Headlines

ಬಿಸಿಲ ತಾಪದಿಂದ ಬಚಾವಾಗಲು ನೀರಿನ ಟ್ಯಾಂಕನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಕೋತಿಗಳು – Kannada News | Monkeys playing in water tank to beat summer heat watch viral video

ನವದೆಹಲಿ, ಏಪ್ರಿಲ್ 27: ದೇಶಾದ್ಯಂತ ಈ ಸಮಯದಲ್ಲಿ ಬಿಸಿಲಿನ ತಾಪವು ಉತ್ತುಂಗವನ್ನು ತಲುಪಿದೆ. ಮಾನವರು ಮಾತ್ರವಲ್ಲದೆ ಪ್ರಾಣಿಗಳು ಸಹ ಈ ಸುಡುವ ಸೂರ್ಯನಿಂದ ತೀವ್ರವಾಗಿ ತೊಂದರೆಗೊಳಗಾಗುತ್ತಿವೆ. ಬಿಸಿಲಿನಿಂದ ಪಾರಾಗಲು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿವೆ. ಇತ್ತೀಚೆಗೆ, ಅಂತಹ ಒಂದು ಆಸಕ್ತಿದಾಯಕ ಮತ್ತು ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮನೆಯ ಟೆರೇಸಿನಲ್ಲಿ ಇಟ್ಟಿದ್ದ ನೀರಿನ ಟ್ಯಾಂಕ್​ನಲ್ಲಿ ಮಂಗಗಳ ಹಿಂಡೊಂದು ಮುಳುಗೇಳುತ್ತಾ ನೀರಾಟವಾಡುತ್ತಿರುವ ವಿಡಿಯೋ ವೈರಲ್ (Viral Video) ಆಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘X’…

Read More

ಪುಣೆ ನಿಲ್ದಾಣಕ್ಕೆ ಬರುವಾಗ ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು – Kannada News | Mumbai Solapur Vande Bharat Express train derails while entering Pune station

ಪುಣೆ, ಏಪ್ರಿಲ್ 27: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ ಒಂದು ಟ್ರಾಲಿ ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ತಪ್ಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ. ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಬೇಕಿತ್ತು. ಇನ್ನಷ್ಟು…

Read More

ಗುದ್ದಲಿ ಪೂಜೆಗೆ ಪ್ರಾಮಾಣಿಕರು ಸಿಗಲಿಲ್ವಾ? ಯಡಿಯೂರಪ್ಪೋತ್ಸವ ಬಗ್ಗೆ ಯತ್ನಾಳ್ ವ್ಯಂಗ್ಯ – Kannada News | Basangouda Patil Yatnal sparks on former CM Yediyurappa’s Conference

ವಿಜಯಪುರ, ಏಪ್ರಿಲ್​ 27: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನವನ್ನು ಸ್ಮರಿಸುವ ನಿಟ್ಟಿನಲ್ಲಿ ಮೇ 9 ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಮಾರಂಭಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್, ​ಅಪ್ಪನ ಸಮಾರಂಭಕ್ಕೆ ಮಗ ಗುದ್ದಲಿ ಪೂಜೆ ಮಾಡಿದ್ದಾನೆ. ಬೇರೆ ಪ್ರಾಮಾಣಿಕರು ಸಿಗಲಿಲ್ಲವಾ ಇವರಿಗೆ ಎಂದು ವಾಗ್ದಾಳಿ…

Read More

ಕೆಡಿ ಸಿನಿಮಾ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ್ – Kannada News | Kichcha Sudeep did not reveal anything about his role in KD Movie

ನಟ ಕಿಚ್ಚ ಸುದೀಪ್ ಅವರು ‘ಕೆಡಿ’ (KD) ಸಿನಿಮಾದಲ್ಲಿ ಕಾಲ ಭೈರವ ಎಂಬ ಅತಿಥಿ ಪಾತ್ರ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾಗೆ ಸ್ಟಾರ್ ಮೆರುಗು ಹೆಚ್ಚಿದೆ. ಆ ಪಾತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಇಂದು (ಏಪ್ರಿಲ್ 27) ನಡೆದ ಸುದ್ದಿಗೋಷ್ಠಿಯಲ್ಲಿ ಈ ಪಾತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಆದರೆ ಕಿಚ್ಚ ಸುದೀಪ್ ಅವರು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ‘ನನಗೆ ಪಾತ್ರದ ಬಗ್ಗೆ ಗೊತ್ತಿಲ್ಲ. ಪ್ರಮಾಣಿಕವಾಗಿ ಹೇಳುತ್ತೇನೆ. ಪ್ರೇಮ್ ಕರೆದಿದ್ದಕ್ಕೆ ಪಾತ್ರ ಮಾಡಿದ್ದೇನೆ. ನಾನು…

Read More

ಬೆಂಗಳೂರು: ಪ್ರತಿಷ್ಠಿತ ಕಂಪೆನಿ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ! – Kannada News | Bengaluru: 34 year old Woman Found Dead in Adugodi Home; Murder Suspected

ಬೆಂಗಳೂರು, ಏ.27: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ, ಆಕೆಯ ಆಡುಗೋಡಿ (Adugodi) ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಪೂಜಾ ದತ್ತ (34) ಎಂದು ಗುರುತಿಸಲಾಗಿದೆ. ಪೂಜಾ ದತ್ತ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದರು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಮನೆಯಿಂದ ಭಾರಿ…

Read More

ಗಂಡನ ತಂಗಿಯನ್ನೇ ಆತನ ಎರಡನೇ ಹೆಂಡತಿಯೆಂದ ಪತ್ನಿ; ವಿಚ್ಛೇದನಕ್ಕಾಗಿ ಎಷ್ಟೆಲ್ಲ ನಾಟಕ! – Kannada News | Gwalior woman said Husbands Sister as his Second Wife to get divorce crime news in kannada

ಗ್ವಾಲಿಯರ್, ಏಪ್ರಿಲ್ 27: ಭಾರತೀಯ ನ್ಯಾಯಾಲಯಗಳನ್ನು ತಲುಪುವ ವಿಚ್ಛೇದನ (Divorce) ಅರ್ಜಿಗಳು ಹೆಚ್ಚಾಗಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಂಬಂಧಿತ ಕಿರುಕುಳ ಅಥವಾ ದೀರ್ಘಕಾಲದ ವೈವಾಹಿಕ ಕಲಹದ ಆರೋಪಗಳನ್ನು ಒಳಗೊಂಡಿರುತ್ತವೆ. ಆದರೆ, ಮಧ್ಯಪ್ರದೇಶದ ವಿಚ್ಛೇದನ ಪ್ರಕರಣವೊಂದು ವಿಚಿತ್ರವಾದ ಕಾರಣದಿಂದ ಸುದ್ದಿಯಲ್ಲಿದೆ. ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಆತನಿಗೆ 2ನೇ ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದಳು. ಅದಕ್ಕೆ ಕೋರ್ಟ್ ಸಾಕ್ಷಿ ಕೇಳಿದಾಗ ಗಂಡನ ತಂಗಿಯನ್ನೇ ಆತನ 2ನೇ ಹೆಂಡತಿ ಎಂದು ಸುಳ್ಳು ಹೇಳಿದ್ದಳು. 2021ರಲ್ಲಿ ಮಹಿಳೆ ತನ್ನ ಪತಿ…

Read More

ಕೆಎಎಸ್​​​ ಕಟ್ಟಡ ಉದ್ಘಾಟಿಸಿದ ಸಿಎಂ, ಡಿಸಿಎಂ: ಆದಷ್ಟು ಬೇಗ ಪ್ರಮೋಷನ್ ಎಂದ ಸಿದ್ದರಾಮಯ್ಯ – Kannada News | KAS Officers to Be Promoted Soon: CM Siddaramaiah says at KAS Building Inauguration

ಬೆಂಗಳೂರು, ಏಪ್ರಿಲ್​ 27: ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾಗಿರುವ KAS ಅಧಿಕಾರಿಗಳ ಸಂಘದ ನವೀಕೃತ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಒಟ್ಟಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎಎಸ್ ಅಧಿಕಾರಿಗಳಿಗೆ ಪ್ರಮೋಷನ್ ಸಂಬಂಧ 2 ಸಭೆಯಾಗಿದೆ. ಆದಷ್ಟು ಬೇಗ ಪ್ರಮೋಷನ್ ಆಗುತ್ತದೆ ಎಂದರು. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡುವ ಭರವಸೆ ನೀಡಿದ್ದಾರೆ. ಸಮಸ್ಯೆ ಹೇಳಿಕೊಂಡು ಜನ ನಿಮ್ಮ ಬಳಿ ಬರ್ತಾರೆ, ಸಮಾಧಾನದಿಂದ ಕೇಳಿ ಕೆಲಸ ಮಾಡಿದರೆ ರಾಜ್ಯಕ್ಕೂ ಕೀರ್ತಿ…

Read More

DC vs RCB: ಡೆಲ್ಲಿ ವಿರುದ್ಧದ ಸೇಡಿನ ಸಮರವನ್ನು ಗೆದ್ದು ಬೀಗಿದ ಆರ್​ಸಿಬಿ – Kannada News | RCB Crushes DC in IPL 2026: Delhi Capitals All Out for 75, Bengaluru Wins Revenge Match

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಇದು ಈ ಆವೃತ್ತಿಯಲ್ಲಿ ಎರಡು ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಆರ್​ಸಿಬಿ ಪಾಲಿಗೆ ಸೇಡಿನ ಸಮರವಾಗಿತ್ತು. ಈ ಸೇಡಿನ ಸಮರದಲ್ಲಿ ಡೆಲ್ಲಿ ತಂಡವನ್ನು ಅವರ ನೆಲದಲ್ಲಿ ಹೀನಾಯವಾಗಿ ಮಣಿಸಿದ ಆರ್​ಸಿಬಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ…

Read More

IPL 2026: ಮುಂಬೈ ತಂಡಕ್ಕೆ ಆಘಾತ; ಸ್ಟಾರ್ ಆಲ್‌ರೌಂಡರ್ ಐಪಿಎಲ್‌ನಿಂದಲೇ ಔಟ್..! – Kannada News | IPL 2026: MI’s Playoff Hopes Dented as Mitchell Santner Ruled Out, Keshav Maharaj Joins

2026 ರ ಐಪಿಎಲ್‌ನಲ್ಲಿ (IPL2026) ಸತತ ಸೋಲುಗಳಿಂದ ಕಂಗೆಟ್ಟಿರುವ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ (Mumbai Indians) ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದರೆ, ಇದೀಗ ಇದರ ನಡುವೆ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಎಡ ಭುಜದ ಗಾಯದಿಂದಾಗಿ ನ್ಯೂಜಿಲೆಂಡ್ ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್…

Read More

ತಂಜಾವೂರಿನ ಬೃಹದೀಶ್ವರ ದೇವಾಲಯದ ರಥೋತ್ಸವ; ಬೀದಿ-ಬೀದಿಗಳಲ್ಲಿ ಓಂ ನಮಃ ಶಿವಾಯ ಘೋಷಣೆ – Kannada News | Thousands of devotees participated in chariot procession at Thanjavur Big temple

ತಂಜಾವೂರು, ಏಪ್ರಿಲ್ 27: ವಿಶ್ವಪ್ರಸಿದ್ಧ ತಂಜಾವೂರು ಬೃಹದೀಶ್ವರ ದೇವಸ್ಥಾನದಲ್ಲಿ ರಥೋತ್ಸವ ನಡೆದಿದೆ. ಧ್ವಜಾರೋಹಣದೊಂದಿಗೆ ಚಿತ್ತಿರೈ ಉತ್ಸವ ಪ್ರಾರಂಭವಾಯಿತು. 18 ದಿನಗಳ ಉತ್ಸವದಲ್ಲಿ ಪ್ರತಿದಿನ ಕಲೈ ನೃತ್ಯ ಪ್ರದರ್ಶನಗಳು ಮತ್ತು ಸ್ವಾಮಿಗಳ ವೇದಿಕೆ ಉಲಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಇಂದು ಬೆಳಿಗ್ಗೆ ತಂಜಾವೂರು ಬೃಹದೀಶ್ವರ ದೇವಸ್ಥಾನದ ತಿರುಥೆರೋಟ್ಟಂ ನಡೆಯಿತು. ಇದಕ್ಕೂ ಮೊದಲು, ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ದೀಪಾರಾಧನೆಯನ್ನು ಸಲ್ಲಿಸಲಾಯಿತು ಮತ್ತು ಪೂಜೆಗಳನ್ನು ಮಾಡಲಾಯಿತು. ತಂಜಾವೂರಿನ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ಈ ರಥವು 13…

Read More