ಹರಾಜಿಗೂ ಮುನ್ನ ಶಾಹೀನ್ ಅಫ್ರಿದಿ ಔಟ್: ಆದ್ರೂ ಸಿಗಲಿದೆ 17 ಲಕ್ಷ ರೂ.

ಹರಾಜಿಗೂ ಮುನ್ನ ಶಾಹೀನ್ ಅಫ್ರಿದಿ ಔಟ್: ಆದ್ರೂ ಸಿಗಲಿದೆ 17 ಲಕ್ಷ ರೂ.

ಪಾಕಿಸ್ತಾನದ ಏಕದಿನ ಕ್ರಿಕೆಟ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ, ದಿ ಹಂಡ್ರೆಡ್ (The Hundred) 2026 ಟೂರ್ನಿಯ ಆಟಗಾರರ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಲಂಡನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.

ಪಾಕಿಸ್ತಾನ ತಂಡದ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ) ಆದ್ಯತೆ ನೀಡಲು ಅಥವಾ ಗ್ಲೋಬಲ್ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ಶಾಹೀನ್ ಅಫ್ರಿದಿ ಅವರ ಬದಲಿಗೆ ನ್ಯೂಝಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ‘ವೆಲ್ಷ್ ಫೈರ್’ ತಂಡವು ಆಯ್ಕೆ ಮಾಡಿಕೊಂಡಿದೆ. ಇತ್ತ ಹರಾಜಿನಿಂದ ಹಿಂದೆ ಸರಿದರೂ ಶಾಹೀನ್​ಗೆ ಇಮೇಜ್ ರೈಟ್ಸ್ ರೂಪದಲ್ಲಿ 17 ಲಕ್ಷ ರೂ. (PKR) ಸಿಗಲಿದೆ.

ಏನಿದು ಇಮೇಜ್ ರೈಟ್ಸ್​?

ಇಮೇಜ್ ರೈಟ್ಸ್  ಎಂದರೆ ಒಬ್ಬ ಆಟಗಾರನ ಹೆಸರು, ಫೋಟೋ, ಸಹಿ ಅಥವಾ ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಹಕ್ಕು.

ಲೀಗ್ ಅಥವಾ ತಂಡವು ಪಂದ್ಯದ ಪ್ರಚಾರಕ್ಕಾಗಿ, ಜಾಹೀರಾತುಗಳಲ್ಲಿ ಅಥವಾ ಟಿ-ಶರ್ಟ್‌ನಂತಹ ವಸ್ತುಗಳ ಮೇಲೆ ಆಟಗಾರನ ಚಿತ್ರವನ್ನು ಬಳಸುತ್ತದೆ. ಹೀಗೆ ಬಳಸಿದ್ದಕ್ಕಾಗಿ ಆಟಗಾರನಿಗೆ ಪ್ರತ್ಯೇಕವಾಗಿ ಹಣವನ್ನು ನೀಡಲಾಗುತ್ತದೆ.

ಆಟಗಾರನು ಪಂದ್ಯವಾಡಲು ಪಡೆಯುವ ಸಂಭಾವನೆ ಬೇರೆ, ಮತ್ತು ಅವರ ಫೋಟೋ ಅಥವಾ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಕ್ಕಾಗಿ ನೀಡುವ ಇಮೇಜ್ ರೈಟ್ಸ್ ಹಣವೇ ಬೇರೆ.

ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರೂ, ಅವರ ಚಿತ್ರವನ್ನು ಈಗಾಗಲೇ ದಿ ಹಂಡ್ರೆಡ್​ ಲೀಗ್‌ನ ಪ್ರಚಾರಕ್ಕಾಗಿ ಅಥವಾ ಮಾರ್ಕೆಟಿಂಗ್‌ಗಾಗಿ ಬಳಸಲಾಗಿದೆ.

ಈ ಕಾರಣಕ್ಕಾಗಿ ಅವರಿಗೆ ಸುಮಾರು £5,000 ಇಮೇಜ್ ರೈಟ್ಸ್ ರೂಪದಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಅಂದರೆ ಪಾಕಿಸ್ತಾನ್ ರೂಪಾಯಿ 17 ಲಕ್ಷ ಪಡೆಯಲಿದ್ದಾರೆ.

ಏನಿದು ಹಂಡ್ರೆಡ್ ಲೀಗ್?

ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್​ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

ದಿ ಹಂಡ್ರೆಡ್ ಲೀಗ್​ನ ತಂಡಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
  • ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​)
  • ಬರ್ಮಿಂಗ್​ಹ್ಯಾಮ್ ಫೀನಿಕ್ಸ್
  • ಲಂಡನ್ ಸ್ಪಿರಿಟ್
  • ಟ್ರೆಂಟ್ ರಾಕೆಟ್ಸ್
  • ವೆಲ್ಷ್ ಫೈರ್

 

Source link

ಕಾಡಾನೆ ದಾಳಿಗೆ ಕೊಡಗಲ್ಲಿ ಮತ್ತೊಂದು ಬಲಿ: ದಾರುಣವಾಗಿ ಮೃತಪಟ್ಟ ಕಾಫಿ ಬೆಳೆಗಾರ

ಮಡಿಕೇರಿ, ಮಾರ್ಚ್​​ 12: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಲು ಸಾಲು ಸಾವು

ಕಾಡಾನೆ ದಾಳಿಗೆ ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಾವುಗಳಾಗ್ತಿರೋದು ಜನರ ನಿದ್ದೆಗೆಡಿಸಿದೆ. ಕಾಫಿ ತೋಟ, ರಸ್ತೆ ಬದಿ ಎಲ್ಲೆಂದರಲ್ಲಿ ಇವುಗಳು ಜನರ ಪ್ರಾಣ ಬಲಿ ಪಡೆಯುತ್ತಿರುವ ಕಾರಣ ಜನರು ಮನೆಯಿಂದ ಹೊರ ಬರಲೂ ಹೆದರಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು.

ಇದನ್ನೂ ಓದಿ: 10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ; ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

ಅದಾಗಿ 10 ದಿನಗಳು ಕಳೆಯುವುದರ ಒಳಗೆಯೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.  ಸಾಲು ಸಾಲು ಸಾವುಗಳ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ದಾಳಿ ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rates: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 12: ಸತತ ಎರಡು ದಿನ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rates) ಇವತ್ತು ಗುರುವಾಗ ಕಡಿಮೆಗೊಂಡಿದೆ. ಗ್ರಾಮ್​ಗೆ 100 ರೂನಷ್ಟು ಬೆಲೆ ಇಳಿಕೆ ಆಗಿದೆ. ಮೊನ್ನೆ 65 ರೂ ಹೆಚ್ಚಿದ್ದ ಇದರ ಬೆಲೆ ನಿನ್ನೆ 95 ರೂ ಹಿಗ್ಗಿತ್ತು. ಇವತ್ತು ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆ ಒಂದೇ ದಿನ ಗ್ರಾಮ್​​ಗೆ 10 ರೂ ಕಡಿಮೆಗೊಂಡಿದೆ. ಮೊನ್ನೆ ಇದರ ಬೆಲೆ 10 ರೂ ಹೆಚ್ಚಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,62,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,222 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,870 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,167 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,222 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,870 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,870 ರೂ
  • ಚೆನ್ನೈ: 14,970 ರೂ
  • ಮುಂಬೈ: 14,870 ರೂ
  • ದೆಹಲಿ: 14,885 ರೂ
  • ಕೋಲ್ಕತಾ: 14,870 ರೂ
  • ಕೇರಳ: 14,870 ರೂ
  • ಅಹ್ಮದಾಬಾದ್: 14,875 ರೂ
  • ಜೈಪುರ್: 14,885 ರೂ
  • ಲಕ್ನೋ: 14,885 ರೂ
  • ಭುವನೇಶ್ವರ್: 14,870 ರೂ

ಇದನ್ನೂ ಓದಿ: ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 620 ರಿಂಗಿಟ್ (14,568 ರುಪಾಯಿ)
  • ದುಬೈ: 574 ಡಿರಾಮ್ (14,432 ರುಪಾಯಿ)
  • ಅಮೆರಿಕ: 161.50 ಡಾಲರ್ (14,914 ರುಪಾಯಿ)
  • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,835 ರುಪಾಯಿ)
  • ಕತಾರ್: 573 ಕತಾರಿ ರಿಯಾಲ್ (14,514 ರೂ)
  • ಸೌದಿ ಅರೇಬಿಯಾ: 586 ಸೌದಿ ರಿಯಾಲ್ (14,422 ರುಪಾಯಿ)
  • ಓಮನ್: 60.90 ಒಮಾನಿ ರಿಯಾಲ್ (14,609 ರುಪಾಯಿ)
  • ಕುವೇತ್: 47.05 ಕುವೇತಿ ದಿನಾರ್ (14,193 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ ಪ್ರಿಯಾಂಕಾ ಚೋಪ್ರಾ: ಹೇಳಿದ್ದೇನು?

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ನಟಿ. ಬಾಲಿವುಡ್​​ನಲ್ಲಿ ಹಲವು ವರ್ಷ ಸ್ಟಾರ್ ನಟಿಯಾಗಿ ಮೆರೆದ ಬಳಿಕ 2015 ರ ಸುಮಾರಿಗೆ ಅವರು ಹಾಲಿವುಡ್​​ಗೆ ಎಂಟ್ರಿ ನೀಡಿದರು. ಆಗಿನಿಂದ ಅವರು ಬಾಲಿವುಡ್ ಜೊತೆಗೆ ಸಂಪರ್ಕನ್ನೇ ಕಡಿದುಕೊಂಡರು. 2019 ರಲ್ಲಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸಿದ್ದು ಬಿಟ್ಟರೆ ಅದಾದ ಬಳಿಕ ಅವರು ಯಾವೊಂದು ಹಿಂದಿ ಸಿನಿಮಾನಲ್ಲಿಯೂ ನಟಿಸಿಲ್ಲ. ಇದೀಗ ಅವರು ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಪ್ರಿಯಾಂಕಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಅನ್ನು ಹೊಲಸಿಗೆ ಹೋಲಿಸಿದ್ದಾರೆ.

ಖ್ಯಾತ ಪಾಡ್​​ಕಾಸ್ಟರ್ ಜೋ ರೋಗನ್ ಅವರ ಪಾಡ್​​ಕಾಸ್ಟ್​​ನಲ್ಲಿ ಭಾಗಿ ಆಗಿದ್ದ ಪ್ರಿಯಾಂಕಾ ಚೋಪ್ರಾ ಪಾಡ್​​ಕಾಸ್ಟ್​​ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ, ತಮ್ಮ ಕುಟುಂಬ, ಭಾರತದ ಇತಿಹಾಸ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ಇದೇ ಸಂದರ್ಶನದಲ್ಲಿ ಅವರು ಬಾಲಿವುಡ್ ಬಗ್ಗೆಯೂ ಮಾತನಾಡಿದ್ದು, ಬಾಲಿವುಡ್​ನಿಂದ ತಾವು ಹೊರಗೆ ಬಂದಿದ್ದೇಕೆ ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ್ದಾರೆ.

ಬಾಲಿವುಡ್​​ನಲ್ಲಿ ತಮ್ಮನ್ನು ಕಾರ್ನರ್ ಮಾಡಲಾಗಿತ್ತು ಎಂದಿರುವ ಪ್ರಿಯಾಂಕಾ ಚೋಪ್ರಾ, ‘ತಾವು “ಕೆಟ್ಟ ಪರಿಸ್ಥಿತಿಯಲ್ಲಿ ಅಥವಾ ಕೊಳಕಿನಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಅಲ್ಲಿಯೇ ಉಳಿದರೆ ಆ ಕೆಟ್ಟ ವಾಸನೆ ನಿಮಗೆ ಅಭ್ಯಾಸ ಆಗಿಬಿಡುತ್ತದೆ, ಹಾಗಾಗಿ ನಾನು ಅಲ್ಲಿಂದ ಹೊರಗೆ ಬಂದೆ, ಹೊಸ ಅವಕಾಶಗಳನ್ನು ಹುಡುಕಿಕೊಂಡೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ:ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ಡ್ರಿಂಕ್ಸ್ ಮಾಡಿಕೊಟ್ಟ ನಿಕ್ ಜೋನಸ್: ವಿಡಿಯೋ

‘ಭಾರತದಲ್ಲಿ ಕೆಲಸ ಮಾಡುವಾಗ ತಮಗೆ ಮಿತಿಗಳಿರುವಂತೆ ಭಾಸವಾಯಿತು. ಮಿಂಡಿ ಕಾಲಿಂಗ್ ಮತ್ತು ಐಶ್ವರ್ಯಾ ರೈ ಅವರನ್ನು ಹೊರತುಪಡಿಸಿ ಹಾಲಿವುಡ್‌ನಲ್ಲಿ ಭಾರತೀಯ ನಟರ ಪ್ರಾತಿನಿಧ್ಯ ಕಡಿಮೆ ಇರುವುದನ್ನು ಗಮನಿಸಿ, ಅಲ್ಲಿ ಪ್ರಯತ್ನಿಸಲು ನಿರ್ಧರಿಸಿದೆ. ಬಾಲಿವುಡ್​​ನಲ್ಲಿ ಯಾವುದೂ ಸುಲಭವಲ್ಲ. ನಾವೆಲ್ಲರೂ ಎದುರಿಸಬೇಕಾದ ಹೋರಾಟಗಳಿರುತ್ತವೆ. ನಾನು ಕೆಟ್ಟ ಪರಿಸ್ಥಿತಿಯಲ್ಲೇ ಇರಲು ಬಯಸುವವಳಲ್ಲ, ಏಕೆಂದರೆ ಆಗ ನಮಗೆ ಆ ಕೆಟ್ಟ ವಾಸನೆಯೇ ಅಭ್ಯಾಸವಾಗಿಬಿಡುತ್ತದೆ. ಜೀವನ ಕಠಿಣವಾದಾಗ ನಾವು ಚೇತರಿಸಿಕೊಳ್ಳುವ ಶಕ್ತಿ ಹೊಂದಿರಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಹಾಲಿವುಡ್​ಗೆ ಬಂದಾಗ ತಮಗೆ ಯಾವುದೇ ಯೋಜನೆ ಅಥವಾ ಸ್ಪಷ್ಟ ಹಾದಿ ಇರಲಿಲ್ಲ. ಆದರೆ ತಮ್ಮ ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯ ಮೇಲೆ ತಮಗೆ ನಂಬಿಕೆ ಇತ್ತು ಎಂದು ಅವರು ಹೇಳಿದ್ದಾರೆ. 2015 ರಲ್ಲಿ ‘ಕ್ವಾಂಟಿಕೊ’ ಟಿವಿ ಸೀರೀಸ್​​ನಲ್ಲಿ ಪ್ರಿಯಾಂಕಾ ನಟಿಸಿದರು. ಆರಂಭದಲ್ಲಿ ಟಿವಿ ಸರಣಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ, ಈಗ ಹಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಬೇವಾಚ್’, ‘ಮ್ಯಾಟ್ರಿಕ್ಸ್: ರೆಸಲ್ಯೂಶನ್ಸ್’, ‘ಸಿಟಾಡೆಲ್’ ನಂತಹ ದೊಡ್ಡ ಯೋಜನೆಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅವರ ‘ದಿ ಬ್ಲಫ್’ ಆಕ್ಷನ್ ಸಿನಿಮಾ ಸಹ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ

ರಾಜ್​​ಕುಮಾರ್ ಅವರು ಆಹಾರ ಪ್ರಿಯರು. ಅದರಲ್ಲೂ ನಾನ್ ವೆಜ್ ಪ್ರಿಯರು. ವಿಶೇಷ ಸ್ಥಗಳಿಗೆ ತೆರಳಿ ಅವರು ಊಟ ಮಾಡುತ್ತಿದ್ದರು. ಅದರಲ್ಲಿ ಮೈಸೂರಿನ ಲಕ್ಷ್ಮಣ್ ಮೆಸ್ ಕೂಡ ಒಂದು. ಈ ಹೋಟೆಲ್​ ನಾನ್ ವೆಜ್​​​ಗೆ ಫೇಮಸ್ ಆದ ಸ್ಥಳ. ಈಗ ಕಮರ್ಷಿಯಲ್ ಗ್ಯಾಸ್ ಶಾರ್ಟೇಜ್ ಕಾರಣಕ್ಕೆ ಮೈಸೂರಿನ ಈ ಹೋಟೆಲ್​​ಗೆ ಬೀಗ ಬಿದ್ದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಯುದ್ಧದಿಂದ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ಹೊಡೆತ!

ಯಾದಗಿರಿ, ಮಾರ್ಚ್​ 12: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಯಾದಗಿರಿ ಜಿಲ್ಲೆಯ ಅಕ್ಕಿ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಗಲ್ಫ್ ರಾಷ್ಟ್ರಗಳಿಗೆ ಯಾದಗಿರಿಯಿಂದ ರಫ್ತಾಗುತ್ತಿದ್ದ ಅಕ್ಕಿ ಸಂಪೂರ್ಣ ಸ್ಥಗಿತಗೊಂಡಿದ್ದು, ಜಿಲ್ಲೆಯ ಅನೇಕ ರೈಸ್ ಮಿಲ್‌ಗಳು ಬಂದ್ ಆಗಿವೆ.ಯಾದಗಿರಿಯ ಸೋನಾ ಮಸೂರಿ ಅಕ್ಕಿಗೆ ಸೌದಿ, ದುಬೈ, ಕುವೈತ್, ಕತಾರ್ ಸೇರಿದಂತೆ ಅನೇಕ ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿತ್ತು. ನಿತ್ಯ 3 ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ಇಲ್ಲಿಂದ ರಫ್ತಾಗುತ್ತಿತ್ತು. ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳ ಮೇಲೂ ಪ್ರಭಾವ ಬೀರಿದೆ. ಇದರಿಂದ ಅಕ್ಕಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಲಕ್ಷ್ಮಿ ರೈಸ್ ಮಿಲ್ ಮಾಲೀಕ ವಿಜಯ್ ಹೇಳಿದ್ದಾರೆ. ಅವರ ಪ್ರಕಾರ, ಕಳೆದ ಎರಡು ವಾರಗಳಿಂದ ಅಕ್ಕಿ ರಫ್ತು ಸ್ಥಗಿತಗೊಂಡಿದೆ. ಮುಂಬೈ, ಬೆಂಗಳೂರು, ಹೈದರಾಬಾದ್ ಮಹಾನಗರಗಳಲ್ಲೂ ಬೇಡಿಕೆ ಕಡಿಮೆಯಾಗಿದ್ದು, ಮಿಲ್ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಉಸಿರುಕೊಟ್ಟ ರಸ್ತೆಗುಂಡಿ

ಲಕ್ನೋ, ಮಾರ್ಚ್​ 12:ರಸ್ತೆಗುಂಡಿ(Pothole)ಗಳು ಜೀವವನ್ನು ತೆಗೆದಿರುವ ನಿದರ್ಶನಗಳೇ ಹೆಚ್ಚು, ಆದರೆ ಇಲ್ಲಾಗಿದ್ದೇ ಬೇರೆ ಹೋದ ಜೀವ ರಸ್ತೆಗುಂಡಿಯಿಂದ ಮತ್ತೆ ಬಂದಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ರಸ್ತೆಗುಂಡಿಯಿಂದಾಗಿ ಮತ್ತೆ ಉಸಿರಾಡಿದ್ದಾರೆ. ಈ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ನಡೆದಿದೆ. ಫೆಬ್ರವರಿ 22ರಂದು ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ವಿನೀತಾ ಶುಕ್ಲಾ ಎಂಬುವವರು ಹಠಾತ್ತನೆ ಮೂರ್ಛೆ ಹೋಗಿದ್ದರು.

ಅವರ ಮೆದುಳು ನಿಷ್​ಕ್ರಿಯಗೊಂಡಿದೆ ಬದುಕುಳಿಯುವ ಯಾವುದೇ ಭರವಸೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಫೆಬ್ರವರಿ 24ರಂದು ಆಕೆಯ ಅಂತ್ಯಕ್ರಿಯೆಗಾಗಿ ಅವರನ್ನು ಮನೆಗೆ ಕರೆತರಲಾಗುತ್ತಿತ್ತು. ಅವರು ಉಸಿರಾಡುತ್ತಿರಲಿಲ್ಲ, ಹೃದಯಬಡಿತವೂ ಕಡಿಮೆಯಾಗುತ್ತಿತ್ತು. ವಿನೀತಾ ಕುಟುಂಬವು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿತ್ತು ಎಂದು ಅವರ ಪತಿ ಹೇಳಿದ್ದಾರೆ.

ಆಘಾತ ಮತ್ತು ಹತಾಶೆಯ ನಡುವೆ, ವಿನೀತಾಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಡಿಕ್ಕಿ ಹೊಡೆದಾಗ ಭರವಸೆಯ ಅಲೆಯೊಂದು ಹೊರಹೊಮ್ಮಿತ್ತು. ಏಕೆಂದರೆ ಗುಂಡಿಯಿಂದ ಉಂಟಾದ ದೊಡ್ಡ ಆಘಾತದ ನಂತರ ಅವರು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿತ್ತು.

ಮತ್ತಷ್ಟು ಓದಿ: ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು, ಇಲ್ಲದಿದ್ರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ

ವೈದ್ಯರು ಆರಂಭದಲ್ಲಿ ರೋಗಿಯನ್ನು ದಾಖಲಿಸಲು ಹಿಂಜರಿದರು, ಆದರೆ ಕುಟುಂಬದವರು ಒತ್ತಾಯಿಸಿದ ನಂತರ ಅಂತಿಮವಾಗಿ ಅವರನ್ನು ಪರೀಕ್ಷಿಸಿದ್ದರು. ಆಂಬ್ಯುಲೆನ್ಸ್ ಹಫೀಜ್‌ಗಂಜ್ ತಲುಪುತ್ತಿದ್ದಂತೆ, ಅದು ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತ್ತು. ಮೊದಲು ಹೃದಯ ಬಡಿತ ಕಡಿಮೆಯಾಗುತ್ತಿತ್ತು, ಆದರೆ ಈ ಘಟನೆ ನಂತರ ಅವರು ಸಾಮಾನ್ಯವಾಗಿ ಉಸಿರಾಡಲು ಪ್ರಾರಂಭಿಸಿದರು ಎಂದು ವಿವರಿಸಿದ್ದಾರೆ.

ಅವರು ತಮ್ಮ ಕುಟುಂಬಕ್ಕೆ ಅಂತ್ಯಕ್ರಿಯೆಯ ಎಲ್ಲಾ ಸಿದ್ಧತೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡರು, ವಿನೀತಾಳನ್ನು ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದರು ಮತ್ತು ಒಂದು ದಿನದ ನಂತರ ಅವರು ಮನೆಗೆ ಮರಳಿದ್ದಾರೆ. ಸುಮಾರು 13 ದಿನಗಳ ಚಿಕಿತ್ಸೆಯ ನಂತರ, ವಿನಿತಾ ಸಂಪೂರ್ಣವಾಗಿ ಚೇತರಿಸಿಕೊಂಡರು ಮತ್ತು ಈಗ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ.

ಕುಟುಂಬವು ಈ ಘಟನೆಯನ್ನು ಒಂದು ಪವಾಡವೆಂದು ಪರಿಗಣಿಸಿದರೂ, ವೈದ್ಯಕೀಯ ತಂಡದ ಪ್ರಯತ್ನಗಳು ಮತ್ತು ರೋಗನಿರ್ಣಯವು ನಗರದಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಆಕೆಗೆ ಚಿಕಿತ್ಸೆ ನೀಡಿದ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಸಿಂಗ್ ಮಾತನಾಡಿ, ರೋಗಿಗೆ ಹಾವು ಕಡಿದಿರಬಹುದು ಎನ್ನುವ ಅನುಮಾನ ಮೂಡಿತ್ತು ಆ ಸಾಧ್ಯತೆಯ ಆಧಾರದ ಮೇಲೆ, ವೈದ್ಯರು ಇತರ ಅಗತ್ಯ ಚಿಕಿತ್ಸೆಗಳೊಂದಿಗೆ ವಿಷ ನಿರೋಧಕ ಚುಚ್ಚುಮದ್ದನ್ನು ನೀಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗ

Source link

ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ನವದೆಹಲಿ, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ (West Asia crisis) ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್​ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ:

  1. ಅಮೆರಿಕ ಮತ್ತು ಇಸ್ರೇಲ್​ನಿಂದ ತತ್​ಕ್ಷಣವೇ ಎಲ್ಲಾ ಮಿಲಿಟರಿ ದಾಳಿಗಳು ನಿಲ್ಲಬೇಕು. ಪೂರ್ಣ ನಿಂತ ಬಳಿಕವಷ್ಟೇ ಸಂಧಾನ ಅಥವಾ ಮಾತುಕತೆ ಸಾಧ್ಯ ಎಂದಿದೆ ಇರಾನ್.
  2. ಕದನ ವಿರಾಮ ತಾತ್ಕಾಲಿಕ ಆಗಿರಕೂಡದು. ಭವಿಷ್ಯದಲ್ಲಿ ಇಂಥ ದಾಳಿಗಳನ್ನು ಮಾಡುವುದಿಲ್ಲ ಎಂದು ಗ್ಯಾರಂಟಿ ಕೊಡಬೇಕು ಎಂದು ಇರಾನ್ ಹಾಕಿರುವ ಮತ್ತೊಂದು ಷರತ್ತು.
  3. ತನ್ನ ಸಾರ್ವಭೌಮ ಹಕ್ಕುಗಳನ್ನು ಮಾನ್ಯ ಮಾಡಬೇಕು. ಈ ಸಂಘರ್ಷದಲ್ಲಿ ತನಗೆ ಆಗಿರುವ ಹಾನಿಗಳಿಗೆ ಪರಿಹಾರ ಕೊಡಬೇಕು ಎಂದು ಇರಾನ್ ಒತ್ತಾಯಿಸಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದ ಮೇಲೇನು ಪರಿಣಾಮ?

ಅತಿಹೆಚ್ಚು ತೈಲ ಮತ್ತು ಅನಿಲ ಬಳಸುವ ದೇಶಗಳಲ್ಲಿ ಭಾರತವೂ ಒಂದು. ಹೆಚ್ಚಿನವನ್ನು ಭಾರತ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ತೈಲ ಬಿಕ್ಕಟ್ಟು ಶುರುವಾದರೆ ಭಾರತದ ಆರ್ಥಿಕತೆಯ ಮೇಲೆ ನಾನಾ ಪರಿಣಾಮಗಳಾಗುತ್ತವೆ. ಕೆಲ ಸಂಭಾವ್ಯ ಪರಿಣಾಮಗಳಿವು…

ಯುದ್ಧ ಬೇಗ ಮುಗಿದರೆ ಭಾರತಕ್ಕೆ ಅನುಕೂಲ

ಅಕಸ್ಮಾತ್ ಯುದ್ಧ ಬಹಳ ಬೇಗ ಮುಗಿದುಹೋದಲ್ಲಿ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್​ಗೂ ಹೆಚ್ಚು ಇದ್ದದ್ದು 70 ಡಾಲರ್​ನೊಳಗೆ ಬರಬಹುದು. ಭಾರತದ ಆರ್ಥಿಕತೆ ಮೇಲಿನ ನಕಾರಾತ್ಮಕ ಪರಿಣಾಮ ಬಹಳ ಕಡಿಮೆ ಇರುತ್ತದೆ. ತಾತ್ಕಾಲಿಕ ಹಿನ್ನಡೆ ನಂತರ ಆರ್ಥಿಕತೆಯ ವೇಗ ಯಥಾಸ್ಥಿತಿಗೆ ಮರಳಬಹುದು.

ಯುದ್ಧ ದೀರ್ಘಕಾಲ ಮುಂದುವರಿದಿದರೆ?

ಯುದ್ಧ ದೀರ್ಘಕಾಲ ಮುಂದುವರಿದರೆ ತೈಲ ಬೆಲೆ ಅಧಿಕ ಮಟ್ಟದಲ್ಲೇ ಇರುತ್ತದೆ. ಪೆಟ್ರೋಲ್, ಡೀಸಲ್, ಎಲ್​ಪಿಜಿ ಇತ್ಯಾದಿ ಬೆಲೆಗಳೆಲ್ಲವೂ ಹೆಚ್ಚಳವಾಗುತ್ತಲೇ ಹೋಗುತ್ತದೆ. ಇದರಿಂದ ಬಹುತೇಕ ಎಲ್ಲಾ ಸರಕುಗಳ ಬೆಲೆ ಸಹಜವಾಗಿ ಏರಿಕೆ ಆಗುತ್ತದೆ. ತೈಲ ಬೆಲೆಯ ಪ್ರತೀ ಶೇ. 10 ಏರಿಕೆಯಿಂದ ಜಿಡಿಪಿ ಬೆಳವಣಿಗೆಯ ವೇಗ ಶೇ. 0.25ರಷ್ಟು ಕುಂಠಿತಗೊಳ್ಳಬಹುದು ಎನ್ನುತ್ತಾರೆ ಅರ್ಥತಜ್ಞರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ

ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಟ್ಟರೆ?

ಯುದ್ಧ ಮುಂದುವರಿಯುವುದರ ಜೊತೆಗೆ ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಡುವ ಸಾಧ್ಯತೆ ಇಲ್ಲದಿಲ್ಲ. ವಿಶ್ವದ ಹೆಚ್ಚಿನ ತೈಲ ಮತ್ತು ಅನಿಲ ಸರಬರಾಜು ಈ ಮಾರ್ಗದಲ್ಲೇ ಸಾಗುವುದು. ಭಾರತ ಸೇರಿ ಹಲವು ರಾಷ್ಟ್ರಗಳಿಂದ ವಿವಿಧ ಸರಕುಗಳು ಗಲ್ಫ್ ದೇಶಗಳಿಗೆ ರಫ್ತಾಗಲು ಈ ಮಾರ್ಗ ಮುಖ್ಯ. ಈ ಜಲಸಂಧಿ ಬಂದ್ ಆಗಿ ಹೋದರೆ ಹಲವಾರು ರಾಷ್ಟ್ರಗಳಿಗೆ ಬಹಳ ಹಿನ್ನಡೆಯಾಗಬಹುದು. ಭಾರತದ ಮೇಲೆ ಬಹಳ ದೊಡ್ಡ ಪರಿನಾಮ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ

ಬೆಂಗಳೂರು, ಮಾರ್ಚ್ 12: ಇರಾನ್- ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಮೂರು ದೇಶಗಳ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳ ಮೇಲೆ ಕೂಡ ದಾಳಿ ಮುಂದುವರೆದಿದ್ದು, ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ತೈಲ, ಗ್ಯಾಸ್ ಮುಂತಾದ ಸೌಕರ್ಯಗಳ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಅನೇಕ ಪ್ರಮುಖ ನಗರಗಳ ಹೋಟೆಲ್​, ರೆಸ್ಟೋರೆಂಟ್, ಹಾಸ್ಟೆಲ್​ಗಳಲ್ಲಿ ಎಲ್​ಪಿಜಿ ಕೊರತೆ (LPG Crisis) ಎದುರಾಗಿದ್ದು, ಅವುಗಳ ಬಾಗಿಲು ಮುಚ್ಚಲಾಗುತ್ತಿದೆ. ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ ನಡುವೆ ಭಾರತದ ಹಲವಾರು ಭಾಗಗಳಲ್ಲಿ LPG ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ‘ತಕ್ಷಣದ ಎಲ್​ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಬಂದರೆ ಅದನ್ನು ನಂಬಬೇಡಿ.

ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಲು ಜನರು ಪರದಾಡುತ್ತಿರುವಾಗ ಸೈಬರ್ ಅಪರಾಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಾವು ಲಾಭ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು LPG ಸಿಲಿಂಡರ್ ರೀಫಿಲ್ಲಿಂಗ್​ಗೆ ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ವಂಚನೆಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್​ಪಿಜಿ ಸಿಲಿಂಡರ್​​ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಮತ್ತು ಪೂರೈಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ವದಂತಿಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದರಿಂದ, ಸೈಬರ್ ಅಪರಾಧಿಗಳು ಜನರ ಭಯದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಸೈಬರ್ ಅಪರಾಧಿಗಳು ಗ್ಯಾಸ್ ಬುಕಿಂಗ್ ಸೇವೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ದಾರಿತಪ್ಪಿಸುವ ಜಾಹೀರಾತುಗಳು ಸೋಷಿಯಲ್ ಮೀಡಿಯಾ ಮತ್ತು ಮೆಸೇಜ್ ಅಪ್ಲಿಕೇಶನ್‌ಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿವೆ. ಈ ನಕಲಿ ಪ್ರಚಾರಗಳು ವೇಗವಾಗಿ LPG ಸಿಲಿಂಡರ್ ವಿತರಣೆಯನ್ನು ನೀಡುವುದಾಗಿ ನಂಬಿಸುತ್ತಿವೆ. ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ, ಹೆಚ್ಚಿನ ಸಿಲಿಂಡರ್​ ಕೊಡುತ್ತೇವೆ ಎಂಬ ಆಮಿಷವೊಡ್ಡಿ ಗ್ರಾಹಕರನ್ನು ಸುಲಿಗೆ ಮಾಡುವ ಜಾಲ ಸೃಷ್ಟಿಯಾಗಿದೆ. ಇಂತಹ ಮೋಸಗೊಳಿಸುವ ಪ್ರಚಾರಗಳನ್ನು ಸಾಮಾನ್ಯವಾಗಿ WhatsApp ಫಾರ್ವರ್ಡ್‌ಗಳು, SMS ಸಂದೇಶಗಳು ಮತ್ತು ಇತರ ಮೆಸೇಜಿಂಗ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.

ಈ ಸಂದೇಶಗಳು ಸಾಮಾನ್ಯವಾಗಿ ಕಾನೂನುಬದ್ಧ ಗ್ಯಾಸ್ ಬುಕಿಂಗ್ ಪೋರ್ಟಲ್‌ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇವರು ಸಾಮಾನ್ಯವಾಗಿ ತಕ್ಷಣದ ಸಿಲಿಂಡರ್ ವಿತರಣೆಗೆ ಆನ್‌ಲೈನ್‌ನಲ್ಲಿ ಮುಂಗಡ ಪಾವತಿ ಮಾಡಲು ಕೇಳುತ್ತಾರೆ. ನೀವೇನಾದರೂ ಪ್ರಿ ಬುಕಿಂಗ್​ಗೆ ಹಣ ಪಾವತಿ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ, ಅಧಿಕೃತ ವೆಬ್​​ಸೈಟ್ ಅನ್ನು ಹೊರತುಪಡಿಸಿ ಬೇರಾವುದೇ ಸೈಟ್​​ಗಳಲ್ಲೂ ಮುಂಗಡ ಹಣ ಪಾವತಿ ಮಾಡಿ ಸಿಲಿಂಡರ್ ಬುಕ್ ಮಾಡುವುದು ಸುರಕ್ಷಿತವಲ್ಲ.

ಇದನ್ನೂ ಓದಿ: 25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ಯಾವುದೇ ಕಾರಣಕ್ಕೂ ಬ್ಯಾಂಕ್ ಅಕೌಂಟ್, OTP, UPI ಪಿನ್‌ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬೇರೆ ಯಾವುದೇ ಇತರ ಗೌಪ್ಯ ಡೇಟಾದಂತಹ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಇಂತಹ ವಂಚನೆಗಳು ನಿಮಗೂ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ವಂಚನೆಗಳಿಗೆ ಬಲಿಯಾದವರು ತಕ್ಷಣ ರಿಪೋರ್ಟ್ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಡೆಗಟ್ಟಲು ಮತ್ತು ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ಸಹಾಯವಾಗುತ್ತದೆ.

ಸೈಬರ್ ವಂಚನೆ ದೂರುಗಳಿಗೆ ಪ್ರತಿಕ್ರಿಯಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು ಸ್ಥಾಪಿಸಲಾದ 1930ಗೆ ಕರೆ ಮಾಡುವ ಮೂಲಕ ವಂಚನೆಗೆ ಒಳಗಾದವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕವೂ ದೂರುಗಳನ್ನು ನೋಂದಾಯಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ: ಹೇಳಿದ್ದೇನು?

ರಣವೀರ್ ಸಿಂಗ್ (Ranveer Singh) ನಟನೆಯ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಅದೇ ದಿನ ಯಶ್ ಅವರ ‘ಟಾಕ್ಸಿಕ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಬೇಕಿತ್ತು. ಎರಡೂ ಚಿತ್ರಗಳು ಮಾರ್ಚ್ 19 ರಂದು ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಆದರೆ ‘ಟಾಕ್ಸಿಕ್’ ತಂಡವು ಚಿತ್ರದ ಬಿಡುಗಡೆಯನ್ನು ಜೂನ್ 4 ಕ್ಕೆ ಮುಂದೂಡಿತು. ಇದಕ್ಕೆ ಕಾರಣವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಘರ್ಷಣೆಯಿಂದಾಗಿ ಚಿತ್ರದ ವ್ಯವಹಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣವನ್ನು ಚಿತ್ರತಂಡ ನೀಡಿದೆ.

ಆದರೆ ಕೆಲವರು ವಿಶೇಷವಾಗಿ ಹಿಂದಿ ಮಾಧ್ಯಮಗಳು, ಯೂಟ್ಯೂಬರ್​​ಗಳು ಸಿನಿಮಾ ರಂಗದವರು ‘ಧುರಂಧರ್ 2’ ಸಿನಿಮಾಕ್ಕೆ ಹೆದರು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದೆ ಎಂದೇ ಹೇಳುತ್ತಿದ್ದಾರೆ. ಕುಹುಕ, ವ್ಯಂಗ್ಯದ ಪೋಸ್ಟ್​​ಗಳನ್ನು ಸಹ ‘ಟಾಕ್ಸಿಕ್’ ಬಗ್ಗೆ ಕೆಲವರು ಹಂಚಿಕೊಂಡಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದ ನಟರೊಬ್ಬರು ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಿದ್ದಕ್ಕೆ ಟಾಂಗ್ ನೀಡಿದ್ದಾರೆ.

‘ಧುರಂಧರ್ 2’ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ನಿರ್ವಹಿಸಿರುವ ರಾಕೇಶ್ ಬೇಡಿ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿರುವ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಮಗೂ ಇದೆ, ಆದರೆ ನಾವು ಮಾತ್ರ ಸಿನಿಮಾ ಬಿಡುಗಡೆ ಮಾಡುತ್ತಿದ್ದೀವಿ’ ಎಂದು ಹೇಳಿದ್ದಾರೆ. ಯಶ್ ತಂಡ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲು ನೀಡಿದ್ದ ಕಾರಣವನ್ನು ಪರೋಕ್ಷವಾಗಿ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ;ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ

ರಾಕೇಶ್ ಬೇಡಿ ಪ್ರಕಾರ, ಯಾವುದೇ ಅಡೆತಡೆಗಳಿದ್ದರೂ ‘ಧುರಂಧರ್ 2’ ನಿಗದಿತ ದಿನಾಂಕದಂದೇ (ಮಾರ್ಚ್ 19) ತೆರೆಗೆ ಬರಲಿದೆ. ಆದರೆ ‘ಧುರಂಧರ್ 2’ಗೂ ‘ಟಾಕ್ಸಿಕ್’ ಪರಿಸ್ಥಿತಿಗೂ ಅಂತರ ಇದೆ. ‘ಧುರಂಧರ್’ ಮೊದಲ ಭಾಗವು ಪಾಕಿಸ್ತಾನ ಮತ್ತು ಆರು ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿತ್ತು. ಈಗ ಯುದ್ಧದ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳಲ್ಲಿ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುವುದೇ ಇಲ್ಲ. ಹಾಗಾಗಿ ಯುದ್ಧದ ಪರಿಣಾಮ ‘ಟಾಕ್ಸಿಕ್’ ಸಿನಿಮಾದ ಮೇಲೆ ಆದಷ್ಟು ‘ಧುರಂಧರ್ 2’ ಸಿನಿಮಾದ ಮೇಲೆ ಆಗುವುದಿಲ್ಲ. ಹಾಗಾಗಿ ಅವರು ಧೈರ್ಯವಾಗಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

‘ಧುರಂಧರ್ 2’ ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದು, ರಣ್ವೀರ್ ಸಿಂಗ್ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಇನ್ನು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version