‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ – Kannada News | Amruthadhare: Shakuntala Turns Against JD! Major Plot Twist in Kannada Serial

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಈಗ ಒಂದು ದೊಡ್ಡ ಬದಲಾವಣೆ ಬಂದಿದೆ. ವಿಲನ್ ಜೆಡಿ ವಿರುದ್ಧವೇ ಶಕುಂತಲ ತಿರುಗಿ ಬಿದ್ದಿದ್ದಾಳೆ. ಮಗನಿಗೋಸ್ಕರ ಆಕೆ ಎದುರು ಹಾಕಿಕೊಳ್ಳದ ಜನರೇ ಇರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಶಕುಂತಲ ವಿರುದ್ಧ ಮಗನೇ ತಿರುಗಿಬಿದ್ದ. ಆ ಸಂದರ್ಭದಲ್ಲಿ ಕಾಪಾಡಿದ್ದು ಮಲ ಮಗ. ಈ ಋಣವನ್ನು ತೀರಿಸುವ ಸಮಯ ಈಗ ಬಂದಿದೆ. ಈ ಕಾರಣದಿಂದ ಆಕೆ ಜೆಡಿ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಪ್ರತಿ ಹಂತದಲ್ಲೂ ಶಕುಂತಲ ಮಲ ಮಗ ಗೌತಮ್ ಹಾಗೂ ಭೂಮಿಕಾಳನ್ನು ದೂರ ತಳ್ಳುತ್ತಾ, ಅವರಿಗೆ ಕೆಟ್ಟದನ್ನು ಮಾಡುತ್ತಲೇ ಬಂದಳು. ಈ ವೇಳೆ ಜಯದೇವ್ನ ಶಕುಂತಲ ಬೆಂಬಲಿಸಿದಳು. ಕೊನೆಗೆ ಆಗಿದ್ದೇಬೆರೆ. ಹಣ ಕೇಳಿದ್ದಕ್ಕೆ ಜಯದೇವ್ ತಾಯಿಯನ್ನೇ ಹೊರಹಾಕಿದ್ದಾನೆ. ಇದರಿಂದ ಆಕೆ ಪಾಠ ಕಲಿತಿದ್ದಾಳೆ.

ಜಯದೇವ್ ಹೊರಹಾಕುತ್ತಿದ್ದಂತೆ ಶಕುಂತಲಾಳನ್ನು ಸಾಲ ಕೊಟ್ಟವರು ಬಂದು ಹಿಡಿದುಕೊಂಡು ಹೋದರು. ಆಕೆಗೆ ಟಾರ್ಚರ್ ಕೊಡೋಕೆ ಆರಂಭಿಸಿದರು. ಕೊನೆಗೆ ಆಕೆಯ ಸಹಾಯಕ್ಕೆ ಬಂದಿದ್ದು ಗೌತಮ್. ಈ ವಿಷಯದಲ್ಲಿ ಆಕೆಯ ಸಹಾಯಕ್ಕೆ ಗೌತಮ್ ನಿಂತಿದ್ದು ನೋಡಿ ಆಕೆಯ ಮನಸ್ಸು ಕರಗಿ ಹೋಯಿತು. ಅಷ್ಟೆಲ್ಲ ಕೆಟ್ಟದನ್ನು ಮಾಡಿದರೂ ಮಲತಾಯಿಗೆ ಗೌತಮ್ ಒಳ್ಳೆಯದ್ದನ್ನೇ ಬಯಸಿದ್ದ. ಈ ಘಟನೆ ಆಕೆಯನ್ನು ಸಾಕಷ್ಟು ಬದಲಾವಣೆ ಮಾಡಿತು.

ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್

ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ‘ತಾಯಿಗೆ ಕರೆ ಮಾಡುವಂತೆ’ ಕೋರಿದ. ಆದರೆ, ಶಕುಂತಲ ಅವನ್ಯಾರು ಗೊತ್ತೇ ಇಲ್ಲ ಎಂದಿದ್ದಾಳೆ. ಇದರಿಂದ ಆತನಿಗೆ ಏಟು ಬಿದ್ದಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *