ಜಬಲ್ಪುರ ದೋಣಿ ದುರಂತ, 13ಕ್ಕೇರಿದ ಸಾವಿನ ಸಂಖ್ಯೆ, ಚಿಕ್ಕಪ್ಪ-ಮಗುವಿನ ಶವ ಪತ್ತೆ – Kannada News | Final Body Recovered in Jabalpur Boat Incident, Toll Reaches 13
ಜಬಲ್ಪುರ, ಮೇ 03: ಮಧ್ಯಪ್ರದೇಶದ ಜಬಲ್ಪುರದಲ್ಲಿ ಸಂಭವಿಸಿದ ಕ್ರೂಸ್ ದೋಣಿ ದುರಂತದ ಕರಾಳತೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ. ಬಾರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಎರಡು ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನು ಖಮರಿಯಾದ ಆರ್ಡನೆನ್ಸ್ ಫ್ಯಾಕ್ಟರಿಯ ಉದ್ಯೋಗಿಯ ಮಗ ಮಯೂರಾಮ್ ಮತ್ತು ಆತನ ಚಿಕ್ಕಪ್ಪ 50 ವರ್ಷದ ಕಾಮರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಇವರಿಗಾಗಿ…