IPL 2026: RCB ಜಸ್ಟ್ 3 ಪಂದ್ಯ ಗೆದ್ದರೆ ಸಾಕು!

Source link

ಮಹೇಶ್ ಬಾಬು ಪತ್ನಿ-ತಾಯಿ ಪಾತ್ರದಲ್ಲಿ ನಟಿಸಿದ ಏಕೈಕ ನಟಿ ಇವರು – Kannada News | Mahesh Babu and Ameesha Patel’s Unique ‘Nani’ Role: Actress Played Lover, Wife, Mother

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ನಟಿಸಬೇಕೆಂದರೆ ಅದು ಸಣ್ಣ ವಿಷಯವಲ್ಲ. ಅವರ ಜೊತೆ ರೊಮ್ಯಾಂಟಿಕ್ ಆಗಿ ನಟಿಸುವ ಪಾತ್ರ ಎಂದರೆ ನಟಿಯರ ಪಾಲಿಗೆ ಅದು ವಿಶೇಷ. ಅದಕ್ಕಾಗಿ ಅನೇಕ ಸ್ಟಾರ್ ನಾಯಕಿಯರು ಮಹೇಶ್ ಜೊತೆ ನಟಿಸಲು ಆಸಕ್ತಿ ತೋರಿಸುತ್ತಾರೆ. ಹಿಂದೆ, ಬಿಪಾಶಾ ಬಸು, ಪ್ರೀತಿ ಜಿಂಟಾ, ರಶ್ಮಿಕಾ ಮಂದಣ್ಣ ಅದಿತಿ ರಾವ್, ಅಮೀಶಾ ಪಟೇಲ್, ಕೃತಿ ಸನೋನ್ ಅವರಂತಹ ಸ್ಟಾರ್ ನಾಯಕಿಯರು ಮಹೇಶ್ ಜೊತೆ ನಟಿಸಿದ್ದಾರೆ. ಈಗ ಒಂದು ಅಚ್ಚರಿಯ ವಿಷಯವನ್ನು ನಾವು ಹೇಳುತ್ತಿದ್ದೇವೆ.

ಪ್ರಿಯಾಂಕಾ ಚೋಪ್ರಾ ‘ವಾರಣಾಸಿ’ ಚಿತ್ರದಲ್ಲಿ ಮಹೇಶ್ ಜೊತೆ ನಟಿಸುತ್ತಿದ್ದಾರೆ. ಸಮಂತಾ, ಕಾಜಲ್ ಅಗರ್ವಾಲ್, ಸಿಮ್ರಾನ್, ಸೋನಾಲಿ ಬೇಂದ್ರೆ, ಭೂಮಿಕಾ, ತ್ರಿಶಾ, ಇಲಿಯಾನಾ, ತಮನ್ನಾ, ಶ್ರುತಿ ಹಾಸನ್, ಪ್ರಣಿತ, ಪೂಜಾ ಹೆಗ್ಡೆ, ಶ್ರೀಲೀಲಾ ಅವರಂತಹ ಅನೇಕ ಸ್ಟಾರ್ ನಾಯಕಿಯರು ಮಹೇಶ್ ಜೊತೆ ನಟಿಸಿದ್ದಾರೆ. ಆದಾಗ್ಯೂ, ಅವರೆಲ್ಲರೂ ಮಹೇಶ್ ಅವರ ಲವರ್ ಅಥವಾ ಪತ್ನಿಯರ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಒಬ್ಬ ನಾಯಕಿ ನಮ್ಮ ಸೂಪರ್‌ಸ್ಟಾರ್‌ನ ತಾಯಿ ಮತ್ತು ಪತ್ನಿಯಾಗಿ ನಟಿಸಿದ್ದಾರೆ. ಅದೂ ಒಂದೇ ಚಿತ್ರದಲ್ಲಿ. ಅವರೇ ಅಮೀಷಾ ಪಟೇಲ್.

ಮಹೇಶ್ ಬಾಬು ನಟಿಸಿರುವ ‘ನಾನಿ’ ಸಿನಿಮಾವನ್ನು ನಿರ್ದೇಶಕ ಎಸ್ ಜೆ ಸೂರ್ಯ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಅಮೀಷಾ ಪಟೇಲ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮೀಷಾ ಪಟೇಲ್ ಮತ್ತು ಮಹೇಶ್ ಬಾಬು ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಅವರು ಮದುವೆಯಾಗಿ ಗಂಡ ಹೆಂಡತಿಯಾಗುತ್ತಾರೆ. ಕ್ಲೈಮ್ಯಾಕ್ಸ್ ನಲ್ಲಿ ಜೂನಿಯರ್ ಮಹೇಶ್ ಬಾಬು ಕೂಡ ಹುಟ್ಟುತ್ತಾರೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅವರು ಮಹೇಶ್ ಬಾಬು ಅವರ ತಾಯಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ರೀತಿಯಾಗಿ, ಅದೇ ಸಿನಿಮಾದಲ್ಲಿ ಅಮೀಷಾ ಪಟೇಲ್ ಮಹೇಶ್ ಬಾಬು ಅವರ ಪ್ರೇಮಿ, ಹೆಂಡತಿ ಮತ್ತು ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಅಮಿಷಾ ಪಟೇಲ್ ‘ಕಹೋನಾ ಪ್ಯಾರ್ ಹೇ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಬದ್ರಿ’ ಚಿತ್ರದ ಮೂಲಕ ತೆಲುಗು ಪರದೆಗೆ ಪಾದಾರ್ಪಣೆ ಮಾಡಿದರು. ಅದರಲ್ಲಿ ಸರಯು ಪಾತ್ರದಲ್ಲಿ ತಮ್ಮ ಮುದ್ದಾದ ನಟನೆಯಿಂದ ಗಮನ ಸೆಳೆದರು. ಅವರು ಬಾಲಿವುಡ್‌ಗೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗೆ ಅವರು ಹೆಚ್ಚು ಸಿನಿಮಾ ಮಾಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಹಾರ್ಟ್ ಅಟ್ಯಾಕ್! ಶಾಸಕನ ಮುಂದೇ ಪ್ರಾಣಬಿಟ್ಟ ಆಪ್ತ – Kannada News | Lakshman Savadi Close Friend dies from Heart attack infront of him

ಬೆಳಗಾವಿ, ಏಪ್ರಿಲ್ 25: ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮನಕಲಕುವ ಘಟನೆಯೊಂದು ಸಂಭವಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಆತ್ಮೀಯ ಬೆಂಬಲಿಗರಾದ ರಾವಸಾಬ ಬೇವನೂರ (65) ಅವರು ಶಾಸಕರ ಕಣ್ಣೆದುರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗ್ರಾಮದಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾಸಕರು ತೆರಳಿದ್ದರು. ಈ ಸಂದರ್ಭದಲ್ಲಿ ರಾವಸಾಬ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಶಾಸಕರೇ ಮುತುವರ್ಜಿ ವಹಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ರಾವಸಾಬ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ತಮ್ಮ ಬಹುಕಾಲದ ಆಪ್ತನನ್ನು ಕಳೆದುಕೊಂಡ ಶಾಸಕ ಲಕ್ಷ್ಮಣ ಸವದಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ: ಮಹಿಳೆ ನೆಲಕ್ಕೆ ಬಿದ್ದರೂ ಬಿಡದೆ ಎಳೆದಾಡಿ ಸರ ಅಪಹರಿಸಿದ ಖದೀಮ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | CCTV Video: Woman Dragged on Road as Chain Snatcher Escapes in Hubballi’s Sadashiva Nagar

ಹುಬ್ಬಳ್ಳಿ, ಏಪ್ರಿಲ್ 25: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರಗಳ್ಳರ ಅಟ್ಟಹಾಸ ಮಿತಿಮೀರಿದ್ದು, ಮಹಿಳೆಯೊಬ್ಬರನ್ನು ರಸ್ತೆಯಲ್ಲೇ ಎಳೆದಾಡಿ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸದಾಶಿವ ನಗರದಲ್ಲಿ ನಡೆದಿದೆ. ಈ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಸದಾಶಿವ ನಗರದ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಖದೀಮ ಆಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಮಹಿಳೆ ಏಕಾಂಗಿಯಾಗಿರುವುದನ್ನು ಗಮನಿಸಿದ ಕಳ್ಳ, ಏಕಾಏಕಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ತೋರಿದಾಗ, ಕಳ್ಳ ಆಕೆಯನ್ನು ರಸ್ತೆಯಲ್ಲೇ ಅಮಾನವೀಯವಾಗಿ ಎಳೆದಾಡಿದ್ದಾನೆ.

ಕಳ್ಳನ ಎಳೆದಾಟಕ್ಕೆ ಮಹಿಳೆ ರಸ್ತೆಯ ಮೇಲೆ ಬಿದ್ದರೂ ಸಹ, ಆತ ಮಾತ್ರ ಬಿಡದೆ ಬಲವಂತವಾಗಿ ಸರವನ್ನು ಕಿತ್ತುಕೊಂಡು ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ. ಈ ಭಯಾನಕ ದೃಶ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನನಿಬಿಡ ಪ್ರದೇಶಗಳಿಗಿಂತ ಏಕಾಂತದ ರಸ್ತೆಗಳನ್ನು ಟಾರ್ಗೆಟ್ ಮಾಡುತ್ತಿರುವ ಕಳ್ಳರು, ಹಾಡಹಗಲೇ ಇಂತಹ ಕೃತ್ಯವೆಸಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಷ್ಟೆಲ್ಲಾ ದೊಡ್ಡ ಘಟನೆ ನಡೆದಿದ್ದರೂ ಸಹ ಸಂತ್ರಸ್ತ ಮಹಿಳೆ ಈವರೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಆದರೆ, ವೈರಲ್ ಆಗಿರುವ ಸಿಸಿಟಿವಿ ದೃಶ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸ್ವಯಂಪ್ರೇರಿತವಾಗಿ ಮಹಿಳೆಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಕಿ ಬೌಲಿಂಗ್​… 6 ಎಸೆತಗಳಲ್ಲಿ ರಬಾಡ ಹೊಸ ವಿಶ್ವ ದಾಖಲೆ  – Kannada News | Kagiso Rabada Creates New World Record in T20 Cricket

ಆರ್​ಸಿಬಿ ವಿರುದ್ಧದ ಈ ಪಂದ್ಯದ ನಾಲ್ಕನೇ ಓವರ್​ನ ಮೊದಲ ಎಸೆತವನ್ನು ರಬಾಡ 153 kmph ವೇಗದಲ್ಲಿ ಎಸೆದಿದ್ದರು. ಇನ್ನು ಎರಡನೇ ಎಸೆತವು  151 kmph ವೇಗದಲ್ಲಿ ಸಾಗಿತು. ಮೂರನೇ ಎಸೆದ ಮೂಡಿ ಬಂದಿದ್ದು ಬರೋಬ್ಬರಿ  154 kmph ವೇಗದಲ್ಲಿ. ನಾಲ್ಕನೇ ಎಸೆತ 152 kmph ವೇಗದಲ್ಲಿ ಸಾಗಿದರೆ, ಐದನೇ ಎಸೆದ ವೇಗ 152 kmph ನಲ್ಲಿತ್ತು. ಇನ್ನು ಕೊನೆಯ ಎಸೆತವನ್ನು 
 151 kmph ವೇಗದಲ್ಲಿ ಎಸೆದಿದ್ದಾರೆ.

Source link

ಅಂಬಿಕಾ ಮರಳಿ ಬರೋ ಸಮಯ ಬಂದಾಯ್ತು; ನಡೆಯುತ್ತಿದೆ ಶರತ್-ದುರ್ಗಾ ಮರು ಮಾಂಗಲ್ಯ – Kannada News | Naa Ninna Bidalare Serial: Ambika’s Return Nears as Sharath and Durga Prepare for Re marriage

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಈಗ ಮಹತ್ವದ ತಿರುವು ಎದುರಾಗಿದೆ. ಅಂಬಿಕಾಳನ್ನು ಮಾಳವಿಕಾ ತನ್ನ ಶಕ್ತಿಯಿಂದ ಬಂಧಿಸಿಟ್ಟಿದ್ದಾಳೆ. ದುರ್ಗಾಳ ಬಳಿ ಇದ್ದ ತಾಳಿಯನ್ನು ಕಸಿದುಕೊಂಡ ಅವಳು, ಅಂಬಿಕಾಳನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಳು. ಈಗ ಆಕೆಯ ಶ್ರಾದ್ಧ ಕೂಡ ಮಾಡಾಗಿದೆ. ಹೀಗಿರುವಾಗಲೇ ಅಂಬಿಕಾ ಮರಳಿ ಬರುವ ಸಮಯ ಬಂದಿದೆ. ಇದಕ್ಕೆ ಒಂದು ಅವಕಾಶ ಸಿಕ್ಕಿದೆ.

ಅಂಬಿಕಾ ಪಾತ್ರ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ, ಈ ಧಾರಾವಾಹಿಯಲ್ಲಿ ಆಕೆಯೇ ಮುಖ್ಯ ಪಾತ್ರಧಾರಿ. ಆಕೆಯನ್ನು ಸಾಯಿಸಲಾಗಿದ್ದು, ಆತ್ಮದ ರೂಪದಲ್ಲಿ ಓಡಾಡುತ್ತಿದ್ದಾಳೆ. ಹೀಗಿರುವಾಗ ಅಂಬಿಕಾ ಆತ್ಮವನ್ನು ಬಂಧಿಸಿಡುವ ಕೆಲಸ ಆಗಿದೆ. ಈ ಕೆಲಸ ಮಾಡಿದ್ದು ಮಾಳವಿಕಾ. ಈ ಮಧ್ಯೆ ಒಂದು ಮುಖ್ಯ ಬೆಳವಣಿಗೆ ನಡೆದಿತ್ತು.

ಅಂಬಿಕಾ ಹಾಗೂ ದುರ್ಗಾ ಅಕ್ಕ-ತಂಗಿ. ಈ ವಿಷಯ ಅಂಬಿಕಾಗೆ ಮಾತ್ರ ಗೊತ್ತಿತ್ತು. ಇದು ದುರ್ಗಾಗೆ ತಿಳಿದಿರಲೇ ಇಲ್ಲ. ಅಂಬಿಕಾ ಆತ್ಮ ಮಾಯಾವಾದ ಬಳಿಕ ಈ ವಿಷಯ ಗೊತ್ತಾಗಿದೆ. ಈಗ ಅಂಬಿಕಾಳನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿ ದುರ್ಗಾ ಇದ್ದಾಳೆ. ಆದರೆ, ಅದು ಅಷ್ಟು ಸುಲಭದಲ್ಲಿ ಇಲ್ಲ ಎನ್ನಬಹುದು. ಮಾಳವಿಕಾ ತುಂಬಾನೇ ಕೆಟ್ಟವಳು. ಆಕೆ ಉದ್ದೇಶಪೂರ್ವಕವಾಗಿ ದುರ್ಗಾ ತಾಳಿಯನ್ನು (ಮೊದಲು ಅಂಬಿಕಾ ತಾಳಿ ಆಗಿತ್ತು) ಕಸಿದುಕೊಂಡಿದ್ದಾಳೆ. ಈ ಮೂಲಕ ತನ್ನ ಕಾರ್ಯಸಾಧನೆ ಮಾಡಿದ್ದಾಳೆ. ಅವಳ ಬಳಿ ಹೋಗಿ ತಾಳಿ ಕೊಡಿ ಎಂದರೆ ಅವಳು ಯಾವುದೇ ಕಾರಣಕ್ಕೂ ತಾಳಿ ಕೊಡುವುದಿಲ್ಲ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

ಸದ್ಯ ದುರ್ಗಾಳ ತಂದೆ ಮಾರ್ಗವನ್ನು ಸೂಚಿಸಿದ್ದಾನೆ. ‘ಅಂಬಿಕಾ ತಾಳಿಯನ್ನು ಮರಳಿ ತಂದರೆ ಆಕೆ ಮರಳುತ್ತಾಳೆ’ ಎಂದು ಹೇಳಿದ್ದಾನೆ. ನಿಜಕ್ಕೂ ಆಕೆ ಮರಳುತ್ತಾಳಾ? ಇದಕ್ಕೆ ಎಷ್ಟು ಕಷ್ಟಪಡಬೇಕು ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಈಗಾಗಲೇ ಆಕೆ ಹೊಗಿ ತಾಳಿ ಕೇಳಿದ್ದಾಳೆ. ಇದನ್ನು ಕೇಳಿ ಮಾಳವಿಕಾ ಶಾಕ್ ಆಗಿದ್ದಾಳೆ. ಆಕೆ ತಾಳಿ ಕೊಟ್ಟಿದ್ದು, ಮರು ಮಾಂಗಲ್ಯಕ್ಕೆ ಸಿದ್ಧತೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಂಗಳೂರಿಗರೇ ಎಚ್ಚರ! ಅಪಾಯಕಾರಿಯಾಗಿದೆ ತಲುಪಿದೆ ನಗರದ ವಾಯು ಗುಣಮಟ್ಟ – Kannada News | Bangalore Air Pollution Crisis: Manglore Air Quality gets worse

ಮಂಗಳೂರಿಗರೇ ಎಚ್ಚರ!ಅಪಾಯದ ಮಟ್ಟ ತಲುಪಿದೆ ನಗರದ ವಾಯು ಗುಣಮಟ್ಟ

ಬೆಂಗಳೂರು, ಏಪ್ರಿಲ್ 25: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಏಕಾಏಕಿ ಮಂಗಳೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 110ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 150ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 110
  • ಮಂಗಳೂರು-156
  • ಮೈಸೂರು – 134
  • ಬೆಳಗಾವಿ – 136
  • ಕಲಬುರ್ಗಿ-136
  • ಶಿವಮೊಗ್ಗ –116
  • ಬಳ್ಳಾರಿ – 151
  • ಹುಬ್ಬಳ್ಳಿ- 100
  • ಉಡುಪಿ –125
  • ವಿಜಯಪುರ – 109

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ – Kannada News | Payal Chengappa Slams Trolls Over Thailand Backless Photo Controversy

ಪಾಯಲ್ ಚೆಂಗಪ್ಪ ಅವರು (Payal) ಇತ್ತೀಚೆಗೆ ಥೈಲ್ಯಾಂಡ್​​ಗೆ ತೆರಳಿದ್ದರು. ಅಲ್ಲಿ ಬ್ಯಾಕ್​​ಲೆಸ್ ಫೋಟೋ ಹಾಕಿ ಗಮನ ಸೆಳೆದಿದ್ದರು. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಕ್ಕಿವೆ. ಅವರನ್ನು ಬೋಲ್ಡ್ ಅವತಾರದಲ್ಲಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಇನ್ನೂ ಕೆಲವರು ನೆಗೆಟಿವ್ ಕಮೆಂಟ್ ಮಾಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಾಯಲ್ ಖಡಕ್ ಆಗಿ ಉತ್ತರಿಸಿದ್ದಾರೆ. ಅವರು ಟೀಕೆ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕಮೆಂಟ್​​ಗಳು ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವಂತೆ.

ಹೀರೋಯಿನ್​​ಗಳು ಥೈಲ್ಯಾಂಡ್ ಮೊದಲಾದ ಕಡೆಗಳಲ್ಲಿ ತೆರಳಿ ಬೀಚ್​​ಗಳಲ್ಲಿ ನಿಂತು ಪೋಸ್ ಕೊಡುತ್ತಾರೆ. ಕೆಲವರು ಬೋಲ್ಡ್ ಆಗಿ ಕಾಣಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಆದರೆ, ಕೆಲವೊಮ್ಮೆ ಈ ಫೋಟೋಗಳ ಕಾರಣಕ್ಕೆ ಅವರು ಟೀಕೆ ಎದುರಿಸಬೇಕಾಗುತ್ತದೆ. ಈ ಟೀಕೆಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂದು ಪಾಯಲ್ ವಿವರಿಸಿದ್ದಾರೆ.

ಅದು ಬೀಚ್ ಡ್ರೆಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ ಪಾಯಲ್. ‘ಅದು ಬಿಕಿನಿ ಕೂಡ ಆಗಿರಲಿಲ್ಲ, ಬ್ಯಾಕ್​​ಲೆಸ್ ಟಾಪ್ ಆಗಿತ್ತು’ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಸಾಕಷ್ಟು ಟ್ರೆಡಿಷನಲ್ ಫೋಟೋಗಳನ್ನು ಹಾಕಿದಾಗ ಯಾರೊಬ್ಬರೂ ಕಮೆಂಟ್ ಮಾಡದೆ, ಈ ರೀತಿಯ ಫೋಟೋ ಹಾಕಿದಾಗಷ್ಟೇ ಎಲ್ಲರೂ ಎದ್ದು ಬರೋದು ಏಕೆ ಎಂಬುದು ಪಾಯಲ್ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಿದೆ. ಈಗಲೂ ಅದೇ ಆಗಿದೆ ಎಂದು ಪಾಯಲ್ ಹೇಳುತ್ತಾರೆ. ಕಾಲೆಳೆಯುವ ಉದ್ದೇಶದಿಂದ ಈ ರೀತಿಯ ಖಾತೆ ಮಾಡಿಕೊಂಡು ಕಮೆಂಟ್ ಹಾಕುತ್ತಾರೆ ಎಂದು ಅವರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.

ಕೆಲವು ಸೆಲೆಬ್ರಿಟಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ಪಾಯಲ್ ಆ ರೀತಿ ಅಲ್ಲ. ಈ ರೀತಿಯ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆಯಂತೆ. ಈ ಕಾರಣದಿಂದ ಅವರಿಗೆ ಇದು ಒತ್ತಡ ತರುವುದಿಲ್ಲ.

ಇದನ್ನೂ ಓದಿ: ಥೈಲ್ಯಾಂಡ್​ ಬೀಚ್​​ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್

ಪಾಯಲ್ ಅವರು ‘ಜೆರಾಕ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ನಾಗಭೂಷಣ್ ಮೊದಲಾದವರು ಇದರಲ್ಲಿ ನಟಿಸಿದ್ದು, ಜೀ5ನಲ್ಲಿ ಇದು ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ! – Kannada News | Karnataka Liquor Price Hike: Alcohol Rates to Increase by 20 percent from May 1 Under New AIB Policy

ಬೆಂಗಳೂರು, ಏಪ್ರಿಲ್ 25: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಇದೀಗ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಲು ಸರ್ಕಾರ ಸಜ್ಜಾಗಿದ್ದು, ಮೇ 1 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.

ಏನಿದು ಹೊಸ ಎಐಬಿ (AIB) ನೀತಿ?

ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ (Alcohol-in-Beverage) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ 20ರಷ್ಟು ಏರಿಕೆಯಾಗಲಿದೆ.

ಯಾವ ಸ್ಲ್ಯಾಬ್‌ಗಳಿಗೆ ಎಷ್ಟು ಏರಿಕೆ?

ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ 80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಅಂದಾಜಿದೆ.

ಎಷ್ಟು ಹೆಚ್ಚಾಗಲಿದೆ ಮದ್ಯದ ದರ?

  • ಸ್ಲ್ಯಾಬ್-1: ₹80 ರಿಂದ ₹95ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-2: ₹95 ರಿಂದ ₹110ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-3: ₹120 ರಿಂದ ₹135ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-4: ₹150 ರಿಂದ ₹170ಕ್ಕೆ ಏರಿಕೆ (₹20 ಹೆಚ್ಚಳ)

ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ (MRP) ದರದಲ್ಲಿ ಸುಮಾರು 50 ರಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಹೊರೆ ಮತ್ತಷ್ಟು ಹೆಚ್ಚಾಗಲಿದೆ.

ಮದ್ಯಪ್ರಿಯರ ಆಕ್ರೋಶ

ಮೂರು ವರ್ಷಗಳ ಅವಧಿಯಲ್ಲಿ ಐದನೇ ಬಾರಿಗೆ ದರ ಏರಿಕೆ ಮಾಡುತ್ತಿರುವುದಕ್ಕೆ ಮದ್ಯಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದೇ ಪದೇ ಕುಡುಕರನ್ನೇ ಟಾರ್ಗೆಟ್ ಮಾಡುತ್ತಿದೆ” ಎಂದು ಮದ್ಯದ ವ್ಯಾಪಾರಿಗಳು ಹಾಗೂ ಗ್ರಾಹಕರು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ಈ ಒಂದು ವಿಶ್ವ ದಾಖಲೆ ಬರೆದಿರುವುದು ವಿರಾಟ್ ಕೊಹ್ಲಿ ಒಬ್ಬರೇ..! – Kannada News | Virat Kohli Scripts New World Record in T20 Cricket

ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಒಂದೇ ದೇಶದಲ್ಲಿ 10 ಸಾವಿರ ರನ್​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯು ಕಿಂಗ್ ಕೊಹ್ಲಿಯ ಪಾಲಾಗಿದೆ. ಕೊಹ್ಲಿ ಭಾರತದಲ್ಲಿ ಐಪಿಎಲ್​ನಲ್ಲಿ 7,933 ರನ್​ ಗಳಿಸಿದರೆ, ಚಾಂಪಿಯನ್ಸ್​ ಟ್ರೋಫಿ ಟಿ20 ಲೀಗ್​ನಲ್ಲಿ 311 ರನ್​ ಬಾರಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಕಣಕ್ಕಿಳಿದಾಗ ಭಾರತದ ಪಿಚ್​ನಲ್ಲಿ 1577 ರನ್​ಗಳಿಸಿದ್ದಾರೆ. ಹಾಗೆಯೇ ಸೈಯದ್ಯ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 179 ರನ್​ ಬಾರಿಸಿದ್ದಾರೆ.

Source link

Exit mobile version