ಕೊಹ್ಲಿ ಎಫೆಕ್ಟ್​: ‘ಇಂಜೆಕ್ಷನ್’ ಮೊರೆಹೋದರೇ ಟೀಮ್ ಇಂಡಿಯಾ ಆಟಗಾರರು! – Kannada News | Indian Cricketers Under Scanner for Using Weight Loss Drugs

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದೊಂದು ಧರ್ಮ. ಇಲ್ಲಿನ ಕ್ರಿಕೆಟಿಗರು ಕೇವಲ ಕ್ರೀಡಾಪಟುಗಳಾಗಿ ಉಳಿದಿಲ್ಲ, ಬದಲಿಗೆ ಕೋಟ್ಯಂತರ ಅಭಿಮಾನಿಗಳ ಪಾಲಿನ ರೋಲ್ ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳಾಗಿದ್ದಾರೆ. ಮೈದಾನದಲ್ಲಿ ಅವರ ಆಟದ ಪ್ರದರ್ಶನ ಎಷ್ಟು ಮುಖ್ಯವೋ, ಮೈದಾನದ ಹೊರಗೆ ಅವರ ಫಿಟ್‌ನೆಸ್ ಹಾಗೂ ಬಾಹ್ಯ ಸೌಂದರ್ಯ ಕೂಡ ಸದಾ ಸಾರ್ವಜನಿಕವಾಗಿ ಚರ್ಚೆಯಾಗುವ ವಿಷಯವಾಗಿದೆ. ಆದರೆ, ಇತ್ತೀಚೆಗೆ ಹೊರಬಂದಿರುವ ಕೆಲವು ಆಘಾತಕಾರಿ ವರದಿಗಳ ಪ್ರಕಾರ, ಭಾರತದ ಕೆಲವು ಆಟಗಾರರು “ಅಲ್ಟ್ರಾ-ಲೀನ್” (ಅತ್ಯಂತ ತೆಳ್ಳಗಿನ ಹಾಗೂ ಆಕರ್ಷಕ ದೇಹ) ಲುಕ್ ಪಡೆಯಲು, ತೂಕ ಇಳಿಸುವ ವಿಶೇಷ ಇಂಜೆಕ್ಷನ್‌ಗಳ ಮೊರೆ ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಏನಿದು ಹೊಸ ವಿವಾದ?

ಮಾಧ್ಯಮ ವರದಿಗಳ ಪ್ರಕಾರ, ಪ್ರಮುಖವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ರಾಷ್ಟ್ರೀಯ ತಂಡದ ಕೆಲವು ಆಟಗಾರರು ಒಝೆಂಪಿಕ್ (Ozempic) ಮತ್ತು ಮೌಂಜಾರೊ (Mounjaro) ನಂತಹ ಮಧುಮೇಹ ನಿಯಂತ್ರಣ ಹಾಗೂ ತೂಕ ಇಳಿಕೆಯ ಇಂಜೆಕ್ಷನ್‌ಗಳನ್ನು (GLP-1 receptor agonists) ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಇಲ್ಲದಿದ್ದರೂ, ಕೇವಲ ಶೀಘ್ರವಾಗಿ ದೇಹದ ಕೊಬ್ಬನ್ನು ಕರಗಿಸಿ, ಕ್ಯಾಮೆರಾ ಮುಂದೆ ಸ್ಲಿಮ್ ಆಗಿ ಕಾಣಲು ಈ ಶಾರ್ಟ್‌ಕಟ್ ಮಾರ್ಗವನ್ನು ಆಯ್ದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

‘ಕೊಹ್ಲಿ ಎಫೆಕ್ಟ್’ ಮತ್ತು ಆಟಗಾರರ ಮೇಲಿನ ಒತ್ತಡ:

ಭಾರತೀಯ ಕ್ರಿಕೆಟ್‌ನಲ್ಲಿ ಸಿಕ್ಸ್‌ಪ್ಯಾಕ್ ಮತ್ತು ಕಟ್ಟುಮಸ್ತಾದ ದೇಹದ ಟ್ರೆಂಡ್ ಶುರುವಾಗಿದ್ದೇ ವಿರಾಟ್ ಕೊಹ್ಲಿ ಅವರ ಆಗಮನದ ನಂತರ. ಕೊಹ್ಲಿ ತಂದ ಫಿಟ್‌ನೆಸ್ ಕ್ರಾಂತಿ ಭಾರತೀಯ ಕ್ರಿಕೆಟ್‌ನ ಗುಣಮಟ್ಟವನ್ನು ಹೆಚ್ಚಿಸಿದ್ದು ನಿಜ. ಆದರೆ, ಅದೇ ಫಿಟ್‌ನೆಸ್ ಮಾನದಂಡ ಈಗ ಯುವ ಆಟಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೇವಲ ಫಂಕ್ಷನಲ್ ಫಿಟ್‌ನೆಸ್ (ಆಟಕ್ಕೆ ಬೇಕಾದ ದೈಹಿಕ ಸಾಮರ್ಥ್ಯ) ಇದ್ದರೆ ಸಾಲದು, ಜಾಹೀರಾತುಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಮಾಡೆಲ್‌ಗಳಂತೆ ಕಾಣಿಸಲೇಬೇಕು ಎಂಬ ವಾಣಿಜ್ಯೋದ್ದೇಶದ ಒತ್ತಡವೇ ಆಟಗಾರರು ಇಂತಹ ವೈದ್ಯಕೀಯ ಶಾರ್ಟ್‌ಕಟ್‌ಗಳ ಮೊರೆ ಹೋಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಕ್ರೀಡಾಪಟುಗಳಿಗೆ ಎಚ್ಚರಿಕೆ:

ಈ ಇಂಜೆಕ್ಷನ್‌ಗಳು ಹಸಿವನ್ನು ಕಡಿಮೆ ಮಾಡಿ ತೂಕವನ್ನು ವೇಗವಾಗಿ ಇಳಿಸುತ್ತವೆಯಾದರೂ, ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯದ ಮೇಲೆ ಇವು ಅತ್ಯಂತ ದುಷ್ಪರಿಣಾಮ ಬೀರುತ್ತವೆ ಎಂದು ಕ್ರೀಡಾ ತಜ್ಞರು ಎಚ್ಚರಿಸಿದ್ದಾರೆ. ತೂಕ ಇಳಿಸುವ ಭರದಲ್ಲಿ ಆಟಗಾರರು ತಮ್ಮ ಸ್ನಾಯುಗಳ ಬಲವನ್ನು ಕಳೆದುಕೊಳ್ಳಬಹುದು.

ಇದು ಮೈದಾನದಲ್ಲಿ ವೇಗವಾಗಿ ಓಡಲು, ರನ್ ಕದಿಯಲು ಮತ್ತು ಬೌಲಿಂಗ್ ಮಾಡುವಾಗ ಬೇಕಾಗುವ ಸ್ಪೋಟಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ಇದರಿಂದ ಗಾಯದ ಸಮಸ್ಯೆಗಳು  ಹೆಚ್ಚಾಗುವ ಸಾಧ್ಯತೆ ಅಧಿಕವಿರುತ್ತದೆ.

ವಾಡಾ ಮತ್ತು ಬಿಸಿಸಿಐ ನಿಲುವು ಏನು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಈ ವರದಿಗಳ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇತಿಹಾಸವನ್ನು ಗಮನಿಸಿದರೆ, ತೂಕ ಇಳಿಸುವ ಸಲುವಾಗಿ ನಿಷೇಧಿತ ಮದ್ದು ಒಳಗೊಂಡ ಫ್ಯಾಟ್ ಬರ್ನರ್ ಮಾತ್ರೆ ಸೇವಿಸಿದ್ದಕ್ಕೆ ಭಾರತದ ವೇಗಿ ಪ್ರದೀಪ್ ಸಾಂಗ್ವಾನ್ 18 ತಿಂಗಳ ನಿಷೇಧ ಎದುರಿಸಬೇಕಾಗಿತ್ತು.

ಪ್ರಸ್ತುತ ಚರ್ಚೆಯಲ್ಲಿರುವ ಗ್ಲುಕಗನ್ ತರಹದ ಪೆಪ್ಟೈಡ್-1 (GLP-1) ಇಂಜೆಕ್ಷನ್‌ಗಳು ಸದ್ಯಕ್ಕೆ ವಾಡಾದ ಕಟ್ಟುನಿಟ್ಟಿನ ನಿಷೇಧಿತ ಪಟ್ಟಿಯಲ್ಲಿ ಇಲ್ಲದಿದ್ದರೂ, ವೈದ್ಯಕೀಯ ಶಿಫಾರಸಿಲ್ಲದೆ ಇವುಗಳನ್ನು ಕ್ರೀಡಾಪಟುಗಳು ಬಳಸುವುದು ನೈತಿಕವಾಗಿ ತಪ್ಪು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಎಂದರೆ ಅದು ಮೈದಾನದಲ್ಲಿ ರನ್ ಗಳಿಸಲು, ವಿಕೆಟ್ ಪಡೆಯಲು ಹಾಗೂ ಗಂಟೆಗಟ್ಟಲೆ ಶ್ರಮಪಡಲು ಇರಬೇಕಾದ ನೈಸರ್ಗಿಕ ದೈಹಿಕ ಸಾಮರ್ಥ್ಯವೇ ಹೊರತು, ಕೇವಲ ಕ್ಯಾಮೆರಾ ಕಣ್ಣುಗಳಿಗೆ ಅಥವಾ ಸಾಮಾಜಿಕ ಜಾಲತಾಣದ ಫೋಟೋಶೂಟ್‌ಗಳಿಗೆ ಒಪ್ಪುವ ‘ಝೀರೊ ಸೈಜ್’ ದೇಹವಲ್ಲ. ಗ್ಲಾಮರ್ ಮತ್ತು ವಾಣಿಜ್ಯ ಜಗತ್ತಿನ ಒತ್ತಡಕ್ಕೆ ಬಲಿಯಾಗಿ ಇಂತಹ ವೈದ್ಯಕೀಯ ಶಾರ್ಟ್‌ಕಟ್‌ಗಳ ಬೆನ್ನತ್ತಿ ಹೋಗುವುದು ಆಟಗಾರರ ದೀರ್ಘಾವಧಿ ವೃತ್ತಿಜೀವನಕ್ಕೆ ಮಾತ್ರವಲ್ಲದೆ ಅವರ ಆರೋಗ್ಯಕ್ಕೂ ಮಾರಕ.

ಇದನ್ನೂ ಓದಿ: ವಿಶ್ವಕಪ್​ನ​ ನೇರ ಆಯ್ಕೆಯಿಂದ ಔಟ್: ವಿಂಡೀಸ್ ಮುಂದಿದೆ 2 ಹಾದಿಗಳು!

ಭಾರತೀಯ ಕ್ರಿಕೆಟ್‌ನ ಯುವ ತಾರೆಗಳು ಇಂತಹ ಕೃತಕ ಹಾದಿಗಳನ್ನು ಬಿಟ್ಟು, ಕಠಿಣ ಪರಿಶ್ರಮ ಮತ್ತು ನೈಸರ್ಗಿಕ ತರಬೇತಿಯ ಮೂಲಕವೇ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲಿ ಎಂಬುದೇ ಕ್ರೀಡಾಭಿಮಾನಿಗಳ ಆಶಯ. ಬಿಸಿಸಿಐ ಕೂಡ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸೂಕ್ತ ನಿಯಮಾವಳಿಗಳನ್ನು ತಂದು ಆಟಗಾರರ ಹಿತರಕ್ಷಣೆ ಮಾಡಬೇಕಿದೆ.

Source link

ಸ್ವಾತಂತ್ರ್ಯೋತ್ಸವ: ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಭವ್ಯ ತಿರಂಗಾ ಯಾತ್ರೆ, ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ – Kannada News | BJP Organises Grand 500 Metre Tiranga Yatra in Bagalkot Ahead of Independence Day

ಬಾಗಲಕೋಟೆ, ಆಗಸ್ಟ್ 11: ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿ ವತಿಯಿಂದ ಭವ್ಯ ತಿರಂಗಾ ಯಾತ್ರೆ ನಡೆಯಿತು. ಸುಮಾರು 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬೀಳೂರು ಅಜ್ಜನ ದೇವಸ್ಥಾನದಿಂದ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಬಸವೇಶ್ವರ ವೃತ್ತ, ಎಂಜಿ ರಸ್ತೆ, ವಲ್ಲಭಭಾಯಿ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಯಾತ್ರೆ ಸಾಗಿತು. ಮೆರವಣಿಗೆಯಲ್ಲಿ ‘ಭಾರತ್ ಮಾತಾ ಕೀ ಜೈ’ ಸೇರಿದಂತೆ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಬೃಹತ್ ತಿರಂಗಾ ಹಿಡಿದು ಸಾಗಿದ ಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leopard Spotted In Bengaluru: ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ – Kannada News | Leopard Sighting Sparks Fear in Bengaluru Banashankari, Operation Underway

ಬೆಂಗಳೂರು, ಆಗಸ್ಟ್ 11: ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಒಂದು ತಿಂಗಳ ಅವಧಿಯಲ್ಲೇ ಇದು ಎರಡನೇ ಬಾರಿಗೆ ಇದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಚಿರತೆ ಪ್ರತ್ಯಕ್ಷವಾದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸಾಗಿದ್ದರು. ಇಂದು ಕಗ್ಗಲೀಪುರ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೂ, ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರ ಮನಸ್ಸಿನಲ್ಲಿ ಭಯ ಮೂಡಿಸಿದೆ. ಚಿಕ್ಕ ಮಕ್ಕಳು ಮತ್ತು ವೃದ್ಧರ ಬಗ್ಗೆ ವಿಶೇಷವಾಗಿ ಕಳವಳ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಗಂಗೆಯಲ್ಲಿ ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​: ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ – Kannada News | Shivagange Trekker Advaith Upadhyaya Missing: Police Uncover Explosive Details of Hackers Life

ನೆಲಮಂಗಲ, ಆಗಸ್ಟ್​​ 11: ಶಿವಗಂಗೆಯಲ್ಲಿ ನಾಪತ್ತೆಯಾಗಿದ್ದ ಟ್ರೆಕ್ಕರ್ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಪೋಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅದ್ವೈತ್ ಹೈಲಿ ಟ್ಯಾಲೆಂಟೆಡ್ ಹ್ಯಾಕರ್ ಆಗಿದ್ದ ಎನ್ನಲಾಗಿದೆ. ಪ್ರಾಪ್ತಿ ಚೌಹಾಣ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಬೇರೊಂದು ಹುಡುಗಿಯೊಂದಿಗೆ ಚಾಟ್ ಮಾಡುತ್ತಿದ್ದ ವಿಚಾರ ಪೋಲೀಸರ ತನಿಖೆಯಲ್ಲಿ ಬಯಲಾಗಿದೆ. ಶಿವಗಂಗೆಗೆ ಬರುವ ಮುನ್ನವೇ ಅದ್ವೈತ್, ಚಾಟ್ ಜಿಪಿಟಿಯಲ್ಲಿ ಶಾಂತಲಾ ಡ್ರಾಪ್ ಬಗ್ಗೆ ಮತ್ತು ಅಲ್ಲಿಂದ ಇಳಿಯುವ ಮಾರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಟ್ರೆಕ್ಕಿಂಗ್ ನೆಪದಲ್ಲಿ ಪ್ರಾಪ್ತಿಗೆ ಫೋಟೋ ಕಳುಹಿಸಿದ್ದ ಅದ್ವೈತ್, ಶಾಂತಲಾ ಡ್ರಾಪ್ ಬಳಿ ಮೊಬೈಲ್ ಮತ್ತು ಡ್ರೋಣ್ ಕ್ಯಾಮರಾವನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಕುದೂರು ಬಳಿ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೋಲೀಸರಿಗೆ ಮಾಹಿತಿ ಸಿಕ್ಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು – Kannada News | Karnataka Guest Lecturers Face Salary Crisis as Government Shifts Financial Burden

ಮಂಡ್ಯ: ಕರ್ನಾಟಕದ ಅತಿಥಿ ಉಪನ್ಯಾಸಕರು ಸರ್ಕಾರದ ಹೊಸ ಆದೇಶದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ನೇಮಕಾತಿಗೊಂಡು ವೇತನ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರಿಗೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಂಡ್ಯ, ದೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳೇ ವೇತನ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ನಂತರ ಬಂದಿರುವುದು ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಡ್ಯ ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, 160ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ವೇತನದ ಹೊರೆ ಹೊರಲು ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಭವಿಷ್ಯದ ಆತಂಕ ಎದುರಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದರೆ ಪ್ರಸ್ತುತ ಸಿಗುತ್ತಿರುವ ಸೇವಾ ಹಿರಿತನ, ಸರ್ಕಾರಿ ವೇತನ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಮಹಿಳಾ ಉಪನ್ಯಾಸಕರಿಗೆ ಲಭ್ಯವಿರುವ ರಜೆ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಉಪನ್ಯಾಸಕರು ದೂರಿದ್ದಾರೆ. ಅಂದಾಜು 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಈ ಆದೇಶದಿಂದ ಬಾಧಿತರಾಗಿದ್ದು, ಕೂಡಲೇ ಉನ್ನತ ಶಿಕ್ಷಣ ಇಲಾಖೆಯೇ ತಮ್ಮ ವೇತನದ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಿಟ್ಟನ್ನು ಮರೆಯಲು ಸಾಧ್ಯವೇ ಇಲ್ಲ; ರಣವೀರ್​ಗೆ ಫರ್ಹಾನ್ ಟಾಂಗ್

‘ಡಾನ್ 3’ ಸಿನಿಮಾದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದ ವಿಚಾರವು ಬಾಲಿವುಡ್‌ನಲ್ಲಿ ಭಾರಿ ದೊಡ್ಡ ಸದ್ದು ಮಾಡಿತ್ತು. ಈ ಕುರಿತು ನಿರ್ದೇಶಕ ಫರ್ಹಾನ್ ಅಖ್ತರ್ ಈಗ ಪರೋಕ್ಷವಾಗಿ ಹಾಗೂ ಸ್ಟ್ರಾಂಗ್ ಆಗಿ ಟಾಂಗ್ ನೀಡಿದ್ದಾರೆ. ಸಿನಿಮಾ ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ನಟರು ಪ್ರಾಜೆಕ್ಟ್ ತೊರೆಯುವುದು ಇತ್ತೀಚೆಗೆ ಒಂದು ಹೊಸ ಅಭ್ಯಾಸವಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಫರ್ಹಾನ್ ಅವರ ಈ ಹೊಸ ಹೇಳಿಕೆಯು ಈಗ ಭಾರತೀಯ ಚಿತ್ರರಂಗದಲ್ಲಿ ಮತ್ತು ಸಿನಿರಸಿಕರ ವಲಯದಲ್ಲಿ ಭಾರಿ ದೊಡ್ಡ ಸಂಚಲನವನ್ನು ಮೂಡಿಸಿದೆ.

ಫರ್ಹಾನ್ ಅಖ್ತರ್ ಪರೋಕ್ಷ ವಾಗ್ದಾಳಿ

ಫರ್ಹಾನ್ ಅಖ್ತರ್ ತಮ್ಮ ಅತ್ಯಂತ ಜನಪ್ರಿಯ ‘ದಿಲ್ ಚಾಹ್ತಾ ಹೈ’ ಚಿತ್ರದ ಹಳೆಯ ನೆನಪುಗಳನ್ನು ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆಗ ನಟ ಸೈಫ್ ಅಲಿ ಖಾನ್ ಶೂಟಿಂಗ್ ಆರಂಭಕ್ಕೂ ಮುನ್ನ ದಿನಾಂಕದ ಸಮಸ್ಯೆಯಿಂದಾಗಿ ಹೊರನಡೆಯಲು ನಿರ್ಧರಿಸಿದ್ದರು. ಈ ಹಳೆಯ ಘಟನೆಯನ್ನು ನೆನಪಿಸಿಕೊಂಡ ಫರ್ಹಾನ್, ರಣವೀರ್ ಸಿಂಗ್ ಅವರ ಹೆಸರು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಶೂಟಿಂಗ್‌ಗೆ ಕೇವಲ ಒಂದು ತಿಂಗಳು ಬಾಕಿ ಇದ್ದಾಗ ನಟರು ಸಿನಿಮಾ ಬಿಟ್ಟು ಹೋಗುವುದು ಇತ್ತೀಚೆಗೆ ಸಾಮಾನ್ಯ ಅಭ್ಯಾಸವಾಗಿದೆ ಎಂದು ನಗುತ್ತಲೇ ಮಾರ್ಮಿಕವಾಗಿ ಹೇಳಿದ್ದಾರೆ.

ರಣವೀರ್ ಸಿಂಗ್ ಹೊರನಡೆದ ಕಾರಣ

‘ಡಾನ್ 3’ ಚಿತ್ರದ ಪ್ರಮುಖ ಚಿತ್ರೀಕರಣ ಆರಂಭಕ್ಕೆ ಕೆಲವೇ ವಾರಗಳಿದ್ದಾಗ ನಟ ರಣವೀರ್ ಸಿಂಗ್ ಈ ಬೃಹತ್ ಯೋಜನೆಯಿಂದ ಹೊರಬಂದಿದ್ದರು. ಚಿತ್ರದ ಸ್ಕ್ರಿಪ್ಟ್ ತಮಗೆ ಪೂರ್ತಿ ಸರಿ ಇರಲಿಲ್ಲ ಎಂಬುದು ರಣವೀರ್ ಅವರ ಪ್ರಮುಖ ಆರೋಪವಾಗಿತ್ತು. ಅದರ ಜೊತೆಗೆ ಸಿನಿಮಾದ ಬಜೆಟ್ ಅನ್ನು 350 ಕೋಟಿಯಿಂದ 150 ಕೋಟಿಗೆ ಕಡಿತಗೊಳಿಸಲಾಗಿತ್ತು ಎಂದೂ ಅವರು ಬಹಿರಂಗವಾಗಿ ಹೇಳಿದ್ದರು. ಅಲ್ಲದೆ ತಮಗೆ ಸರಿಯಾಗಿ ನೀಡಬೇಕಿದ್ದ ಮುಂಗಡ ಹಣ ಸಿಕ್ಕಿರಲಿಲ್ಲ ಎಂದು ರಣವೀರ್ ದೂರಿದ್ದರು. ಆದರೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ಫರ್ಹಾನ್ ಅನುಭವಿಸಿದ ಸವಾಲುಗಳು

ಚಿತ್ರರಂಗದ ಪ್ರಯಾಣದಲ್ಲಿ ಯಾವುದನ್ನೂ ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಮೆರಾ ಮುಂದೆ ದೃಶ್ಯ ಸಂಪೂರ್ಣವಾಗಿ ಸೆರೆಯಾಗುವವರೆಗೆ ಯಾವುದೂ ಖಚಿತವಲ್ಲ ಎಂದಿದ್ದಾರೆ. ಹಿಂದೆ ‘ಲಕ್ಷ್ಯ’ ಸಿನಿಮಾ ಸೋತಾಗ ತಮಗೆ ತೀವ್ರ ನಿರಾಸೆಯಾಗಿತ್ತು. ಆದರೆ ಈಗ ಅನುಭವದ ಆಧಾರದ ಮೇಲೆ ಇಂತಹ ಕಠಿಣ ಸವಾಲುಗಳನ್ನು ನಿಭಾಯಿಸುವುದನ್ನು ಕಲಿತಿದ್ದೇನೆ ಎಂದು ಫರ್ಹಾನ್ ಹಂಚಿಕೊಂಡಿದ್ದಾರೆ. ಈ ಎರಡು ಪ್ರಮುಖ ಕಲಾಕಾರರ ನಡುವಿನ ಶೀತಲ ಸಮರವು ಬಾಲಿವುಡ್ ಅಂಗಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ನಿರ್ಮಾಪಕರು ಹಾಗೂ ನಟರ ನಡುವಿನ ವೃತ್ತಿಪರ ಸಂಬಂಧದ ಮೇಲೂ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ರಣವೀರ್ ಸಿಂಗ್ ಅವರ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದ್ದು, ಈ ಪ್ರಕರಣವು ಚಿತ್ರರಂಗದ ವಿವಿಧ ಒಕ್ಕೂಟಗಳ ಮೆಟ್ಟಿಲೇರಿತ್ತು. ಈ ವಿವಾದದ ನಡುವೆಯೂ ‘ಡಾನ್ 3’ ಸಿನಿಮಾವನ್ನು ಹೊಸ ನಾಯಕನೊಂದಿಗೆ ಮುಂದುವರಿಸಲು ಫರ್ಹಾನ್ ಅಖ್ತರ್ ಯೋಜನೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಹೊಸ ಅಪ್‌ಡೇಟ್ ಹೊರಬೀಳುವ ಸಾಧ್ಯತೆಯಿದೆ. ಅಭಿಮಾನಿಗಳು ಕೂಡ ಹೊಸ ನಾಯಕನ ಆಯ್ಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದ ಪತಿ: ಪ್ರಭಾವಿ ಸಚಿವರ ಆಪ್ತರಿಂದಲೇ ನಡೆಯಿತಾ ದೋಖಾ? – Kannada News | Groom Rejects Bride on Day 1 Saying ‘I Don’t Like You’: Bengaluru Woman Files Complaint Against Husband and In Laws

ಬೆಂಗಳೂರು, ಆಗಸ್ಟ್​​ 11: ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದು ಪತ್ನಿಗೆ ಪತಿ ತಿಳಿಸಿದ್ದು, ತಲಾಕ್ ಬ್ಯಾನ್ ಆಗಿದ್ರು ತಲಾಕ್ ನೀಡಿ ದೂರ ನಡೆದಿದ್ದಾನೆ. ಸಾಲದ್ದಕ್ಕೆ ಪತಿ ಮತ್ತು ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ ಎಂದು ನವ ವಿವಾಹಿತೆ ದೂರು ನೀಡಿ 8 ತಿಂಗಳಾದರೂ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ದೂರು ನೀಡಿದ್ದಕ್ಕೆ, ಪರಿಹಾರ ಕೇಳಿದ್ದಕ್ಕೆ ಪತಿ ಕಡೆಯಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.

 2025ರ ಜೂನ್​​ನಲ್ಲಿ ನಡೆದಿದ್ದ ವಿವಾಹ

ಶೇಕ್ ಅಫ್ರಾನ್ ಎಂಬಾತನ ವಿರುದ್ಧ ಯುವತಿ ದೂರಿದ್ದು, 2025ರ ಜೂನ್​​ನಲ್ಲಿ ಇವರಿಬ್ಬರ ಮದುವೆ ಆಗಿತ್ತು. ವಿವಾಹದ ವೇಳೆ ಕಾರು ಸೇರಿದಂತೆ ಸಾಕಷ್ಟು ವರದಕ್ಷಿಣೆಯನ್ನು ಯುವತಿ ಕಡೆಯವರು ಶೇಕ್ ಅಫ್ರಾನ್​​ಗೆ ನೀಡಿದ್ದರು. ಹೀಗಿದ್ದರೂ ಬೇರೆ ಯುವತಿ ಜೊತೆಗೆ ಆತ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಗೆ ಹಿಂಸೆ ನೀಡುತ್ತಿದ್ದ. ಅಲ್ಲದೆ ಆತನ ಜೊತೆಗೆ ಕುಟುಂಬಸ್ಥರೂ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಕೈ ಮೇಲೆ ಬಿಸಿನೀರು ಸುರಿದು ಚಿತ್ರಹಿಂಸೆ ಕೊಟ್ಟಿದ್ದರು. ನಿನ್ನನ್ನು ಮದುವೆ ಮಾಡಿಸಿ ಮನೆಗೆ ಕರೆತಂದಿದ್ದು, ಮನೆ ಕೆಲಸ ಮಾಡಲು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಬೆದರಿಸಿರೋದಾಗಿ ಆರೋಪಿಸಿ ನವೆಂಬರ್​​ನಲ್ಲಿ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು

ಕೇಸ್​​ ದಾಖಲಿಸಲು ಲಂಚ ಪಡೆದಿದ್ದ ಪೊಲೀಸ್​​?

ಇನ್ನು ಪತಿ ಮನೆಯವರ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಲು ಸಂತ್ರಸ್ತ ಯುವತಿ ಬಳಿ ಅಂದಿನ ಆಗ್ನೇಯ ಮಹಿಳಾ ಠಾಣಾ ಇನ್ಸ್ಪೆಕ್ಟರ್ 1.2 ಲಕ್ಷ ರೂ. ಲಂಚ ಪಡೆದಿದ್ದರು ಎಂದೂ ದೂರಲಾಗಿದೆ. ಜೊತೆಗೆ ಆರೋಪಿಗಳು ಪ್ರಭಾವಿ ಸಚಿವರೊಬ್ಬರ ಕಡೆಯವರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಸಚಿವರ ಆಪ್ತ ಸಹಾಯಕನೇ ತಮ್ಮ ಅಣ್ಣನ ಮಗ ಎಂದು ಹೇಳಿಸಿ ಈ ಮದುವೆ ಮಾಡಿಸಿದ್ದರು. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಕೇಳಲು ಹೋದರೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಯುವತಿ ಕುಟುಂಬ ದೂರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:45 am, Tue, 11 August 26

Source link

ಇರಾನ್​ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ – Kannada News | US president Donald Trump secretly escaped from Turkey with help of catering truck and smaller airplane

ವಾಷಿಂಗ್ಟನ್, ಆಗಸ್ಟ್ 11: ಕಳೆದ ತಿಂಗಳು ನ್ಯಾಟೋ ಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಹೋಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಬೆದರಿಕೆ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ತಪ್ಪಿಸಿಕೊಂಡ ಘಟನೆ ನಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇರಾನ್​ನಿಂದ ಹತ್ಯೆಯ ಗಂಭೀರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಮಾಮೂಲಿಯ ಏರ್ ಫೋರ್ಸ್ ಒನ್ ವಿಮಾನ ಬಿಟ್ಟು ಸಣ್ಣ ವಿಮಾನವೊಂದರಲ್ಲಿ ರಹಸ್ಯವಾಗಿ ಟರ್ಕಿಯಿಂದ ಹೊರಗೆ ಕರೆದೊಯ್ಯಲಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್​ನಲ್ಲಿ (The Washington Post) ಹೇಳಲಾಗಿದೆ.

ನ್ಯಾಟೋ ಶೃಂಗಸಭೆ ಮತ್ತು ಇರಾನ್ ಬೆದರಿಕೆ

ಟರ್ಕಿಯ ಅಂಕಾರಾದಲ್ಲಿ ಜುಲೈನಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳಿಂದ ಟ್ರಂಪ್ ಅವರ ವಿಮಾನದ ಮೇಲೆ ಕ್ಷಿಪಣಿ ದಾಳಿ ಅಥವಾ ಹತ್ಯೆಯ ಯತ್ನ ನಡೆಯಬಹುದು ಎಂಬ ನಂಬಲರ್ಹ ಗುಪ್ತಚರ ಮಾಹಿತಿ ಯುಎಸ್ ಸೀಕ್ರೆಟ್ ಸರ್ವಿಸ್‌ಗೆ ದೊರಕಿತ್ತು.

ಕ್ಯಾಮೆರಾಗಳ ಮುಂದೆ ಹಾಗೂ ಪತ್ರಕರ್ತರ ಕಣ್ಣೆದುರು ಟ್ರಂಪ್ ಅವರು ಹಳೆಯ ‘ಏರ್ ಫೋರ್ಸ್ ಒನ್’ (Air Force One) ವಿಮಾನವನ್ನು ಏರಿದ್ದರು. ಆದರೆ ವಿಮಾನವೇರಿದ ಕೆಲವೇ ನಿಮಿಷಗಳಲ್ಲಿ, ವಿಮಾನದ ಹಿಂಭಾಗಕ್ಕೆ ಆಹಾರ ಸರಬರಾಜು ಮಾಡುವ ಏರ್‌ಪೋರ್ಟ್ ಕ್ಯಾಟರಿಂಗ್ ಟ್ರಕ್ (Catering Truck) ಮೂಲಕ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ಮತ್ತೊಂದು ಸಣ್ಣ ಯುದ್ಧ ವಿಮಾನವಾದ ‘ಏರ್ ಫೋರ್ಸ್ C-32A’ (Air Force C-32A) ಗೆ ರಹಸ್ಯವಾಗಿ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ಟ್ರಂಪ್ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್; ಎಲ್ಲಾ ಸೇನಾ ರಜೆಗಳು ರದ್ದು; ಇರಾನ್ ಮೇಲೆ ನಡೆಯುತ್ತಾ ದೊಡ್ಡ ದಾಳಿ?

ಬಹಳ ರಹಸ್ಯವಾಗಿ ನಡೆದ ಕಾರ್ಯಾಚರಣೆ

ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಮತ್ತು ಶ್ವೇತಭವನದ ಹಲವು ಸಿಬ್ಬಂದಿ ನಂಬಿದ್ದರು. ಪ್ರಯಾಣದ ಸಮಯದಲ್ಲಿ ವಿಮಾನದ ಕಿಟಕಿ ಪರದೆಗಳನ್ನು (Window shades) ಮುಚ್ಚಿಡುವಂತೆ ಪತ್ರಕರ್ತರಿಗೆ ಸೂಚಿಸಲಾಗಿತ್ತು. ಟ್ರಂಪ್ ಅವರನ್ನು ಕ್ಯಾಟರಿಂಗ್ ಟ್ರಕ್​ಗೆ ವರ್ಗಾಯಿಸಿದ್ದು ಯಾರ ಕಣ್ಣಿಗೂ ಬೀಳಲಿಲ್ಲ.

ಕತಾರ್ ನೀಡಿದ ಹೊಸ ವಿಮಾನದಲ್ಲಿ ಹೆಚ್ಚಿನ ಸುರಕ್ಷತೆ ಇಲ್ಲ

ಟ್ರಂಪ್ ಅವರು ಅಂಕಾರಾಕ್ಕೆ (ಟರ್ಕಿಯ ನಗರ) ಕತಾರ್ ಸರ್ಕಾರ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನದಲ್ಲಿ ಬಂದಿದ್ದರು. ಆದರೆ, ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲಿ ಇರುವ ಕ್ಷಿಪಣಿ ನಿರೋಧಕ ಮತ್ತು ಲೇಸರ್ ತಂತ್ರಜ್ಞಾನದ ಫೀಚರ್​ಗಳು ಹೊಸ ಬೋಯಿಂಗ್ ವಿಮಾನದಲ್ಲಿ ಇರಲಿಲ್ಲ. ಹೀಗಾಗಿ, ಟರ್ಕಿಯಿಂದ ಹೊರಹೋಗಲು ಹಳೆಯ ಏರ್ ಫೋರ್ಸ್ ಒನ್ ಅನ್ನೇ ಬಳಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಪತ್ರಕರ್ತರ ಪ್ರಶ್ನೆಗೆ ಟ್ರಂಪ್ ಉತ್ತರ ಇದು…

ಬ್ರಿಟನ್‌ನ ಸೇನಾ ನೆಲೆಗೆ ತಲುಪಿದ ನಂತರ, ಪತ್ರಕರ್ತರು “ವಿಮಾನದ ಕಿಟಕಿಗಳನ್ನು ಏಕೆ ಮುಚ್ಚಲು ಹೇಳಲಾಗಿತ್ತು?” ಎಂದು ಕೇಳಿದಾಗ, ಟ್ರಂಪ್: “ನಾವು ಬಹುಶಃ ಅಪಾಯಕಾರಿ ಹಾರಾಟದಲ್ಲಿದ್ದೆವು… ಆದರೆ ನಾನು ಹೋದರೆ, ನೀವು ನನ್ನ ಜೊತೆಯೇ ಹೋಗುತ್ತೀರಲ್ಲವೇ?” ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಶ್ವೇತಭವನದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, “ಅಧ್ಯಕ್ಷರ ಮೇಲೆ ಹಲವು ಶತ್ರುಗಳ ಕಣ್ಣಿದೆ, ಅವರ ಸುರಕ್ಷತೆಗಾಗಿ ನಾವು ಅಗತ್ಯವಿರುವ ಎಲ್ಲಾ ತಂತ್ರಜ್ಞಾನ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

ಕುತೂಹಲ ಎಂದರೆ, ಟರ್ಕಿಯಲ್ಲಿ ಪತ್ರಕರ್ತರ ಜೊತೆ ಏರ್ ಫೋರ್ಸ್ ಒನ್ ವಿಮಾನ ಏರಿದ್ದ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಸಣ್ಣ ವಿಮಾನಕ್ಕೆ ಸಾಗಿಸಲಾಯಿತು. ಬ್ರಿಟನ್​ಗೆ ವಿಮಾನಗಳು ತಲುಪಿದಾಗ ಟ್ರಂಪ್ ಅವರು ಮತ್ತೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಕಾಣಿಸಿಕೊಂಡಿದ್ದರು. ಹೇಗೆ ಅವರನ್ನು ವಾಪಸ್ ಹಳೆಯ ವಿಮಾನಕ್ಕೆ ತರಲಾಯಿತು ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದ ಪತಿ: ಪ್ರಭಾವಿ ಸಚಿವರ ಆಪ್ತರಿಂದಲೇ ನಡೆಯಿತಾ ದೋಖಾ? – Kannada News | Bengaluru Horror: ‘I Don’t Like You’ Says Groom on Day 1; Bride Allegedly Tortured for Dowry

ಬೆಂಗಳೂರು, ಆಗಸ್ಟ್​​ 11: ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದು ಪತ್ನಿಗೆ ಪತಿ ತಿಳಿಸಿದ್ದು, ತಲಾಕ್ ಬ್ಯಾನ್ ಆಗಿದ್ರು ತಲಾಕ್ ನೀಡಿ ದೂರ ನಡೆದಿದ್ದಾನೆ. ಸಾಲದ್ದಕ್ಕೆ ಪತಿ ಮತ್ತು ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ ಎಂದು ನವ ವಿವಾಹಿತೆ ದೂರು ನೀಡಿ 8 ತಿಂಗಳಾದರೂ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ದೂರು ನೀಡಿದ್ದಕ್ಕೆ, ಪರಿಹಾರ ಕೇಳಿದ್ದಕ್ಕೆ ಪತಿ ಕಡೆಯಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.

 2025ರ ಜೂನ್​​ನಲ್ಲಿ ನಡೆದಿದ್ದ ವಿವಾಹ

ಶೇಕ್ ಅಫ್ರಾನ್ ಎಂಬಾತನ ವಿರುದ್ಧ ಯುವತಿ ದೂರಿದ್ದು, 2025ರ ಜೂನ್​​ನಲ್ಲಿ ಇವರಿಬ್ಬರ ಮದುವೆ ಆಗಿತ್ತು. ವಿವಾಹದ ವೇಳೆ ಕಾರು ಸೇರಿದಂತೆ ಸಾಕಷ್ಟು ವರದಕ್ಷಿಣೆಯನ್ನು ಯುವತಿ ಕಡೆಯವರು ಶೇಕ್ ಅಫ್ರಾನ್​​ಗೆ ನೀಡಿದ್ದರು. ಹೀಗಿದ್ದರೂ ಬೇರೆ ಯುವತಿ ಜೊತೆಗೆ ಆತ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಗೆ ಹಿಂಸೆ ನೀಡುತ್ತಿದ್ದ. ಅಲ್ಲದೆ ಆತನ ಜೊತೆಗೆ ಕುಟುಂಬಸ್ಥರೂ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಕೈ ಮೇಲೆ ಬಿಸಿನೀರು ಸುರಿದು ಚಿತ್ರಹಿಂಸೆ ಕೊಟ್ಟಿದ್ದರು. ನಿನ್ನನ್ನು ಮದುವೆ ಮಾಡಿಸಿ ಮನೆಗೆ ಕರೆತಂದಿದ್ದು, ಮನೆ ಕೆಲಸ ಮಾಡಲು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಬೆದರಿಸಿರೋದಾಗಿ ಆರೋಪಿಸಿ ನವೆಂಬರ್​​ನಲ್ಲಿ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು

ಕೇಸ್​​ ದಾಖಲಿಸಲು ಲಂಚ ಪಡೆದಿದ್ದ ಪೊಲೀಸ್​​?

ಇನ್ನು ಪತಿ ಮನೆಯವರ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಲು ಸಂತ್ರಸ್ತ ಯುವತಿ ಬಳಿ ಅಂದಿನ ಆಗ್ನೇಯ ಮಹಿಳಾ ಠಾಣಾ ಇನ್ಸ್ಪೆಕ್ಟರ್ 1.2 ಲಕ್ಷ ರೂ. ಲಂಚ ಪಡೆದಿದ್ದರು ಎಂದೂ ದೂರಲಾಗಿದೆ. ಜೊತೆಗೆ ಆರೋಪಿಗಳು ಪ್ರಭಾವಿ ಸಚಿವರೊಬ್ಬರ ಕಡೆಯವರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಸಚಿವರ ಆಪ್ತ ಸಹಾಯಕನೇ ತಮ್ಮ ಅಣ್ಣನ ಮಗ ಎಂದು ಹೇಳಿಸಿ ಈ ಮದುವೆ ಮಾಡಿಸಿದ್ದರು. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಕೇಳಲು ಹೋದರೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಯುವತಿ ಕುಟುಂಬ ದೂರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಶೋ ಮೂಲಕ ಬರ್ತಿದ್ದಾರೆ ರೋಹಿತ್ ಶರ್ಮಾ, ಅಜಯ್ ದೇವಗನ್, ಮಾಧುರಿ ದೀಕ್ಷಿತ್ – Kannada News | Rohit Sharma to Debut on TV; Ajay Devgn to Host Crime Patrol 2026 in Sony Liv

ಭಾರತೀಯ ಕ್ರಿಕೆಟ್  ಆಟಗಾರ ರೋಹಿತ್ ಶರ್ಮಾ ಈಗ ಕಿರುತೆರೆ ಲೋಕಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ಅವರು ಈಗ ಹೊಸ ಮನರಂಜನಾ ಶೋ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸೋನಿ ನೆಟ್‌ವರ್ಕ್ ಮುಂಬರುವ ಶೋ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ರೋಹಿತ್ ಶರ್ಮಾ ಅವರ ಶೋ ಪ್ರಮುಖ ಆಕರ್ಷಣೆಯಾಗಿದೆ. ಅವರ ಶೋ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿದೆ.

ರೋಹಿತ್ ಶರ್ಮಾ ಮನರಂಜನಾ ಶೋ

ರೋಹಿತ್ ಶರ್ಮಾ ಅವರ ಹೊಸ ಶೋ ಬಗ್ಗೆ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈ ಶೋ ಅತ್ಯಂತ ತಮಾಷೆಯಾಗಿರಲಿದೆ ಎಂದು ವರದಿಯಾಗಿದೆ. ಟೀಸರ್‌ನಲ್ಲಿ ಅಭಿಮಾನಿಗಳು ರೋಹಿತ್ ಅವರ ‘ಕೋಯಿ ಬಿ ಗಾರ್ಡನ್ ಮೇ ನಹಿ ಘುಮೇಗಾ’ ಎಂಬ ಪ್ರಸಿದ್ಧ ಸಂಭಾಷಣೆಯನ್ನು ಹೇಳುವಂತೆ ಕೇಳುತ್ತಾರೆ. ಇದರಿಂದ ರೋಹಿತ್ ಕೋಪಗೊಳ್ಳುವ ದೃಶ್ಯ ವೈರಲ್ ಆಗಿದೆ. ಶೋ ಬಗ್ಗೆ ಹೆಚ್ಚಿನ ವಿವರಗಳನ್ನು ಸೀಕ್ರೆಟ್ ಆಗಿಯೇ ಇಡಲಾಗಿದೆ.

ಅಜಯ್ ದೇವಗನ್ ಮತ್ತು ಮಾಧುರಿ ದೀಕ್ಷಿತ್

ಸೋನಿ ಸಂಸ್ಥೆಯು ‘ಕ್ರೈಮ್ ಪೆಟ್ರೋಲ್ 2026’ ಶೋಗೆ ನಟ ಅಜಯ್ ದೇವಗನ್ ಅವರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಿದೆ. ಈ ಕಾರ್ಯಕ್ರಮವು ನೈಜ ಅಪರಾಧ ಕಥೆಗಳನ್ನು ಆಧರಿಸಿದೆ. ಇನ್ನು ಮರಾಠಿ ಭಾಷೆಯ ‘ಕೋನ್ ಹೊಣಾರ್ ಕರೋಡ್‌ಪತಿ’ ಶೋಗೆ ನಟಿ ಮಾಧುರಿ ದೀಕ್ಷಿತ್ ನಿರೂಪಣೆ ಮಾಡಲಿದ್ದಾರೆ. ಇವರ ಜೊತೆಗೆ ‘ಕೆಬಿಸಿ ಸೀಸನ್ 18’ ಕೂಡ ಆರಂಭವಾಗುತ್ತಿದೆ. ಇದಕ್ಕೆ ಬಿಗ್ ಬಿ ನಿರೂಪಕ.

ದಕ್ಷಿಣ ಭಾರತೀಯ ಶೋಗಳು

ದಕ್ಷಿಣ ಭಾರತದ ವೀಕ್ಷಕರಿಗಾಗಿ ವಿಶೇಷ ಶೋಗಳನ್ನು ರೂಪಿಸಲಾಗಿದೆ. ‘ಮಾಸ್ಟರ್ ಚೆಫ್ ತಮಿಳು’ ಶೋನಲ್ಲಿ ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಳ್ಳಲಿದ್ದಾರೆ. ತಮಿಳು ಐಡಲ್ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತೀರ್ಪುಗಾರರಾಗಿರಲಿದ್ದಾರೆ. ಭಾರತೀಯ ಗೇಮ್ ಶೋಗೆ ಭಾರತಿ ಸಿಂಗ್ ನಿರೂಪಣೆ ಮಾಡಲಿದ್ದಾರೆ. ‘ಸ್ಕ್ಯಾಮ್ 2010’ ವೆಬ್ ಸೀರೀಸ್ ಕೂಡ ಸೋನಿ ಲಿವ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version