ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ: ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು – Kannada News | Honor killing attempts In Koppal: Brother Try to Kill Sister Over Love marriage

ಕೊಪ್ಪಳ, (ಫೆಬ್ರವರಿ 18): ಕೊಪ್ಪಳ (Koppal) ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಯತ್ನ (honor killing) ನಡೆದಿರುವ ಘಟನೆ ನಡೆದಿದೆ. ಸಹೋದರಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಹೋದರ ಆಕೆಯನ್ನು ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ನಾಲ್ಕು ತಿಂಗಳು ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 23 ವರ್ಷದ ಮೀನಾಕ್ಷಿ ಕಳೆದ ಎರಡು ವರ್ಷಗಳ ಹಿಂದೆ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಮೀನಾಕ್ಷಿ ನಾಲ್ಕು ತಿಂಗಳು ಗರ್ಭಿಣಿ. ಇದನ್ನು ಲೆಕ್ಕಿಸದ ಸಹೋದರ ಮಂಜುನಾಥ್ ಎನ್ನುವಾತ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ,

ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಚಿತ್ತಾಪೂರದ ಕುರುಬ ಸಮುದಾಯದ ಮೀನಾಕ್ಷಿ ಕುಟುಂಬದ ವಿರೋಧದ ನಡುವೆಯೂ ಎರಡು ವರ್ಷಗಳ ಹಿಂದೆ ಹಂದ್ರಾಳ ಗ್ರಾಮದ ಉದಯ ಎನ್ನುವ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಮೀನಾಕ್ಷಿ ಸಹೋದರ ಮಂಜುನಾಥ್ ಕೆರಳಿದ್ದು, ಸಿಟ್ಟಿನಲ್ಲೇ ಇದ್ದ. ಆದ್ರೆ, ಇಂದು (ಫೆಬ್ರವರಿ 18) ಮೀನಾಕ್ಷಿ ಪತಿ ಉದಯ ಸಹೋದರನ ಮದುವೆ ಇದ್ದರಿಂದ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು.

ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಮತ್ತೊಂದೆಡೆ ಮೀನಾಕ್ಷಿ ಸಹೋದರ ಮಂಜುನಾಥ್ ಸಿಟ್ಟಿನಲ್ಲಿದ್ದ. ಯಾವಾಗ ಸಹೋದರಿ ಮೀನಾಕ್ಷಿ ಹಂದ್ರಾಳ ಬಂದಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಂಜುನಾಥ್, ಮದುವೆ ಸಮಯದಲ್ಲಿ ಕಾದು ಕೊಡಲಿಯಿಂದ ಸಹೋದರಿಗೆ ಮೀನಾಕ್ಷಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಡಲಿ ಏಟಿನಿಂದ ಗಾಯಗೊಂಡಿರುವ ಮೀನಾಕ್ಷಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಳವಂಡಿ ಪೊಲೀಸರು ದೌಡಾಯಿಸಿ, ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಸಹೋದರ ಮಂಜುನಾಥನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕುಟುಂಬದ ವಿರೋಧದ ನಡುವೆ ಅನ್ಯ ಜಾತಿ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡು ಸಹೋದರಿಯನ್ನು ಹತ್ಯೆಗೆ ಯತ್ನಿಸಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ನೀನು ಭಾರತದ ನಾಯಿ”: ಆಸ್ಟ್ರೇಲಿಯಾದಲ್ಲಿ ಜನಾಂಗೀಯವಾಗಿ ನಿಂದಿಸಿ, ಭಾರತ ಮೂಲದ ವ್ಯಕ್ತಿ ಮೇಲೆ ಹಲ್ಲೆ – Kannada News | Australia: Indian Nurse Harman Preet Singh Brutally Attacked in Geelong; Rising Hate Crimes Concern NRIs

ಜೀಲಾಂಗ್, ಫೆ.18: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ (Corio) ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಅವರ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ. ಫೆಬ್ರವರಿ 17 ತಡರಾತ್ರಿ ಹರ್ಮನ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಬರುವಾಗ ಈ ಘಟನೆ ಸಂಭವಿಸಿದೆ. ಮೂವರು ವ್ಯಕ್ತಿಗಳ ಗುಂಪು ಹರ್ಮನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹರ್ಮನ್ ಅವರನ್ನು “ಇಂಡಿಯನ್ ಡಾಗ್” (ಭಾರತೀಯ ನಾಯಿ) ಎಂದು ಜನಾಂಗೀಯವಾಗಿ ನಿಂದಿಸುತ್ತಿರುವುದು ಕೂಡ ಕಾಣಬಹುದು.

ಹರ್ಮನ್ ಅವರ ಮುಖಕ್ಕೆ ತಲೆಯಿಂದ ಜೋರಾಗಿ ಗುದ್ದಿದ ಪರಿಣಾಮ ಅವರ ಮೂಗಿನಿಂದ ರಕ್ತ ಬಂದು ದೊಡ್ಡ ಗಾಯಗಳಾಗಿವೆ. ಹರ್ಮನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆಯಿಂದ ಹರ್ಮನ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. “ನನಗೆ ಈಗ ಸುರಕ್ಷತೆಯ ಭಯವಾಗುತ್ತಿದೆ, ಮತ್ತೆ ಜಿಮ್‌ಗೆ ಹೋಗಲು ಸಾಧ್ಯವೇ ಎಂಬುದು ತಿಳಿಯುತ್ತಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅವರ ಕುಟುಂಬ ಕೂಡ ಇದರಿಂದ ಭಯಗೊಂಡಿದೆ.

ಕಳೆದ ವರ್ಷ ಅಂದರೆ ಡಿಸೆಂಬರ್​​ನಲ್ಲಿ ಇಂತಹದೇ ಒಂದು ಘಟನೆ ಸಿಡ್ನಿಯ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಆಚರಣೆಯ ವೇಳೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 15 ಜನ ಸಾವನ್ನಪ್ಪಿದ್ದರು. ಈ ದಾಳಿಯ ಹಿಂದೆ ತಂದೆ-ಮಗ (ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್) ಇರುವುದು ದೃಢಪಟ್ಟಿತ್ತು. ಸಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವರು ಮತ್ತು ಅವರು ಇಂದಿಗೂ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರು. ಸುಮಾರು 30 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರೂ, ಅವರು ಇಸ್ಲಾಮಿಕ್ ಸ್ಟೇಟ್ (IS) ಸಿದ್ಧಾಂತದಿಂದ ಪ್ರೇರಿತರಾಗಿ ಈ ಕೃತ್ಯ ಎಸಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಸ್ಕೂಬಿ ಡೂ ಪಾತ್ರಧಾರಿಗಳ ವೇಷ ತೊಟ್ಟು ಕಳ್ಳತನ ಮಾಡುತ್ತಿದ್ದವರ ಸ್ಕ್ವಿಡ್ ಗೇಮ್ ಪಾತ್ರಧಾರಿಯಂತೆ ಬಂದು ಹಿಡಿದ ಪೊಲೀಸ್

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ಇಂತಹ ಹಲ್ಲೆಗಳು ಅಲ್ಲಿನ ಅನಿವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿವೆ. ಜೀಲಾಂಗ್ ಪೊಲೀಸರು ಹರ್ಮನ್ ಪ್ರೀತ್ ಸಿಂಗ್ ಮೇಲಿನ ಹಲ್ಲೆಯನ್ನು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ; ವಿಡಿಯೋ ವೈರಲ್ – Kannada News | 55 year old Businessman dies of heart attack while playing badminton in Raipur

ರಾಯ್‌ಪುರ, ಫೆಬ್ರವರಿ 18: ರಾಯ್‌ಪುರದ ಅಶ್ವಿನಿ ನಗರದ ಉದ್ಯಮಿ ತನ್ನ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಘಾತದಿಂದ (Heart Attack) ಮೃತಪಟ್ಟಿದ್ದಾರೆ. ಗೆಳೆಯರೊಂದಿಗೆ ಎಂಜಾಯ್ ಮಾಡುತ್ತಾ ಆಟವಾಡುತ್ತಿದ್ದ ಅವರು ಕೈಯಲ್ಲಿ ಬ್ಯಾಡ್ಮಿಂಟನ್ ಬ್ಯಾಟ್ ಹಿಡಿದುಕೊಂಡೇ ಮೃತಪಟ್ಟಿದ್ದಾರೆ. ಆದರೆ ಮುಂದಿನ ಕ್ಷಣದಲ್ಲಿ ಎಲ್ಲವೂ ಮೌನವಾಯಿತು. 57 ವರ್ಷದ ಹಾರ್ಡ್‌ವೇರ್ ಉದ್ಯಮಿ ಅಮೃತ್ ಬಜಾಜ್ ಸಂಜೆ ಆಟವಾಡಲು ಅಶ್ವಿನಿ ನಗರದ ಮೈದಾನಕ್ಕೆ ಬಂದಿದ್ದರು. ಈ ವೇಳೆ ದುರಂತವಾಗಿ ಮೃತಪಟ್ಟಿದ್ದಾರೆ. ಮೈದಾನದಲ್ಲಿ ಅವರು ಹೊಡೆದ ಅದ್ಭುತ ಶಾಟ್ ಅವರ ಜೀವನದ ಕೊನೆಯ ಶಾಟ್ ಆಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹಠಾತ್ ಹೃದಯ ಸ್ತಂಭನವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ‌ ಕೊಲೆ ಮಾಡಿ ಮನೆ ಆವರಣದಲ್ಲೇ ಶವ ಹೂತ ಪತಿ: ತನಿಖೆ ವೇಳೆ ಬಯಲಾಯ್ತು ಹೆಂಡತಿ ನಾಪತ್ತೆ ನಾಟಕ – Kannada News | Vijayapura: Husband Murders Wife Over Debt Dispute, Buries Her and Files False Missing Complaint

ಆರೋಪಿ ಮತ್ತು ಮೃತ ಮಹಿಳೆImage Credit source: Tv9 Kannada

ವಿಜಯಪುರ, ಫೆಬ್ರವರಿ 18: ಪತ್ನಿಯನ್ನು ತಾನೇ ಕೊಂದು ಶವವವನ್ನು ಮನೆ ಆವರಣದಲ್ಲಿಯೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ನಡೆದಿದೆ. ಕೊಲೆ ನಡೆದು ಬರೋಬ್ಬರಿ 24 ದಿನಗಳ ಬಳಿಕ ಆರೋಪಿಯ ಅಸಲೀ ಮುಖ ಅನಾವರಣಗೊಂಡಿದ್ದು, ಸಾಲದ ವಿಚಾರಕ್ಕೆ ಜಗಳ ನಡೆದ ಹಿನ್ನೆಲೆ ಹೆಂಡತಿಯನ್ನ ದುಷ್ಟ ಕೊಂದಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಸರೋಜಿನಿ (45) ಪತಿಯಿಂದಲೇ ದಾರುಣವಾಗಿ ಹತ್ಯೆಯಾದ ದುರ್ದೈವಿ ಮಹಿಳೆಯಾಗಿದ್ದು, ಆರೋಪಿ ಪ್ರಭು ರತ್ನಾಕರ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿ ಸರೋಜಿನಿ ಹೆಸರಲ್ಲಿ ಆರೋಪಿ ಸಾಲಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜ.24ರಂದೂ ಗಲಾಟೆ ನಡೆದಿತ್ತು. ಈ ವೇಳೆ ಸರೋಜಿನಿ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಪ್ರಭು ರತ್ನಾಕರ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಮನೆ ಆವರಣದಲ್ಲಿಯೇ ಹೂತು ಹಾಕಿದ್ದ ಎಂಬ ವಿಚಾರ ತನಿಖೆ ವೇಳೆ ಗೊರರಬಂದಿದೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ; ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

ತಾನೇ ಪತ್ನಿ ಕೊಂದು ನಾಪತ್ತೆ ದೂರು ನೀಡಿದ್ದ ಆರೋಪಿ

ಇನ್ನು ಪತ್ನಿ ಸರೋಜಿನಿಯನ್ನು ತಾನೇ ಕೊಂದಿದ್ದ ಪ್ರಭು ರತ್ನಾಕರ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಸವದತ್ತಿಗೆ ಹೋಗುವ ಸಲುವಾಗಿ ದೇವರಹಿಪ್ಪರಗಿ ಪಟ್ಟದ ಕಿರಾಣಿ ಅಂಗಡಿಗೆ ಅಗತ್ಯ ಸಾಮಗ್ರಿ ತರೋದಾಗಿ ಹೇಳಿ ಹೋಗಿದ್ದ ಪತ್ನಿ ಸರೋಜಿನಿ ತಿರುಗಿ ಬಂದಿಲ್ಲ. ಹೀಗಾಗಿ ಆಕೆಗಾಗಿ ತಾನು ಮತ್ತು ಮಗ ಪಟ್ಟದ ತುಂಬೆಲ್ಲ ಹುಡುಕಾಡಿದ್ದೇವೆ. ಆದರೆ ಆಕೆಯ ಪತ್ತೆಯಾಗಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡು ಸಂಬಂಧಿಕರ ಜೊತೆಗೂಡಿ ಹುಡುಕಾಡಿದ್ದೇನೆ. ನೆಂಟರಿಷ್ಟರ ಮನೆಗಳಿಗೂ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದರೂ ಪತ್ನಿಯ ಸುಳಿವು ಸಿಕ್ಕಿಲ್ಲ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ಕಂಪ್ಲೇಂಟ್​​​ ನೀಡಿದ್ದ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ವೇಳೆ ಪ್ರಭು ರತ್ನಾಕರನ ಮೇಲೆಯೇ ಅನುಮಾನಗೊಂಡಿದ್ದಾರೆ. ಹೀಗಾಗಿ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಬಯಲಾಗಿದೆ. ಸದ್ಯ ಕಾನೂನು ಪ್ರಕಾರ ಹೂತಿರುವ ಶವ ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಗಿದೆ. ಸರೋಜಿನಿ ತಾಯಿ ಪ್ರಭು ರತ್ನಾಕರ್​​ ವಿರುದ್ಧ ದೂರು ನೀಡಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದಲ್ಲಿ ಮ್ಯೂಲ್ ಅಕೌಂಟ್‌ಗಳಿಂದ ಕೋಟ್ಯಂತರ ರೂ ವ್ಯವಹಾರ: ಸೈಬರ್​​ ಕಾರ್ಯಚರಣೆಯಲ್ಲಿ ಸ್ಫೋಟಕ ಸತ್ಯ ಬಯಲು – Kannada News | Karnataka Cyber Police Busts Mule Bank Account Racket: 68 Arrested, 13.43 Cr Seized

ಬೆಂಗಳೂರು, ಫೆಬ್ರವರಿ 18: ರಾಜ್ಯದಲ್ಲಿ ಸೈಬರ್​ ಪ್ರಕರಣಗಳು (Cyber ​​cases) ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳ (Mule bank accounts) ಮೂಲಕ ಕೂಡ ಭಾರೀ ವಂಚನೆ ನಡೆಯುತ್ತಿದೆ. ಸೈಬರ್ ಕಮಾಂಡ್ ವಿಭಾಗದಿಂದ ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳ ವಿರುದ್ಧ ಡಿ.20ರಿಂದ ಫೆಬ್ರವರಿಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ 869 ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳು ಪತ್ತೆ ಆಗಿದ್ದು, ಈವರೆಗೆ 60 ಮೊಕದ್ದಮೆ ದಾಖಲಿಸಲಾಗಿದ್ದು, 68 ಆರೋಪಿಗಳನ್ನ ಬಂಧಿಸಲಾಗಿದೆ.

ಕೋಟ್ಯಂತರ ರೂ ವ್ಯವಹಾರ

ಸದ್ಯ ರಾಜ್ಯದಲ್ಲಿ ಪತ್ತೆ ಆಗಿರುವ ಈ ಅಕೌಂಟ್‌ಗಳ ವಿರುದ್ಧ ಎನ್​​ಸಿಆರ್​​ಪಿನಲ್ಲಿ 8788 ಕೇಸ್ ಇರುವುದು ಪತ್ತೆ ಆಗಿದೆ. 869 ಮ್ಯೂಲ್ ಅಕೌಂಟ್‌ ಮೂಲಕ 80.5 ಕೋಟಿ ರೂ ಹಣದ ವ್ಯವಹಾರ ನಡೆದಿದೆ. ಸೈಬರ್ ಕಮಾಂಡ್ ವಿಭಾಗ ಈ ಪೈಕಿ 13.43 ಕೋಟಿ ರೂ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಇನ್ನು ಬಂಧಿತ ಆರೋಪಿಗಳಿಂದ 35 ಎಟಿಎಂ ಕಾರ್ಡ್‌, 80 ಮೊಬೈಲ್‌ಫೋನ್‌, 28 ಚೆಕ್‌ಬುಕ್‌, 22 ಸಿಮ್ ಕಾರ್ಡ್‌, 50 ಇತರ ದಾಖಲಾತಿಗಳು ಪತ್ತೆ ಆಗಿದ್ದು, ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು ಇನ್ನೂ ಕಾರ್ಯಾಚರಣೆ ಮುಂದುವರಿಸಿದೆ.

ಮ್ಯೂಲ್ ಅಕೌಂಟ್‌ ಎಂದರೇನು?

ದೊಡ್ಡ ಪ್ರಮಾಣದ ಅಕ್ರಮ ಹಣವನ್ನು ವರ್ಗಾವಣೆ ಮಾಡಲು ಯತ್ನಿಸುವವರು ಸಾಮಾನ್ಯವಾಗಿ ನೇರವಾಗಿ ತಮ್ಮ ಖಾತೆಗಳನ್ನು ಬಳಸುವುದಿಲ್ಲ. ಅದರ ಬದಲು, ಇತರರ ಹೆಸರಿನ ಬ್ಯಾಂಕ್ ಖಾತೆಗಳನ್ನು ಅಥವಾ ಡಮ್ಮಿ ತೆರೆಯಲ್ಪಟ್ಟ ಖಾತೆಗಳನ್ನು ಬಳಸುತ್ತಾರೆ. ಇಂತಹ ಖಾತೆಗಳನ್ನು ಸಾಮಾನ್ಯವಾಗಿ ಮ್ಯೂಲ್ ಖಾತೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ

ಈ ಖಾತೆಗಳ ಮಾಲೀಕರು ಅಪರಾಧದಲ್ಲಿ ಕೆಲವೊಮ್ಮೆ ತಿಳಿದು ಸಹಕರಿಸಬಹುದು ಅಥವಾ ಸುಲಭ ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಖಾತೆಯನ್ನು ಬಳಸಲು ಒಪ್ಪಿಕೊಳ್ಳಲುಬಹುದು. ಕಾರಣವೇನಿರಲಿ, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗುವುದು ಕಾನೂನುಬದ್ಧವಾಗಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:31 pm, Wed, 18 February 26

Source link

ದೆಹಲಿಯಲ್ಲಿ ಅತಿವೇಗದ ಕಾರು ಡಿಕ್ಕಿಯಾಗಿ 23 ವರ್ಷದ ವ್ಯಕ್ತಿ ಸಾವು; ಅಪಘಾತಕ್ಕೂ ಮೊದಲ ವಿಡಿಯೋ ವೈರಲ್ – Kannada News | New CCTV Shows Delhi minor Speeding SUV Moments Before Crash That Killed 23 Year Old

ನವದೆಹಲಿ, ಫೆಬ್ರವರಿ 18: ಇದೀಗ ವೈರಲ್ (Viral Video) ಆಗಿರುವ ಹೊಸ ಸಿಸಿಟಿವಿಯಲ್ಲಿ ದೆಹಲಿಯ ದ್ವಾರಕಾದಲ್ಲಿ 23 ವರ್ಷದ ಸಾಹಿಲ್ ಧನೇಶ್ರಾ ಸಾವನ್ನಪ್ಪಿದ ರಸ್ತೆ ಅಪಘಾತಕ್ಕೆ ಕಾರಣವಾದ ಕ್ಷಣಗಳನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಗಳು ಕಾಣಿಸಿಕೊಂಡಿವೆ. ಕಾರು ಡಿಕ್ಕಿ ಹೊಡೆಯುವುದಕ್ಕೂ ಸ್ವಲ್ಪ ಸಮಯದ ಮೊದಲು ಅಪ್ರಾಪ್ತ ವಯಸ್ಕ ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಎಸ್‌ಯುವಿ ಅತಿವೇಗದಲ್ಲಿ ಚಲಿಸುತ್ತಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಫೆಬ್ರವರಿ 3ರಂದು ದ್ವಾರಕಾದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಬಳಿ ದಾಖಲಾಗಿರುವ ವಿಡಿಯೋ ಅಪಘಾತ ಸಂಭವಿಸುವ ಕೆಲವು ಕ್ಷಣಗಳ ಮೊದಲು ಎಸ್‌ಯುವಿ ಅತಿವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸುತ್ತದೆ. ಬಸ್ ಸಮೀಪಿಸುತ್ತಿದ್ದಂತೆ ಎಸ್‌ಯುವಿ ರಸ್ತೆಗೆ ಅಡ್ಡಲಾಗಿ ಚಲಿಸುತ್ತಿರುವುದು ಕಂಡುಬಂದಿತು. ನಂತರ ಅದು ಸಾಹಿಲ್ ಎಂಬಾತನ ಬೈಕ್​ಗೆ ಡಿಕ್ಕಿ ಹೊಡೆದು, ಭೀಕರ ಡಿಕ್ಕಿ ಹೊಡೆದ ಪರಿಣಾಮದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಡೀ ಕುಟುಂಬವೇ ದುರಂತ ಅಂತ್ಯ

ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ವಯಸ್ಕ ಆರೋಪಿ ಚಾಲಕನನ್ನು ಸ್ಥಳದಲ್ಲೇ ಬಂಧಿಸಿ ಬಾಲ ನ್ಯಾಯ ಮಂಡಳಿಯ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಎಸ್‌ಯುವಿ ಚಲಾಯಿಸುತ್ತಿದ್ದ ಅಕ್ಷತ್ರ ಸಿಂಗ್ 17 ವರ್ಷ ವಯಸ್ಸಿನವನಾಗಿದ್ದು, ಆತನಿಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಆತನನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಯಿತು. ಫೆಬ್ರವರಿ 10ರಂದು ಜೆಜೆಬಿ ಆತನ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧ್ರುವ, ಪುನೀತ್, ಪ್ರೇಮ್ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್ – Kannada News | Kanakapura Srinivas talks about his Viral video on Puneeth Rajkumar Dhruva Sarja

ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪುನೀತ್ ರಾಜ್​ಕುಮಾರ್ (Puneeth Rajkumar), ನಿರ್ದೇಶಕರಾದ ಎ.ಪಿ. ಅರ್ಜುನ್, ಜೋಗಿ ಪ್ರೇಮ್, ನಟ ಧ್ರುವ ಸರ್ಜಾ (Dhruva Sarja) ಬಗ್ಗೆ ಅವರು ಅಸಭ್ಯವಾಗಿ ಮಾತನಾಡಿದ್ದರು. ಅದಕ್ಕೆ ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ಮಾತಿನ ಭರದಲ್ಲಿ ನೀಡಿದ ಹೇಳಿಕೆಗೆ ಅವರು ಕ್ಷಮೆ ಕೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಎದುರಲ್ಲಿ ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ. ‘ಕಾಟನ್​ಪೇಟೆ ಗೇಟ್ ಸಿನಿಮಾ ಬಿಡುಗಡೆಗೆ ನನಗೆ ಹಣದ ಅವಶ್ಯಕತೆ ಇತ್ತು. 2 ವರ್ಷದಿಂದ ಸಿನಿಮಾ ಬಿಡುಗಡೆ ಆಗಿಲ್ಲ. ಆ ದುಃಖದಿಂದ ನಾನು ಹಾಗೆ ಮಾತನಾಡಿದೆ. ನನ್ನ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ದಯವಿಟ್ಟು ಕ್ಷಮಿಸಿ’ ಎಂದು ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NED T20 WC Live Score: ಶಿವಂ ದುಬೆ ಅರ್ಧಶತಕ – Kannada News | India vs Netherlands T20 World Cup 2026 Live Cricket Score IND vs NED Group A Today Match, highlights latest news in Kannada

  • 18 Feb 2026 08:26 PM (IST)

    India vs Netherlands Live Score: ಸೂರ್ಯ ಔಟ್

    ಸೂರ್ಯಕುಮಾರ್ ಯಾದವ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಜೀವದಾನದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 27 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.

  • 18 Feb 2026 08:25 PM (IST)

    India vs Netherlands Live Score: 100 ರನ್ ಪೂರ್ಣ

    ನೆದರ್ಲ್ಯಾಂಡ್ಸ್ ವಿರುದ್ಧ ಭಾರತದ ಸ್ಕೋರ್ 100 ರನ್ ದಾಟಿದೆ. 13ನೇ ಓವರ್ ನಲ್ಲಿ ಭಾರತ 100 ರನ್ ಗಳ ಗಡಿ ದಾಟಿದೆ. ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪ್ರಸ್ತುತ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Feb 2026 07:55 PM (IST)

    India vs Netherlands Live Score: ಭಾರತದ ಅಗ್ರ ಕ್ರಮಾಂಕ ಕುಸಿತ

    ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳು ನೆದರ್ಲ್ಯಾಂಡ್ಸ್ ವಿರುದ್ಧ ಬೇಗನೇ ಔಟಾದರು. ಭಾರತವು 10 ಓವರ್‌ಗಳಲ್ಲಿ ಅಭಿಷೇಕ್, ಇಶಾನ್ ಮತ್ತು ತಿಲಕ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮಧ್ಯೆ, ಸೂರ್ಯಕುಮಾರ್ ಯಾದವ್ 13 ರನ್‌ಗಳಲ್ಲಿದ್ದಾಗ ಅವರಿಗೆ ಜೀವದಾನ ನೀಡಲಾಯಿತು.

  • 18 Feb 2026 07:38 PM (IST)

    Ind vs Ned Live: ಪವರ್‌ಪ್ಲೇನಲ್ಲಿ ಆರಂಭಿಕರು ಔಟ್

    ಪವರ್‌ಪ್ಲೇ ಒಳಗೆ ಭಾರತದ ಇಬ್ಬರೂ ಆರಂಭಿಕರು ಡಗೌಟ್‌ಗೆ ಮರಳಿದರು. ಅಭಿಷೇಕ್ ಶರ್ಮಾ ಒಂದೇ ಒಂದು ರನ್ ಗಳಿಸದೆ ಔಟಾದರೆ, ಇಶಾನ್ ಕಿಶನ್ 7 ಎಸೆತಗಳಲ್ಲಿ 18 ರನ್ ಗಳಿಸಿದರು. ಇಬ್ಬರನ್ನೂ ಆರ್ಯನ್ ದತ್ ಔಟ್ ಮಾಡಿದರು.

  • 18 Feb 2026 07:12 PM (IST)

    Ind vs Ned Live: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್

    2026 ರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರನೇ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ನೆದರ್ಲ್ಯಾಂಡ್ಸ್ ವಿರುದ್ಧವೂ ಅವರು ರನ್ ಗಳಿಸುವಲ್ಲಿ ವಿಫಲರಾದರು. ಮೂರು ಎಸೆತಗಳನ್ನು ಎದುರಿಸಿದ ನಂತರ ಅವರು ಶೂನ್ಯಕ್ಕೆ ಔಟಾದರು.

  • 18 Feb 2026 07:01 PM (IST)

    Ind vs Ned Live: ನೆದರ್ಲ್ಯಾಂಡ್ಸ್ ತಂಡ

    ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಜ್ಯಾಕ್ ಲಿಯಾನ್-ಕ್ಯಾಚೆಟ್, ನೋಹ್ ಕ್ರೂಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ಕೈಲ್ ಕ್ಲೈನ್.

  • 18 Feb 2026 07:00 PM (IST)

    India vs Netherlands Live: ಭಾರತ ತಂಡ

    ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

  • 18 Feb 2026 06:35 PM (IST)

    India vs Netherlands Live: ಟಾಸ್ ಗೆದ್ದ ಭಾರತ

    ನೆದರ್ಲ್ಯಾಂಡ್ಸ್ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Source link

    IND vs NED: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ – Kannada News | Abhishek Sharma’s T20 WC Nightmare: Three Consecutive Ducks and Unwanted Record

    ಅಭಿಷೇಕ್ ಶರ್ಮಾ ಅವರ ಈ ಡಗೌಟ್ ಸರಣಿ ಟಿ20 ವಿಶ್ವಕಪ್​ಗೆ ಮಾತ್ರ ಸೀಮಿತವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದರರ್ಥ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಇದು ಹೀಗೆ ಮುಂದುವರಿದರೆ, ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸುವುದಲ್ಲದೆ, ಅಭಿಷೇಕ್‌ಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

    Source link

    ಕೋಪ ಜಾಸ್ತಿ ಮಾಡಿಕೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆಯೇ? ಏನನ್ನುತ್ತೆ ಸಂಶೋಧನೆ – Kannada News | Link Between Anger and Cardiovascular Disease

    ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಪದೇ ಪದೇ ಕೋಪಗೊಳ್ಳುವುದು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಅಮೆರಿಕದ ಪ್ರತಿಷ್ಠಿತ ಸಂಸ್ಥೆಯಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧನೆಯು, ತಕ್ಷಣ ಕೋಪ (Anger) ಮಾಡಿಕೊಂಡು ಕೂಗಾಡಿದ ನಂತರದ ಎರಡು ಗಂಟೆಗಳಲ್ಲಿ ಹೃದಯಾಘಾತದ (Heart Attack) ಅಪಾಯವು ಸುಮಾರು 5 ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಕಂಡುಹಿಡಿದಿದೆ. ಅಷ್ಟೇ ಅಲ್ಲ, ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ಆಗಾಗ ಮತ್ತು ಅತಿಯಾಗಿ ಸಿಟ್ಟು ಮಾಡಿಕೊಳ್ಳುವುದು ಆತನ ಹೃದಯಕ್ಕೆ ಹೆಚ್ಚು ಅಪಾಯಕಾರಿ ಎಂದಿದೆ. ಕೋಪಗೊಳ್ಳದ ಪುರುಷರಿಗೆ ಹೋಲಿಸಿದರೆ, ಕೋಪಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಇಲ್ಲದಿದ್ದರೂ ಸಹ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾದರೆ ಕೋಪ ಮತ್ತು ಹೃದಯಾಘಾತಕ್ಕೆ ಇರುವ ಸಂಬಂಧವೇನು, ಕೋಪ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

    ಕೋಪ ಮತ್ತು ಹೃದಯಾಘಾತಕ್ಕಿರುವ ಸಂಬಂಧ?

    ಸಾಮಾನ್ಯವಾಗಿ ಕೋಪ ಮಾಡಿಕೊಂಡ ಸಮಯದಲ್ಲಿ, ಕ್ಯಾಟೆಕೊಲಮೈನ್ಸ್ ಎಂಬ ಒತ್ತಡದ ಹಾರ್ಮೋನ್ ದೇಹದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು. ಇವು ದೇಹದಲ್ಲಿ ರಕ್ತದೊತ್ತಡವನ್ನು ತ್ವರಿತವಾಗಿ ಹೆಚ್ಚಿಸುವ ಹಾರ್ಮೋನುಗಳಾಗಿವೆ. ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡದ ಹೆಚ್ಚಳವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನಾ ತಜ್ಞ ಡಾ. ಇಲಾನ್ ವಿಟ್ಸ್‌ಟೈನ್ ಅವರ ಪ್ರಕಾರ, ಕೋಪದ ಸಮಯದಲ್ಲಿ ಒತ್ತಡದ ಹಾರ್ಮೋನು ಒಮ್ಮೆಲೇ ಹೆಚ್ಚಾಗುವುದು ಹೃದಯಾಘಾತವನ್ನು ಪ್ರಚೋದಿಸಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಈ ರೀತಿಯ ಅಪಾಯ ಪುರುಷರಲ್ಲಿ ಹೆಚ್ಚು ಕಂಡುಬರುವುದನ್ನು ಗಮನಿಸಲಾಗಿದೆ.

    ಇದನ್ನೂ ಓದಿ: ಕೇವಲ ಈ 5 ಆರೋಗ್ಯಕರ ಅಭ್ಯಾಸ ಪಾಲಿಸುವ ಮೂಲಕ ಹೃದಯಾಘಾತವನ್ನು ತಡೆಯಬಹುದು

    ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ನಡೆಸಿದ ಸಂಶೋಧನೆ ಹೇಳುವ ಪ್ರಕಾರ, ಯಾವುದೇ ರೀತಿಯ ಗಂಭೀರ ಕಾಯಿಲೆ ಇಲ್ಲದಿದ್ದರೂ ಸಹ, ಆಗಾಗ ಕೋಪಗೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಐದು ಪಟ್ಟು ಹೆಚ್ಚಾಗಿರುತ್ತದೆ. ಹಾಗಾಗಿ ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಅದು ನಿಮ್ಮನ್ನು ನಿಯಂತ್ರಿಸುವ ಮೊದಲು ನೀವೇ ಅದನ್ನು ನಿಯಂತ್ರಿಸುವುದು ಒಳ್ಳೆಯದು. ಕೋಪದಿಂದ ಆದಷ್ಟು ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ಅದನ್ನು ಕಡಿಮೆ ಮಾಡಲು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿ, ಧ್ಯಾನ ಮಾಡಿ, ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮಗೆ ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

    ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    Exit mobile version