Headlines

ಮಲೆ ಮಾದಪ್ಪನಿಗೂ ತಟ್ಟಿದ ಯುದ್ಧದ ಬಿಸಿ: ಹೀಗೆ ಮುಂದುವರೆದ್ರೆ ಭಕ್ತರಿಗಿಲ್ಲ ಅನ್ನದಾಸೋಹ, ಲಾಡು ಪ್ರಸಾದ

ಚಾಮರಾಜನಗರ, ಮಾರ್ಚ್​ 11: ಮಧ್ಯಪ್ರಾಚ್ಯದ ಕದನ (Middle East conflict) ಇಡೀ ವಿಶ್ವಕ್ಕೆ ತಲೆನೋವು ತಂದೊಡ್ಡಿದೆ. ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಇತ್ತ ಮಾದಪ್ಪನಿಗೂ (Male Mahadeshwara Hills) ಯುದ್ಧದ ಕಾರ್ಮೋಡ ಕವಿದಿದ್ದು, ಯುಗಾದಿ ಜಾತ್ರೆಗೆ ಅನ್ನದಾಸೋಹ ಮತ್ತು ಲಾಡು ಪ್ರಸಾದಕ್ಕೂ ಎಫೆಕ್ಟ್ ಆಗುವ ಸಾಧ್ಯತೆ ಇದೆ. ದಾಸೋಹ, ಲಾಡು ತಯಾರಿಕೆ ಸ್ಥಗಿತ ಸಾಧ್ಯತೆ ಏಳು ಮಲೆ ಎಪ್ಪತ್ತೇಳು ಮಲೆ ಒಡೆಯ. ಕಲಿಯುಗದ ಕಲ್ಪತರು ಬೇಡಿದನ್ನ ಕರುಣಿಸುವ ಮಾಯ್ಕಾರ ಈ ಮಾದಪ್ಪ. ಈ ಮಾದಪ್ಪನಿಗೆ ಇದೀಗ…

Read More

ಬಾಯ್​​ಫ್ರೆಂಡ್ ಜೊತೆ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಭಮೇಳ ಮೊನಲಿಸ

ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಯುವತಿ ಮೊನಲಿಸಾ ಭೊಸ್ಲೆಯ (Monalisa) ಒಂದೇ ಒಂದು ಚಿತ್ರ ವೈರಲ್ ಆಗಿ ಆಕೆಯ ಅದೃಷ್ಟವೇ ಬದಲಾಗಿ ಹೋಯ್ತು. ಯಾವ ಮಟ್ಟಿಗೆ ಚಿತ್ರ ವೈರಲ್ ಆಯ್ತೆಂದರೆ ಅದೊಂದು ಚಿತ್ರದಿಂದಾಗಿ ಮೊನಲಿಸಾ ಭೋಸ್ಲೆಗೆ ಮಾಡೆಲಿಂಗ್ ಮಾತ್ರವಲ್ಲದೆ ಸಿನಿಮಾ ಅವಕಾಶಗಳು ಸಹ ಅರಸಿ ಬಂದಿದ್ದು, ಇದೀಗ ಮೊನಲಿಸಾ ಬೋಸ್ಲೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಮೊನಲಿಸಾ ಭೋಸ್ಲೆ, ಕೇರಳದಲ್ಲಿ ತಮ್ಮ ಬಾಯ್​​ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೊನಿಸಲಾ ಭೋಸ್ಲೆ ಪ್ರಸ್ತುತ ಸಿನಿಮಾ ಒಂದರ…

Read More

ಅತಿಥಿ ಶಿಕ್ಷಕರನ್ನ ಮರೆತ ಸರ್ಕಾರ: ಕಳೆದ ನಾಲ್ಕು ತಿಂಗಳಿನಿಂದ ಬಂದಿಲ್ವಂತೆ ಸಂಬಳ!

ಬೆಂಗಳೂರು, ಮಾರ್ಚ್​ 11: ರಾಜ್ಯದ ಪೊಲೀಸ್​​ ಸಿಬ್ಬಂದಿಗೆ ಕಳೆದ ತಿಂಗಳಿನ ಸಂಬಳ ಇನ್ನೂ ಆಗಿಲ್ಲ ಎಂಬ ವಿಚಾರವಾಗಿ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿರುವ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ವರದಿಯಾಗಿದೆ. ಈಗಾಗಲೇ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಕರ್ನಾಟಕದ ಸರ್ಕಾರಿ ಶಾಲೆಗಳ ಸುಮಾರು 51,000 ಅತಿಥಿ ಶಿಕ್ಷಕರಿಗೆ (Guest Teachers) 2025ರ ನವೆಂಬರ್‌ನಿಂದ ಇಂದಿನವರೆಗೆ ವೇತನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಲಿಂಕ್ ರೋಡ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ…

Read More

‘ಧುರಂಧರ್ 2’ ಅಬ್ಬರ: 3.50 ಲಕ್ಷ ಟಿಕೆಟ್ ಮಾರಾಟ, ಗಳಿಸಿದ ಮೊತ್ತ ಎಷ್ಟು?

‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ಸಖತ್ ಹೈಪ್ ದೊರೆತಿದೆ. ಮಾರ್ಚ್ 18ರಂದು ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದ್ದು, ಪ್ರೀಮಿಯರ್ ಶೋ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿವೆ. ಭಾರಿ ಮೊತ್ತಕ್ಕೆ ಈ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್​​ಗಳು ಮಾರಾಟ ಆಗುತ್ತಿವೆ. ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗುತ್ತಿದ್ದು, ಈ ವರೆಗೆ ಸುಮಾರು 3.50 ಲಕ್ಷ…

Read More

25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ನವದೆಹಲಿ, ಮಾರ್ಚ್ 11: ದೇಶೀಯ LPG ಸಿಲಿಂಡರ್ (LPG cylinder) ರೀಫಿಲ್ಲಿಂಗ್ ಕಾಯ್ದಿರಿಸಲು ಕನಿಷ್ಠ ಕಾಯುವ ಅವಧಿಯನ್ನು ಸರ್ಕಾರ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ. ಹೀಗಾಗಿ, ನೀವು ಒಮ್ಮೆ ಸಿಲಿಂಡರ್ ಬುಕ್ ಮಾಡಿದರೆ 25 ದಿನಗಳು ಕಳೆಯುವವರೆಗೆ ಇನ್ನೊಂದು ಸಿಲಿಂಡರ್ ಬುಕ್ ಮಾಡುವಂತಿಲ್ಲ. ಅಡುಗೆ ಅನಿಲ ಕೊರತೆಯ ಬಗ್ಗೆ ದೇಶಾದ್ಯಂತ ಭಯ ಆವರಿಸಿದೆ. ಆತಂಕಗೊಂಡ ಗ್ರಾಹಕರಿಂದ ಗ್ಯಾಸ್ ಏಜೆನ್ಸಿಗಳಿಗೆ ಕರೆಗಳು ಮತ್ತು ಸಿಲಿಂಡರ್‌ಗಳಿಗಾಗಿ ಬಹು ವಿನಂತಿಗಳು ಬರುತ್ತಿವೆ. ಜನರು ಮುಗಿಬಿದ್ದು ಗ್ಯಾಸ್ ಬುಕ್ ಮಾಡಲು ಕರೆ…

Read More

ನನ್ನ ದೇಹವನ್ನು ನೀನು ಛೇದಿಸಿ ಪಾಠ ಮಾಡಬೇಕು: ಶತಾಯುಷಿ ತಾಯಿಯ ಆಸೆ ಈಡೇರಿಸಿದ ಪುತ್ರ!

ಬೆಳಗಾವಿ, ಮಾರ್ಚ್​ 11: ದಾನಗಳಲ್ಲಿ ಅನ್ನದಾನ, ನೇತ್ರದಾನ ಹಾಗೂ ದೇಹದಾನ ಶ್ರೇಷ್ಠ. ಇಂತಹ ಶ್ರೇಷ್ಠ ದಾನಗಳ ಪೈಕಿ 101 ವರ್ಷದ ತಾಯಿ ದೇಹದಾನ (Body Donation) ಮಾಡಿರುವುದು ಗಮನ ಸೆಳೆಯುತ್ತಿದೆ. ತಂದೆಯಂತೆ ತಾಯಿ ಕೂಡ ತನ್ನ ಮಗನೇ ದೇಹವನ್ನ ಛೇದಿಸಬೇಕೆಂದು ವಿಲ್ ಬರೆದು ಸಾವನ್ನಪ್ಪಿದ್ದರೆ, ತಾಯಿ ಕೊನೆ ಆಸೆಯಂತೆ ವೈದ್ಯ ಪುತ್ರ ದೇಹ ಛೇದಿಸಲು‌ ಸಿದ್ಧರಾಗಿದ್ದಾರೆ. ಅಜ್ಜಿಯ ಮಾದರಿಯ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಮಾಜಕ್ಕೆ ಮಾದರಿಯಾಗುವಂತಹದ್ದು, ಶತಾಯುಷಿ ಅಜ್ಜಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ…

Read More

ಗೆದ್ದವರಿಗಷ್ಟೆ ಅಲ್ಲ ಆಸ್ಕರ್ ನಾಮಿನಿಗಳಿಗೆ ಸಿಗಲಿದೆ 3 ಕೋಟಿ ಮೌಲ್ಯದ ಉಡುಗೊರೆಗಳು

ಪ್ರತಿ ವರ್ಷ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇವಲ ಕೆಲವೇ ಕೆಲವು ತಾರೆಗಳು ಮಾತ್ರ ಆಸ್ಕರ್ ಗೆಲ್ಲುತ್ತಾರೆ. ಅವರಿಗೆ ಚಿನ್ನ ಲೇಪಿದ ಮೂರ್ತಿಯ ಜೊತೆಗೆ ನಗದು ಬಹುಮಾನವೂ ಸಿಗುತ್ತದೆ. ಆದರೆ ನಾಮಿನೇಷನ್ ಪಡೆದವರಿಗೆ ಏನೂ ಇಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ನಾಮಿನೇಷನ್ ಹಂತದ ವರೆಗೆ ಬಂದವರಿಗೂ ಸಹ ದೊಡ್ಡ ಉಡುಗೊರೆಯನ್ನು ನೀಡಲಾಗುತ್ತಿದೆ. ಅದೂ ಈ ಉಡುಗೊರೆ ಬಾಸ್ಕೆಟ್​​ನ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳಿದೆ. ಈ ಉಡುಗೊರೆ ಬಾಸ್ಕೆಟ್​​ನಲ್ಲಿ ವಿದೇಶಿ ಪ್ರವಾಸದ ಟಿಕೆಟ್​​ ಜೊತೆಗೆ…

Read More

ಜೀವನಾಂಶ ಕೇಳದೇ ವಿಚ್ಛೇದನ ಪಡೆದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ (Divorce) ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶ (Alimony) ಕೇಳಿಲ್ಲ….

Read More

Video: ಬದುಕು ನಿತ್ಯ ನಿರಂತರ ಹೋರಾಟ; ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ

ತಾಯಿ (mother) ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು ಇಲ್ಲೊಬ್ಬಳು ತಾಯಿ ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಾ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಈ ಆಟೋ ಚಾಲಕಿ ಹೆಸರು ಕೋಮಲ್ ಗಾಯಕ್ವಾಡ್ (Komal Gaikwad) . ಪತಿ ಬಿಟ್ಟು ಹೋದ ಬಳಿಕ ಈ ಮಹಿಳೆಗೆ ಮಗಳೇ ಪ್ರಪಂಚವಾಗಿದ್ದಾಳೆ. ಈ ತಾಯಿಯೊಬ್ಬಳ ಹೋರಾಟದ ಬದುಕಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ…

Read More

ಬೇಸಿಗೆಯಲ್ಲಿ ಬೆವರಿನ ವಾಸನೆಯನ್ನು ಹೋಗಲಾಡಿಸಿ, ದಿನವಿಡೀ ಫ್ರೆಶ್‌ ಆಗಿರಲು ಏನು ಮಾಡಬೇಕು?

ಬೇಸಿಗೆಯಲ್ಲಿ (summer) ನಿರ್ಜಲೀಕರಣ, ಶೆಖೆ, ಕಿರಿಕಿರಿ ಸಮಸ್ಯೆ ಒಂದುಕಡೆಯಾದ್ರೆ, ಇನ್ನೊಂದು ಕಡೆ ವಿಪರೀತ ಬೆವರಿನ ಸಮಸ್ಯೆ. ಹೌದು ಬೇಸಿಗೆಯಲ್ಲಿ ದೇಹ ವಿಪರೀತ ಬೆವರುವ ಕಾರಣ ಮೈ ತುರಿಕೆ, ಬೆವರು ಸಾಲೆಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈ ಬೆವರಿನ ಕಾರಣದಿಂದ ದೇಹದಲ್ಲಿ ದುರ್ವಾಸನೆಯು ಸಹ ಕಾಣಿಸಿಕೊಳ್ಳುತ್ತದೆ. ಈ ಬೆವರಿನ ವಾಸನೆಯಿಂದಾಗಿ ಅನೇಕರು ಮುಜುಗರಕ್ಕೊಳಗಾಗುತ್ತಿರುತ್ತಾರೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಪರ್‌ಫ್ಯೂಮ್‌ ಹಾಕಿದ್ರೂ ಬೆವರಿನ ವಾಸನೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ವಾ? ಹಾಗಿದ್ರೆ ಈ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ…

Read More