದ ಅವರು, ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇತ್ತೀಚೆಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅಡ್ಡ ಮತದಾನದ ವಿಚಾರದಲ್ಲಿ ಧರ್ಮಸ್ಥಳದ ಆಣೆ-ಪ್ರಮಾಣದ ಪ್ರಸ್ತಾಪ ಮಾಡಿದ್ದ ವಿಜಯೇಂದ್ರ ಅವರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿರುವ ವಿಜಯೇಂದ್ರ ಅವರಿಗೆ ಸಂಸದ ಬ್ರಿಜೇಶ್ ಚೌಟ ಸಾಥ್ ನೀಡಿದ್ದು, ಸ್ಥಳೀಯ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹಾಗೂ ಯಶ್‌ಪಾಲ್ ಸುವರ್ಣ ಸೇರಿದಂತೆ ಹಲವು ಗಣ್ಯರು ಅವರೊಂದಿಗೆ ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Powerful Mantra: ಜೀವನದ ಕಷ್ಟ ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಈ ಪವಾಡ ಮಂತ್ರದ ಬಗ್ಗೆ ಗೊತ್ತಾ? – Kannada News | Om Kakara Roopinyai Namah: Vaddiparthi Padmakar’s 90 Day Mantra for Wish Fulfillment

ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ, ನೆನೆದ ಕಾರ್ಯಗಳು ಕೈಗೂಡದೆ ನಿರಾಶರಾಗಿದ್ದರೂ ಭಕ್ತಿಯಿಂದ ಜಪಿಸಿದರೆ ತಕ್ಷಣವೇ ಆಸೆಗಳನ್ನು ಈಡೇರಿಸಬಲ್ಲ ಒಂದು ಪರಮ ಶಕ್ತಿಶಾಲಿ ಮಂತ್ರವನ್ನು ಖ್ಯಾತ ಆಧ್ಯಾತ್ಮಶಾಸ್ತ್ರಜ್ಞ ಮತ್ತು ಪ್ರವಚನಕಾರರಾದ ಬ್ರಹ್ಮಶ್ರೀ ವಡ್ಡಿಪರ್ತಿ ಪದ್ಮಾಕರ್ ಅವರು ಸಾರ್ವಜನಿಕರ ಕಲ್ಯಾಣಕ್ಕಾಗಿ ಉಪದೇಶಿಸಿದ್ದಾರೆ. ಅದೇ “ಓಂ ಕಾಕಾರ ರೂಪಿಣ್ಯೈ ನಮಃ” ಮಹಾಮಂತ್ರ.

ಮಂತ್ರದ ದಿವ್ಯ ಹಿನ್ನೆಲೆ ಮತ್ತು ರಹಸ್ಯ:

ಶ್ರೀವಿದ್ಯಾ ಉಪಾಸನೆಯ ಅತ್ಯಂತ ರಹಸ್ಯ ಹಾಗೂ ಶ್ರೇಷ್ಠ ಮಂತ್ರವಾದ ‘ಪಂಚದಶೀ’ ಮಹಾಮಂತ್ರದ ಮೊದಲ ಅಕ್ಷರ ‘ಕಾಕಾರ’ದಿಂದ ಈ ದಿವ್ಯ ಮಂತ್ರವು ಜನಿಸಿದೆ. ಪುರಾಣಗಳ ಪ್ರಕಾರ, ಜಗನ್ಮಾತೆಯು ವೀಣೆಯ ಸ್ತಂಭದ (ವೀಣಾದಂಡ) ರೂಪದಲ್ಲಿ ವಿರಾಜಮಾನಳಾಗಿದ್ದು, ಅದರ ಮಧ್ಯಭಾಗದಲ್ಲಿ ದೇವಿಯು ದಿವ್ಯವಾಗಿ ಕುಳಿತಿದ್ದಾಳೆ. ಈ ಪರಮ ರಹಸ್ಯವನ್ನು ಸ್ವಯಂ ಆದಿಶಕ್ತಿಯೇ ಹಯಗ್ರೀವ ದೇವರಿಗೆ ಬಹಿರಂಗಪಡಿಸಿದಳು. ತದನಂತರ ಹಯಗ್ರೀವರಿಂದ ಇದು ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.

90 ದಿನಗಳ ಕಠಿಣ ಅನುಷ್ಠಾನ ವಿಧಾನ:

ಈ ಮಂತ್ರದ ಪೂರ್ಣ ಫಲವನ್ನು ಪಡೆಯಲು ಭಕ್ತರು ಕೆಲವು ಕಟ್ಟುನಿಟ್ಟಾದ ನಿಯಮಗಳೊಂದಿಗೆ 90 ದಿನಗಳ ಕಾಲ ನಿರಂತರ ಜಪ ಸಾಧನೆ ಮಾಡಬೇಕಾಗುತ್ತದೆ ಎಂದು ಬ್ರಹ್ಮಶ್ರೀ ವಡ್ಡಿಪರ್ತಿ ಪದ್ಮಾಕರ್ ತಿಳಿಸಿದ್ದಾರೆ. ಸಾಧಕರು ಪ್ರತಿದಿನ ನಿಯಮಿತ ಸಮಯದಲ್ಲಿ ದೇವಿಯ ವಿಗ್ರಹ ಅಥವಾ ಭಾವಚಿತ್ರದ ಮುಂದೆ ಕುಳಿತು “ಓಂ ಕಾಕಾರ ರೂಪಿಣ್ಯೈ ನಮಃ” ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಮಂತ್ರವನ್ನು ಜಪಿಸುವಾಗ ಪ್ರತೀ ಬಾರಿಯೂ ದೇವಿಗೆ ಕಮಲದ ಹೂವು ಅಥವಾ ಲಭ್ಯವಿರುವ ಮಂಗಳಕರವಾದ ಹೂವುಗಳನ್ನು ಅರ್ಪಿಸುತ್ತಾ ಅರ್ಚನೆ ಮಾಡಬೇಕು.

ನೈವೇದ್ಯ ಮತ್ತು ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳು:

ಅನುಷ್ಠಾನದ 90 ದಿನಗಳೂ ದೇವಿಗೆ ಸಿಹಿ ಹಣ್ಣುಗಳು ಅಥವಾ ಸಿಹಿ ಅನ್ನವನ್ನು (ಪಾಯಸ, ಬೆಲ್ಲದ ಅನ್ನ/ಗುಡಾನ್ನ) ನೈವೇದ್ಯ ಮಾಡುವುದು ಕಡ್ಡಾಯವಾಗಿದೆ. ಆದರೆ ನೆನಪಿಡಿ, ಈ ಪೂಜೆಗೆ ಮೊಸರನ್ನವನ್ನು (ದಧ್ಯೋದನ) ಅರ್ಪಿಸಬಾರದು. ಇದರೊಂದಿಗೆ ಸಾಧಕರು ಈ ಅವಧಿಯಲ್ಲಿ ಕೋಪವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮನಸ್ಸಿನಲ್ಲಾಗಲೀ, ಮಾತಿನಲ್ಲಾಗಲೀ ಯಾರಿಗೂ ಕೆಟ್ಟದ್ದನ್ನು ಬಯಸಬಾರದು. ಕೋಪ ಬಂದಾಗ ಯಾರನ್ನೂ ದೂಷಿಸದೆ, ನಿಂದಿಸದೆ “ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ಕಲ್ಯಾಣ ಗುಣವನ್ನು ಹೊಂದಿರಬೇಕು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮಹಿಳೆಯರ ಆರೋಗ್ಯ ಮತ್ತು ವಿಶೇಷ ವಿನಾಯಿತಿಗಳು:

ಈ 90 ದಿನಗಳ ಸಾಧನೆಯಲ್ಲಿ ಯಾವುದೇ ವಿರಾಮ ಇರಬಾರದು ಎಂಬ ನಿಯಮವಿದ್ದರೂ, ಮಹಿಳೆಯರ ನೈಸರ್ಗಿಕ ಆರೋಗ್ಯದ ದೃಷ್ಟಿಯಿಂದ ಶಾಸ್ತ್ರೋಕ್ತ ವಿನಾಯಿತಿಗಳನ್ನು ನೀಡಲಾಗಿದೆ. ಮಾಸಿಕ ಧರ್ಮದ (ಮಲಮಾಸ/ಮಿಲೇಯಾ) ಸಮಯದಲ್ಲಿ 4 ದಿನಗಳ ಕಾಲ ಜಪವನ್ನು ನಿಲ್ಲಿಸಿ, 5ನೇ ದಿನ ಶುದ್ಧರಾದ ಬಳಿಕ ಜಪವನ್ನು ಎಲ್ಲಿಗೆ ನಿಲ್ಲಿಸಲಾಗಿತ್ತೋ ಅಲ್ಲಿಂದಲೇ ಮುಂದುವರಿಸಬಹುದು. ಉದಾಹರಣೆಗೆ, ನೀವು 10 ದಿನ ಜಪ ಮಾಡಿದ ಬಳಿಕ ವಿರಾಮ ಬಂದರೆ, ಅದನ್ನು ಶೂನ್ಯದಿಂದ ಆರಂಭಿಸುವ ಅಗತ್ಯವಿಲ್ಲ; ಮುಂದಿನ ದಿನದಿಂದ 11ನೇ ದಿನ ಎಂದು ಪರಿಗಣಿಸಿ, ಬಾಕಿ ಉಳಿದ 80 ದಿನಗಳನ್ನು ಪೂರ್ಣಗೊಳಿಸಿದರೆ ಸಾಕು.

ವಿಚ್ಛೇದನದ ಹಂತದಲ್ಲಿದ್ದ ದಂಪತಿ ಒಂದಾದ ಪವಾಡ:

ಈ ಮಂತ್ರದ ಶಕ್ತಿಗೆ ಸಾಕ್ಷಿಯಾಗಿ ವಡ್ಡಿಪರ್ತಿ ಪದ್ಮಾಕರ್ ಅವರು ತಮ್ಮ ಜೀವನದಲ್ಲಿ ನಡೆದ ಒಂದು ಅದ್ಭುತ ಘಟನೆಯನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನ ಪಡೆದು ಸಂಪೂರ್ಣವಾಗಿ ಬೇರ್ಪಡಲು ಸಿದ್ಧರಾಗಿದ್ದ ದಂಪತಿಗಳು ಇವರ ಬಳಿ ಬಂದಾಗ, ಅವರಿಗೆ ಈ ಮಂತ್ರೋಪದೇಶ ಮಾಡಲಾಗಿತ್ತು. ಅವರು ಶ್ರದ್ಧೆಯಿಂದ 90 ದಿನಗಳ ಅನುಷ್ಠಾನ ಮುಗಿಸಿದ ನಂತರ, ಅವರ ಮನಸ್ಸು ಬದಲಾಗಿ ಒಂದಾದರು ಮಾತ್ರವಲ್ಲದೆ, ಇಂದು ಇಬ್ಬರು ಮಕ್ಕಳೊಂದಿಗೆ ಅಮೆರಿಕಾದಲ್ಲಿ ಅಪಾರ ಸಂಪತ್ತಿನೊಡನೆ ಅತ್ಯಂತ ಸುಖಿ ಜೀವನ ನಡೆಸುತ್ತಿದ್ದಾರೆ. ಕೇವಲ ಕೌಟುಂಬಿಕ ಸಮಸ್ಯೆಗಳಷ್ಟೇ ಅಲ್ಲದೆ, ಮಾರಣಾಂತಿಕ ಕಾಯಿಲೆ ಅಥವಾ ಕಷ್ಟದ ಸಂದರ್ಭಗಳಲ್ಲೂ ಈ ಮಂತ್ರವು ಜೀವದಾತನಾಗಿ ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:15 am, Fri, 26 June 26

Source link

ದಾವಣಗೆರೆ: ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ – Kannada News | Drunk Woman Driving Thar Assaults Woman PSI During Drunk and Drive Check in Davanagere

ದಾವಣಗೆರೆ, ಜೂನ್ 26: ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಗುರುವಾರ ರಾತ್ರಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯ ವೇಳೆ ಯುವತಿಯೊಬ್ಬಳು ಪೊಲೀಸರೊಂದಿಗೆ ರಂಪಾಟ ನಡೆಸಿದ್ದಾಳೆ. ಅಲ್ಲದೆ, ಕರ್ತವ್ಯ ನಿರತ ಮಹಿಳಾ PSIಗೆ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಯುವತಿಯು ಮದ್ಯಪಾನ ಮಾಡಿದ ಮತ್ತಿನಲ್ಲಿ ಯುವತಿ ಪೋಲಿಸರೊಂದಿಗೆ ವಾಗ್ವಾದ ನಡೆಸಿದ್ದಾಳೆ. ಕಂಠಪೂರ್ತಿ ಕುಡಿದಿದ್ದ ಯುವತಿ, ಒನ್‌ವೇ ರಸ್ತೆಯಲ್ಲಿ ಥಾರ್ ಜೀಪ್ ಚಾಲನೆ ಮಾಡಿಕೊಂಡು ಬರುತ್ತಿದ್ದಳು ಎನ್ನಲಾಗಿದೆ. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ, ಯುವತಿ ‘ನಾನು ಕರೆಕ್ಟ್ ಆಗಿ ಇದ್ದೀನಿ, ಯಾಕೆ ಇಲ್ಲಿ ನಿಲ್ಲಬೇಕು’ ಎಂದು ವಾದಿಸಿದ್ದಾಳೆ. ಪೊಲೀಸರು ಆಕೆಗೆ ಪರೀಕ್ಷೆ ಮಾಡಿಸಲು ಹೇಳಿದಾಗಲೂ ಸಹ ನಿರಾಕರಿಸಿದ್ದಾಳೆ.

ಆರೋಪಿಯು ದಾವಣಗೆರೆಯ ಪ್ರತಿಷ್ಠಿತ ವ್ಯಕ್ತಿಯ ಪುತ್ರಿ ಎಂದು ಹೇಳಲಾಗಿದ್ದು, ಸದ್ಯ ಆಕೆಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version