Headlines

ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’ – Kannada News | Dhurandhar OTT Release: Ranveer Singh Blockbuster Arrives on Netflix Jan 30

‘ಧುರಂಧರ್’ ಸಿನಿಮಾ (Dhurandhar) ಬಾಕ್ಸ್​ ಆಫೀಸ್​​​ನಲ್ಲಿ ಮೇಲುಗೈ ಸಾಧಿಸುತ್ತಿದೆ. ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಸಿನಿಮಾ ಇನ್ನೂ ಕೋಟಿಗಳಲ್ಲಿ ಕಲೆಕ್ಷನ್ ಮಾಡುತ್ತಿದೆ. ನಿರಂತರ ನಾಗಾಲೋಟದ ನಂತರ ‘ಧುರಂದರ್’ ಸಿನಿಮಾ ಒಟಿಟಿಗೆ ಬರಲು ರೆಡಿ ಆಗಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದರ ದಿನಾಂಕ ಕೂಡ ರಿವೀಲ್ ಆಗಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮೊದಲಾದವರು ನಟಿಸಿದ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ಥಿಯೇಟರ್​​​ನಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್​​​ಗೂ ಮೊದಲು ಚಿತ್ರದ ಬಗ್ಗೆ…

Read More

ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ – Kannada News | Haveri: Congress Sadhana Convention: 1000 days of celebration; Land guarantee for one lakh families

ಭೂಗ್ಯಾರಂಟಿ ಸಮರ್ಪಣಾ ಸಮಾವೇಶImage Credit source: cm tweet ಹಾವೇರಿ, ಫೆಬ್ರವರಿ 14: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ (Siddaramaiah) ವಿತರಣೆ ಮಾಡಿದರು. ಆದರೆ ಇದೇ ಸಮಾವೇಶ ‘ದೋಸ್ತಿ’ಗಳ ವಾಕ್ಸಮರಕ್ಕೆ ವೇದಿಕೆ ಆಗಿತ್ತು. ಸಮಾವೇಶದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ…

Read More

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?

ನವದೆಹಲಿ, ಮಾರ್ಚ್ 18: ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಆ ರೀತಿ ಮಾಡುವುದರಿಂದ ಜೀವಕ್ಕೇ ಅಪಾಯವಾಗಬಹುದು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊವೊಂದು ವೈರಲ್ (Viral Video) ಆಗುತ್ತಿದೆ. ಅದರಲ್ಲಿ, ಚಲಿಸುವ ರೈಲನ್ನು ಹತ್ತಲು ವ್ಯಕ್ತಿಯೊಬ್ಬ ಪ್ರಯತ್ನಿಸಿ ಕಾಲು ಜಾರಿ ಬೀಳುತ್ತಾನೆ. ತಕ್ಷಣ ಅಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಆತನನ್ನು ಮೇಲೆತ್ತಿ ಪ್ರಾಣ ಉಳಿಸಿದ್ದಾರೆ. ಇದರಿಂದ ಆತ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು…

Read More

ಅಜಿತ್ ಪವಾರ್ ಆಸ್ತಿಮೌಲ್ಯ 120 ಕೋಟಿಗೂ ಅಧಿಕ; ಮನೆ, ಕಾರು, ಬಾಂಡ್, ಠೇವಣಿ, ಇನ್ಷೂರೆನ್ಸ್ ಇತ್ಯಾದಿ ಅವರ ಆಸ್ತಿ ವಿವರ – Kannada News | Ajit Pawar net worth of over Rs 120 crore, a look at his movable and immovable properties

ಪುಣೆ, ಜನವರಿ 28: ಮಹಾರಾಷ್ಟ್ರದ ಬಾರಾಮತಿ ಏರ್ಪೋರ್ಟ್ ಬಳಿ ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಉಪಮುಖ್ಯಮಂತ್ರಿ ಹಾಗೂ ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಅವರು ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರೆಂದು ಗುರುತಾದವರು. ಮೂರು ದಶಕಗಳ ಕಾಲ ನಿರಂತರವಾಗಿ ಶಾಸಕರಾಗಿರುವ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ವರ್ಷ ಉಪಮುಖ್ಯಮಂತ್ರಿಯಾದ ದಾಖಲೆ ಹೊಂದಿರುವ ಅಜಿತ್ ಪವಾರ್ ಬಹಳ ಅನುಭವಿ ರಾಜಕಾರಣಿ ಎನಿಸಿದ್ದರು. ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎಂದೂ ಹೇಳಲಾಗುತ್ತದೆ. 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ…

Read More

ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್​ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ – Kannada News | Trading Addiction Rising in Bengaluru Youth After Covid, Experts Compare It to Drug Dependency

ಬೆಂಗಳೂರು, ಫೆಬ್ರವರಿ 10: ಇತ್ತೀಚೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲೇ ಟ್ರೇಡಿಂಗ್ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಆಧಾರಿತ ಆ್ಯಪ್​​ಗಳಿಂದ ಸಿಗುತ್ತಿರುವ ಸಾಲ ಸೌಲಭ್ಯದಿಂದ, ರಾತ್ರೋ ರಾತ್ರಿ ಹಣ ಸಂಪಾದಿಸುವ ಆಸೆಯಲ್ಲಿ ಟ್ರೇಡಿಂಗ್ ಚಟಕ್ಕೆ ಯುವ ಸಮೂಹದವರು ದಾಸರಾಗುತ್ತಿದ್ದಾರೆ. ಕುಳಿತಲ್ಲಿ ನಿಂತಲ್ಲಿ ಟ್ರೇಡಿಂಗ್ ಬಗ್ಗೆ ಆಲೋಚನೆ ಶುರು ಮಾಡಿದ್ದು, ಅದರಲ್ಲೂ ಬೆಂಗಳೂರಿನಲ್ಲಿ (Bangalore) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಟ್ರೇಡಿಂಗ್ ಅಡಿಕ್ಷನ್ (Trading Addiction) ಕೇಸ್​​ಗಳು ಈಗ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚೆಚ್ಚು ಬರಲಾರಂಭಿಸಿವೆ. ಬೆಂಗಳೂರಿನಲ್ಲಿ ಟ್ರೇಡಿಂಗ್ ಪ್ರಕರಣಗಳ ಹೆಚ್ಚಳದ ಬಗ್ಗೆ ಮನಃಶಾಸ್ತ್ರಜ್ಞರು…

Read More

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

ವುಮನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಫೆಬ್ರವರಿ 5ರಂದು ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಆರ್​​ಸಿಬಿಗೆ ಡೆಲ್ಲಿ ತಂಡ 204 ರನ್​​ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್​​ನ ಆರ್​​ಸಿಬಿ ಬೆನ್ನು ಹತ್ತಿತ್ತು. ಅಂತಿಮ ಓವರ್ ಸಮೀಪಿಸುವಾಗ ಆರ್​​ಸಿಬಿ 194 ರನ್​​​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆರು ಬಾಲ್​​ಗೆ ಬೇಕಿದ್ದಿದ್ದು 10 ರನ್​​ಗಳು. ಕ್ರೀಜ್​ ಅಲ್ಲಿ ಇದ್ದ ರಾಧಾ ಯಾದವ್ ಮೊದಲ ಬಾಲ್​​ ಅಲ್ಲಿ ಸಿಂಗಲ್ ಕಲೆ ಹಾಕಿದರು. ಡಿ ಕ್ಲಾರ್ಕ್…

Read More

ಕ್ಷೇತ್ರ ಪುನರ್ ವಿಂಗಡಣೆಯಾದರೆ ನಿಜಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಾ? ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ – Kannada News | Delimitation Became Flashpoint Between Centre And South Indian States what New Numbers says

ನವದೆಹಲಿ, ಏಪ್ರಿಲ್ 15: ಪ್ರಸ್ತಾವಿತ ಸೀಮಾ ನಿರ್ಣಯದ (Delimitation) ಕುರಿತಾದ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚುತ್ತಿರುವ ಪ್ರತಿರೋಧವನ್ನು ಎದುರಿಸುತ್ತಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಕ್ಷೇತ್ರ ಮರು ವಿಂಗಡಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ತಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿವೆ. ಈ ಸೀಮಾ ನಿರ್ಣಯ ಜಾರಿಯಾದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಆಗುವ ಪರಿಣಾಮಗಳೇನು? ಜನಸಂಖ್ಯೆ ಆಧಾರಿತ ಸೀಮಾ ನಿರ್ಣಯವು ಉತ್ತರದ ರಾಜ್ಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ದಕ್ಷಿಣದ ರಾಜ್ಯಗಳ…

Read More

ಬೆಂಗಳೂರಿನ ಈ ರೆಸ್ಟೋರೆಂಟ್​​​ಗಳಲ್ಲಿ ಊಟ ಸೇವಿಸಿದ್ರೆ ಪ್ರಾಣ ಹೋಗುವುದು ಖಂಡಿತ, ಟಿವಿ9 ಕನ್ನಡ ನಡೆಸಿದ ಬಿಗ್ ಕಾರ್ಯಚರಣೆ – Kannada News | Shocking: Bengaluru Restaurants Use Expired Food, Risking Your Health

ಬೆಂಗಳೂರು, ಜ.29: ಬೆಂಗಳೂರಿನಲ್ಲಿ (Bengaluru) ರೆಸ್ಟೋರೆಂಟ್​​​ಗಳಿಗೆ ಏನು ಕಡಿಮೆ ಇಲ್ಲ. ಬೀದಿ ಬೀದಿಯಲ್ಲಿ ರೆಸ್ಟೋರೆಂಟ್​​ಗಳು ಇದೆ. ಆದ್ರೆ ಅಲ್ಲಿ ಸರಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರಗಳು ಸಿಗುತ್ತಾ? ಎಂಬ ಅನುಮಾನ ಮೂಡಿದೆ. ಹಣ ಗಳಿಸುವ ಆಸೆಯಲ್ಲಿ ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇದೀಗ ಬೆಂಗಳೂರಿನ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ದೇಶ-ವಿದೇಶದ ಜನರನ್ನು ಬೆಂಗಳೂರು ಆಹಾರ ವಿಚಾರದಲ್ಲಿ ಸೆಳೆದುಕೊಂಡಿದೆ. ಆದರೆ ಇದೀಗ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್​​​ ಎಂಬುದನ್ನು ಮೊದಲು…

Read More

‘ಭೂತ್ ಬಂಗ್ಲ’ ಕಲೆಕ್ಷನ್: 3 ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಅಕ್ಷಯ್ ಕುಮಾರ್ ಸಿನಿಮಾ – Kannada News | Akshay Kumar Bhooth Bangla worldwide Box Office Collection day 3 crosses Rs 100 crores

ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್​ನಲ್ಲಿ ಬಂದ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಮಾಧಾನಕರ ಗಳಿಕೆ ಮಾಡಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಈ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ಗಮನ ಸೆಳೆದಿದೆ. ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಒಂದಾಗಿ ಮಾಡಿರುವ ಈ ಹಾರರ್-ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ…

Read More

Solar Eclipse 2026: ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ – Kannada News | Solar Eclipse 2026: Astrological Predictions for Gemini by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ, ವಿಶೇಷವಾಗಿ ಮೃಗಶಿರಾ, ಆರಿದ್ರಾ ಮತ್ತು ಪುನರ್ವಸು ನಕ್ಷತ್ರದವರಿಗೆ ಬಹಳಷ್ಟು ಶುಭ ಫಲಗಳನ್ನು ನೀಡಲಿದೆ. ಒಂಬತ್ತನೇ ಮನೆಯಲ್ಲಿ ಸಂಭವಿಸುತ್ತಿರುವ ಈ ಗ್ರಹಣವನ್ನು ಗುರು ಗ್ರಹವೂ ವೀಕ್ಷಿಸುತ್ತಿರುವುದರಿಂದ ಕಲಹಗಳು ಮತ್ತು ಅಪವಾದಗಳಿಂದ ದೂರವಿರಲು ಸಹಾಯವಾಗುತ್ತದೆ. ಧನ ಯೋಗ, ಆರ್ಥಿಕ ಲಾಭ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ, ಪ್ರಯತ್ನಗಳಲ್ಲಿ ಸಫಲತೆ, ಹಾಗೂ ಉದ್ಯೋಗದಲ್ಲಿ ಸ್ಥಿರತೆ ಮತ್ತು ಜವಾಬ್ದಾರಿಗಳ ಹೆಚ್ಚಳ ಸಾಧ್ಯ. ಮಾರಾಟಗಾರರು, ಆನ್‌ಲೈನ್ ಉದ್ಯಮಿಗಳು, ಸಾಫ್ಟ್‌ವೇರ್…

Read More