ಪತ್ನಿಯರ ಎದುರು ಬಯಲಾಯ್ತು ಸಹೋದರರ ಸವಾಲು; ಗುಟ್ಟು-ರಟ್ಟು – Kannada News | Nandagokula Secret Exposed: Brothers’ Challenge Revealed by Wives TRP leading serial
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಟಿಆರ್ಪಿ ರೇಸ್ನಲ್ಲಿ ಮುಂದಿದೆ. ಈ ಧಾರಾವಾಹಿ ಗಂಭೀರ ವಿಷಯಗಳ ಜೊತೆಗೆ ವೀಕ್ಷಕರಿಗೆ ನಗೆಯ ಹಬ್ಬವನ್ನೇ ಉಣಬಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರೂ ತಪ್ಪಾಗಲಾರದು. ಕೌಟುಂಬಿಕ ಬಾಂಧವ್ಯದ ಜೊತೆಗೆ ಹಾಸ್ಯದ ಎಳೆಯನ್ನು ಬೆರೆಸಿರುವ ಈ ಧಾರಾವಾಹಿಯಲ್ಲಿ, ಕೇಶವ ಮತ್ತು ವಲ್ಲಭನ ನಡುವಿನ ಮಾತುಕತೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇಶವ ಮತ್ತು ಮೀನಾ ಅವರ ಮದುವೆ ಮೀನಾ ತಂದೆಗೆ ಇಷ್ಟವಿರಲಿಲ್ಲ. ದೇವಸ್ಥಾನದಲ್ಲಿ ಸಿಕ್ಕಾಗ ಕೇಶವನನ್ನು ಮೀನಾ ತಂದೆ ‘ಕಿರಾಣಿ ಅಂಗಡಿಯವ’ ಎಂದು ಹೀಯಾಳಿಸಿದ್ದನು….