ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ,ಬೆಡ್‌ಶೀಟ್‌ ಅಧಿಕಾರಿ ಮನೆಯಲ್ಲಿ: ಲೋಕಾಯುಕ್ತ ಶಾಕ್

Source link

2 ವರ್ಷದ ಮಗುವಿಗೆ ಬಂತು ಮಾರಕ ಕಾಯಿಲೆ! ನೆರವಿನ ಭರವಸೆ ನೀಡಿದ ಕೇಂದ್ರ ಸಚಿವ ಹೆಚ್​ಡಿಕೆ

ಮಂಡ್ಯ, ಮಾರ್ಚ್​ 07: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿಗೆ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸಹಾಯದ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದ ಎರಡು ವರ್ಷದ ಸಾಯಿ ಚಿರಾಗ್ ಎಂಬ ಮಗು ಎಸ್‌ಎಂಎ (Spinal Muscular Atrophy) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ.

ಮಗುವಿನ ಪೋಷಕರಾದ ಚೇತನ್ ಮತ್ತು ಭಾರ್ಗವಿ ದಂಪತಿ ಮಂಡ್ಯದ ವಿಸಿ ಫಾರಂನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 16 ಕೋಟಿ ರೂಪಾಯಿ ಅಗತ್ಯವಿದ್ದು, ವಿದೇಶಗಳಿಂದ ಸುಮಾರು 1.75 ಕೋಟಿ ರೂಪಾಯಿ ನೆರವು ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ (PM Fund) ಮೂಲಕ ಸಹಾಯ ದೊರಕುವಂತೆ ಪ್ರಯತ್ನಿಸಲಾಗುತ್ತದೆ. ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಹೇಳಿದ್ದಾರೆ.

ಎಸ್‌ಎಂಎ ಮಾರಕವೇ?

ಇದೊಂದು ಅಪರೂಪದ ಜಿನೆಟಿಕ್ ಕಾಯಿಲೆಯಾಗಿದ್ದು, ಇದು ಮಕ್ಕಳ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಈ ಕಾಯಿಲೆ ನರಮಂಡಲದ ಮೇಲೆ ಪರಿಣಾಮ ಬೀರಿ ಮಕ್ಕಳಲ್ಲಿ ಕೈ-ಕಾಲುಗಳ ಚಲನೆ ನಿಧಾನವಾಗಿ ಕುಂದುತ್ತ ಹೋಗುವಂತೆ ಮಾಡುತ್ತದೆ. ಚಿಕಿತ್ಸೆ ಸಿಗದಿದ್ದರೆ ಮಗು ನಡೆಯುವುದು, ಕುಳಿತುಕೊಳ್ಳುವುದು ಅಥವಾ ಉಸಿರಾಟಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಗ್ರಾಮೀಣ ಮಕ್ಕಳಿಗಾಗಿ ಕೇಂದ್ರದ ಗಿಫ್ಟ್: ಮಂಡ್ಯದಲ್ಲಿ ತಲೆಯೆತ್ತಲಿದೆ ಅತಿ ದೊಡ್ಡ ಸ್ಫೋರ್ಟ್ಸ್​ ಕಾಂಪ್ಲೆಕ್ಸ್​

ಸಾಯಿ ಚಿರಾಗ್‌ ಮಗುವಿಗೆ ಈಗಾಗಲೇ ಕಾಲುಗಳಲ್ಲಿ ಆರಂಭವಾದ ನಿಶಕ್ತಿ ನಿಧಾನವಾಗಿ ದೇಹದ ಮೇಲ್ಭಾಗಕ್ಕೂ ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ಸೋಂಕು ಸೊಂಟದವರೆಗೂ ತಲುಪಿದ್ದು, ಮುಂದಿನ ಆರು ತಿಂಗಳೊಳಗೆ ಚಿಕಿತ್ಸೆ ನೀಡದಿದ್ದರೆ ದೇಹಪೂರ್ತಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಮಗು ವಿಕಲಚೇತನನಾಗುವ ಭೀತಿ ವ್ಯಕ್ತವಾಗಿದ್ದು, ತಕ್ಷಣ ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Women’s Day 2026 ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆ ನೀಡುವ ಮೂಲಕ ವುಮೆನ್ಸ್‌ ಡೇಯನ್ನು ವಿಶೇಷವಾಗಿ ಆಚರಿಸಿ

ಮಹಿಳೆಯರ (Women’s) ಸಾಧನೆಗಳನ್ನು ಗೌರವಿಸಲು, ಮನೆ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಆಕೆಯ ತ್ಯಾಗ, ಪರಿಶ್ರಮವನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 8 ರಂದು  ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇಂತಹ ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಬಾಳಿನಲ್ಲಿ ವಿಶೇಷ ಸ್ಥಾನ ಪಡೆದ ಸ್ಪೆಷಲ್‌ ಮಹಿಳೆಗೆ ಸರ್‌ಪ್ರೈಸ್‌ ಉಡುಗೊರೆ ನೀಡುವ ಮೂಲಕ ನಿಮಗಾಗಿ ಆಕೆ ಮಾಡಿದ  ತ್ಯಾಗ, ಪರಿಶ್ರಮಕ್ಕೊಂದು ಥ್ಯಾಂಕ್ಸ್‌ ಹೇಳಬಹುದು. ಜೊತೆಗೆ ಆಕೆಯ ಮೊಗದಲ್ಲಿ ನಗು ಮೂಡಿಸಬಹುದು. ಹಾಗಾಗಿ ನಿಮ್ಮ ನೆಚ್ಚಿನ ಮಹಿಳೆಗೆ ಈ ಕೆಲವೊಂದು ಗಿಫ್ಟ್‌ಗಳನ್ನು ನೀಡುವ ಮೂಲಕ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿ.

ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆಗಳನ್ನು ನೀಡಿ:

ಹ್ಯಾಂಡ್‌ಬ್ಯಾಗ್‌: ನಿಮ್ಮ ತಾಯಿ, ಸಹೋದರಿ ಅಥವಾ ಹೆಂಡತಿ ಫ್ಯಾಷನ್ ಪ್ರಿಯರಾಗಿದ್ದರೆ ಅವರಿಗೆ ಸುಂದರವಾದ ಮತ್ತು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಉಡುಗೊರೆಯಾಗಿ ನೀಡಬಹುದು. ಅಲ್ಲದೆ ಸೀರೆ, ಬಟ್ಟೆಗಳನ್ನು ಕೂಡ ಗಿಫ್ಟ್‌ ಮಾಡಬಹುದು. ಖಂಡಿತವಾಗಿಯೂ ಈ ಗಿಫ್ಟ್‌ಗಳನ್ನು ಅವರು ಇಷ್ಟಪಡುತ್ತಾರೆ.

ವಾಚ್:‌ ಹೆಚ್ಚಿನ ಮಹಿಳೆಯರಿಗೆ ವಾಚ್‌ಗಳೆಂದರೆ ಸಖತ್‌ ಇಷ್ಟ. ಹೀಗಿರುವಾಗಿ ನಿಮ್ಮ ಜೀವನದ ಸ್ಪೆಷಲ್‌ ಮಹಿಳೆಗೆ ಮಹಿಳಾ ದಿನದಂದು ಸುಂದರವಾದ ವಾಚ್‌ ಒಂದನ್ನು ಉಡುಗೊರೆಯಾಗಿ ನೀಡಬಹುದು.

ಫೋಟೋ ಫ್ರೇಮ್:‌ ನೆನಪುಗಳಿಗಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಕುಟುಂಬದ ಫೋಟೋಗಳು ಮತ್ತು ಒಟ್ಟಿಗೆ ಕಳೆದ ವಿಶೇಷ ಕ್ಷಣಗಳ ಸುಂದರವಾದ ಫೋಟೋಗಳಿಗೆ  ಫ್ರೇಮ್ ಆಕಿ ಅದನ್ನು ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆ ನಿಮ್ಮ ಬಾಳಿನ ಸ್ಪೆಷಲ್‌ ಮಹಿಳೆಯ ಮುಖದಲ್ಲಿ ನಗು ಮೂಡಿಸುವುದು ಖಚಿತ.

ಮೇಕಪ್‌ ಕಿಟ್‌, ಸ್ಕಿನ್‌ಕೇರ್‌ ಉತ್ಪನ್ನ: ನಿಮ್ಮ ಸಂಗಾತಿ ಅಥವಾ ಸಹೋದರಿ ಮೇಕಪ್ ಇಷ್ಟಪಟ್ಟರೆ, ನೀವು ಅವರಿಗೆ ಬ್ಯೂಟಿ ಹ್ಯಾಂಪರ್ , ಸ್ಕಿನ್‌ ಕೇರ್‌ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬಹುದು.

ಪುಸ್ತಕ: ನಿಮ್ಮ ಜೀವನದಲ್ಲಿನ ವಿಶೇಷ ಮಹಿಳೆ ಪುಸ್ತಕಗಳನ್ನು ಓದಲು ಇಷ್ಟಪಟ್ಟರೆ, ಅವಳಿಗೆ ಒಳ್ಳೆಯ ಪುಸ್ತಕವನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಈ ಉಡುಗೊರೆ ಅವಳಿಗೆ ತುಂಬಾ ವಿಶೇಷವಾಗಿರುತ್ತದೆ.

ಗಿಡಗಳು: ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಗಿಡಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಒಂದಷ್ಟು ಗಿಡಗಳನ್ನು ಉಡುಗೊರೆ ನೀಡುವ ಮೂಲಕ ಆಕೆಯ ದಿನವನ್ನು ವಿಶೇಷವಾಗಿ ಆಚರಿಸಿ.

ಇದನ್ನೂ ಓದಿ: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ

ವಿಶೇಷ ಭೋಜನ ಕೂಟ ಆಯೋಜಿಸಿ: ನಿಮಗಾಗಿ ಎಲ್ಲವನ್ನು ಮಾಡುವ ನಿಮ್ಮ ನೆಚ್ಚಿನ ಮಹಿಳೆಯನ್ನು ರೆಸ್ಟೋರೆಂಟ್‌ಗೋ ಅಥವಾ ಟ್ರಿಪ್‌ ಗೋ ಕರೆದೊಯ್ಯಿರಿ. ಹೌದು ಏನನ್ನೂ ನಿರೀಕ್ಷಿಸದೆ ನಿಮಗಾಗಿ ಎಲ್ಲವನ್ನೂ ಮಾಡುವ ನಿಮ್ಮ ನೆಚ್ಚಿನ ಮಹಿಳೆಗೆ ಸ್ವಲ್ಪ ವಿಶ್ರಾಂತಿ ನೀಡಿ ಆಕೆಯನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಿ. ಖಂಡಿತವಾಗಿಯೂ ಈ ಸರ್‌ಪ್ರೈಸ್‌ ಗಿಫ್ಟ್‌ ಅನ್ನು ಆಕೆ ಇಷ್ಟಪಡುತ್ತಾಳೆ.

ಮನೆಕೆಲಸಗಳನ್ನು ಮಾಡಿ: ಮಹಿಳಾ ದಿನದಂದು ನೀವು ನಿಮ್ಮ ತಾಯಿ, ಸಂಗಾತಿಗೆ ನೀಡಬಹುದಾದ ಅತ್ಯಂತ ವಿಶೇಷ ಉಡುಗೊರೆ ಎಂದರೆ ವಿಶ್ರಾಂತಿ ದಿನ. ಹೌದು ಈ ದಿನ ಅವರಿಗೆ ವಿಶ್ರಾಂತಿ ಕೊಟ್ಟು ನೀವು ಮನೆಕೆಲಸಗಳನ್ನು ಮಾಡಿ, ಅವರಿಗಾಗಿ ಸ್ಪೆಷಲ್‌ ಅಡುಗೆಯನ್ನು ಮಾಡಿ, ಈ ವಿಶೇಷ ಉಡುಗೊರೆ ಸಣ್ಣದಾಗಿದ್ದರೂ, ಅವರಿಗೆ ಸಾಕಷ್ಟು ಖುಷಿಯನ್ನು ನೀಡುವುದು ಖಂಡಿತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾಕ್ಕೆ ಹೋದರೆ ಪಾರ್ಕಿಂಗ್​​ಗೆ ಹಣ ಕೊಡಬೇಕಿಲ್ಲ: ಹೈಕೋರ್ಟ್ ಆದೇಶ

ಸಿನಿಮಾ (Cinema) ವೀಕ್ಷಣೆಗೆ ಖರ್ಚಾಗುವ ಮೊತ್ತ ಹೆಚ್ಚಾಗಿದೆ ಎಂದು ಸಿನಿಮಾ ನಿರ್ಮಾಪಕರು, ವಿತಕರು ಮುಖ್ಯವಾಗಿ ಪ್ರೇಕ್ಷಕರು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಸಿನಿಮಾ ಟಿಕೆಟ್ ದರ, ಚಿತ್ರಮಂದಿರದಲ್ಲಿ ಸಿಗುವ ಪಾಪ್​​ಕಾರ್ನ್ , ಪೆಟ್ರೋಲ್-ಡೀಸೆಲ್ ದರ ಹೆಚ್ಚಾಗಿ ಪ್ರಯಾಣದ ಮೊತ್ತ ಹೆಚ್ಚಾಗಿದೆ. ಇದೆಲ್ಲದರ ಜೊತೆಗೆ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಸಹ ನೀಡಬೇಕಿದೆ. ಆದರೆ ಈ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದಲೂ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಸಿನಿಮಾ ಟಿಕೆಟ್ ಖರೀದಿ ಮಾಡಿದಾಗಲೇ ಚಿತ್ರಮಂದಿರದ ಅಥವಾ ಮಲ್ಟಿಪ್ಲೆಕ್ಸ್​ನ ಗ್ರಾಹಕ ಆಗಿರುವ ಪ್ರೇಕ್ಷಕನಿಗೆ ಪಾರ್ಕಿಂಗ್ ಅನ್ನು ಉಚಿತವಾಗಿ ಅಥವಾ ಸೇವೆಯ ರೂಪದಲ್ಲಿ ಕೊಡಬೇಕು ಎಂಬ ವಾದ ಇತ್ತು. ಇದೀಗ ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಇನ್ನು ಮುಂದೆ ಸಿನಿಮಾ ನೋಡಲು ಹೋದ ಪ್ರೇಕ್ಷಕನಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್​​ನಲ್ಲಿ ಯಾವುದೇ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ. ಆದರೆ ಇದು ಸದ್ಯಕ್ಕೆ ಕರ್ನಾಟಕದಲ್ಲಿ ಜಾರಿಯಲ್ಲಿಲ್ಲ. ಇದು ಜಾರಿಯಲ್ಲಿರುವುದು ತೆಲಂಗಾಣದಲ್ಲಿ ಮಾತ್ರ. ಆರಂಭದಲ್ಲಿ ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತಿತ್ತು. ಬಳಿಕ ಸರ್ಕಾರವು ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್​​ಗಳೆರಡರಲ್ಲೂ ಸಹ ಸಿನಿಮಾ ನೋಡಲು ಬಂದವರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶಿಸಿತು.

ಆದರೆ ಕೋವಿಡ್ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಸರ್ಕಾರವನ್ನು ಮನವಿ ಮಾಡಿ, ಆದೇಶದಿಂದ ವಿನಾಯಿತಿ ಪಡೆದರು. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ವಿನಾಯಿತಿ ಚಾಲ್ತಿಯಲ್ಲಿತ್ತು. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಈ ಸಂಬಂಧ ಸಲ್ಲಿಕೆ ಆಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ ಎರಡರಲ್ಲೂ ಸಿನಿಮಾ ನೋಡಲು ಬಂದ ಪ್ರೇಕ್ಷಕನಿಂದ ಕಡ್ಡಾಯವಾಗಿ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎಂದಿದೆ. ಆ ಮೂಲಕ ಈ ಹಿಂದಿನ ಸರ್ಕಾರಿ ಆದೇಶವನ್ನು ರದ್ದು ಮಾಡಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಟ್ರೇಲರ್ ಚೆನ್ನಾಗಿದ್ದರೂ ಅಭಿಮಾನಿಗಳಿಗೆ ಕಾಣ್ತಿದೆ ಕೊರತೆ

ಕರ್ನಾಟಕದಲ್ಲಿ ಈ ನಿಯಮ ಜಾರಿಯಲ್ಲಿಲ್ಲ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡಲು ಹೋದರೆ ಪಾರ್ಕಿಂಗ್ ಶುಲ್ಕ ಭರಿಸುವುದು ಕಡ್ಡಾಯ ಆಗಿದೆ. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ಗಂಟೆಗೆ 80 ರಿಂದ 100 ರೂಪಾಯಿ ಸಹ ವಸೂಲಿ ಮಾಡಲಾಗುತ್ತದೆ. ಅಲ್ಲಿಗೆ ಒಂದು ಸಿನಿಮಾ ನೋಡಿ ಮರಳುವಷ್ಟರಲ್ಲಿ ಪಾರ್ಕಿಂಗ್ ಶುಲ್ಕವೇ ಸುಮಾರು 200-300 ಆಗಿರುತ್ತದೆ. ತೆಲಂಗಾಣ ರೀತಿಯ ನಿಯಮ ಕರ್ನಾಟಕದಲ್ಲಿಯೂ ಜಾರಿಗೆ ಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ತುಮಕೂರು, (ಮಾರ್ಚ್ 07): ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು (Tumakuru) ತಾಲ್ಲೂಕಿನ ಹೆಬ್ಬೂರು ಹೊಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ (Paramesh Murder Case) ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹೌದು.. ಪರಮೇಶ್ ಮೃತಪಟ್ಟು ಇನ್ನು ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ ಕೇವಲ 20 ದಿನಕ್ಕೆ ಪತ್ನಿ ಆಶಾ ಇನ್ನೊಂದು ಮದುವೆಯಾಗಿದ್ದೇ ಪರಮೇಶನ ಸಾವಿನ ರಹಸ್ಯ ಬಟಾಬಯಲಾಗಿದೆ. ಅದಾಗಲೇ ಎರಡು ಮದ್ವೆಯಾಗಿದ್ದ ಆಶಾಗೆ ಮೂರನೇ ಮದುವೆ ಆಸೆಗೆ ಬಿದ್ದು ಇದೀಗ ಜೈಲು ಸೇರಿದ್ದಾಳೆ.

ಕೊಲೆ ರಹಸ್ಯ ಬಯಲಿಗೆ ಬಂಂದಿದ್ಹೇಗೆ?

ತುಮಕೂರು ತಾಲೂಕಿನ ಹೆಬ್ಬೂರಿನ ದಾಸರಹಳ್ಳಿ ನಿವಾಸಿ ಮೃತ ಪರಮೇಶ್ , ಆಶಾಳನ್ನ ಎರಡನೇ ಮದುವೆ ಆಗಿದ್ದ. ಮಾಗಡಿ ಮೂಲದ ಆಶಾ ಗಂಡ ಸತ್ತ ಬಳಿಕ ಪರಮೇಶ್​ನ 2ನೇ ಪತಿ ಆಗಿ ಸ್ವೀಕರಿಸಿ 10 ವರ್ಷ ಸಂಸಾರ ಮಾಡಿದ್ದಳು. ಆದ್ರೆ ಜನವರಿ 30ರಂದು ಪರಮೇಶ್ ಮೃತಪಟ್ಟಿದ್ದ. ಹಾರ್ಟ್ ಅಟ್ಯಾಕ್ ಆಗಿದೆ ಎಂದು ಆಶಾ ತರಾತುರಿಯಲ್ಲಿ ಗಂಡನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಳು. ಪರಮೇಶ್ ಸತ್ತಾಗ ಯಾರೊಬ್ಬರಿಗೂ ಸಣ್ಣ ಅನುಮಾನ ಬಂದಿರಲಿಲ್ಲ. ಆದ್ರೆ ಗಂಡ ಸತ್ತ ಇಪ್ಪತ್ತೇ ದಿನಕ್ಕೆ ಆಶಾ 3ನೇ ಮದ್ವೆ ಆಗಿದ್ದಳು. ಆಗಲೇ ನೋಡಿ ಮೃತ ಪರಮೇಶ್ ಸಂಬಂಧಿಕರಿಗೆ ಸೊಸೆ ಮೇಲೆ ಅನುಮಾನ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲರ್ಟ್ ಆದ ಹೆಬ್ಬೂರು ಪೊಲೀಸ್ರು ತನಿಖೆ ಕೈಗೊಳ್ಳುತ್ತಿದ್ದಂತೆಯೇ ಪರಮೇಶ್ ಕೊಲೆ ಸತ್ಯ ಬಯಲಾಗಿದೆ. ನಿನ್ನ ಗಂಡನನ್ನು ಯಾಕೆ ಹತ್ಯೆ ಮಾಡಿದೆ ತಾಯಿ ಅಂತಿದ್ದಂತೆ ಆಕೆ ಚಂದ್ರಪ್ಪನ ಜೊತೆಗಿನ ಪ್ರಣಯ ಪ್ರಸಂಗ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಮತ್ತೊಬ್ಬನ ಮೇಲಿನ ಆಸೆಗೆ ಗಂಡನನ್ನು ಕೊಂದ್ಲು

ಈ ಸ್ಟೋರಿಯಲ್ಲಿ ಅಸಲಿ ಟ್ವಿಸ್ಟ್ ಇನ್ನೂ ಇದೆ. ಗಂಡನನ್ನೇ ಕೊಂದ ಖತರ್ನಾಕ್ ಆಶಾ, ಚಂದ್ರಪ್ಪ ಎಂಬಾತನ ಮೋಡಿಗೆ ಮರುಳಾಗಿದ್ದಳು. ಕುಣಿಗಲ್ ಮೂಲದ ಚಂದ್ರಪ್ಪ ತನ್ನ ಮೊದಲ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದ. ಗಂಡನ ಕಾಟ ತಾಳದೆ ಪತ್ನಿ ನೇಣಿಗೆ ಕೊರಳೊಡ್ಡಿದ್ದಳು. ಇದೇ ಕೇಸಲ್ಲಿ ಜೈಲಿನಲ್ಲಿ ಕಂಬಿ ಎಣಿಸಿ ಬಂದಿದ್ದ ಚಂದ್ರಪ್ಪ, ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.ಈ ಗ್ಯಾಪ್​​​ನಲ್ಲಿ ಆಶಾ ಹಾಗೂ ಚಂದ್ರಪ್ಪನ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಬಳಿಕ ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ, ತನ್ನ 2ನೇ ಗಂಡ ಇದ್ದರೆ 3ನೇ ಮದುವೆ ಆಗಲು ಆಗಲ್ಲ ಎಂದು ಪ್ಲ್ಯಾನ್ ಮಾಡಿದ್ದ ಆಶಾ, ಉಸಿರುಗಟ್ಟಿಸಿ ಪರಮೇಶ್​ನ ಕಥೆ ಮುಗಿಸಿದ್ದಳು.

ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಳು. ಇದನ್ನು ಎಲ್ಲರೂ ಸಹ ನಂಬಿ ಕಣ್ಣೀರಿಡುತ್ತ ಪರಮೇಶನ ಅಂತ್ಯಕ್ರಿಯೆ ಮಾಡಿ ಮುಸಿಗಿದ್ದರು. ಇದಾಗಿ ಕೇವಲ ಇಪ್ಪತ್ತೇ ದಿನಕ್ಕೆ ಆಶಾ, ಪ್ರಿಯಕರ ಚಂದ್ರಪ್ಪನನ್ನು ಮದುವೆಯಾಗಿ ಹನಿಮೂನ್​ಗೆ ಹೊರಟಿದ್ದಳು. ಆದ್ರೆ ಏನು ಮಾಡುವುದು ಗ್ರಹಚಾರ ಕೆಟ್ಟು ಈಗ ಇಬ್ಬರೂ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಸಿಸಿ ನಾಕೌಟ್‌ಗಳಲ್ಲಿ ಭಾರತ- ಕಿವೀಸ್ ಎಷ್ಟು ಬಾರಿ ಮುಖಾಮುಖಿಯಾಗಿವೆ? ಯಾರದ್ದು ಮೇಲುಗೈ?

Source link

63,00,00,00,000 ರೂ.: ಅಬ್ಬಾಬ್ಬ ಸುಂದರ್ ಪಿಚೈ ವೇತನದಲ್ಲಿ ಮತ್ತೆ ಏರಿಕೆ

ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ ತನ್ನ ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ ಮೂರು ವರ್ಷಗಳ ಕಾಲ ಒಟ್ಟು $692 ಮಿಲಿಯನ್ (ಸುಮಾರು 63,617 ಕೋಟಿ ರೂ) ಸಂಭಾವನೆಯನ್ನು ಘೋಷಿಸಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದ ಮತ್ತು ಸ್ವಾಯತ್ತ ತಂತ್ರಜ್ಞಾನದಲ್ಲಿ (Autonomous Ventures) ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ಈ ಭಾರಿ ಮೊತ್ತವನ್ನು ನೀಡಲಾಗುತ್ತಿದೆ.

$126 ಮಿಲಿಯನ್ ಮೌಲ್ಯದ ಪರ್ಫಾರ್ಮೆನ್ಸ್ ಸ್ಟಾಕ್ ಯೂನಿಟ್‌ಗಳನ್ನು ನೀಡಲಾಗಿದ್ದು, ಗುರಿ ಮೀರಿದರೆ ಇದು $252 ಮಿಲಿಯನ್ ವರೆಗೆ ಏರಿಕೆಯಾಗಬಹುದು.ಪಿಚೈ ಅವರ ನೇತೃತ್ವದ ವೇಮೋ (Waymo) ಸ್ಟಾಕ್‌ನಲ್ಲಿ $130 ಮಿಲಿಯನ್ (11,951,628,000) ಮತ್ತು ವಿಂಗ್ ಏವಿಯೇಷನ್ (Wing) ಶೇರುಗಳಲ್ಲಿ $45 ಮಿಲಿಯನ್ (4,13,71,02,000.00) ಬೋನಸ್ ಸೇರಿದೆ. ಇವುಗಳ ಮೌಲ್ಯವೂ 200% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ವಾರ್ಷಿಕ $2 ಮಿಲಿಯನ್ (18,38,71,200) ವೇತನದ ಜೊತೆಗೆ, ಪ್ರತಿ ತಿಂಗಳು ವೆಸ್ಟ್ ಆಗುವ $84 ಮಿಲಿಯನ್ (91,935.60) ಮೌಲ್ಯದ ರೆಸ್ಟ್ರಿಕ್ಟೆಡ್ ಸ್ಟಾಕ್ ಕೂಡ ಪ್ಯಾಕೇಜ್‌ನ ಭಾಗವಾಗಿದೆ. 2015ರಲ್ಲಿ ಪಿಚೈ ಸಿಇಒ ಆದಾಗ ಗೂಗಲ್ ಮೌಲ್ಯ $535 ಬಿಲಿಯನ್ ಇತ್ತು. ಇಂದು ಅದು ಸುಮಾರು $3.6 ಟ್ರಿಲಿಯನ್ (₹300 ಲಕ್ಷ ಕೋಟಿಗೂ ಅಧಿಕ) ತಲುಪಿದೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಸುಂದರ್ ಪಿಚೈ ಮತ್ತು ಅವರ ಪತ್ನಿ ಒಟ್ಟು 1.67 ಮಿಲಿಯನ್ ಗೂಗಲ್ ಶೇರುಗಳನ್ನು ಹೊಂದಿದ್ದು, ಅದರ ಮೌಲ್ಯ ಸರಿಸುಮಾರು $498 ಮಿಲಿಯನ್ (₹4,500 ಕೋಟಿಗೂ ಅಧಿಕ) ಆಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್; ರೈತರ ಕೈ ಸೇರಲಿದೆ ಲಾಭದ ಹಣ!

ಚಿಕ್ಕಬಳ್ಳಾಪುರ, ಮಾರ್ಚ್​ 07: ನಂದಿನಿ ಉತ್ಪನ್ನಗಳಿಗೆ (Nandini Products) ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಚಿಮುಲ್) ಉತ್ತಮ ಲಾಭ ಗಳಿಸಿದ್ದು, ಅದರ ಲಾಭವನ್ನು ರೈತರಿಗೆ ಹಂಚಲು ಮುಂದಾಗಿದೆ. ಮುಂದಿನ ಮೇ ತಿಂಗಳವರೆಗೆ ಚಿಮುಲ್ ಪ್ರತಿ ಲೀಟರ್​ಗೆ ಹೆಚ್ಚಿನ ದರ ನೀಡುವ ಮೂಲಕ ರೈತರಿಗೆ ಶುಭ ಸುದ್ದಿ ನೀಡಿದೆ.

ಒಂದು ಲೀಟರ್​ಗೆ ಒಂದೂವರೆ ರೂ. ಹೆಚ್ಚಳ!

ಚಿಮುಲ್ ಪ್ರಸ್ತುತ ಸುಮಾರು 2 ಕೋಟಿ ರೂಪಾಯಿ ಲಾಭದಲ್ಲಿದ್ದು, ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿನ ಮೇಲೆ 1.50 ರೂಪಾಯಿ ಹೆಚ್ಚುವರಿ ದರ ನೀಡಲು ನಿರ್ಧರಿಸಲಾಗಿದೆ. ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ಟಿವಿ9 ಜೊತೆ ಮಾತನಾಡಿ, ಈ ಹೆಚ್ಚುವರಿ ದರವನ್ನು ಮುಂದಿನ ಮೇ ತಿಂಗಳವರೆಗೆ ರೈತರಿಗೆ ನೀಡಲಾಗುತ್ತದೆ. ಈಗಾಗಲೇ ಒಕ್ಕೂಟದಿಂದ ಪ್ರತಿ ಲೀಟರ್ ಹಾಲಿಗೆ 36 ರೂಪಾಯಿ 90 ಪೈಸೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರದ 5 ರೂಪಾಯಿ ಸಬ್ಸಿಡಿ ಸೇರಿ ಒಟ್ಟು 41 ರೂಪಾಯಿ 90 ಪೈಸೆ ರೈತರಿಗೆ ಸಂದಾಯವಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್‌ ಬರುತ್ತಾ? ಅಂತೆ-ಕಂತೆಗಳಿಗೆ ಕೆಎಂಎಫ್‌ ಎಂಡಿ ಸ್ಪಷ್ಟನೆ

ರಾಜ್ಯದಲ್ಲೇ ಅತಿ ಹೆಚ್ಚು ಹಾಲಿನ ದರ ನೀಡುತ್ತಿರುವ ಒಕ್ಕೂಟಗಳಲ್ಲಿ ಚಿಮುಲ್ ಕೂಡ ಒಂದಾಗಿದೆ. ಈಗ ಹೆಚ್ಚುವರಿ 1.50 ರೂಪಾಯಿ ನೀಡುವ ನಿರ್ಧಾರದಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ಪರಾಭವ ನಾಮ ಸಂವತ್ಸರ ಮೇಷ ರಾಶಿಯವರಿಗೆ ಬಹಳ ಅನುಕೂಲಕರವಾದ ವರ್ಷವಾಗಿದೆ. ಕುಜನು ರಾಜನಾಗಿ ಮಂತ್ರಿಯಾಗಿರುವುದರಿಂದ ಸಾಕಷ್ಟು ಅದೃಷ್ಟಗಳು ಕೂಡಿಬರಲಿವೆ. ಗುರು ಗ್ರಹವು 3ರಿಂದ 4ಕ್ಕೆ ಮತ್ತು ಅಕ್ಟೋಬರ್‌ನಲ್ಲಿ 5ನೇ ಮನೆಗೆ ಸಾಗುವುದು ಶುಭಕರ. ರಾಹು 11ನೇ ಮನೆಯಲ್ಲಿ ಬಹಳಷ್ಟು ಶುಭಗಳನ್ನು ತರಲಿದ್ದಾನೆ.

ಆರ್ಥಿಕವಾಗಿ ಆದಾಯ ಉತ್ತಮವಾಗಿದ್ದರೂ, ಖರ್ಚುಗಳ ಮೇಲೆ ನಿಗಾ ವಹಿಸುವುದು ಅಗತ್ಯ. ಸಾಡೇಸಾತಿ ಇದ್ದರೂ ಅದರ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ, ವ್ಯವಹಾರಗಳಲ್ಲಿ ಮತ್ತು ಮನೆ ಕಟ್ಟುವ ಯೋಗದಲ್ಲಿ ಶುಭಫಲಗಳಿವೆ. ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ದೀಪಾವಳಿಯ ನಂತರ ಭೂಮಿ ಖರೀದಿ ಮತ್ತು ಹೊಸ ವ್ಯಾಪಾರ ಯೋಗವಿದೆ. ವಿಷ್ಣು ಸಹಸ್ರನಾಮ ಪಠನೆ ಮತ್ತು “ಓಂ ನಮೋ ಭಗವತೇ ವಾಸುದೇವಾಯ” ಮಂತ್ರ ಜಪಿಸುವುದು ಉತ್ತಮ. ಈ ವರ್ಷ ಮೇಷ ರಾಶಿಯವರಿಗೆ ಒಟ್ಟಾರೆಯಾಗಿ ಶೇ. 60ರಷ್ಟು ಶುಭಫಲಗಳಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ಮದುವೆ ಆದರು. ಈ ವಿವಾಹದ ಬಳಿಕ ಅವರು ವಿವಿಧ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಮದುವೆ ಆದ ಬಳಿಕ ರಶ್ಮಿಕಾ ಮಂದಣ್ಣಗೆ ಗುಡ್ ನ್ಯೂಸ್ ಸಿಕ್ಕಿದೆ. ತೆಲಂಗಾಣ ಸರ್ಕಾರ ‘2025ರ ಗದ್ದರ್ ಫಿಲ್ಮ್ ಅವಾರ್ಡ್’ ಸಿಕ್ಕಿದೆ. ‘ಗರ್ಲ್​​ಫ್ರೆಂಡ್’ ಚಿತ್ರದ ನಟನೆಗೆ ಈ ಅವಾರ್ಡ್ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ಮದುವೆ ಆದರು. ಉದಯಪುರದಲ್ಲಿ ಈ ವಿವಾಹ ನಡೆಯಿತು. ಫೆಬ್ರವರಿ 4ರಂದು ಇವರ ಆರತಕ್ಷತೆ ನಡೆದಿದೆ. ವಿವಾಹ ಆದ ಒಂದೇ ವಾರಕ್ಕೆ ರಶ್ಮಿಕಾಗೆ ಗುಡ್​ ನ್ಯೂಸ್ ಸಿಕ್ಕಿದೆ. ಅವರಿಗೆ ತೆಲಂಗಾಣ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ‘ಗರ್ಲ್​​ಫ್ರೆಂಡ್’ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಯಿತು. ಈ ಚಿತ್ರ ಗಮನ ಸೆಳೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

‘ಥಂಡೇಲ್’ ಸಿನಿಮಾದ ನಟನೆಗೆ ನಾಗ ಚೈತನ್ಯ ಅವರಿಗೆ ಅತ್ಯುತ್ತಮ ಅವಾರ್ಡ್ ಸಿಕ್ಕಿದೆ. ‘ರಾಜು ವೆಡ್ಸ್ ರಾಂಬಾಯಿ’ ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ಸಿಕ್ಕಿದೆ. ಶಿವಾಜಿ ಅವರು ಅತ್ಯುತ್ತಮ ಪೋಷಕ ನಟನ ಪಾತ್ರ ಮಾಡಿದ್ದಾರೆ. ಭೂಮಿಕಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. ಎನ್​ಟಿಆರ್ ನ್ಯಾಷನಲ್ ಫಿಲ್ಮ್ ಅವಾರ್ಡ್ ಪ್ರಶಸ್ತಿ ಚಿರಂಜೀವಿಗೆ ಸಿಕ್ಕಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಕಾರ್ಯಕ್ರಮದ ಸುಂದರ ಫೋಟೋಸ್

ರಶ್ಮಿಕಾ ಮಂದಣ್ಣ ಅವರು ವಿವಿಧ ರೀತಿಯ ಸಿನಿಮಾಗನ್ನು ಒಪ್ಪಿ ನಟಿಸುತ್ತಿದ್ದಾರೆ. ಎಲ್ಲಾ ಸಿನಿಮಾಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರ ನಟನೆಯ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಸ್ಟಾರ್ ಕಲಾವಿದರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಸ್ಟೇಟ್ ಅವಾರ್ಡ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version