ಭಾವೈಕ್ಯತೆಗೆ ಸಾಕ್ಷಿಯಾದ ಬಾಗಲಕೋಟೆ: ಮೊಹರಂಗೆ ಮೆರಗು ನೀಡಿದ ಹುಲಿಕುಣಿತ, ಡೊಳ್ಳು ಕುಣಿತ
ನಾಡಿನಲ್ಲಿ ಹಲವು ಹಬ್ಬಗಳು ಬರುತ್ತವೆ. ಆದರೆ ಮೊಹರಂ ಎರಡು ಧರ್ಮಗಳ ಬಾಂಧವ್ಯ ಬೆಸೆಯುವ ಅಪರೂಪದ ಹಬ್ಬ. ಬಾಗಲಕೋಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಸೇರಿ ಈ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ನಗರದ ವಲ್ಲಭಬಾಯಿ ವೃತ್ತದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಬ್ಬ ಜರುಗಿತು. ಅಲಾವಿ ಪಂಜಾ ದೇವರುಗಳ ಭವ್ಯ ಮೆರವಣಿಗೆಯಲ್ಲಿ 25-30 ಅಡಿ ಎತ್ತರದ ಬಣ್ಣಬಣ್ಣದ ತಾಝಿಯಾಗಳನ್ನು ಯುವಕರು ತೂಗಿಸುತ್ತಾ ಸಾಗಿದರು. ತಮಟೆ ಹಾಗೂ ಡೊಳ್ಳು ವಾದ್ಯಗಳ ನಾದ ಮೆರವಣಿಗೆಗೆ ಕಳೆಕಟ್ಟಿತು. ಹರಕೆ ತೀರಿಸಲು ಭಕ್ತರು…