Headlines

ಆ ದೇವಸ್ಥಾನದಲ್ಲಿ ಕೂತು ‘ಪೆದ್ದಿ’ ಕತೆ ಬರೆದಿದ್ದರಂತೆ ನಿರ್ದೇಶಕ ಬುಚ್ಚಿಬಾಬು – Kannada News

ರಾಮ್ ಚರಣ್ (Ram Charan) ನಟಿಸಿ, ‘ಉಪ್ಪೇನ’ ಸಿನಿಮಾ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶನ ಮಾಡಿರುವ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇಂದು ರಾತ್ರಿಯೇ ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರಿಗೆ ‘ಪೆದ್ದಿ’ ಎರಡನೇ ಸಿನಿಮಾ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಬುಚ್ಚಿಬಾಬು ಸನಾ, ಸಿನಿಮಾದ ಬಗ್ಗೆ ಹಾಗೂ ಶೂಟಿಂಗ್ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ಉಪ್ಪೇನ’ ಸಿನಿಮಾ ಬಿಡುಗಡೆಯಾಗುವ ಮುನ್ನವೇ, ಕೋವಿಡ್ ಸಮಯದಲ್ಲಿ ‘ಪೆದ್ದಿ’ ಸಿನಿಮಾದ ಕತೆ ಬರೆದಿದ್ದರಂತೆ ಬುಚ್ಚಿಬಾಬು. ‘ಉಪ್ಪೆನ’ ಸಿನಿಮಾ ಬಿಡುಗಡೆ ಗೊಂದಲದಲ್ಲಿದ್ದಾಗ, ಆ ಚಿತ್ರ ಒಟಿಟಿಯಲ್ಲಿ ಬರುತ್ತದೋ ಅಥವಾ ಚಿತ್ರಮಂದಿರಗಳಲ್ಲಿ ಬರುತ್ತದೋ ಎಂಬ ಆತಂಕವಿದ್ದಾಗ ಬುಚ್ಚಿಬಾಬು ತಮ್ಮ ಎರಡನೇ ಸಿನಿಮಾದ ಕಥೆ ಯೋಚಿಸಿದ್ದರಂತೆ. ಪಿಠಾಪುರಂನ ದತ್ತಾತ್ರೇಯ ಸ್ವಾಮಿ ದೇವಸ್ಥಾನದಲ್ಲಿ ಕುಳಿತು, ‘ನನ್ನ ಎರಡನೇ ಸಿನಿಮಾ ಹೀರೊ ರಾಮ್ ಚರಣ್, ಕ್ಯಾರೆಕ್ಟರ್ ಹೆಸರು ಪೆದ್ದಿ, ಹೀರೊ ಬೆಲ್ಲದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾನೆ’ ಎಂದು ಡೈರಿಯಲ್ಲಿ ಬರೆದುಕೊಂಡಿದ್ದಾಗಿ ಬುಚ್ಚಿಬಾಬು ಹೇಳಿದ್ದಾರೆ. ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ಚರಣ್ ಜೊತೆ ಸಿನಿಮಾ ಅಂದುಕೊಳ್ಳುವುದು ದೇವರು ಬರೆದ ಸ್ಕ್ರೀನ್‌ಪ್ಲೇ ಎಂದು ಅವರು ಹೇಳಿದ್ದಾರೆ.

ರಾಮ್ ಚರಣ್ ಎಂದ ತಕ್ಷಣ ಎಲ್ಲರಿಗೂ ‘ರಂಗಸ್ಥಳಂ’ ನೆನಪಿಗೆ ಬರುತ್ತದೆ, ಮತ್ತೆ ಅಂತಹದ್ದೇ ಗ್ರಾಮೀಣ ಹಿನ್ನೆಲೆಯ ಸಿನಿಮಾ ಮಾಡುವುದು ನನ್ನ ಮುಂದಿದ್ದ ಅತಿ ದೊಡ್ಡ ಸವಾಲಾಗಿತ್ತು ಎಂದು ಬುಚ್ಚಿಬಾಬು ತಿಳಿಸಿದ್ದಾರೆ. ಆದರೆ, ‘ಪೆದ್ದಿ’ ನೋಡುವಾಗ ಎಲ್ಲೂ ‘ರಂಗಸ್ಥಳಂ’ನ ಛಾಯೆಗಳು ಕಾಣಿಸುವುದಿಲ್ಲ, ಇದು ಸಂಪೂರ್ಣವಾಗಿ ಬೇರೆಯದೇ ಶೈಲಿಯ ಸಿನಿಮಾ. ಸಿನಿಮಾದಲ್ಲಿ ಚರಣ್ ಅವರ ಗೆಟಪ್ ಒಂದು ವಿಶಿಷ್ಟವಾದ ಬುಡಕಟ್ಟಿಗೆ ಸಂಬಂಧಿಸಿದ್ದಾಗಿದೆ, ಅದಕ್ಕಾಗಿಯೇ ಅವರು ಮೂಗುತಿ ಧರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ಚರಣ್ ಅವರ ಬಾಡಿ ಲಾಂಗ್ವೇಜ್ ತುಂಬಾ ಮಾಸ್ ಹಾಗೂ ರಗಡ್ ಆಗಿರುತ್ತದೆ, ಆದರೂ ಸಿನಿಮಾದಲ್ಲಿ ಅವರು ಅತ್ಯಂತ ಸುಂದರವಾಗಿ ಕಾಣಿಸುತ್ತಾರೆ ಎಂದು ಬುಚ್ಚಿಬಾಬು ಹೊಗಳಿದ್ದು. ಶೂಟಿಂಗ್ ಸಮಯದಲ್ಲಿ ಚರಣ್ ಕಾರವಾನ್‌ನಲ್ಲೇ ಸ್ವತಃ ಮೇಕಪ್ ಬ್ರಷ್‌ನಿಂದ ಟಚ್ ಅಪ್ ಮಾಡಿಕೊಳ್ಳುತ್ತಿದ್ದರು, ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಎಷ್ಟೋ ಸರಳವಾಗಿದ್ದರು ಎಂದು ಹೇಳಿದ್ದಾರೆ. ಸೆಟ್‌ನಲ್ಲಿ ಇಬ್ಬರ ನಡುವೆ ಅಣ್ಣ-ತಮ್ಮಂದಿರ ಅನುಬಂಧ ಏರ್ಪಟ್ಟಿದೆ ಎಂದು ಭಾವುಕರಾಗಿದ್ದಾರೆ.

ಜಾನ್ಹವಿ ಅವರ ಪಾತ್ರದ ಬಗ್ಗೆ ಮಾತನಾಡಿ, ವಿಜಯನಗರಂ ಪ್ರಾದೇಶಿಕ ಭಾಷೆಯ ಶೈಲಿಯಲ್ಲಿ ಬೈಯುವ ಮಾಸ್ ಕ್ಯಾರೆಕ್ಟರ್ ಅವರದ್ದು, ಅದು ಪ್ರೇಕ್ಷಕರಿಗೆ ತುಂಬಾ ಕ್ಯೂಟ್ ಅನಿಸಲಿದೆ ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ತಾವು ಎಆರ್ ರೆಹಮಾನ್ ಅಭಿಮಾನಿ ಆಗಿದ್ದು, ಅವರ ಜೊತೆ ಕೆಲಸ ಮಾಡಬೇಕೆಂಬುದು ನನ್ನ ಕನಸಾಗಿತ್ತು, ಈ ಕಥೆಗೆ ಗ್ಲೋಬಲ್ ರೀಚ್ ಇರುವುದರಿಂದ ಅವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಕಥೆಯಲ್ಲಿರುವ ಎಮೋಷನ್, ಡ್ರಾಮಾ ಪ್ರೇಕ್ಷಕರನ್ನು ಕೊನೆಯವರೆಗೂ ಕಟ್ಟಿಹಾಕುತ್ತದೆ ಎಂದು ಬುಚ್ಚಿಬಾಬು ಸಾನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಂಗಸ್ಥಳಂ’ ಅಂತಹ ಚಿತ್ರಗಳಿಗೆ ಪಾರ್ಟ್ 2 ಗೆ ಅವಕಾಶವಿದ್ದಂತೆ, ‘ಪೆದ್ದಿ’ ಚಿತ್ರಕ್ಕೂ ಭವಿಷ್ಯದಲ್ಲಿ ಸೀಕ್ವೆಲ್ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬುಚ್ಚಿಬಾಬು. ‘ಪೆದ್ದಿ’ ಕತೆ ಒಂದೇ ಬಾರಿ ಬರುತ್ತದೆ. ಅದು ಒಂದೇ ಪಾರ್ಟ್‌ನಲ್ಲಿ ಮುಗಿಯುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವುದನ್ನು ಇಷ್ಟಪಡುವುದಿಲ್ಲ, ಒಂದು ಕಥೆಯನ್ನು ಮುಗಿಸಿ ಮತ್ತೊಂದು ಕಥೆಗೆ ಹೊರಟುಹೋಗಬೇಕು ಎಂಬುದು ತಮ್ಮ ಆಲೋಚನೆ ಎಂದು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *