Panchaka Yoga 2026: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ! – Kannada News | Panchaka Yoga 2026: Guru Mars Conjunction brings Bumper Luck for 4 Signs!

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ಹಾಗೂ ಅವುಗಳ ನಡುವೆ ಉಂಟಾಗುವ ಶುಭ ಯೋಗಗಳಿಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ದೃಷ್ಟಿಕೋನದಿಂದ ಮುಂಬರುವ ಜೂನ್ 5 ಅತ್ಯಂತ ವಿಶೇಷ ಮತ್ತು ಮಂಗಳಕರ ದಿನವಾಗಲಿದ್ದು, ಈ ದಿನ ಆಕಾಶಮಂಡಲದಲ್ಲಿ ಅತ್ಯಂತ ಅಪರೂಪದ ಹಾಗೂ ಅದೃಷ್ಟ ತರುವ ‘ಪಂಚಕ ಯೋಗ’ ನಿರ್ಮಾಣವಾಗುತ್ತಿದೆ. ಜ್ಯೋತಿಷಿಗಳ ಪ್ರಕಾರ, ಈ ಪ್ರಭಾವಶಾಲಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರ ಜಾತಕವೇ ಬದಲಾಗಲಿದ್ದು, ಅಪಾರ ಧನಲಾಭ ಮತ್ತು ಯಶಸ್ಸು ಸಿಗಲಿದೆ.

ಏನಿದು ಪಂಚಕ ಯೋಗ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಕಾಶಮಂಡಲದಲ್ಲಿ ಯಾವುದೇ ಎರಡು ಗ್ರಹಗಳ ನಡುವೆ ಸುಮಾರು 72 ಡಿಗ್ರಿ ಕೋನ ಉಂಟಾದಾಗ ಈ ‘ಪಂಚಕ ಯೋಗ’ ನಿರ್ಮಾಣವಾಗುತ್ತದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಅನಿರೀಕ್ಷಿತ ಅವಕಾಶಗಳು, ಆರ್ಥಿಕ ಪ್ರಗತಿ, ಅಪ್ರತಿಮ ಯಶಸ್ಸು ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಜೂನ್ 5 ರಂದು ಸಾಹಸ, ಶಕ್ತಿ ಮತ್ತು ಆತ್ಮವಿಶ್ವಾಸದ ಕಾರಕನಾದ ಮಂಗಳ (Mars) ಹಾಗೂ ಜ್ಞಾನ, ಭಾಗ್ಯ ಮತ್ತು ಸಮೃದ್ಧಿಯ ಅಧಿಪತಿಯಾದ ಗುರು (Jupiter) ಗ್ರಹಗಳ ನಡುವೆ ಈ ವಿಶೇಷ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಈ ಇಬ್ಬರು ಪ್ರಭಾವಶಾಲಿ ಗ್ರಹಗಳ ಶುಭ ದೃಷ್ಟಿಯು ಹಲವು ರಾಶಿಯವರ ಭಾಗ್ಯದ ಬಾಗಿಲನ್ನು ತೆರೆಯಲಿದೆ. ಅದರಲ್ಲಿಯೂ ಮುಖ್ಯವಾಗಿ 4 ರಾಶಿಯವರಿಗೆ ಇದು ಗೋಲ್ಡನ್ ಟೈಮ್ ಆಗಿರಲಿದೆ. ಆ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ:

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ಈ ಪಂಚಕ ಯೋಗವು ಅತ್ಯಂತ ಶುಭ ಫಲಗಳನ್ನು ನೀಡಲಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಅಥವಾ ಪ್ರಮೋಷನ್ (ಬಡ್ತಿ) ಸಿಗುವ ಬಲವಾದ ಸಾಧ್ಯತೆಗಳಿವೆ. ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಹಳೆಯ ವಿವಾದಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮ ಫಲಿತಾಂಶ ನೀಡುತ್ತದೆ.

ಸಿಂಹ ರಾಶಿ (Leo):

ಸಿಂಹ ರಾಶಿಯ ಜನರಿಗೆ ಈ ಯೋಗವು ಅಪಾರ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ತರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಮನ್ನಣೆ ಹಾಗೂ ಪ್ರಶಂಸೆ ದೊರೆಯುತ್ತದೆ. ಹೊಸ ಉದ್ಯೋಗ ಅಥವಾ ಹೊಸ ಬ್ಯುಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯಂತ ಸೂಕ್ತ ಸಮಯ. ಆರ್ಥಿಕ ಸ್ಥಿತಿ ಗಟ್ಟಿಯಾಗಲಿದ್ದು, ಅನಿರೀಕ್ಷಿತ ಧನಲಾಭದ ಯೋಗವಿದೆ. ಸಾಮಾಜಿಕವಾಗಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಸಿಗಲಿದೆ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ಈ ರಾಶಿಯವರಿಗೆ ಒದಗಿಬರಲಿದೆ ಕಂಕಣ ಭಾಗ್ಯ, ಯಾರಿಗೆ ಕಾಯ್ದಿದೆ ಗುಪ್ತ ಸಂಬಂಧದ ಗಂಡಾಂತರ?

ಧನು ರಾಶಿ (Sagittarius):

ಧನು ರಾಶಿಯವರಿಗೆ ಪಂಚಕ ಯೋಗವು ಆರ್ಥಿಕ ದೃಷ್ಟಿಯಿಂದ ಬಂಪರ್ ಲಾಭವನ್ನು ತರಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ ಮತ್ತು ಹೂಡಿಕೆಗಳಿಂದ (Investments) ಉತ್ತಮ ಲಾಭ ಸಿಗುವ ಸಾಧ್ಯತೆಯಿದೆ. ದೀರ್ಘಕಾಲದ ಮಾನಸಿಕ ಒತ್ತಡ ಹಾಗೂ ಕಷ್ಟಗಳಿಂದ ನೆಮ್ಮದಿ ಸಿಗಲಿದೆ. ವಿದೇಶಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಅಥವಾ ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಾಗಲಿದೆ.

ಕುಂಭ ರಾಶಿ (Aquarius):

ಕುಂಭ ರಾಶಿಯ ಜಾತಕದವರಿಗೆ ಜೂನ್ 5 ರ ದಿನವು ಹೊಸ ಭರವಸೆಗಳನ್ನು ಹೊತ್ತು ತರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಬಾಕಿ ಉಳಿದಿದ್ದ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತವೆ. ಈ ಯೋಗದ ಪ್ರಭಾವದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬಲಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಮುಂಚೆಗಿಂತ ಸುಧಾರಿಸಲಿದೆ. ಸ್ನೇಹಿತರು ಹಾಗೂ ಕುಟುಂಬದವರಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸಿಗಲಿದೆ.

ಜ್ಯೋತಿಷ್ಯದಲ್ಲಿ ಈ ಯೋಗ ಏಕೆ ಇಷ್ಟೊಂದು ಮುಖ್ಯ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ಮಂಗಳ ಗ್ರಹಗಳ ಯುತಿ ಅಥವಾ ಶುಭ ದೃಷ್ಟಿಯನ್ನು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ಭಾಗ್ಯವನ್ನು ಬಲಪಡಿಸಿದರೆ, ಮಂಗಳ ಗ್ರಹವು ವ್ಯಕ್ತಿಗೆ ಧೈರ್ಯ ಮತ್ತು ಮುನ್ನಡೆಯುವ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಈ ಎರಡು ಗ್ರಹಗಳ ಮಿಲನದಿಂದ ಸೃಷ್ಟಿಯಾಗುವ ಪಂಚಕ ಯೋಗವು ಯಶಸ್ಸು, ಸಂಪತ್ತು ಮತ್ತು ಹೊಸ ಸಕಾರಾತ್ಮಕ ಆರಂಭದ ಸಂಕೇತವಾಗಿದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ವೈಯಕ್ತಿಕ ಜಾತಕಕ್ಕೆ ಅನುಗುಣವಾಗಿ ಫಲಿತಾಂಶಗಳು ಬದಲಾಗಬಹುದು.)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್​ಪಾತ್​ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ! – Kannada News | Bengaluru Teen Develops Tinder Like App ‘Rasthe’ to Rate and Report Footpaths to BBMP

ಫುಟ್​ಪಾತ್ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್: ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!
Image Credit source: Hindustan Times

ಬೆಂಗಳೂರು, ಮೇ 20: ನಗರದಲ್ಲಿ ಟ್ರಾಫಿಕ್ (Traffic) ಸಮಸ್ಯೆ, ರಸ್ತೆ ಗುಂಡಿಗಳು, ಹಾಳಾದ ಫುಟ್​ಪಾತ್​ಗಳಿಂದ ಜನ ರೋಸಿ ಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಎಷ್ಟೇ ಧ್ವನಿ ಎತ್ತಿದರೂ ಪಾಲಿಕೆ ಮಾತ್ರ ಕ್ಯಾ ರೇ ಎನ್ನುತ್ತಿಲ್ಲ. ಇದೇ ಸಮಸ್ಯೆಯನ್ನು ತಲೆಯಲ್ಲಿಟ್ಟುಕೊಂಡು 14 ವರ್ಷದ ಬಾಲಕನೊಬ್ಬ ತಂತ್ರಜ್ಞಾನದ ಮೂಲಕ ಅದ್ಭುತ ಪರಿಹಾರ ಕಂಡುಹಿಡಿದಿದ್ದಾನೆ. ಡೇಟಿಂಗ್ ಆ್ಯಪ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಈ ಆ್ಯಪ್​ಗೆ ಆತ ‘ರಸ್ತೆ’(RASTHE) ಎಂದು ಹೆಸರಿಟ್ಟಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನ 14ರ ಬಾಲಕನಿಂದ ‘ರಸ್ತೆ’ ಎಂಬ ವಿಶಿಷ್ಟ ಆ್ಯಪ್ ಅಭಿವೃದ್ಧಿ.
  • ಟಿಂಡರ್ ಮಾದರಿಯಲ್ಲಿ ಫುಟ್‌ಪಾತ್‌ಗಳನ್ನು ಸ್ವೈಪ್ ಹಾಗೂ ರೇಟಿಂಗ್ ಮಾಡುವ ಸೌಲಭ್ಯ.
  • ಹಾಳಾದ ರಸ್ತೆಗಳ ಫೋಟೋ ಅಪ್‌ಲೋಡ್ ಮಾಡಿ ಬಿಬಿಎಂಪಿಗೆ ನೇರ ದೂರು.

ರಸ್ತೆ ಸರಿ ಇಲ್ಲದಿದ್ದರೆ ಜಸ್ಟ್ ರೈಟ್ ಸ್ವೈಪ್ ಮಾಡಿ

ಬೆಂಗಳೂರು ನಿವಾಸಿ, 14 ವರ್ಷದ ಸೂರ್ಯ ಉತ್ಕರ್ಷ ತನ್ನ X ಖಾತೆಯಲ್ಲಿ ಈ ಆ್ಯಪ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಈ ಆಪ್‌ನ ವಿಶೇಷತೆಯೆಂದರೆ, ಇದು ಯುವಜನತೆ ಬಳಸುವ ಪ್ರಸಿದ್ಧ ಡೇಟಿಂಗ್ ಆಪ್ ‘ಟಿಂಡರ್’ (Tinder) ಮಾದರಿಯಲ್ಲೇ ಕೆಲಸ ಮಾಡುತ್ತದೆ. ಇದರ ಮೂಲಕ ನೀವು ಹಾಳಾದ ರಸ್ತೆಗಳ, ಫುಟ್​ಪಾತ್​ಗಳ ಫೋಟೋ ತೆಗೆದು ಅಪ್ಲೋಡ್​ ಮಾಡಬಹುದು. ಅಪ್ಲೋಡ್​ ಆದ ಫೋಟೋಗಳಲ್ಲಿ ರಸ್ತೆಗಳ ಸ್ಥಿತಿ ಚನ್ನಾಗಿದ್ದರೆ ರೈಟ್ ಸ್ವೈಪ್ ಮಾಡಬಹುದು. ಇಲ್ಲವಾದರೆ ಲೆಫ್ಟ್ ಸ್ವೈಪ್ ಮಾಡಬಹುದು. ಹೀಗಾಗಿಯೇ ನೆಟ್ಟಿಗರು ಇದನ್ನು ಫುಟ್​ಪಾತ್​ಗಳ ಟಿಂಡರ್ ಎಂದು ಕರೆಯುತ್ತಿದ್ದಾರೆ.

ಕೇವಲ 30 ನಿಮಿಷಗಳಲ್ಲಿ ಆಪ್ ಸಿದ್ಧ!

ಸೂರ್ಯ ಉತ್ಕರ್ಷ ತಾನು ಕೇವಲ 30 ನಿಮಿಷಗಳಲ್ಲಿ ’10x Apps’ ಎಂಬ ಪ್ಲಾಟ್‌ಫಾರ್ಮ್ ಬಳಸಿ ಈ ಆಪ್ ಅನ್ನು ಸಿದ್ಧಪಡಿಸಿರುವುದಾಗಿ ಸೋಶಿಯಲ್ ಮೀಡಿಯಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾನೆ. ನಾನು ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಸಮಸ್ಯೆಯನ್ನು 30 ನಿಮಿಷಗಳಲ್ಲಿ ಫಿಕ್ಸ್ ಮಾಡಿದ್ದೇನೆ ಎಂದು ಆತ ಬರೆದುಕೊಂಡಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

ನಾಗರಿಕರು ತಾವು ಸಂಚರಿಸುವ ದಾರಿಯಲ್ಲಿ ಎಲ್ಲಾದರೂ ಫುಟ್‌ಪಾತ್ ಹಾಳಾಗಿದ್ದರೆ, ಕಲ್ಲುಗಳು ಕಿತ್ತುಹೋಗಿದ್ದರೆ ಅಥವಾ ಫುಟ್‌ಪಾತ್ ಇಲ್ಲದೇ ಇದ್ದರೆ, ಅದರ ಫೋಟೋ ತೆಗೆದು ಆಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಪ್‌ಲೋಡ್ ಮಾಡಿದ ತಕ್ಷಣ ಆ ಫೋಟೋ ಜಿಯೋ-ಟ್ಯಾಗ್ ಮೂಲಕ ಆಯಾ ವಾರ್ಡ್‌ಗೆ ಮ್ಯಾಪ್ ಆಗುತ್ತದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳಿಗೆ ಆ ಸಮಸ್ಯೆಯನ್ನು ಸುಲಭವಾಗಿ ಪತ್ತೆಹಚ್ಚಿ ಸರಿಪಡಿಸಲು ಸಾಧ್ಯವಾಗುತ್ತದೆ. ನಾಗರಿಕರು ನಗರದ ವಿವಿಧ ಫುಟ್‌ಪಾತ್‌ಗಳ ಸ್ಥಿತಿಯನ್ನು ಟಿಂಡರ್ ಆಪ್‌ನಲ್ಲಿ ಮಾಡುವಂತೆ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡುವ ಮೂಲಕ ರೇಟಿಂಗ್ ನೀಡಬಹುದು. ನಗರದ ಅತ್ಯಂತ ಕೆಟ್ಟದಾದ ಮತ್ತು ಅತ್ಯುತ್ತಮವಾದ ಫುಟ್‌ಪಾತ್‌ಗಳನ್ನು ಗುರುತಿಸಲು ಇದರಲ್ಲಿ ವೋಟಿಂಗ್ ಸೌಲಭ್ಯವಿದೆ. ಜನರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ಯಾವ ರಸ್ತೆ ತಕ್ಷಣ ದುರಸ್ತಿಯಾಗಬೇಕು ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು.

ನಾಗರಿಕರೇ ನಗರದ ಕಣ್ಣುಗಳು

ತನ್ನ ಪೋಸ್ಟ್‌ ಮೂಲಕ ಗಮನ ಸೆಳೆದಿರುವ ಸೂರ್ಯ, ರಸ್ತೆಗಳನ್ನು ಕಾರುಗಳಿಗಾಗಿ ನಿರ್ಮಿಸಿದರೆ, ಈ ಆ್ಯಪ್ ಅನ್ನು ಜನರಿಗಾಗಿ ಮಾಡಲಾಗಿದೆ ಎಂದು ಹೇಳಿದ್ದಾನೆ. ಫುಟ್‌ಪಾತ್‌ಗಳು ಚೆನ್ನಾಗಿದ್ದರೆ ಜನರು ರಸ್ತೆಯ ಮೇಲೆ ನಡೆಯುವುದು ತಪ್ಪುತ್ತದೆ. ಇದರಿಂದ ಟ್ರಾಫಿಕ್ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಆತನ ಯೋಚನೆ. ನಗರದ ಪ್ರತಿಯೊಬ್ಬ ಪ್ರಜೆಯನ್ನೂ ನಗರದ ಸಮಸ್ಯೆಗಳನ್ನು ಪತ್ತೆಹಚ್ಚುವ ‘ಸೆನ್ಸರ್’ ಆಗಿ ಪರಿವರ್ತಿಸುವುದು ಈ ಆ್ಯಪ್​ನ ಮುಖ್ಯ ಉದ್ದೇಶವಾಗಿದೆ.

ಸದ್ಯ ಈ ಆ್ಯಪ್ ಅನ್ನು ಆ್ಯಪ್ ಸ್ಟೋರ್‌ಗಳಿಗೆ ಬಿಡುಗಡೆ ಮಾಡಲು ಸೂರ್ಯ ಸಜ್ಜಾಗಿದ್ದು, ನೆಟ್ಟಿಗರು ಈ ಬಾಲಕನ ಜಾಣ್ಮೆ ಹಾಗೂ ಸಾಮಾಜಿಕ ಕಳಕಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಬಿಎಂಪಿಯ ‘ಸಹಾಯ’ ಆ್ಯಪ್ಗಿಂತ ಇದು ಹೆಚ್ಚು ಜನಸ್ನೇಹಿಯಾಗಿದೆ ಎಂದು ಬೆಂಗಳೂರಿಗರು ಕೊಂಡಾಡುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮ್ಮ ನೋವನ್ನು ಆನಂದಿಸಿದವರಿಗೆ ಎಚ್ಚರಿಸಿದ ಸಲ್ಮಾನ್ ಖಾನ್ – Kannada News | Salman Khan Confronts Paparazzi, Posts Emotional Warning Amidst Threats and New Films

ಆಸ್ಪತ್ರೆಯಲ್ಲಿದ್ದ ಆಪ್ತರೊಬ್ಬರನ್ನು ಭೇಟಿ ಮಾಡಿ ಸಲ್ಮಾನ್ ಖಾನ್ ಹೊರಬರುತ್ತಿದ್ದಾಗ, ಅಲ್ಲಿದ್ದ ಫೋಟೋಗ್ರಾಫರ್‌ಗಳು ಅವರ ಮುಂಬರುವ ಸಿನಿಮಾ ‘ಮಾತೃಭೂಮಿ’ ಹೆಸರನ್ನು ಜೋರಾಗಿ ಕೂಗುತ್ತಾ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದಾರೆ. ಈಗಾಗಲೇ ಬಿಷ್ಣೋಯ್ ಗ್ಯಾಂಗ್ ಬೆದರಿಕೆಯಿಂದಾಗಿ ತೀವ್ರ ಒತ್ತಡದಲ್ಲಿರುವ ಸಲ್ಮಾನ್, ಈ ವರ್ತನೆಯಿಂದ ಸಿಟ್ಟಿಗೆದ್ದು, ಅವರ ಹತ್ತಿರ ಹೋಗಿ ‘ನಿಮಗೆ ತಲೆ ಕೆಟ್ಟಿದೆಯೇ?’ ಎಂದು ಗದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಲ್ಮಾನ್ ಖಾನ್ ಭಾವನಾತ್ಮಕ ಪೋಸ್ಟ್

ಇದಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಪೋಸ್ಟ್ ಹಾಕಿರುವ ಸಲ್ಮಾನ್, ‘ನಾನು ಸದಾ ಬೆಂಬಲವಾಗಿ ನಿಂತ ಪಾಪರಾಜಿಗಳು ಈಗ ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನು ನಾನು ನೋಡಬೇಕಾಗಿದೆ. ನನ್ನ ನಷ್ಟದಿಂದ ಹಣ ಗಳಿಸಲು ಯತ್ನಿಸಬೇಡಿ, ಸುಮ್ಮನಿರಿ. ನಿಮಗೆ ಸಿನಿಮಾ ಮುಖ್ಯವೋ ಅಥವಾ ಜೀವ ಮುಖ್ಯವೋ?’ ಎಂದು ಪ್ರಶ್ನಿಸಿದ್ದಾರೆ.

‘ಮುಂದಿನ ಬಾರಿ ನನ್ನ ದುಃಖದ ಸಮಯದಲ್ಲಿ ಈ ರೀತಿ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ನಾನು ಈ ರೀತಿ ವರ್ತಿಸುತ್ತೇನೆಯೇ? ಇಂತಹ ನೂರು ವಿಷಯಗಳನ್ನು ನಾನು ಸುಟ್ಟು ಬೂದಿ ಮಾಡಬಲ್ಲೆ’ ಎಂದು ಗುಡುಗಿದ್ದಾರೆ.

ತಮ್ಮ ಕೊನೆಯ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ತಮ್ಮ ಸದ್ಯದ ಪರಿಸ್ಥಿತಿ ಹಾಗೂ ಭದ್ರತೆಯ ಸವಾಲುಗಳನ್ನು ನೆನಪಿಸುವಂತೆ ಬರೆದುಕೊಂಡಿದ್ದಾರೆ. ‘ನನಗೆ ಈಗ 60 ವರ್ಷ ವಯಸ್ಸಾಗಿದೆ ನಿಜ, ಆದರೆ ನಾನು ಹೋರಾಡುವುದನ್ನು ಇನ್ನು ಮರೆತಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಕ್ಕಾಗಿ ನನ್ನನ್ನು ಜೈಲಿಗೆ ಹಾಕುತ್ತೀರಾ’ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯಲ್ಲಿ ಹಾವು ರಕ್ಷಣಾ ಕಾರ್ಯ ಹೇಗಿತ್ತು? ಇಲ್ಲಿದೆ ವೈರಲ್ ವಿಡಿಯೋ

ಸಲ್ಮಾನ್ ಖಾನ್ ಮುಂಬರುವ ಸಿನಿಮಾಗಳು

ಸಲ್ಮಾನ್ ಖಾನ್ ಸದ್ಯ 2020ರ ಗಲ್ವಾನ್ ಕಣಿವೆ ಸಂಘರ್ಷದ ಆಧಾರಿತ ಭವ್ಯ ದೇಶಭಕ್ತಿ ಸಿನಿಮಾ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ, ದಿಲ್ ರಾಜು ನಿರ್ಮಾಣದ ತಾತ್ಕಾಲಿಕ ಶೀರ್ಷಿಕೆ ‘SVC63’ ಚಿತ್ರದಲ್ಲಿ ನಟಿ ನಯನತಾರಾ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದು, ಈ ಸಿನಿಮಾ 2027ರ ಈದ್ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:52 am, Wed, 20 May 26

Source link

In Pics: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

Source link

ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

Source link

ಮೆಡಿಕಲ್ ಬಂದ್ ಇದ್ರೂ ಜನರಿಗಿಲ್ಲ ತೊಂದರೆ! ಜನೌಷಧಿ ಕೇಂದ್ರ, ಅಪೊಲೋ​, ಮೆಡ್ ಪ್ಲಸ್ ಓಪನ್ – Kannada News | Medical Shop Strike: No Relief Shortage as Jan Aushadhi, Apollo, and MedPlus Pharmacies Remain Open Across Karnataka

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಮೆಡಿಕಲ್ ಶಾಪ್‌ಗಳ ಬಂದ್‌ ನಡುವೆಯೂ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧ ಮಳಿಗೆಗಳು, ಜನೌಷಧಿ ಕೇಂದ್ರಗಳು, ಅಪೋಲೋ ಫಾರ್ಮಸಿಗಳು ಮತ್ತು ಮೆಡ್‌ಪ್ಲಸ್ ಶಾಖೆಗಳು ಎಂದಿನಂತೆ ತೆರೆದಿವೆ. ಕಾರ್ಪೊರೇಟ್ ಸ್ವಾಮ್ಯದ ಅಪೋಲೋ ಮತ್ತು ಮೆಡ್‌ಪ್ಲಸ್‌ನಂತಹ ಔಷಧ ಮಳಿಗೆಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಇವು ಆನ್‌ಲೈನ್ ವಿತರಣೆ ಸೇವೆಗಳನ್ನು ಸಹ ಒದಗಿಸುತ್ತಿವೆ. ಅಲ್ಲದೆ, ಸರ್ಕಾರಿ ಸ್ವಾಮ್ಯದ ಜನೌಷಧಿ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಖಾಸಗಿ ಮೆಡಿಕಲ್ ಸ್ಟೋರ್‌ಗಳು ನಿರ್ದಿಷ್ಟ ಒಪ್ಪಂದಗಳ ಕಾರಣದಿಂದ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಔಷಧಗಳ ಕೊರತೆ ಸಮಸ್ಯೆ ಅಷ್ಟಾಗಿ ಎದುರಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಮುಕೇಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಭೇಟಿ

ಬೆಂಗಳೂರು, ಮೇ 20: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಪುತ್ರ ಅನಂತ್ ಅಂಬಾನಿ ಬೆಂಗಳೂರಿನ ಅಂತರರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ತಂದೆ-ಮಗ ಇಬ್ಬರೂ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದರು. ಮೇ 15ರಂದು ನಡೆದಿದ್ದ ಗುರೂಜಿಯವರ 70ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಆಶ್ರಮಕ್ಕೆ ಭೇಟಿ ನೀಡಿ, ನೂತನ ‘ಧ್ಯಾನ ಮಂದಿರ’ವನ್ನು ಉದ್ಘಾಟಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೂಪ ಬದಲಿಸಿಕೊಂಡು ಭಾರತದಲ್ಲಿ ದಾಳಿಗೆ ಉಗ್ರರ ಸಂಚು, ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಕಾಸ್ಮೆಟಿಕ್ ಮೇಕ್ ಓವರ್ – Kannada News | Terror Surveillance Intensifies Over Reports of Identity Masking Tactics in India

ನವದೆಹಲಿ, ಮೇ 20: ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಮತ್ತು ಸ್ಲೀಪರ್ ಸೆಲ್ ಸ್ಥಾಪಿಸಲು ಪಾಕಿಸ್ತಾನದಿಂದ ನುಸುಳಿ ಬಂದಿದ್ದ ಲಷ್ಕರ್-ಎ-ತೊಯ್ಬಾ (LeT) ಉಗ್ರನೊಬ್ಬನ ಕರಾಳ ಮಿಷನ್ ಕೊನೆಗೂ ವಿಫಲಗೊಂಡಿದೆ. ಆದರೆ, ಆತನ ಮಿಷನ್ ವಿಫಲವಾಗಲು ಕಾರಣ ಭಾರತೀಯ ಸೇನೆಯಲ್ಲ, ಬದಲಿಗೆ ಆತನಿಗೆ ಕಾಡುತ್ತಿದ್ದ ಕೂದಲು ಉದುರುವಿಕೆ ಸಮಸ್ಯೆ ಮತ್ತು ಸುಂದರವಾಗಿ ಕಾಣಬೇಕೆಂಬ ಗೀಳು.

ಮಿಷನ್ ಬಿಟ್ಟು ಕೂದಲು ಕಸಿಗೆ ಮುಂದಾದ ಉಗ್ರ ಉಸ್ಮಾನ್ ಜಟ್
ಭಾರತದಲ್ಲಿ ಭೀಕರ ವಿಧ್ವಂಸಕ ಕೃತ್ಯಕ್ಕೆ ಸ್ಲೀಪರ್ ಸೆಲ್ ಸ್ಥಾಪಿಸುವ ದೊಡ್ಡ ಜವಾಬ್ದಾರಿಯೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಲಷ್ಕರ್ ಉಗ್ರ ಉಸ್ಮಾನ್ ಜಟ್ ಅಲಿಯಾಸ್ ಚೈನೀಸ್ ಯಶಸ್ವಿಯಾಗಿ ನುಸುಳಿದ್ದ. ಭಾರತದ ದೈನಂದಿನ ಶಾಂತಿಯುತ ಜೀವನವನ್ನು ಕಂಡ ತಕ್ಷಣ ಆತನ ಉತ್ಸಾಹ ಕುಸಿದುಹೋಗಿತ್ತು. ಇದೇ ಸಮಯದಲ್ಲಿ ಆತನಿಗೆ ತನ್ನ ತಲೆಯ ಕೂದಲು ಉದುರುತ್ತಿರುವುದು ದೊಡ್ಡ ಚಿಂತೆಯಾಗಿ ಕಾಡಲಾರಂಭಿಸಿತು.

ಕೂದಲು ಉದುರುವಿಕೆಯಿಂದ ತನ್ನ ವೈಯಕ್ತಿಕ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ತೀವ್ರ ಹಾನಿಯಾಗಿದೆ ಎಂದು ಒಪ್ಪಿಕೊಂಡ ಆತ, ತನಗೆ ಒಪ್ಪಿಸಿದ್ದ ದೇಶದ್ರೋಹದ ಮಹಾ ಮಿಷನ್ ಅನ್ನೇ ಬದಿಗಿಟ್ಟು, ಕೂದಲು ಕಸಿ (Hair Transplantation) ಚಿಕಿತ್ಸೆಗಾಗಿ ಶ್ರೀನಗರದ ವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಾಗಿದ್ದ. ಅಲ್ಲಿಯೇ ಈತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ದಂತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮತ್ತೊಬ್ಬ ಉಗ್ರ
ಬಾಂಗ್ಲಾದೇಶದಲ್ಲಿ ಲಷ್ಕರ್ ಸೆಲ್ ಸ್ಥಾಪಿಸುತ್ತಿದ್ದ ಶಬ್ಬೀರ್ ಅಹ್ಮದ್ ಲೋನ್ ಎಂಬಾತನನ್ನು ಮಾರ್ಚ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಈತ ಎಐ (AI) ಶೃಂಗಸಭೆಗೆ ಮುಂಚಿತವಾಗಿ ದೆಹಲಿಯಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಅಂಟಿಸಲು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದ. ತನಿಖೆಯ ವೇಳೆ ಈತ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಗುರುಗ್ರಾಮದಲ್ಲಿ ಖಾಸಗಿ ಚಿಕಿತ್ಸಾಲಯದಲ್ಲಿ ದಂತ ಶಸ್ತ್ರಚಿಕಿತ್ಸೆಯನ್ನು (Dental Surgery) ಮಾಡಿಸಿಕೊಂಡಿದ್ದ ಎಂಬ ವಿವರಗಳು ಪೊಲೀಸರು ಶೀಘ್ರದಲ್ಲೇ ಸಲ್ಲಿಸಲಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಕೇವಲ ಸೌಂದರ್ಯದ ಗೀಳಲ್ಲ, ಎಐ ಕಣ್ಣು ತಪ್ಪಿಸುವ ರಣತಂತ್ರ
ಭಯೋತ್ಪಾದಕರು ಈ ರೀತಿ ಮೇಕ್ ಓವರ್ ಮಾಡಿಕೊಳ್ಳುತ್ತಿರುವುದರ ಹಿಂದೆ ಕೇವಲ ಸೌಂದರ್ಯದ ಹಪಾಹಪಿ ಮಾತ್ರವಿಲ್ಲ, ಬದಲಿಗೆ ಜಾಗತಿಕ ವಿಮಾನ ನಿಲ್ದಾಣಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ನಿಯೋಜಿಸಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಅನ್ನು ವಿಫಲಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವೂ ಅಡಗಿದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಈ ಆಧುನಿಕ ಎಐ ಅಲ್ಗಾರಿದಮ್‌ಗಳು ಕೇವಲ ಫೋಟೋವನ್ನು ನೋಡುವುದಿಲ್ಲ, ಅವು ವ್ಯಕ್ತಿಯ ಕಣ್ಣುಗಳು, ಮೂಗಿನ ಸೇತುವೆ, ದವಡೆಯ ರೇಖೆ ಮತ್ತು ಹಣೆಯ ಗಡಿಯ ನಡುವಿನ ನಿಖರವಾದ, ಸ್ಥಿರ ಅಂತರವನ್ನು ನಕ್ಷೆ ಮಾಡುತ್ತವೆ.

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್​ನ ಹಾದಿಯನ್ನೇ ಈ ಉಗ್ರರು ಹಿಡಿದಿದ್ದಾರೆ. ವರ್ಷಗಳ ಹಿಂದೆ ಸಾಜಿದ್ ಮಿರ್ ಮತ್ತು ಕಾರ್ಲೋಸ್ ದಿ ಜಾಕಲ್ ಇಬ್ಬರೂ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳಿಗೆ (Plastic Surgery) ಒಳಗಾಗುವ ಮೂಲಕ ತಮ್ಮ ಗುರುತನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Mosques: ವಿಶ್ವದ ಅತಿ ಹೆಚ್ಚು ಮಸೀದಿಗಳಿರುವ ದೇಶಗಳಲ್ಲಿ ಭಾರತಕ್ಕೆ 2ನೇ ಸ್ಥಾನ;ಪಾಕಿಸ್ತಾನ, ಬಾಂಗ್ಲಾಗಳಿಗಿಂತ ಭಾರತವೇ ಮುಂದು! – Kannada News | India Ranks 2nd Globally in Mosques: Celebrating Eid Al Adha with Rich Heritage and Diversity

ಜಾಗತಿಕ ಮಸೀದಿಗಳ ಗಣತಿImage Credit source: Pinterest

ಈದ್-ಉಲ್-ಅದ್ಹಾ (ಬಕ್ರೀದ್) ಹಬ್ಬದ ಸಂಭ್ರಮ ದೇಶಾದ್ಯಂತ ಕಳೆಗಟ್ಟುತ್ತಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಸಂಸ್ಕೃತಿ ಅಥವಾ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಬಂದಾಗ, ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಮಧ್ಯಪ್ರಾಚ್ಯ (ಗಲ್ಫ್) ದೇಶಗಳ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ ಜಾಗತಿಕ ಅಂಕಿ-ಅಂಶಗಳು ಒಂದು ರೋಚಕ ಸತ್ಯವನ್ನು ಬಹಿರಂಗಪಡಿಸಿವೆ. ವಿಶ್ವದಲ್ಲೇ ಅತಿ ಹೆಚ್ಚು ಮಸೀದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಚ್ಚರಿಯ ವಿಷಯವೆಂದರೆ, ಮುಸ್ಲಿಂ ಬಹುಸಂಖ್ಯಾತ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗಿಂತಲೂ ಭಾರತ ಈ ಪಟ್ಟಿಯಲ್ಲಿ ಸಾಕಷ್ಟು ಮುಂದಿದೆ.

ಜಾಗತಿಕ ಮಟ್ಟದಲ್ಲಿ ಇಂಡೋನೇಷ್ಯಾಕ್ಕೆ ಮೊದಲ ಸ್ಥಾನ:

ರಾಷ್ಟ್ರೀಯ ಮಸೀದಿ ಮಾಹಿತಿ ಪೋರ್ಟಲ್ (Simas) ಪ್ರಕಾರ, ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾ, ಮಸೀದಿಗಳ ಸಂಖ್ಯೆಯಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಜುಲೈ 2025 ರ ಅಂಕಿ-ಅಂಶಗಳ ಪ್ರಕಾರ ಸರಿಸುಮಾರು 7,44,000 ಒಟ್ಟು ನೋಂದಾಯಿತ ಮಸೀದಿಗಳಿವೆ.

ಪ್ರಮುಖ ಆಕರ್ಷಣೆ:

ಜಕಾರ್ತಾದಲ್ಲಿರುವ ಭವ್ಯ ಇಸ್ತಿಕ್ಲಾಲ್ ಮಸೀದಿ. ಇದು ಇಂಡೋನೇಷ್ಯಾದ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಐಕ್ಯತೆಯ ಸಂಕೇತವಾಗಿದ್ದು, ಇದರ ಅದ್ಭುತ ವಾಸ್ತುಶಿಲ್ಪವನ್ನು ವೀಕ್ಷಿಸಲು ವಿಶ್ವದಾದ್ಯಂತ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.

ಎರಡನೇ ಸ್ಥಾನದಲ್ಲಿ ಭಾರತ:

ಭಾರತವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಲ್ಲದಿದ್ದರೂ, ಇಲ್ಲಿ 20 ಕೋಟಿಗೂ ಹೆಚ್ಚು ಮುಸ್ಲಿಂ ಧರ್ಮೀಯರು ವಾಸಿಸುತ್ತಿದ್ದಾರೆ. ಈ ಆಳವಾದ ಸಾಂಸ್ಕೃತಿಕ ಪರಂಪರೆಯು ದೇಶದ ಧಾರ್ಮಿಕ ಮೂಲಸೌಕರ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದಲ್ಲಿ ಸುಮಾರು 3,00,000 ಸಕ್ರಿಯ ಮಸೀದಿಗಳಿವೆ. ಭಾರತದಲ್ಲಿರುವ ಮಸೀದಿಗಳು ತಮ್ಮ ವೈವಿಧ್ಯಮಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಪ್ರಮುಖ ನಗರಗಳಲ್ಲಿರುವ ಮೊಘಲ್ ಕಾಲದ ಭವ್ಯ ಸ್ಮಾರಕಗಳಿಂದ ಹಿಡಿದು ಗ್ರಾಮೀಣ ಭಾಗದ ಸರಳ ಪ್ರಾರ್ಥನಾ ಮಂದಿರಗಳವರೆಗೆ, ಇವೆಲ್ಲವೂ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸುತ್ತವೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ!

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತಕ್ಕಿಂತ ಹಿಂದೆ ಇರಲು ಕಾರಣವೇನು?

ಅಧಿಕೃತವಾಗಿ ಮುಸ್ಲಿಂ ರಾಷ್ಟ್ರಗಳಾಗಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಒಟ್ಟು ಮಸೀದಿಗಳ ಸಂಖ್ಯೆ ಭಾರತಕ್ಕಿಂತ ಕಡಿಮೆಯಿದೆ. ಇದಕ್ಕೆ ತಜ್ಞರು ಪ್ರಮುಖವಾಗಿ ಮೂರು ಕಾರಣಗಳನ್ನು ನೀಡುತ್ತಾರೆ.

  • ವಿಶಾಲವಾದ ಭೌಗೋಳಿಕ ವಿಸ್ತೀರ್ಣ: ಭಾರತದ ಬೃಹತ್ ಭೂಭಾಗವು ವೈವಿಧ್ಯಮಯ ಪ್ರಾದೇಶಿಕ ಸಮುದಾಯಗಳಿಗೆ ಆಶ್ರಯ ನೀಡಿದೆ.
  • ಬೃಹತ್ ಜನಸಂಖ್ಯೆ: ಭಾರತದಲ್ಲಿರುವ ಮುಸ್ಲಿಂ ಜನಸಂಖ್ಯೆಯು ಜಾಗತಿಕವಾಗಿ ಅತಿ ದೊಡ್ಡ ಜನಸಂಖ್ಯಾ ಗುಂಪುಗಳಲ್ಲಿ ಒಂದಾಗಿದೆ.
  • ಐತಿಹಾಸಿಕ ನಿರಂತರತೆ: ಶತಮಾನಗಳ ಅವಧಿಯಲ್ಲಿ ವಿವಿಧ ರಾಜವಂಶಗಳು ನಿರ್ಮಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳು ಇಂದಿಗೂ ಸಕ್ರಿಯ ಪ್ರಾರ್ಥನಾ ಮಂದಿರಗಳಾಗಿ ಉಳಿದುಕೊಂಡು ಬಂದಿವೆ.

ಬಕ್ರೀದ್ ಹಬ್ಬದ ಸಂಭ್ರಮ:

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಇರುವ ಈ 3,00,000ಕ್ಕೂ ಹೆಚ್ಚು ಮಸೀದಿಗಳು ವಿಶೇಷ ಸಾಮೂಹಿಕ ಪ್ರಾರ್ಥನೆಗಾಗಿ ಸಜ್ಜಾಗುತ್ತಿವೆ. ತ್ಯಾಗ, ದಾನ ಮತ್ತು ಮಾನವೀಯತೆಯನ್ನು ಸಾರುವ ಈ ಹಬ್ಬದ ಸಂದರ್ಭದಲ್ಲಿ, ಭಾರತದ ಮಸೀದಿಗಳಲ್ಲಿ ಸೇರುವ ಭಕ್ತರ ಸಾಗರವು ದೇಶದ ವೈವಿಧ್ಯತೆಯಲ್ಲಿ ಏಕತೆಯ ಸಾಂಸ್ಕೃತಿಕ ಸೌಂದರ್ಯವನ್ನು ಜಗತ್ತಿಗೆ ಸಾರಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಪಕ್ಕಾ ಸಿನಿಮೀಯ ವಂಚನೆ! ಡಿಸೈನ್ ಸೆಲೆಕ್ಟ್ ಮಾಡಿ ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ದೋಚಿ ಖದೀಮರು ಪರಾರಿ – Kannada News | Bengaluru Gold Fraud: Cheats Rob Rs 3 Crore Worth 1.85 Kg Gold Jewellery From Mehta Jewellers Manager In Malleshwaram

ಬೆಂಗಳೂರು, ಮೇ 20: ಬೆಂಗಳೂರಿನಲ್ಲಿ (Bengaluru) ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಯೊಬ್ಬರಿಗೆ ಭಾರಿ ವಂಚನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಈ ಹೈಟೆಕ್ ಕಳ್ಳತನ ನಡೆದಿದ್ದು, ವಂಚಕರು ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರತ್ ಪೇಟೆಯಲ್ಲಿರುವ ಪ್ರಸಿದ್ಧ ‘ಮೆಹ್ತಾ ಜ್ಯುವೆಲ್ಲರಿ’ ಶಾಪ್ ಮಾಲೀಕರು ಈ ಜಾಲದ ಕೈಗೆ ಸಿಲುಕಿ ಕೋಟಿ ಕೋಟಿ ಮೌಲ್ಯದ ಬಂಗಾರವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಮುಖ್ಯಾಂಶಗಳು

  • ಮಾಹಿ ಎಂಟರ್‌ಪ್ರೈಸಸ್ ಹೆಸರಲ್ಲಿ ವಂಚನೆ ಜಾಲ
  • 3 ಕೆಜಿ ಬಂಗಾರದೊಂದಿಗೆ ಹೋದ ಮ್ಯಾನೇಜರ್
  • ಫೋಟೋ ತೆಗೆಯುವ ನೆಪದಲ್ಲಿ ವಂಚನೆ

ಬೋರ್ಡ್ ಬದಲಾಯಿಸಿ ಖೆಡ್ಡಾಕ್ಕೆ ಕೆಡವಿದ ಖದೀಮರು

ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಪರೇಶ್ ಸೋನಿ ಎಂಬಾತ ಕರೆ ಮಾಡಿ, ತಮಗೆ ‘ಮಾಹಿ ಎಂಟರ್‌ಪ್ರೈಸಸ್’ ಹೆಸರಿನ ಸಂಸ್ಥೆ ಇದ್ದು, ಹೋಲ್‌ಸೇಲ್ ದರದಲ್ಲಿ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂದು ನಂಬಿಸಿ ಆಫೀಸ್‌ಗೆ ಕರೆಸಿಕೊಂಡಿದ್ದ. ಆತ ತನಗೂ ಮತ್ತು ತನ್ನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಮತ್ತು ‘ಮಾಹಿ ಎಂಟರ್‌ಪ್ರೈಸಸ್’ ಎಂದು ನಕಲಿ ಬೋರ್ಡ್ ಹಾಕಿ ಈ ವ್ಯವಸ್ಥಿತ ಸಂಚು ರೂಪಿಸಿದ್ದ. ವ್ಯಾಪಾರದ ಆರ್ಡರ್ ದೊಡ್ಡದಿದೆ ಎಂದು ನಂಬಿದ ಜ್ಯುವೆಲ್ಲರಿ ಮ್ಯಾನೇಜರ್, ಮಾಲೀಕರ ಸೂಚನೆಯಂತೆ ಬರೋಬ್ಬರಿ 3 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿದ್ದ ಪರೇಶ್ ಸೋನಿ ಕಚೇರಿಗೆ ಹೋಗಿದ್ದರು. ಮ್ಯಾನೇಜರ್ ಆಭರಣ ತಂದಾಗ, ಅವುಗಳ ವಿನ್ಯಾಸವನ್ನು ಪರಿಶೀಲಿಸುವಂತೆ ನಟಿಸಿ, ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ತನ್ನ ಸಹಚರ ಚಂದ್ರಶೇಖರ್ ಎಂಬಾತನಿಗೆ ಒಪ್ಪಿಸಿ ಆಭರಣಗಳ ಪಟ್ಟಿ (List) ಸಿದ್ಧಪಡಿಸಲು ಹೇಳಿದ್ದ.

ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದ ಆರೋಪಿಗಳು ಅಲ್ಲಿಂದಲೇ ಚಿನ್ನದೊಂದಿಗೆ ನಾಪತ್ತೆಯಾಗಿದ್ದಾರೆ. ಒಳಗೆ ಹೋದವರು ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಅನುಮಾನಗೊಂಡು ಮ್ಯಾನೇಜರ್ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು

ಸದ್ಯ ಈ ಭಾರಿ ಕಳ್ಳತನ ಕೇಸ್​​​ಗೆ ಸಂಬಂಧಿಸಿದಂತೆ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ಎಂಬುವವರ ವಿರುದ್ಧ ಸಂತ್ರಸ್ತ ಉದ್ಯಮಿ ದೂರು ನೀಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version