Headlines

ನಟನಿಂದ ಮೋಸ: ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವಕ

ನಟರಿಗಾಗಿ ಪ್ರಾಣ ಕೊಡಲು ತಯಾರು ಎನ್ನುವ ಅಭಿಮಾನಿಗಳು ಇರುತ್ತಾರೆ. ಇಲ್ಲೊಬ್ಬ ಯುವಕ, ನಟನಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಂಲ್ಲಿ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಈ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬರೆದಿರುವ ಡೆತ್ ನೋಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಚಿತ್ತೂರು…

Read More

ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಸಾಧನಾ ಸಮಾವೇಶದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ – Kannada News | Tumakuru Creates Guinness Record by Uploading 21,529 Land Titles; CM Siddaramaiah Receives Certificate

ತುಮಕೂರು, ಮೇ 19: ತುಮಕೂರು ಜಿಲ್ಲೆಯು 21,529 ಹಕ್ಕುಪತ್ರಗಳನ್ನು ಯಶಸ್ವಿಯಾಗಿ ಅಪ್‌ಲೋಡ್ ಮಾಡುವ ಮೂಲಕ ಗಿನ್ನಿಸ್​ ವಿಶ್ವ ದಾಖಲೆಯಲ್ಲಿ ನೋಂದಾಯಿತವಾಗಿದೆ. ಈ ಅಸಾಮಾನ್ಯ ಸಾಧನೆಗಾಗಿ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ಸ್‌ನ ಪ್ರತಿನಿಧಿಗಳಾದ ಮಿಸ್ಟರ್ ಸ್ವಪ್ನಿಲ್ ಡಂಗರಿಕರ್ ಮತ್ತು ಶ್ರೀಮತಿ ಶೈಲಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಸ್ತಾಂತರಿಸಿದರು. ನಂತರ, ಮುಖ್ಯಮಂತ್ರಿಗಳು ಈ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ ಅವರಿಗೆ ಹಸ್ತಾಂತರಿಸಿದರು. ಕಂದಾಯ ಗ್ರಾಮಗಳ ಗುರುತಿಸುವಿಕೆ, ಹಕ್ಕುಪತ್ರಗಳ ಸಿದ್ಧತೆ ಮತ್ತು ಇ-ಸ್ವತ್ತು…

Read More

ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ – Kannada News | Florida Hero: ICE Officer Saves Drowning Child with CPR in Pool

ಸ್ವಿಮ್ಮಿಂಗ್ ಪೂಲ್ -ಸಾಂದರ್ಭಿಕ ಚಿತ್ರImage Credit source: Districts ಫ್ಲೋರಿಡಾ, ಜೂನ್ 18: ಸ್ವಿಮ್ಮಿಂಗ್​ ಪೂಲ್​(Swimming Pool)ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ಕಸ್ಟಮ್ಸ್​ ಜಾರಿ ಅಧಿಕಾರಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಪಾಸ್ಕೊ ಕೌಂಟಿಯ ಈಜುಕೊಳದಲ್ಲಿ ಮುಳುಗಿದ್ದ ಬಾಲಕ ಪ್ರಜ್ಞಾಹೀನನಾಗಿ ತೇಲುತ್ತಿದ್ದ. ಅದೇ ಪೂಲ್ ಬಳಿ ಇದ್ದ ಐಸಿಇ ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಇದನ್ನು ಗಮನಿಸಿದ್ದಾರೆ, ಬಾಲಕ ಸಂಕಷ್ಟದಲ್ಲಿರುವುದನ್ನು ಕಂಡ ತಕ್ಷಣ ಅವರು ಸೆಕೆಂಡ್ ಕೂಡ ಯೋಚಿಸದೆ, ಧರಿಸಿದ್ದ ಬಟ್ಟೆ…

Read More

ಮಣಿಪಾಲ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್: ಎಂಟು ಮಕ್ಕಳಿಗೆ ಗಾಯ – Kannada News | Udupi School Bus Plunges into Ditch, Eight Children Injured in Manipal Incident

ಉಡುಪಿ, ಜುಲೈ 10: ಮಣಿಪಾಲ ಸಮೀಪದ ಕೊಡಂಗೆಯಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದಿದೆ. ಈ ಅಪಘಾತದಲ್ಲಿ ಎಂಟು ಮಕ್ಕಳಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಣಿಪಾಲದ ಕ್ರಸ್ಟ್ ಸ್ಕೂಲ್‌ಗೆ ಸೇರಿದ ಬಸ್ ಇದಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಮಗುಚಿಬಿದ್ದಿದೆ. ಅಪಘಾತದಲ್ಲಿ ಏಳು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವ ಮಗುವಿಗೆ ಹೆಚ್ಚಿನ ಪೆಟ್ಟಾಗಿದೆ. ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ…

Read More

ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು? ; ಮುಂದಿನ ಕ್ಯಾಬಿನೆಟ್‌ನಲ್ಲಿ ಅಂತಿಮ ನಿರ್ಧಾರ – Kannada News | RTC Bus Fare Hike Unavoidable Due to Rising Diesel Costs, Says Karnataka Minister Byrathi Suresh

ಬೆಂಗಳೂರು, ಜು.1: ಕರ್ನಾಟಕದಲ್ಲಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇಂಧನ ಬೆಲೆ ಏರಿಕೆ ಮತ್ತು ನಿಗಮಗಳ ಆರ್ಥಿಕ ಸಂಕಷ್ಟವೇ ಇದಕ್ಕೆ ಮುಖ್ಯ ಕಾರಣ. KSRTC ಬಸ್ ದರವನ್ನು ಶೇಕಡ 33ರಷ್ಟು ಮತ್ತು BMTC ಬಸ್ ದರವನ್ನು ಶೇಕಡ 44ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಾರಿಗೆ ಸಚಿವ ಭೈರತಿ ಸುರೇಶ್ ಅವರು, ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಡೀಸೆಲ್ ದರ ಏರಿಕೆಯಾಗಿದ್ದರೂ, ಇಲ್ಲಿಯವರೆಗೆ ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ,…

Read More

ಅಂದುಕೊಂಡಿದ್ದಕ್ಕಿಂತ ಡಬಲ್ ಸಂಪಾದಿಸಿದ ಗಿಲ್ಲಿ ನಟ – Kannada News | Gilli’s Bigg Boss Fame: 2 Million Instagram Followers and Unprecedented Popularity Record

ಒಂದು ಶೋ ಎಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಡಬಹುದು ಎಂಬುದಕ್ಕೆ ಬಿಗ್ ಬಾಸ್ (Bigg Boss) ಶೋ ಉತ್ತಮ ಉದಾಹರಣೆ. ಗಿಲ್ಲಿ ನಟ ಅವರು ಅಪಾರವಾದ ಜನಪ್ರಿಯತೆ ಸಂಪಾದಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಉದ್ಘಾಟನೆಗೆ ಹೋದಾಗ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಇಷ್ಟೆಲ್ಲ ಜನಪ್ರಿಯತೆ ಮಧ್ಯೆ ಗಿಲ್ಲಿ ನಟ ಅವರು ಅಂದುಕೊಂಡಿದ್ದಕ್ಕಿಂತ ದುಪ್ಪಟ್ಟು ಸಂಪಾದನೆ ಮಾಡಿದ್ದಾರೆ. ಗಿಲ್ಲಿ ಅವರು ಹಲವು ರಿಯಾಲಿಟಿ ಶೋಗಳನ್ನು ಮಾಡಿ ಬಂದವರು. ಅವರು…

Read More

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ಕರಡಿಯನ್ನು10 ಸೆಕೆಂಡುಗಳಲ್ಲಿ ಗುರುತಿಸಿ

ನಿಮ್ಮ ಏಕಾಗ್ರತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಮುಂದಾಗಿದ್ದೀರಾ. ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್‌ ಟೀಸರ್‌ ಚಿತ್ರಗಳು ನಿಮಗೆ ಖಂಡಿತ ಸಹಾಯ ಮಾಡುತ್ತದೆ. ಈ ಒಗಟಿನ ಆಟದಿಂದ ಆಲೋಚನಾ ಕೌಶಲ್ಯವನ್ನು ಹೆಚ್ಚಿಸಿ, ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಮನೋರಂಜನಾತ್ಮಕ ಈ ಒಗಟಿನ ಆಟಗಳನ್ನು ನೀವು ಇಷ್ಟ ಪಡುತ್ತೀರಾ ಅಲ್ವಾ, ಇದೀಗ ಅಂತಹದ್ದೇ  ಚಿತ್ರವೊಂದು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಕರಡಿಯೊಂದನ್ನು ಮರೆ ಮಾಡಲಾಗಿದ್ದು, ನೀವು ಕೇವಲ 10 ಸೆಕೆಂಡುಗಳೊಳಗೆ ಈ…

Read More

ಬಾಯಿಯ ಆರೋಗ್ಯಕ್ಕೂ ಹೃದಯಕ್ಕೂ ಸಂಬಂಧವಿದೆಯೇ; ಈ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಅನುಪಮಾ ವಿ. ಹೆಗ್ಡೆ – Kannada News | Dr. Anupama V. Hegde on Oral Health & Heart Connection

ಸಾಮಾನ್ಯವಾಗಿ ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ. ಆದರೆ ಬಾಯಿ ಮತ್ತು ಹೃದಯಕ್ಕೂ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಹಿರಿಯ ಸಲಹೆಗಾರರಾಗಿರುವ ಡಾ. ಅನುಪಮಾ ವಿ. ಹೆಗ್ಡೆ (Dr. Anupama V. Hegde), ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ…

Read More

ಮುಸ್ತಾಫಿಜುರ್ ಐಪಿಎಲ್​ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ – Kannada News | Mustafizur IPL 2026 Exclusion: Bangladesh Threatens T20 World Cup Boycott in India

ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026 ರಿಂದ ಹೊರಗಿಟ್ಟಿರುವುದು ಈಗ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಮುಸ್ತಾಫಿಜುರ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟ ನಂತರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದು, ಈ ವಿಚಾರವನ್ನು ಐಸಿಸಿಗೆ ಮುಟ್ಟಿಸುವುದಾಗಿ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಹೇಳಿಕೆ ನೀಡಿದ್ದಾರೆ. ಭಾರತಕ್ಕೆ…

Read More

ಮುಂಬೈನಲ್ಲಿ ಕರ್ನಾಟಕ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮಕ್ಕೆ ಇದೇ ಸಾಕ್ಷಿ – Kannada News | Shilpa Shetty opened a Karnataka theme restaurant in Mumbai

ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್​​ನ ಸ್ಟಾರ್ ನಟಿ ಆಗಿರುವ ಜೊತೆಗೆ ಬಲು ಯಶಸ್ವಿ ಉದ್ಯಮಿಯೂ ಸಹ ಹೌದು. ಮಂಗಳೂರು ಮೂಲದವರಾದರೂ ಸಹ ಶಿಲ್ಪಾ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಬಾಲ್ಯದಿಂದಲೂ ಮುಂಬೈನಲ್ಲೇ ಬೆಳೆದಿದ್ದರೂ ಸಹ ತಮ್ಮ ಮೂಲವಾದ ಕರ್ನಾಟಕವನ್ನು ಶಿಲ್ಪಾ ಶೆಟ್ಟಿ ಮರೆತಿಲ್ಲ. ಇತ್ತೀಚೆಗಷ್ಟೆ ಮುಂಬೈನಲ್ಲಿ ಹೋಟೆಲ್ ಒಂದನ್ನು ಶಿಲ್ಪಾ ಶೆಟ್ಟಿ ಪ್ರಾರಂಭ ಮಾಡಿದ್ದು, ಕರ್ನಾಟಕ ಥೀಮ್​​​ನ ಹೋಟೆಲ್ ಇದಾಗಿದೆ. ಮಾತ್ರವಲ್ಲದೆ ಇದಕ್ಕೆ ಇರಿಸಿರುವುದು ಸಹ ಕನ್ನಡದ ಹೆಸರನ್ನೇ. ಶಿಲ್ಪಾ ಶೆಟ್ಟಿ ಈಗಾಗಲೇ ಬಾಸ್ಟಿಯನ್ ಹೆಸರಿನಲ್ಲಿ ಮುಂಬೈನಲ್ಲಿ…

Read More