
ಗ್ರಹಗಳ ವಿಷಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ. ಕರ್ಮ ಕಾರಕ ಮತ್ತು ನ್ಯಾಯಾಧೀಶನಾಗಿರುವ ಶನಿ ಗ್ರಹವು ಅಸ್ತಂಗತನಾಗಲಿದ್ದಾನೆ. ಅಸ್ತಂಗತ ಎಂದರೆ ಸೂರ್ಯನಿಗೆ ಹತ್ತಿರ ಬಂದಾಗ ಯಾವುದೇ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದು. ಶನಿ ಗ್ರಹವು ನಿನ್ನೆ ಅಂದರೆ ಮಾರ್ಚ್ 13 ರಂದು ಸಂಜೆ 7 ಗಂಟೆ 13 ನಿಮಿಷದಿಂದ ಏಪ್ರಿಲ್ 22 ರ ಬೆಳಗಿನ ಜಾವ 4 ಗಂಟೆ 43 ನಿಮಿಷದವರೆಗೆ ಅಸ್ತಂಗತ ಸ್ಥಿತಿಯಲ್ಲಿ ಇರಲಿದ್ದು, ಈ ಅವಧಿಯಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಈ ಅವಧಿಯು ಸುಮಾರು 40 ದಿನಗಳ ಕಾಲ ಮೀನ ರಾಶಿಯಲ್ಲಿ ಸಂಭವಿಸಲಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಶನಿ ಗ್ರಹವು 15 ಡಿಗ್ರಿಗಳೊಳಗೆ ಸೂರ್ಯನಿಗೆ ಹತ್ತಿರ ಬಂದಾಗ ಅಸ್ತಂಗತನಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಅಸ್ತಂಗತವಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಗುರು ಮತ್ತು ಶುಕ್ರ ಅಸ್ತವಾದಾಗ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅದೇ ರೀತಿ, ಶನಿ ಅಸ್ತಂಗತನಾದಾಗ ಕೆಲವು ಕ್ಷೇತ್ರಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ. ಸಿಸ್ತು ಮತ್ತು ಪರಿಶ್ರಮದ ಸಂಕೇತವಾಗಿರುವ ಶನಿಯು ಅಸ್ತಂಗತನಾದಾಗ ಪೊಲೀಸ್, ಆರ್ಮಿ, ಹಾಗೂ ಸಾರ್ವಜನಿಕ ಜೀವನದಂತಹ ಕ್ಷೇತ್ರಗಳಲ್ಲಿ ಶಿಸ್ತಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗಬಹುದು.
ಈ ಶನಿ ಅಸ್ತಂಗತದ ಪರಿಣಾಮವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳು, ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಏರುಪೇರುಗಳು ಸಂಭವಿಸಬಹುದು.
ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!
ದ್ವಾದಶ ರಾಶಿಗಳ ಮೇಲೆ ಶನಿ ಅಸ್ತಂಗತದ ಪರಿಣಾಮಗಳು:
- ಮೇಷ ರಾಶಿ: ಧನ ಹಾನಿ ಮತ್ತು 12ನೇ ಮನೆಯಲ್ಲಿ ಉದ್ಯೋಗದಲ್ಲಿ ಕಷ್ಟಗಳ ಸಾಧ್ಯತೆ.
- ವೃಷಭ ರಾಶಿ: 11ನೇ ಮನೆಯಲ್ಲಿ ಆದಾಯದಲ್ಲಿ ಏರುಪೇರುಗಳು.
- ಮಿಥುನ ರಾಶಿ: 10ನೇ ಮನೆಯಲ್ಲಿ ಜವಾಬ್ದಾರಿಗಳು ಮತ್ತು ವೃತ್ತಿಯಲ್ಲಿ ಬದಲಾವಣೆಗಳು.
- ಕರ್ಕಾಟಕ ರಾಶಿ: 9ನೇ ಮನೆಯಲ್ಲಿ ಪಿತ್ರಾರ್ಜಿತ ಆಸ್ತಿಗಳ ಸಮಸ್ಯೆಗಳು.
- ಸಿಂಹ ರಾಶಿ: 8ನೇ ಮನೆಯಲ್ಲಿ ಅಷ್ಟಮ ಶನಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಮಯ.
- ಕನ್ಯಾ ರಾಶಿ: 7ನೇ ಮನೆಯಲ್ಲಿ ವಿವಾಹ ಮತ್ತು ಪಾಲುದಾರಿಕೆ ವಿಷಯಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯ.
- ತುಲಾ ರಾಶಿ: 6ನೇ ಮನೆಯಲ್ಲಿ ದುಸ್ಥಾನ, ಶತ್ರು ಸ್ಥಾನ, ಸಾಲಬಾಧೆಗಳು ಕಡಿಮೆಯಾಗಬಹುದು.
- ವೃಶ್ಚಿಕ ರಾಶಿ: 5ನೇ ಸ್ಥಾನದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಅವಧಿ.
- ಧನುಸ್ಸು ರಾಶಿ: 4ನೇ ಸುಖ ಸ್ಥಾನದಲ್ಲಿ ಶುಭಸುದ್ದಿಗಳು, ಮನೆ ಯೋಗ, ತಂದೆತಾಯಿಗಳ ಆಶೀರ್ವಾದ ಸಿಗುತ್ತದೆ, ಸಾಕಷ್ಟು ಶುಭ ಫಲಗಳು.
- ಮಕರ ರಾಶಿ: 3ನೇ ಸ್ಥಾನದಲ್ಲಿ ಅಣ್ಣತಮ್ಮಂದಿರ ಜೊತೆ ಭಿನ್ನಾಭಿಪ್ರಾಯಗಳು, ಆದರೆ ಆತ್ಮವಿಶ್ವಾಸ ವೃದ್ಧಿ.
- ಕುಂಭ ರಾಶಿ: 2ನೇ ವಾಕ್ಸ್ಥಾನ, ಧನಸ್ಥಾನ, ಕುಟುಂಬ ಸ್ಥಾನದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಶುಭ ಫಲ.
- ಮೀನ ರಾಶಿ: 1ನೇ ಮನೆಯಲ್ಲಿ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿದ್ದರೆ ಒಳ್ಳೆಯದು.
ಈ ಎಲ್ಲಾ ಫಲಗಳು ದಶಾಭುಕ್ತಿಗಳನ್ನೂ ಅವಲಂಬಿಸಿರುತ್ತವೆ. ಶನಿ ಅಸ್ತಂಗತನಾದಾಗ ಶನಿಯ ಮಂತ್ರ, ಶನಿಯ ಸ್ತೋತ್ರ, ಎಳ್ಳಿನ ದೀಪ ಹಚ್ಚುವುದು, ದೇವಿಯ ದರ್ಶನ ಮತ್ತು ಹನುಮನ ಆರಾಧನೆ ಮಾಡುವುದರಿಂದ ಬಹಳಷ್ಟು ಶುಭಫಲಗಳನ್ನು ಪಡೆಯಬಹುದು. ಈ 40 ದಿನಗಳಲ್ಲಿ ಭೂಗೋಳ ಮತ್ತು ಪ್ರಪಂಚದಲ್ಲಿ ಸಾಕಷ್ಟು ಪರಿವರ್ತನೆಗಳು ಆಗುತ್ತವೆ. ಇವೆಲ್ಲವೂ ಶಾಸ್ತ್ರಬದ್ಧವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ