ಮಾದಪ್ಪನ ಭಕ್ತರೇ ಗಮನಿಸಿ: ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಸಂಬಂಧ ಮಹತ್ವದ ಆದೇಶ – Kannada News | Male Mahadeshwara Hills: Forest Dept Restricts Foot Pilgrimage Due to Wild Animal Attacks
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಸಂಬಂಧ ಮಹತ್ವದ ಆದೇಶ ಚಾಮರಾಜನಗರ, ಮೇ 13: ಕಾಡುಪ್ರಾಣಿಗಳ ಸತತ ದಾಳಿಯಿಂದ ಭಕ್ತರ ಪ್ರಾಣಕ್ಕೆ ಕುತ್ತುಂಟಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ ಸಂಬಂಧ ಮಹತ್ವದ ಆದೇಶವನ್ನು ಅರಣ್ಯ ಇಲಾಖೆ ಹೊರಡಿಸಿದೆ. ಜಾತ್ರೆ ಸಂದರ್ಭ ಹೊರತುಪಡಿಸಿ ಉಳಿದ ಸಾಮಾನ್ಯ ದಿನಗಳಲ್ಲಿ ಪಾದಯಾತ್ರೆಗೆ ಬ್ರೇಕ್ ಹಾಕಲಾಗಿದ್ದು, ಬಸ್ಗಳಲ್ಲಿಯೇ ಭಕ್ತರು ತೆರಳಬೇಕೆಂದು ಸೂಚಿಸಲಾಗಿದೆ. ಆ ಮೂಲಕ ಮಾನವ – ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ಮುಖ್ಯಾಂಶಗಳು…