Headlines

ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ – Kannada News | Miscreants Targets Hindu Temples In Gadag District, two Village Gods destroyed

ಗದಗ, (ಫೆಬ್ರವರಿ 19): ಜಿಲ್ಲೆಯಲ್ಲಿ ಹಿಂದೂ ದೇವರಗಳ (Hindu God) ಮೇಲಿನ ದಾಳಿ ಮುಂದುವರೆದಿದೆ. ಮೊನ್ನೇ ಶಿವರಾತ್ರಿ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ದೇವರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳು ಹಿಂದೂ ದೇವರುಗಳನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ದೇವಸ್ಥಾನ ಶಿವಲಿಂಗ, ಪಾಣಿಪೀಠ…

Read More

ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು – Kannada News | Inheritance property and the tax rules for heirs in India

ನಿಮ್ಮ ತಂದೆ ಮತ್ತು ತಾಯಿ ನಿಧನದ ನಂತರ, ಅವರ ವಾರಸುದಾರರಾದ ನೀವು ಅವರ ಆಸ್ತಿಪಾಸ್ತಿ ಪಡೆಯಲು ಅರ್ಹರಿರುತ್ತೀರಿ. ಈ ಪಿತ್ರಾರ್ಜಿತ ಆಸ್ತಿ (Inherited property) ಹಲವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಮುನ್ನ ಅನುಸರಿಸಬೇಕಾದ ಕೆಲ ವಿಧಾನಗಳು ಮತ್ತು ಬಾಧ್ಯತೆಗಳು ಇವೆ. ಮೃತರ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಿಂದ ಹಿಡಿದು ಆಸ್ತಿಯ ಲಾಭ ಗಳಿಕೆ ಟ್ಯಾಕ್ಸ್​ವರೆಗೂ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ವಿವರ ಇಲ್ಲಿದೆ. ಮೃತರ ಐಟಿ ರಿಟರ್ನ್ ಸಲ್ಲಿಕೆ ಮೃತರು ನಿಧನವಾದ ವರ್ಷಕ್ಕೆ…

Read More

ಪಹಲ್ಗಾಮ್ ಕರಾಳ ದಿನಕ್ಕೆ ವರ್ಷ: ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಇನ್ನೂ ಮಡುಗಟ್ಟಿದ ನೋವು – Kannada News | Pahalgam Attack One Year Later: Pain Still Lingers in Manjunath’s House

ಶಿವಮೊಗ್ಗ, ಏಪ್ರಿಲ್​ 22: ಪಹಲ್ಗಾಮ್​ನಲ್ಲಿ (Pahalgam) 2025 ಏಪ್ರಿಲ್​​ 22ರಂದು ಶಿವಮೊಗ್ಗದ ಮಂಜುನಾಥ್ (Manjunath)  ಸೇರಿ ಒಟ್ಟು 26 ಜನರ ನರಮೇಧವಾಗಿತ್ತು. ಈ ಘಟನೆ ನಡೆದು ಇಂದಿಗೆ ಒಂದು ವರ್ಷ. ಮೃತ ಮಂಜುನಾಥ್ ಮನೆಯಲ್ಲಿ ಇನ್ನೂ ಅದೇ ನೋವು ಮಡುಗಟ್ಟಿದೆ. ವಯಸ್ಸಾದ ತಾಯಿ ತನ್ನ ಮಗನ ಸಾವಿನ ಕುರಿತು ಈಗಲೂ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ವರ್ಷ ಏ. 22 ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಶಿವಮೊಗ್ಗದ ಮಂಜುನಾಥ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ…

Read More

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ

2026 ರ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ (Team India) ಬಿಸಿಸಿಐನಿಂದ ಭರ್ಜರಿ ಬಹುಮಾನ ಘೋಷಣೆಯಾಗಿದೆ. ಐಸಿಸಿ ನೀಡಿದ 27.48 ಕೋಟಿ ರೂಗಳ ಜೊತೆಗೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಪಾಳದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮಖ ಪಾತ್ರವಹಿಸಿದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ (T. Dilip) ಅವರನ್ನು ಈ ಹುದ್ದೆಯಿಂದ ತೆಗೆದುಹಾಕಬಹುದು ಎಂದು ಹೇಳಲಾಗಲುತ್ತಿದೆ. 2021…

Read More

ಶಿವಮೊಗ್ಗ: ಸೂಳೆಬೈಲು ಬಡಾವಣೆಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ – Kannada News | SSLC Student Killed in Shivamogga’s Sulekebailu Layout; Two Students Detained After School Clash

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಎಸ್​ಎಸ್​​ಎಲ್​ಸಿ ವಿದ್ಯಾರ್ಥಿ ಸಂಕೇತ್ (16) ಕೊಲೆಯಾಗಿದ್ದಾನೆ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ…

Read More

ಯೂರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭ: ಜೇಮಿಸನ್ – Kannada News | India comes out on top in deal with European Union, says US trade representative Jamieson Greer

ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ. ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು…

Read More

ಗೊಂದಲದ ಗೂಡಾದ ಕುಂದಗೋಳ ಜನಸಂಪರ್ಕ ಸಭೆ: ವೇದಿಕೆಯಲ್ಲೇ ಅಧಿಕಾರಿಗಳಿಗೆ ಸಚಿವ ಸಂತೋಷ್​​ ಲಾಡ್​​ ತರಾಟೆ – Kannada News | Farmers’ Outburst at Kundagol Public Meeting Led by Minister Santhosh Lad

ಧಾರವಾಡ, ಏಪ್ರಿಲ್​​ 28: ಕುಂದಗೋಳ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ  ಜನಸಂಪರ್ಕ ಸಭೆಯ ಮಧ್ಯೆ, ರೈತರೊಬ್ಬರು ತಮ್ಮ ಸಮಸ್ಯೆಗಳ ಕುರಿತು ಕೂಗಾಡಿದ್ದಾರೆ. ಅಧಿಕಾರಿಗಳು ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದರೂ, ರೈತರು ಸಭೆಯಲ್ಲಿಯೇ ತಮ್ಮ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕೇಳುವ ಪ್ರಯತ್ನ ಮಾಡಿದ ಪ್ರಸಂಗ ನಡೆದಿದೆ. ಈ ಘಟನೆಯು ಕುಂದಗೋಳದ ಜನಸಂಪರ್ಕ ಸಭೆಯಲ್ಲಿ ಅಲ್ಪ ಕಾಲ ಗೊಂದಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಭೆ ಗೊಂದಲದ ಗೂಡಾದ ಕಾರಣ, ವೇದಿಕೆಯಲ್ಲೇ ಅಧಿಕಾರಿಗಳನ್ನು…

Read More

ಎಂಜಿನ್​​ನಲ್ಲಿ ದೋಷ, 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​​ಜೆಟ್ ವಿಮಾನ ದೆಹಲಿಗೆ ವಾಪಸ್ – Kannada News | SpiceJet Emergency: Delhi Leh Flight Makes Safe Return After Engine Issue

ಸ್ಪೈಸ್​ಜೆಟ್-ಸಾಂದರ್ಭಿಕ ಚಿತ್ರ Image Credit source: Skytrax ನವದೆಹಲಿ, ಫೆಬ್ರವರಿ 24: ಎಂಜಿನ್​​ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​ಜೆಟ್(SpiceJet) ವಿಮಾನ ದೆಹಲಿಗೆ ಹಿಂದಿರುಗಿರುವ ಘಟನೆ ನಡೆದಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು . SG121 ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು, ಆಗ ಸಿಬ್ಬಂದಿಗೆ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಮುನ್ನೆಚ್ಚರಿಕೆಯಾಗಿ, ಪೈಲಟ್‌ಗಳು ವಿಮಾನವನ್ನು ತಿರುಗಿಸಿ…

Read More

12 ಎಕರೆ ಭೂಮಿಯಿಂದ ಲಕ್ಷಾಂತರ ರೂ. ಲಾಭ; ವಿಕಲಚೇತನ ಕೃಷಿಕನ ಸಾಧನೆ! – Kannada News | Inspiring Koppal Farmer: Disabled farmer ramanna Earns Lakhs in Seed Production

12 ಎಕರೆ ಭೂಮಿಯಲ್ಲಿ ಲಕ್ಷಾಂತರ ಲಾಭ; ವಿಕಲಚೇತನ ಕೃಷಿಕನ ಸಾಧನೆ! ಕೊಪ್ಪಳ, ಡಿಸೆಂಬರ್ 24: ಇಂದಿನ ಕಾಲದಲ್ಲಿ ಕೈಕಾಲು ನೆಟ್ಟಗಿದ್ದರೂ ಕೆಲವರು ದುಡಿದು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಕೊಪ್ಪಳದ (Koppal) ಓರ್ವ ಕೃಷಿಕ ಒಂದು ಕಾಲು ಕಳೆದುಕೊಂಡಿದ್ದರೂ ಕುಗ್ಗದೆ, 12 ಎಕರೆ ಭೂಮಿಯನ್ನು ಉತ್ತಿ ಬಿತ್ತಿ ಲಕ್ಷಾಂತರ ರೂ. ಗಳಿಸಿದ್ದಾರೆ. ಟೊಮೇಟೊ, ಬದನೆ ಸೇರಿ ಹಲವು ತರಕಾರಿಗಳ ಜೊತೆಗೆ ಬೀಜೋತ್ಪಾದನೆಯಲ್ಲಿ ತೊಡಗಿರುವ ಅವರು, ಯುವ ಕೃಷಿಕರಿಗೆ ಸ್ಫೂರ್ತಿಯಾಗಿದ್ದಾರೆ. ಕೃತಕ ಕಾಲು ಅಳವಡಿಸಿಕೊಂಡೇ ಕೃಷಿ ಚಟುವಟಿಕೆ…

Read More

ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ – Kannada News | Ram Charan Peddi movie new release date confirmed June 4 instead of Toxic

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಈ ಹಿಂದೆ ಮೂರು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾ, ಕೊನೆಗೂ ಈ ವರ್ಷ ಜೂನ್ 4ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಐಪಿಎಲ್ ಪಂದ್ಯಗಳು ಮುಗಿದ ತಕ್ಷಣವೇ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೊದಲು ಜೂನ್ 4ರಂದು ಯಶ್ ನಟನೆಯ ‘ಟಾಕ್ಸಿಕ್’ (Toxic)…

Read More