ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ! – Kannada News | Hikkaballapur Mystery: Stolen Gold Chain Miraculously Returns Home After 2 Days

ಕಳವಾಗಿದ್ದ ಚಿನ್ನದ ಸರImage Credit source: Tv9 Kannada

ಚಿಕ್ಕಬಳ್ಳಾಪುರ, ಮೇ 06: ಇತ್ತೀಚೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಒಂಟಿ ಮಹಿಳೆಯನ್ನೇ ಟಾರ್ಗೆಟ್​ ಮಾಡಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಇಂತಹುದ್ದೇ ಘಟನೆ ಮೊನ್ನೆ ಮೇ 3ರಂದು ಚಿಕ್ಕಬಳ್ಳಾಪುರ ನಗರದ ವಾರ್ಡ ನಂಬರ್​​ 23ರ ಚಾಮರಾಜಪೇಟೆಯಲ್ಲಿಯೂ ನಡೆದಿತ್ತು. ಮನೆಯ ಮುಂದಿನ ನೀರಿನ ಸಂಪ್ ನೋಡುತ್ತಿದ್ದ ಗೃಹಿಣಿ ಪ್ರಿಯಾ ಎಂಬವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಖದೀಮರು ಎಸ್ಕೇಪ್​​ ಆಗಿದ್ದರು. ಆದರೆ ವಿಚಿತ್ರ ಎಂಬಂತೆ ಘಟನೆ ನಡೆದು ಎರಡು ದಿನಗಳ ಬಳಿಕ ಅದೇ ಚಿನ್ನದ ಸರ ಮನೆ ಮುಂದಿನ ಬಾಗಿಲಲ್ಲಿ ಪ್ರತ್ಯಕ್ಷವಾಗಿದೆ.

  • ಚಿಕ್ಕಬಳ್ಳಾಪುರದ ಚಾಮರಾಜಪೇಟೆಯಲ್ಲಿ ಅಚ್ಚರಿಯ ಘಟನೆ
  • ಕದ್ದ ಸರವನ್ನು ಪುನಃ ಮನೆ ಬಳಿಯೇ ಇಟ್ಟುಹೋಗಿರುವ ಕಳ್ಳರು
  • ಕಳ್ಳತನ ನಡೆದ 2 ದಿನಗಳ ಬಳಿಕ ಮನೆ ಬಳಿಯೇ ಸರ ಪ್ರತ್ಯಕ್ಷ!

ಇದನ್ನೂ ಓದಿ: 20ರ ಯುವತಿ-46ರ ಅಂಕಲ್ ಲವ್; ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್

ನೀರು ಬಿಟ್ಟಿದ್ದಾರಾ ಎಂದು ನೋಡಲು ಬಂದಿದ್ದ ಗೃಹಿಣಿ ಪ್ರಿಯಾ, ಸಂಪ್​​ ತೆರೆದು ನೋಡಿ ಹಿಂದೆ ತಿರುಗುವಷ್ಟರಲ್ಲಿ ಬೈಕ್​​ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಅವರ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್​​ ಆಗಿದ್ದರು. ಖದೀಮರು ಪಲ್ಸರ್​​ 220 ಬೈಕ್​​ನಲ್ಲಿ ಬಂದಿದ್ದು, ಇಬ್ಬರ ಪೈಕಿ ಓರ್ವ ಮಾತ್ರ ಬೈಕ್​​ನಿಂದ ಇಳಿದಿದ್ದ. ಮತ್ತೋರ್ವ ಬೈಕ್​​ ಆನ್​​ನಲ್ಲಿಯೇ ಇಟ್ಟುಕೊಂಡು ನಿಂತಿದ್ದ. ಆರೋಪಿಗಳ ಬಳಿ ಚಾಕುವಿನಂತಹ ಮಾರಕ ಆಯುಧಗಳೂ ಇತ್ತು ಎನ್ನಲಾಗಿತ್ತು. ಕುತ್ತಿಗೆಯನ್ನು ಆರೋಪಿಗಳು ಲಾಕ್​​ ಮಾಡಿದ್ದ ಕಾರಣ ಆ ವೇಳೆ ಕಿರುಚಿಕೊಳ್ಳಲೂ ತನೆ ಸಾಧ್ಯವಾಗಲಿಲ್ಲ.  ಮಾಂಗಲ್ಯವನ್ನು ತಾನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಕಾರಣ ಆರೋಪಿಗಳು ಚೈನ್​​ ಮಾತ್ರ ಕದ್ದಿರೋದಾಗಿ ಪ್ರಿಯಾ ತಿಳಿಸಿದ್ದರು.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ತಂಡ ರಚಿಸಿಕೊಂಡು ತನಿಖೆ ಕೂಡ ಕೈಗೊಂಡಿದ್ದರು. ಬೈಕ್​​ನಲ್ಲಿ ಬಂದವರಿಂದ ಕೃತ್ಯ ಎಂದು ಗೃಹಿಣಿ ತಿಳಿಸಿದ್ದ ಕಾರಣ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿವರೆಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದರು. ಈ ನಡುವೆ ಮಂಗಳವಾರ ಅಂದರೆ ಮೇ 5ರ ಬೆಳಿಗ್ಗೆ ಗೃಹಿಣಿ ಪ್ರಿಯಾರ ಪತಿ ವಾಶ್​​ ರೂಂಗೆಂದು ತೆರಳಿದ್ದ ವೇಳೆ ಬಾತ್​​ ರೂಂನ ಮೆಟ್ಟಿಲಿನ ಸಮೀಪ ಚೈನ್​​ ಬಿದ್ದಿರೋದು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರೂ ಮನೆಗೆ ಬಂದು ಪರಿಶೀಲಿಸಿ ಹೋಗಿದ್ದು, ಘಟನೆ ಭಾರಿ ಆಶ್ಚರ್ಯಕ್ಕೆ ಕಾರಣವಾಗಿದೆ. ಮಾಂಗಲ್ಯ ಸರ ಕದ್ದವರು ಯಾರು? ಈಗ ಅವರೇ ಅದನ್ನು ಮನೆಬಳಿ ಇಟ್ಟು ಹೋಗಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:03 pm, Wed, 6 May 26

Source link

ವಧುವಿನ ಖತರ್ನಾಕ್ ವಂಚನೆ ಜಾಲ: 9 ಬಾರಿ ಮದುವೆಯಾಗಿ ವರರಿಗೆ ಪಂಗನಾಮ, ಹಣ-ಒಡವೆಯೊಂದಿಗೆ ಎಸ್ಕೇಪ್ – Kannada News | Maharashtra: Woman Accused of Repeated Marriage Fraud Across Multiple Cases

ಬೀಡ್, ಮೇ 06: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ನಕಲಿ ವಿವಾಹಗಳ ಮೂಲಕ ಹಣ ಮತ್ತು ಆಭರಣ ದೋಚುತ್ತಿದ್ದ ಶಂಕಿತ ವಧು(Bride)ವಿನ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯೊಬ್ಬರು ಏಜೆಂಟ್‌ಗಳ ಸಹಾಯದಿಂದ ಹಲವು ಪುರುಷರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ ಆರೋಪ ಕೇಳಿಬಂದಿದೆ.

ಯೋಗೇಶ್ ಶಿಂಧೆ ಎಂಬ ಮಧ್ಯವರ್ತಿಗಳ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಏರ್ಪಡಿಸಲು ಅವರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಶಾಸ್ತ್ರೋಕ್ತವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ. ನಂತರದ ವಿಚಾರಣೆಯಲ್ಲಿ ಯೋಗೇಶ್‌ಗೆ ಬೆಚ್ಚಿಬೀಳಿಸುವ ಸತ್ಯವೊಂದು ತಿಳಿದುಬಂದಿದೆ.

ಈ ಮಹಿಳೆ ತನಗಿಂತ ಮೊದಲು ಈಗಾಗಲೇ ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ಮದುವೆಗೆ ಮುನ್ನ ಆಕೆಯ ಹಿಂದಿನ ವಿವಾಹಗಳ ಬಗ್ಗೆ ಯೋಗೇಶ್‌ರನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಡಲಾಗಿತ್ತು.

ದೂರಿನ ಪ್ರಕಾರ, ಈ ಜಾಲವು ಬೀಡ್ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತ ಪದವಿಧರ ಪುರುಷರನ್ನು ಗುರಿಯಾಗಿಸಿಕೊಂಡಿದೆ. ವಧು ಸಿಗದೆ ಹೆಣಗಾಡುತ್ತಿರುವ ಕುಟುಂಬಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಈ ಗ್ಯಾಂಗ್, ಮದುವೆ ಮಾಡಿಸುವ ನೆಪದಲ್ಲಿ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿತ್ತು.

ಮತ್ತಷ್ಟು ಓದಿ: ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ

ತೀವ್ರ ಮಾನಸಿಕ ಅಘಾತಕ್ಕೊಳಗಾದ ಯೋಗೇಶ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಿಂದ ನಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಇತರ ಸದಸ್ಯರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಈ ಘಟನೆ ಭಾರೀ ಆತಂಕ ಮೂಡಿಸಿದ್ದು, ಇನ್ನು ಎಷ್ಟು ಮಂದಿ ಇವರ ಜಾಲಕ್ಕೆ ಬಲಿಯಾಗಿದ್ದಾರೆ ಎಂಬ ಸತ್ಯ ತನಿಖೆಯಿಂದ ಹೊರಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಸಕೋಟೆ ಪೊಲೀಸರ ಭರ್ಜರಿ ಬೇಟೆ: 50 ಬೈಕ್ ಸಮೇತ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – Kannada News | Hoskote Police Bust Interstate Bike Theft Racket: 2 Arrested, 50 Bikes Worth Rs 55 Lakh Recovered

ಹೊಸಕೋಟೆ, ಮೇ 6: ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತರರಾಜ್ಯ ಬೈಕ್ ಕಳ್ಳರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನರಸಿಂಹಮೂರ್ತಿ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರಿಂದ ಬರೋಬ್ಬರಿ 55 ಲಕ್ಷ ರೂಪಾಯಿ ಮೌಲ್ಯದ 50 ವಿವಿಧ ಕಂಪನಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಖದೀಮರು ತಮ್ಮ ಮೋಜು ಮಸ್ತಿಗಾಗಿ ಬೈಕ್‌ಗಳನ್ನು ಕದ್ದು ಆಂಧ್ರದ ಗಡಿ ಭಾಗಗಳಲ್ಲಿ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ ಮಜಾ ಮಾಡುತ್ತಿದ್ದರು. ಹೊಸಕೋಟೆಯಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬರ ಬೈಕ್ ಕಳವು ಮಾಡಿದ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಈ ದೊಡ್ಡ ಜಾಲ ಪತ್ತೆಯಾಗಿದೆ. ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಬಂಧಿತರು ಕೇವಲ ಹೊಸಕೋಟೆ ಮಾತ್ರವಲ್ಲದೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆ.ಆರ್. ಪುರ ಮತ್ತು ಕಾಡುಗೋಡಿ ಭಾಗಗಳಲ್ಲಿಯೂ ತಮ್ಮ ಕೈಚಳಕ ತೋರಿಸುತ್ತಿದ್ದರು. ಪ್ರಸ್ತುತ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಹೊಸಕೋಟೆ ಪೊಲೀಸರು ಇಬ್ಬರನ್ನೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DRDO Internship 2026: DRDO ಇಂಟರ್ನ್‌ಶಿಪ್; ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 30,000ರೂ. ಸ್ಟೈಫಂಡ್ ಪಡೆಯುವ ಸುವರ್ಣಾವಕಾಶ! – Kannada News | DRDO Internship 2026: Apply Now for Engineering and Tech with 30,000rs Stipend!

ಇಂಟರ್ನ್‌ಶಿಪ್ ಕಾರ್ಯಕ್ರಮImage Credit source: gemini ai

ಭಾರತೀಯ ರಕ್ಷಣಾ ರಂಗದ ಬೆನ್ನೆಲುಬಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), 2026ನೇ ಸಾಲಿನ ತನ್ನ ಪ್ರತಿಷ್ಠಿತ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಕಟಿಸಿದೆ. ದೇಶದ ರಕ್ಷಣಾ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಉತ್ಸುಕರಾಗಿರುವ ಯುವ ಎಂಜಿನಿಯರ್‌ಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

ಇಂಟರ್ನ್‌ಶಿಪ್‌ನ ಪ್ರಮುಖ ವಿವರಗಳು:

ಈ ಕಾರ್ಯಕ್ರಮವು ಕೇವಲ ತರಬೇತಿಯಲ್ಲ, ಬದಲಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನೈಜ ಯೋಜನೆಗಳಲ್ಲಿ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅಪರೂಪದ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 30,000ರೂ. ಸ್ಟೈಫಂಡ್ ನೀಡಲಾಗುತ್ತದೆ. ಈ ಇಂಟರ್ನ್‌ಶಿಪ್ ಮೇ ಅಥವಾ ಜೂನ್ ತಿಂಗಳಿನಿಂದ ಆರಂಭವಾಗಲಿದ್ದು, ಒಟ್ಟು 4 ರಿಂದ 6 ತಿಂಗಳವರೆಗೆ ಇರುತ್ತದೆ. ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, DRDO ವತಿಯಿಂದ ಅಧಿಕೃತ ಪ್ರಮಾಣಪತ್ರ ನೀಡಲಾಗುವುದು. ಇದು ನಿಮ್ಮ ವೃತ್ತಿಜೀವನದ ಮೌಲ್ಯವನ್ನು ಹೆಚ್ಚಿಸಲಿದೆ.

ಅರ್ಹತೆ ಏನಿರಬೇಕು?

ಈ ಇಂಟರ್ನ್‌ಶಿಪ್ ಪ್ರೋಗ್ರಾಂ ಅನ್ನು ವಿಶೇಷವಾಗಿ ತಾಂತ್ರಿಕ ಹಿನ್ನೆಲೆ ಉಳ್ಳವರಿಗಾಗಿ ರೂಪಿಸಲಾಗಿದೆ:

  • ಬಿ.ಇ. / ಬಿ.ಟೆಕ್ (B.E / B.Tech): ಅಂತಿಮ ವರ್ಷದಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾದ ವಿದ್ಯಾರ್ಥಿಗಳು.
  • ಎಂ.ಇ. / ಎಂ.ಟೆಕ್ (M.E / M.Tech): ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಅಥವಾ ಪೂರ್ಣಗೊಳಿಸಿದ ಅಭ್ಯರ್ಥಿಗಳು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು:

ಆಸಕ್ತ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 1, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2026
  • ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು DRDOನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘Careers’ ಅಥವಾ ‘Internship’ ವಿಭಾಗದಲ್ಲಿ ಆನ್‌ಲೈನ್ ಮೂಲಕ ಫಾರ್ಮ್ ಭರ್ತಿ ಮಾಡಬೇಕು.

ವಿದ್ಯಾರ್ಥಿಗಳಿಗೆ ಈ ಅವಕಾಶ ಏಕೆ ಮುಖ್ಯ?

DRDO ಇಂಟರ್ನ್‌ ಆಗಿ ಕೆಲಸ ಮಾಡುವುದು ಎಂದರೆ ದೇಶದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯುವುದು ಎಂದರ್ಥ. ಅನುಭವಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದರಿಂದ ನಿಮ್ಮ ತಾಂತ್ರಿಕ ಕೌಶಲ್ಯಗಳು ಅಭಿವೃದ್ಧಿಯಾಗುವುದಲ್ಲದೆ, ರಾಷ್ಟ್ರ ಸೇವೆ ಮಾಡಿದ ಹೆಮ್ಮೆಯೂ ನಿಮ್ಮದಾಗುತ್ತದೆ.

ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ನು ಕೂಲಂಕಷವಾಗಿ ಓದಿಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮುನ್ನ ಎಚ್ಚರ: ಗೋಡೆಯ ಮುಂದೆ ನಿಂತರೆ ಎಲ್ಲರಿಗೂ ಕಾಣುತ್ತದೆ! ಪಾಲಿಕೆಯಿಂದ ‘ಕನ್ನಡಿ’ ಭಾಗ್ಯ – Kannada News | Mysuru Combats Public Urination: Unique Stainless Steel Mirrors at Bus Stops

ಮೈಸೂರು ಮೂತ್ರ ವಿಸರ್ಜನೆ ತಡೆಗೆ ಹೊಸ ಪ್ಲಾನ್

ಮೈಸೂರು, ಮೇ.6: ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಸ್ ನಿಲ್ದಾಣಗಳ ಬಳಿಯ ಖಾಲಿ ಕಾಂಪೌಂಡ್ ಗೋಡೆಗಳ ಬಳಿ ಮೂತ್ರ ವಿಸರ್ಜನೆ ಮಾಡುವುದು ಮತ್ತು ಅದರಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಮೈಸೂರು ಮಹಾನಗರ ಪಾಲಿಕೆ (Mysore Metropolitan Corporation) ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸಾರ್ವಜನಿಕರೇ ಈ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೆ ದಂಡ ಎಲ್ಲ ರೀತಿಯ ಪ್ರಯೋ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ. ಇದೀಗ ಪಾಲಿಕೆ ಈ ಬಗ್ಗೆ ಗಂಭೀರವಾಗಿ ಚಿಂತೆ ನಡೆಸಿ, ಮಾಸ್ಟರ್​​ ಪ್ಲಾನ್​​ ಮಾಡಿದೆ.

ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್ ಗೋಡೆಗೆ ಸ್ಟೇನ್ ಲೆಸ್ ಸ್ಟೀಲ್ (Stainless Steel) ಶೀಟ್‌ಗಳನ್ನು ಅಳವಡಿಸಲಾಗಿದೆ. ಇದು ಕನ್ನಡಿಯಂತೆ ಕೆಲಸ ಮಾಡುತ್ತದೆ. ಈ ಶೀಟ್‌ಗಳ ಮುಂದೆ ಯಾರಾದರೂ ನಿಂತರೆ, ಅವರ ಪ್ರತಿಬಿಂಬವು ಕನ್ನಡಿಯಂತೆ ಕಾಣಿಸುವುದಲ್ಲದೆ, ಅವರ ಹಿಂಭಾಗದಲ್ಲಿ ಚಲಿಸುವವರಿಗೆ ಇವರು ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟುಮಾಡುವ ಮೂಲಕ ಅಂತಹ ಕೆಲಸ ಮಾಡದಂತೆ ತಡೆಯುತ್ತದೆ.

ಇದನ್ನ ಓದಿ: 15 ದಿನದಲ್ಲಿ 65 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!: ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಏಕೆ? ಪೊಲೀಸರು ಪತ್ತೆಹಚ್ಚಿದ 11 ಶಾಕಿಂಗ್ ಕಾರಣಗಳು!

ಕನ್ನಡಿಯ ಸುತ್ತಲೂ ಆಕರ್ಷಕ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸ್ಟ್ರೀಟ್ ಲೈಟ್‌ಗಳ ಜೊತೆಗೆ ಇವು ಕೂಡ ಆನ್ ಆಗುತ್ತವೆ. ಇದು ಆ ಪ್ರದೇಶಕ್ಕೆ ಹೊಸ ಕಳೆ ನೀಡುತ್ತದೆ. ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾಯೋಗಿಕವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಗೋಡೆಗೆ ಅಳವಡಿಸಲಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ರಾಜ್ಯದಲ್ಲೇ ಜಾರಿಯಾದ ಇಂತಹ ಮೊದಲ ಯೋಜನೆಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ – Kannada News | SBI employees strike for 2 days in May last week, 16 key demands

ಎಸ್​ಬಿಐ ನೌಕರರ ಮುಷ್ಕರImage Credit source: AI/Mediaforge/TV9

ನವದೆಹಲಿ, ಮೇ 6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ (SBI employees strike) ನಡೆಸಲು ನಿರ್ಧರಿಸಿದ್ದಾರೆ. ಮೇ 25 ಮತ್ತು 26ರಂದು ಈ ಪ್ರತಿಭಟನೆಗಳು ನಡೆಯಲಿವೆ. ಪಿಂಚಣಿ, ನೇಮಕಾತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ನೌಕರರು 16 ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಎಸ್​ಬಿಐ ದೇಶಾದ್ಯಂತ 50 ಕೋಟಿಗೂ ಅಧಿಕ ಸಂಖ್ಯೆಯಷ್ಟು ಗ್ರಾಹಕರ ಬಳಗ ಹೊಂದಿರುವುದರಿಂದ, ಈ ಎರಡು ದಿನಗಳ ಮುಷ್ಕರವು ಬಹಳ ಮಂದಿಯ ಮೇಲೆ ಪರಿಣಾಮ ಬೀರಬಹುದು.

ಎಸ್​ಬಿಐ ಉದ್ಯೋಗಿಗಳು ಮುಷ್ಕರ ನಡೆಸಲು ಪ್ರಮುಖ ಕಾರಣಗಳೇನು?

  • ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಇದರಿಂದ ಇರುವ ನೌಕರರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದೆ ಎಂಬುದು ಒಂದು ಸಂಗತಿ.
  • ಪಿಂಚಣಿ ಸಂಬಂಧಿತ ಸೌಲಭ್ಯಗಳು ಏಕರೂಪದಲ್ಲಿ ಇಲ್ಲದೇ ಇರುವುದರಿಂದ ಪಿಂಚಣಿ ಸಮಾನತೆ ಇಲ್ಲ ಎಂದು ತಗಾದೆ ತೆಗೆಯಲಾಗಿದೆ.
  • ಕೆಲಸದ ಸ್ಥಳದಲ್ಲಿ ಇನ್ನೂ ಉತ್ತಮವಾದ ವಾತಾವರಣ ಕಲ್ಪಿಸಬೇಕು. ನೌಕರರ ಕ್ಷೇಮಕ್ಕೆ ಆದ್ಯತೆ ಕೊಡಬೇಕು ಎನ್ನುವ ಕೂಗು ಇದೆ.
  • ಬ್ಯಾಂಕಿನ ಬೆನ್ನೆಲುಬಿನಂತಿರುವ ಕಾಯಂ ಹುದ್ದೆಗಳನ್ನು ಹೊರಗುತ್ತಿಗೆ (Outsourcing) ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಎಸ್​ಬಿಐ ನೌಕರರ ಒಕ್ಕೂಟ ಆಗ್ರಹಿಸಿದೆ.
  • ಕಳೆದ ಮೂರು ದಶಕಗಳಿಂದ ಸಂದೇಶವಾಹಕರ (Messengers) ನೇಮಕಾತಿ ಸ್ಥಗಿತಗೊಂಡಿದೆ. ಇತ್ತೀಚೆಗೆ ಸೂರತ್‌ನ ಎಸ್‌ಬಿಐ ಶಾಖೆಯಲ್ಲಿ ನಡೆದ ದರೋಡೆಯನ್ನು ಉಲ್ಲೇಖಿಸಿ, ನೌಕರರು ಮತ್ತು ಗ್ರಾಹಕರ ಸುರಕ್ಷತೆಗಾಗಿ ಸಶಸ್ತ್ರ ರಕ್ಷಕರನ್ನು (Armed Guards) ನೇಮಿಸಬೇಕೆಂದು ಒತ್ತಾಯಿಸಲಾಗಿದೆ.
  • ರಾಷ್ಟ್ರೀಯ ಪೆನ್ಶನ್ ಯೋಜನೆಯಡಿ ಬರುವ ನೌಕರರಿಗೆ ತಮ್ಮ ‘ಪೆನ್ಶನ್ ಫಂಡ್ ಮ್ಯಾನೇಜರ್’ ಅನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬದಲಾಯಿಸುವ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
  • 12ನೇ ದ್ವೈಪಕ್ಷಿಕ ಒಪ್ಪಂದದ ಪ್ರಕಾರ ಎಲ್ಲ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಬೇಕಿತ್ತಾದರೂ, ಅಧಿಕಾರಿಗಳಿಗೆ ಮಾತ್ರ ವಿಶೇಷ ಭತ್ಯೆ ನೀಡಿ ಅವರ ವೇತನವನ್ನು ಶೇ. 22 ರಷ್ಟು ಹೆಚ್ಚಿಸಲಾಗಿದೆ. ಈ ವೇತನ ತಾರತಮ್ಯವನ್ನು ಸರಿಪಡಿಸಬೇಕು ಎನ್ನುವ ಕೂಗು ಇದೆ.
  • 2019ರ ನಂತರ ಬ್ಯಾಂಕ್‌ಗೆ ಸೇರಿದ ನೌಕರರಿಗೆ ಅಂತರ-ವೃತ್ತ ವರ್ಗಾವಣೆಗೆ (Inter Circle Transfers) ಅವಕಾಶ ನೀಡಬೇಕು ಎನ್ನುವ ಬೇಡಿಕೆಯೂ ಇದೆ.

ಇದನ್ನೂ ಓದಿ: ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ

ಎಸ್​ಬಿಐ ನೌಕರರ 16 ಪ್ರಮುಖ ಬೇಡಿಕೆಗಳಿವು

  1. ಉದ್ಯೋಗಿಗಳ ಎನ್​ಪಿಎಸ್ ಸ್ಕೀಮ್​ನಲ್ಲಿ ಯಾವ ಪೆನ್ಷನ್ ಫಂಡ್ ಮ್ಯಾನೇಜರ್ ಬೇಕು ಎಂಬುದನ್ನು ಆಯ್ದುಕೊಳ್ಳುವ ಆಯ್ಕೆ ಬೇಕು.
  2. ಉದ್ಯೋಗಿಗಳ ಪಿಂಚಣಿ ಸಮಾನತೆ ಇರಲಿ
  3. ಸಿಬ್ಬಂದಿ ಕೊರತೆ ಇಲ್ಲದಂತೆ ಸರಿಯಾಗಿ ನೇಮಕಾತಿ ಆಗಬೇಕು.
  4. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
  5. ಕೆಲಸದ ಹೊರೆಯ ಒತ್ತಡ ಕಡಿಮೆ ಮಾಡಬೇಕು.
  6. ಬಡ್ತಿ ನೀತಿ ಇನ್ನೂ ಉತ್ತಮವಿರಬೇಕು.
  7. ವರ್ಗಾವಣೆ ನೀತಿ ಸುಧಾರಿಸಬೇಕು.
  8. ಉತ್ತಮ ವೈದ್ಯಕೀಯ ಸೌಲಭ್ಯ ಇರಬೇಕು.
  9. ಸಂಬಳ ಸಮಸ್ಯೆ ಬಗೆಹರಿಸಬೇಕು.
  10. ಉದ್ಯೋಗಿಗಳ ಹಕ್ಕು ರಕ್ಷಿಸಬೇಕು.
  11. ಕೆಲಸದ ವಾತಾವರಣ ಸುಧಾರಿಸಬೇಕು
  12. ದೂರು ಪರಿಹಾರ ವ್ಯವಸ್ಥೆ ಉತ್ತಮವಾಗಿರಬೇಕು.
  13. ಎಲ್ಲಾ ನೌಕರ ವರ್ಗಗಳಲ್ಲಿ ನ್ಯಾಯಯುತ ನೀತಿ ಮತ್ತು ನಡವಳಿಕೆ ಇರಬೇಕು.
  14. ಶಾಖಾ ಮಟ್ಟದ ಸಿಬ್ಬಂದಿ ಬಲಪಡಿಸಬೇಕು.
  15. ನಿವೃತ್ತಿ ಸೌಲಭ್ಯ ಉತ್ತಮವಾಗಿರಬೇಕು.
  16. ಉದ್ಯೋಗಿಗಳ ಕಲ್ಯಾಣ ಮತ್ತು ಸೇವಾ ಭದ್ರತೆ ಸುಧಾರಣೆಗಳಾಗಬೇಕು.

ಗ್ರಾಹಕರ ಮೇಲೆ ಇದರ ಪರಿಣಾಮವೇನು?

ಎಸ್‌ಬಿಐ ದೇಶಾದ್ಯಂತ ಸುಮಾರು 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಪ್ರತಿದಿನ ಕೋಟ್ಯಂತರ ವಹಿವಾಟುಗಳು ನಡೆಯುತ್ತವೆ. ಮುಷ್ಕರದ ಕಾರಣದಿಂದ ಕೆಳಗಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು:

ಮೇ 25 ಮತ್ತು 26 ರಂದು ಬ್ಯಾಂಕ್‌ಗಳ ಒಳಗೆ ನಡೆಯುವ ನಗದು ಜಮೆ, ಚೆಕ್ ಕ್ಲಿಯರೆನ್ಸ್, ಲೋನ್ ಪ್ರಕ್ರಿಯೆಗಳು ಮತ್ತು ಲಾಕರ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಅಥವಾ ವಿಳಂಬವಾಗಬಹುದು.

ಎರಡು ದಿನಗಳ ಕಾಲ ಬ್ಯಾಂಕ್ ನೌಕರರು ಇರುವುದಿಲ್ಲವಾದ್ದರಿಂದ ಎಟಿಎಂಗಳಿಗೆ ನಗದು ಮರುತುಂಬಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿ ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

ಮೇ 23 ನಾಲ್ಕನೇ ಶನಿವಾರ ಮತ್ತು ಮೇ 24 ಭಾನುವಾರ ಆಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದರ ಬೆನ್ನಲ್ಲೇ ಮೇ 25, 26 ರಂದು ಮುಷ್ಕರ ನಡೆಯುವುದರಿಂದ ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ಏರುಪೇರಾಗಬಹುದು. ಒಂದು ವೇಳೆ ಮುಷ್ಕರದ ದಿನ ಸಾರ್ವಜನಿಕ ರಜೆ ಬಂದರೆ, ಪ್ರತಿಭಟನೆಯನ್ನು ಮೇ 27ಕ್ಕೆ ಮುಂದೂಡಲಾಗುತ್ತದೆ.

ಗ್ರಾಹಕರಿಗೆ ಸಲಹೆಗಳು

ಮುಷ್ಕರದ ಅವಧಿಯಲ್ಲೂ **SBI YONO ಆಪ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು UPI (ಫೋನ್ ಪೇ, ಗೂಗಲ್ ಪೇ ಇತ್ಯಾದಿ) ಆನ್‌ಲೈನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮೇ 23 ಕ್ಕಿಂತ ಮುಂಚಿತವಾಗಿಯೇ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನಗದು ಹಣವನ್ನು ಬ್ಯಾಂಕ್ ಅಥವಾ ಎಟಿಎಂನಿಂದ ಡ್ರಾ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಚೆಕ್ ಕ್ಲಿಯರೆನ್ಸ್ ಅಥವಾ ಸಾಲದ ಕಂತುಗಳ ಪಾವತಿಯಂತಹ ಪ್ರಮುಖ ಕೆಲಸಗಳಿದ್ದಲ್ಲಿ ಮೇ 22ರ ಒಳಗಾಗಿಯೇ ಪೂರ್ಣಗೊಳಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

DK ಕೋಚ್ ಆಗಲು ಇವರೇ ಕಾರಣ..! – Kannada News | DK Reveals How Virat Kohli Inspired His RCB Coaching Role

ಐಪಿಎಲ್ ಅಂಗಳದಲ್ಲಿ ಅಬ್ಬರಿಸಿದ್ದ ‘ಫಿನಿಶರ್’ ದಿನೇಶ್ ಕಾರ್ತಿಕ್, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್. ಆಟಗಾರನಾಗಿ ನಿವೃತ್ತಿ ಹೊಂದಿದ ಬೆನ್ನಲ್ಲೇ ಡಿಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ಎಂಬ ಕುತೂಹಲಕಾರಿ ವಿಷಯವನ್ನು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಕೊಹ್ಲಿಯ ‘ಮಹತ್ವದ’ ಸಲಹೆ:

ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ನಿವೃತ್ತಿ ಘೋಷಿಸಿದ ಬಳಿಕ ನಾನು ಗೊಂದಲದಲ್ಲಿದ್ದೆ. ಈ ವೇಳೆ ನಾನು ವಿರಾಟ್ ಕೊಹ್ಲಿಯನ್ನು ಎರಡು ಬಾರಿ ಭೇಟಿಯಾಗಿದ್ದೆ. ಈ ವೇಳೆ ಅವರು ನೀಡಿದ ಸಲಹೆಯು ನಾನು ಸೆಕೆಂಡ್ ಇನಿಂಗ್ಸ್​ ಆರಂಭಿಸಲು ಕಾರಣವಾಯ್ತು ಎಂದಿದ್ದಾರೆ.

  • ಮೊದಲ ಬಾರಿ: ನಿವೃತ್ತಿಯ ನಂತರ ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ಅವರು”ನೀನು ಕೋಚಿಂಗ್ ಪಾತ್ರದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು” ಎಂದು ಪ್ರೋತ್ಸಾಹಿಸಿದ್ದರು.
  • ಎರಡನೇ ಬಾರಿ: ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರಿಂದ ಅಧಿಕೃತವಾಗಿ ಕೋಚಿಂಗ್ ಆಫರ್ ಬಂದಾಗ, ವಿರಾಟ್ ಕೊಹ್ಲಿ ಅವರು ಕಾರ್ತಿಕ್‌ಗೆ “ನೀನು ಖಂಡಿತವಾಗಿಯೂ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು, ಇದು ನಿನಗೆ ಸರಿಯಾಗಿ ಹೊಂದಿಕೆಯಾಗುತ್ತದೆ” ಎಂದು ಭರವಸೆ ನೀಡಿದ್ದರು.

ವಿರಾಟ್ ಕೊಹ್ಲಿಯ ಈ ಸಲಹೆಗಳು ಮತ್ತು ಪ್ರೊತ್ಸಾಹದೊಂದಿಗೆ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಲು ಒಪ್ಪಿಕೊಂಡರು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಡಿಕೆ ಮೊದಲ ಸೀಸನ್​ನಲ್ಲೇ ಆರ್​ಸಿಬಿ ತಂಡಕ್ಕೆ ಕಪ್ ಗೆದ್ದು ಕೊಡುವ ಮೂಲಕ ಯಶಸ್ಸು ಸಾಧಿಸಿದರು.

ಆರ್‌ಸಿಬಿಗೆ ಡಿಕೆ ಬಲ:

ದಿನೇಶ್ ಕಾರ್ತಿಕ್ ಅವರ ಅಪಾರ ಅನುಭವ ಮತ್ತು ಭಾರತೀಯ ಕ್ರಿಕೆಟ್‌ನ ಆಳವಾದ ಜ್ಞಾನವು ತಂಡಕ್ಕೆ ವರದಾನವಾಗಿದೆ. ಮುಖ್ಯ ಕೋಚ್ ಆಂಡಿ ಫ್ಲವರ್ ಕೂಡ ತಂಡದಲ್ಲಿ ಒಬ್ಬ ಭಾರತೀಯ ಮಾರ್ಗದರ್ಶಕ ಇರಬೇಕು ಎಂದು ಬಯಸಿದ್ದರು. ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಆರ್‌ಸಿಬಿ ತಂಡವು ಈಗಾಗಲೇ 2025ರ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ.

ಜಾಗತಿಕ ಮಟ್ಟದಲ್ಲೂ ಡಿಕೆ ಹವಾ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನ ನಂತರ, ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಬೇಡಿಕೆ ಹೆಚ್ಚಾಗಿದೆ. 2026ರ ‘ದಿ ಹಂಡ್ರೆಡ್’ (The Hundred) ಕ್ರಿಕೆಟ್ ಟೂರ್ನಿಯಲ್ಲಿ ಅವರು ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ‘ಹುಳುಕು’ ಬಹಿರಂಗ ಪಡಿಸಿದ ಮಂಜ್ರೇಕರ್

ಒಟ್ಟಿನಲ್ಲಿ, ಮೈದಾನದಲ್ಲಿ ಫಿನಿಶರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್, ಈಗ ಮೈದಾನದ ಹೊರಗೂ ಕೊಹ್ಲಿಯ ಬೆಂಬಲದೊಂದಿಗೆ ಯಶಸ್ವಿ ತರಬೇತುದಾರರಾಗಿ ಹೊರಹೊಮ್ಮುತ್ತಿದ್ದಾರೆ.

Source link

ಬಿಜೆಪಿ ಗೆಲುವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕಾಳಿಘಾಟ್​​ ನಿವಾಸದ ಭದ್ರತೆ ಕಡಿತ – Kannada News | Mamata banerjees residence security reduced following bjps west bengal victory

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಬಿಜೆಪಿ ಜಯಭೇರಿ ಬಾರಿಸಿದ್ದು, ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಸುತ್ತಮುತ್ತಲಿನ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ನೀಡಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಲಾಗಿದ್ದು, ಹಿಂದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಇದ್ದ ಭಾರೀ ಭದ್ರತೆ ಕಡಿತಗೊಳಿಸಲಾಗಿದೆ. ಮಮತಾ ನಿವಾಸದ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ವಿವಾದ ಸುಖಾಂತ್ಯ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್  – Kannada News | Dhurandhar Copyright Row Settles: Aditya Dhar Wins as Santosh Kumar Apologizes

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ನೋಡಿ ಅನೇಕರು ಹೊಗಳಿದ್ದಾರೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಕೂಡ ಮಾಡಿದೆ. ಇದರ ಜೊತೆಗೆ ಸಿನಿಮಾ ಸುತ್ತ ಕಾನೂನು ಸಂಘರ್ಷ ಎದುರಾಗಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದೆ. ಆದಿತ್ಯ ಧರ್ ವಿರುದ್ಧ ಕೃತಿ ಚೌರ್ಯದ ಆರೋಪ ಮಾಡಿದ್ದ ಸಂತೋಷ್ ಕುಮಾರ್ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆ ಬಳಿಕ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಕೈಬಿಟ್ಟಿದೆ.

1.‘ಧುರಂಧರ್ 2’ ರಿವೇಂಜ್ ವಿವಾದಕ್ಕೆ ತೆರೆ

2. ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್

3. ಸಂತೋಷ್ ಬಳಿ ಇದೆ ಇನ್ನೊಂದು ಆಯ್ಕೆ 

2026ರ ಮಾರ್ಚ್ ತಿಂಗಳಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಅವರು ಆದಿತ್ಯ ಧರ್ ಮೇಲೆ ಗಂಭೀರ ಆರೋಪ ಮಾಡಿದ್ದರು. ತಾವು 2023ರಲ್ಲಿ ಚಿತ್ರಕಥೆ ಬರಹಗಾರರ ಸಂಘದಲ್ಲಿ (SWA) ನೋಂದಾಯಿಸಿದ್ದ ‘ಡಿ-ಸಾಹೇಬ್’ ಚಿತ್ರಕಥೆಯನ್ನು ಕದ್ದು ಆದಿತ್ಯ ಧರ್ ‘ಧುರಂಧರ್’ ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯಿಂದ ತಮ್ಮ ವೃತ್ತಿಜೀವನಕ್ಕೆ ಮತ್ತು ಗೌರವಕ್ಕೆ ಧಕ್ಕೆ ಬಂದಿದೆ ಎಂದು ಆದಿತ್ಯ ಧರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು ಮಾರ್ಚ್ 30ರಂದು ತಾವು ನೀಡಿದ್ದ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ಲಿಖಿತವಾಗಿ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸ್ವೀಕರಿಸಿದ ಆದಿತ್ಯ ಧರ್ ಅವರ ಪರ ವಕೀಲರು, ನಮಗೆ ಪರಿಹಾರದ ನಿರೀಕ್ಷೆಯಾಗಲಿ ಅಥವಾ ಪ್ರಕರಣ ಮುಂದುವರಿಸುವ ಆಸಕ್ತಿಯಾಗಲಿ ಇಲ್ಲ ಎಂದು ತಿಳಿಸಿದರು. ಎರಡೂ ಕಡೆಯವರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಮಾನನಷ್ಟ ಮೊಕದ್ದಮೆ ಮುಕ್ತಾಯಗೊಂಡಿದ್ದರೂ, ಕಥೆಯ ಹಕ್ಕುಸ್ವಾಮ್ಯದ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ಸಂತೋಷ್ ಕುಮಾರ್ ಅವರಿಗೆ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂದರೆ, ಕಥೆ ಯಾರಿಗೆ ಸೇರಿದ್ದು ಎಂಬ ಬಗ್ಗೆ ಅವರು ಸ್ವತಂತ್ರವಾಗಿ ದೂರು ದಾಖಲಿಸಬಹುದಾಗಿದೆ. ಆರಂಭದಲ್ಲಿ ಕ್ಷಮೆ ಕೇಳಲು ಹಿಂದೇಟು ಹಾಕಿದ್ದ ಸಂತೋಷ್ ಕುಮಾರ್, ಕೊನೆಗೆ ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದರು. ಕಥೆಯ ಹಕ್ಕು ಸ್ವಾಮ್ಯದಲ್ಲಿ ಅವರು ಕೇಸ್ ಹಾಕುತ್ತಾರಾ ನೋಡಬೇಕಿದೆ.

Source link

Vastu Tips: ಸೆಕೆಂಡ್ ಹ್ಯಾಂಡ್ ವಸ್ತು ಖರೀದಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ! – Kannada News | Vastu Tips: Second Hand Items to Avoid Bringing Negative Energy Home

ಇಂದಿನ ಕಾಲದಲ್ಲಿ ಬಜೆಟ್ ಉಳಿಸಲು ಅಥವಾ ವಿಂಟೇಜ್ (Vintage) ಲುಕ್ ಪಡೆಯಲು ಅನೇಕರು ಹಳೆಯ ಅಥವಾ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಗೆ ತರುವ ಪ್ರತಿಯೊಂದು ವಸ್ತುವು ತನ್ನದೇ ಆದ ಶಕ್ತಿಯನ್ನು (Energy) ಹೊಂದಿರುತ್ತದೆ. ಬೇರೆಯವರು ಬಳಸಿದ ವಸ್ತುಗಳನ್ನು ಮನೆಗೆ ತರುವಾಗ, ಅವರ ಅದೃಷ್ಟ ಅಥವಾ ಸಂಕಷ್ಟಗಳು ನಮ್ಮ ಮನೆಗೆ ಬರಬಹುದು ಎಂಬ ನಂಬಿಕೆಯಿದೆ. ಹಾಗಾದರೆ, ಯಾವ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಖರೀದಿಸುವುದು ಅಶುಭ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರ ಮತ್ತು ವಸ್ತುಗಳ ಶಕ್ತಿ:

ವಾಸ್ತು ಶಾಸ್ತ್ರವು ಪ್ರತಿಯೊಂದು ನಿರ್ಜೀವ ವಸ್ತುವೂ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ಹೇಳುತ್ತದೆ. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ದೀರ್ಘಕಾಲ ಬಳಸಿದಾಗ, ಅವರ ಆಲೋಚನೆಗಳು, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಕಂಪನಗಳು ಆ ವಸ್ತುವಿನೊಂದಿಗೆ ಬೆರೆತುಹೋಗುತ್ತವೆ. ಆತ ಕಷ್ಟದಲ್ಲಿದ್ದರೆ ಅಥವಾ ಮಾನಸಿಕವಾಗಿ ನೊಂದಿದ್ದರೆ, ಆ ನಕಾರಾತ್ಮಕತೆಯು ನಿಮ್ಮ ಮನೆಯ ಶಾಂತಿಯನ್ನು ಕದಡಬಹುದು.

ಬಳಸಿದ ಹಾಸಿಗೆ ಮತ್ತು ಪೀಠೋಪಕರಣಗಳು:

ಮನೆಯಲ್ಲಿ ಹಾಸಿಗೆಯು ಅತ್ಯಂತ ವೈಯಕ್ತಿಕವಾದ ವಸ್ತುವಾಗಿದೆ. ವಾಸ್ತು ಪ್ರಕಾರ, ಹಳೆಯ ಹಾಸಿಗೆಯನ್ನು ಬಳಸುವುದು ಅಶುಭ. ಏಕೆಂದರೆ ಅದು ಹಿಂದಿನ ಮಾಲೀಕರ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೊಂದಿರುತ್ತದೆ. ಒಂದು ವೇಳೆ ಅವರು ದೀರ್ಘಕಾಲದ ಅನಾರೋಗ್ಯ ಅಥವಾ ದಾಂಪತ್ಯ ಕಲಹದಿಂದ ಬಳಲುತ್ತಿದ್ದರೆ, ಆ ಹಾಸಿಗೆಯನ್ನು ಬಳಸುವ ಹೊಸ ಮಾಲೀಕರಿಗೂ ನಿದ್ರಾಹೀನತೆ ಮತ್ತು ವೈವಾಹಿಕ ಸಮಸ್ಯೆಗಳು ಎದುರಾಗಬಹುದು. ಹಾಗೆಯೇ, ಮರವು ಶಕ್ತಿಯನ್ನು ಬೇಗನೆ ಹೀರಿಕೊಳ್ಳುವುದರಿಂದ ಹಳೆಯ ಸೋಫಾ ಅಥವಾ ಕುರ್ಚಿಗಳನ್ನು ಖರೀದಿಸುವಾಗ ಜಾಗರೂಕರಾಗಿರಿ.

ಹಳೆಯ ಗಡಿಯಾರಗಳು:

ಗಡಿಯಾರವು ಕೇವಲ ಸಮಯವನ್ನು ತೋರಿಸುವುದಿಲ್ಲ, ಅದು ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಬೇರೆಯವರು ಬಳಸಿದ ಅಥವಾ ನಿಂತುಹೋದ ಹಳೆಯ ಗಡಿಯಾರಗಳನ್ನು ಮನೆಗೆ ತರುವುದು ನಿಮ್ಮ ಪ್ರಗತಿಗೆ ತಡೆಯೊಡ್ಡಬಹುದು. ಹಿಂದಿನ ಮಾಲೀಕರು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೆ, ಅದರ ಪ್ರಭಾವ ನಿಮ್ಮ ಮೇಲೂ ಬೀರುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಯಾವಾಗಲೂ ಹೊಸ ಮತ್ತು ಸುಸ್ಥಿತಿಯಲ್ಲಿರುವ ಗಡಿಯಾರವನ್ನೇ ಇಟ್ಟುಕೊಳ್ಳುವುದು ಶ್ರೇಯಸ್ಕರ.

ಬಟ್ಟೆ ಮತ್ತು ಪಾದರಕ್ಷೆಗಳು:

ಅನೇಕರು ಇತರರ ಹಳೆಯ ಬಟ್ಟೆಗಳನ್ನು ಅಥವಾ ಬೂಟುಗಳನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿವೆ. ಬೇರೆಯವರ ಹಳೆಯ ಅಥವಾ ಹರಿದ ಬೂಟುಗಳನ್ನು ಧರಿಸುವುದರಿಂದ ಜಾತಕದಲ್ಲಿ ಶನಿ ದೋಷ ಉಂಟಾಗಬಹುದು ಮತ್ತು ದಾರಿದ್ರ್ಯಕ್ಕೆ ಕಾರಣವಾಗಬಹುದು. ಅಲ್ಲದೆ, ಬಟ್ಟೆಗಳ ಮೂಲಕ ಇನ್ನೊಬ್ಬರ ಅನಾರೋಗ್ಯ ಅಥವಾ ನಕಾರಾತ್ಮಕ ಭಾವನೆಗಳು ನಿಮ್ಮ ದೇಹವನ್ನು ಪ್ರವೇಶಿಸಬಹುದು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪೊರಕೆ:

ಪೊರಕೆಯನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೇರೆಯವರ ಮನೆಯಲ್ಲಿ ಬಳಸಿದ ಪೊರಕೆಯನ್ನು ನಿಮ್ಮ ಮನೆಗೆ ತರುವುದು ಅಥವಾ ನಿಮ್ಮ ಮನೆಯ ಪೊರಕೆಯನ್ನು ಬೇರೆಯವರಿಗೆ ನೀಡುವುದು ಎರಡೂ ವಾಸ್ತು ಪ್ರಕಾರ ತಪ್ಪು. ಇದು ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಬಡತನಕ್ಕೆ ದಾರಿ ಮಾಡಿಕೊಡುತ್ತದೆ.

ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಲೇಬೇಕಾದಲ್ಲಿ ಈ ಪರಿಹಾರಗಳನ್ನು ಅನುಸರಿಸಿ:

ಒಂದು ವೇಳೆ ಅನಿವಾರ್ಯವಾಗಿ ನೀವು ಹಳೆಯ ವಸ್ತುಗಳನ್ನು ಖರೀದಿಸಿದ್ದರೆ ಅಥವಾ ಉಡುಗೊರೆಯಾಗಿ ಪಡೆದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಅದರ ನಕಾರಾತ್ಮಕತೆಯನ್ನು ಹೋಗಲಾಡಿಸಬಹುದು:

  • ಗಂಗಾಜಲ ಅಥವಾ ಉಪ್ಪು ನೀರು: ಹೊಸದಾಗಿ ತಂದ ವಸ್ತುವನ್ನು ಗಂಗಾಜಲದಿಂದ ಪ್ರೋಕ್ಷಿಸಿ ಅಥವಾ ಉಪ್ಪು ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಿ. ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ.
  • ಧೂಪ-ದೀಪ: ಕರ್ಪೂರ ಅಥವಾ ಸಾಂಬ್ರಾಣಿ ಧೂಪವನ್ನು ವಸ್ತುವಿನ ಸುತ್ತ ತೋರಿಸುವುದರಿಂದ ಅದರ ಶಕ್ತಿಯು ಶುದ್ಧೀಕರಣಗೊಳ್ಳುತ್ತದೆ.
  • ಸೂರ್ಯನ ಬೆಳಕು: ಸೂರ್ಯನ ಶಾಖವು ಅತ್ಯುತ್ತಮ ನೈಸರ್ಗಿಕ ಶುದ್ಧೀಕರಣಕಾರಕ. ಸಾಧ್ಯವಾದರೆ ಆ ವಸ್ತುವನ್ನು ಒಂದು ದಿನ ಪೂರ್ತಿ ಬಿಸಿಲಿನಲ್ಲಿ ಇರಿಸಿ. ಇದರಿಂದ ಅದರಲ್ಲಿರುವ ನಕಾರಾತ್ಮಕ ಕಂಪನಗಳು ನಾಶವಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version