Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?

2026ರ ಯುಗಾದಿ ಮಿಥುನ ರಾಶಿಯವರಿಗೆ ಹಲವು ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ತಿಳಿಸಿದ್ದಾರೆ. ಈ ವರ್ಷ ಹೊಸ ಅವಕಾಶಗಳು ಮಿಥುನ ರಾಶಿಯವರನ್ನು ಹುಡುಕಿಕೊಂಡು ಬರಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತವಾಗಿವೆ. ಹಣಕಾಸಿನ ವಿಚಾರದಲ್ಲಿ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಕುಟುಂಬದಲ್ಲಿ ಸಹೋದರ, ಸಹೋದರಿಯರಿಂದ ಬೆಂಬಲ ಸಿಗಲಿದೆ.

ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ನರ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ. ಗುರು ಗ್ರಹದ ಪ್ರಭಾವದಿಂದ ಮನಸ್ಸಿಗೆ ಕಷ್ಟವಾಗಬಹುದು. ಇದಕ್ಕೆ ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಉತ್ತಮ ಪರಿಹಾರ. ಕೇತು ಗ್ರಹವು ಹಣಕಾಸಿನ ಲಾಭವನ್ನು ತಂದರೆ, ಚಂದ್ರನು ರೋಗಭಯವನ್ನು ಉಂಟುಮಾಡಬಹುದು. ಈಶ್ವರನಿಗೆ ಅಭಿಷೇಕ ಮಾಡಿಸುವುದು ಶುಭ. ಬುಧ ಮತ್ತು ರಾಹು ಗ್ರಹಗಳು ಕಾರ್ಯ ನಷ್ಟಕ್ಕೆ ಕಾರಣವಾಗಬಹುದು. ಲಕ್ಷ್ಮಿ ನರಸಿಂಹ ಮತ್ತು ಸುಬ್ರಮಣ್ಯ ಸ್ವಾಮಿಯನ್ನು ಸ್ವಾತಿ ನಕ್ಷತ್ರದಂದು ದರ್ಶನ ಮಾಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ. ರವಿ ಧನಲಾಭವನ್ನು ತಂದರೆ, ಶನಿ ಮತ್ತು ಕುಜ ದ್ರವ್ಯ ನಷ್ಟಕ್ಕೆ ಕಾರಣರಾಗಬಹುದು. 11ನೇ ಶುಕ್ರನು ಸುಖ ಭೋಜನ ಮತ್ತು ಉತ್ತಮ ಅನುಕೂಲಗಳನ್ನು ತರಲಿದ್ದಾನೆ. ಎಳ್ಳು, ಹೆಸರು ಕಾಳು, ಉದ್ದಿನ ಕಾಳುಗಳನ್ನು ದೇವಸ್ಥಾನಗಳಿಗೆ ದಾನ ಮಾಡುವುದು ಮತ್ತು “ಓಂ ಬುಧಾಯ ನಮಃ” ಮಂತ್ರ ಜಪಿಸುವುದು ಉತ್ತಮ ಪರಿಹಾರಗಳಾಗಿವೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *