Personality Test: ‘A’ ಅಕ್ಷರದಿಂದ ಪ್ರಾರಂಭವಾಗುವವರ ವ್ಯಕ್ತಿತ್ವ ಹೇಗಿರುತ್ತೆ? ಇವರ ಯಶಸ್ಸಿನ ರಹಸ್ಯವೇನು ಗೊತ್ತಾ? – Kannada News | A Letter Personality: Astrology and Numerology Traits Revealed

‘A’ ಅಕ್ಷರದಿಂದ ಹೆಸರು ಪ್ರಾರಂಭImage Credit source: Pinterest

ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ (Numerology) ನಂಬಿಕೆ. ಇಂಗ್ಲಿಷ್ ವರ್ಣಮಾಲೆಯ ಮೊದಲ ಅಕ್ಷರವಾದ ‘A’ (ಎ) ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳ ಗುಣಸ್ವಭಾವ, ಆರ್ಥಿಕ ಸ್ಥಿತಿ ಮತ್ತು ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

‘A’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ವ್ಯಕ್ತಿತ್ವ:

‘A’ ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳು ಸ್ವಾಭಾವಿಕವಾಗಿಯೇ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ಅಕ್ಷರವು ಸಂಖ್ಯೆ 1ಕ್ಕೆ ಸಂಬಂಧಿಸಿದ್ದಾಗಿದ್ದು, ಸೂರ್ಯ ಮತ್ತು ಮಂಗಳ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ, ಇವರು ತುಂಬಾ ಶಕ್ತಿಯುತವಾಗಿದ್ದು, ಯಾವುದೇ ಸವಾಲುಗಳನ್ನು ಎದುರಿಸಲು ಸದಾ ಸಿದ್ಧರಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮುನ್ನುಗ್ಗುವ ಇವರು, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಹೊಸ ವಿಷಯಗಳನ್ನು ಕಲಿಯುವುದು ಮತ್ತು ಜೀವನದಲ್ಲಿ ಸದಾ ಪ್ರಗತಿ ಕಾಣುವ ಹಂಬಲ ಇವರಲ್ಲಿ ತೀವ್ರವಾಗಿರುತ್ತದೆ.

ಇವರ ವ್ಯಕ್ತಿತ್ವವು ಇತರರನ್ನು ಸುಲಭವಾಗಿ ಆಕರ್ಷಿಸುತ್ತದೆ. ಇವರು ಗುಂಪಿನಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ ಮತ್ತು ಎಲ್ಲರ ಗಮನ ಸೆಳೆಯುವ ಕಲೆ ಇವರಿಗೆ ಕರಗತವಾಗಿರುತ್ತದೆ. ವೃತ್ತಿಜೀವನದಲ್ಲಿ ಇವರು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ಆದ್ದರಿಂದಲೇ ಇವರು ಉದ್ಯಮ ಅಥವಾ ಉನ್ನತ ಹುದ್ದೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಇವರು ನೇರ ನಡೆನುಡಿಯವರಾಗಿದ್ದು, ಮನಸ್ಸಿನಲ್ಲಿರುವುದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಗಳಿಸಲು ಇವರು ಶ್ರಮಿಸುತ್ತಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಆದರೆ, ಇವರಲ್ಲಿ ಕೆಲವು ನಕಾರಾತ್ಮಕ ಅಂಶಗಳೂ ಇರಬಹುದು. ಇವರು ಸ್ವಲ್ಪ ಹಠಮಾರಿ ಸ್ವಭಾವದವರಾಗಿದ್ದು, ಒಮ್ಮೆ ನಿರ್ಧರಿಸಿದರೆ ಅದನ್ನು ಬದಲಾಯಿಸುವುದು ಕಷ್ಟ. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವು ಅಹಂಕಾರದಂತೆ ಕಾಣಿಸಬಹುದು. ಕೋಪವು ಇವರಲ್ಲಿ ಬೇಗನೆ ಬರುತ್ತದೆ ಮತ್ತು ತಮ್ಮ ನೇರ ಮಾತಿನಿಂದ ಕೆಲವೊಮ್ಮೆ ಇತರರ ಮನಸ್ಸಿಗೆ ನೋವುಂಟು ಮಾಡಬಹುದು. ಆದಾಗ್ಯೂ, ಇವರು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಗುಣ ಹೊಂದಿದ್ದು, ತಾವು ನಂಬಿದ ತತ್ವಗಳಿಗಾಗಿ ಕೊನೆಯವರೆಗೂ ಹೋರಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ, ‘A’ ಅಕ್ಷರದವರು ಜೀವನದಲ್ಲಿ ದೊಡ್ಡ ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸುವ ಛಲವುಳ್ಳವರಾಗಿರುತ್ತಾರೆ.

ಪ್ರಮುಖ ಅಂಶಗಳು:

  • ನಾಯಕತ್ವ: ಇವರು ಹುಟ್ಟಿನಿಂದಲೇ ನಾಯಕರಾಗಿರುತ್ತಾರೆ.
  • ಧೈರ್ಯ: ಎಂತಹ ಸವಾಲಿಗೂ ಅಂಜದ ವ್ಯಕ್ತಿತ್ವ.
  • ನೇರ ನುಡಿ: ಯಾವುದೇ ವಿಷಯವನ್ನೂ ನೇರವಾಗಿ ಹೇಳುವ ಸ್ವಭಾವ.
  • ಹಠಮಾರಿತನ: ತಮ್ಮ ಹಠದಿಂದ ಕೆಲವೊಮ್ಮೆ ತೊಂದರೆಗೆ ಸಿಲುಕಬಹುದು.

ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವರ ಬೆಳೆದು ಬಂದ ಪರಿಸರ ಮತ್ತು ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್ ಸಿಮ್‌ಗಳು ಏಕೆ ಕಾರ್ಯನಿರ್ವಹಿಸುವುದಿಲ್ಲ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ವಿಷಯ – Kannada News | Why prepaid SIMs do not work in Jammu and Kashmir? Here is an interesting fact

ಬೆಂಗಳೂರು (ಮೇ. 06): ಮೊಬೈಲ್ ಫೋನ್‌ಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿವೆ. ಭಾರತದಲ್ಲಿ ಹೆಚ್ಚಿನ ಜನರು ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ ಏಕೆಂದರೆ ಅವು ಅಗ್ಗದ, ಸುಲಭ ಮತ್ತು ತಕ್ಷಣ ಸಕ್ರಿಯಗೊಳಿಸಬಹುದಾದವು. ಆದಾಗ್ಯೂ, ದೇಶದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ, ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ (Jammu Kashmir) ಮತ್ತು ಕೆಲವು ಈಶಾನ್ಯ ರಾಜ್ಯಗಳು ಸೇರಿವೆ. ಈ ಪ್ರದೇಶಗಳಲ್ಲಿ ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಏಕೆ ನಿರ್ಬಂಧಿಸಲಾಗಿದೆ ಅಥವಾ ನಿಷೇಧಿಸಲಾಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಕಾರಣ ಇಲ್ಲಿದೆ ನೋಡಿ.

ಪ್ರಿಪೇಯ್ಡ್ ಸಿಮ್ ಕಾರ್ಡ್ ಎಂದರೆ ಸೇವೆಗಳನ್ನು ಪ್ರವೇಶಿಸಲು ಪೂರ್ವ-ರೀಚಾರ್ಜ್ ಅಗತ್ಯವಿರುವ ಒಂದು ಸಿಮ್ ಕಾರ್ಡ್. ಇದನ್ನು ಪಡೆಯುವುದು ಸುಲಭ ಮತ್ತು ಸಾಮಾನ್ಯವಾಗಿ ಕಡಿಮೆ ದಾಖಲೆಗಳು ಬೇಕಾಗುತ್ತವೆ. ಈ ಬಳಕೆಯ ಸುಲಭತೆಯು ಕೆಲವೊಮ್ಮೆ ಭದ್ರತಾ ಸಂಸ್ಥೆಗಳಿಗೆ ಸವಾಲನ್ನು ಒಡ್ಡುತ್ತದೆ, ಏಕೆಂದರೆ ಅಂತಹ ಸಿಮ್ ಕಾರ್ಡ್‌ಗಳನ್ನು ಸುಲಭವಾಗಿ ಖರೀದಿಸಬಹುದು, ಗುರುತಿನ ಪರಿಶೀಲನೆ (KYC) ಕಾರ್ಯವಿಧಾನಗಳು ಕೆಲವೊಮ್ಮೆ ಸೀಮಿತವಾಗಿರುತ್ತವೆ ಮತ್ತು ಟ್ರ್ಯಾಕಿಂಗ್ ಪೋಸ್ಟ್‌ಪೇಯ್ಡ್ ಕಾರ್ಡ್‌ಗಳಿಗಿಂತ ಹೆಚ್ಚು ಕಷ್ಟಕರವಾಗಿರುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್ ಸಿಮ್ ಏಕೆ ಕೆಲಸ ಮಾಡುವುದಿಲ್ಲ?

ಜಮ್ಮು ಮತ್ತು ಕಾಶ್ಮೀರವನ್ನು ಬಹಳ ಹಿಂದಿನಿಂದಲೂ ಭದ್ರತಾ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಲು ಕಾಲಕಾಲಕ್ಕೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ ವಿವಿಧ ನಿಯಮಗಳನ್ನು ಕಾಲಕಾಲಕ್ಕೆ ಜಾರಿಗೆ ತರಲಾಗುತ್ತದೆ. ಕೆಲವು ಜನರು ಮೊಬೈಲ್ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಸರ್ಕಾರ ನಂಬುತ್ತದೆ. ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳು ಕಟ್ಟುನಿಟ್ಟಾದ ಪರಿಶೀಲನೆ ಇಲ್ಲದೆ ಸುಲಭವಾಗಿ ಲಭ್ಯವಿರುತ್ತವೆ, ಇದರಿಂದಾಗಿ ಅಂತಹ ಸಿಮ್ ಕಾರ್ಡ್‌ಗಳನ್ನು ಟ್ರ್ಯಾಕ್ ಮಾಡುವುದು ಕಷ್ಟಕರವಾಗುತ್ತದೆ. ಈ ಕಾರಣಗಳಿಗಾಗಿ, ಈ ಪ್ರದೇಶದಲ್ಲಿ ಮೊಬೈಲ್ ಸೇವೆಗಳನ್ನು ನಿಯಂತ್ರಿಸಲಾಗುತ್ತದೆ.

ಭದ್ರತೆಯ ಬಗ್ಗೆ ಇರುವ ಕಾಳಜಿಗಳೇನು?

ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳ ದೊಡ್ಡ ಪ್ರಯೋಜನವೆಂದರೆ ಅವುಗಳ ಬಳಕೆಯ ಸುಲಭತೆ. ಆದಾಗ್ಯೂ, ಈ ಅನುಕೂಲತೆಯು ಕೆಲವೊಮ್ಮೆ ಸಮಸ್ಯೆಯಾಗಬಹುದು. ಈ ಸಿಮ್ ಕಾರ್ಡ್‌ಗಳನ್ನು ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಸರಿಯಾದ ಗುರುತಿನ ಚೀಟಿ ಇಲ್ಲದೆ ಸಂವಹನ ಸಾಧ್ಯವಾಗಬಹುದು, ಇದು ತಪ್ಪು ಮಾಹಿತಿ ಅಥವಾ ವದಂತಿಗಳ ಹರಡುವಿಕೆಗೆ ಕಾರಣವಾಗಬಹುದು ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ, ಈ ಪ್ರದೇಶದಲ್ಲಿ ಮೊಬೈಲ್ ಸೇವೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಪೋಸ್ಟ್‌ಪೇಯ್ಡ್ ಸಿಮ್ ಏಕೆ ಉತ್ತಮ?

ಜಮ್ಮು ಮತ್ತು ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗಿದೆ, ಏಕೆಂದರೆ ಅವುಗಳಿಗೆ ಸಂಪೂರ್ಣ ವೈಯಕ್ತಿಕ ಗುರುತಿನ ಚೀಟಿ (KYC), ಬಳಕೆದಾರರ ವಿವರಗಳನ್ನು ದಾಖಲಿಸುವುದು ಮತ್ತು ಅವುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡುವುದು ಮತ್ತು ದುರುಪಯೋಗದ ಅಪಾಯವನ್ನು ಕಡಿಮೆ ಮಾಡುವುದು ಅಗತ್ಯವಾಗಿರುತ್ತದೆ. ಆದ್ದರಿಂದ, ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್‌ಗಳನ್ನು ಬಳಸಲು ಸೂಚಿಸಲಾಗುತ್ತದೆ.

Amazon Summer Sale: ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಸಮ್ಮರ್ ಸೇಲ್: ಫ್ಲಿಪ್​ಕಾರ್ಟ್​ನಲ್ಲಿ ಸಾಸಾ ಲೇಲೆ ಸೇಲ್

ಜಮ್ಮು ಮತ್ತು ಕಾಶ್ಮೀರಕ್ಕೆ ಬರುವ ಜನರಿಗೆ ಸೂಚನೆ

ನೀವು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿದ್ದರೆ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ: ಸ್ಥಳೀಯ ನಿಯಮಗಳನ್ನು ಮುಂಚಿತವಾಗಿ ತಿಳಿಯಿರಿ. ಮಾನ್ಯವಾದ, KYC-ಪರಿಶೀಲಿಸಿದ ಸಿಮ್ ಕಾರ್ಡ್ ಬಳಸಿ. ಪೋಸ್ಟ್‌ಪೇಯ್ಡ್ ಸಂಪರ್ಕವು ಹೆಚ್ಚು ಅನುಕೂಲಕರವಾಗಿರಬಹುದು. ಸರ್ಕಾರಿ ಮಾರ್ಗಸೂಚಿಗಳನ್ನು ಅನುಸರಿಸಿ.

ಈಶಾನ್ಯ ರಾಜ್ಯಗಳಲ್ಲಿ ಇದೇ ರೀತಿಯ ನಿಯಮಗಳು ಏಕೆ ಇವೆ?

ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಅರುಣಾಚಲ ಪ್ರದೇಶದಂತಹ ಈಶಾನ್ಯ ರಾಜ್ಯಗಳು ಕೆಲವು ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳ ಮೇಲೆ ವಿಶೇಷ ನಿರ್ಬಂಧಗಳನ್ನು ವಿಧಿಸುತ್ತವೆ. ಗಡಿ ಪ್ರದೇಶಗಳು, ವಿಶಿಷ್ಟ ಭದ್ರತಾ ಸವಾಲುಗಳು, ಕಾನೂನುಬಾಹಿರ ಚಟುವಟಿಕೆಗಳ ಸಾಧ್ಯತೆ ಮತ್ತು ನೆಟ್‌ವರ್ಕ್ ದುರುಪಯೋಗದ ತಡೆಗಟ್ಟುವಿಕೆ ಇದಕ್ಕೆ ಕಾರಣ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರದಲ್ಲಿ 3 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಕುಟುಂಬಸ್ಥರಿಗೆ ಆಘಾತ ತಂದ ಘಟನೆ – Kannada News | Stray Dog Attack in Vijayapura: Three Year Old Viraj Injured, Family Calls for Municipal Action

ವಿಜಯಪುರ, ಮೇ 06: ರಾಜಕುಮಾರ ಲೇಔಟ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ವಿರಾಜ್ ಸಂತೋಷ್ ಬಿರಾದಾರ್ ಎಂಬ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಯೊಂದು ಬಾಲಕನನ್ನು ಕಚ್ಚಿ ಸುಮಾರು 100 ಅಡಿ ದೂರ ಎಳೆದೊಯ್ದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಹೊರೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬಾಲಕನ ಜೀವ ಉಳಿದಿದೆ. ಬಾಲಕನ ಬೆನ್ನು ಮತ್ತು ತೊಡೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಗಂಭೀರ ಗಾಯಗೊಂಡಿರೋದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ವಿರಾಜ್ ದೊಡ್ಡಪ್ಪ ರಾಜಶೇಖರ್ ಅವರ ಪ್ರಕಾರ, ಘಟನೆ ನಡೆದ ತಕ್ಷಣವೇ ಮಹಾನಗರ ಪಾಲಿಕೆಗೆ ಮಾಹಿತಿ ನೀಡಲಾಗಿದೆ,. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಲಿವುಡ್​​ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಅನುಮಾನ – Kannada News | Bollywood Ad Drama: Producer Reveals ‘Painful Couple,’ Deepika Ranveer Suspected

ಬಾಲಿವುಡ್​​ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಮೂಡಿತು ಅನುಮಾನ

ಬಾಲಿವುಡ್ ತಾರೆಯರಿಗೂ ಜಾಹೀರಾತು ಲೋಕಕ್ಕೂ ಬಿಡಿಸಲಾಗದ ನಂಟು. ಆದರೆ, ತೆರೆಯ ಮೇಲೆ ಮಿಂಚುವ, ಅಭಿಮಾನಿಗಳನ್ನು ಕಂಡಾಗ ನಗು ಚೆಲ್ಲುವ ಸೆಲೆಬ್ರಿಟಿಗಳು ಸೆಟ್‌ನಲ್ಲಿ ಹೇಗಿರುತ್ತಾರೆ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಗುಡ್ ಆಡ್ಸ್ ಮ್ಯಾಟರ್ಸ್’ ಆಯೋಜಿಸಿದ್ದ ನಿರ್ಮಾಪಕರ ಸಂವಾದ ಕಾರ್ಯಕ್ರಮವೊಂದು ಈಗ ಚರ್ಚೆಗೆ ಕಾರಣ ಆಗಿದೆ. ಜಾಹೀರಾತು ನಿರ್ಮಾಪಕರೊಬ್ಬರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ.

1.ಬಾಲಿವುಡ್​​ನಲ್ಲಿದ್ದಾರೆ ಪೇನ್​​ಫುಲ್ ಕಪಲ್
2.ಇವರ ಜೊತೆ ಸಿನಿಮಾ ಮಾಡೋದೇ ಚಾಲೆಂಜ್
3. ಎಲ್ಲವನ್ನೂ ವಿವರಿಸಿದ ನಿರ್ಮಾಪಕರು

‘ಬ್ಯಾಂಗ್ ಬ್ಯಾಂಗ್ ಮೀಡಿಯಾಕಾರ್ಪ್‌’ನ ಸ್ಥಾಪಕ ರೂಪಕ್ ಸಲೂಜಾ ಅವರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡುವಾಗ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡುತ್ತಿದ್ದ ಅವರು, ‘ಕೆಲವು ತಾರೆಯರ ಜೊತೆ ಕೆಲಸ ಮಾಡುವುದು ನಿಜಕ್ಕೂ ನೋವಿನ ಸಂಗತಿ. ಅದರಲ್ಲೂ ಇತ್ತೀಚೆಗೆ ಒಂದು ಪವರ್ ಕಪಲ್ ಚಿತ್ರೀಕರಣದ ವೇಳೆ ತುಂಬಾ ಕಿರಿಕಿರಿ ನೀಡುತ್ತಿದ್ದಾರೆ’ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ರೂಪಕ್ ಅವರು ಆ ದಂಪತಿಯ ಹೆಸರನ್ನು ಹೇಳಿದ್ದರೂ, ವಿಡಿಯೋದಲ್ಲಿ ಅದನ್ನು ‘ಬೀಪ್’ ಮಾಡುವ ಮೂಲಕ ರಹಸ್ಯವಾಗಿಡಲಾಗಿದೆ.

ದೀಪಿಕಾ – ರಣವೀರ್ ಸಿಂಗ್ ಕಡೆಗೆ ನೆಟ್ಟಿದೆ ಕಣ್ಣು

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್ ಮಂದಿ ತಮ್ಮದೇ ಆದ ತನಿಖೆ ಆರಂಭಿಸಿದ್ದಾರೆ. ರೂಪಕ್ ಅವರ ಮಾತು ಯಾರ ಬಗ್ಗೆ ಇರಬಹುದು ಎಂಬ ಚರ್ಚೆ ಶುರುವಾಗಿದ್ದು, ಹೆಚ್ಚಿನವರು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಹೆಸರನ್ನೇ ಪ್ರಸ್ತಾಪಿಸುತ್ತಿದ್ದಾರೆ. ಜಾಹೀರಾತು ಲೋಕದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಹಾಗೂ ಅತಿ ಹೆಚ್ಚು ಬ್ರ್ಯಾಂಡ್ ಹೊಂದಿರುವ ಜೋಡಿ ಇವರಾದ್ದರಿಂದ, ನಿರ್ಮಾಪಕರು ಇವರ ಬಗ್ಗೆಯೇ ಹೇಳಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

ನೆಟ್ಟಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಿಡಿಯೋದಲ್ಲಿನ ಲಿಪ್ ಸಿಂಕ್ ಆಧರಿಸಿ ಹಲವರು ಇದು ದೀಪಿಕಾ-ರಣವೀರ್ ಜೋಡಿಯೇ ಎಂದು ವಾದಿಸುತ್ತಿದ್ದಾರೆ. ಆದರೆ, ಇದು ಕೇವಲ ಊಹಾಪೋಹವಷ್ಟೇ ಆಗಿದ್ದು, ಅಧಿಕೃತವಾಗಿ ಯಾರ ಹೆಸರೂ ಹೊರಬಂದಿಲ್ಲ.

ಇದನ್ನೂ ಓದಿ: ‘ಕಿಂಗ್’ ಸಿನಿಮಾ ಚಿತ್ರೀಕರಣದ ವಿಡಿಯೋ ಲೀಕ್: ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್

ಇದೇ ಸಂವಾದದಲ್ಲಿ ರೂಪಕ್ ಸಲೂಜಾ ಅವರು ನಟ ರಣಬೀರ್ ಕಪೂರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಜಾಹೀರಾತು ಚಿತ್ರೀಕರಣದ ವೇಳೆ ರಣಬೀರ್ ಅತ್ಯಂತ ವೃತ್ತಿಪರ ಹಾಗೂ ಎಲ್ಲರ ಜೊತೆ ಬಹಳ ಗೌರವದಿಂದ ವರ್ತಿಸುವ ವ್ಯಕ್ತಿ’ ಎಂದು ಹೊಗಳಿದ್ದಾರೆ. ಒಂದು ಕಡೆ ರಣಬೀರ್ ಬಗ್ಗೆ ಪ್ರಶಂಸೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಆ ‘ಕಿರಿಕಿರಿ’ ನೀಡುವ ಜೋಡಿ ಯಾರು ಎಂಬ ಕುತೂಹಲ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮೊದಲು ಭೇಟಿ ಆಗಿದ್ದು ಜಾಹೀರಾತು ಶೂಟ್​​ನಲ್ಲೇ. ಇವರ ಬಗ್ಗೆ ಯಾವುದೇ ದೂರು ಬಂದಿಲ್ಲ. ಹೀಗಾಗಿ, ಇವರಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates: ಚಿನ್ನದ ಬೆಲೆ ಗ್ರಾಮ್​ಗೆ 195 ರೂ ಏರಿಕೆ; ಬೆಳ್ಳಿಯೂ ದುಬಾರಿ – Kannada News | Gold Price Today on 6th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 6: ಸತತ ಕುಸಿತದ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬುಧವಾರ ಏರಿಕೆ ಕಂಡಿವೆ. ಚಿನ್ನದ ಬೆಲೆ ಇವತ್ತು ಗ್ರಾಮ್​ಗೆ 195 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯಲ್ಲಿ (Silver Rates) 10 ರೂ ಏರಿದೆ. ಅಪರಂಜಿ ಚಿನ್ನದ ಬೆಲೆ ಮತ್ತೆ 15,000 ರೂ ಗಡಿಗಿಂತ ಮೇಲೆ ಹೋಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬಂಗಾರದ ದರದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,131 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,870 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,348 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,131 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,870 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,870 ರೂ
  • ಚೆನ್ನೈ: 14,050 ರೂ
  • ಮುಂಬೈ: 13,870 ರೂ
  • ದೆಹಲಿ: 13,885 ರೂ
  • ಕೋಲ್ಕತಾ: 13,870 ರೂ
  • ಕೇರಳ: 13,870 ರೂ
  • ಅಹ್ಮದಾಬಾದ್: 13,875 ರೂ
  • ಜೈಪುರ್: 13,885 ರೂ
  • ಲಕ್ನೋ: 13,885 ರೂ
  • ಭುವನೇಶ್ವರ್: 13,870 ರೂ

ಇದನ್ನೂ ಓದಿ: ಚೀನಾವನ್ನು ಹಿಂದಿಕ್ಕಿದ ಭಾರತ; ಜಾಗತಿಕ ಹೂಡಿಕೆದಾರರ ಮೊದಲ ಆಯ್ಕೆ ‘ಇಂಡಿಯಾ’

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 562 ರಿಂಗಿಟ್ (13,510 ರುಪಾಯಿ)
  • ದುಬೈ: 511.25 ಡಿರಾಮ್ (13,234 ರುಪಾಯಿ)
  • ಅಮೆರಿಕ: 143 ಡಾಲರ್ (13,595 ರುಪಾಯಿ)
  • ಸಿಂಗಾಪುರ: 183.90 ಸಿಂಗಾಪುರ್ ಡಾಲರ್ (13,745 ರುಪಾಯಿ)
  • ಕತಾರ್: 509 ಕತಾರಿ ರಿಯಾಲ್ (13,277 ರೂ)
  • ಸೌದಿ ಅರೇಬಿಯಾ: 520 ಸೌದಿ ರಿಯಾಲ್ (13,176 ರುಪಾಯಿ)
  • ಓಮನ್: 54.15 ಒಮಾನಿ ರಿಯಾಲ್ (13,371 ರುಪಾಯಿ)
  • ಕುವೇತ್: 42.03 ಕುವೇತಿ ದಿನಾರ್ (13,046 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:15 am, Wed, 6 May 26

Source link

ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ‘ಹುಳುಕು’ ಬಹಿರಂಗ ಪಡಿಸಿದ ಮಂಜ್ರೇಕರ್ – Kannada News | Vaibhav Sooryavanshi’s Batting Flaws Exposed by Manjrekar

ಕ್ರಿಕೆಟ್ ಅಂಗಳದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ವೈಭವ್ ಅವರ ಬ್ಯಾಟಿಂಗ್​ನಲ್ಲಿನ ಕೆಲ ಸಮಸ್ಯೆಗಳನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬಹಿರಂಗಪಡಿಸಿದ್ದಾರೆ. ಈ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮೂರು ಸ್ವರೂಪಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮಂಜ್ರೇಕರ್ ಅವರ ವಿಶ್ಲೇಷಣೆ ಏನು?

ಸಂಜಯ್ ಮಂಜ್ರೇಕರ್ ಅವರ ಪ್ರಕಾರ, ವೈಭವ್ ಸೂರ್ಯವಂಶಿ ಅಪ್ಪಟ ಆಧುನಿಕ ಟಿ20 ಬ್ಯಾಟರ್. ಚೆಂಡಿನಿಂದ ಸ್ವಲ್ಪ ದೂರ ನಿಂತು ಮಿಡಲ್ ಸ್ಟಂಪ್ ಮೇಲಿರುವ ಚೆಂಡನ್ನು ಪಾಯಿಂಟ್ ದಿಕ್ಕಿನತ್ತ ಬಾರಿಸುವುದು ಇವರ ಶೈಲಿ. ಇದು ಟಿ20 ಕ್ರಿಕೆಟ್‌ನಲ್ಲಿ ರನ್ ಗಳಿಸಲು ಸಹಕಾರಿ.

ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಬ್ಯಾಟಿಂಗ್ ಅಸಾಧ್ಯ. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾದಂತಹ ದೇಶಗಳಲ್ಲಿ ಚೆಂಡಿನಿಂದ ದೂರ ನಿಂತು ಬ್ಯಾಟ್ ಮಾಡಿದರೆ 20 ರನ್ ಗಳಿಸುವುದು ಕೂಡ ಕಷ್ಟ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡಿನ ಸಾಲಿಗೆ ಅಂದರೆ ಲೈನ್ ಆಫ್ ದಿ ಬಾಲ್​​ ಹತ್ತಿರ ಹೋಗಿ ಆಡುವುದು ಅತ್ಯಗತ್ಯ. ಇದೀಗ ವೈಭವ್ ಸೂರ್ಯವಂಶಿ ಆಡುತ್ತಿರುವುದು ಲೆಗ್ ಸೈಡ್ ಆಫ್​ ದಿ ಬಾಲ್​ ಸಾಲಿನಲ್ಲಿ. ಈ ಶೈಲಿಯು ಟಿ20 ಕ್ರಿಕೆಟ್​​ಗೆ ಓಕೆ. ಆದರೆ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್​ನ ವೇಗದ ಪಿಚ್​ಗಳಲ್ಲಿ ಈ ರೀತಿಯಾಗಿ ನಿಂತು ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ.

ಅಲ್ಲದೆ ವೈಭವ್ ಸೂರ್ಯವಂಶಿ ಲೆಗ್ ಸೈಡ್ ಆಫ್​ ದಿ ಬಾಲ್​ ಸಾಲಿನಲ್ಲೇ ನಿಂತು ಬ್ಯಾಟ್ ಮಾಡುವುದನ್ನು ಮುಂದುವರೆಸಿದರೆ ಅದು ಮುಂದೆ ಅವರ ಕೆರಿಯರ್ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಪಿಚ್​​ನಲ್ಲಿ ಈ ರೀತಿಯಾಗಿ ಬ್ಯಾಟ್ ಮಾಡಿದರೆ 20 ರನ್​ಗಳಿಸುವುದು ಕೂಡ ಕಷ್ಟ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಟೀಮನ್ ಇಂಡಿಯಾ ಕಾಲಿಂಗ್:

ಒಂದೆಡೆ ಸಂಜಯ್ ಮಂಜ್ರೇಕರ್ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಹುಳುಕುಗಳನ್ನು ತೆರೆದಿಟ್ಟರೆ, ಮತ್ತೊಂದೆಡೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ವೈಭವ್ ಸೂರ್ಯವಂಶಿಯನ್ನು ಶೀಘ್ರವೇ ಭಾರತ ಟಿ20 ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ನಿತೀಶ್ ರಾಣಾ ‘ಔಟ್’ ಗೊಂದಲ: ಐಪಿಎಲ್ ನಿಯಮ ಏನು ಹೇಳುತ್ತೆ?

ಇದೇ ವೇಳೆ ಟಿ20 ಕ್ರಿಕೆಟ್ ಹಣ ಮತ್ತು ಪ್ರಸಿದ್ಧಿಯನ್ನು ತಂದುಕೊಡಬಹುದು, ಆದರೆ ವಿಮರ್ಶಕರಿಂದ “ಗೌರವ” ಸಿಗುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುವ ತಾಂತ್ರಿಕ ಪ್ರೌಢಿಮೆಯಿಂದ ಮಾತ್ರ. ಹೀಗಾಗಿ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಅನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕೆಂಬುದು ಸಂಜಯ್ ಮಂಜ್ರೇಕರ್ ಅವರ ಕಿವಿಮಾತು.

Source link

ಶೃಂಗೇರಿ ಮತ ಮರು ಎಣಿಕೆ ವಿವಾದ: ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಮಾಡಿಲ್ಲ, ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ – Kannada News | Sringeri Seat Recount Issue: Speaker UT Khader Responds to BJP Allegations Over Oath Taking Delay

ಮಂಗಳೂರು, ಮೇ 6: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ ನಂತರ ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಜೀವರಾಜ್ ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಯಾವುದೇ ವಿಳಂಬ ಮಾಡಿಲ್ಲ, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ವಿಶ್ವಾಸದ ಮೇಲೆ ನಡೆಯಬೇಕು, ವಿಶ್ವಾಸವಿಲ್ಲದಿದ್ದರೆ ವ್ಯವಸ್ಥೆ ಬಲಿಷ್ಠವಾಗಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದರು. ನಾನು ಬೆಂಗಳೂರಿನಲ್ಲಿದ್ದಾಗ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ನಿನ್ನೆಯಷ್ಟೇ ಸಮಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದೊಂದು ವಿಶಿಷ್ಟ ಸನ್ನಿವೇಶವಾಗಿದ್ದು, ತಾಂತ್ರಿಕ ವಿಚಾರಗಳ ಬಗ್ಗೆ ಅಭಿಪ್ರಾಯ ಪಡೆಯಬೇಕಿದೆ. ಸಂವಿಧಾನಾತ್ಮಕವಾಗಿ ಅವಕಾಶ ನೀಡಲೇಬೇಕು, ಇದರಲ್ಲಿ ಆತುರ ಅಥವಾ ಸಂಶಯ ಪಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಸರ್ಕಾರದ ಕಾನೂನು ಹೋರಾಟಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಇಡೀ ಪ್ರಕ್ರಿಯೆಯಲ್ಲಿ ಎಲ್ಲಿ, ಯಾರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ಮಾಡಲಾಗಿತ್ತು. ಇದರಲ್ಲಿ ಬಿಜೆಪಿಯ ಜೀವರಾಜ್ ವಿಜಯಿ ಎಂಬುದು ತಿಳಿದುಬಂದಿತ್ತು. ಈವರೆಗೆ ಕಾಂಗ್ರೆಸ್​ನ ಟಿಡಿ ರಾಜೇಗೌಡ ಶಾಸಕರಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Delhi Capitlas: ಪವರ್ ಪ್ಲೇನಲ್ಲಿ ನೋ ಪವರ್: ಮೊದಲ ಆರು ಓವರ್‌ಗಳಲ್ಲೇ ಪಂದ್ಯ ಸೋಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ – Kannada News | Delhi Capitals lose the match in the first six overs No power in the power play

ಬೆಂಗಳೂರು (ಮೇ. 06): ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಐಪಿಎಲ್ 2026 ರ ಪ್ಲೇಆಫ್ ತಲುಪುವ ಸಾಧ್ಯತೆಗಳು ಮತ್ತಷ್ಟು ಕ್ಷೀಣಿಸಿದೆ. ಡೆಲ್ಲಿ ತಂಡವು ಈ ಋತುವಿನ 48 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ತವರು ಮೈದಾನದಲ್ಲೇ ಸೋತಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ವಿಫಲವಾಯಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು ಬಿಗಿಯಾದ ಸಿಎಸ್‌ಕೆ ಬೌಲಿಂಗ್ ದಾಳಿಯ ವಿರುದ್ಧ ಕೇವಲ 155 ರನ್ ಗಳಿಸಿತಷ್ಟೆ. ಪಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿತ್ತು.

ಪವರ್‌ಪ್ಲೇನಲ್ಲಿ ಪವರ್ ಕಳೆದುಕೊಂಡ ಡೆಲ್ಲಿ

ಐಪಿಎಲ್ 2026 ರಲ್ಲಿ ಪವರ್‌ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ದಾಖಲೆಯನ್ನು ಹೊಂದಿದೆ. ಟಿ20 ಕ್ರಿಕೆಟ್‌ನಲ್ಲಿ ಮೊದಲ ಆರು ಓವರ್ ಬ್ಯಾಟಿಂಗ್ ತಂಡವು ಎದುರಾಳಿಗಳ ಮೇಲೆ ಒತ್ತಡ ಹೇರುವ ಹಂತವಾಗಿದೆ. ಆದರೆ, ಈ ಋತುವಿನಲ್ಲಿ ಡೆಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿದೆ, ಅದು ಬರೋಬ್ಬರಿ 21 ವಿಕೆಟ್‌ಗಳು. ಸಿಎಸ್‌ಕೆ ವಿರುದ್ಧ, ಆರಂಭಿಕ ಆಟಗಾರರಾದ ಪಾಥುಮ್ ನಿಸ್ಸಂಕಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಪವರ್‌ಪ್ಲೇನಲ್ಲಿ ಔಟಾದರು. ಇದಲ್ಲದೆ, ಪವರ್‌ಪ್ಲೇನಲ್ಲಿ ಡೆಲ್ಲಿಯ ಸರಾಸರಿ ಮತ್ತು ರನ್ ರೇಟ್ ಕೂಡ ಹೆಚ್ಚಿನ ತಂಡಗಳಿಗಿಂತ ಕೆಟ್ಟದಾಗಿದೆ.

ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪವರ್‌ಪ್ಲೇ ದಾಖಲೆ

  • ವಿಕೆಟ್ ಪತನ: 21
  • ಪ್ರತಿ ವಿಕೆಟ್‌ಗೆ ಸರಾಸರಿ ರನ್‌ಗಳು: 23.85
  • ರನ್ ರೇಟ್: 8.35
  • ಡಾಟ್-ಬಾಲ್ ಶೇಕಡಾವಾರು: 46.4%

Nitish Rana Out: ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣ: ಕ್ರಿಕೆಟ್‌ನಲ್ಲಿ ಅಪರೂಪದ ಘಟನೆ

ಸಾಕಷ್ಟು ಅನುಭವಿಗಳಿಂದ ಕೂಡಿರುವ ಡೆಲ್ಲಿ ಅಗ್ರ ಕ್ರಮಾಂಕ

ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಕ್ರಮಾಂಕ ಸಾಕಷ್ಟು ಅನುಭವಿಗಳಿಂದ ಕೂಡಿದೆ. ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಹೊಂದಿದ್ದಾರೆ, ಆದರೆ ತಂಡ ಪವರ್‌ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಪಾಥಮ್ ನಿಸ್ಸಂಕಾ ಕೂಡ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ. ಅವರು ಶ್ರೀಲಂಕಾದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದು, ಟಿ20 ವಿಶ್ವಕಪ್‌ನಲ್ಲಿ ಶತಕ ಗಳಿಸಿದ್ದರು. ಅದಕ್ಕೂ ಮೊದಲು, ನಿಸ್ಸಂಕಾ 2025 ರ ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ ಶತಕ ಗಳಿಸಿದ್ದರು. ಆದರೆ, ಡೆಲ್ಲಿ ಪರ ಮಾತ್ರ ಇವರ ಮ್ಯಾಜಿಕ್ ನಡೆಯುತ್ತಿಲ್ಲ.

ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಸೋಲು

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2026 ಅನ್ನು ಸತತ ಎರಡು ಗೆಲುವಿನೊಂದಿಗೆ ಆರಂಭಿಸಿತು. ಗುಜರಾತ್ ಟೈಟಾನ್ಸ್ ವಿರುದ್ಧ ಒಂದು ರನ್ ಸೋಲಿನ ನಂತರ ಆ ವೇಗ ಕುಗ್ಗಿತು. ಆ ಪಂದ್ಯದ ನಂತರ, ಡೆಲ್ಲಿ ತಂಡವು ತಮ್ಮ ಎಂಟು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ. ಆರ್‌ಸಿಬಿ ಮತ್ತು ರಾಜಸ್ಥಾನವನ್ನು ರನ್ ಚೇಸ್ ಮಾಡುವ ಮೂಲಕ ಸೋಲಿಸಿದರು. ಪಂಜಾಬ್ ವಿರುದ್ಧ 264 ರನ್ ಗಳಿಸಿದ್ದರೂ, ಅಕ್ಷರ್ ಪಡೆ ಸೋತಿತು. ಸದ್ಯ ಡೆಲ್ಲಿಯ ಮುಂದಿನ ಹಾದಿ ಬಹುತೇಕ ಮುಚ್ಚಿದಂತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಧ್ಯೆ ಭಾರೀ ಸಂಘರ್ಷ, ನಾಲ್ವರು ಸಾವು, ಉದ್ವಿಗ್ನ ಪರಿಸ್ಥಿತಿ – Kannada News | West Bengal Post Election Violence Escalates Between BJP and TMC Workers

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ(West Bengal)ದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಇತಿಹಾಸ ನಿರ್ಮಿಸಿರುವ ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರ ನಡುವೆ ರಾಜ್ಯದ ಹಲವೆಡೆ ತೀವ್ರ ಘರ್ಷಣೆಗಳು ಸಂಭವಿಸಿವೆ. ಗೆಲುವಿನ ಸಂಭ್ರಮಾಚರಣೆ ಮತ್ತು ಸೋಲಿನ ಹತಾಶೆಯ ನಡುವೆ ಆರಂಭವಾದ ಈ ಸಂಘರ್ಷವು ಈಗ ಹಿಂಸಾಚಾರಕ್ಕೆ ತಿರುಗಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಈ ಫಲಿತಾಂಶದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಉಭಯ ಪಕ್ಷಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅದು ಭೌತಿಕ ಹಲ್ಲೆಯ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗವು 100 ಸ್ಥಾನಗಳಲ್ಲಿ ಅಕ್ರಮ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದು, ಇದು ಕಾರ್ಯಕರ್ತರ ನಡುವಿನ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಕೋಲ್ಕತ್ತಾದ ಕೆಲ ವಾರ್ಡ್‌ಗಳಲ್ಲಿ ಮತ್ತು ನಗರದ ಭಾಗಗಳಲ್ಲಿ ನೇರ ಗಲಾಟೆಗಳು ನಡೆದಿವೆ. ಮೆರವಣಿಗೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಮುಖಾಮುಖಿ ಸಂಘರ್ಷಗಳಾಗಿವೆ. ಆಂಚೋಲ್ ಪ್ರದೇಶದಲ್ಲೂ ದೊಡ್ಡ ಪ್ರಮಾಣದ ಗಲಾಟೆ ನಡೆದಿದ್ದು, ಟಿಎಂಸಿ ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂಬ ಆರೋಪಗಳಿವೆ. ಹುಗ್ಲಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದು, ಒಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಈವರೆಗೂ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ಯಾನ್ ಕಾರ್ಡ್‌ನಿಂದ ಶುರುವಾದ ಪ್ರೀತಿ ಈಗ ಬೀದಿಗೆ: ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಗೆ ಮತ್ತೊಂದು ಮದುವೆಗೆ ಸಿದ್ಧತೆ – Kannada News | Tumakuru Police Probe Husband Abandoning Pregnant Wife for Second Marriage

ಗರ್ಭಿಣಿ ಪತ್ನಿ ನ್ಯಾಯಕ್ಕಾಗಿ ಹೋರಾಟ

ತುಮಕೂರು, ಮೇ.6: ಪ್ರೀತಿಯ ಹೆಸರಿನಲ್ಲಿ ಏಳು ವರ್ಷಗಳ ಕಾಲ ಜೊತೆಗಿದ್ದು, ಮದುವೆಯಾದ ಒಂದೂವರೆ ವರ್ಷಕ್ಕೆ ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಸಿದ್ಧನಾಗಿರುವ ಪತಿಯ ವಿರುದ್ಧ ಯುವತಿಯೊಬ್ಬಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾಳೆ. ಇದೀಗ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಯುವತಿ ಹೇಳಿದ್ದಾಳೆ.

ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಸಂತ್ರಸ್ತೆ ಏಳು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ, ಜೆರಾಕ್ಸ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮಾನಾಯಕ್ ಎಂಬಾತನ ಪರಿಚಯವಾಗಿತ್ತು. ಪ್ಯಾನ್ ಕಾರ್ಡ್ ಮಾಡಿಸಲು ಹೋದಾಗ ಶುರುವಾದ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಪೋಷಕರ ವಿರೋಧದ ನಡುವೆಯೂ ಈ ಜೋಡಿ ಪಾವಗಡದ ದೇವಸ್ಥಾನದಲ್ಲಿ ಮದುವೆಯಾಗಿತ್ತು.

ಮದುವೆಯಾಗಿ ಒಂದೂವರೆ ವರ್ಷ ಸುಖ ಸಂಸಾರ ನಡೆಸಿದ ಬಳಿಕ, ಬೊಮ್ಮಾನಾಯಕ್ ತನ್ನ ಪೋಷಕರ ಮಾತಿಗೆ ಮರುಳಾಗಿ ಗರ್ಭಿಣಿ ಪತ್ನಿಯನ್ನು ದೂರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬೊಮ್ಮಾನಾಯಕ್ ಕುಟುಂಬದವರು ಆತನಿಗೆ ಮತ್ತೊಂದು ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆತಂಕದಲ್ಲಿ ಟೆಕ್ಕಿ!

ಆರು ತಿಂಗಳ ಗರ್ಭಿಣಿಯಾಗಿರುವ ಯುವತಿಯು ತನ್ನ ಹಾಗೂ ಮಗುವಿನ ಭವಿಷ್ಯಕ್ಕಾಗಿ “ನನಗೆ ನನ್ನ ಗಂಡ ಬೇಕು” ಎಂದು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಸದ್ಯ ಗಂಡ ಬೊಮ್ಮಾನಾಯಕ್, ಆತನ ತಾಯಿ ಕರಿಯಮ್ಮ ಸೇರಿದಂತೆ ನಾಲ್ವರ ವಿರುದ್ಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version