NTA ಉನ್ನತ ಅಧಿಕಾರಿಗಳ ಜತೆ ಜೋಶಿ ಸಭೆ: ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಸೂಚನೆ – Kannada News | Education Minister Pralhad Joshi Meeting With Department Secretary and senior officials on matters concerning the National Testing Agenc

ನವದೆಹಲಿ, (ಆಗಸ್ಟ್ 09): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು (ಆಗಸ್ಟ್ 09) ನವದೆಹಲಿಯಲ್ಲಿ NTA ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳಿಸುವ ಕುರಿತು ಸುದೀರ್ಘ ಚರ್ಚೆ ಮಾಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ. ವಿದ್ಯಾರ್ಥಿಗಳ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆಗಳನ್ನು ಆಲಿಸಬೇಕು. ಇದರ ಜೊತೆಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ? – Kannada News | Chanakya Niti: Why do women hide their age and men their salary?

ಮಹಿಳೆಯರ ವಯಸ್ಸು (age) ಕೇಳಬಾರದು, ಪುರುಷರ ಸಂಬಳ ಕೇಳಬಾರದು ಎಂಬ ಮಾತನ್ನು ಕೇಳಿರಬಹುದಲ್ವಾ. ಈ ಪರ್ಸನಲ್‌  ಬಗ್ಗೆ ಅವರುಗಳು ಕೂಡ ರಿವೀಲ್‌ ಕೂಡ ಮಾಡುವುದಿಲ್ಲ. ಹೌದು ಹೆಣ್ಣು ಮಕ್ಕಳು ಯಾವಾಗಲೂ ತಮ್ಮ ವಯಸ್ಸನ್ನು ಕಡಿಮೆ ಹೇಳುತ್ತಾರೆ, ಇಲ್ಲವೇ ನಿಜವಾದ ವಯಸ್ಸನ್ನು ಮರೆ ಮಾಚಲು ಇಷ್ಟಪಡುತ್ತಾರೆ. ಅದೇ ರೀತಿ ಗಂಡು ಮಕ್ಕಳು ಕೂಡ ತಾವೆಷ್ಟು ಸಂಪಾದನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳುವುದಿಲ್ಲ. ಆಚಾರ್ಯ ಚಾಣಕ್ಯರು ಗಂಡು ಮತ್ತು ಹೆಣ್ಣಿನ ಈ ನಡವಳಿಕೆಯ ಹಿಂದಿನ ಕಾರಣವನ್ನು ಬಹಳ ಹಿಂದೆಯೇ ವಿವರಿಸಿದ್ದಾರೆ. ಅದೇ ರೀತಿ ಆದಾಯ ಮತ್ತು ವಯಸ್ಸು ಒಬ್ಬರ ಗೌಪ್ಯ ವಿಷಯವಾಗಿದ್ದು, ಅದನ್ನು ಕೇಳುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.  ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಹೆಣ್ಣಿನ  ವಯಸ್ಸು, ಗಂಡಿನ ಸಂಬಳವನ್ನು ಏಕೆ ಕೇಳಬಾರದು?

ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸ್ವಾರ್ಥವನ್ನು ಮೀರಿ ಇತರರಿಗಾಗಿ ಬದುಕುತ್ತಾರೆ. ಮಹಿಳೆಯರು ತಮ್ಮ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ ಮತ್ತು ಪುರುಷರು ತಮ್ಮ ಕುಟುಂಬದ ಏಳಿಗೆಗಾಗಿ ಹೋರಾಡುತ್ತಾರೆ. ಆದ್ದರಿಂದ, ಅವರ ವಯಸ್ಸು ಮತ್ತು ಆದಾಯದ ಬಗ್ಗೆ ಕೇಳುವುದು ಅವರ ಕೊಡುಗೆಗಳು ಮತ್ತು ಸಮರ್ಪಣೆಗೆ ಅಗೌರವ ತೋರಿದಂತಾಗುತ್ತದೆ.

ಮಹಿಳೆಯರು ತಮ್ಮ ವಯಸ್ಸನ್ನು ಮರೆಮಾಡಲು ಕಾರಣಗಳೇನು?

ಚಾಣಕ್ಯ ನೀತಿಯ ಪ್ರಕಾರ, ಸಮಾಜದಲ್ಲಿ ಗೌರವ ಮತ್ತು ವೈಯಕ್ತಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನದಿಂದಾಗಿ ಮಹಿಳೆಯರು ತಮ್ಮ ವಯಸ್ಸನ್ನು ಬಹಿರಂಗಪಡಿಸುವುದಿಲ್ಲ. ವಯಸ್ಸನ್ನು ಮರೆ ಮಾಡುವುದು ಮದುವೆ ಇತ್ಯಾದಿಗೆ ಸಂಬಂಧಿಸಿ ಸಾಮಾಜಿಕ ಒತ್ತಡ ಅಥವಾ ನೋಟಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಭದ್ರತೆ ಮತ್ತು ಅವಕಾಶಗಳನ್ನು ಕಾಪಾಡಿಕೊಳ್ಳುವುದು ಆಗಿದೆ. ಮಹಿಳೆಯರು ತಮ್ಮ ನಿಜವಾದ ವಯಸ್ಸನ್ನು ಮರೆಮಾಚುವ ಮೂಲಕ ಸಮಾಜದಲ್ಲಿ ತಮ್ಮ ಮೌಲ್ಯ ಮತ್ತು ಸ್ಥಾನವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಮಹಿಳೆಯರ ಜೀವನ ಕುಟುಂಬಕ್ಕೆ ಮೀಸಲಾಗಿರುತ್ತದೆ. ಅವರು ತಮ್ಮ ಮಕ್ಕಳು, ಗಂಡ ಮತ್ತು ಕುಟುಂಬದ ಸಂತೋಷಕ್ಕಾಗಿ ಬದುಕುತ್ತಾರೆ, ತಮ್ಮ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ  ಅವರು ವಯಸ್ಸಲ್ಲ ತಮ್ಮ ಕುಟುಂಬದ ಸಂತೋಷದಿಂದ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.

ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವಾಗ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಪುರುಷರು ತಮ್ಮ ಆದಾಯವನ್ನು ಏಕೆ ಬಹಿರಂಗಪಡಿಸುವುದಿಲ್ಲ?

ಸಂಪತ್ತು ಮತ್ತು ಹಣಕಾಸಿನ ವಿಚಾರವನ್ನು  ಬಹಿರಂಗಪಡಿಸುವುದರಿಂದ ಸಂಭಾವ್ಯ ಅಪಾಯ ಮತ್ತು ಸ್ಪರ್ಧೆ ಉಂಟಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಪುರುಷರು ತಮ್ಮ ಆದಾಯವನ್ನು ಮರೆಮಾಡುತ್ತಾರೆ. ತಮ್ಮ ನಿಜವಾದ ಆರ್ಥಿಕ ಸ್ಥಿತಿಯನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಪುರುಷರು ಸಾಮಾಜಿಕ ಅಥವಾ ಆರ್ಥಿಕ ಹಾನಿಯನ್ನು ತಪ್ಪಿಸಲು ಒಂದು ತಂತ್ರವಾಗಿದೆ. ಇದಲ್ಲದೆ  ಪುರುಷರು ತಮಗಾಗಿ ಮಾತ್ರ ಸಂಪಾದಿಸುವುದಿಲ್ಲ, ಅವರು ತಮ್ಮ ಗಳಿಕೆಯಿಂದ ತಮ್ಮ ಕುಟುಂಬವನ್ನು ಸಹ ಪೋಷಿಸುತ್ತಾರೆ. ಜೊತೆಗೆ ಪುರುಷರ ಗೌರವ ಮತ್ತು ಘನತೆ ಅವರ ಸಂಬಳವನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ಅವರ ಮೇಲೆ ಮಾನಸಿಕ ಒತ್ತಡವಿರುತ್ತದೆ. ಈ ಒತ್ತಡದಿಂದಾಗಿ ಪುರುಷರು ತಮ್ಮ ಸಂಬಳವನ್ನು ಬಹಿರಂಗಪಡಿಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, (ಆಗಸ್ಟ್ 09): ಸಚಿವ ಸಂಪುಟ ಪುನಾರಚನೆ ಬಳಿಕ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಅಸಮಧಾನ ಸ್ಫೋಟಗೊಂಡಿದೆ. ಹೀಗಾಗಿ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಅಸಮಧಾನಿತರನ್ನು ಸಮಧಾನ ಮಾಡುವ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ನೂತನ ಸಚಿವರಿಗೆ ಖಾತೆ ಹಂಚಿಕೆ ಸವಾಲು ಎದುರಾಗಿದ್ದು, ಈ ಸಂಬಂಧ ಚರ್ಚಿಸಲು ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಆಗಸ್ಟ್ 09) ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ನಿನ್ನೆ (ಆ.08) ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಬಿಕೆ ಹರಿಪ್ರಸಾದ್ ಗೌಪ್ಯ ಮಾತು ಮಾಡಿದ್ದು ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ ನಾಳೆ (ಆಗಸ್ಟ್ 10) ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವುದು ಬಹಿತೇಕ ಖಚಿತವಾಗಿದ್ದು, ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ಹಾಡು ಹಾಡಿದ ಸೋನು ನಿಗಂ – Kannada News | Sonu Nigam singing songs while lying on bed in Operation theater

ಭಾರತದ ಸಿನಿಮಾ (Indian Cinema) ಸಂಗೀತದಲ್ಲಿ ಮಧುರವಾದ ಧ್ವನಿಯುಳ್ಳ ಗಾಯಕ ಸೋನು ನಿಗಂ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಅವರು ಹಾಡಿದ್ದಾರೆ. ಕನ್ನಡದಲ್ಲಿ ಸಹ ನೂರಾರು ಹಾಡುಗಳನ್ನು ಸೋನು ನಿಗಂ ಹಾಡಿದ್ದಾರೆ. ಇತ್ತೀಚೆಗೆ ಅವರ ಲೈವ್ ಕಾನ್ಸರ್ಟ್​​ಗಳು ಸಹ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಆದರೆ ಇದೀಗ ಸೋನು ನಿಗಂ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಸೋನು ನಿಗಂ ಅವರು ಆಪರೇಷನ್ ಥಿಯೇಟರ್​​ನಲ್ಲಿ ಮಲಗಿದ್ದಾರೆ. ಸೋನು ನಿಗಂ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗಲೇ ಸೋನು ನಿಗಂ ಅವರು ಹಾಡು ಹಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ, ಈ ವಿಡಿಯೋವನ್ನು ಸೋನು ನಿಗಂ ಹಂಚಿಕೊಂಡಿದ್ದಾರೆ, ಸೋನು ನಿಗಂ ಅವರು ‘ದುಲಾರಿ’ ಸಿನಿಮಾದ ಮೊಹಮ್ಮದ್ ರಫಿ ಅವರ ಜನಪ್ರಿಯ ಹಾಡು ‘ಸುಹಾನಿ ರಾತ್ ದಲ್ ಚುಕಿ’ ಹಾಡನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ಹಾಡುತ್ತಿದ್ದಾರೆ. ತಾವು ತಮ್ಮ ವೈದ್ಯರು ಮತ್ತು ವೈದ್ಯಕೀಯ ತಂಡಕ್ಕಾಗಿ ಈ ಹಾಡನ್ನು ಹಾಡುತ್ತಿರುವುದಾಗಿ ಸೋನು ತಿಳಿಸಿದ್ದಾರೆ. ‘ನನ್ನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಿಯ ಡಾ ನಿಲೇಶ್ ಸತ್ಭಾಯ್ ಮತ್ತು ಅವರ ತಂಡಕ್ಕಾಗಿ ಒಂದು ಹಠಾತ್ ಪ್ರದರ್ಶನ. ನೋವಿನಲ್ಲೂ ಸಂಗೀತದ ಆನಂದ’ ಎಂದು ಅವರು ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸೋನು ನಿಗಂ ಅವರು ತಾವು ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಎಂಬ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಅವರ ವಿಡಿಯೋಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು ಸೋನು ನಿಗಂ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಸಹ ಸೋನು ನಿಗಂ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್ ಅವರು ಕಮೆಂಟ್ ಮಾಡಿ, ‘ದಯವಿಟ್ಟು ಬೇಗ ಗುಣಮುಖರಾಗಿ ಸೋನು ಜೀ, ಇಂತಹ ಸ್ಥಿತಿಯಲ್ಲಿಯೂ ಸಂಗೀತ ಮತ್ತು ಪರಿಪೂರ್ಣತೆಯ ಬಗ್ಗೆ ನಿಮ್ಮ ಸಮರ್ಪಣೆ ನಿಜಕ್ಕೂ ಸ್ಫೂರ್ತಿಯಾಗಿದೆ’ ಎಂದು ಬರೆದಿದ್ದಾರೆ. ವಿಶಾಲ್ ಮಿಶ್ರಾ ಕಮೆಂಟ್ ಮಾಡಿ, ‘ಅದಕ್ಕಾಗಿಯೇ ನೀವು ನನ್ನ ದೇವರಾಗಿದ್ದೀರಿ, ಬೇಗ ಗುಣಮುಖರಾಗಿ ಅಣ್ಣ’ ಎಂದು ಕಾಮೆಂಟ್ ಮಾಡಿದ್ದಾರೆ. ರಣವೀರ್ ಅಲ್ಹಾಬಾದಿಯಾ ಕೂಡ ಕಮೆಂಟ್ ಮಾಡಿದ್ದು, ‘ಬೇಗ ಗುಣಮುಖರಾಗಿ ಸೋನು ಸರ್’ ಎಂದು ಹಾರೈಸಿದ್ದಾರೆ.

ಸೋನು ಅವರ ಶಸ್ತ್ರಚಿಕಿತ್ಸೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ವರ್ಷದ ಜೂನ್ ತಿಂಗಳಲ್ಲಿ ಅವರು ತಮಗೆ ನರಗಳ ಸಮಸ್ಯೆಯಿದೆ (pinched nerves) ಎಂದು ವಿಡಿಯೋ ಮೂಲಕ ತಿಳಿಸಿದ್ದರು. ತಾವು ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಮಾಡಿಸಿಕೊಂಡಿರುವುದಾಗಿ ಮತ್ತು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಫಿಸಿಯೋಥೆರಪಿ ತುಂಬಾ ನೋವಿನಿಂದ ಕೂಡಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಈಗ ಅದೇ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಈ ದಾಖಲೆಗಳು ನಿಮ್ಮ ಬಳಿ ಇರಲಿ – Kannada News | Electricity Connection: Keep these documents with you to obtain an electricity connection for your new home.

ಸಾಂದರ್ಭಿಕ ಚಿತ್ರImage Credit source: Soumyabrata Roy/NurPhoto via Getty Images

ಮನೆ ಹೊಂದುವ ಕನಸು ಪ್ರತಿಯೊಬ್ಬರ ಕನಸು. ಹೊಸ ಮನೆ ಕಟ್ಟಿದರೆ ಸಾಲದು. ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳುವುದು ಮುಖ್ಯ. ಹೌದು, ನೀವು ಕಟ್ಟಿದ ಹೊಸ ಮನೆಗೆ ವಿದ್ಯುತ್ ಸಂಪರ್ಕ (electricity connection) ಅಗತ್ಯ. ಮನೆಗೆ ವಿದ್ಯುತ್ ಸಂಪರ್ಕಕ್ಕೆ ಕೆಲವರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ನೀವು ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ರೆ ಸಾಕು. ಅದೇಗೆ ಅಂತೀರಾ. ಈ ಕುರಿತಾದ ಮಾಹಿತಿ ಇಲ್ಲಿದೆ.

ವಿದ್ಯುತ್ ಸಂಪರ್ಕ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು:

  • ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ
  • ಮನೆ ಅಥವಾ ನಿವೇಶನದ ಖಾತಾ ಪ್ರಮಾಣಪತ್ರ
  • ತೆರಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ.
  • ಪಾಸ್‌ಪೋರ್ಟ್ ಅಳತೆಯ ಫೋಟೋ

ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ?

ಹಂತ 1: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಬೆಸ್ಕಾಂ ಪೋರ್ಟಲ್ ಗೆ ಭೇಟಿ ನೀಡಿ.

ಹಂತ 2: ಅಪ್ಲೈ ಫಾರ್ ನ್ಯೂ ಕನೆಕ್ಷನ್ ಆಯ್ಕೆಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ.

ಹಂತ 3: ಮಾಲೀಕರ ಹೆಸರು, ವಿಳಾಸ ಮತ್ತು ಲೋಡ್ ವಿವರಗಳನ್ನು ಭರ್ತಿ
ತಪ್ಪಿಲ್ಲದೇ ಭರ್ತಿ ಮಾಡಿ .

ಹಂತ 4: ಮೇಲೆ ತಿಳಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಲಗತ್ತಿಸಿ.

ಹಂತ 5: ವಿದ್ಯುತ್ ಸಂಪರ್ಕಕ್ಕೆ ಅಂದಾಜು ವೆಚ್ಚವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಬಳಿಯಿದ್ರೆ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಸುಲಭ 

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ?

ಉತ್ತರ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಬೆಸ್ಕಾಂ ಪೋರ್ಟಲ್ ಗೆ ಭೇಟಿ ನೀಡಿ.

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ, ನಿವೇಶನದ ಖಾತಾ ಪ್ರಮಾಣಪತ್ರ ತೆರಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ, ಪಾಸ್‌ಪೋರ್ಟ್ ಅಳತೆಯ ಫೋಟೋ ನಿಮ್ಮ ಬಳಿ ಇರಬೇಕು.

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಎಷ್ಟು ಮೊತ್ತ ಖರ್ಚಾಗುತ್ತದೆ?

ಉತ್ತರ: ಶುಲ್ಕ, ಸೆಕ್ಯೂರಿಟಿ ಡೆಪಾಸಿಟ್ ಮತ್ತು ಸ್ಮಾರ್ಟ್ ಮೀಟರ್ ವೆಚ್ಚ ಸೇರಿ ಅಂದಾಜು ಸರಿಸುಮಾರು 3,000ರೂ ದಿಂದ 10,000 ರೂ ಗೂ ಹೆಚ್ಚು ಆಗಬಹುದು. ಇದು ಲೋಡ್ (kW) ಮತ್ತು ಮೀಟರ್ ಪ್ರಕಾರವನ್ನು ಅವಲಂಬಿಸಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Sun, 9 August 26

Source link

ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್; ತಪ್ಪಿದ ಅನಾಹುತ – Kannada News | KSRTC Bus Tyre Bursts in Koppal: Over 30 Passengers Escape Unhurt

ಕೊಪ್ಪಳ, ಆಗಸ್ಟ್​ 09: ಜಿಲ್ಲೆಯ ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ನ ಟೈರ್ ಏಕಾಏಕಿ ಸ್ಫೋಟವಾಗಿದ್ದು, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದ ಘಟನೆ ನಡೆದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪಳದಿಂದ ಕಕೇಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರಂಪ್ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್; ಎಲ್ಲಾ ಸೇನಾ ರಜೆಗಳು ರದ್ದು; ಇರಾನ್ ಮೇಲೆ ನಡೆಯುತ್ತಾ ದೊಡ್ಡ ದಾಳಿ? – Kannada News | Israel rejects Trump’s 15 point Gaza peace plan, cancels all military leaves

ಟೆಲ್ ಅವಿವ್, ಆಗಸ್ಟ್ 9: ಗಾಜಾದಲ್ಲಿ ಶಾಂತಿ ನೆಲಸುವಂತೆ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ 15 ಅಂಶಗಳ ಯೋಜನೆಯನ್ನು (Trump’s Gaza peace plan) ಇಸ್ರೇಲ್ ತಿರಸ್ಕರಿಸಿದೆ. ಹಮಾಸ್ ಸಂಪೂರ್ಣ ಶಸ್ತ್ರ ತ್ಯಜಿಸುವವರೆಗೂ ಗಾಜಾದಿಂದ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಹಾಗೆಯೇ, ತನ್ನ ಸೈನಿಕರ ಎಲ್ಲಾ ರಜೆಗಳನ್ನು ರದ್ದುಗೊಳಿಸಿ ತೀವ್ರ ಕಟ್ಟೆಚ್ಚರ ವಹಿಸಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಮತ್ತೊಮ್ಮೆ ಯುದ್ಧದ ಭೀತಿ ಎದುರಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಇರಾನ್ ಮೇಲಿನ ಹೊಸ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ.

ಸೈನಿಕರ ರಜೆ ರದ್ದು: ಇಸ್ರೇಲ್ ರಕ್ಷಣಾ ಪಡೆಗಳು (IDF) ತಮ್ಮ ಸೈನಿಕರು ಹಾಗೂ ಅಧಿಕಾರಿಗಳ ಎಲ್ಲಾ ರಜೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿವೆ. ಯಾವುದೇ ಕ್ಷಣದಲ್ಲಾದರೂ ಎದುರಾಗಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧವಾಗಿರಲು ಸೇನೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಮೃತಪಟ್ಟರೆ ಯಾರಾಗಲಿದ್ದಾರೆ ಇರಾನ್ ಸುಪ್ರೀಂ ನಾಯಕ?

ನೆತನ್ಯಾಹು ಎಚ್ಚರಿಕೆ: ಅಮೆರಿಕವು ಇರಾನ್ ಜೊತೆ ರಾಜತಾಂತ್ರಿಕ ಸಂಧಾನಕ್ಕೆ ಯತ್ನಿಸುತ್ತಿದ್ದರೂ, ಇರಾನ್‌ನ ಪರಮಾಣು ಯೋಜನೆಗಳು ಹಾಗೂ ಸಶಸ್ತ್ರ ಗುಂಪುಗಳ ಚಟುವಟಿಕೆಗಳು ತಮ್ಮ ದೇಶದ ಭದ್ರತೆಗೆ ಬೆದರಿಕೆಯಾಗಿವೆ ಎಂದು ಇಸ್ರೇಲ್ ಭಾವಿಸಿದೆ. ಇರಾನ್ ಮೇಲಿನ ತೀವ್ರ ದಾಳಿಗೆ ಇಸ್ರೇಲ್ ಸಿದ್ಧವಾಗಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಜೊತೆಗಿನ ಮಾತುಕತೆ ಮತ್ತು ಭಿನ್ನಾಭಿಪ್ರಾಯ

ಅಮೆರಿಕವು ವಲಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಸಂಘರ್ಷ ಶಮನಗೊಳಿಸಲು ಪ್ರಯತ್ನಿಸುತ್ತಿದ್ದರೂ, ಇಸ್ರೇಲ್ ನಾಯಕತ್ವವು ಇರಾನ್‌ಗೆ ಕಟ್ಟುನಿಟ್ಟಿನ ನಿಯಮ ವಿಧಿಸಬೇಕು ಎಂದು ಪಟ್ಟು ಹಿಡಿದಿದೆ.

ಇದನ್ನೂ ಓದಿ: ರಷ್ಯಾದ ದಾಳಿಗೆ ಕೈವ್​​ನಲ್ಲಿ ಮಗು ಸೇರಿ ನಾಲ್ವರು ಬಲಿ

ಇರಾನ್ ಹಾಗೂ ಪ್ರಾಕ್ಸಿ ಗುಂಪುಗಳ ಭೀತಿ: ಇಸ್ರೇಲಿ ಪಡೆಗಳು ಕೇವಲ ಇರಾನ್ ಮಾತ್ರವಲ್ಲದೆ, ಲೆಬನಾನ್‌ನ ಹಿಜ್ಬುಲ್ಲಾ ಸೇರಿದಂತೆ ಇತರ ಪ್ರಾದೇಶಿಕ ಸಂಘಟನೆಗಳಿಂದ ಎದುರಾಗಬಹುದಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence Systems) ಸಜ್ಜುಗೊಳಿಸಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Sleeping While Travelling: ಪ್ರಯಾಣ ಮಾಡುವಾಗ ಸಿಕ್ಕಾಪಟ್ಟೆ ನಿದ್ರೆ ಬರಲು ಕಾರಣವೇನು ಗೊತ್ತೇ? – Kannada News | Do you know what causes you to fall asleep while traveling?

ಮಧ್ಯಾಹ್ನ ಊಟ ಮಾಡಿದ ನಂತರ ಕಣ್ಣು ತೂಕಡಿಸುವಂತೆ, ಬಸ್ಸು, ಕಾರ್‌, ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುವಾಗ (traveling) ಹೆಚ್ಚಿನವರಿಗೆ ನಿದ್ರೆ ಬಂದಂತಾಗುತ್ತದೆ. ಕೆಲವರಂತೂ ವಾಹನ ಹೊರಟ 10-15 ನಿಮಿಷದೊಳಗೆ ನಿದ್ರೆಗೆ ಜಾರಿ ಬಿಡುತ್ತಾರೆ. ನಿಮಗೂ ಕೂಡ ಇದೇ ರೀತಿ ಪ್ರಯಾಣಿಸುವಾಗ ನಿದ್ರೆ ಬರುತ್ತಾ? ಇದಕ್ಕೆ ಮುಖ್ಯ ಕಾರಣ ವಾಹನದ ಸೌಮ್ಯ ಕಂಪನ, ಎಂಜಿನ್‌ನ ನಿರಂತರ ಶಬ್ದ, ಆರಾಮದಾಯಕ ಆಸನ ಮತ್ತು ಮೆದುಳಿನ ಮೇಲೆ  ಒತ್ತಡ ಬೀರದಿರುವುದು. ಈ ಎಲ್ಲಾ ಅಂಶಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ, ಇದರಿಂದಾಗಿ ಹೆಚ್ಚಿನವರು ಪ್ರಯಾಣಿಸುವಾಗ ಬಹು ಬೇಗನೆ ನಿದ್ರೆಗೆ ಜಾರುತ್ತಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಪ್ರಯಾಣ ಮಾಡುವಾಗ ನಿದ್ದೆ ಬರೋದೇಕೆ?

ವಾಹನ ಅಲುಗಾಟ: ಪ್ರಯಾಣಿಸು ಸಂದರ್ಭದಲ್ಲಿ ವಾಹನ ಸಣ್ಣದಾಗಿ ಅಲುಗಾಡುತ್ತಿರುತ್ತದೆ. ಈ ನಿರಂತರ ಅಲುಗಾಟ ಮಗುವನ್ನು ತೊಟ್ಟಿಲಿನಲ್ಲಿ ತೂಗಿದಂತಾಗುತ್ತದೆ, ಮಗುವನ್ನು ಕಾಲಿನಲ್ಲಿ ಕೂರಿಸಿ ಅಲುಗಾಡಿಸುತ್ತಾ ನಿದ್ದೆ ಮಾಡಿಸಿದಂತಾಗುತ್ತದೆ. ಪ್ರಯಾಣಿಸುವಾಗ ಆಗುವ ಈ ಅಲುಗಾಟದ ಸಂವೇದನೆಯಿಂದಾಗಿ ಹೆಚ್ಚಿನವರಿಗೆ ಪ್ರಯಾಣಿಸುವಾಗ ನಿದ್ರೆ ಬರೋದು.

ನೈಸರ್ಗಿಕ ಬೆಳಕಿನ ಕೊರತೆ: ಕಾರು ಅಥವಾ ರೈಲಿನ ಸುತ್ತುವರಿದ ಪರಿಸರದಲ್ಲಿ, ನೈಸರ್ಗಿಕ ಬೆಳಕು ಸೀಮಿತವಾಗಿರುತ್ತದೆ ಮತ್ತು ನಾವು ವಾಹನದ ಆಂತರಿಕ ಬೆಳಕಿನ ಮೇಲೆ ಮಾತ್ರ ಅವಲಂಬಿತರಾಗುತ್ತೇವೆ. ಇದು ಆಗಾಗ್ಗೆ ನಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ನಮ್ಮ ಮೆದುಳು ಮಲಗುವ ಸಮಯ ಎಂದು ಭಾವಿಸುತ್ತದೆ, ಇದು ನಮಗೆ ನಿದ್ರೆಯ ಅನುಭವವನ್ನು ನೀಡುತ್ತದೆ.

ಏಕತಾನತೆ: ಬಸ್‌, ಕಾರಿನಲ್ಲಿ ಪ್ರಯಾಣಿಸುವಾಗ ಒಂದೇ ಕಡೆ ಹೆಚ್ಚು ಹೊತ್ತು ಕುಳಿತಿರುತ್ತೇವೆ ಮತ್ತು ಯಾವುದೇ ರೀತಿಯ ದೈಹಿಕ ಚಟುವಟಿಕೆ ಇರೋದಿಲ್ಲ, ಈ ಚಟುವಟಿಕೆಗಳ ಕೊರತೆ, ಏಕತಾನತೆ ಮೆದುಳನ್ನು ನಿದ್ರೆಯ ಸ್ಥಿತಿಗೆ ತಳ್ಳುತ್ತದೆ. ಯಾವುದೇ ನಿರ್ದಿಷ್ಟ ಕೆಲಸದ ಮೇಲೆ ಗಮನಹರಿಸಬೇಕಾಗಿಲ್ಲದಿದ್ದರೆ, ದೇಹ ಮತ್ತು ಮನಸ್ಸು ಶಾಂತವಾಗುತ್ತದೆ. ಪರಿಣಾಮವಾಗಿ, ಪ್ರಯಾಣ ಮಾಡುವಾಗ ನಿದ್ರೆ ಬರುವುದು ಸಹಜ.

ಸೌಮ್ಯ ಶಬ್ಧ: ಪ್ರಯಾಣಿಸುವಾಗ ಕಾರು, ಬಸ್ ಅಥವಾ ರೈಲಿನ ಎಂಜಿನ್ ಮತ್ತು ಟೈರ್‌ಗಳ ನಿರಂತರ ಮೃದುವಾದ ಶಬ್ದವು ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ವಿಶ್ರಾಂತಿಯ ಭಾವನೆ ಹೆಚ್ಚಾಗುತ್ತದೆ ಮತ್ತು ನಾವು ಸೀದಾ ನಿದ್ರೆಗೆ ಜಾರುತ್ತೇವೆ.

ಆಯಾಸ ಮತ್ತು ನಿದ್ರೆಯ ಕೊರತೆ: ಮನುಷ್ಯನಿಗೆ 7 ರಿಂದ 8 ಗಂಟೆಯ ನಿದ್ರೆ ಅವಶ್ಯಕ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ನೀವು ಕೆಲಸ ಮಾಡಿ ದಣಿಸಿದ್ದರೆ, ಪ್ರಯಾಣಿಸುವ ಸಂದರ್ಭದಲ್ಲಿನ ಸುತ್ತಮುತ್ತಲಿನ ಶಾಂತ ನೋಟ, ಸೌಮ್ಯವಾದ ಕಂಪನಗಳು ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.

ಇದನ್ನೂ ಓದಿ:  ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌?

ವಿಶ್ರಾಂತಿ ಭಾವನೆ: ಕಾರು, ಬಸ್ ಅಥವಾ ರೈಲು ಸ್ಥಿರವಾದ ವೇಗದಲ್ಲಿ ಚಲಿಸಿದಾಗ, ದೇಹವು ಕ್ರಮೇಣ ಶಾಂತ ಮತ್ತು ವಿಶ್ರಾಂತಿಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದ ಪ್ರಕ್ರಿಯೆಗಳು ಸಕ್ರಿಯಗೊಳ್ಳುತ್ತವೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಲಭವಾಗಿ ನಿದ್ರಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಮನಸ್ಥಿತಿಯ ಸುಧಾರಣೆ: ಪ್ರಯಾಣದ ಸಮಯದಲ್ಲಿ, ನೀವು ಕಿಟಕಿಯ ಹೊರಗೆ ವೇಗವಾಗಿ ಹಾದುಹೋಗುವ ರಸ್ತೆಗಳು, ಮರಗಳು, ಹೊಲಗಳು ಅಥವಾ ಕಟ್ಟಡಗಳನ್ನು ನೋಡಿರುತ್ತೇವೆ. ಹೀಗೆ ಪ್ರಕೃತಿಯನ್ನು ನೋಡುತ್ತಾ ಕುಳಿತಾಗ ಒತ್ತಡ ಕಡಿಮೆಯಾಗಿ ಮನಸ್ಸಿನ ಮೇಲಿನ ಹೊರೆ ಕಡಿಮೆಯಾಗಿ, ಮನಸ್ಥಿತಿ ಸುಧಾರಿಸುತ್ತದೆ. ಜೊತೆಗೆ ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ವೇಗವಾಗಿ ನಿದ್ರೆ ಬರುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದ ಸಿರಾಜ್ – Kannada News | Team India Wins Thriller: Mohammed Siraj Smashes Hat trick Sixes vs SL XI

ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI (India vs Sri Lanka XI) ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನದ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಗೆದ್ದಿಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಗೆಲುವಿನ ಶ್ರೀಲಂಕಾ ತಂಡದ ನೀಡಿದ 207 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭವಾಗಿ ಗುರಿ ಬೆನ್ನಟ್ಟುವಂತೆ ತೋರುತ್ತಿತ್ತು. ಆದರೆ ತಂಡದ ಆಟಗಾರರು ಕ್ರೀಸ್​ನಲ್ಲಿ ಸಮಯ ಕಳೆಯುವ ಸಲುವಾಗಿ ಸಾಕಷ್ಟು ಎಸೆತಗಳನ್ನು ಡಾಟ್ ಮಾಡಿದರು. ಹೀಗಾಗಿ ಪಂದ್ಯ ಕೊನೆಯ ಓವರ್​ವರೆಗೂ ಸಾಗಿತು. ಕೊನೆ ಕೊನೆಗೆ ಟೀಂ ಇಂಡಿಯಾ ಈ ಗುರಿಯನ್ನು ಬೆನ್ನಟ್ಟದೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸುವಂತೆ ತೋರುತ್ತಿತ್ತು. ಆದರೆ ದಿನದಾಟದ ಕೊನೆಯ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದರು.

Source link

ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ? – Kannada News | Yash’s Toxic movie nude scene sparks debate comparison to Animal

ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಆಗಸ್ಟ್ 08) ಬಿಡುಗಡೆ ಆಗಿದೆ. ನಾಲ್ಕು ನಿಮಿಷಗಳ ಈ ಟ್ರೈಲರ್ ಹಾಲಿವುಡ್​​ ಲೆವೆಲ್​​ನಲ್ಲಿದೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಟಾಕ್ಸಿಕ್’ ಸಿನಿಮಾದ ಹಾಡು, ಪ್ರೋಮೊ ಸಖತ್ ರೊಮ್ಯಾಂಟಿಕ್ ಆಗಿ ಹಸಿ-ಬಿಸಿ ದೃಶ್ಯಗಳಿಂದ ಕೂಡಿತ್ತು. ಆದರೆ ನಿನ್ನೆ ಬಿಡುಗಡೆ ಆದ ಟ್ರೈಲರ್ ಆಕ್ಷನ್ ಭರಿತವಾಗಿದೆ. ಜೊತೆಗೆ ಯಶ್ ಅವರ ಹಲವು ಮಾಸ್, ಎಲಿವೇಷನ್ ದೃಶ್ಯಗಳನ್ನು ಒಳಗೊಂಡಿದೆ. ಆದರೆ ಟ್ರೈಲರ್​​ನಲ್ಲಿ ಇದ್ದ ಒಂದು ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಅದುವೇ ಯಶ್ ಅವರ ಬೆತ್ತಲೆ ದೃಶ್ಯ.

ಟ್ರೈಲರ್​​ನಲ್ಲಿ ಬರುವ ಒಂದು ದೃಶ್ಯದಲ್ಲಿ ಯಶ್, ಬೆತ್ತಲೆಯಾಗಿ ನಿಂತಿದ್ದಾರೆ, ಅವರ ಎದುರು ನಟಿ ರುಕ್ಮಿಣಿ ವಸಂತ್ ಇದ್ದಾರೆ. ಯಶ್ ಮೈಮೇಲೆ ಬಟ್ಟೆ ಇಲ್ಲ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದಿದ್ದಾರೆ. ‘ನಾಗರೀಕತೆಯಿಂದ ಚರ್ಚೆ ನಡೆಯುತ್ತೆ ಅನ್ನೋ ಉದ್ದೇಶದಿಂದ ಬಂದೆ ಎಂದು ರುಕ್ಮಿಣಿ ವಸಂತ್ ಹೇಳಿದರೆ, ‘ನಾನು ನಾಗರೀಕನ ಥರ ಕಾಣ್ತೀನ?’ ಎಂದು ಯಶ್ ಕೇಳುತ್ತಾರೆ. ಯಶ್ ಅವರು ಬೆತ್ತಲೆ ನಿಂತಿರುವ ದೃಶ್ಯದ ಸ್ಕ್ರೀನ್ ಶಾಟ್​​ ತೆಗೆದುಕೊಂಡು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಸೀನ್​​ನಲ್ಲಿ ಪಾಪ ರುಕ್ಮಿಣಿ ಪಾತ್ರದ ಜೊತೆ ಏನೇನಾಗುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, ‘ನಮ್ಮ ರುಕ್ಮಿಣಿಗೆ ಏನೂ ಮಾಡಬೇಡ ರಾಯ’ ಎಂದಿದ್ದಾರೆ. ಇನ್ನು ಕೆಲವರು ಯಶ್ ಫಿಸೀಕ್ ಅನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ರುಕ್ಮಿಣಿ ವಸಂತ್ ಎದುರು ಯಶ್ ಹೀಗೆ ನಿಂತಿದ್ದಾರಾಲ್ಲ ಎಂದು ಬೇಸರ ಸಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್​’ನಲ್ಲಿ ಕಡಿಮೆ ಇದ್ದ ತಾರಾ ಸೀನ್​​ಗಳು ಬಳಿಕ ಹೆಚ್ಚಾಗಿದ್ದು ಏಕೆ?

ಇನ್ನು ಕೆಲವರು ಯಶ್ ಅವರ ಬೆತ್ತಲೆ ಚಿತ್ರವನ್ನು, ‘ಅನಿಮಲ್’ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ಅವರ ಬೆತ್ತಲೆ ಚಿತ್ರಕ್ಕೆ ಹೋಲಿಸಿದ್ದಾರೆ. ‘ಟಾಕ್ಸಿಕ್’ ಟ್ರೈಲರ್ ಸೀನ್ ನೋಡಿದಾಗ ನನಗೆ ‘ಅನಿಮಲ್’ ಸಿನಿಮಾದ ಸೀನ್ ನೆನಪು ಬಂತು ಎಂದಿದ್ದಾರೆ. ಕೆಲವರು ‘ಇದು ‘ಅನಿಮಲ್’ ಸಿನಿಮಾದ ದೃಶ್ಯದ ಕಾಪಿ ಎಂದಿದ್ದಾರೆ. ಆದರೆ ಇನ್ನು ಕೆಲವರು, ‘ಅಸಲಿ ‘ಅನಿಮಲ್’ ಎಂದರೆ ಏನು ಎಂಬುದನ್ನು ಯಶ್ ರಣಬೀರ್‌ಗೆ ತೋರಿಸಿಕೊಡಲಿದ್ದಾರೆ’ ಎಂದು ಬರೆದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಯಶ್ ಅವರ ಬೆತ್ತಲೆ ದೃಶ್ಯವನ್ನು ಜಾಣತನದಿಂದ ಸೆರೆ ಹಿಡಿಯಲಾಗಿದೆ. ಟ್ರೈಲರ್​​ನಲ್ಲಿ ಕೇವಲ ಒಂದು ಸೆಕೆಂಡ್​​ಗೆ ಈ ದೃಶ್ಯ ಬಂದು ಹೋಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗ ಅದೇ ದೃಶ್ಯದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ರಾಯ ಮತ್ತು ಟಿಕೆಟ್ ಹೆಸರಿನ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಗೀತೂ ಮೋಹನ್​​ದಾಸ್ ಸಿನಿಮಾದ ನಿರ್ದೇಶಕಿ. ಸಿನಿಮಾವನ್ನು ಕೆವಿಎನ್ ಹಾಗೂ ಮಾನ್​​ಸ್ಟರ್ ಮೈಂಡ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version