Headlines

ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್; ದೊಡ್ಡ ಸರ್​ಪ್ರೈಸ್ – Kannada News | Shine Shetty Surprise Entry at Vasuki Vaibhav Live Music Concert

ವಾಸುಕಿ ವೈಭವ್ ಅವರು ಬೆಂಗಳೂರಲ್ಲಿ ಕಾನ್ಸರ್ಟ್ ನಡೆಸಿದ್ದಾರೆ. ಈ ವೇಳೆ ವಾಸುಕಿಗೆ ಒಂದು ಸರ್​​ಪ್ರೈಸ್ ಸಿಕ್ಕಿದೆ. ವೇದಿಕೆ ಮೇಲಿದ್ದ ವಾಸುಕಿ ವೈಭವ್, ‘ಶೈನ್ ಶೆಟ್ಟಿ ಇಲ್ಲ ಎಲ್ಲೋ ಇದ್ದಾರೆ, ನನಗೆ ಕಾಣಿಸುತ್ತಿಲ್ಲ’ ಎಂದು ಹುಡುಕಿದಾಗ ಶೈನ್ ವೇದಿಕೆಗೆ ಆಗಮಿಸಿದರು. ಈ ವೇಳೆ ಮಾತನಾಡಿದ ವಾಸುಕಿ, ‘ನಾನು ಕರೆದಿದ್ದಕ್ಕೆ ಶೈನ್ ಇಲ್ಲಿಗೆ ಬಂದಿಲ್ಲ. ಅವರು ಸ್ವತಃ ಟಿಕೆಟ್ ಖರೀದಿಸಿ ಕಾನ್ಸರ್ಟ್‌ಗೆ ಬಂದಿದ್ದಾರೆ’ ಎಂದು ಶೈನ್ ಅವರ ಸರಳತೆಯನ್ನು ಕೊಂಡಾಡಿದರು. ‘ಶಂಕರಭರಣ’ ಚಿತ್ರಕ್ಕೆ ವಾಸೂಕಿ ಸಾಥ್ ಇದೇ ಸಂದರ್ಭದಲ್ಲಿ ಶೈನ್…

Read More

Amavasya 2026: ಆಗಸ್ಟ್ 12ರಂದು ಅಮಾವಾಸ್ಯೆ; ಈ 4 ರಾಶಿಯವರಿಗೆ ಕಾದಿದೆ ಸಂಕಷ್ಟ! – Kannada News | Amavasya 2026: 4 Zodiac Signs Must Be Cautious; Astrology Impact and Challenges.

ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಮಾವಾಸ್ಯೆಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಆಷಾಢ ಮಾಸದ ಕೊನೆಯ ಅಮಾವಾಸ್ಯೆಯನ್ನು ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಈ ದಿನದಂದು ನಕಾರಾತ್ಮಕ ಶಕ್ತಿಗಳ ಪ್ರಭಾವ ತುಸು ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಗ್ರಹ ಗತಿಗಳಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಅಮಾವಾಸ್ಯೆಯಂದು ಜರುಗುವ ಗ್ರಹಗಳ ಸಂಚಾರ ಮತ್ತು ಬದಲಾವಣೆಗಳಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಏರಿಳಿತಗಳು ಉಂಟಾಗಲಿವೆ. ಮುಖ್ಯವಾಗಿ ನಾಲ್ಕು ರಾಶಿಗಳ ಜನರು ಈ ಸಮಯದಲ್ಲಿ ಜಾಗರೂಕರಾಗಿರಬೇಕಾದ ಅಗತ್ಯವಿದೆ….

Read More

“ಮುಗಿಸುವುದಾಗಿ” ಬೆದರಿಕೆ: ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಂಗೂಲಿ! – Kannada News | Sourav Ganguly Files Police Complaint Over Death Threats

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಪತ್ರಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಕಚೇರಿಗೆ ಇಂಗ್ಲಿಷ್ ಭಾಷೆಯಲ್ಲಿ ಪತ್ರಗಳು ಬಂದಿದ್ದು, ದಂಪತಿಯನ್ನು “ಮುಗಿಸುವುದಾಗಿ” ನೇರ ಎಚ್ಚರಿಕೆ ನೀಡಲಾಗಿದೆ. ಕಳೆದ 6 ತಿಂಗಳಿನಿಂದ ಬರುತ್ತಿದ್ದ ಪತ್ರಗಳು: ಗಂಗೂಲಿ ಅವರ…

Read More

ಏಕದಿನ ವಿಶ್ವಕಪ್​ಗೆ 10 ತಂಡಗಳು ಫೈನಲ್​: 4 ಸ್ಥಾನಕ್ಕಾಗಿ ಮುಂದಿನ ಪೈಪೋಟಿ! – Kannada News | ODI World Cup 2027: 10 Teams Qualified, 4 Spots Up for Grabs!

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಈಗಾಗಲೇ 10 ತಂಡಗಳು ಅಧಿಕೃತವಾಗಿ ಫೈನಲ್ ಆಗಿವೆ. ಈ ಹತ್ತು ತಂಡಗಳು ಐಸಿಸಿ ನಿಯಮಾವಳಿಗಳ ಅನ್ವಯ ನೇರ ಅರ್ಹತೆಯ ಮೂಲಕ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಆತಿಥೇಯ ರಾಷ್ಟ್ರಗಳ ಪೈಕಿ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ಆಟೋಮ್ಯಾಟಿಕ್ ಆಗಿ ಅರ್ಹತೆ ಪಡೆದರೆ, ಉಳಿದ 8 ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ (Rankings) ಆಧಾರದ ಮೇಲೆ…

Read More

ವಿಧಾನಸಭೆ ಅಧಿವೇಶನಕ್ಕೆ ಇನ್ನೆರಡೇ ದಿನ ಬಾಕಿ: ಇಂದಾದರೂ ಹೊರಬೀಳುತ್ತಾ ಖಾತೆ ಹಂಚಿಕೆ ಪಟ್ಟಿ? – Kannada News | Karnataka Cabinet Portfolio Allocation Delay: DK Shivakumar Hints at Decision Before Assembly Session

ಸಚಿವರ ಪ್ರಮಾಣವಚನ ಸಂದರ್ಭದ ಚಿತ್ರ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಆಗಸ್ಟ್ 11: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾತ್ರ ಇನ್ನೂ ಅಂತಿಮವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಸುಳಿವು ಕುತೂಹಲ ಮೂಡಿಸಿದೆ. ಹೀಗಾಗಿ ಇಂದಾದರೂ ಖಾತೆ ಹಂಚಿಕೆ ಪಟ್ಟಿ ಹೊರಬೀಳುತ್ತಾ ಎಂಬ ಚರ್ಚೆ ಜೋರಾಗಿದೆ. ಇತ್ತೀಚೆಗೆ…

Read More

ಸಿನಿಮಾ ಆಪ್ತರಿಗೆ ಸಾಲು ಸಾಲು ಸರ್ಕಾರಿ ಹುದ್ದೆ; ಸಿಎಂ ವಿಜಯ್ ನಿರ್ಧಾರಕ್ಕೆ ಭಾರಿ ಚರ್ಚೆ – Kannada News | Archana Kalpathi Temple Panel Appointment Sparks Debate in Tamil Nadu  

ತಮಿಳುನಾಡು ಸರ್ಕಾರವು ದೇವಾಲಯಗಳ ಧರ್ಮದರ್ಶಿಗಳ ಆಯ್ಕೆ ಸಮಿತಿಗೆ ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ನೇಮಕ ಮಾಡಿದೆ. ಈ ನಿರ್ಧಾರವು ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ಮತ್ತು ಬೆಂಬಲ ಎರಡೂ ವ್ಯಕ್ತವಾಗುತ್ತಿವೆ. ಚಿತ್ರರಂಗದ ಜನರಿಗೆ ಸಾಲು ಸಾಲು ಸರ್ಕಾರಿ ಹುದ್ದೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಧರ್ಮದರ್ಶಿ ಸಮಿತಿಗೆ ಅರ್ಚನಾ ನೇಮಕ ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು…

Read More

ತೀವ್ರ ಅಲರ್ಜಿಯಿಂದ ಕಂಗಾಲಾದ ಶ್ರುತಿ ಹಾಸನ್; ಪ್ರೀತಿಪಾತ್ರವಾಗಿದ್ದನ್ನು ಬಿಟ್ಟ ನಟಿ – Kannada News | Shruti Haasan Forced to Rehome Adopted Cat Aslan Due to Severe Allergies

ನಟಿ ಶ್ರುತಿ ಹಾಸನ್ ತಮ್ಮ ಬದುಕಿನ ಅತ್ಯಂತ ನೋವಿನ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ತಾವು ದತ್ತು ಪಡೆದಿದ್ದ ಆಸ್ಲನ್ ಎಂಬ ಬೆಕ್ಕಿನ ಮರಿಯನ್ನು ದೂರ ಮಾಡುವ ಪರಿಸ್ಥಿತಿ ಅವರಿಗೆ ಬಂದೊದಗಿದೆ. ತೀವ್ರ ಅಲರ್ಜಿ ಸಮಸ್ಯೆಯಿಂದಾಗಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಪ್ರಾಣಿ ಪ್ರಿಯೆಯಾಗಿರುವ ಶ್ರುತಿಯ ಈ ನಿರ್ಧಾರ ಅವರ ಮನಸ್ಸಿಗೆ ಭಾರಿ ಆಘಾತ ಹಾಗೂ ಬೇಸರ ತಂದಿದೆ. ಈ ಬಗ್ಗೆ ಬರೆದುಕೊಂಡಿದ್ದಾರೆ. ಶ್ರುತಿ ಹಾಸನ್ ಮೂರು ತಿಂಗಳ ಹಿಂದೆ ಆಸ್ಲನ್ ಎಂಬ ಪರ್ಷಿಯನ್ ತಳಿಯ ಬೆಕ್ಕಿನ…

Read More

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ಆರ್​ಜಿವಿ – Kannada News | Ram Gopal Varma Announces Police Company Starring Harshvardhan Rane

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೆ ಮುಂಬೈ ಅಂಡರ್‌ವರ್ಲ್ಡ್ ಕಥೆಯನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ‘ಡಿ ಕಂಪನಿ’ಗಿಂತಲೂ ಅತ್ಯಂತ ಅಪಾಯಕಾರಿಯಾದ ಪಡೆಯೊಂದರ ಕಥೆಯನ್ನು ಅವರು ಹೇಳಲಿದ್ದಾರೆ. ತಮ್ಮ ಹೊಸ ಸಿನಿಮಾಗೆ ‘ಪೋಲಿಸ್ ಕಂಪನಿ’ ಎಂದು ಹೆಸರಿಟ್ಟಿದ್ದಾರೆ. ಪ್ರಸಿದ್ಧ ನಟ ಹರ್ಷವರ್ಧನ್ ರಾಣೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಆರ್​​ಜಿವಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ಅಂಡರ್‌ವರ್ಲ್ಡ್ ಮತ್ತು ಪೋಲಿಸ್ ಕಂಪನಿ ಸಿನಿಮಾ ಶೀರ್ಷಿಕೆಯ ಹಿನ್ನೆಲೆಯನ್ನು ವರ್ಮಾ ಸ್ಪಷ್ಟವಾಗಿ ವಿವರಿಸಿದ್ದಾರೆ….

Read More

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಪಿಂಕ್ ಹಾಗೂ ಬ್ಲೂ ಲೈನ್‌ನ ಸಿಬಿಟಿಸಿ ವ್ಯವಸ್ಥೆಗೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್! – Kannada News | Namma Metro Good News: Railway Board Approves CBTC Signaling for Bengaluru Pink and Blue Lines

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಸಂಚಾರ ದಟ್ಟಣೆಗೆ ಬಹುದೊಡ್ಡ ಬ್ರೇಕ್ ಹಾಕಲಿರುವ ‘ನಮ್ಮ ಮೆಟ್ರೋ’ದ (Namma Metr0) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಮಂಡಳಿಯಿಂದ ಅತ್ಯಂತ ಪ್ರಮುಖ ಹಾಗೂ ಮಹತ್ವದ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇನ್ಮುಂದೆ ಈ ಮಾರ್ಗಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಇದಕ್ಕೆ ಬೇಕಾದ ರೈಲು ನಿಯಂತ್ರಣ ವ್ಯವಸ್ಥೆಗೆ ಹಸಿರು ನಿಶಾನೆ ಸಿಕ್ಕಿದೆ. ಮೆಟ್ರೋದ ಪಿಂಕ್ ಹಾಗೂ ಬ್ಲೂ ಲೈನ್ ಮಾರ್ಗಗಳ ಕಮ್ಯುನಿಕೇಷನ್‌ ಬೇಸ್ಡ್‌…

Read More

CSKಗೆ ಹೊಸ ವಿದೇಶಿ ಹೆಡ್ ಕೋಚ್: ರೇಸ್​​ನಲ್ಲಿ ನಾಲ್ವರು! – Kannada News | CSK Hunt for New Overseas Coach Ahead of IPL 2027

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಬರುವ ಐಪಿಎಲ್​ಗೂ ಮುನ್ನ ಮಹತ್ವದ ಬದಲಾವಣೆಗೆ ಸಜ್ಜಾಗಿದೆ. ಬರೋಬ್ಬರಿ 18 ವರ್ಷಗಳ ಕಾಲ ಸಿಎಸ್‌ಕೆ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಮಾರ್ಗದರ್ಶನ ನೀಡಿ, ದಾಖಲೆಯ 5 ಐಪಿಎಲ್ ಟ್ರೋಫಿಗಳನ್ನು ತಂದುಕೊಟ್ಟಿದ್ದ ದಿಗ್ಗಜ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ….

Read More