ಆಸ್ತಿ, ಸಂತಾನ ಭಾಗ್ಯ ಎಲ್ಲವೂ ಸಿಗಲಿದೆ: ಈ ರಾಶಿಯಲ್ಲಿ ಮೂರು ಗ್ರಹಗಳ ಸಂಚಾರ – Kannada News | Leo Horoscope April 2026: Unlocking Prosperity and Overcoming Obstacles with Astrology

ಏಪ್ರಿಲ್ 2026ರಲ್ಲಿ ಸಿಂಹ ರಾಶಿಯವರಿಗೆ ಮಘಾ, ಪೂರ್ವಾಫಲ್ಗುಣೀ, ಉತ್ತರಾಫ್ಗುಣೀ 1ನೇ ಪಾದಗಳಲ್ಲಿ ಜನಿಸಿದವರಿಗೆ ಹೇಗಿರಲಿವೆ ಎಂಬುದನ್ನು ವಿಸ್ತಾರವಾಗಿ ತಿಳಿಯಬಹುದು. ರಾಶಿಯ ಅಧಿಪತಿ ಉಚ್ಚನಾದ ಕಾರಣ ವಿಶೇಷ ಅಂಶಗಳು ರಾಶಿಯವರದ್ದಾಗಲಿದೆ.

​ಶುಭ ಫಲ ನೀಡುವ ಗ್ರಹಗಳು :

ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ಅತ್ಯಂತ ದೊಡ್ಡ ವರದಾನ. ಇದು “ಲಾಭ ಸ್ಥಾನವಾದ್ದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.

​ನಿಮ್ಮ ರಾಶ್ಯಾಧಿಪತಿಯಾದ ಸೂರ್ಯನು ಮೇಷದಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವುದು ಅದ್ಭುತ ಫಲ ನೀಡುತ್ತದೆ. ಇದು ಪಿತೃಾರ್ಜಿತ ಆಸ್ತಿಯ ಲಾಭ, ತಂದೆಯ ಕಡೆಯಿಂದ ಸಹಕಾರ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉನ್ನತ ಅಧಿಕಾರ ಪ್ರಾಪ್ತಿಯ ಯೋಗವಿದೆ.

​ಶುಕ್ರನು ವೃಷಭ ರಾಶಿಯಲ್ಲಿ ಸ್ವಕ್ಷೇತ್ರದಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಐಷಾರಾಮಿ ವಾತಾವರಣವಿರುತ್ತದೆ. ಕಲೆ, ಮಾಧ್ಯಮ ಅಥವಾ ವ್ಯಾಪಾರದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಪ್ರಗತಿ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಸ್ತ್ರೀ ವರ್ಗದವರಿಂದ ಸಹಕಾರ ಸಿಗಲಿದೆ.

​ಅಶುಭ ಫಲ ನೀಡುವ ಗ್ರಹಗಳು

​ಸಿಂಹ ರಾಶಿಯವರಿಗೆ ಪ್ರಸ್ತುತ ಅಷ್ಟಮ ಶನಿ ದಶೆ ನಡೆಯುತ್ತಿದೆ. ಮೀನ ರಾಶಿಯಲ್ಲಿ ಶನಿಯೊಂದಿಗೆ ಕುಜ ಮತ್ತು ಬುಧ ಸೇರಿರುವುದು ಸಂಕೀರ್ಣ ಪರಿಸ್ಥಿತಿ ಸೃಷ್ಟಿಸುತ್ತದೆ.

​ವಾಹನ ಚಾಲನೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ಅಗತ್ಯ. ಬುಧನು ಅಷ್ಟಮದಲ್ಲಿ ಇರುವುದರಿಂದ ನಿಮ್ಮ ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು. ರಕ್ತದೊತ್ತಡ ಅಥವಾ ಶಸ್ತ್ರಚಿಕಿತ್ಸೆಯಂತಹ ಸಾಧ್ಯತೆಗಳಿರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

​ರಾಹು-ಕೇತುಗಳ ಪ್ರಭಾವ: ಇವು ನಿಮ್ಮ ಜೀವನದ ಸ್ಥಿರತೆಯಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಹಣಕಾಸಿನ ವ್ಯವಹಾರಗಳಲ್ಲಿ ಅಪರಿಚಿತರನ್ನು ನಂಬಲೇಬೇಡಿ.

ವೃತ್ತಿ ಮತ್ತು ಆರ್ಥಿಕತೆ:

ಗುರುವು ಲಾಭ ಸ್ಥಾನದಲ್ಲಿ ಇರುವುದರಿಂದ ಆರ್ಥಿಕ ಪರಿಸ್ಥಿತಿ ಸದೃಢವಾಗಿರುತ್ತದೆ. ಆದರೆ, ಅಷ್ಟಮದಲ್ಲಿ ಶನಿ-ಕುಜರ ಸಂಯೋಗವಿರುವುದರಿಂದ ಶತ್ರುಗಳ ಕಾಟ ಅಥವಾ ಕೆಲಸದಲ್ಲಿ ಪಿತೂರಿಗಳು ನಡೆಯಬಹುದು. ನೀವು ಮಾಡುವ ಕೆಲಸದಲ್ಲಿ ಎಷ್ಟು ನಿಷ್ಠರಾಗಿದ್ದರೂ ಸಹ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ತೋರಿಸುವ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಈ ತಿಂಗಳು ಹೊಸ ಪಾಲುದಾರಿಕೆಯನ್ನು ಮಾಡಿಕೊಳ್ಳದಿದ್ದರೆ ಒಳಿತು.

​ಕುಟುಂಬ ಮತ್ತು ದಾಂಪತ್ಯ:

ಭಾಗ್ಯದಲ್ಲಿ ಸೂರ್ಯನಿರುವುದರಿಂದ ಕುಟುಂಬದ ಹಿರಿಯರ ಬೆಂಬಲ ಸದಾ ನಿಮ್ಮ ಮೇಲಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಆದರೆ, ಶನಿಯ ದೃಷ್ಟಿಯಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಉಂಟಾಗಬಹುದು. ಪರಸ್ಪರ ಸಂಶಯ ಮಾಡುವುದನ್ನು ಬಿಟ್ಟು ತಾಳ್ಮೆಯಿಂದ ವರ್ತಿಸುವುದು ಅಗತ್ಯ.

​ಶಿಕ್ಷಣ ಮತ್ತು ಆರೋಗ್ಯ:

ವಿದ್ಯಾರ್ಥಿಗಳಿಗೆ ಈ ತಿಂಗಳು ಹೆಚ್ಚಿನ ಶ್ರಮದ ಅಗತ್ಯವಿದೆ. ಬುಧನು ಅಷ್ಟಮದಲ್ಲಿ ಇರುವುದರಿಂದ ಏಕಾಗ್ರತೆಯ ಕೊರತೆ ಕಾಡಬಹುದು. ಆರೋಗ್ಯದ ವಿಷಯದಲ್ಲಿ ಉದರ ಸಂಬಂಧಿ (ಹೊಟ್ಟೆಯ) ಸಮಸ್ಯೆ ಅಥವಾ ಮೂಳೆ ನೋವು ಕಾಣಿಸಿಕೊಳ್ಳಬಹುದು. ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ.

​ಈ ತಿಂಗಳ ಅಶುಭ ಫಲಗಳನ್ನು ತಗ್ಗಿಸಲು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ ಅಥವಾ ಮಂಗಳವಾರ ಸುಬ್ರಹ್ಮಣ್ಯ ಭುಜಂಗ ಪಠಿಸಿ. ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ಸಿಂಹ ರಾಶಿಯವರಿಗೆ ಈ ತಿಂಗಳು ಬರುವ ಲಾಭವನ್ನು ಅಷ್ಟಮ ಶನಿಯಿಂದ ರಕ್ಷಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿರಲಿ. ಹಣಕಾಸಿನ ವಿಷಯದಲ್ಲಿ ಜಯ ಸಿಕ್ಕರೂ, ಆರೋಗ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಮೈಮರೆಯಬಾರದು.

– ಲೋಹಿತ ಹೆಬ್ಬಾರ್

Published On – 10:14 pm, Tue, 28 April 26

Source link

Leave a Reply

Your email address will not be published. Required fields are marked *